Homeನ್ಯಾಯ ಪಥಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ...

ಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ…

- Advertisement -
- Advertisement -

ಹೈದರಾಬಾದ್ ಅತ್ಯಾಚಾರ ಪ್ರಕರಣ ಕಂಡು ಇಡೀ ದೇಶವೇ ಮರುಕಪಟ್ಟಿತು. ಫಿಲ್ಮ್ ಇಂಡಸ್ಟ್ರಿಯೂ ಕಂಬನಿ ಮಿಡಿದು, ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿತು. ಇದೇ ಮೊದಲಲ್ಲ 2012ರ ನಿರ್ಭಯಾ ಪ್ರಕರಣದಲ್ಲಿರಲಿ, ಅಥವಾ ಇಂತಹುದೇ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಾಗ ಸಿನಿಮಂದಿ ಆಕ್ರೋಶದಿಂದ ಮಾತನಾಡೋದು ಸಿನಿಮಾ ಡೈಲಾಗ್‍ಗಳಷ್ಟೇ ಸಹಜವಾಗಿದೆ. ಆದರೆ, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಲಾಭದ ಬೆನ್ನು ಹತ್ತಿರುವ ಸಿನಿಮೋದ್ಯಮಕ್ಕೆ, ಅದರ ಪಾಲುದಾರರಿಗೆ ನಿಜಕ್ಕೂ ಹೀಗೆಲ್ಲ ಆಕ್ರೋಶ ಹೊರಹಾಕುವ ನೈತಿಕತೆ ಉಳಿದಿದೆಯಾ ಅನ್ನೋದು ಚರ್ಚೆಯಾಗಬೇಕಿರುವ ಸಂಗತಿ.

ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು `ದಂಡುಪಾಳ್ಯ’ ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಇದು ಒಂದು ಸಿನಿಮಾಗೆ ಸೀಮಿತವಾದುದಲ್ಲ ಅಥವಾ ಒಬ್ಬ ಕಾಮಾಂಧನ ಪ್ರೇರಣೆಗೂ ಸೀಮಿತವಾದುದಲ್ಲ. ಕಮರ್ಷಿಯಲ್ ಸಕ್ಸಸ್‍ನ ಜಾಡುಹಿಡಿದು ಹೊರಟಿರುವ ಬಹುತೇಕ ಸಿನಿಮಾಗಳ ನಿರ್ಮಾತೃಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಇಂಥಾ ಶೋಷಣೆಗಳನ್ನು ವಿಜೃಂಭಿಸುತ್ತಾ ಬಂದಿರೋದು ಇವತ್ತಿನ ವಾಸ್ತವ.

ಸಿನಿಮಾರಂಗ ಬೆಳೆದಂತೆ, 21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷದವರೆಗಿನ ಬಹುತೇಕ ಸಿನಿಮಾಗಳ ಕತೆಗಳಲ್ಲಿ ಅತ್ಯಾಚಾರವೆಂಬುದು ಸಾಮಾನ್ಯ ವಸ್ತುವಾಗಿ ಕಾಣಿಸಿಕೊಳ್ಳುತ್ತವೆ. ಪ್ರೀತಿ-ಪ್ರೇಮ-ಕಾಮ, ಆಸೆ, ಆಕರ್ಷಣೆ, ಸೇಡು, ದ್ವೇಷ ಇದೆಲ್ಲದಕ್ಕೂ ಕೇಂದ್ರವಾಗಿ ಅತ್ಯಾಚಾರದ ದೃಶ್ಯಗಳು ರಾರಾಜಿಸುತ್ತಿವೆ. ಅದಲ್ಲದೆ ಅನೈತಿಕ ಸಂಬಂಧದ ಕತೆ-ದೃಶ್ಯಗಳು ನೋಡುಗರಿಗೆ ಪ್ರಚೋದನೆಯ ಹೊಸ ಹುಮ್ಮಸ್ಸನ್ನು ತಂದೊಡ್ಡುವುದರ ಜೊತೆಗೆ ಸಿನಿಮಾದಲ್ಲಿ ನಟನೊಬ್ಬ ಎಸಗುವ ಅತ್ಯಾಚಾರ ಕೃತ್ಯವು ಆ ಪಾತ್ರದ ಗಂಡಸ್ತನದ ಅಹಮ್ಮಿಕೆಯನ್ನಾಗಿಯೋ, ಸ್ತ್ರೀ ಪಾತ್ರವನ್ನು ಅವಮಾನಿಸುವ ಸಾಧನವಾಗಿಯೋ ಬಳಕೆಯಾಗುತ್ತಲೇ ಇದೆ.

ಸಿನಿಮಾ ಎಂಬುದು ಸಮಾಜದ ಕನ್ನಡಿಯಿದ್ದಂತೆ, ಸಮಾಜದಲ್ಲಿ ನಡೆಯೋದನ್ನೇ ಸಿನಿಮಾದಲ್ಲಿ ತೋರಿಸಬೇಕಾಗುತ್ತೆ ಎಂಬ ವಾದವನ್ನು ಕೆಲವರು ಮುಂದಿಡಬಹುದು. ಆದರೆ ಅಂತವರು, ನೈಜತೆಯ ನೆಪದಲ್ಲಿ ಇಂತಹ ವಿಕೃತಿಗಳನ್ನು ಹಸಿಹಸಿಯಾಗಿ ಬಿತ್ತರಿಸುವ ಅದೇ ಸಿನಿಮಾ ಸಮಾಜವನ್ನು ತಿದ್ದಿ ತೀಡುವ ಇನ್ನುಳಿದ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ತಾನು ಪ್ರೀತಿಸಿದವಳು ತನಗೆ ಸಿಗಲಿಲ್ಲವೆಂದರೆ, ಆಕೆ ಬೇರಾರಿಗೂ ಸಿಗಬಾರದೆಂದು ಆಕೆಯನ್ನು ಅತ್ಯಾಚಾರಗೈಯುವ ಅಥವಾ ಕುಡಿದ ಮತ್ತಿನಲ್ಲಿ ಹೀರೋ ಎಸಗುವ ಅತ್ಯಾಚಾರವು ಆಕೆಯನ್ನು ಮದುವೆ ಆಗಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆಂಬ ದೃಶ್ಯದೊಂದಿಗೆ ಕೊನೆಗಾಣುತ್ತದೆ. ಇವೆಲ್ಲವೂ ಅತ್ಯಾಚಾರಿಗಳಿಗೆ ಎಷ್ಟೊಂದು ಸುಲಭವೆಂಬಂತೆ ಪ್ರಭಾವಿಸುತ್ತವೆ.

ಸಿನಿಮಾದಲ್ಲಿ ಅತ್ಯಾಚಾರಗೈದವನು ಇವತ್ತು ಅವಳ ಸೊಕ್ಕು ಇಳಿಸಿದ್ದೇನೆಂದು ಗರ್ವದಿಂದ ಹೇಳಿಕೊಳ್ಳುವಂತಹ ಹಾಗೂ ನಿಷ್ಕರ್ಷ ಸಿನಿಮಾದಲ್ಲಿ ಖಳನಟನೊಬ್ಬ `ಇವಳಿಗೆ ಯೌವನ ತುಂಬಿ ತುಳುಕ್ತಾಯಿದೆ ಸ್ವಲ್ಪ ಖಾಲಿ ಮಾಡು’ ಎನ್ನುವ ಮತ್ತು ಆತ ಅತ್ಯಾಚಾರಗೈಯುವ ದೃಶ್ಯಗಳು ಹೆಣ್ಣಿನ ಬಾಯಿ ಮುಚ್ಚಿಸಲು ಅಥವಾ ಆಕೆಯನ್ನು ತನ್ನ ಅಡಿಯಾಳಾಗಿಸಿಕೊಳ್ಳಲು ಅತ್ಯಾಚಾರವೊಂದು ಸಾಧನ ಎಂಬುದನ್ನು ಸುಪ್ತವಾಗಿ ಸಮಾಜಕ್ಕೆ ದಾಟಿಸಿಬಿಡುತ್ತವೆ. ಜಾತಿ, ವರ್ಗ ಮತ್ತು ಕಾಮದ ಅಮಲನ್ನು ನೆತ್ತಿಗೇರಿಸಿಕೊಂಡವನಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತವೆ. ಇಂತಹ ಸಿನಿಮಾಗಳು ಅತ್ಯಾಚಾರವಷ್ಟೇ ಅಲ್ಲದೆ ಆಸಿಡ್ ದಾಳಿ, ಹಿಂಸೆ, ಕಿರುಕುಳಗಳೂ ಮಹಿಳಾ ದೌರ್ಜನ್ಯದ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪ್ರಚೋದಿಸುತ್ತವೆ.

ಅಲ್ಲದೆ, ಸಿನಿಮಾಗಳಲ್ಲಿ ಅವಕಾಶಬೇಕೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎಂದು ಹೇಳುವ ನಿರ್ದೇಶಕರೂ, ನಿರ್ಮಾಪಕರೂ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಮತ್ತೊಂದು ದುರಂತ. ಇತ್ತೀಚೆಗೆ ಸದ್ದು ಮಾಡಿದ ಮೀಟೂ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹೀರೋ, ನಿರ್ದೇಶಕ, ನಿರ್ಮಾಪಕರ ಪರವಾಗಿ ನಿಲ್ಲುವ `ಫೇವರಿಸಂ’ ಮನಸ್ಥಿತಿ ಸಿನಿಮಾ ರಂಗದ ಯಾವ ನೈತಿಕತೆಯನ್ನು ಪ್ರತಿನಿಧಿಸುತ್ತದೆ. ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೇಳಿಕೊಂಡ ನಟಿಯರ ಸಿನಿ ಭವಿಷ್ಯಕ್ಕೆ ತಣ್ಣೀರೆರಚುವ ಇಂಡಸ್ರ್ಟಿಯು ಅತ್ಯಾಚಾರದ ವಿರುದ್ಧ ಮಾತನಾಡುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಮತ್ತೆಮತ್ತೆ ಮುನ್ನೆಲೆಗೆ ತರುತ್ತಿದೆ.

ಇಂದು ಸಿನಿಮಾಗಳಿಂದ ಪ್ರೇರೇಪಿಸಲ್ಪಡುವ ಯುವಸಮುದಾಯ ಬೆಳೆಯುತ್ತಿದೆ. ಇಂತಹ ಯುವಜನಾಂಗಕ್ಕೆ ಆದರ್ಶವಾಗಬೇಕಿರುವ ಸಿನಿಮಾಗಳು ಮಹಿಳೆಯರನ್ನು ಗೌರವಿಸುವ, ಮಾನವ ಪ್ರೀತಿಯನ್ನು ಹಂಚುವ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸುವಂತಹ ಹಾಗೂ ಆರೋಗ್ಯಕರ ಮನರಂಜನೆಯ ವಾಹಿನಿಯಾಗಿರಬೇಕೇ ಹೊರತು ಹಾದಿ ತಪ್ಪಿಸಿ, ಸಮಾಜದಲ್ಲಿ ಕೊಳಕನ್ನು ಬಿತ್ತುವ ಮಾಧ್ಯಮವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....