Homeಮುಖಪುಟಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? - ಇಸ್ಮತ್‌ ಪಜೀರ್‌

ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? – ಇಸ್ಮತ್‌ ಪಜೀರ್‌

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ.

- Advertisement -
- Advertisement -

ಡಾ.ಫಿರೋಝ್ ಖಾನ್ ಎಂಬ ಸಂಸ್ಕೃತ ವಿದ್ವಾಂಸ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಆದದ್ದನ್ನು ಸಹಿಸದ ಮನುವಾದಿಗಳು ಅವರ ವಿರುದ್ಧ ದೊಡ್ಡ ಮಟ್ಟದ ಗಲಾಟೆಯೆಬ್ಬಿಸಿದ್ದಾರೆ. ಬನಾರಸ್ ವಿವಿಯ ವಿದ್ಯಾರ್ಥಿಗಳಲ್ಲಿ ಒಂದು ವಿಭಾಗವು ಡಾ.ಫಿರೋಝ್ ಖಾನ್ ಪರವಾಗಿದ್ದರೆ ಮನುವಾದಿ ಸಂಘಪರಿವಾರದ ಪರವಿರುವ ವಿದ್ಯಾರ್ಥಿ ಗುಂಪು ಖಾನರ ವಿರುದ್ಧವಿದ್ದಾರೆ. ಈ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿರುವ ರಾಜಕೀಯ ಅತ್ಯಂತ ನಾಚಿಕೆಗೇಡಿನದ್ದು ಎಂದು ನಾವು ಹೇಳಿದರೆ ಅದೇನೂ ಅವರಿಗೆ ನಾಟದು..‌ ಉಡಲು ಉಡುಪಿದ್ದೂ ಅದನ್ನು ಕಳಚಿ ಬಿಟ್ಟು ಪ್ರಜ್ಞಾಪೂರ್ವಕವಾಗಿ
ಬೆತ್ತಲಾದವರಲ್ಲಿ ಈ ರೀತಿಯ ವಾದವೇ ವ್ಯರ್ಥ…

ಅದಾಗ್ಯೂ ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ. ಇಂದು ಜಗತ್ತು ಮುಸ್ಲಿಮರ ಭಾಷೆ ಎನ್ನುವ ಖುರ್‌ಆನಿನ ಭಾಷೆ ಅರಬಿಕ್. ಅಂದ ಮಾತ್ರಕ್ಕೆ ಅದನ್ನು ಯಾವತ್ತೂ ಮುಸ್ಲಿಮರ ಭಾಷೆ ಎನ್ನಲಾಗದು. ಮಧ್ಯ ಪ್ರಾಚ್ಯದ ಹೆಚ್ಚಿನೆಲ್ಲಾ ದೇಶಗಳ ಕ್ರೈಸ್ತರು ಮತ್ತು ಯಹೂದಿಯರ ಮಾತೃ ಭಾಷೆಯೇ ಅರಬಿಕ್. ಅರಬಿ ಮಾತೃ ಭಾಷೆಯವರು ಎಂಬ ಕಾರಣಕ್ಕೆ ಅವರನ್ನು ಮುಸ್ಲಿಮರೆನ್ನಲಾದೀತೆ..?

ಇದನ್ನೂ ಓದಿ: ಸಂಸ್ಕೃತ ಪ್ರೊಫೆಸರ್‌ ಫಿರೋಜ್‌ ಖಾನ್‌ರನ್ನು ಬೆಂಬಲಿಸಿ ವಿದ್ಯಾರ್ಥಿಗಳ ರ್‍ಯಾಲಿ: ಧರ್ಮ ತಾರತಮ್ಯಕ್ಕೆ ಖಂಡನೆ

ಇಸ್ಲಾಮಿಕ್ ಕರ್ಮಶಾಸ್ತ್ರ ಮತ್ತು ಚರಿತ್ರೆಗಳು ಅರಬಿಕ್‌ನ ಬಳಿಕ ಅತೀ ಹೆಚ್ಚು ಬರೆದಿಡಲ್ಪಟ್ಟ ಭಾಷೆ ಪರ್ಶ್ಯನ್ ಭಾಷೆ. ಅಂತೆಯೇ ಅರೆಬಿಕ್ ಬಿಟ್ಟರೆ ಅತೀ ಹೆಚ್ಚು ಇಸ್ಲಾಮೀ ಸಾಹಿತ್ಯವಿರುವುದೂ ಪರ್ಷ್ಯನ್ ಭಾಷೆಯಲ್ಲಾಗಿದೆ. ಆದರೆ ಪರ್ಷ್ಯನ್ ಆ ಭಾಗದ ಅಥವಾ ಜಗತ್ತಿನ ಯಾವುದೇ ಭಾಗದ ಮುಸ್ಲಿಮರು ಮಾತ್ರ ಮಾತನಾಡುವ ಭಾಷೆಯಲ್ಲ. ಹಾಗೆಯೇ ಪಾರ್ಸಿ ಎಂದು ಅರಿಯಲ್ಪಡುವ ಜನಾಂಗವೇ ಇಸ್ಲಾಮ್ ಧರ್ಮಾನುಯಾಯಿಗಳಲ್ಲ.

ಜಗತ್ತಿನ ಅತ್ಯಂತ ಸುಂದರ ಮತ್ತು ಮಧುರ ಭಾಷೆಗಳಲ್ಲೊಂದೆಂದು ಗುರುತಿಸಲ್ಪಟ್ಟ ಉರ್ದುವಿನ ಮೇಲೆ ಸಂಘಪರಿವಾರದ ಉರಿನಂಜು ಇಂದು ನಿನ್ನೆಯದಲ್ಲ. ಅದಾಗ್ಯೂ ಉರ್ದು ಸಾಹಿತ್ಯದ ಮೇರು‌ ಸಾಹಿತಿಗಳಲ್ಲಿ ಅಸಂಖ್ಯ ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂಗಳು ಮತ್ತು ಸಿಖ್ಖರಲ್ಲಿ ಬಹು ಸಂಖ್ಯಾತರ ಮಾತೃ ಭಾಷೆಯೂ ಉರ್ದು. ಅಷ್ಟು ದೂರವೇಕೆ ನಮ್ಮದೇ ದೇಶದ ಲಕ್ನೋ ಮತ್ತು ಹೈದರಾಬಾದಿನಲ್ಲಿ ಉರ್ದು ಮಾತೃ ಭಾಷಿಕರಾದ ಹಿಂದೂಗಳು ಧಾರಾಳವಾಗಿ ಕಾಣಸಿಗುತ್ತಾರೆ.

ಕಾಶ್ಮೀರಿಗರ ಅಧಿಕೃತ ಭಾಷೆ ಕಾಶ್ಮೀರಿ ಎಂದು ಎಲ್ಲಾ ಕಾಶ್ಮೀರಿಗರೂ ಒಪ್ಪುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಮರೇ ಬಹು ಸಂಖ್ಯಾತರು. ಅವರಲ್ಲಿ ಬಹುತೇಕರು ಕಾಶ್ಮೀರಿ ಮನೆ ಭಾಷೆಯವರು. (ಉರ್ದು ಮ‌ನೆ ಭಾಷಿಕರೂ ಇದ್ದಾರೆ) ಅಂತೆಯೇ ಅಲ್ಲಿನ ಹಿಂದೂಗಳ ಮನೆಭಾಷೆಯೂ ಕಾಶ್ಮೀರಿ.

ನನ್ನದೇ ಮಾತೃಭಾಷೆ ಬ್ಯಾರಿಯನ್ನು ತೆಗೆದುಕೊಳ್ಳೋಣ. ಬ್ಯಾರಿ ಭಾಷೆ ಕೇವಲ ಮುಸ್ಲಿಮರ ಭಾಷೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಈ ಭಾಷೆಯಲ್ಲಿ ಎರಡು ಪ್ರಬೇಧಗಳಿವೆ. ಒಂದು ಬ್ಯಾರಿ ,ಇನ್ನೊಂದು ಮಲಾಮೆ. ಇವೆರಡರಲ್ಲಿರುವ ಶಬ್ಧಗಳು 98% ಒಂದೇ ಆಗಿವೆ. ಲಯದಲ್ಲಿ ಬ್ಯಾರಿ ಎಂಬ ಪ್ರಬೇಧ ತುಳುವನ್ನು ಹೋಲುತ್ತದಾದರೆ, ಮಲಾಮೆ ಮಲಯಾಳವನ್ನು ಹೋಲುತ್ತದೆ. ಆದರೆ ಮಲಾಮೆ ಮಲಯಾಳಂಗೆ ಬಹಳ ವ್ಯತ್ಯಾಸವಿದೆ. ಮಲಾಮೆ ಎಂಬ ಪ್ರಬೇಧದಲ್ಲಿ ಬ್ಯಾರಿಗಳಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತೀಯ ಸಮುದಾಯ, ಮೋಯ ಸಮುದಾಯ,ಮಣಿಯಾಣಿ ಸಮುದಾಯ ಮತ್ತು ಆಶಾರಿ ಸಮುದಾಯದವರ ಮನೆಭಾಷೆಯೂ ಹೌದು. ಹಾಗಾದರೆ ಇದು ಯಾರ ಭಾಷೆ?

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ. ಆ ಭಾಷೆಯ ಕುರಿತಂತೆ ಅವರು ಪೂನಾ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿ ೧೯೬೮ರಲ್ಲಿ ಪಿ.ಎಚ್.ಡಿ.ಪಡೆದಿರುತ್ತಾರೆ. ಅಂದಿನಿಂದ ಇಂದಿನವರೆಗೆ ಬ್ಯಾರಿ ಭಾಷೆಯ ಕುರಿತಂತೆ ಇನ್ನೊಂದು ಪಿ.ಎಚ್.ಡಿ. ಅಧ್ಯಯನ ನಡೆದಿಲ್ಲ.

ತುಳು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಿಂದೂ ಧರ್ಮೀಯರ ಭಾಷೆ. ಆದರೆ ತುಳು ಭಾಷೆಯಲ್ಲಿ ಗ್ರಾಂಥಿಕ ಸಾಹಿತ್ಯಕ್ಕೆ ನಾಂದಿ ಹಾಡಿದವರು ಮತ್ತು ತುಳು ಭಾಷೆಗೆ ಅಕಾಡೆಮಿಕ್ ಮನ್ನಣೆ ಒದಗಿಸಿದವರು ದೂರದ ಜರ್ಮನಿಯ ಬಾಸೆಲ್ ಮಿಶನ್‌‌ನ ಪ್ರವರ್ತಕರು. ಆಧುನಿಕ ತುಳು ರಂಗ ಭೂಮಿಯ ಭೀಷ್ಮ ಮೊಯ್ದಿನಬ್ಬ ಎಂಬ ಬ್ಯಾರಿ ಮುಸ್ಲಿಂ ನಾಟಕಕಾರ. (ಆದರೆ ದುರದೃಷ್ಟವಶಾತ್ ಇಂದು ತುಳು ನಾಟಕರಂಗ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ.)

ಕನ್ನಡದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಕೂಡಿಟ್ಟ ಜಾನಪದ ದಿಗ್ಗಜ ಎಸ್.ಕೆ.ಕರೀಂ ಖಾನ್ ಅಫ್ಘಾನ್ ಮೂಲದವರು. ಅವರ ಮನೆ ಭಾಷೆ ಕನ್ನಡವಲ್ಲ.

ಕನ್ನಡದ ಮೇರು ಸಾಹಿತಿಗಳಾದ ಬೇಂದ್ರೆ ಮರಾಠಿ ಮನೆ ಭಾಷಿಕರಾದರೆ, ಮಾಸ್ತಿ ತಮಿಳು ಮನೆ ಭಾಷಿಕರು, ಗಿರೀಶ್ ಕಾರ್ನಾಡ್ ಕೊಂಕಣಿ ಮನೆ ಭಾಷಿಕರು, ಅಮೃತ ಸೋಮೇಶ್ವರ ಮಲಾಮೆ ಮನೆ ಭಾಷಿಕರು.

ಹೀಗೆ ಜಗತ್ತಿನ ಎಲ್ಲಾ ಭಾಷೆಗಳಿಗೂ ಆಯಾ ಭಾಷಿಕಲ್ಲದವರ ಕೊಡುಗೆ ಧಾರಾಳವಾಗಿ ಕಾಣಸಿಗುತ್ತವೆ.

ಹೀಗಿರುವಾಗ ಭಾಷೆಯೊಂದನ್ನು ನಿರ್ಧಿಷ್ಟ ಜಾತಿ, ಧರ್ಮ, ಜನಾಂಗ ಮತ್ತು ಭಾಷಿಕರಿಗೆ ಮಾತ್ರ ಸೀಮಿತಗೊಳಿಸಲು ಮನುವಾದಿಗಳಿಗೆ ಮಾತ್ರ ಸಾಧ್ಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...