Homeಮುಖಪುಟವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

ವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

"ಆಜಾದಿ"ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ, 2018ರಲ್ಲಿ ಪೊಲೀಸರು ದೇಶಾದ್ಯಂತ 70ರಷ್ಟು ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ದಾಖಲೆಗಳನ್ನು ಜನವರಿ 2019ರಲ್ಲಿ ವಿಶ್ಲೇಷಿಸಿದಾಗ 2014ರ ಬಳಿಕ ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧನಗಳು ಏಕಾಏಕಿಯಾಗಿ ಏರಿರುವುದು ಕಂಡುಬಂದಿದೆ.

ನಿಜವಾಗಿಯೂ ನಮ್ಮಲ್ಲಿ ದೇಶಪ್ರೇಮವಿಲ್ಲದ, ದೇಶಕ್ಕೆ ಹಾನಿಮಾಡಲು ಬಯಸುವ ಅಥವಾ ಸಾರಾಸಗಟು ದೇಶದ್ರೋಹಿಗಳಾಗಿರುವ ದೊಡ್ಡ ಸಂಖ್ಯೆಯ ಸುಶಿಕ್ಷಿತ ಜನರು ಇದ್ದಾರೆಯೇ? ಅವರು ಹಿಂದೆಯೂ ಇದ್ದರು ಮತ್ತು ಇತ್ತೀಚೆಗೆ ಇಂತಹಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿರುವುದು ಪೊಲೀಸರು ಹೆಚ್ಚು ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವುದರಿಂದ ಎಂದು ಇಂತಹಾ ಏರಿಕೆಯನ್ನು ಮುಚ್ಚಿಡಲು ಯತ್ನಿಸುತ್ತಿರುವವರು ವಾದಿಸಬಹುದು.

ಪ್ರಶ್ನೆಯೆಂದರೆ, ಮೊತ್ತಮೊದಲಾಗಿ ನಮ್ಮಂತಹ ಮಹಾನ್ ರಾಷ್ಟ್ರದಲ್ಲಿ ದೊಡ್ಡಸಂಖ್ಯೆಯ ದ್ರೋಹಿಗಳು ಏಕಿರಬೇಕು? ದೇಶ ಕಟ್ಟುವ ಪ್ರಯೋಗದಲ್ಲಿ ನಾವೆಲ್ಲೋ ವಿಫಲರಾಗಿದ್ದೇವೆಯೆ? ಒಂದು ವೇಳೆ ಹೌದೆಂದಾದಲ್ಲಿ, ಕೇವಲ ಜನರ ಮೇಲೆ ಕೇಸು ಹಾಕುವುದನ್ನು ಬಿಟ್ಟು ಮೂಲ ಕಾರಣಗಳನ್ನು ಪರಿಹರಿಸಬೇಕು. ಆದರೆ, ಕಳೆದ ಮೂರು ವರ್ಷಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂಬ ವಾಸ್ತವವು, ಪೋಲೀಸರು ನಿರಂಕುಶವಾಗಿ ತಮ್ಮ ಅಧಿಕಾರಗಳನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ನಂಬಲು ಕಾರಣಗಳನ್ನು ಒದಗಿಸುತ್ತದೆ.

ನಾವು ನಮ್ಮೊಂದಿಗೆ ಹೋಲಿಸಿಕೊಳ್ಳುವ ಪ್ರಪಂಚದ ಇನ್ನೊಂದು ಮಹಾನ್ ಪ್ರಜಾಪ್ರಭುತ್ವವಾಗಿರುವ ಯುಎಸ್‌ಎಯಲ್ಲಿ ರಾಷ್ಟ್ರದ್ರೋಹವು ಸಾಮಾನ್ಯವಾಗಿ ಆರೋಪಿಸಲಾಗುವ ಅಪರಾಧವಲ್ಲ. ಅತ್ಯಂತ ಕುಖ್ಯಾತ ದೇಶದ್ರೋಹದ ಸಂಚಿನ ಪ್ರಕರಣಗಳು (1936-2010ರ ನಡುವೆ ಕೇವಲ ಐದರಲ್ಲಿ ಎರಡು ಪ್ರಕರಣಗಳು) ಯುಎಸ್‌ಎಯನ್ನು ಬುಡಮೇಲುಗೊಳಿಸಿ, ಸ್ವಾತಂತ್ರ್ಯವನ್ನು ಸ್ಥಾಪಿಸಬಯಸುವ ಪೋರ್ಟೊರಿಕನ್ ರಾಷ್ಟ್ರೀಯವಾದಿಗಳನ್ನು ಶಿಕ್ಷಿಸುವುದರಲ್ಲಿ ಕೊನೆಗೊಂಡಿದ್ದವು. ತನ್ನ ಪ್ರಜೆಗಳು ದೇಶವನ್ನು ಪ್ರೀತಿಸುವುದಿಲ್ಲ ಎಂದು ಅಮೇರಿಕನ್ ಸರಕಾರಗಳು ಭಾವಿಸುತ್ತಿಲ್ಲ ಎಂಬುದು ಸ್ಪಷ್ಟ.

ಆದರೆ, ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಯೋಗಗುರುವೊಬ್ಬನನ್ನು ಟೀಕಿಸಿದ ಪೋಸ್ಟ್ ಒಂದಕ್ಕೆ ಲೈಕ್ ಒತ್ತಿದ್ದಕ್ಕಾಗಿ, ಪ್ರತಿಸ್ಪರ್ಧಿ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಕ್ಕಾಗಿ, ವ್ಯಂಗ್ಯಚಿತ್ರಗಳನ್ನು ಬರೆದುದಕ್ಕಾಗಿ, ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಪ್ರಚೋದನಕಾರಿ ಪ್ರಶ್ನೆ ಕೇಳಿದ್ದಕ್ಕಾಗಿ ಅಥವಾ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಬರುವಾಗ ಎದ್ದುನಿಲ್ಲದ್ದಕ್ಕಾಗಿ ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. “ಪಾಕಿಸ್ತಾನವು ನರಕವಲ್ಲ. ಅಲ್ಲಿನ ಜನರು ನಮ್ಮಂತೆಯೇ” ಎಂದು ಹೇಳಿದ್ದಕ್ಕಾಗಿ ವಕೀಲರೊಬ್ಬರು 2016ರಲ್ಲಿ ನಟಿ ದಿವ್ಯಸ್ಪಂದನಾ@ರಮ್ಯಾ ವಿರುದ್ಧ ಖಾಸಗಿಯಾಗಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದರು. ಆದರೆ ಪಾಕಿಸ್ತಾನವು ಅಧಿಕೃತವಾಗಿ ಶತ್ರು ರಾಷ್ಟ್ರವಲ್ಲದಿರುವುದರಿಂದ ಅಲ್ಲಿನ ಪ್ರಜೆಗಳನ್ನು ಹೊಗಳುವುದು ದೇಶದ್ರೋಹವಾಗುವುದಿಲ್ಲ ಎಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿತ್ತು.

“ಪ್ರಧಾನಿ ಮತ್ತು ದೇಶದ ಪ್ರತಿಷ್ಟೆಗೆ ಧಕ್ಕೆ ತರಲು ಯತ್ನಿಸಿದ” ಆರೋಪದಲ್ಲಿ ಪತ್ರವೊಂದನ್ನು ಬಹಿರಂಗಪಡಿಸಿದ್ದಕ್ಕಾಗಿ ವಕೀಲರೊಬ್ಬರು ಮುಜಾಫರ್‌ಪುರ್‌ನ ನ್ಯಾಯಾಲಯವೊಂದರ ಮೂಲಕ 49 ಜನರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗುವಂತೆ ಮಾಡಿದ್ದರು. ಕೊನೆಯಲ್ಲಿ ಭಾರೀ ಸಾರ್ವಜನಿಕ ಪ್ರತಿಭಟನೆಯ ಬಳಿಕ ಪೊಲೀಸರು ಪ್ರಕರಣ ಮುಚ್ಚಿದ್ದರು.

ಪ್ರತ್ಯೇಕತೆ ಬಗ್ಗೆ ಮಾತನಾಡುವುದು, ಭಾರತವನ್ನು ಮೆಚ್ಚದಿರುವುದು ಅಥವಾ ಭಾರತ ವಿರೋಧಿಯಾಗಿರುವುದು ಅಪರಾಧವೆ?

ಪತ್ರಕರ್ತ ಕರಣ್ ಥಾಪರ್ ಅವರು ಸಿ.ಎನ್. ಅಣ್ಣಾದುರೈ ಪ್ರಕರಣವನ್ನು ನೆನಪಿಸಿದ್ದಾರೆ. ಮೇ 1,1962ರಲ್ಲಿ ಅವರು ರಾಜ್ಯಸಭೆಯಲ್ಲಿ ದ್ರಾವಿಡರ ಸ್ವಯಂನಿರ್ಧಾರ ಮತ್ತು ಪ್ರತ್ಯೇಕ ದಕ್ಷಿಣ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಜನವರಿ 20, 1962ರ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ನೀಡಲಾದ ಮೈಲಿಗಲ್ಲು ತೀರ್ಪನ್ನು ಅವರು ಸರಿಯಾಗಿಯೇ ಅರ್ಥ ಮಾಡಿಕೊಂಡಿರಬೇಕು.  ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸಿ, ಹಿಂಸಾತ್ಮಕ ಮಾರ್ಗದಿಂದ ಸರಕಾರವನ್ನು ಬುಡಮೇಲು ಮಾಡುವ ಉದ್ದೇಶ, ಅರ್ಥವನ್ನು ಹೊಂದಿರುವ ಮಾತುಗಳು ಮತ್ತು ಎಷ್ಟೇ ಕಠಿಣವಾಗಿದ್ದರೂ ಸರಕಾರದ ಕೃತ್ಯಗಳನ್ನು ಟೀಕಿಸುವ ಮಾತುಗಳ ನಡುವಿನ ವ್ಯತ್ಯಾಸವನ್ನು ಈ ತೀರ್ಪು ಸ್ಪಷ್ಟವಾಗಿ ಗುರುತಿಸಿದೆ.

ಮತ್ತೊಮ್ಮೆ 2016ರಲ್ಲಿ ‘ಕಾಮನ್ ಕಾಸ್’ ಮತ್ತು ಇನ್ನೊಬ್ಬರ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತತ್ವಗಳನ್ನು ದೃಢಪಡಿಸಿದೆ.

ಇದರ ಅರ್ಥವೆಂದರೆ, ಕೆಲಜನರು ತಮಗೆ ಭಾರತ ಇಷ್ಟವಿಲ್ಲ ಮತ್ತು ತಾವು ಶಾಂತಿಯುತವಾಗಿ ಪ್ರತ್ಯೇಕವಾಗಲು ಬಯಸುತ್ತೇವೆ ಎಂದು ಹೇಳಿದರೆ ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ತಾವು ಬಲಪ್ರಯೋಗದಿಂದ ಸರಕಾರವನ್ನು ಬುಡಮೇಲುಗೊಳಿಸಲು ಬಯಸುತ್ತೇವೆ ಎಂದು ಹೇಳಿದರೆ, ಅದು ರಾಷ್ಟ್ರದ್ರೋಹವಾಗುತ್ತದೆ.

ಪ್ರಖ್ಯಾತ ವಕೀಲ ಫಾಲಿ ಎಸ್. ನಾರಿಮನ್ ಏನು ಹೇಳುತ್ತಾರೆಂದರೆ, ಭಾರತ ವಿರೋಧಿಯಾಗಿರುವುದು ಹೆಚ್ಚಿನ ಪ್ರಜೆಗಳಿಗೆ ರುಚಿಸದಿರಬಹುದು; ಆದರೆ ಅದು ಕ್ರಿಮಿನಲ್ ಅಪರಾಧವಲ್ಲ ಮತ್ತು ಖಂಡಿತವಾಗಿಯೂ ರಾಷ್ಟ್ರದ್ರೋಹವಲ್ಲ. ಮುಕ್ತ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ ವಿಧಿಯ ವಿನಾಯಿತಿ ನಿಯಮಗಳಲ್ಲಿ ಸಂವಿಧಾನ ನಿರ್ಮಾತೃಗಳು ದೇಶದ್ರೋಹವನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದಾರೆ ಎಂದು ನಾರಿಮನ್ ಸ್ಪಷ್ಟಪಡಿಸಿದ್ದಾರೆ. “ದೇಶದ್ರೋಹವನ್ನು ಅಪರಾಧವನ್ನಾಗಿ ಮಾಡಲಾಗಿರುವುದು ಸರಕಾರಗಳ ಗಾಯಗೊಂಡ ಪ್ರತಿಷ್ಟೆಯನ್ನು ಶಮನ ಮಾಡುವುದಕ್ಕಾಗಿ ಅಲ್ಲ” ಎಂದು ಸಂವಿಧಾನ ನಿರ್ಮಾತೃಗಳು ಹೇಳಿದ್ದರು. “ಪಾಕಿಸ್ತಾನ್ ಜಿಂದಾಬಾದ್” ಮುಂತಾದ ಘೋಷಣೆಗಳನ್ನು ಕೂಗುವುದು ಕೂಡಾ ಕಾನೂನು ಪ್ರಕಾರ ರಾಷ್ಟ್ರದ್ರೋಹವಾಗುವುದಿಲ್ಲ ಎಂದು ಪ್ರಖ್ಯಾತ ವಕೀಲ ಸೋಲಿ ಸೊರಾಬ್ಜಿ ಹೇಳುತ್ತಾರೆ. ಅವರ ಅಭಿಪ್ರಾಯಗಳು ಕಾನೂನು ಆಗಿಲ್ಲದೇ ಇರಬಹುದು. ಆದರೆ ಅವರುಗಳು ಚೆನ್ನಾಗಿ ಕಾನೂನು ತಿಳಿದವರಾಗಿದ್ದಾರೆ.

ಅದೇ ರೀತಿಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸರಕಾರದ ನಿರ್ಧಾರವನ್ನಾಗಲೀ, ಈಗಾಗಲೇ ನಡೆಯುತ್ತಿರುವ ಯುದ್ಧವನ್ನಾಗಲೀ ಕೆಲಜನರು ಶಾಂತಿಯುತವಾಗಿ ವಿರೋಧಿಸಿದರೆ, ಅವರನ್ನು ದೇಶಪ್ರೇಮಿಗಳಲ್ಲ ಎಂದು ಕರೆಯಬಹುದಾದರೂ, ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದಲ್ಲದೆ, ಸರಕಾರ ಯುದ್ಧ ಸಂದರ್ಭಕ್ಕೆಂದೇ ಕಾನೂನು ತಂದಿದ್ದು, ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಿದರೆ, ಅದು ಕಾನೂನು ಉಲ್ಲಂಘನೆಯಾಗುತ್ತದೆಯಾದರೂ, ಆಗಲೂ ಅದು ರಾಷ್ಟ್ರದ್ರೋಹವಾಗುವುದಿಲ್ಲ.

ಆದುದರಿಂದ “ಆಜಾದಿ”ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

(ಲೇಖಕರಾದ ಎನ್.ಸಿ.ಅಸ್ತಾನ ಅವರು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ಕೇರಳ ಡಿಜಿಪಿ ಮತ್ತು ದೀರ್ಘಕಾಲ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಹೆಚ್ಚುವರಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...