Homeಅಂತರಾಷ್ಟ್ರೀಯಪ್ಯಾಲೆಸ್ಟೀನಿಯನ್ನರನ್ನು  ಪೂರ್ವ ಆಫ್ರಿಕಾಕ್ಕೆ ಸ್ಥಳಾಂತರಿಸಲು ಬಯಸುತ್ತಿರುವ ಅಮೆರಿಕ, ಇಸ್ರೇಲ್

ಪ್ಯಾಲೆಸ್ಟೀನಿಯನ್ನರನ್ನು  ಪೂರ್ವ ಆಫ್ರಿಕಾಕ್ಕೆ ಸ್ಥಳಾಂತರಿಸಲು ಬಯಸುತ್ತಿರುವ ಅಮೆರಿಕ, ಇಸ್ರೇಲ್

- Advertisement -
- Advertisement -

ಗಾಜಾದಿಂದ ಸುಡಾನ್, ಸೊಮಾಲಿಯಾ ಮತ್ತು ಅದರ ಬೇರ್ಪಟ್ಟ ಪ್ರದೇಶವಾದ ಸೊಮಾಲಿಲ್ಯಾಂಡ್‌ಗೆ ಪ್ಯಾಲೆಸ್ತೀನಿಯನ್ನರನ್ನು ಬಲವಂತವಾಗಿ ಸ್ಥಳಾಂತರಿಸುವ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ಗಳು ಮೂರು ಪೂರ್ವ ಆಫ್ರಿಕಾದ ಸರ್ಕಾರಗಳೊಂದಿಗೆ ಚರ್ಚಿಸಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರದ ವರದಿಯಲ್ಲಿ ಸುಡಾನ್ ಅಧಿಕಾರಿಗಳು ಅಮೆರಿಕದ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದಾಗಿ ಹೇಳಿಕೊಂಡರೆ, ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನ ಅಧಿಕಾರಿಗಳು ಯಾವುದೇ ಸಂಪರ್ಕಗಳ ಬಗ್ಗೆ ತಿಳಿದಿಲ್ಲ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಹಸ್ಯ ರಾಜತಾಂತ್ರಿಕ ಉಪಕ್ರಮದ ಬಗ್ಗೆ ಚರ್ಚಿಸಲು ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು, ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನೊಂದಿಗಿನ ಸಂಪರ್ಕಗಳನ್ನು ದೃಢಪಡಿಸಿದರು ಮತ್ತು ಅಮೆರಿಕದ ಅಧಿಕಾರಿಗಳು ಸುಡಾನ್ ಅನ್ನು ಸಹ ದೃಢಪಡಿಸಿದರು. ಪ್ರಯತ್ನಗಳು ಎಷ್ಟು ಪ್ರಗತಿ ಸಾಧಿಸಿವೆ ಅಥವಾ ಚರ್ಚೆಗಳು ಯಾವ ಮಟ್ಟದಲ್ಲಿ ನಡೆದವು ಎಂಬುದು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.

ಪ್ಯಾಲೆಸ್ಟೀನಿಯನ್ನರನ್ನು ಬಲವಂತವಾಗಿ ಸ್ಥಳಾಂತರಿಸುವ ಮತ್ತು ಗಾಜಾ ಪಟ್ಟಿಯನ್ನು “ಸ್ವಾಧೀನಪಡಿಸಿಕೊಳ್ಳುವ” ಕಲ್ಪನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದನ್ನು ಪ್ಯಾಲೆಸ್ಟೀನಿಯನ್ನರು ಮತ್ತು ಮಧ್ಯಪ್ರಾಚ್ಯದ ದೇಶಗಳು ಸಂಪೂರ್ಣವಾಗಿ ತಿರಸ್ಕರಿಸಿವೆ. ಅನೇಕರು ಇದನ್ನು ಜನಾಂಗೀಯ ಶುದ್ಧೀಕರಣ ಎಂದು ಬಣ್ಣಿಸಿದ್ದಾರೆ.

ಟ್ರಂಪ್ ಅವರು ನೆತನ್ಯಾಹು ಜೊತೆಗೆ ಗಾಜಾ ಯೋಜನೆಯನ್ನು ಮಂಡಿಸಿದ ಕೆಲವು ದಿನಗಳ ನಂತರ, ಅಮೆರಿಕ ಮತ್ತು ಇಸ್ರೇಲ್‌ನಿಂದ ಮೂರು ಸಂಭಾವ್ಯ ತಾಣಗಳಿಗೆ ಪ್ರತ್ಯೇಕ ಸಂಪರ್ಕವು ಕಳೆದ ತಿಂಗಳು ಪ್ರಾರಂಭವಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಈ ಚರ್ಚೆಗಳಲ್ಲಿ ಇಸ್ರೇಲ್ ಮುಂಚೂಣಿಯಲ್ಲಿದೆ ಎಂದು ಅದು ವರದಿ ಮಾಡಿದೆ.

ಈ ವರದಿ ಕುರಿತಂತೆ ಅಮೆರಿಕ ಅಥವಾ ಇಸ್ರೇಲ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ ಪ್ಯಾಲೆಸ್ಟೀನಿಯನ್ನರ “ಸ್ವಯಂಪ್ರೇರಿತ” ವಲಸೆ ಎಂದು ದೀರ್ಘಕಾಲದಿಂದ ಪ್ರತಿಪಾದಿಸುತ್ತಿರುವ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಈ ವಾರ ಇಸ್ರೇಲ್ ಇವರ ಸ್ಥಳಾಂತರಕ್ಕೆ ದೇಶಗಳನ್ನು ಗುರುತಿಸಲು ಕೆಲಸ ಮಾಡುತ್ತಿದೆ ಎಂದು ಅದು ಹೇಳಿದೆ. ಇಸ್ರೇಲ್ ತನ್ನ ರಕ್ಷಣಾ ಸಚಿವಾಲಯದೊಳಗೆ “ಬಹಳ ದೊಡ್ಡ ವಲಸೆ ಇಲಾಖೆ”ಯನ್ನು ಸಿದ್ಧಪಡಿಸುತ್ತಿದೆ ಎಂದು ಕೂಡ ಅದು ವರದಿ ಮಾಡಿದೆ.

ದೋಹಾ ಇನ್‌ಸ್ಟಿಟ್ಯೂಟ್ ಫಾರ್ ಗ್ರಾಜುಯೇಟ್ ಸ್ಟಡೀಸ್‌ನ ಅಸೋಸಿಯೇಟ್ ಪ್ರೊಫೆಸರ್ ಟ್ಯಾಮರ್ ಕ್ವಾರ್ಮೌಟ್  ಅವರು ಅಲ್ ಜಜೀರಾ ಜೊತೆ ಮಾತನಾಡಿ, ಪ್ಯಾಲೆಸ್ಟೀನಿಯನ್ನರ ಸ್ಥಳಾಂತರವು “ದಾಟಿ ಹೋಗಬಾರದ ಕೆಂಪು ರೇಖೆ” ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತದ ಸರ್ಕಾರಗಳು ಈ “ಅತಿರೇಕದ” ಪ್ರಸ್ತಾವನೆಯನ್ನು ನಿಲ್ಲಿಸುವ ಜವಾಬ್ದಾರಿಯನ್ನು ಹೊಂದಿವೆ ಮತ್ತು “ಈ ಯಾವುದೇ ಸನ್ನಿವೇಶಗಳಲ್ಲಿ ಇಸ್ರೇಲ್‌ನೊಂದಿಗೆ ತೊಡಗಿಸಿಕೊಳ್ಳಬಾರದು” ಎಂದು ಅವರು ಹೇಳಿದರು. ವಿಶೇಷವಾಗಿ ಪ್ಯಾಲೆಸ್ಟೀನಿಯನ್ನರನ್ನು ವಸಾಹತುಶಾಹಿ ಪರಂಪರೆಯಿಂದ ಹೋರಾಡುತ್ತಲೇ ಇರುವ ಆಫ್ರಿಕನ್ ದೇಶಗಳಿಗೆ ಸ್ಥಳಾಂತರಿಸುವುದು ಖಂಡನೀಯ ಎಂದಿದ್ದಾರೆ.

ವಸಾಹತುಶಾಹಿ ಪರಂಪರೆಯಿಂದಾಗಿ ಸುಡಾನ್ ಮತ್ತು ಸೊಮಾಲಿಯಾ ಇನ್ನೂ ಯುದ್ಧಗಳಿಂದ ಜರ್ಜರಿತಗೊಂಡಿವೆ ಎಂದು ಕಾರ್ಮೌಟ್ ಹೇಳಿದ್ದಾರೆ.

ಮಾನ್ಯತೆಗೆ ಬದಲಾಗಿ ಅಮೆರಿಕಕ್ಕೆ ಸಹಾಯಕವಾಗಬಹುದಾದ ಹಲವಾರು ಕ್ಷೇತ್ರಗಳ ಕುರಿತು ಸೊಮಾಲಿಲ್ಯಾಂಡ್‌ನೊಂದಿಗೆ ಅಮೆರಿಕವು ಸಂಭಾಷಣೆ ನಡೆಸುತ್ತಿದೆ ಎಂದು ಈ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಅಮೆರಿಕದ ಅಧಿಕಾರಿಯೊಬ್ಬರು ಎಪಿಗೆ ದೃಢಪಡಿಸಿದ್ದಾರೆ.

ಏತನ್ಮಧ್ಯೆ, ಪ್ಯಾಲೆಸ್ಟೀನಿಯನ್ ಸ್ವ-ಆಡಳಿತಕ್ಕೆ ಸೊಮಾಲಿಯಾ ಬಲವಾದ ಬೆಂಬಲವನ್ನು ನೀಡುತ್ತಿರುವಾಗ ಪ್ಯಾಲೆಸ್ಟೀನಿಯನ್ನರಿಗೆ ಆತಿಥ್ಯ ವಹಿಸಲು ಸೊಮಾಲಿಯಾ ಏಕೆ ಬಯಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ನೈರೋಬಿಯಲ್ಲಿ ವಕೀಲ ಮತ್ತು ಸಂಘರ್ಷ ಸಂಶೋಧಕ ಸಾಂಬು ಚೆಪ್ಕೋರಿರ್ ಎಪಿಗೆ ತಿಳಿಸಿದ್ದಾರೆ.

ಸೂಕ್ಷ್ಮ ರಾಜತಾಂತ್ರಿಕ ವಿಷಯದ ಕುರಿತು ಚರ್ಚಿಸಲು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ಸುಡಾನ್ ಅಧಿಕಾರಿಗಳು, ಟ್ರಂಪ್ ಆಡಳಿತವು ಪ್ಯಾಲೆಸ್ಟೀನಿಯನ್ನರನ್ನು ಸ್ವೀಕರಿಸುವ ಬಗ್ಗೆ ಮಿಲಿಟರಿ ನೇತೃತ್ವದ ಸರ್ಕಾರವನ್ನು ಸಂಪರ್ಕಿಸಿದೆ ಎಂದು ದೃಢಪಡಿಸಿದರು.

ಸುಡಾನ್ ಸರ್ಕಾರ ಈ ವಿಚಾರವನ್ನು ತಿರಸ್ಕರಿಸಿದೆ ಎಂದು ಇಬ್ಬರೂ ಅಧಿಕಾರಿಗಳು ತಿಳಿಸಿದ್ದಾರೆ. “ಈ ಸಲಹೆಯನ್ನು ತಕ್ಷಣವೇ ತಿರಸ್ಕರಿಸಲಾಯಿತು” ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ.

ಈ ಕುರಿತು ರಾಯಿಟರ್ಸ್‌ನ ಪ್ರತಿಕ್ರಿಯೆಗೆ ಶ್ವೇತಭವನ ಮತ್ತು ಯುಎಸ್ ವಿದೇಶಾಂಗ ಇಲಾಖೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನ ಮಾಹಿತಿ ಸಚಿವರು ರಾಯಿಟರ್ಸ್‌ನ ಪ್ರತಿಕ್ರಿಯೆ ಕೋರಿದ ದೂರವಾಣಿ ಕರೆಗಳಿಗೆ ಉತ್ತರಿಸಲಿಲ್ಲ.

12 ಮಿಲಿಯನ್ ಸ್ವಂತ ಜನರನ್ನು ಸ್ಥಳಾಂತರಿಸಿರುವ ಮತ್ತು ಕ್ಷಾಮವನ್ನು ಎದುರಿಸುತ್ತಾ, ವಿನಾಶಕಾರಿ ಅಂತರ್ಯುದ್ಧವನ್ನು ಎದುರಿಸುತ್ತಿರುವ ದೇಶವಾದ ಸುಡಾನ್‌ನ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿಲ್ಲ. ಈ ತಿಂಗಳ ಆರಂಭದಲ್ಲಿ  ಅರಬ್ ನಾಯಕರು ಗಾಜಾಗೆ 53 ಬಿಲಿಯನ್ ಡಾಲರ್‌ಗಳ ಈಜಿಪ್ಟ್ ಪುನರ್ನಿರ್ಮಾಣ ಯೋಜನೆಯನ್ನು ಘೋಷಿಸಿದ್ದಾರೆ. ಇದು ಪ್ಯಾಲೆಸ್ಟೀನಿಯನ್ನರನ್ನು ಎನ್ಕ್ಲೇವ್‌ನಿಂದ ಸ್ಥಳಾಂತರಿಸುವುದನ್ನು ತಪ್ಪಿಸುತ್ತದೆ. ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಮಧ್ಯಪ್ರಾಚ್ಯ ರಿವೇರಿಯಾ”ದ ದೃಷ್ಟಿಕೋನಕ್ಕೆ ವ್ಯತಿರಿಕ್ತವಾಗಿದೆ. ಈ ಘೋಷಣೆಯ ಯೋಜನೆಯಲ್ಲಿ ಸುಡಾನ್ ಮತ್ತು ಸೊಮಾಲಿಯಾ ಎರಡೂ ರಾಷ್ಟ್ರಗಳ ನಾಯಕರು ಸೇರಿದ್ದರು.

ಟ್ರಂಪ್ ಅವರ ಯೋಜನೆಯು ತಮ್ಮ ನೆಲೆಯಿಂದ ಶಾಶ್ವತವಾಗಿ ಓಡಿಸಲ್ಪಡುವ ಬಗ್ಗೆ ದೀರ್ಘಕಾಲದ ಪ್ಯಾಲೆಸ್ಟೀನಿಯನ್ ಭಯವನ್ನು ಬಲಪಡಿಸಿದೆ ಮತ್ತು ಅಂತರರಾಷ್ಟ್ರೀಯವಾಗಿ ವ್ಯಾಪಕ ತಿರಸ್ಕಾರವನ್ನು ಎದುರಿಸಿದೆ.

ಹಾವೇರಿ | ನರ್ಸ್ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ ; ಆರೋಪಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...