Homeಅಂಕಣಗಳುಟ್ರಂಪು-ಮೋದಿ ಜೋಡಿ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ!

ಟ್ರಂಪು-ಮೋದಿ ಜೋಡಿ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ!

- Advertisement -
- Advertisement -

ಭರತಮಾತೆಯ ಹೃದಯ ಭಾಗವಾದ ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್ ಕೆನೆದಿರುವುದರಿಂದ ಮೋದಿ ಮತ್ತು ಶಾ ಮುಖಗಳು ಇಂಗು ತಿಂದ ಮಂಗನ ಮುಖಗಳಾಗಿವೆಯಂತಲ್ಲಾ. ಕೇಜ್ರಿವಾಲ್ ಪಠಿಸಿದ್ದು ದೆಹಲಿ ಅಭಿವೃದ್ದಿ ಮಂತ್ರ ಮೋದಿ ಶಾ ಪಠಿಸಿದ್ದು ಮತಾಂಧಮಂತ್ರ. ಅನಾದಿಕಾಲದಿಂದಲೂ ಸುಲ್ತಾನರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ನರಳಿದ ದೆಹಲಿ ತುಂಬ ಬಸವಳಿದ ಪ್ರದೇಶ. ಇಂತಹ ಪ್ರದೇಶವನ್ನು ನೆಮ್ಮದಿಯಾಗಿಡುವ ಒಬ್ಬ ನಾಯಕ ಬೇಕಿತ್ತು. ಅವನನ್ನು ದೆಹಲಿ ಪಡೆದಿದೆ ಆದರೆ ಮೋದಿ ಶಾ ದಾಳಿಯಿಂದ ತತ್ತರಿಸಿರುವ ಭಾರತಕ್ಕೂ ಒಬ್ಬ ಕೇಜ್ರಿವಾಲ್ ಬೇಕಾಗಿದೆ. ಆದರೆ ಕೇಜ್ರಿವಾಲ್ ತರಹ ಇರುವ ವ್ಯಕ್ತಿ ಒಬ್ಬನೆ ಅದೇ ಕೇಜ್ರಿವಾಲ್! ಆತ ದೆಹಲಿಯಿಂದ ಹೊರನಡೆದು ನಾಯಕತ್ವ ವಹಿಸಿದ್ದಾದರೆ, ಮೋದಿ ಶಾ ಮುಲಾಜಿಲ್ಲದೆ ಗಟಾರ ಸೇರುವುದು ಗ್ಯಾರಂಟಿಯಂತಲ್ಲಾ ಥೂತ್ತೇರಿ….

ಭಾರತದಿಂದ ಪಾಲು ಪಡೆದ ಕ್ಷಣದಿಂದಲೂ ತಲೆ ಕೆಟ್ಟಂತೆ, ಮತಾಂಧರಾಗಿ ಗಡಿಭಾಗದ ತಂಟೆಕೋರರಾಗಿ, ಈ ಏಳುದಶಕಗಳೂ ಹುಚ್ಚಾಸ್ಪತ್ರೆ ಸೇರುವಂತಾಗಿರುವ ಪಾಕಿಸ್ತಾನ ಈಗ ಭಾರತದ ಪ್ರಜೆಗಳೂ ಜೈಲು ಸೇರುವಂತೆ ಮಾಡುತ್ತಿದೆಯಲ್ಲಾ. ವಿಷಯ ಇಷ್ಟೇ, ಇತ್ತೀಚೆಗೆ ಭಾರತದಲ್ಲಿ ಉದ್ಭವಿಸಿರುವ ದೇಶಭಕ್ತರಿಗೆ ಪಾಕಿಸ್ತಾನ ಎಂದಕೂಡಲೇ ಮೈಮೇಲೆ ಗಣಬಂದಂತಾಡುತ್ತವೆ. ಅಂತಹ ದೇಶಭಕ್ತಿ ಕೆರಳಿಸಲೆಂದೇ ಪಾಕೀಸ್ತಾನ್ ಜಿಂದಾಬಾದ್ ಎಂದು ಕೂಗಿದ ಹುಡುಗರು ಜೈಲು ಸೇರುತ್ತಿವೆ. ವಾಘಾ ಗಡಿಯಲ್ಲಿ ಈ ಕಡೆಯಿಂದ ಭಾರತಮಾತಾಕಿ ಜೈ ಎಂದರೆ, ಆ ಕಡೆಯಿಂದ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿಸುತ್ತ ಸಂಜೆಯಾಗುತ್ತದೆ. ಅಂತಹ ದೇಶದ ಪರ ಘೋಷಣೆ ಕೂಗುವುದು ಅಪರಾಧವಾದರೆ ನಮ್ಮ ಜಡ್ಜ್‍ಗಳು ತಿಳುವಳಿಕೆ ಹೇಳಿ ಕಳುಹಿಸಬಹುದು. ಅದು ಬಿಟ್ಟು ಹೆಣ್ಣುಮಕ್ಕಳನ್ನ 14 ದಿನ ಜೈಲಿಗಾಕುವುದು ಎಷ್ಟು ಸರಿ ಎಂಬುದು ಸಾಮಾನ್ಯನ ಪ್ರಶ್ನೆಯಾಗಿದೆಯಲ್ಲಾ, ಥೂತ್ತೇರಿ…

ಫಲಭರಿತವಾಗಿ ಕಂಗೊಳಿಸಿದ್ದ ತೋಟ ಹಾಳಾಗುವ ಸಮಯಕ್ಕೆ ಮಂಗನ ಮುಸುಡಿ ಕಾಯಿ ಕಾಣಿಸಿಕೊಳ್ಳುತ್ತದಂತೆ. ಹಾಗೆಯೇ ಭಾರತದ ಉದ್ದಗಲಕ್ಕೆ ಕಾಣಿಸಿಕೊಳ್ಳುತ್ತಿರುವ ಈ ಅನಿಷ್ಟ ಕಾಯಿಗಳಾವುವೆಂದು ವಿವರಿಸಿ ಹೇಳಬೇಕಿಲ್ಲ. ಇಂತಹ ತೋಟಕ್ಕೆ ಇನ್ನೊಂದು ಮುಸುಡಿ ಲಗ್ಗೆ ಹಾಕಿ ಅಹಮದಾಬಾದಿನಲ್ಲಿ ಭಾಷಣ ಬಿಗಿಯುತ್ತಿರ ಬೇಕಾದರೆ, ಜನಗಳು ಲಾಠಿ ಚಾರ್ಜಿಗೆ ತುತ್ತಾದವರಂತೆ ಚದುರಿ ಹೋದರಂತಲ್ಲಾ. ನಿಜಕ್ಕೂ ಭೀಕರ ಭಾಷಣಕ್ಕೆ ಇದಕ್ಕಿಂತ ಪ್ರತಿಕ್ರಿಯೆ ಇನ್ನೊಂದಿರಲಾರದು. ಆದರೆ ಬಿ.ಜೆ.ಪಿ.ಗಳ ಪ್ರಕಾರ ಇದು ಕಾಂಗೈನ ಸಂಚು. ಸಭೆಯ ಮಧ್ಯದಲ್ಲೇ ಎದ್ದುಹೋಗಿ ಮೋದಿ ಟ್ರಂಪ್‍ಗೆ ಅವಮಾನ ಮಾಡಲೆಂದೇ ಕಾಂಗೈಗಳು ನುಸುಳಿಬಂದಿದ್ದವಂತೆ. ಸುದೈವಕ್ಕೆ ಇಂತಹ ಸಭಾಕಿಡಿಗೇಡಿಗಳು ಪಾಕೀಸ್ತಾನದಿಂದ ಬಂದಿದ್ದರು ಎಂದಿಲ್ಲವಲ್ಲಾ. ಥೂತ್ತೇರಿ…

ಭಾರತಕ್ಕೆ ಬಂದ ಟ್ರಂಪ್ ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಿದರು. ಗಾಂಧಿ ಕೊಂದವರ ಪಾರ್ಟಿಯ ಪ್ರಧಾನಿಯಾದ ಮೋದಿ ಮಹಾತ್ಮರು ಟ್ರಂಪ್‍ಗೆ ಗಾಂಧಿ ಪರಿಚಯ ಮಾಡಿಕೊಡುವ ಜವಾಬ್ದಾರಿ ಬಂದಾಗ, “ನೋಡಿ ಟ್ರಂಪ್ ಇದು ಗಾಂಧಿ ಕಟ್ಟಿದ ಆಶ್ರಮ. ಅವರ ಬಗ್ಗೆ ನಿಮ್ಮ ಮಾರ್ಟಿನ್ ಲೂಥರ್ ಕಿಂಗ್ ಏನೇಳಿದಾರೆ ಅಂದ್ರೆ, `ಗಾಂಧಿ ಈ ಜಗತ್ತಿನ ಜೀವಸತ್ವ ಅವರಿಲ್ಲದೆ ಜಗತ್ತು ಉಳಿಯದು’ ಎಂದಿದ್ದಾರೆ. ಆದರೆ ನಮ್ಮ ಬಿ.ಜೆ.ಪಿ ಜನ ಅದು ಹೇಗೆ ಉಳಿಯಲ್ಲವೋ ನೋಡೋಣ ಎಂದು ಈಗಾಗಲೇ ಗಾಂಧಿ ಕೊಂದವನಿಗೆ ಗುಡಿ ಕಟ್ಟಿದ್ದಾರೆ. ಹಲವು ಜಾಗದಲ್ಲಿದ್ದ ಗಾಂಧಿ ಪ್ರತಿಮೆ ದ್ವಂಸ ಮಾಡಿದ್ದಾರೆ. ನಾನೇ ಉದ್ಘಾಟಿಸಿದ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ. ಏನು ಮಾಡಿದರೂ ಈ ಗಾಂಧಿ ಹೆಸರನ್ನ ಅಳಿಸಿ, ಅಲ್ಲಿಗೆ ನಮ್ಮ ವೀರಸಾರ್ಕರ್‍ನನ್ನ ಸ್ಥಾಪಿಸಲಾಗುತ್ತಿಲ್ಲ” ಎನ್ನಲಾಗದೆ ಪರಿತಪಿಸಿದರಂತಲ್ಲಾ, ಥೂತ್ತೇರಿ…

ಟ್ರಂಪು ಮತ್ತು ಮೋದಿ ಸೇರಿಕೊಂಡು ಪ್ರಪಂಚದಲ್ಲೇ ಬಲಿಷ್ಟ ರಾಷ್ಟ್ರಗಳನ್ನು ನಿರ್ಮಾಣ ಮಾಡಿಕೊಂಡು, ಸುಂದರವಾಗಿ ಬದುಕುವ ಸುಳ್ಳುಗಳನ್ನು ಹೇಳುತ್ತಿರುವ ಸಮಯಕ್ಕೆ ಸರಿಯಾಗಿ, ಮಲೆನಾಡಿನ ಕಡೆಯಿಂದ ಬಂದ ಸುದ್ದಿಯೊಂದು ಅಘಾತ ನೀಡಿದೆಯಲ್ಲಾ. ಏನೆಂದರೆ ನಮ್ಮ ಜನ ದಿನನಿತ್ಯವು ಸೇವಿಸುವ ಅನ್ನದಂತಹ ಆಹಾರವಾದ ಅಡಿಕೆ ಬೆಳೆಯನ್ನ ಕಾಪಾಡಲು ಹೊಡೆದ ವಿಷಯುಕ್ತ ಔಷಧಿಯ ಪರಿಣಾಮವಾಗಿ ಜೇನುಹುಳು ಸತ್ತು ಉದುರುತ್ತಿವೆ. ಈ ಜಗತ್ತು ಹೃದಯ ವಿದ್ರಾವಕವಾಗಿ ನಿರ್ಗಮಿಸುವುದು ಜೇನುಹುಳದ ನಿರ್ಗಮನದ ನಂತರ. ಅಂದರೆ ಈಗಾಗಲೇ ಜೇನಿನ ನಿರ್ಗಮನ ಆರಂಭವಾಗಿದೆ. ಇದೇ ಔಷಧಿ ದೆಸೆಯಿಂದ ಚಿಟ್ಟೆಗಳ ವಂಶ ನಿರ್ವಂಶವಾಗುವತ್ತ ಸಾಗುತ್ತಿದೆ. ಟ್ರಂಪು ಮತ್ತು ಮೋದಿ ಜೋಡಿ ನೋಡಿದರೆ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ, ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...