Homeಮುಖಪುಟಇಸ್ರೇಲ್‌- ಪ್ಯಾಲೆಸ್ತೀನ್‌ನ ಸಾಕ್ಷ್ಯಚಿತ್ರ ‘ನೋ ಅದರ್ ಲ್ಯಾಂಡ್‌’ಗೆ ಆಸ್ಕರ್ ಪ್ರಶಸ್ತಿ

ಇಸ್ರೇಲ್‌- ಪ್ಯಾಲೆಸ್ತೀನ್‌ನ ಸಾಕ್ಷ್ಯಚಿತ್ರ ‘ನೋ ಅದರ್ ಲ್ಯಾಂಡ್‌’ಗೆ ಆಸ್ಕರ್ ಪ್ರಶಸ್ತಿ

ಪ್ಯಾಲೆಸ್ತೀನಿಯರ ಜನಾಂಗೀಯ ನಿರ್ಮೂಲನೆ ನಿಲ್ಲಿಸಲು ಚಿತ್ರ ತಂಡ ಆಗ್ರಹ

- Advertisement -
- Advertisement -

ಇಸ್ರೇಲ್ ಸೇನೆಯ ಆಕ್ರಮಣದಿಂದ ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಕುರಿತಾದ ‘ನೋ ಅದರ್ ಲ್ಯಾಂಡ್’ ಚಿತ್ರ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ ಹೋರಾಟಗಾರರು ಹಾಗೂ ಚಲನಚಿತ್ರ ನಿರ್ಮಾಪಕರಾದ ಬಾಸೆಲ್ ಅದ್ರಾ, ಯುವಲ್ ಅಬ್ರಹಾಂ, ರಾಚೆಲ್ ಸ್ಜೋರ್ ಮತ್ತು ಹಮ್ದನ್ ಬಲ್ಲಾಲ್ ಅವರನ್ನು ಒಳಗೊಂಡ ಚಿತ್ರ ತಂಡವು, 97ನೇ ಅಕಾಡೆಮಿ ಅವಾರ್ಡ್‌ನಲ್ಲಿ ಪೋರ್ಸಲೇನ್ ವಾರ್, ಶುಗರ್ಕೇನ್, ಬ್ಲ್ಯಾಕ್ ಬಾಕ್ಸ್ ಡೈರೀಸ್ ಮತ್ತು ಸೌಂಡ್‌ಟ್ರ್ಯಾಕ್ ಟು ಎ ಕಪ್ ಡಿ’ಎಟಾಟ್‌ ಚಿತ್ರಗಳ ಜೊತೆಗಿನ ಸ್ಪರ್ಧೆಯಲ್ಲಿ ಭಾನುವಾರ (ಮಾ.2) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

2019 ಮತ್ತು 2023ರ ನಡುವೆ ‘ನೋ ಅದರ್ ಲ್ಯಾಂಡ್’ ಚಿತ್ರವನ್ನು ನಿರ್ಮಿಸಲಾಗಿದೆ. ಆ ಬಳಿಕ ನಿರ್ದೇಶಕರ ಪೈಕಿ ಒಬ್ಬರಾದ ಬೇಸಲ್ ಅದ್ರಾ ಅವರು ಬಂಧನ ಭೀತಿ ಎದುರಿಸುತ್ತಿದ್ದರು. ಬೇಸಲ್ ಅದ್ರಾ ಅವರ ಹುಟ್ಟೂರು ಮಸಾಫರ್ ಯಟ್ಟಾವನ್ನು ಇಸ್ರೇಲ್‌ ಸೈನಿಕರು ಆಕ್ರಮಿಸಿಕೊಂಡು ಪಶ್ಚಿಮ ದಂಡೆಯ ದಕ್ಷಿಣ ತುದಿಯನ್ನು ಮಿಲಿಟರಿ ತರಬೇತಿ ವಲಯವಾಗಿ ನಿರ್ಮಿಸಲು ಮುಂದಾಗಿದ್ದ ಬಗ್ಗೆ ಚಿತ್ರ ಗಮನ ಸೆಳೆದಿತ್ತು.

ಆದ್ರಾ ಅವರು ಯಹೂದಿ-ಇಸ್ರೇಲಿ ಪತ್ರಕರ್ತ ಯುವಲ್ ಅಬ್ರಹಾಂ ಜೊತೆ ಸ್ನೇಹ ಬೆಳೆಸುವವರೆಗೂ ಅವರ ಧ್ವನಿಯನ್ನು ಕೇಳುವವರು ಇರಲಿಲ್ಲ. ಪತ್ರಕರ್ತ ಯುವಲ್ ಅಬ್ರಹಾಂ ಜೊತೆ ಸ್ನೇಹ ಬೆಳೆಸಿದ ನಂತರ, ಅವರು ಆದ್ರಾ ಅವರ ಕಥೆಯನ್ನು ಹೊರ ಜಗತ್ತಿಗೆ ತಿಳಿಸಲು ಸಹಾಯ ಮಾಡುತ್ತಾರೆ.

ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಆದ್ರಾ, ‘ನೋ ಅದರ್ ಲ್ಯಾಂಡ್’ ಪ್ಯಾಲೆಸ್ತೀನಿಯರು ದಶಕಗಳಿಂದ ಅನುಭವಿಸುತ್ತಿರುವ ಕಠೋರ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

“ಎರಡು ತಿಂಗಳ ಹಿಂದೆಯಷ್ಟೇ ನಾನು ತಂದೆಯಾದೆ. ನನ್ನ ಮಗಳು ನಾನು ಈಗ ಬದುಕುತ್ತಿರುವಂತೆ ಬದುಕಬಾರದು ಎಂಬ ಆಶಯವನ್ನು ಹೊಂದಿದ್ದೇನೆ. ಈಗ ಪ್ರತಿದಿನ ವಸಾಹತುಗಾರರು, ಹಿಂಸಾಚಾರ ಮಾಡುತ್ತಿದ್ದಾರೆ, ಮನೆಗಳನ್ನು ಉರುಳಿಸುತ್ತಿದ್ದಾರೆ. ಬಲವಂತದಿಂದ ಸ್ಥಳಾಂತರ ಮಾಡುತ್ತಿದ್ದಾರೆ. ನನ್ನ ಸಮುದಾಯ ಇಸ್ರೇಲ್‌ ಆಕ್ರಮಣವನ್ನು ಎದುರಿಸಿಕೊಂಡೇ ಪ್ರತಿದಿನ ವಾಸಿಸುತ್ತಿದೆ ಮತ್ತು ಅನುಭವಿಸುತ್ತಿದೆ” ಎಂದು ಆದ್ರಾ ಹೇಳಿದ್ದಾರೆ.

“ಪ್ಯಾಲೆಸ್ತೀನಿಯನ್ ಜನರ ಮೇಲಿನ ಅನ್ಯಾಯ ಮತ್ತು ಜನಾಂಗೀಯ ನಿರ್ಮೂಲನೆಯನ್ನು ನಿಲ್ಲಿಸಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವಂತೆ” ಅವರು ಜಗತ್ತಿಗೆ ಕರೆ ನೀಡಿದ್ದಾರೆ.

ಪ್ಯಾಲೆಸ್ತೀನಿಯರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿರುವ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಇಸ್ರೇಲ್ ಪತ್ರಕರ್ತ ಯುವಲ್ ಅಬ್ರಹಾಂ, “ಪ್ಯಾಲೆಸ್ತೀನಿಯರು ಹಾಗೂ ಇಸ್ರೇಲಿಗರಾದ ನಾವು ಈ ಚಿತ್ರವನ್ನು ಒಟ್ಟಾಗಿ ನಿರ್ಮಿಸಿದ್ದೇವೆ. ಕಾರಣ, ನಮ್ಮ ಧ್ವನಿಗಳು ಶಕ್ತಿಶಾಲಿಯಾಗಿವೆ. ಅಂತ್ಯಗೊಳ್ಳಲೇಬೇಕಾದ ಗಾಝಾ ಹಾಗೂ ಅಲ್ಲಿನ ಜನರ ವಿನಾಶವನ್ನು ನಾವಿಬ್ಬರೂ ನೋಡುತ್ತಿದ್ದೇವೆ. ಅಕ್ಟೋಬರ್ 7ರಂದು ಅತ್ಯಂತ ಅಮಾನುಷವಾಗಿ ಒತ್ತೆಯಾಳುಗಳನ್ನಾಗಿಸಿಕೊಳ್ಳಲಾಗಿರುವ ಇಸ್ರೇಲ್ ಪ್ರಜೆಗಳನ್ನು ಕೂಡ ಬಿಡುಗಡೆ ಮಾಡಲೇಬೇಕು” ಎಂದಿದ್ದಾರೆ.

ತಮ್ಮಿಬ್ಬರ ನಡುವಿನ ಅಸಮಾನತೆಯ ಮೇಲೂ ಬೆಳಕು ಚೆಲ್ಲಿದ ಅಬ್ರಹಾಂ, “ನಾನು ನಾಗರಿಕ ಕಾನೂನುಗಳಿರುವ ಪ್ರಭುತ್ವದಡಿ ಸ್ವತಂತ್ರವಾಗಿ ಜೀವಿಸುತ್ತಿದ್ದರೆ, ತನ್ನ ಜೀವನವನ್ನು ನಾಶಗೊಳಿಸಿದ ಹಾಗೂ ಅದನ್ನು ತನ್ನಿಂದ ತಡೆಯಲಾಗದ ಆದ್ರಾ ಸೇನಾ ಕಾನೂನುಗಳ ಆಡಳಿತದಡಿ ಜೀವಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಈ ಬಿಕ್ಕಟ್ಟಿಗೆ ಭಿನ್ನ ದಾರಿಯಿದ್ದು, ಜನಾಂಗೀಯ ಮೇಲರಿಮೆಯಿಲ್ಲದ, ಎರಡೂ ಕಡೆಯ ಜನರಿಗೆ ರಾಷ್ಟ್ರೀಯ ಹಕ್ಕುಗಳಿರುವ ರಾಜಕೀಯ ಪರಿಹಾರ ಸಾಧ್ಯವಿದೆ” ಎಂದೂ ಅವರು ಸಲಹೆ ನೀಡಿದ್ದಾರೆ.

ಅಮೆರಿಕ ವಿದೇಶಾಂಗ ನೀತಿಯನ್ನೂ ಟೀಕಿಸಿದ ಅಬ್ರಹಾಂ, “ಆದ್ರಾ ಅವರ ಜನರಿಗೆ ನೈಜ ಸ್ವಾತಂತ್ರ್ಯ ದೊರೆತಾಗ ಮಾತ್ರ ನಾವು ಸುರಕ್ಷಿತ ಎಂಬಂತೆ ನಾವಿಬ್ಬರೂ ಪರಸ್ಪರ ಬೆಸೆದುಕೊಂಡಿರುವುದು ನಿಮಗೇಕೆ ಕಾಣುತ್ತಿಲ್ಲ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಾಲ್ವರು ಹೋರಾಟಗಾರರು ಒಟ್ಟಾಗಿ ನಿರ್ಮಿಸಿದ್ದು, ಸದ್ಯ ಮುಂದುವರಿದಿರುವ ಪ್ರಾಂತೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯಾಯಕ್ಕಾಗಿ ತೋರುವ ಪ್ರತಿರೋಧದ ಕ್ರಿಯೆಯನ್ನು ಈ ಸಾಕ್ಷ್ಯಚಿತ್ರ ಮಂಡಿಸುತ್ತದೆ.

ಬರ್ಲಿನ್ 74ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ‘ನೋ ಅದರ್ ಲ್ಯಾಂಡ್’ ಆಯ್ಕೆಯಾಗಿತ್ತು. ಫೆಬ್ರವರಿ 14, 2024ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಸಾಕ್ಷ್ಯಚಿತ್ರವು, ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪನೋರಮಾ ಪ್ರೇಕ್ಷಕರ ಪ್ರಶಸ್ತಿ ಹಾಗೂ ಬರ್ಲಿನ್ ಸಾಕ್ಷ್ಯಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.

ಪಾಕಿಸ್ತಾನದ ಜನಪ್ರಿಯ ಲೇಖಕಿ ಬಾಪ್ಸಿ ಸಿಧ್ವಾ (86) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...