Homeಮುಖಪುಟವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

ವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

"ಆಜಾದಿ"ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ, 2018ರಲ್ಲಿ ಪೊಲೀಸರು ದೇಶಾದ್ಯಂತ 70ರಷ್ಟು ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ದಾಖಲೆಗಳನ್ನು ಜನವರಿ 2019ರಲ್ಲಿ ವಿಶ್ಲೇಷಿಸಿದಾಗ 2014ರ ಬಳಿಕ ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧನಗಳು ಏಕಾಏಕಿಯಾಗಿ ಏರಿರುವುದು ಕಂಡುಬಂದಿದೆ.

ನಿಜವಾಗಿಯೂ ನಮ್ಮಲ್ಲಿ ದೇಶಪ್ರೇಮವಿಲ್ಲದ, ದೇಶಕ್ಕೆ ಹಾನಿಮಾಡಲು ಬಯಸುವ ಅಥವಾ ಸಾರಾಸಗಟು ದೇಶದ್ರೋಹಿಗಳಾಗಿರುವ ದೊಡ್ಡ ಸಂಖ್ಯೆಯ ಸುಶಿಕ್ಷಿತ ಜನರು ಇದ್ದಾರೆಯೇ? ಅವರು ಹಿಂದೆಯೂ ಇದ್ದರು ಮತ್ತು ಇತ್ತೀಚೆಗೆ ಇಂತಹಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿರುವುದು ಪೊಲೀಸರು ಹೆಚ್ಚು ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವುದರಿಂದ ಎಂದು ಇಂತಹಾ ಏರಿಕೆಯನ್ನು ಮುಚ್ಚಿಡಲು ಯತ್ನಿಸುತ್ತಿರುವವರು ವಾದಿಸಬಹುದು.

ಪ್ರಶ್ನೆಯೆಂದರೆ, ಮೊತ್ತಮೊದಲಾಗಿ ನಮ್ಮಂತಹ ಮಹಾನ್ ರಾಷ್ಟ್ರದಲ್ಲಿ ದೊಡ್ಡಸಂಖ್ಯೆಯ ದ್ರೋಹಿಗಳು ಏಕಿರಬೇಕು? ದೇಶ ಕಟ್ಟುವ ಪ್ರಯೋಗದಲ್ಲಿ ನಾವೆಲ್ಲೋ ವಿಫಲರಾಗಿದ್ದೇವೆಯೆ? ಒಂದು ವೇಳೆ ಹೌದೆಂದಾದಲ್ಲಿ, ಕೇವಲ ಜನರ ಮೇಲೆ ಕೇಸು ಹಾಕುವುದನ್ನು ಬಿಟ್ಟು ಮೂಲ ಕಾರಣಗಳನ್ನು ಪರಿಹರಿಸಬೇಕು. ಆದರೆ, ಕಳೆದ ಮೂರು ವರ್ಷಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂಬ ವಾಸ್ತವವು, ಪೋಲೀಸರು ನಿರಂಕುಶವಾಗಿ ತಮ್ಮ ಅಧಿಕಾರಗಳನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ನಂಬಲು ಕಾರಣಗಳನ್ನು ಒದಗಿಸುತ್ತದೆ.

ನಾವು ನಮ್ಮೊಂದಿಗೆ ಹೋಲಿಸಿಕೊಳ್ಳುವ ಪ್ರಪಂಚದ ಇನ್ನೊಂದು ಮಹಾನ್ ಪ್ರಜಾಪ್ರಭುತ್ವವಾಗಿರುವ ಯುಎಸ್‌ಎಯಲ್ಲಿ ರಾಷ್ಟ್ರದ್ರೋಹವು ಸಾಮಾನ್ಯವಾಗಿ ಆರೋಪಿಸಲಾಗುವ ಅಪರಾಧವಲ್ಲ. ಅತ್ಯಂತ ಕುಖ್ಯಾತ ದೇಶದ್ರೋಹದ ಸಂಚಿನ ಪ್ರಕರಣಗಳು (1936-2010ರ ನಡುವೆ ಕೇವಲ ಐದರಲ್ಲಿ ಎರಡು ಪ್ರಕರಣಗಳು) ಯುಎಸ್‌ಎಯನ್ನು ಬುಡಮೇಲುಗೊಳಿಸಿ, ಸ್ವಾತಂತ್ರ್ಯವನ್ನು ಸ್ಥಾಪಿಸಬಯಸುವ ಪೋರ್ಟೊರಿಕನ್ ರಾಷ್ಟ್ರೀಯವಾದಿಗಳನ್ನು ಶಿಕ್ಷಿಸುವುದರಲ್ಲಿ ಕೊನೆಗೊಂಡಿದ್ದವು. ತನ್ನ ಪ್ರಜೆಗಳು ದೇಶವನ್ನು ಪ್ರೀತಿಸುವುದಿಲ್ಲ ಎಂದು ಅಮೇರಿಕನ್ ಸರಕಾರಗಳು ಭಾವಿಸುತ್ತಿಲ್ಲ ಎಂಬುದು ಸ್ಪಷ್ಟ.

ಆದರೆ, ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಯೋಗಗುರುವೊಬ್ಬನನ್ನು ಟೀಕಿಸಿದ ಪೋಸ್ಟ್ ಒಂದಕ್ಕೆ ಲೈಕ್ ಒತ್ತಿದ್ದಕ್ಕಾಗಿ, ಪ್ರತಿಸ್ಪರ್ಧಿ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಕ್ಕಾಗಿ, ವ್ಯಂಗ್ಯಚಿತ್ರಗಳನ್ನು ಬರೆದುದಕ್ಕಾಗಿ, ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಪ್ರಚೋದನಕಾರಿ ಪ್ರಶ್ನೆ ಕೇಳಿದ್ದಕ್ಕಾಗಿ ಅಥವಾ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಬರುವಾಗ ಎದ್ದುನಿಲ್ಲದ್ದಕ್ಕಾಗಿ ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. “ಪಾಕಿಸ್ತಾನವು ನರಕವಲ್ಲ. ಅಲ್ಲಿನ ಜನರು ನಮ್ಮಂತೆಯೇ” ಎಂದು ಹೇಳಿದ್ದಕ್ಕಾಗಿ ವಕೀಲರೊಬ್ಬರು 2016ರಲ್ಲಿ ನಟಿ ದಿವ್ಯಸ್ಪಂದನಾ@ರಮ್ಯಾ ವಿರುದ್ಧ ಖಾಸಗಿಯಾಗಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದರು. ಆದರೆ ಪಾಕಿಸ್ತಾನವು ಅಧಿಕೃತವಾಗಿ ಶತ್ರು ರಾಷ್ಟ್ರವಲ್ಲದಿರುವುದರಿಂದ ಅಲ್ಲಿನ ಪ್ರಜೆಗಳನ್ನು ಹೊಗಳುವುದು ದೇಶದ್ರೋಹವಾಗುವುದಿಲ್ಲ ಎಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿತ್ತು.

“ಪ್ರಧಾನಿ ಮತ್ತು ದೇಶದ ಪ್ರತಿಷ್ಟೆಗೆ ಧಕ್ಕೆ ತರಲು ಯತ್ನಿಸಿದ” ಆರೋಪದಲ್ಲಿ ಪತ್ರವೊಂದನ್ನು ಬಹಿರಂಗಪಡಿಸಿದ್ದಕ್ಕಾಗಿ ವಕೀಲರೊಬ್ಬರು ಮುಜಾಫರ್‌ಪುರ್‌ನ ನ್ಯಾಯಾಲಯವೊಂದರ ಮೂಲಕ 49 ಜನರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗುವಂತೆ ಮಾಡಿದ್ದರು. ಕೊನೆಯಲ್ಲಿ ಭಾರೀ ಸಾರ್ವಜನಿಕ ಪ್ರತಿಭಟನೆಯ ಬಳಿಕ ಪೊಲೀಸರು ಪ್ರಕರಣ ಮುಚ್ಚಿದ್ದರು.

ಪ್ರತ್ಯೇಕತೆ ಬಗ್ಗೆ ಮಾತನಾಡುವುದು, ಭಾರತವನ್ನು ಮೆಚ್ಚದಿರುವುದು ಅಥವಾ ಭಾರತ ವಿರೋಧಿಯಾಗಿರುವುದು ಅಪರಾಧವೆ?

ಪತ್ರಕರ್ತ ಕರಣ್ ಥಾಪರ್ ಅವರು ಸಿ.ಎನ್. ಅಣ್ಣಾದುರೈ ಪ್ರಕರಣವನ್ನು ನೆನಪಿಸಿದ್ದಾರೆ. ಮೇ 1,1962ರಲ್ಲಿ ಅವರು ರಾಜ್ಯಸಭೆಯಲ್ಲಿ ದ್ರಾವಿಡರ ಸ್ವಯಂನಿರ್ಧಾರ ಮತ್ತು ಪ್ರತ್ಯೇಕ ದಕ್ಷಿಣ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಜನವರಿ 20, 1962ರ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ನೀಡಲಾದ ಮೈಲಿಗಲ್ಲು ತೀರ್ಪನ್ನು ಅವರು ಸರಿಯಾಗಿಯೇ ಅರ್ಥ ಮಾಡಿಕೊಂಡಿರಬೇಕು.  ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸಿ, ಹಿಂಸಾತ್ಮಕ ಮಾರ್ಗದಿಂದ ಸರಕಾರವನ್ನು ಬುಡಮೇಲು ಮಾಡುವ ಉದ್ದೇಶ, ಅರ್ಥವನ್ನು ಹೊಂದಿರುವ ಮಾತುಗಳು ಮತ್ತು ಎಷ್ಟೇ ಕಠಿಣವಾಗಿದ್ದರೂ ಸರಕಾರದ ಕೃತ್ಯಗಳನ್ನು ಟೀಕಿಸುವ ಮಾತುಗಳ ನಡುವಿನ ವ್ಯತ್ಯಾಸವನ್ನು ಈ ತೀರ್ಪು ಸ್ಪಷ್ಟವಾಗಿ ಗುರುತಿಸಿದೆ.

ಮತ್ತೊಮ್ಮೆ 2016ರಲ್ಲಿ ‘ಕಾಮನ್ ಕಾಸ್’ ಮತ್ತು ಇನ್ನೊಬ್ಬರ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತತ್ವಗಳನ್ನು ದೃಢಪಡಿಸಿದೆ.

ಇದರ ಅರ್ಥವೆಂದರೆ, ಕೆಲಜನರು ತಮಗೆ ಭಾರತ ಇಷ್ಟವಿಲ್ಲ ಮತ್ತು ತಾವು ಶಾಂತಿಯುತವಾಗಿ ಪ್ರತ್ಯೇಕವಾಗಲು ಬಯಸುತ್ತೇವೆ ಎಂದು ಹೇಳಿದರೆ ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ತಾವು ಬಲಪ್ರಯೋಗದಿಂದ ಸರಕಾರವನ್ನು ಬುಡಮೇಲುಗೊಳಿಸಲು ಬಯಸುತ್ತೇವೆ ಎಂದು ಹೇಳಿದರೆ, ಅದು ರಾಷ್ಟ್ರದ್ರೋಹವಾಗುತ್ತದೆ.

ಪ್ರಖ್ಯಾತ ವಕೀಲ ಫಾಲಿ ಎಸ್. ನಾರಿಮನ್ ಏನು ಹೇಳುತ್ತಾರೆಂದರೆ, ಭಾರತ ವಿರೋಧಿಯಾಗಿರುವುದು ಹೆಚ್ಚಿನ ಪ್ರಜೆಗಳಿಗೆ ರುಚಿಸದಿರಬಹುದು; ಆದರೆ ಅದು ಕ್ರಿಮಿನಲ್ ಅಪರಾಧವಲ್ಲ ಮತ್ತು ಖಂಡಿತವಾಗಿಯೂ ರಾಷ್ಟ್ರದ್ರೋಹವಲ್ಲ. ಮುಕ್ತ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ ವಿಧಿಯ ವಿನಾಯಿತಿ ನಿಯಮಗಳಲ್ಲಿ ಸಂವಿಧಾನ ನಿರ್ಮಾತೃಗಳು ದೇಶದ್ರೋಹವನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದಾರೆ ಎಂದು ನಾರಿಮನ್ ಸ್ಪಷ್ಟಪಡಿಸಿದ್ದಾರೆ. “ದೇಶದ್ರೋಹವನ್ನು ಅಪರಾಧವನ್ನಾಗಿ ಮಾಡಲಾಗಿರುವುದು ಸರಕಾರಗಳ ಗಾಯಗೊಂಡ ಪ್ರತಿಷ್ಟೆಯನ್ನು ಶಮನ ಮಾಡುವುದಕ್ಕಾಗಿ ಅಲ್ಲ” ಎಂದು ಸಂವಿಧಾನ ನಿರ್ಮಾತೃಗಳು ಹೇಳಿದ್ದರು. “ಪಾಕಿಸ್ತಾನ್ ಜಿಂದಾಬಾದ್” ಮುಂತಾದ ಘೋಷಣೆಗಳನ್ನು ಕೂಗುವುದು ಕೂಡಾ ಕಾನೂನು ಪ್ರಕಾರ ರಾಷ್ಟ್ರದ್ರೋಹವಾಗುವುದಿಲ್ಲ ಎಂದು ಪ್ರಖ್ಯಾತ ವಕೀಲ ಸೋಲಿ ಸೊರಾಬ್ಜಿ ಹೇಳುತ್ತಾರೆ. ಅವರ ಅಭಿಪ್ರಾಯಗಳು ಕಾನೂನು ಆಗಿಲ್ಲದೇ ಇರಬಹುದು. ಆದರೆ ಅವರುಗಳು ಚೆನ್ನಾಗಿ ಕಾನೂನು ತಿಳಿದವರಾಗಿದ್ದಾರೆ.

ಅದೇ ರೀತಿಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸರಕಾರದ ನಿರ್ಧಾರವನ್ನಾಗಲೀ, ಈಗಾಗಲೇ ನಡೆಯುತ್ತಿರುವ ಯುದ್ಧವನ್ನಾಗಲೀ ಕೆಲಜನರು ಶಾಂತಿಯುತವಾಗಿ ವಿರೋಧಿಸಿದರೆ, ಅವರನ್ನು ದೇಶಪ್ರೇಮಿಗಳಲ್ಲ ಎಂದು ಕರೆಯಬಹುದಾದರೂ, ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದಲ್ಲದೆ, ಸರಕಾರ ಯುದ್ಧ ಸಂದರ್ಭಕ್ಕೆಂದೇ ಕಾನೂನು ತಂದಿದ್ದು, ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಿದರೆ, ಅದು ಕಾನೂನು ಉಲ್ಲಂಘನೆಯಾಗುತ್ತದೆಯಾದರೂ, ಆಗಲೂ ಅದು ರಾಷ್ಟ್ರದ್ರೋಹವಾಗುವುದಿಲ್ಲ.

ಆದುದರಿಂದ “ಆಜಾದಿ”ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

(ಲೇಖಕರಾದ ಎನ್.ಸಿ.ಅಸ್ತಾನ ಅವರು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ಕೇರಳ ಡಿಜಿಪಿ ಮತ್ತು ದೀರ್ಘಕಾಲ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಹೆಚ್ಚುವರಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...