Homeಮುಖಪುಟಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

ಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

- Advertisement -
- Advertisement -

ಇಡೀ ಮನುಷ್ಯ ಕುಲವನ್ನೇ ನಿರ್ನಾಮ ಮಾಡುವತ್ತ ಮುನ್ನುಗ್ಗುತ್ತಿರುವ ಕೊರೊನ ರೋಗದ ವಿರುದ್ಧ ಹೋರಾಟ ನಡೆದಿರುವ ಈ ಸಂದರ್ಭದಲ್ಲಿ, ಒಂದು ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಮನೋಸ್ಥಿತಿಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ನಡೆದಿರುವ ಹೊತ್ತಿನಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅತ್ಯಂತ ಹೊಣೆಗಾರಿಕೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ದ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂಬ ಸಂದೇಶ ಸಾರಿದ ಕೆಲವೆ ನಿಮಿಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾರಾದರೂ ಕೋಮುದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಅಥವಾ ಯಾವುದೇ ಧರ್ಮ, ಜಾತಿಯವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸುವ ಆದೇಶಗಳು ಹೊರಡಿಸಿದ್ದಾರೆ. ಅಂದರೆ ಮುಖ್ಯಮಂತ್ರಿಗಳ ಮಾತು ಕಾರ್ಯರೂಪಕ್ಕೆ ಬಂದಿದೆ. ಇದುವೆ ಅಧಿಕಾರದ ಇಚ್ಛಾಶಕ್ತಿ ಎಂದು ಭಾವಿಸಬಹುದು. ಇಂತಹದ್ದೊಂದು ಮುತ್ಸದ್ದಿತನ ಜನ ಹೋರಾಟದ ನೆಲೆಯಲ್ಲಿ ಬೆಳೆದು ಬಂದ ನಾಯಕನಿಗೆ ಮಾತ್ರ ದಕ್ಕಬಲ್ಲದೇನೋ. ಈಗ ಯಡಿಯೂರಪ್ಪ ಅವರು ಆಡಿದ ಮಾತಿಗೆ ಬದ್ದರಾಗಿಯೂ ನಡೆದುಕೊಳ್ಳಬೇಕಾದ ಪಾರದರ್ಶಕತೆಯನ್ನು ತೋರಬೇಕಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ದ ತಮ್ಮ ಪಕ್ಷದ ಶಾಸಕರು, ಸಂಸದರು, ಮುಂದಾಳುಗಳ ನಾಲಿಗೆಗೂ ಕಾನೂನು ಕುಣಿಕೆ ಹಾಕಿ ಹದ್ದುಬಸ್ತಿನಲ್ಲಿಡಬೇಕು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ 


ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ಮತ್ತದರ ಮಾತೃಕೋಣೆ ಪರಿವಾರದಲ್ಲಿ ಕೊರೊನ ಬಾಧಿತ ನರಳಾಟ ವಕ್ಕರಿಸಿಕೊಂಡಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ಹರಡುವಿಕೆಗೆ ತಬ್ಲೀಘಿಗಳೆ ಕಾರಣ. ಕೊರೊನಾ ಹರುಡುವಿಕೆ ಇದೊಂದು ರೂಪದ ಜಿಹಾದ್ ಎಂದು ಬಹಿರಂಗವಾಗಿ ಹೇಳಿದ್ದರು. ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕ ,ಸಂಸದರುಗಳು ಅಲ್ಪಸಂಖ್ಯಾತ ಸಮುದಾಯವನ್ನೆ ಗುರಿಯಾಗಿಸಿಕೊಂಡು ನಾಲಿಗೆ ಹರಿಬಿಟ್ಟಿದ್ದರು. ಕೊರೊನಾ ಸೋಂಕಿಗೆ ಮುಸ್ಲಿಮರೇ ಕಾರಣ ಎಂಬಂತೆ ಅವರ ವಿರುದ್ದ ಸಂಪಾದ್ರಾಯಿಕ ನ್ಯೂಸ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು ಒಂದೇ ಸಮನೆ ಚೀರಿಕೊಳ್ಳತೊಡಗಿದ್ದವು. ಇವೆಲ್ಲದಕ್ಕೂ ಯಡಿಯೂರಪ್ಪ ಅವರ ಈ ಮೇಲಿನ ಮಾತು ಅಂಕುಶವಿಟ್ಟಂತಾಗಿದೆ.

ರಾಜ್ಯದಲ್ಲಿ ಈಗಾಗಲೆ ಧರ್ಮನಿಂದನೆ ಧೂರ್ತರ ವಿರುದ್ದ ಕೇಸುಗಳು ದಾಖಲಾಗತೊಡಗಿವೆ. ಇದೊಂದು ಪರಿಣಾಮಕಾರಿ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಭರವಸೆ ಮೂಡಿಸಿದ ಬಗೆ ಎನ್ನಬಹುದು. ಹಾಗೆ ನೋಡಿದರೆ ಯಡಿಯೂರಪ್ಪ ಎಂದಿಗೂ ಕೋಮುವಾದಿಯಲ್ಲ ಎಂಬುದನ್ನು ಅನೇಕ ಸಾರಿ ಅವರ ನಡೆ-ನುಡಿಗಳು ಸಾಬೀತು ಮಾಡುತ್ತಲೆ ಬಂದಿವೆ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಅತ್ಯಂತ ಸೌಹಾರ್ದಮಯವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದಲೇ ಎಂತಹುದ್ದೇ ಸಂದರ್ಭದಲ್ಲೂ ಶೇ. ೩೦ ರಷ್ಟು ಮುಸ್ಲಿಂ ಮತಗಳು ಯಡಿಯೂರಪ್ಪ ಅವರಿಗೆ ಮೀಸಲಾಗಿರುತ್ತದೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಪ್ರಬಲ ಲಿಂಗಾಯಿತ ಸಮುದಾಯದ ನಂತರ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟ ಇನ್ನೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಅವರೆಂದೂ ಮುಸ್ಲಿಂರ ವಿರುದ್ದ ಬಹಿರಂಗವಾಗಿ ಕಾರಿಕೊಂಡ ಸನ್ನಿವೇಶವಂತೂ ಕಂಡಿದ್ದಿಲ್ಲ. ರಾಜಕೀಯ ಕಾರಣಗಳಿಗಾಗಿ ಅಂತಹ ವೇದಿಕೆಗಳನ್ನು ಹಂಚಿಕೊಂಡಿದ್ದರೂ ಯಡಿಯೂರಪ್ಪ ಆಂತರ್ಯದಲ್ಲಿ ಧರ್ಮ ದ್ವೇಷದ ಸೋಂಕು ಅಂಟಿಸಿಕೊಂಡವರಲ್ಲ ಎಂಬುದನ್ನು ಒಪ್ಪಲೇ ಬೇಕಾದ ಮಾತು. ಇಂತಹ ಕಾರಣಗಳಿಂದಲೇ ರಾಜ್ಯ ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ ಉಳಿಸಿಕೊಂಡಿರುವವರಲ್ಲಿ ಯಡಿಯೂರಪ್ಪ ಅಗ್ರಮಾನ್ಯರು ಎನ್ನಬಹುದು.

ಕೊರೊನ ಸೋಂಕು ವಿರುದ್ದದ ಹೋರಾಟದ ಜೊತೆಗೆ ಮತಾಂಧರ ಧೋರಣೆಗಳನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲಿನ ಕೆಲಸವೂ ಆಗಿದೆ. ಅದಕ್ಕಾಗಿ ಮಾನಸಿಕವಾಗಿ ಅವರು ಸಿದ್ದರಾದಂತೆ ಕಂಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಆರೆಸ್ಸೆಸ್ಸಿನ ವ್ಯಕ್ತಿಯಾಗಿ ಇಂದು ಉಳಿದಿಲ್ಲ. ಅವರೆಂದೂ ಯಾರ ಕೈಗೊಂಬೆಯಂತೆ ಕೆಲಸ ಮಾಡುವ ಜಯಮಾನದವರೇ ಅಲ್ಲ. ಹಾಗಾಗಿಯೇ ಅವರು ಬಹುತೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರ ಅಸಮಾಧಾನಗಳಿಗೆ ತುತ್ತಾಗುತ್ತಲೆ, ಸ್ಫೋಟಗೊಳ್ಳತ್ತಲೆ ಬಂದಿದ್ದಾರೆ. ರಾಜ್ಯದಲ್ಲಿರುವುದು ಪರಿವಾರ ಪ್ರೇಣಿತ ಬಿಜೆಪಿ ಸರ್ಕಾರವಲ್ಲ. ಹೋರಾಟಗಾರ ಯಡಿಯೂರಪ್ಪ ಅವರ ಸರ್ಕಾರ. ಇದು ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರವನ್ನು ತಮ್ಮ ನಿರ್ಧಾರಗಳಿಗೆ ತಕ್ಕಂತೆ ನಿರ್ದೇಶಿಸುವ ಪರಿವಾರದ ತಲೆಯಾಳುಗಳ ಆಟ ಯಡಿಯೂರಪ್ಪನವರ ಮುಂದೆ ನಡೆಯದ ಕಾರಣವೇ ಅವರೆಲ್ಲಾ ಈಗ ಸರ್ಕಾರ ಮತ್ತು ಪಕ್ಷವನ್ನು ಬೇರ್ಪಡಿಸಿಕೊಂಡು ಯಡಿಯೂರಪ್ಪನವರ ಪದಚ್ಯುತಿಗಾಗಿ ಕಾಯತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತದ ಯಡಿಯೂರಪ್ಪ ಅವರ ಮಾತುಗಳು ಪರಿವಾರದ ತಲೆಯಾಳುಗಳಿಗೆ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ. ಆಟ ಮುಂದಿದೆ.

ಕೊನೆ ಮಾತು:

ಉತ್ತರದ ರಾಜ್ಯಗಳಲ್ಲಿ ದಲಿತರನ್ನು ಭಕ್ತಗಣ ಗುಂಪು ಹತ್ಯೆ ಮಾಡುತ್ತಿರುವಾಗ, ಹತ್ಯಾಚಾರವೆಸಗುತ್ತಿರುವಾಗ, ಐಷಾರಾಮಿ ಕಾರಿಗೆ ಕಟ್ಟಿ ನಡುರಸ್ತೆಯಲ್ಲೇ ಚರ್ಮಸುಲಿದು ಬಡಿಯುತ್ತಿರುವಾಗ ಅಂತಹ ಕೊಲೆಪಾತಕರಿಗೆ ಖಡಕ್ ಆದ ಅಧಿಕಾರಯುಕ್ತ ಎಚ್ಚರಿಕೆಯೊಂದನ್ನು ಕೊಡಬೇಕಾದ ಅಧಿಕಾರ ದಂಡ ಹಿಡಿದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಡಿದ ಹೇಡಿತನದ ಮಾತೇನು ಗೊತ್ತಾ? ಬೇಕಾದರೆ ನನ್ನ ಎದೆಗೆ ಗುಂಡಿಡಿ, ದಲಿತರನ್ನು ಮಾತ್ರ ಕೊಲ್ಲಬೇಡಿ. ಈ ಮಾತು ಒಬ್ಬ ಹೇಡಿ ಮಾತ್ರ ಆಡಬಲ್ಲ. ಅಧಿಕಾರ ದಂಡ ಕೈಯಲ್ಲಿಟ್ಟುಕೊಂಡು ಅವರನ್ನು ಕೊಲ್ಲಬೇಡಿ ನನ್ನನ್ನು ಕೊಲ್ಲಿ ಎಂದು ಹೇಳುವುದು ನ್ಯಾಯ ನಿಷ್ಠುರ, ಕಾನೂನು ಕಾಯಬೇಕಾದ ನಾಯಕನೊಬ್ಬ ಸ್ವತಃ ಕೊಲ್ಲುವ ಕ್ರಿಯೆಯನ್ನು ಮಾನ್ಯ ಮಾಡಿದಂತಲ್ಲವೇ? ಯಾವತ್ತಾದರೂ ಪ್ರಧಾನಿ ಈ ನೆಲದ ಯಾವೊಬ್ಬ ನಾಗರೀಕರನಿಗೂ ಜೀವಹಾನಿ, ಮಾನಹಾನಿ ಆಗಿದ್ದೇ ಆದರೆ ಅಂತಹವರನ್ನು ಕಾನೂನು ಕ್ರಮಗಳಿಂದ ಶಿಕ್ಷಿಸುತ್ತೇನೆ ಎಂದು ಆಡಿದ್ದೇ(ರಾಜಧರ್ಮ ಪಾಲನೆ) ಆಗಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಧರ್ಮದ್ವೇಷ, ಜಾತಿ ದ್ವೇಷದ ರಕ್ತಪಾತಗಳು ಆಗುತ್ತಿರಲಿಲ್ಲವೇನೊ?. ಇಂದು ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಡಿದ ಮಾತನ್ನೇ ಈ ದೇಶದ ಪ್ರಧಾನಮಂತ್ರಿ ಆಡಬೇಕು. ದೀಪ ಹಚ್ಚುವುದು, ಜಾಗಟೆ ಬಾರಿಸುವುದು, ತಪ್ಪಾಳೆ ತಟ್ಟಿ ಬೀದಿಯಲ್ಲಿ ಅರಚಲು ಕರೆ ಕೊಡುವುದನ್ನು ಬಿಟ್ಟು ಅದಕ್ಕಾಗಿ ಮೋದಿ ಈ ಹೊತ್ತಿಗೆ ಯಡಿಯೂರಪ್ಪ ಅವರನ್ನು ರಾಜಧರ್ಮದ ಆದರ್ಶವನ್ನಾಗಿ ಅನುಸರಿಸಲಿ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯದ ವಿರುದ್ದ ಹೋರಾಡುತ್ತಾ ತಮ್ಮ ಯೌವ್ವನದ ಆಯಸ್ಸಿನ ಕಾಲು ಶತಮಾನವನ್ನೆ (೨೭ವರ್ಷ) ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಅವರು ಶಾಂತಿಯಹೋರಾಟದ ಫಲವಾಗಿಯೇ ಆ ದೇಶದ ಅಧ್ಯಕ್ಷರಾದಾಗ ಜಗತ್ತಿನ ಇಡೀ ಬಿಳಿಯರ ಸಾಮ್ರಾಜ್ಯ ಭಯ, ಅತಂಕದಿಂದ ನೆಲ್ಸನ್ ಮಂಡೇಲ ಅವರ ಕಡೆ ನೋಡುತ್ತಿತ್ತು. ಅವರ ಮೊದಲ ಅಧ್ಯಕ್ಷೀಯ ಭಾಷಣಕ್ಕಾಗಿ ಬಿಳಿಯರ ಜಗತ್ತು ಭಯದಿಂದ ಕಾಯುತ್ತಿದ್ದರೆ. ತಮ್ಮ ಮೇಲೆ ಅಮಾನುಷ ಕ್ರೌರ್ಯ ಮೆರೆದ ಬಿಳಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾದು ಕುಂತ ಕರಿಯ ಸಮುದಾಯ ರಣೋತ್ಸಾಹದಿಂದ ತಮ್ಮ ನಾಯಕನ ಸೇಡಿನ ಆದೇಶದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಆದರೆ ಮಂಡಲೇ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅಡಿದ ಮಾತು ಎಂದರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬಿಳಿಯನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಿದ್ದೇ ಆದರೆ ಅದಕ್ಕೆ ಕಾರಣರಾದವರೂ ಯಾರೇ ಇರಲಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂಬುದಾಗಿತ್ತು. ಈ ಕಾರಣಕ್ಕಾಗಿಯೇ ಮಂಡೇಲ ಜಗತ್ತಿನ ಮಾನವತೆಯ ಮಹಾ ಸಂತನಂತೆ ಚರಿತ್ರೆಯಲ್ಲಿ ಉಳಿದು ಹೋಗಿದ್ದಾರೆ.
ಚರಿತ್ರೆಯನ್ನು ಅರಿಯದವನು ಚರಿತ್ರೆಯನ್ನು ಸೃಷ್ಟಿಸಲಾರ.
ಎಲ್ಲಿಯ ಮಂಡೇಲ.. ? ಎಲ್ಲಿಯ ಯಡಿಯೂರಪ್ಪ…? ಎಲ್ಲಿಯ ಮೋದಿ.?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...