Homeಮುಖಪುಟದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ಭವಿಷ್ಯದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆ ಎಂಬುದರ ಝಲಕ್ ದೆಹಲಿಯ ಕಾಲೇಜಿನಲ್ಲಿ ಕಂಡಿದೆ.

- Advertisement -
- Advertisement -

ಮೊದಲವರು ಜೆಎನ್‌ಯುಗೆ ಬಂದರು, ನೀವು ದನಿಯೆತ್ತಲಿಲ್ಲವೇಕೆಂದರೆ, ‘ಅವರು ಎಡಪಂಥೀಯರು, ಅರ್ಬನ್ ನಕ್ಸಲ್‌ಗಳು, ದೇಶದ್ರೋಹಿಗಳು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಜಾಮಿಯಾಕ್ಕೆ ಬಂದರು, ನೀವು ದನಿಯೆತ್ತಲಿಲ್ಲ. ಏಕೆಂದರೆ ‘ಅವರು ಮುಸ್ಲಿಮರು, ಭಯೋತ್ಪಾದಕರು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಶಾಹೀನ್ ಬಾಗ್‌ನತ್ತ ಗುಂಡೆಸೆದರು, ನೀವು ಆಗಲೂ ಮಾತನಾಡಲಿಲ್ಲ. ‘ಅವರು ಹಣಕ್ಕಾಗಿ ಪ್ರತಿಭಟಿಸುತ್ತಿದ್ದ, ದಾರಿತಪ್ಪಿದ ಮಹಿಳೆಯರಾಗಿದ್ದರು’.

ನಂತರ ಅವರು ಈ ದೇಶದ ರಾಜಕೀಯ ರಹಿತ ಹೆಣ್ಣುಮಕ್ಕಳಾದ ಗಾರ್ಗಿ ಹುಡುಗಿಯರತ್ತ ಬಂದರು. ಆಗ ನಿಮ್ಮ ಪರವಾಗಿ ದನಿಯೆತ್ತಲು ಏನೂ ಇರಲಿಲ್ಲ.

ಕಳೆದ ವಾರದಲ್ಲಿ ಗಾರ್ಗಿ ಕಾಲೇಜಿನಲ್ಲಿ ನಡೆದದ್ದನ್ನು ಕೇಳಿ ಬಹಳಷ್ಟು ಜನರು ಶಾಕ್‌ಗೊಳಗಾಗಿದ್ದಾರೆ. ಗುಂಪೊಂದು ಹೆಣ್ಣು ಮಕ್ಕಳ ಮೈಮುಟ್ಟಿ, ಲೈಂಗಿಕ ಕಿರುಕುಳ ಕೊಟ್ಟು, ಅವರ ಮುಂದೆಯೇ ಮುಷ್ಠಿಮೈಥುನ ನಡೆಸಿದ್ದಾರೆ. ಇದೆಲ್ಲವೂ ನಡೆದದ್ದು ದೇಶದ ರಾಜಧಾನಿಯಲ್ಲಿ, ದೆಹಲಿ ಪೊಲೀಸರು, ಶಿಕ್ಷಕರು ಮತ್ತು ಕಾಲೇಜು ಭದ್ರತಾ ಸಿಬ್ಬಂದಿಯ ಎದುರು ಎಂಬುದು ಇನ್ನೂ ಶಾಕಿಂಗ್ ಆದದ್ದಾಗಿದೆ. ಸಿಎಎ ಪರವಾದ ಪ್ರತಿಭಟನೆಯೊಂದನ್ನು ಮುಗಿಸಿಕೊಂಡು ಬಂದು ಜೈ ಶ್ರೀರಾಂ ಎಂಬ ಘೋಷಣೆ ಕೂಗುತ್ತಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಈ ಲೈಂಗಿಕ ಹಲ್ಲೆ ನಡೆದಿದೆ ಎಂಬುದನ್ನು ಗಮನಿಸಬೇಕಿದೆ. ಅವರಲ್ಲಿ ಬಹುತೇಕ ಜನರಿಗೆ ದೆಹಲಿ ಹೈಕೋರ್ಟ್‌ ಜಾಮೀನು ಸಹ ನೀಡಿದೆ.

ಇದು ಏನನ್ನು ತೋರಿಸುತ್ತದೆ? ಗೋವಿನ ಹೆಸರಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಮತ್ತು ಮುಸ್ಲಿಮರು ಹೆಸರಿನಲ್ಲಿ ಕೊಲ್ಲಲು ತಯಾರು ಮಾಡಲಾಗಿದ್ದ ಗುಂಪು ನಿಮ್ಮ ನೆರೆಹೊರೆಗೆ, ಮನೆಗೆ, ಕಾಲೇಜು ಕ್ಯಾಂಪಸ್ಸುಗಳ ಬಳಿಗೆ ಬಂದಿದೆ ಎಂಬುದನ್ನು ತೋರುತ್ತಿದೆ. ಇಂತಹ ಕೊಳಕು ಕೃತ್ಯಗಳನ್ನೆಸಗಲು ಸದರಿ ಗುಂಪನ್ನು ರೂಪಿಸಿದ್ದು, ಬಲ ತುಂಬಿದ್ದು ಮತ್ತು ಸಾಯುಧರನ್ನಾಗಿಸಿದ್ದು ಪುರುಷಹಂಕಾರ ತುಂಬಿದ ಫ್ಯಾಸಿಸ್ಟ್ ಬಲಪಂಥೀಯ ತಾತ್ವಿಕತೆಯೇ ಆಗಿದೆ.

ಅವರ ಆದರ್ಶ ನಾರಿ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳದ ಮಹಿಳೆಯರನ್ನು ಸ್ತ್ರೀ ದ್ವೇಷ ಮತ್ತು ಅಸಹನೆಯ ಮತ್ತನ್ನು ಏರಿಸಿಕೊಂಡಿರುವ ಗುಂಪು ಇಷ್ಟಪಡುವುದಿಲ್ಲ. ಆ ಗುಂಪು ಶಹೀನ್‌ಬಾಗ್‌ನ ಮಹಿಳೆಯರನ್ನು ರೇಪ್ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತದೆ. ಅದೇ ರೀತಿ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸುವ ಜೆಎನ್‌ಯು, ಜಾಮಿಯಾ ಅಥವಾ ಯಾವುದೇ ವಿದ್ಯಾರ್ಥಿಗಳನ್ನು ಕೊಲ್ಲುವುದಾಗಿ ಅಬ್ಬರಿಸುತ್ತದೆ. ಆಳುತ್ತಿರುವವರ ಶಾಮೀಲುದಾರಿಕೆ ಮತ್ತು ಸರ್ಕಾರೀ ಯಂತ್ರಾಂಗದ ಬೆಂಬಲದೊಂದಿಗೆ ದೇಶದ ಯಾವುದೇ ಭಾಗದಲ್ಲಿ ಅಪರಾಧೀ ಕೃತ್ಯಗಳನ್ನೆಸಗಲು ತಮಗೆ ಲೈಸೆನ್ಸ್ ಸಿಕ್ಕಿದೆ ಎಂದು ಅದು ಭಾವಿಸಿದೆ.

ಮಧ್ಯಮವರ್ಗ ಅಥವಾ ಮೇಲ್ವರ್ಗದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ವಾದಿಸುವ ಸಂಸ್ಕಾರಯುತ ಜನವರ್ಗಗಳು ಫ್ಯಾಸಿಸ್ಟ್ ಗುಂಪಿನ ಇಂತಹ ಕೃತ್ಯಗಳ ಕುರಿತು ಉಸಿರೆತ್ತುವುದಿಲ್ಲ.

ಮುಂದಿನ ದಿನಗಳ ಸೂಚನೆ

ಕ್ಯಾಂಪಸ್ಸುಗಳ ಮೇಲಿನ ದಾಳಿಯು ಬಿಜೆಪಿ ಸರ್ಕಾರದ ಪ್ರಮುಖ ಗುಣಲಕ್ಷಣಗಳಲ್ಲೊಂದಾಗಿದೆ. ಈ ಸರ್ಕಾರವು ಸುಶಿಕ್ಷಿತರನ್ನು ಮತ್ತು ಶಿಕ್ಷಣ ಪಡೆಯಬಯಸುವವರನ್ನು ದ್ವೇಷಿಸುತ್ತದೆ. ದೇಶದುದ್ದಗಲದ ಹಲವಾರು ಕ್ಯಾಂಪ್ಸಸುಗಳಲ್ಲಿ ಇದು ಪುನರಾವರ್ತನೆಯಗಿದೆ. ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳನ್ನು ವಿಲನ್‌ಗಳನ್ನಾಗಿಸುವ ಕೆಲಸ ಅವ್ಯಾಹತವಾಗಿ ನಡೆದದ್ದಲ್ಲದೇ ದಾಳಿ ಮಾಡಲಾಗಿದೆ.

ಮಹಿಳೆಯರ ಕುರಿತಾದ ಇವರ ದ್ವೇಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆಯೋ ಅದನ್ನು ಗಾರ್ಗಿ ಕಾಲೇಜಿನ ಹುಡುಗಿಯರು ಈಗ ಅನುಭವಿಸಿದ್ದಾರೆ. ಗಾರ್ಗಿ ಕಾಲೇಜಿನ ಪ್ರಿನ್ಸಿಪಾಲೆರ ಹುಡುಗಿಯರು ಲಕ್ಷ್ಮಣರೇಖೆಯನ್ನು ದಾಟಿದ್ದರಿಂದ ಇದಾಗಿದೆಯೆಂದು ಹೇಳಿಬಿಟ್ಟಿದ್ದನ್ನೂ ಗಮನಿಸಬೇಕು. ಎಲ್ಲೆಡೆ ಮಹಿಳೆಯರು ಸಮಾನ ಅವಕಾಶಗಳು ಮತ್ತು ಸಮಾನವಾಗಿ ತಮ್ಮನ್ನು ನಡೆಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ಮುಂದಿಡುತ್ತಿದ್ದಾರಾದರೂ, ಇಂತಹ ಘಟನೆಗಳು ‘ರಕ್ಷಣೆ’ಯ ಹೆಸರಿನಲ್ಲಿ ಮಹಿಳೆಯರನ್ನು ಮತ್ತಷ್ಟು ಪಂಜರದ ಗೊಂಬೆಗಳನ್ನಾಗಿಸುವ ಸಾಧ್ಯತೆಯೇ ಹೆಚ್ಚು.

ಎಲ್ಲಾ ಕ್ಯಾಂಪಸ್ಸುಗಳಲ್ಲೂ ಹುಡುಗಿಯರು ತಮಗೂ 24 ಗಂಟೆಗಳ ಗ್ರಂಥಾಲಯ, ಅಲ್ಲಿಗೆ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಇತ್ಯಾದಿಗಳು ಬೇಕೆಂದು ಕೇಳುತ್ತಿದ್ದಾರೆ. ಆದರೆ, ಪುರುಷ ಕೇಂದ್ರಿತ ದೃಷ್ಟಿಕೋನವು ಇವೆಲ್ಲವನ್ನೂ ರಕ್ಷಣೆಯ ಹೆಸರಿನಲ್ಲಿ ಅಥವಾ ಹಸಿ ಹಸಿಯಾಗಿ ‘ನಿಮಗೆ ಇವುಗಳ ಅಗತ್ಯವಿಲ್ಲ’ ಎಂದು ಹೇಳುತ್ತಾ ಹಿಂದೆ ತಳ್ಳಲು ಇಂತಹ ಘಟನೆಗಳು ನೆಪವಾಗುತ್ತವೆ. ಗಾರ್ಗಿ ಕಾಲೇಜಿನ ಮೇಲೆ ದಾಳಿ ನಡೆಸಿದವರ ಮೇಲೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದು ದೇಶದೆಲ್ಲೆಡೆಯ ವಿದ್ಯಾರ್ಥಿನಿಯರ ಭವಿಷ್ಯದ ಮೇಲೂ ಹಾಕಿದ ಕಲ್ಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...