Homeಮುಖಪುಟಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

ಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

- Advertisement -
- Advertisement -

| ಬಿ.ಸಿ .ಬಸವರಾಜ್ |

ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ಇತ್ತೀಚೆಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‍ರವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ಈಗ ಉಂಟಾಗಿರುವುದು ಕೇವಲ ಆರ್ಥಿಕ ಅಭಿವೃದ್ಧಿಯಲ್ಲಿ ಇಳಿಕೆಯೇ ಹೊರತು ಇದು ಆರ್ಥಿಕ ಹಿಂಜರಿತವಲ್ಲ. ಕೇಂದ್ರ ಸರ್ಕಾರ ಈ ಅಭಿವೃದ್ಧಿಯ ಇಳಿತವನ್ನು ಸರಿಪಡಿಸಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದು ಅದರ ಒಳ್ಳೆಯ ಫಲಿತಾಂಶಗಳು ಈಗ ಬರುತ್ತಿವೆ. ಆದ್ದರಿಂದ ಭಾರತ ಸದ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.

ವಿತ್ತ ಮಂತ್ರಿಯವರು ಈ ಹೇಳಿಕೆ ನೀಡಿದನಂತರ ಬಿಡುಗಡೆಯಾದ ಜಿಡಿಪಿ ಅಂಕಿಅಂಶಗಳು 2019-20 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕೇವಲ 4.5% ರಷ್ಟೆಂದು ಹೇಳಿವೆ. ಹೋದವರ್ಷ ಅಂದರೆ 2018-19 ರ ಇದೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 7.1% ರಷ್ಟಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 5% ರಷ್ಟಿದ್ದ ಜಿಡಿಪಿ ಈಗ 4.5% ರಷ್ಟಾಗಿರುವುದು ನೋಡಿದಾಗ ಕೇಂದ್ರ ಸರ್ಕಾರ ಆರ್ಥಿಕ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ತೆಗೆದುಕೊಂಡ ಕ್ರಮಗಳು ಏನೂ ಪರಿಣಾಮ ಉಂಟುಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ತಾಂತ್ರಿಕವಾಗಿ ನೋಡಿದಾಗ ವಿತ್ತ ಮಂತ್ರಿಯವರು ಹೇಳಿದಂತೆ ಇದು ಆರ್ಥಿಕ ಹಿಂಜರಿಕೆಯಲ್ಲ. ಸತತ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯು ಹೋದವರ್ಷಕ್ಕಿಂತ ಕಡಿಮೆಯಾದರೆ ಅಂದರೆ ನಕಾರಾತ್ಮಕ ಬೆಳವಣಿಗೆ (Negative growth) ತೋರಿಸಿದರೆ ಆಗ ಅರ್ಥಶಾಸ್ತ್ರೀಯವಾಗಿ ಅದನ್ನು ಆರ್ಥಿಕ ಹಿಂಜರಿತ (Recession) ಎನ್ನುತ್ತಾರೆ. ಹಾಗಾಗಿ ಭಾರತದಂತ ಬೆಳೆಯುತ್ತಿರುವ ಆರ್ಥಿಕತೆ ಸಾಮಾನ್ಯವಾಗಿ ಹಿಂಜರಿತದ ಮಟ್ಟಕ್ಕೆ ಹೋಗುವುದಿಲ್ಲ. ಆದರೆ, ಕಳೆದ ಆರೇಳು ತ್ರೈಮಾಸಿಕಗಳಿಂದ ಸತತವಾಗಿ ಇಳಿಯುತ್ತಿರುವ ಜಿಡಿಪಿ ಭಾರತದಂತ ಬೃಹತ್ ದೇಶಕ್ಕೆ ಆರ್ಥಿಕ ಹಿಂಜರಿತದಷ್ಟೇ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಈಗಲಂತೂ ನಮ್ಮ ಆರ್ಥಿಕ ಪರಿಸ್ಥಿತಿ ಹಿಂಜರಿಕೆಗೆ ಹತ್ತಿರವಿರುವಷ್ಟು ಗಂಭೀರವಾಗಿದೆ ಎಂಬುದು ಒಂದೆರಡು ಮುಖ್ಯ ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮೊದಲನೆಯದಾಗಿ, ತಯಾರಿಕಾ ಕ್ಷೇತ್ರ (Manufacturing sector) ಹೋದ ವರ್ಷದ (2018-19) ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ -1% ಬೆಳವಣಿಗೆ ತೋರಿಸಿದೆ. ಅಂದರೆ ಶೇ ಒಂದರಷ್ಟು ಬೆಳವಣಿಗೆ ಇಳಿಮುಖವಾಗಿದ್ದು (Negative growth) ಈ ವಲಯ ಹಿಂಜರಿತವನ್ನು ತೋರಿಸುತ್ತಿದೆ. ತಯಾರಿಕಾ ಕ್ಷೇತ್ರ ಒಟ್ಟು ಕೈಗಾರಿಕಾ ವಲಯದ ಪ್ರಮುಖ ಭಾಗವಾಗಿದ್ದು ಇದರ ನೆಗೆಟಿವ್ ಗ್ರೋಥ್‍ನಿಂದಾಗಿಯೇ ಕೈಗಾರಿಕಾ ಕ್ಷೇತ್ರ ಒಟ್ಟಾರೆಯಾಗಿ ಈಗ ಕೇವಲ 0.52% ರಷ್ಟು ಮಾತ್ರ ಬೆಳವಣಿಗೆ ದಾಖಲಿಸಿದೆ.

ಜೊತೆಗೆ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರವೂ ಆಗಿದ್ದು ಇಲ್ಲಿಯ ಹಿಂಜರಿತ ಮತ್ತಷ್ಟು ಉದ್ಯೋಗ ನಷ್ಟಕ್ಕೆ ಎಡೆಮಾಡಿಕೊಡಲಿದೆ. ಇದರಿಂದಾಗಿ ಇಡೀ ದೇಶದಲ್ಲಿ ಮತ್ತಷ್ಟು ನಿರುದ್ಯೋಗ, ಮತ್ತಷ್ಟು ಇಳಿಮುಖವಾಗುವ ಗ್ರಾಹಕ ಬೇಡಿಕೆ ಮತ್ತು ಅದರಿಂದಾಗಿ ಮತ್ತಷ್ಟು ಆರ್ಥಿಕ ಹಿಂಜರಿಕೆ. ಹೀಗೆ, ಈಗಿನ ಆರ್ಥಿಕ ಅಭಿವೃದ್ಧಿ ಇಳಿಕೆ ಆರ್ಥಿಕ ಹಿಂಜರಿತವಾಗುವ ಲಕ್ಷಣಗಳು ಇಲ್ಲಿ ಕಾಣಿಸುತ್ತಿವೆ.

ಇನ್ನು, ಈಗಿನ ಒಟ್ಟು ಜಿಡಿಪಿಯ 4.5% ನಲ್ಲಿ ಸರ್ಕಾರದ ವೆಚ್ಚವನ್ನು (Government expenditure) ಕಳೆದು ನೋಡಿದರೆ ಕಂಡುಬರುವ ಜಿಡಿಪಿ ಬೆಳವಣಿಗೆ ದರ ಕೇವಲ 3%. ಉಳಿದ ಸರ್ಕಾರೇತರ ಜಿಡಿಪಿಯಲ್ಲಿ ಖಾಸಗಿ ಬಳಕೆಯ ವೆಚ್ಚ (private consumption expenditure), ಖಾಸಗಿ ಬಂಡವಾಳ (private investment ) ಮತ್ತು ಒಟ್ಟು ರಫ್ತು (Net exports) ಬರುತ್ತವೆ.

ಈ ಸರ್ಕಾರೇತರ ಜಿಡಿಪಿಯ ಭಾಗದ ಬೆಳವಣಿಗೆ ಈ ಎರಡನೇ ತ್ರೈಮಾಸಿಕದಲ್ಲಿ ಕೇವಲ 3% ಇದೆ. ಯಾವಾಗಲೂ ದೇಶದ ಜಿಡಿಪಿಯಲ್ಲಿ ಸರ್ಕಾರೇತರ ಜಿಡಿಪಿಯ ಪಾಲು ಶೇ 87 ರಿಂದ ಶೇ 92 ರಷ್ಟಿರುತ್ತದೆ. ಈ ತ್ರೈಮಾಸಿಕದಲ್ಲಿ ಇದರ ಪಾಲು ಶೇ 87 ರಷ್ಟಿದೆ.

ಅಂದರೆ, ದೇಶದ ಜಿಡಿಪಿಯಲ್ಲಿ ಶೇ 87 ರಷ್ಟಿರುವ ಸರ್ಕಾರೇತರ ಜಿಡಿಪಿ ಕೇವಲ 3% ರಷ್ಟು ಮಾತ್ರ ಬೆಳವಣಿಗೆಯಾಗಿದೆ ಎಂದರೆ, ದೇಶದ ಆರ್ಥಿಕ ಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ತಯಾರಿಕಾ ಕ್ಷೇತ್ರದ ನಕಾರಾತ್ಮಕ ಬೆಳವಣಿಗೆ ಮತ್ತು ಉಳಿದೆಲ್ಲ ಕ್ಷೇತ್ರಗಳ ಕನಿಷ್ಟ ಬೆಳವಣಿಗೆ ಮೇಲಿನ ಅಂಶವನ್ನು ಸ್ಪಷ್ಟಪಡಿಸುತ್ತಿವೆ.

ಅದೇ ಸರ್ಕಾರೀ ವೆಚ್ಚ ಈ ಆರ್ಥಿಕ ವರ್ಷದಲ್ಲಿ 12.3% ವೇಗದಲ್ಲಿ ಬೆಳೆದಿದೆ. ಇದರ ಕೊಡುಗೆಯ ಫಲವಾಗಿಯೇ ಜಿಡಿಪಿ 4.5% ರಷ್ಟಾದರೂ ಇದೆ. ಆದರೆ ಈ ಸರ್ಕಾರೀ ವೆಚ್ಚ ಆಡಳಿತ, ರಕ್ಷಣೆ ಮತ್ತು ಇತರ ಕೆಲವು ಸೇವೆಗಳಿಗೆ ಮಾತ್ರ ಹಂಚಲ್ಪಟ್ಟಿರುವುದರಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಸೋತಿದೆ.

ಇದೇ ಸರ್ಕಾರೀ ವೆಚ್ಚವು ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯತ್ತ ಕಡೆ ಗಮನ ಕೇಂದ್ರೀಕರಿಸಿದ್ದರೆ ಜನಗಳ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕ ಮುಂಚಲನೆ ಸಾಧ್ಯವಾಗುತ್ತಿತ್ತು.

ಜೊತೆಗೆ ಬಂಡವಾಳ ಹೂಡಿಕೆಯ ವೇಗವು ಕೇವಲ 1.02% ರಷ್ಟಿದ್ದು ಇದು ಆರ್ಥಿಕ ಹಿಂಜರಿಕೆಯಿಂದ ಪಾರುಮಾಡುವುದಕ್ಕಾಗಲೀ ಮತ್ತು ಉದ್ಯೋಗ ಸೃಷ್ಟಿಗಾಗಲೀ ಏನೇನೂ ಸಾಲದೆನಿಸಿದೆ.ಒಟ್ಟಾರೆಯಾಗಿ, ದೇಶ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗದೆ ಇದ್ದರೂ, ವಲಯಾವಾರು ಪರಿಸ್ಥಿತಿಯನ್ನು ಗಮನಿಸಿದಾಗ ಅಂತಹ ಹಿಂಜರಿತದಷ್ಟೇ ಸ್ಥಿತಿ ಗಂಭೀರವಾಗಿದೆ.ಆದರೆ, ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ.ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...