Homeನ್ಯಾಯ ಪಥಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

- Advertisement -
- Advertisement -

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ ‘ನಾಯಕನ ಪಾತ್ರದಲ್ಲಿ ಕಣ್ಣಪ್ಪನಾಗಿ…’ ನಟಿಸುತ್ತಿದ್ದಾರೆ ಎಂದು ಇನ್ನೊಂದು ಹೆಸರನ್ನು ಸೂಚಿಸಿದ್ದರು. ಅದನ್ನು ಕಂಡೊಡನೇ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ‘ಏಕೆ? ನಾನು ಪಾರ್ಟ್ ಮಾಡುತ್ತಿರುವುದು ಸರಿಯಾಗಿಲ್ಲವೆ?! ಅವರಿಗೆ ತೃಪ್ತಿಯಾಗಲಿಲ್ಲವೇ? ಈ ವಿಷಯ ನನಗೆ ಪತ್ರಿಕೆಯ ಮೂಲಕವೇ ತಿಳಿಯಬೇಕೆ? ನನಗೆ ಇದರ ಸುಳಿವೇ ಕೊಡಲಿಲ್ಲವಲ್ಲ…!!!’ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟು ದಿನಗಳಿಂದ ಇದ್ದ ’ಉತ್ಸಾಹ-ಹುಮ್ಮಸ್ಸುಗಳೆಲ್ಲಾ ಕುಸಿದುಬಿದ್ದಿತು. ಒಂದುಕ್ಷಣ ಮನಸ್ಸು ಮಂಕಾಯಿತಾದರೂ ಇದಕ್ಕೆ ಕಾರಣವನ್ನು ಕೇಳಿಯೇ ಬಿಡೋಣ ಎಂದು ಆ ದಿನಪತ್ರಿಕೆಯನ್ನು ಕೈಲಿ ಹಿಡಿದು ನೇರ ನಿರ್ದೇಶಕ ಶ್ರೀಯುತ ಸಿಂಹರವರ ಬಳಿ ಬಂದೆ. ನನ್ನ ಆ ಬಿರುಸಿನ ಬರುವಿಕೆಯನ್ನು ಕಂಡು ‘ಏನಪ್ಪ! ಮುತ್ತುರಾಜು?’ ಎಂದರು.

ನಾನು ‘ಏನಿಲ್ಲ ಸ್ವಾಮಿ! ತಮ್ಮನ್ನ ಒಂದ್ವಿಷಯ ಕೇಳ್ಬೇಕೂಂತ ಬಂದೆ… ಯಾಕ್ ಸ್ವಾಮಿ ನಾನು ತಮ್ಮ ಮನಸ್ಸಿಗೆ ತೃಪ್ತಿ ಕೊಡೋಷ್ಟರ ಮಟ್ಟಿಗೆ ಅಭಿನಯಿಸ್ತಿಲ್ವಾ…?” ಎಂದು ಕೇಳಿದೆ.

ಆಗ ಶ್ರೀಯುತ ಸಿಂಹರವರು ‘ಅದ್ಯಾಕಪ್ಪನಿಂಗೀ ಅನುಮಾನ? ಯಾರ್ ಹೇಳದ್ರು ಹಾಗಂತ?’ ಎಂದು ಕೇಳಿದರು. ತಕ್ಷಣ ನಾನು ಪತ್ರಿಕೆಯನ್ನು ಮುಂದೆ ನೀಡಿದೆ. ‘ಏನಿದೆ ಅದ್ರಲ್ಲಿ?’ ಎಂದು ಹುಸಿನಗೆ ನಕ್ಕರು.

ನಾನು ಆ ಸಾಲನ್ನು ಮಾತ್ರ ಓದಿದೆ. ’ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್, ನೀಲಾಳ ಪಾತ್ರದಲ್ಲಿ ಫಂಡರಿಬಾಯಿ… ಹಾಗೂ ಇತರ ತಾರಾಗಣದಲ್ಲಿ… ಸಂಪೂರ್ಣ ಪಟ್ಟಿಯನ್ನು ಓದಿ ’ಯಾರ್ ಸ್ವಾಮಿ ಈ ರಾಜ್‌ಕುಮಾರ್? ಈ ಪಾತ್ರಕ್ಕೆ ಅವರ್‍ನೇ ಹಾಕ್ ಬೇಕೂಂತಿದೀರಾ? ಹಾಗಾದ್ರೆ ನಾನಿಲ್ವಾ?’ ಎಂದೆ.

ಆಗ ಸಿಂಹರವರು ನಕ್ಕು ‘ಆ ರಾಜ್‌ಕುಮಾರ ಯಾರೂ ಅಲ್ಲಪ್ಪ… ನೀನೇ…’ ಎಂದರು.

ನನಗೆ ತಕ್ಷಣ ಗುಂಡಿಗೆ ಧಡಕ್ ಎಂದಿತು.

‘ನೋಡಪ್ಪ! ಮುತ್ತುರಾಜ್ ಅನ್ನೋದನ್ನ ’ರಾಜ್‌ಕುಮಾರ್ ಅಂತ ಬದಲಾಯ್ಸಿದೆ ಅಷ್ಟೆ’ ಎಂದು ಮಾತು ಮುಂದುವರಿಸಿದರು.

ಆಗ ನನಗೊಂದು ರೀತಿ ನಗು ಬಂದು ಜನಜನಿತವಾದ ಒಂದೆರಡು ಉಪಮಾನದ ವಾಕ್ಯಗಳೂ ನೆನಪಿಗೆ ಬಂದವು.

‘ರೆಕ್ಕೆಯಿಲ್ಲ-ಪುಕ್ಕ ಇಲ್ಲ ಗರುಡಯ್ಯಂಗರ್ರು, ವಿದ್ಯೆ ಇಲ್ಲ-ಬುದ್ಧಿ ಇಲ್ಲ ಶಾರದಮ್ಮನ್ನೋರು, ದುಡ್ಡಿಲ್ಲ-ಕಾಸಿಲ್ಲ ಸಂಪ್ಪತ್ತಯ್ಯಂಗರ್ರು, ರಾಜ್ಯ ಇಲ್ಲ-ಪ್ರಜೆ ಇಲ್ಲ ರಾಜಣ್ಣೋರು ಅನ್ನೋಹಾಗೆ ನನಗ್ಯಾಕ್ ಸ್ವಾಮೀ ಈ ಹೆಸರನ್ನಿಟ್ರಿ? ನಮ್ಮ ಅಪ್ಪಾಜಿಯವರು ಪ್ರೀತಿಯಿಂದ ಆ ರಾಮನ ಸೇವಕನ ಮೇಲಿನ ಭಕ್ತಿಯಿಂದ-ಪ್ರೀತಿಯಿಂದ ಅವನ ವರಪ್ರಸಾದವಾಗಿ ಹುಟ್ಟಿದೇಂತನೋ ಏನೋ ಆ ಮುತ್ತೆತ್ತಿರಾಯನ ಹೆಸರಲ್ಲಿ ನನಗೆ ಮುದ್ದಾಗಿ ’ಮುತ್ತುರಾಜು’ ಅಂತ ಹೆಸರಿಟ್ಟಿದ್ದಾರೆ. ದಯವಿಟ್ಟು ಆ ಹೆಸರ್‍ನ ಬದಲಾಯ್ಸೋದು ಬೇಡ ಸ್ವಾಮಿ, ಅದೂ ಅಲ್ದೇ ನಾಳೆ ಚಿತ್ರ ಬಿಡುಗಡೆ ಆಗಿ ನನ್ನ ಪಾತ್ರ ಜನಕ್ಕೆ ಒಪ್ಪಿಗೆ ಆಗ್ದೆ ‘ಈ ಸೌಭಾಗ್ಯಕ್ಕೆ ಇವ್ನು ’ರಾಜಕುಮಾರ’ ಅಂತ ಬೇರೆ ಹೆಸರನ್ನಿಟ್ಕೊಂಡ್ನೋ…? ಅಂತ ಅಂದ್ಕೋಬಹುದು. ದಯವಿಟ್ಟು ಬೇಡ ಸ್ವಾಮಿ’ ಎಂದೆ.

ಅದಕ್ಕೆ ಸಿಂಹರವರು ‘ನಿಮ್ಮ ಅಪ್ಪನ ಆಶೀರ್ವಾದದಿಂದ್ಲೇ ಈ ಹೆಸರು ಬಂತೂಂದ್ಕೋಪ್ಪ, ನಾನೊಬ್ನೇ ಅಲ್ಲ ಈ ಹೆಸರನ್ನಿಟ್ಟೋನು.. ಈ ಹೆಸರಿನ ಬದಲಾವಣೇಲಿ ವೀರಣ್ಣೋರು ಒಬ್ರು. (ಗುಬ್ಬಿ ವೀರಣ್ಣ) ನಿಮ್ಮಪ್ಪಾಜಿಯವ್ರೇ ಒಂದ್ಸಲ ವೀರಣ್ಣೊರ್‍ನ ಕೇಳಿದ್ರಂತೆ. ‘ನನ್ ಮಗ ನಾಟಕದಲ್ ಪಾರ್ಟ್ ಮಾಡ್ತಿದ್ರೆ ಒಳ್ಳೆ ರಾಜಕುಮಾರನ್ಹಾಗ್ ಕಾಣಸ್ತಾನೆ… ಅವರಿಗೆ ಸಿನಿಮಾದಲ್ ಒಂದ್ ಛಾನ್ಸ್ ಕೊಡಿ ಸ್ವಾಮಿ’ ಅಂತ ಕೇಳಿದ್ರಂತೆ ಅದನ್ನ ವೀರಣ್ಣೋರು ಈ ಸಂದರ್ಭದಲ್ಲಿ ಜ್ಞಾಪಿಸ್ಕೊಂಡು ಅವರ ಅಪ್ಪನ ಆತ್ಮಕ್ಕೆ ಶಾಂತಿ ಸಿಗ್ಲಿ… ಈ ಸಂದರ್ಭದಲ್ಲಿ ಅವರಿಗೆ ’ರಾಜಕುಮಾರ್ ಅಂತನೇ ಹೆಸರಿಟ್ ಬಿಡಿ’ ಅಂದಿದ್ರಂತೆ. ನೋಡಪ್ಪ! ದೊಡ್ಡೋರು ಆಶೀರ್ವಾದ ಮಾಡಿಟ್ಟಿರೋ ಹೆಸರು… ಏನು ಆಗಲ್ಲ… ಹೆದರ್‍ಕೋಬೇಡ ಧೈರ್ಯವಾಗಿರು. ಹಾಗೇನಾದ್ರೂ ಆಗಕ್ ನಾವ್ ಬಿಟ್ ಬಿಡ್ತೀವಾ?’ ಎಂದು ಹೇಳಿದರು ಶ್ರೀಯುತ ಸಿಂಹರವರು.

ಇದರ ಮೇಲೆ ನನಗೆ ಮತ್ತೆ ಮಾತನಾಡಲಾಗಲಿಲ್ಲ. ಅಂತೂ ಆ ಮುತ್ತೆತ್ತಿರಾಯನ ಕೃಪೆಯಿಂದ ಮುಕ್ಕೋಟಿ ಕನ್ನಡ ಕಲಾ ಬಂಧುಗಳ ಹೃದಯದವರ ಮನೆಯಲ್ಲಿ ನಾನು ಉಳಿಯಲು ಸ್ಥಳಾವಕಾಶ ದೊರೆತಿರುವುದು ನನ್ನ ಭಾಗ್ಯವೇ ತಾನೇ?

(ಡಾ. ರಾಜ್ ಕುಮಾರ್ ಆತ್ಮಚರಿತ್ರೆ: ಕಥಾನಾಯಕನ ಕಥೆ ಕೃತಿಯಿಂದ ಆಯ್ದ ಭಾಗ)
ಎ. ಎಸ್. ಪ್ರಭಾಕರ
ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ


ನಿರೂಪಣೆ: ಚಿ. ದತ್ತರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...