Homeಕರ್ನಾಟಕಮಾಧ್ಯಮಗಳೇ, ಧರ್ಮವೀರರೇ ಗಂಗಮ್ಮನ ಸಾವಿನ ಹೊಣೆಯನ್ನು ನೀವೂ ಹೊರಬೇಕಲ್ಲವೇ?

ಮಾಧ್ಯಮಗಳೇ, ಧರ್ಮವೀರರೇ ಗಂಗಮ್ಮನ ಸಾವಿನ ಹೊಣೆಯನ್ನು ನೀವೂ ಹೊರಬೇಕಲ್ಲವೇ?

ಈ ನಾಡಿನಲ್ಲಾದ ಒಂದು ಸಾವಿಗೆ ಸಂಬಂಧವೇ ಇಲ್ಲದ ನೂರಾರು ಆತ್ಮಸಾಕ್ಷಿಯುಳ್ಳ ಮನಸ್ಸುಗಳು ಇದಕ್ಕೆ ನಾನು ಹೊಣೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಿನವೀಡಿ ಇನ್ನೊಬ್ಬರ ಮೇಲೆ ದ್ವೇಷ ಕಾರುವ ಧರ್ಮವೀರರು ಮತ್ತು ಮಾಧ್ಯಮಗಳಿಗೆ ಈ ಸಾವು ಏನು ಅನ್ನಿಸುತ್ತಿಲ್ಲ ಏಕೆ? 

- Advertisement -
- Advertisement -

ಏಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ಬಹುತೇಕರು ದೇಶದ ಪ್ರಧಾನಿಗಳ ಕರೆಗೆ ಓಗೊಟ್ಟು 9 ನಿಮಿಷಗಳ ಕಾಲ ದೀಪ ಹಚ್ಚಿದರು. ಇನ್ನು ಕೆಲವರು ಪಟಾಕಿ ಹೊಡೆದು ಹುಚ್ಚೆದ್ದು ಕುಣಿದರು. ಅದೇ ಸಂದರ್ಭದಲ್ಲಿ ಅನ್ನ ಆಹಾರವಿಲ್ಲದೇ, ಮನೆ ತಲುಪುವ ಉದ್ದೇಶದಿಂದ ಮೂರು ದಿನ ನಡೆದ ಕಾರಣಕ್ಕೆ ಬಳಲಿದ್ದ ಗಂಗಮ್ಮ ಎಂಬ ಅಮಾಯಕ ಮಹಿಳೆ ತನ್ನ ಸಾವಿನ ಕ್ಷಣಗಳನ್ನು ಎಣಿಸುತ್ತಾ ಬಳ್ಳಾರಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಳು.

ಪೂರ್ವ ಸಿದ್ದತೆ ಮತ್ತು ಬಡವರ ಸ್ಥಿತಿಗತಿ ಏನಾಗಬಹುದೆಂದು ಯೋಚಿಸದೇ ಘೋಷಿಸಿದ ಲಾಕ್‌ಡೌನ್‌ನಿಂದ 30ಕ್ಕೂ ಹೆಚ್ಚು ಜನರು ಜೀವತೆತ್ತಿದ್ದಾರೆ. ಹಸಿವಿನಿಂದ ಸತ್ತವರ ಲೆಕ್ಕ ಸಿಕ್ಕಿಲ್ಲ ಮತ್ತು ಸಿಗುವುದೂ ಇಲ್ಲ. ಈ ನಡುವೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಿಂಧನೂರಿನ 29 ವರ್ಷದ ಗಂಗಮ್ಮ ಎಂಬ ಮಹಿಳೆ ತನ್ನೂರಿಗೆ ತೆರಳಲು ನಡೆದು ನಡೆದು ಸುಸ್ತಾಗಿ, ಅನ್ನ ನೀರಿಲ್ಲದೆ ಸೋಮವಾರ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿದೆ.

ಬೆಂಗಳೂರಿನ ಗ್ಲೋಬಲ್ ವಿಲೇಜ್ ಎಂಬ ಐಟಿ ಕಂಪನಿಯು ಪ್ರಪಂಚದಲ್ಲಿಯೇ ಫೇಮಸ್. ಆದರೆ ಅದೇ ಅಪಾರ್ಟ್ಮೆಂಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಅಂತಹ ನತದೃಷ್ಟರಲ್ಲಿ ಗಂಗಮ್ಮಳು ಕೂಡ ಒಬ್ಬಳು. ಅವಳ ಸಾವಿನ ನಂತರದ ಅವರ ಮನೆ ಪರಿಸ್ಥಿತಿಯನ್ನು ಗಮನಿಸಿದರೆ ನಾವೆಲ್ಲರೂ ನಾಗರಿಕರು ಎನಿಸಿಕೊಳ್ಳಲು ಸಹ ನಾಚಿಕೆಯಾಗುತ್ತದೆ.

ಗಂಗಮ್ಮಳ ಗಂಡ ಕುಡಿತದ ದಾಸನಾಗಿದ್ದನು. ಈತನ ಕಿರುಕುಳದಿಂದ ರೋಸಿಹೋಗಿದ್ದ ಗಂಗಮ್ಮ ಒಮ್ಮೆ ಮಲೇರಿಯಾ ರೋಗಕ್ಕೆ ತುತ್ತಾದಳು. ಇನ್ನು ಅಲ್ಲಿರುವುದು ಅಸಾಧ್ಯ ಎನಿಸಿದಾಗ ಉಳಿದೊಂದು ದಾರಿಯಂತೆ ಬೆಂಗಳೂರಿಗೆ ಗುಳೆ ಹೊರಟಳು.

ಕಟ್ಟಡ ನಿರ್ಮಾಣದಲ್ಲಿ ದುಡಿದು ದುಡಿದು ಬಸವಳಿದಿದ್ದ ಆಕೆ ಇಲ್ಲಿ ಒಂದಷ್ಟು ನೆಮ್ಮದಿಯನ್ನಾದರೂ ಕಂಡುಕೊಂಡಿದ್ದಳು. ಅಷ್ಟರಲ್ಲಿ ಅಪ್ಪಳಿಸಿದ್ದೆ 21 ದಿನಗಳ ಕೊರೊನಾ ಲಾಕ್‌ಡೌನ್. ಎಷ್ಟು ದಿನ ಕಾದರೂ ಕೆಲಸ ಸಿಗದಾಗ ಮತ್ತೆ ತನ್ನೂರು ಸಿಂಧನೂರಿಗೆ ಹೊರಟು ನಿಂತಿದ್ದಾಳೆ. ಕೈಯಲ್ಲಿ ದುಡ್ಡಿಲ್ಲ, ಹೊಟ್ಟೆಗೆ ಆಹಾರವಿಲ್ಲ. ಊರು ತಲುಪಿದರೆ ಏನಾದರೂ ಸಿಗಬಹುದೆಂಬ ಆಸೆಯೊತ್ತು ಹೊರಟ ಗಂಗಮ್ಮ ಕೊನೆಗೆ ಸೇರಿದ್ದು ಮಾತ್ರ ಸ್ಮಶಾನಕ್ಕೆ.

ಟ್ರಾಕ್ಟರ್‌ನಲ್ಲಿ ಒಂದಷ್ಟು ಜೊತೆಗಾರರೊಂದಿಗೆ ಗಂಗಮ್ಮ ಹೊರಟಿದ್ದಾಗ ತುಮಕೂರಿನಲ್ಲಿ ಪೊಲೀಸರು ತಡೆದಿದ್ದಾರೆ. ಅಲ್ಲಿಂದ ಕಾಲ್ನಡಿಗೆ ಆರಂಭಿಸಿದ ಆಕೆಗೆ ಆಹಾರ ನೀರು ದಕ್ಕಿಲ್ಲ. ಮೊದಲೇ ಅನಾರೋಗ್ಯವಿದ್ದ ಆಕೆ ಛಲಬಿಡದೇ ನಡೆದಿದ್ದಾಳೆ. ನಂತರ ಟ್ರಾಕ್ಟರ್ ಬಂದು ಬಳ್ಳಾರಿವರೆಗೂ ತಲುಪಿಸಿದೆ. ಅಷ್ಟರಲ್ಲಿ ಬಸವಳಿದಿದ್ದ ಆಕೆಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನ ಅಲ್ಲಿಯೂ ನರಳಿದ ಆಕೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾಳೆ.

ಸತ್ತ ನಂತರವೂ ಬಿಡದ ಅವಮಾನ

ಗಂಗಮ್ಮ ಸಾವನಪ್ಪುವ ಮುನ್ನ ಒಂದು ವಾರಗಳ ಮುಂಚೆ ತಾನೇ ಆಕೆಯ ಅತ್ತೆ (ಗಂಡನ ತಾಯಿ) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗಂಗಮ್ಮನ ಮೃತದೇಹವನ್ನು ಸಿಂಧನೂರಿಗೆ ತರಬಾರದು, ಇದರಿಂದ ಇಡೀ ನಗರಕ್ಕೆ ತೊಂದರೆಯಾಗುತ್ತದೆ ಎಂದು ವೆಂಕಟೇಶ್ವರ ನಗರದ ಕೆಲವರು ತಗಾದೆ ತೆಗೆದಿದ್ದಾರೆ.

ಇದರಿಂದ ಮತ್ತಷ್ಟು ಭೀತಿಕ್ಕೊಳಗಾದ ಕುಟುಂಬವು ಸಾಸಲುಮರೆ ಎಂಬ ಗ್ರಾಮದಲ್ಲಿ ರಾತ್ರೋರಾತ್ರಿ ದಫನ್ ಮಾಡಿದೆ. ಕುಟುಂಬದ ಕಡೆ ಯಾರೂ ಸಹ ತಿರುಗಿ ನೋಡಿಲ್ಲ. ಬಡವರ ಸಾವಿಗೆ ಅಳುವವರು ಯಾರು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲುತ್ತಿಲ್ಲ ಸಹಾಯ

ಮೋದಿ ಸರ್ಕಾರವೇನೋ ಲಾಕ್‌ಡೌನ್‌ ಘೋಷಿಸಿ ಮಧ್ಯಮ ವರ್ಗದ ಜನರಿಗೆ ಬೇಸರವಾಗದಿರಲೆಂದು ಟಿವಿಯಲ್ಲಿ ರಾಮಾಯಣ, ಮಹಾಭಾರತ ಪ್ರದರ್ಶನ ಮಾಡುತ್ತಿದೆ. ಇನ್ನೂ ಮುಂದೆ ಹೋಗಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ವಾರಕ್ಕೊಂದು ಕರೆ ನೀಡಲಾಗುತ್ತಿದೆ. ಆದರೆ ದೇಶದ ಅರ್ಧ ಸಂಖ್ಯೆಯಷ್ಟಿರುವ ಬಡವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಅವರಿಗೆ ಊಟ ವಸತಿ ಸಿಗುತ್ತಿದೆಯೇ ಎಂದು ಯೋಚಿಸುವ ಗೋಜಿಗೆ ಸರ್ಕಾರ ಹೋಗಿಲ್ಲ. ಚಿಲ್ಲರೆ ಪ್ಯಾಕೇಜ್ ಘೋಷಿಸಿ ಕೇಂದ್ರ ಸರ್ಕಾರ ಕೈತೊಳೆದುಕೊಂಡರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ಕೊಡಲಾರದಷ್ಟು ಬೊಕ್ಕಸದಲ್ಲಿ ಹಣವಿಲ್ಲದೇ ಒದ್ದಾಡುತ್ತಾ ದಾನಿಗಳತ್ತ ಮುಖ ಮಾಡಿದೆ.

ಅಂದ ಮಾತ್ರಕ್ಕೆ ಪ್ರಜ್ಞಾವಂತರು, ಮಾನವೀಯ ಕಾಳಜಿಯುಳ್ಳವರು ಕೈಕಟ್ಟಿ ಕುಳಿತಿದ್ದಾರೆ ಅಂತಲ್ಲ. ದೇಶಾದ್ಯಂತ ಲಕ್ಷಾಂತರ ಮಂದಿ ಪ್ರಾಣದ ಹಂಗು ತೊರೆದು ಬಡವರಿಗೆ ತುತ್ತು ಊಟ ಕೊಡಲು ಶ್ರಮಿಸುತ್ತಿದ್ದಾರೆ. ದಿನಕ್ಕೆ ಲಕ್ಷಾಂತರ ಖರ್ಚು ಮಾಡಿ ಊಟ ಬೇಯಿಸಿ ಅಗತ್ಯವಿದ್ದವರಿಗೆ ತಲುಪಿಸುವ ಮಾದರಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಮುಸ್ಲಿಂ ಧರ್ಮಿಯರು ಸಹಾಯಹಸ್ತ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಒತ್ತಿಯೇ ಹೇಳಬೇಕಾಗಿದೆ.

ಆದರೂ ಸಾಲುತ್ತಿಲ್ಲ. ಹಸಿದ ಎಲ್ಲರ ಹೊಟ್ಟೆ ಹೊರೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಭಾರತ ಬೃಹತ್ ರಾಷ್ಟ್ರ. ಇಲ್ಲಿನ ಎಲ್ಲರ ಹೊಟ್ಟೆ ತುಂಬಿಸಬೇಕಾದರೆ ಸರ್ಕಾರವೇ ಮುಂದೆ ನಿಂತು ಸಾವಿರಾರು ಕೋಟಿ ಖರ್ಚಾದರೂ ಸರಿಯೇ ಬಡವರ ಜೀವ ಮುಖ್ಯ ಅನ್ನುವ ದಿಟ್ಟತನ ಪ್ರದರ್ಶಿಸಬೇಕು. ಹಸಿವಿನಿಂದ ಸಾಯದಂತೆ ಕಾಯುವುದೇ ತನ್ನ ಪರಮ ಗುರಿಯಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಅದು ಆಗುತ್ತಿಲ್ಲ. ಆದ್ದರಿಂದಲೇ ಗಂಗಮ್ಮನಂತಹ ಅದೆಷ್ಟು ಜನ ಅನಾಥ ಶವವಾಗುತ್ತಿದ್ದಾರೋ. ಅವೆಲ್ಲವೂ ವರದಿಯಾಗುತ್ತಿಲ್ಲವಷ್ಟೇ.
ಏಕೆಂದರೆ, ಗಡ್ಡ ಬಿಟ್ಟು ಟೊಪ್ಪಿ ತೊಟ್ಟ ಮುಸ್ಲಿಮರು ಯಾವ್ಯಾವುದೋ ಕಾಲದ ವಿಡಿಯೋಗಳನ್ನೆಲ್ಲಾ ಹುಡುಕುವುದರಲ್ಲಿ ಐಟಿ ಸೆಲ್‌ಗಳು ಬ್ಯುಸಿಯಾಗಿದ್ದರೆ, ಎಲ್ಲವನ್ನೂ ಸೆನ್ಸೇಷನ್ ಮಾಡಲು ಟಿಆರ್‌ಪಿ ಟಿವಿಗಳು ನಿರತವಾಗಿವೆ.

ಗಂಗಮ್ಮನ ಸಾವಿಗೆ ನೂರಾರು ಜನ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ. ಕೊಲೆಗಾರರು ನಾವೇ ಎನ್ನುವಷ್ಟರ ಮಟ್ಟಿಗೆ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡಿದವರೆ. ಆದರೆ ಯಾರಿಗೂ ಒಂದು ಪೈಸೆ ಸಹಾಯ ಮಾಡದ ಕೆಲವು ಧರ್ಮಾಂಧರು ಇಂದಿಗೂ ಮುಸ್ಲಿಮರಿಂದಲೇ ಕೊರೊನಾ ಹರಡಿದೆ, ಜಿಹಾದಿ ವೈರಸ್ ಎನ್ನುವ ಸುಳ್ಳು ಸುದ್ದಿ ಹರಡಲು ಮುಂದಾಗಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದು ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲು ಕೊರೊನಾವನ್ನು ಬಳಸಿಕೊಳ್ಳುತ್ತಿದ್ದಾರೆ. ನೆನಪಿಸಿಕೊಳ್ಳಿ ಇದುವರೆಗೂ ಯಾವ ಟಿವಿ ಚಾನೆಲ್‌ನವರೂ ಸಹ ಕೊರೊನಾ ವಿರುದ್ಧದ ಹೋರಾಟಕ್ಕೆ ಒಂದು ರೂಪಾಯಿ ಕೂಡ ನೆರವು ನೀಡಿಲ್ಲ. ಬದಲಿಗೆ ದ್ವೇಷದ ವಿಷ ಬಿತ್ತುತ್ತಾ ಅಮಾಯಕ ಜನರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಈ ನಾಡಿನಲ್ಲಾದ ಒಂದು ಸಾವಿಗೆ ಸಂಬಂಧವೇ ಇಲ್ಲದ ನೂರಾರು ಆತ್ಮಸಾಕ್ಷಿಯುಳ್ಳ ಮನಸ್ಸುಗಳು ಇದಕ್ಕೆ ನಾನು ಹೊಣೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಿನವೀಡಿ ಇನ್ನೊಬ್ಬರ ಮೇಲೆ ದ್ವೇಷ ಕಾರುವ ಧರ್ಮವೀರರು ಮತ್ತು ಮಾಧ್ಯಮಗಳಿಗೆ ಈ ಸಾವು ಏನು ಅನ್ನಿಸುತ್ತಿಲ್ಲ ಏಕೆ?

ಗಂಗಮ್ಮನ ಸಾವನ್ನು ಯಾವ ಮುಸ್ಲಿಮರ ತಲೆಗೂ ಕಟ್ಟಲು ಸಾಧ್ಯವಿಲ್ಲವಾದ್ದರಿಂದ ಅದು ಸುದ್ದಿಯಾಗಿಲ್ಲ ಎಂಬುದನ್ನು ಮರೆಯದಿರೋಣ. ನಾವೆಂತಹ ದೇಶದಲ್ಲಿ ಬದುಕುತ್ತಿದ್ದೇವೆ? ಮಾನವೀಯತೆ ಇಲ್ಲದ ದೇಶ ಉಳಿದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...