Homeಅಂಕಣಗಳುಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

ಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

- Advertisement -
- Advertisement -

ಈಗ ಬದುಕಿರುವ ಯಾರ ನೆನಪಿನಲ್ಲೂ ಉಳಿದುಕೊಂಡಿರದ ರೀತಿಯ ವಿದ್ಯಮಾನದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಇಡೀ ದುನಿಯಾ ತನ್ನ ಮಾಮೂಲಿನ ಅಭ್ಯಾಸಗಳನ್ನೆಲ್ಲಾ ಬದಿಗಿಟ್ಟಿದೆ. ಕಣ್ಣಿಗೆ ಕಾಣದ, ಆದರೆ ಇದೆಯೆಂದು ಲಕ್ಷಾಂತರ (ಇಂದಿಗೆ 2 ಲಕ್ಷ 18 ಸಾವಿರ) ಸಾವುಗಳ ಮೂಲಕ ಎಲ್ಲರಿಗೂ ಖಚಿತವಾಗಿಸಿರುವ ವೈರಸ್ ಒಂದು ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಇದು ಎಲ್ಲೆಡೆ ಆವರಿಸುತ್ತಿದ್ದಂತೆ ಜನರು ಫಿಲಾಸಫಿಕಲ್ ಮಾತುಗಳನ್ನಾಡಲು ಆರಂಭಿಸಿದ್ದರು. ಪ್ರತಿನಿತ್ಯ ಸಾವಿರಾರು ಕಿ.ಮೀ.ಗಳನ್ನು ಪ್ರಯಾಣಿಸುತ್ತಿದ್ದವರು, ಗಿಜಿಗಿಜಿಗುಡುತ್ತಿದ್ದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು, ವೈಭವೋಪೇತವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಔತಣಕೂಟಗಳನ್ನು ಆಯೋಜಿಸುತ್ತಿದ್ದವರು, ಲಕ್ಷ ಲಕ್ಷ ಜನರನ್ನು ಸೇರಿಸಿ ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಅಥವಾ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದವರು ಎಲ್ಲರೂ ಕೆಲವೇ ಜನರನ್ನು ನೋಡಿಕೊಂಡು ಕಾಲ ಹಾಕಬೇಕು ಮತ್ತು ಕೆಲವು ಕಿ.ಮೀ.ಗಳಾಚೆ ಪ್ರಯಾಣವನ್ನು ಮಾಡಬಾರದು. ಅಂದರೆ ಮನುಷ್ಯರು ಸಾಧಿಸಿದ ವೇಗ, ಬೆಳವಣಿಗೆ, ಗಳಿಸಿದ ಸಂಪತ್ತು ಎಲ್ಲವೂ ನಿರರ್ಥಕವೆನಿಸುವಂತಾಯಿತು.

ಖಂಡಾಂತರಗಳನ್ನು ದಾಟಿ ಹಬ್ಬಿದ ಸೋಂಕು ಮನುಷ್ಯರನ್ನು ಜನಾಂಗ, ಪ್ರದೇಶ, ಜಾತಿ, ಧರ್ಮ, ಲಿಂಗ ಯಾವುದನ್ನೂ ಪ್ರತ್ಯೇಕ ಮಾಡಿ ನೋಡಲಿಲ್ಲ. ಪರಸ್ಪರ ಎದುರಾಳಿಗಳಾಗಿ ನಿಂತಿರುವ ಚೀನಾ ಮತ್ತು ಅಮೆರಿಕಾಗಳೆರಡನ್ನೂ ದೊಡ್ಡ ಮಟ್ಟದಲ್ಲಿ ಬಾಧಿಸಿತು. ಮೊದಮೊದಲು ವಿಮಾನಗಳಲ್ಲಿ ಓಡಾಡಿದವರಿಗೆ ಮತ್ತು ಅವರ ಬಂಧುಬಾಂಧವರಿಗೆ ಹೆಚ್ಚು ಹತ್ತಿಕೊಂಡಿತಾದರೂ, ಅದೀಗ ಧಾರಾವಿಯಂತಹ ಸ್ಲಂಗಳನ್ನು ಆವರಿಸುತ್ತಿದೆ. ಶ್ರೀಮಂತರು ತಂದ ರೋಗವೆಂದು ಹಂಗಿಸಬಹುದಾದರೂ, ಕಿಷ್ಕಿಂಧೆಗಳಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವವರನ್ನೇ ಹೆಚ್ಚು ಬಲಿ ತೆಗೆದುಕೊಳ್ಳಬಹುದೇ ಎಂಬ ಆತಂಕ ಕಾಡುತ್ತಿದೆ.

ಇದು ನಮ್ಮ ಇಂದಿನ ಬದುಕುವ ರೀತಿ, ಉಳ್ಳವರು ಅಭ್ಯಾಸ ಮಾಡಿಸಿದ ಬದುಕಿನ ನೀತಿಗಳ ಕಾರಣಕ್ಕೇ ಆವರಿಸುತ್ತಿದೆ ಎಂದು ಹೇಳಲು ಕಾರಣಗಳಿದ್ದವು. ಪಟ್ಟಣಗಳು, ಬೃಹತ್ ನಗರಗಳು, ಶ್ರೀಮಂತ ದೇಶಗಳನ್ನೇ ಇದುವರೆಗೆ ಹೆಚ್ಚು ಬಾಧಿಸಿವೆ. ಹಳ್ಳಿಗಳು, ಗುಡ್ಡಗಾಡುಗಳು ಈಗಲೂ ಅಷ್ಟು ತೊಂದರೆಗೊಳಗಾಗಿಲ್ಲ. ಹೀಗಾಗಿ ಮನುಷ್ಯರ ಲೋಭ, ಮೋಹ, ತೀರದ ದಾಹಗಳ ಕುರಿತಾಗಿ ಇವು ಪ್ರಶ್ನೆಗಳನ್ನೆತ್ತಬಹುದು; ವಿಶ್ವಮಾನವ ಪ್ರಜ್ಞೆಯೊಂದಿಗೆ ಸ್ಥಳೀಯವಾಗಿಯೇ ಬದುಕುವ ಉತ್ತರಗಳನ್ನೂ ಈಯಬಹುದು ಎಂದು ಭಾವಿಸುವ ರೀತಿಯಲ್ಲಿ ವಿಶ್ವವ್ಯಾಪಕವಾದ ಕೊರೊನಾ ಸೋಂಕು ಮೆದುಳಿಗೆ ಕೈ ಹಾಕಿತ್ತು.

ಆದರೆ, ನೋಡನೋಡುತ್ತಿದ್ದಂತೆ ಕೊರೋನಾ ಪೂರ್ವದಲ್ಲಿ ನಮ್ಮೊಳಗಿದ್ದ ಎಲ್ಲಾ ಹುಳುಕು-ಕೆಡುಕುಗಳು ಭುಗಿಲೆದ್ದವು. ಚೀನಾ ವಿರೋಧಕ್ಕೆ ಬಳಸಿಕೊಂಡಿದ್ದು, ಮುಸ್ಲಿಂ ದೂಷಣೆ ಮಾಡಿದ್ದು, ಬಡವರ ಬದುಕನ್ನು ನಿಕೃಷ್ಟವಾಗಿಸಿದ್ದು, ಮನೆಯಲ್ಲಿ ದುಡಿವ ಹೆಣ್ಣುಮಕ್ಕಳ ಬದುಕನ್ನು ಮತ್ತಷ್ಟು ಕಟುವಾಗಿಸಿದ್ದು, ಹಿಂದುಳಿದ ಪ್ರದೇಶಗಳು, ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಳ್ಳಿಯಿಂದ ರೈಲು ಹತ್ತಿ ನಗರಮುಖಿಗಳಾಗಿದ್ದ ಶೋಷಿತ ಸಮುದಾಯಗಳು ಕಾಲ್ನಡಿಗೆಯಲ್ಲಿ ದಾರಿ ಸವೆಸಬೇಕಾಗಿದ್ದು ಎಲ್ಲವೂ ಕೊರೋನಾ ಪೂರ್ವದ ಸಮಾಜದ ನೀತಿಗನುಗುಣವಾಗಿಯೇ ಇದೆ. ಸೂಪರ್ ಪವರ್‍ಗಳು ಮತ್ತು ಸೂಪರ್ ಪವರ್‍ಗಳಾಗಬಯಸುವವರು ತಮ್ಮ ತಮ್ಮ ದಾಳಗಳನ್ನು ಉರುಳಿಸಿಯೇ ಬಿಟ್ಟರು; ತನ್ನ ಜನರನ್ನು ಸರ್ವಾಧಿಕಾರದ ಬಿಗಿಮುಷ್ಟಿಯಲ್ಲಿಟ್ಟಿರುವ ಚೀನಾ ಈಗಲೂ ಪ್ರಪಂಚದೆಲ್ಲೆಡೆ ತನ್ನ ಪಾರಮ್ಯ ಮೆರೆಯಲು ಪ್ರಯತ್ನಿಸುತ್ತಿದ್ದಂತಿದೆ; ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ. ನಡೆಯುತ್ತಿರುವವರ ಅಣ್ಣ ತಮ್ಮಂದಿರೇ ಮೋದಿಯೇ ವಿಶ್ವಗುರು ಎಂದು ಅಬ್ಬರಿಸುತ್ತಿದ್ದಾರೆ.

ಸುಳ್ಳು-ಅಪಪ್ರಚಾರಗಳು, ಸರ್ಕಾರದ ಸಾಂಕೇತಿಕ ಹೊಂದಾಣಿಕೆಗಳು, ದುಷ್ಟವಾಹಿನಿ ಮಾಧ್ಯಮಗಳ ಹಸೀ ಅವಾಂತರಗಳೆಲ್ಲವೂ ಇನ್ನಷ್ಟು ಬಲಪಡೆದುಕೊಂಡಿವೆ.

ಇದರ ಮಧ್ಯೆಯೇ ಅದೆಷ್ಟೋ ಜನರು ನೊಂದವರಿಗೆ ಸಹಾಯ ಮಾಡಲೂ ಮುಂದಾಗುತ್ತಿದ್ದಾರೆ. ಈ ಹೊತ್ತು ಯಾವ ರೀತಿ ಆಂದೋಲನ ಕಟ್ಟಬಹುದು ಗೊತ್ತಾಗದೇ ಎಲ್ಲಾ ಹೋರಾಟಗಾರರು ಸಾಂಕೇತಿಕ ಕಾರ್ಯಕ್ರಮಗಳನ್ನು ಆನ್‍ಲೈನ್‍ನಲ್ಲಿ ಮಾಡಿಕೊಂಡು ಬಹಳ ಬ್ಯುಸಿಯಾಗಿದ್ದಂತಿದೆ.

ಇವೆಲ್ಲದರ ಮಧ್ಯೆ ಹೊಸತನ, ಹೊಸ ನೀತಿ, ಹೊಸ ಮೌಲ್ಯಗಳು ಚಿಗುರಬಹುದೇ? ಕೊರೋನೋತ್ತರ ಜಗತ್ತಿನಲ್ಲಿ ಏನೇ ಪರಿಮಾಣಾತ್ಮಕ ಬದಲಾವಣೆ ಬಂದರೂ ಹಳೆಯ ಜೀವ ವಿರೋಧಿ ಮೌಲ್ಯಗಳು ಕೊಳೆತು ನಾಶವಾಗಬಲ್ಲುದೇ? ಇಲ್ಲಿಯವರೆಗಿನ ಬೆಳವಣಿಗೆಗಳು ಅಂತಹ ಭರವಸೆಯನ್ನೇನೂ ಮೂಡಿಸುತ್ತಿಲ್ಲ. ಹೊಸದೇ ಆದ ಶಕ್ತಿಯೊಂದು ಇದರ ಮಧ್ಯೆಯೇ ಉದ್ಭವಿಸಿ, ತಲ್ಲಣ ತರದ ಹೊರತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Demonetisation ಆದಾಗ, ಕೆಲಸ ಕಳೆದುಕೊಂಡ ಹೆಚ್ಚಿನ ಮಂದಿ ಇಂದು ನಡೆದು ತಮ್ಮೂರತ್ತ ತೆರಳುತ್ತಿದ್ದಾರೆ.ಇದಕ್ಕೆ ಎಡೆಮಾಡಿದ ಮೋದಿ ವಿ.ಗುರು!
    ಹಿಂದೆ ಆಳ್ವಿಕೆ ಮಾಡಿದವರು ಹೇಗೆ ಮಂದಿಯನ್ನು ಕಂಗೆಡಿಸಿರಬಹುದು‌.
    ಇದಕ್ಕೆಲ್ಲಾ ಮೀಡಿಯಾಗಳನ್ನು ಗುರಿಮಾಡಬೇಕಾ!!!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...