Homeಮುಖಪುಟಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು.

- Advertisement -
- Advertisement -

ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಮುಸ್ಲಿಮರ ಭಾವನೆಗಳನ್ನು ನೋಯಿಸಿದ ಆರೋಪದ ನಂತರ ಅಪರೂಪಕ್ಕೆ ಬೇಷರತ್‌ ಕ್ಷಮೆಯಾಚಿಸಿದೆ. ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿಯಾದ ಸುದ್ದಿ ಪ್ರಸಾರ ಮಾಡಿ ಸಿಕ್ಕಿಬಿದ್ದ ನಂತರ ಅರ್ನಬ್‌ ಗೋಸ್ವಾಮಿಯ ಚಾನೆಲ್‌ನ ಅಸಾಧಾರಣ ಕ್ಷಮೆಯಾಚನೆಯು ಹೊರಬಿದ್ದಿದೆ.

ರಿಪಬ್ಲಿಕ್‌ ಟಿವಿಯಲ್ಲಿ ಜಮಾತ್-ಇ-ಇಸ್ಲಾಮಿ ಭಾರತದ ಮುಖ್ಯಸ್ಥ ಮೌಲಾನಾ ಜಲಾಲುದ್ದೀನ್ ಉಮ್ರಿ ಭಯೋತ್ಪಾದಕ ಎಂದು ಸುಳ್ಳು ಆರೋಪವನ್ನು ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ನಂತರ ರಿಪಬ್ಲಿಕ್ ಟಿವಿಯು ಕ್ಷಮೆಯಾಚಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವಾರು ಮುಸ್ಲಿಂ ಗುಂಪುಗಳು ರಿಪಬ್ಲಿಕ್‌ ಮತ್ತು ಸಿಎನ್‌ಎನ್-ನ್ಯೂಸ್ 18 ಚಾನೆಲ್‌‌ಗಳ ಸುಳ್ಳು ಸುದ್ದಿ ಹರಡುವ ಕೃತ್ಯವನ್ನು ಖಂಡಿಸಿ ಪತ್ರವೊಂದನ್ನು ಬರೆದಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ. ಎಐಎಂಪಿಎಲ್‌ಬಿಯ ಪತ್ರದಲ್ಲಿ “ಸಿಎನ್‌ಎನ್-ನ್ಯೂಸ್ 18 ಚಾನೆಲ್‌ ಮುಸ್ಲಿಮರಿಗೆ ಪವಿತ್ರವಾದ ಮೂರು ತಾಣಗಳನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ‘ಭಯೋತ್ಪಾದಕ ಕಾರ್ಖಾನೆ’ಗೆ ಸಂಬಂಧಿಸಿವೆ ಎಂದು ತೋರಿಸುವ ಮೂಲಕ ಧರ್ಮನಿಂದನೆ ಮಾಡಿದ್ದನ್ನು ಖಂಡಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಕುರಿತು ಟ್ವಿಟ್ಟರ್‌ನಲ್ಲಿ “ಎಐಎಂಪಿಎಲ್‌ಬಿಯ ಉಪಾಧ್ಯಕ್ಷ ಎಂ.ಎಲ್.ಜಲಾಲುದ್ದೀನ್ ಉಮ್ರಿಯವರನ್ನು ರಿಪಬ್ಲಿಕ್‌ ಟಿವಿಯು ಭಯೋತ್ಪಾದಕನೆಂದು ಸುಳ್ಳು ಆರೋಪಿಸಿದ್ದಕ್ಕಾಗಿ ತೀವ್ರವಾಗಿ ಖಂಡಿಸುತ್ತೇವೆ. ಮೆಕ್ಕಾ, ಮದೀನಾ ಮತ್ತು ಕುಡ್ಸ್‌ನ ಕುರಿತು ಧರ್ಮನಿಂದನೆ ಮಾಡಿದ್ದಕ್ಕೆ CNNnews18 ನ ಕ್ರಮವನ್ನು ಖಂಡಿಸುತ್ತೇವೆ. ಈ ಕುರಿತು ಸಾರ್ವಜನಿಕವಾಗಿ ಎರಡು ಚಾನೆಲ್‌ಗಳು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು. ಅದರ ಟ್ವೀಟ್‌ನಲ್ಲಿ, “ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವನ್ನು ತಪ್ಪಾಗಿ ಪ್ರಸಾರ ಮಾಡಿದ್ದಕ್ಕಾಗಿ ಸ್ಪಷ್ಟೀಕರಣ ಮತ್ತು ಕ್ಷಮೆಯಾಚನೆಯನ್ನು ರಿಪಬ್ಲಿಕ್ ಟಿವಿಯಲ್ಲಿ ಸಂಜೆ 4:03 ಕ್ಕೆ ಪ್ರಸಾರ ಮಾಡಲಾಯಿತು. ಇದು ಅಜಾಗರೂಕ ದೋಷವಾಗಿದ್ದು, ಸಂಬಂಧಪಟ್ಟ ವೀಡಿಯೊದಲ್ಲಿ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವು ನಮ್ಮ ತಪ್ಪಾಗಿ ಪ್ರಸಾರವಾಯಿತು ಮತ್ತು ತಕ್ಷಣ ಸರಿಪಡಿಸಲಾಗಿದೆ”

ಅದರ ನಂತರದ ಟ್ವೀಟ್‌ನಲ್ಲಿ, “ರಿಪಬ್ಲಿಕ್ ಟಿವಿ ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತದೆ” ಎಂದು ಬರೆದಿದೆ.

ರಿಪಬ್ಲಿಕ್ ಟಿವಿ ತನ್ನ ವೆಬ್‌ಸೈಟ್‌ನಿಂದ ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿರುವಂತೆ ತೋರುತ್ತಿದೆ ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ವಿರುದ್ಧ ಸರಕಾರದ ದಬ್ಬಾಳಿಕೆಯ ಕುರಿತಾದ ತನ್ನ ವರದಿಯನ್ನು ನವೀಕರಿಸಿದೆ. ಕಣಿವೆಯ ಜಮಾತೆ-ಇ-ಇಸ್ಲಾಮಿ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಿಎನ್ಎನ್-ನ್ಯೂಸ್ 18 ಚಾನೆಲ್‌ನ ಅವಾಂತರಗಳು

ಮತ್ತೊಂದೆಡೆ, ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಒಡೆತನದ ಚಾನೆಲ್ ಸಿಎನ್ಎನ್-ನ್ಯೂಸ್ 18 ಚಾನೆಲ್‌ ಇನ್ನಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಚಾನೆಲ್‌ ವಿಶ್ವದಾದ್ಯಂತ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಎಐಎಂಪಿಎಲ್‌ಬಿಯು ಆರೋಪಿಸಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಆಸ್ತಿ ವಿವರಗಳನ್ನು ಚಾನೆಲ್ ಶನಿವಾರ ತನ್ನ ಪ್ರಸಾರದಲ್ಲಿ ತಿಳಿಸಿದೆ. ಆಗ ಅದು ‘ಬಹವಾಲ್‌ಪುರದ ಜೆಎಂ ಭಯೋತ್ಪಾದಕ ಕಾರ್ಖಾನೆ’ ಎಂಬ ಮುಖ್ಯಾಂಶಗಳನ್ನು ಪ್ರಸಾರ ಮಾಡುತ್ತಿರುವಾಗ, ಮೆಕ್ಕಾದ ಬೃಹತ್‌ ಮಸೀದಿಯ ಫೋಟೋಗಳನ್ನು ತೋರಿಸಿದೆ. ಮದೀನಾದ ಮಸೀದಿ ಮತ್ತು ಅಲ್-ಅಕ್ಸಾವನ್ನು ಕೂಡ ಅಜರ್‌ನ ಭಯೋತ್ಪಾದಕ ಕಾರ್ಖಾನೆಯ ಭಾಗವೆಂದು ಪ್ರಸಾರ ಮಾಡಿದೆ. ಈ ಮಸೀದಿಗಳನ್ನು ವಿಶ್ವದಾದ್ಯಂತ ಮುಸ್ಲಿಮರಿಗೆ ಮೂರು ಅತ್ಯಂತ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ.

ಎಐಎಂಪಿಎಲ್‌ಬಿಯ ಪತ್ರವು ಸಿಎನ್ಎನ್-ನ್ಯೂಸ್ 18 ರ ನ್ಯೂಸ್ ಫ್ಲ್ಯಾಷ್ ಅನ್ನು ಚೇಷ್ಟೆಯೆಂದು, ಇಸ್ಲಾಂ ಧರ್ಮವನ್ನು ಕೆಣಕಲು ಮತ್ತು ಮುಸ್ಲಿಮರನ್ನು ಕೆರಳಿಸಲು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದೆ. ಜಗತ್ತಿನಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಂಬಲಾಗದಷ್ಟು ಕೋಮುಪ್ರಚೋದನೆಯ ಪ್ರಸಾರಕ್ಕಾಗಿ ಚಾನೆಲ್ ಇನ್ನೂ ಕ್ಷಮೆಯಾಚಿಸಿಲ್ಲ. ಇಸ್ಲಾಂ ಧರ್ಮದ ಮೂರು ಪವಿತ್ರ ತಾಣಗಳ ಚಿತ್ರಗಳನ್ನು ‘ಜೆಎಂ ಭಯೋತ್ಪಾದಕ ಅಂಶ’ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರ ಮಾಡುವ ಮೂಲಕ, ಚಾನೆಲ್ ಮುಸ್ಲಿಮರನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸಿದೆ.

ಒಟ್ಟಿನಲ್ಲಿ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಸುದ್ದಿ ಹರಡುವಲ್ಲಿ ನಿರತವಾಗಿವೆ. ಆ ಮೂಲಕ ಪತ್ರಿಕೋದ್ಯಮದ ಮೂಲ ಆಶಯಗಳನ್ನು ಮಣ್ಣು ಮಾಡುತ್ತಿವೆ. ಆದರೆ ಇದರ ವಿರುದ್ಧ ದೂರು ನೀಡುವ, ಸುಳ್ಳುಗಳನ್ನು ಬಯಲು ಮಾಡುವ ಕೆಲಸವೂ ಕೂಡ ನಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.

ಕೃಪೆ: ಜನತಕಾರಿಪೋರ್ಟರ್‌

(ಈ ಲೇಖನ 2019ರ ಮಾರ್ಚ್‌ 3 ರಂದು ಜನತಕಾರಿಪೋರ್ಟರ್‌ನಲ್ಲಿ ಪ್ರಕಟವಾಗಿದ್ದು. ಮಾಧ್ಯಮಗಳು ಹೇಗೆ ಸುಳ್ಳು ಹಬ್ಬಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿದ್ದರಿಂದ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ)


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಭಾರತದ ದೇಶದಲ್ಲಿನ ಮಾಧ್ಯಮದ ಸೂ……ಮಕ್ಕಳು ಹೀಗೆ ಸುಮ್ಮನೆ ಸುಳ್ಳಿನ ಸುದ್ದಿ ಹರಡಿ ಭಾರತದ ದೇಶವನ್ನು ಛಿದ್ರ ಛಿದ್ರ ಛಿದ್ರವಾಗಿ ಮಾಡಿದರೆ……ಇದಕ್ಕೆ ಮೂಲ ಪುರುಷನೇ ನರೇಂದ್ರ ಮೋದಿ ಅವನು ಗೆಲ್ಲಲು ಮುಖ್ಯ ಕಾರಣ 2 ಜಿ ಸ್ಪ್ರೆಕ್ಟ್ರಂ ಅದು ನಮಗೆ ಮಹಾನಾಯಕ ಸುಳ್ಳು ಎಂದೂ ಅಂದೇ ಅದರ ಬಗ್ಗೆ ಲೇಖನವೇ ಬರೆದಿದ್ದೇ, ಒಬ್ಬ ಸಾಮಾನ್ಯ ದಲಿತ ನಾಯಕನು ಅಷ್ಟು ದೊಡ್ಡ ಹಗರಣವನ್ನು ಮಾಡಲು 1,76,000 ಲಕ್ಷ ಕೋಟಿ ರೂ ಹಗರಣವನ್ನು ಸಾಧ್ಯವಿಲ್ಲವೆಂದು, ಆ ಹಣವನ್ನು ಇಡಲೂ ಸಹ ದಾರಿ ಅರಿಯಲು ಸಾಧ್ಯವಿಲ್ಲವೆಂದು. ಜೊತೆಗೆ ಆತ ಹೊಸಬ ಬಡತನದಿಂದಲೀ ಕುಗ್ರಾಮದಿಂದಲೀ ಬಂದವನು. ಜೊತೆಗೆ ಹಾಗೆಯೇ ಕದ್ದದ್ದು ನಿಜವೇ ಆದರೇ, ತನ್ನ ಗ್ರಾಮದಲ್ಲಿ ಜಮೀನನ್ನು ಕೆಲವೇ ಕೆಲವರು ಬೆರಳೆಣಿಕೆಯಷ್ಟು ಆಸ್ತಿ ಮಾಡಲೇ ಬೇಕಿತ್ತು. ಹೋಗಲೀ ಅವನದು ಜೀವನ ಬಾಳ್ವೇ ಐದು ಪೈಸೆಯಾದರು ಬದಲಾಗಲೇಬೇಕಿತ್ತು. ಜೊತೆಗೆ ಅಗಾಧವಾದ ಜ್ಞಾನವು ಚತುರತೆಯೂ ಮೋಸವು ಗೊತ್ತಿರಬೇಕಿತ್ತು. ಹೋಗಲೀ ಮನ ಮೋಹನ್ ಸಿಂಗ್ ರವರನ್ನು ಹೆದರಿಯಿರಬೇಕಿತ್ತು. ಆದರೇ, ಪ್ರಧಾನಿಗೇ ಗೌರವಿಸದ ಅಹಂ ಇರಬೇಕಾದರೇ ಅದರಲ್ಲಿ ಸತ್ಯ ನ್ಯಾಯ ಧರ್ಮ ನೀತಿ ನಿಯಮ ಇತ್ತು. ಅದಕ್ಕೆ ಮೊದಲು ಸ್ವಾಭಿಮಾನ ಸ್ವಂತಿಕೆಯೇ ತುಂಬಿದ್ದೇ ಕಂಡಿದ್ದೇವು.

    ಬರೆಯಲು ಬಹಳಷ್ಟು ಇದೇ ಸದ್ಯಕ್ಕೆ ಬೇಡ ನಿಲ್ಲಿಸುವೇ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...