Homeಕರ್ನಾಟಕಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

ಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

- Advertisement -
- Advertisement -

ಉತ್ತರ ಕನ್ನಡದ ಕಾಂಗ್ರೆಸ್ ಪೊರೆ ಕಳಚಿಕೊಳ್ಳುತ್ತಿದೆ! ಮದವೇರಿದ ಮದ್ದಾನೆಗಳಂತಾಗಿ ದಶಕಗಟ್ಟಲೆ ಕಾಲ ಗುದ್ದಾಡಿ ಜಿಲ್ಲಾ ಕಾಂಗ್ರೆಸನ್ನು ನಜ್ಜುಗುಜ್ಜುಮಾಡಿದ್ದ ಮ್ಯಾಗಿಯಜ್ಜಿ ಮತ್ತು ದೇಶಜ್ಜ ರಾಜಿ ಸಂಕೇತ ಬಿತ್ತರಿಸುತ್ತಿದ್ದಾರೆ. ಪರಸ್ಪರ ಅಸ್ತಿತ್ವ ಉಳಿಸಿಕೊಳ್ಳಲು ಈ ಮುದಿಮಣಿಗಳು ಹೊಂದಾಣಿಕೆಯ ಅನಿವಾರ್ಯಕ್ಕೆ ಬಿದ್ದಿವೆ. ಬದ್ಧವೈರಿಗಳ ಈ ಮನಃಪರಿವರ್ತನೆ ಯಲ್ಲಾಪುರ ಬೈ-ಇಲೆಕ್ಷನ್ ಸೋಲಿನ ನೇರ ಪರಿಣಾಮ ಎಂತಲೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆಗಳು ನಡೆದಿದೆ.

ದೇಶಪಾಂಡೆ ತನ್ನ ಮೂರು ದಶಕದ ರಾಜಕೀಯದಲ್ಲಿ ಜನತಾ ಪರಿವಾರದಲ್ಲಿರಲಿ ಅಥವಾ ಕಾಂಗ್ರೆಸಿನಲ್ಲಿರಲಿ ಯಾರನ್ನೂ ಗೆಲ್ಲಿಸಲು ತ್ರಿಕರ್ಣಪೂರ್ವಕ ಪ್ರಯತ್ನ ಮಾಡಿದ ಕುರುಹುಗಳಿಲ್ಲ. ಹಾಗಂತ ಸೋಲಿಸಲು ಹಲವು ಸಲ ಹಠಹಿಡಿದು ಹಿಕಮತ್ತು ನಡೆಸಿದ ದಾಖಲೆಗಳಿವೆ. ಇಂಥ ಇತಿಹಾಸದ ದೇಶ್ ಕಳೆದ ಯಲ್ಲಾಪುರ ಬೈ-ಇಲೆಕ್ಷನ್‍ನಲ್ಲಿ ತನ್ನ ಚೇಲಾ ಭೀಮಣ್ಣ ನಾಯ್ಕನ ಗೆಲ್ಲಿಸಿ ವೈರಿ ಹೆಬ್ಬಾರ್ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದ್ದರು. ಆದರೆ ಸ್ವಯಂಕೃತಾಪರಾಧಗಳ ಸರಣಿಯಿಂದ ವರ್ಚಸ್ಸು ಕಳಕೊಂಡಿರುವ ದೇಶ್ ಮುಗ್ಗರಿಸಿ ಮಕಾಡೆ ಮಲಗಿಬಿಟ್ಟರು! ಕಂಗಾಲಾಗಿ ದೇಶಪಾಂಡೆ ಕೂತಿದ್ದ ಈ ಹೊತ್ತಿನಲ್ಲೇ ಬರೋಬ್ಬರಿ ಒಂದು ವರ್ಷದನಂತರ ಜಿಲ್ಲೆಗೆ ವಕ್ಕರಿಸಿದ ಇಲ್ಲಿಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಆಟ ಶುರುಹಚ್ಚಿಕೊಂಡಿದ್ದರು. ನೇರ ಮ್ಯಾಗಿಯ ಶಿರಸಿಯ ಮನೆಗೇ ಹೋದ ದೇಶ್ ಆಕೆಯ ಮುಂದೆ ನಿಂತು ಹೊಸ ನಂಟಿನ ಪ್ರಸ್ತಾಪ ಇಟ್ಟಿರುವುದು ಅನಿರೀಕ್ಷಿತ ಸಮೀಕರಣವನ್ನು ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಸೃಷ್ಟಿಸಿಬಿಟ್ಟಿದೆ.

ಮ್ಯಾಗಿ ಮತ್ತಾಕೆಯ ಮಗ ಆಳ್ವ ಫೌಂಡೇಶನ್ ಕಟ್ಟಿಕೊಂಡಿದ್ದರೆ, ದೇಶ್ ಮತ್ತವರ ಪುತ್ರ ಪ್ರಶಾಂತ ದೇಶಪಾಂಡೆ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಎರಡೂ ಕುಟುಂಬಗಳು ಸಾಮಾಜಿಕ ಸೇವೆಯ ಹೆಸರಲ್ಲಿ ರಾಜಕೀಯ ಫಾಯ್ದೆಗೆ ಹವಣಿಸುತ್ತಿವೆ. ಮ್ಯಾಗಿಗೆ ತನ್ನ ಪೆದ್ದು ಕುಲೋದ್ಧಾರಕನನ್ನು ಶಿರಸಿಯ ಶಾಸಕನ ಮಾಡುವ ಕನಸು; ದೇಶ್‍ಗೆ ಮುಂಬೈನಲ್ಲಿ ವಕೀಲಿಕೆ ಮಾಡುವ ಅನಿವಾಸಿ ಉತ್ತರ ಕನ್ನಡಿಗ ಮಗ ಮಹಾರಾಯನ ಸಂಸದನ ಮಾಡುವ ಆಸೆ. ಇದೇ ಒಳಉದ್ದೇಶದಿಂದ ಮ್ಯಾಗಿ ಫೌಂಡೇಷನ್ ಕಾರ್ಯಕ್ರಮ ಹಾಕಿಕೊಂಡು ಈಗ ಜಿಲ್ಲೆಯಲ್ಲಿ ಅಂಡಲೆಯುತ್ತಿದ್ದಾರೆ. ಆಕೆ ಫಂಕ್ಷನ್ ಮುಗಿಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ದೇಶಪಾಂಡೆ ಮೊನ್ನೆ ಶನಿವಾರ ಭೇಟಿಯಾಗಿ ಗ್ಯಾಂಗ್‍ವಾರ್ ನಿಲ್ಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಎಬ್ಬಿಸಿರುವ ಬಡಿವಾರಕ್ಕೆ ಬೆದರಿರುವ ಮ್ಯಾಗಿ-ದೇಶ್ ನೈಚ್ಛಾನುಸಂಧಾನ ನಡೆಸಬೇಕಾಗಿ ಬಂದಿವೆ, ಪಾಪ!!

ಮ್ಯಾಗಿ-ದೇಶ್ ಅಕ್ಕ-ಪಕ್ಕ ಕುಳಿತು ಕಳೆದ ಅಸೆಂಬ್ಲಿ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಬಣ ಬಡಿದಾಟದಿಂದಾದ ಹಾನಿಯ ಲೆಕ್ಕ ತೆಗೆದಿದ್ದಾರೆ. ತಮ್ಮೊಳಗಿನ ದ್ವೇಷಾಸೂಯೆ ಮೇಲಾಟದಿಂದ ಗತಿಗೇಡಿ ಬಿಜೆಪಿ ಸೈತಾನನಂತೆ ಬೆಳೆದಿದೆ ಎಂದು ಪಾಪಪ್ರಜ್ಞೆಯಿಂದ ಮಾತಾಡಿಕೊಂಡಿದ್ದಾರೆ; ಈಗಿಂದಲೇ ತಳಮಟ್ಟದಿಂದ ಪಾರ್ಟಿಯನ್ನು ಕಟ್ಟದಿದ್ದರೆ ತಮ್ಮ ವಂಶದ ಉತ್ತರಾಧಿಕಾರಿಗಳಿಗೆ ಭವಿಷ್ಯವಿಲ್ಲ ಎಂಬುದು ಮನಗಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉದ್ಧಾರವಾಗಬೇಕಿದ್ದರೆ ಮೊದಲು ಹಾಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕನ ಉಚ್ಚಾಟಿಸಿ ಹೊಸ ಆಯ್ಕೆ ಮಾಡಬೇಕು; ಆನಂತರ ತಾವಿಬ್ಬರೂ ಒಟ್ಟಾಗಿ ಜಿಲ್ಲಾ ಟೂರ್ ಹೊಡೆದು ಪಕ್ಷಕ್ಕೆ ಜೀವ ತುಂಬಬೇಕೆಂದು ಮ್ಯಾಗಿ ಮನದಿಂಗಿತವನ್ನು ದೇಶ್ ಮುಂದೆ ಮಂಡಿಸಿದ್ದಾರೆ. ಇದನ್ನು ದೇಶಪಾಂಡೆಯೂ ಒಪ್ಪಿದ್ದಾರೆ.

ಬದಲಾದ ವರಸೆಯಲ್ಲಿ ಮ್ಯಾಗಿಗೆ ದೇಶಪಾಂಡೆಗಿಂತಲೂ ಹೆಚ್ಚು ಸಿಟ್ಟಿರುವುದು ಭೀಮಣ್ಣನ ಮೇಲೆ. ತನ್ನನ್ನು ಕೊನೆತನಕವೂ ಕಾಡಿದ ಮಾಜಿ ಸಿಎಂ ‘ಬಂ’ನ ಭಾಮೈದ ಈ ಭೀಮಣ್ಣನೆಂಬುದು ಮ್ಯಾಗಿಯ ಹಲವು ಅಸಮಾಧಾನದ ಕಾರಣಗಳಲ್ಲಿ ಒಂದು. ಈ ಭೀಮಣ್ಣ ನಾಯ್ಕನೂ ಅಷ್ಟೇ ಕಿತಾಪತಿಗಾರ. ಮ್ಯಾಗಿಗೆ ಆತ ಕೇರ್ ಮಾಡುತ್ತಿರಲಿಲ್ಲ. ಆಕೆಯ ನಿಷ್ಠಾವಂತ ಹಿಂಬಾಲಕರಾದ ವಿ.ಎನ್.ನಾಯ್ಕ್, ವಸಂತನಾಯ್ಕ್ ವಗೈರೆ ದೀವರ ಹುಡುಗರನ್ನು ಭೀಮಣ್ಣ ಹಣಿಯುತ್ತಲೇ ಬಂದಿದ್ದ. 2013ರ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಎದುರು ಮೂರು ಸಾವಿರ ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದಿವಂಗತ ದೀಪಕ್ ಹೊನ್ನಾವರ್ ಮ್ಯಾಗಿಯ ಪುಂಡ ಪಟ್ಟ ಶಿಷ್ಯನಾಗಿದ್ದ. ಆತ ಗೆಲುವಿನ ಹತ್ತಿರ ಬಂದು ಮುಗ್ಗರಿಸಲು ಭೀಮಣ್ಣ-ರವೀಂದ್ರನಾಥ್ ನಾಯ್ಕ ಜೋಡಿಯ ದ್ರೋಹವೇ ಅಂದು ಕಾರಣವಾಗಿತ್ತು. ಈ ಉರಿ ಮ್ಯಾಗಿಗಿನ್ನೂ ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ರವಿ ಮ್ಯಾಗಿ ಶಿಷ್ಯನಾಗಿದ್ದವ. ಆಕೆಯಿಂದಲೇ ಶಿರಸಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದವ. ಆನಂತರ ಗುರುಮಾತೆಗೇ ತಿರುಗಿಬಿದ್ದಿದ್ದ ರವಿ ಜೆಡಿಎಸ್ ಪಾಲಾಗಿದ್ದ. ಮೊನ್ನೆಯ ಯಲ್ಲಾಪುರ ಉಪಚುನಾವಣೆ ಗಡಿಬಿಡಿಯಲ್ಲಿ ಈ ರವಿ, ದೇಶಪಾಂಡೆ ಜುಬ್ಬ ಹಿಡಿದುಕೊಂಡು ಕಾಂಗ್ರೆಸ್‍ಗೆ ನುಸುಳಿದ್ದಾನೆ.

ಇಂಥ ಭೀಮ-ರವಿಯಂಥವರ ದೂರವಿಟ್ಟರೆ ಮ್ಯಾಗಿ-ದೇಶ್‍ನಂಟು ಕುದುರುತ್ತದೆ. 2018ರ ಶಿರಸಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಮೊನ್ನೆಯ ಯಲ್ಲಾಪುರ ಉಪಚುನಾವಣೆಯಲ್ಲಿ ಹೇತ್ಲಾಂಡಿ ಭೀಮಣ್ಣನ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದೇ ತಪ್ಪು ಆಯ್ಕೆ ಎನ್ನುವ ಮ್ಯಾಗಿ ತನ್ನ ಮಗ ಶಿರಸಿಯಲ್ಲಿ “ರೈಟ್ ಕ್ಯಾಂಡಿಡೇಟ್” ಎನ್ನುವುದೇ ವಿಚಿತ್ರ. ಬಿಜೆಪಿ ಬೆಂಬಲಿಗರಾದ ಹವ್ಯಕ ಬ್ರಾಹ್ಮಣ ಬಾಹುಳ್ಯದ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ಆಳ್ವ ಗೆಲ್ಲುವುದು ಅಷ್ಟು ಸುಲಭವೇನಲ್ಲ. ಅಲ್ಪಸಂಖ್ಯಾತರ ದ್ವೇಷದ ಮೇಲೆಯೇ ಬಿಜೆಪಿಯನ್ನು ಕಟ್ಟಿರುವ ಕಾಗೇರಿ, ಅನಂತ್ಮಾಣಿಗಳ ತವರು ಶಿರಸಿಯಲ್ಲಿ ಕಾಂಗ್ರೆಸ್ ಹವ್ಯಕ ಮಾಣಿ/ಕೂಸು ನಿಲ್ಲಿಸಿದರಷ್ಟೇ ಅನುಕೂಲ. ಸದ್ಯ ಜೆಡಿಎಸ್‍ನಲ್ಲಿರುವ ದಿವಂಗತ ಮಾಜಿ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ. ಕಾಂಗ್ರೆಸ್ ಸೇರುವ ಆಸೆ ಶಶಿಗಿದ್ದರೂ ಹೆಗಡೆಜೀಯ ದೊಡ್ಮನೆ ಫ್ಯಾಮಿಲಿ ಬಗ್ಗೆ ದೇಶಪಾಂಡೆಗಿರುವ ಪುರಾತನ ದ್ವೇಷಕ್ಕೆ ಹೆದರಿ ಆತ ಸುಮ್ಮನಿದ್ದಾರೆ.

ಗೆಲ್ಲಲು ಇರುವ ಇಂಥ ಸರಳ ಲೆಕ್ಕಾಚಾರಗಳು ಪುತ್ರ ವ್ಯಾಮೋಹದಲ್ಲಿ ಮಂಕಾಗಿರುವ ಮ್ಯಾಗಜ್ಜೀ-ದೇಶಜ್ಜನಿಗೆ ಅರ್ಥವಾಗೋದಿಲ್ಲ. ಔಟ್‍ಡೇಟೆಡ್ ದಿಗ್ಗಜರು ಹಳೆಯದನ್ನು ಮರೆತು ಒಂದಾಗಿ ಪಾರ್ಟಿ ಕಟ್ಟಬಹುದೆಂಬ ನಂಬಿಕೆ ನಿಷ್ಠಾವಂತ ಕಾಂಗ್ರೆಸಿಗರಿಗಂತೂ ಇಲ್ಲಾ. ಆದರೆ ಮಕ್ಕಳ ಭವಿಷ್ಯ ಬೆಳಗಲು ಅನಿವಾರ್ಯವಾಗಿ ಮ್ಯಾಗಿ-ದೇಶ್ ಹೊಸ ಹೊಂದಾಣಿಕೆಯ ಸ್ಕೆಚ್ ಹಾಕಿದ್ದಾರೆಂಬುದು ಕಾಂಗ್ರೆಸ್‍ನಲ್ಲಷ್ಟೇ ಅಲ್ಲ ವಿರೋಧಿ ಕೇಸರಿ ಪಾಳೆಯದಲ್ಲೂ ಸಣ್ಣದೊಂದು ತಲ್ಲಣ ಎಬ್ಬಿಸಿರುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...