Homeನ್ಯಾಯ ಪಥಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

- Advertisement -
- Advertisement -

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ ‘ನಾಯಕನ ಪಾತ್ರದಲ್ಲಿ ಕಣ್ಣಪ್ಪನಾಗಿ…’ ನಟಿಸುತ್ತಿದ್ದಾರೆ ಎಂದು ಇನ್ನೊಂದು ಹೆಸರನ್ನು ಸೂಚಿಸಿದ್ದರು. ಅದನ್ನು ಕಂಡೊಡನೇ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ‘ಏಕೆ? ನಾನು ಪಾರ್ಟ್ ಮಾಡುತ್ತಿರುವುದು ಸರಿಯಾಗಿಲ್ಲವೆ?! ಅವರಿಗೆ ತೃಪ್ತಿಯಾಗಲಿಲ್ಲವೇ? ಈ ವಿಷಯ ನನಗೆ ಪತ್ರಿಕೆಯ ಮೂಲಕವೇ ತಿಳಿಯಬೇಕೆ? ನನಗೆ ಇದರ ಸುಳಿವೇ ಕೊಡಲಿಲ್ಲವಲ್ಲ…!!!’ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟು ದಿನಗಳಿಂದ ಇದ್ದ ’ಉತ್ಸಾಹ-ಹುಮ್ಮಸ್ಸುಗಳೆಲ್ಲಾ ಕುಸಿದುಬಿದ್ದಿತು. ಒಂದುಕ್ಷಣ ಮನಸ್ಸು ಮಂಕಾಯಿತಾದರೂ ಇದಕ್ಕೆ ಕಾರಣವನ್ನು ಕೇಳಿಯೇ ಬಿಡೋಣ ಎಂದು ಆ ದಿನಪತ್ರಿಕೆಯನ್ನು ಕೈಲಿ ಹಿಡಿದು ನೇರ ನಿರ್ದೇಶಕ ಶ್ರೀಯುತ ಸಿಂಹರವರ ಬಳಿ ಬಂದೆ. ನನ್ನ ಆ ಬಿರುಸಿನ ಬರುವಿಕೆಯನ್ನು ಕಂಡು ‘ಏನಪ್ಪ! ಮುತ್ತುರಾಜು?’ ಎಂದರು.

ನಾನು ‘ಏನಿಲ್ಲ ಸ್ವಾಮಿ! ತಮ್ಮನ್ನ ಒಂದ್ವಿಷಯ ಕೇಳ್ಬೇಕೂಂತ ಬಂದೆ… ಯಾಕ್ ಸ್ವಾಮಿ ನಾನು ತಮ್ಮ ಮನಸ್ಸಿಗೆ ತೃಪ್ತಿ ಕೊಡೋಷ್ಟರ ಮಟ್ಟಿಗೆ ಅಭಿನಯಿಸ್ತಿಲ್ವಾ…?” ಎಂದು ಕೇಳಿದೆ.

ಆಗ ಶ್ರೀಯುತ ಸಿಂಹರವರು ‘ಅದ್ಯಾಕಪ್ಪನಿಂಗೀ ಅನುಮಾನ? ಯಾರ್ ಹೇಳದ್ರು ಹಾಗಂತ?’ ಎಂದು ಕೇಳಿದರು. ತಕ್ಷಣ ನಾನು ಪತ್ರಿಕೆಯನ್ನು ಮುಂದೆ ನೀಡಿದೆ. ‘ಏನಿದೆ ಅದ್ರಲ್ಲಿ?’ ಎಂದು ಹುಸಿನಗೆ ನಕ್ಕರು.

ನಾನು ಆ ಸಾಲನ್ನು ಮಾತ್ರ ಓದಿದೆ. ’ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್, ನೀಲಾಳ ಪಾತ್ರದಲ್ಲಿ ಫಂಡರಿಬಾಯಿ… ಹಾಗೂ ಇತರ ತಾರಾಗಣದಲ್ಲಿ… ಸಂಪೂರ್ಣ ಪಟ್ಟಿಯನ್ನು ಓದಿ ’ಯಾರ್ ಸ್ವಾಮಿ ಈ ರಾಜ್‌ಕುಮಾರ್? ಈ ಪಾತ್ರಕ್ಕೆ ಅವರ್‍ನೇ ಹಾಕ್ ಬೇಕೂಂತಿದೀರಾ? ಹಾಗಾದ್ರೆ ನಾನಿಲ್ವಾ?’ ಎಂದೆ.

ಆಗ ಸಿಂಹರವರು ನಕ್ಕು ‘ಆ ರಾಜ್‌ಕುಮಾರ ಯಾರೂ ಅಲ್ಲಪ್ಪ… ನೀನೇ…’ ಎಂದರು.

ನನಗೆ ತಕ್ಷಣ ಗುಂಡಿಗೆ ಧಡಕ್ ಎಂದಿತು.

‘ನೋಡಪ್ಪ! ಮುತ್ತುರಾಜ್ ಅನ್ನೋದನ್ನ ’ರಾಜ್‌ಕುಮಾರ್ ಅಂತ ಬದಲಾಯ್ಸಿದೆ ಅಷ್ಟೆ’ ಎಂದು ಮಾತು ಮುಂದುವರಿಸಿದರು.

ಆಗ ನನಗೊಂದು ರೀತಿ ನಗು ಬಂದು ಜನಜನಿತವಾದ ಒಂದೆರಡು ಉಪಮಾನದ ವಾಕ್ಯಗಳೂ ನೆನಪಿಗೆ ಬಂದವು.

‘ರೆಕ್ಕೆಯಿಲ್ಲ-ಪುಕ್ಕ ಇಲ್ಲ ಗರುಡಯ್ಯಂಗರ್ರು, ವಿದ್ಯೆ ಇಲ್ಲ-ಬುದ್ಧಿ ಇಲ್ಲ ಶಾರದಮ್ಮನ್ನೋರು, ದುಡ್ಡಿಲ್ಲ-ಕಾಸಿಲ್ಲ ಸಂಪ್ಪತ್ತಯ್ಯಂಗರ್ರು, ರಾಜ್ಯ ಇಲ್ಲ-ಪ್ರಜೆ ಇಲ್ಲ ರಾಜಣ್ಣೋರು ಅನ್ನೋಹಾಗೆ ನನಗ್ಯಾಕ್ ಸ್ವಾಮೀ ಈ ಹೆಸರನ್ನಿಟ್ರಿ? ನಮ್ಮ ಅಪ್ಪಾಜಿಯವರು ಪ್ರೀತಿಯಿಂದ ಆ ರಾಮನ ಸೇವಕನ ಮೇಲಿನ ಭಕ್ತಿಯಿಂದ-ಪ್ರೀತಿಯಿಂದ ಅವನ ವರಪ್ರಸಾದವಾಗಿ ಹುಟ್ಟಿದೇಂತನೋ ಏನೋ ಆ ಮುತ್ತೆತ್ತಿರಾಯನ ಹೆಸರಲ್ಲಿ ನನಗೆ ಮುದ್ದಾಗಿ ’ಮುತ್ತುರಾಜು’ ಅಂತ ಹೆಸರಿಟ್ಟಿದ್ದಾರೆ. ದಯವಿಟ್ಟು ಆ ಹೆಸರ್‍ನ ಬದಲಾಯ್ಸೋದು ಬೇಡ ಸ್ವಾಮಿ, ಅದೂ ಅಲ್ದೇ ನಾಳೆ ಚಿತ್ರ ಬಿಡುಗಡೆ ಆಗಿ ನನ್ನ ಪಾತ್ರ ಜನಕ್ಕೆ ಒಪ್ಪಿಗೆ ಆಗ್ದೆ ‘ಈ ಸೌಭಾಗ್ಯಕ್ಕೆ ಇವ್ನು ’ರಾಜಕುಮಾರ’ ಅಂತ ಬೇರೆ ಹೆಸರನ್ನಿಟ್ಕೊಂಡ್ನೋ…? ಅಂತ ಅಂದ್ಕೋಬಹುದು. ದಯವಿಟ್ಟು ಬೇಡ ಸ್ವಾಮಿ’ ಎಂದೆ.

ಅದಕ್ಕೆ ಸಿಂಹರವರು ‘ನಿಮ್ಮ ಅಪ್ಪನ ಆಶೀರ್ವಾದದಿಂದ್ಲೇ ಈ ಹೆಸರು ಬಂತೂಂದ್ಕೋಪ್ಪ, ನಾನೊಬ್ನೇ ಅಲ್ಲ ಈ ಹೆಸರನ್ನಿಟ್ಟೋನು.. ಈ ಹೆಸರಿನ ಬದಲಾವಣೇಲಿ ವೀರಣ್ಣೋರು ಒಬ್ರು. (ಗುಬ್ಬಿ ವೀರಣ್ಣ) ನಿಮ್ಮಪ್ಪಾಜಿಯವ್ರೇ ಒಂದ್ಸಲ ವೀರಣ್ಣೊರ್‍ನ ಕೇಳಿದ್ರಂತೆ. ‘ನನ್ ಮಗ ನಾಟಕದಲ್ ಪಾರ್ಟ್ ಮಾಡ್ತಿದ್ರೆ ಒಳ್ಳೆ ರಾಜಕುಮಾರನ್ಹಾಗ್ ಕಾಣಸ್ತಾನೆ… ಅವರಿಗೆ ಸಿನಿಮಾದಲ್ ಒಂದ್ ಛಾನ್ಸ್ ಕೊಡಿ ಸ್ವಾಮಿ’ ಅಂತ ಕೇಳಿದ್ರಂತೆ ಅದನ್ನ ವೀರಣ್ಣೋರು ಈ ಸಂದರ್ಭದಲ್ಲಿ ಜ್ಞಾಪಿಸ್ಕೊಂಡು ಅವರ ಅಪ್ಪನ ಆತ್ಮಕ್ಕೆ ಶಾಂತಿ ಸಿಗ್ಲಿ… ಈ ಸಂದರ್ಭದಲ್ಲಿ ಅವರಿಗೆ ’ರಾಜಕುಮಾರ್ ಅಂತನೇ ಹೆಸರಿಟ್ ಬಿಡಿ’ ಅಂದಿದ್ರಂತೆ. ನೋಡಪ್ಪ! ದೊಡ್ಡೋರು ಆಶೀರ್ವಾದ ಮಾಡಿಟ್ಟಿರೋ ಹೆಸರು… ಏನು ಆಗಲ್ಲ… ಹೆದರ್‍ಕೋಬೇಡ ಧೈರ್ಯವಾಗಿರು. ಹಾಗೇನಾದ್ರೂ ಆಗಕ್ ನಾವ್ ಬಿಟ್ ಬಿಡ್ತೀವಾ?’ ಎಂದು ಹೇಳಿದರು ಶ್ರೀಯುತ ಸಿಂಹರವರು.

ಇದರ ಮೇಲೆ ನನಗೆ ಮತ್ತೆ ಮಾತನಾಡಲಾಗಲಿಲ್ಲ. ಅಂತೂ ಆ ಮುತ್ತೆತ್ತಿರಾಯನ ಕೃಪೆಯಿಂದ ಮುಕ್ಕೋಟಿ ಕನ್ನಡ ಕಲಾ ಬಂಧುಗಳ ಹೃದಯದವರ ಮನೆಯಲ್ಲಿ ನಾನು ಉಳಿಯಲು ಸ್ಥಳಾವಕಾಶ ದೊರೆತಿರುವುದು ನನ್ನ ಭಾಗ್ಯವೇ ತಾನೇ?

(ಡಾ. ರಾಜ್ ಕುಮಾರ್ ಆತ್ಮಚರಿತ್ರೆ: ಕಥಾನಾಯಕನ ಕಥೆ ಕೃತಿಯಿಂದ ಆಯ್ದ ಭಾಗ)
ಎ. ಎಸ್. ಪ್ರಭಾಕರ
ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ


ನಿರೂಪಣೆ: ಚಿ. ದತ್ತರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...