Homeಅಂಕಣಗಳುಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

ಕೊರೋನೋತ್ತರ ಕಾಲ ಎಷ್ಟು ಭಿನ್ನವಾಗಿರಲಿದೆ?

- Advertisement -
- Advertisement -

ಈಗ ಬದುಕಿರುವ ಯಾರ ನೆನಪಿನಲ್ಲೂ ಉಳಿದುಕೊಂಡಿರದ ರೀತಿಯ ವಿದ್ಯಮಾನದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಇಡೀ ದುನಿಯಾ ತನ್ನ ಮಾಮೂಲಿನ ಅಭ್ಯಾಸಗಳನ್ನೆಲ್ಲಾ ಬದಿಗಿಟ್ಟಿದೆ. ಕಣ್ಣಿಗೆ ಕಾಣದ, ಆದರೆ ಇದೆಯೆಂದು ಲಕ್ಷಾಂತರ (ಇಂದಿಗೆ 2 ಲಕ್ಷ 18 ಸಾವಿರ) ಸಾವುಗಳ ಮೂಲಕ ಎಲ್ಲರಿಗೂ ಖಚಿತವಾಗಿಸಿರುವ ವೈರಸ್ ಒಂದು ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಇದು ಎಲ್ಲೆಡೆ ಆವರಿಸುತ್ತಿದ್ದಂತೆ ಜನರು ಫಿಲಾಸಫಿಕಲ್ ಮಾತುಗಳನ್ನಾಡಲು ಆರಂಭಿಸಿದ್ದರು. ಪ್ರತಿನಿತ್ಯ ಸಾವಿರಾರು ಕಿ.ಮೀ.ಗಳನ್ನು ಪ್ರಯಾಣಿಸುತ್ತಿದ್ದವರು, ಗಿಜಿಗಿಜಿಗುಡುತ್ತಿದ್ದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು, ವೈಭವೋಪೇತವಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಔತಣಕೂಟಗಳನ್ನು ಆಯೋಜಿಸುತ್ತಿದ್ದವರು, ಲಕ್ಷ ಲಕ್ಷ ಜನರನ್ನು ಸೇರಿಸಿ ರಾಜಕೀಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದವರು ಅಥವಾ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದವರು ಎಲ್ಲರೂ ಕೆಲವೇ ಜನರನ್ನು ನೋಡಿಕೊಂಡು ಕಾಲ ಹಾಕಬೇಕು ಮತ್ತು ಕೆಲವು ಕಿ.ಮೀ.ಗಳಾಚೆ ಪ್ರಯಾಣವನ್ನು ಮಾಡಬಾರದು. ಅಂದರೆ ಮನುಷ್ಯರು ಸಾಧಿಸಿದ ವೇಗ, ಬೆಳವಣಿಗೆ, ಗಳಿಸಿದ ಸಂಪತ್ತು ಎಲ್ಲವೂ ನಿರರ್ಥಕವೆನಿಸುವಂತಾಯಿತು.

ಖಂಡಾಂತರಗಳನ್ನು ದಾಟಿ ಹಬ್ಬಿದ ಸೋಂಕು ಮನುಷ್ಯರನ್ನು ಜನಾಂಗ, ಪ್ರದೇಶ, ಜಾತಿ, ಧರ್ಮ, ಲಿಂಗ ಯಾವುದನ್ನೂ ಪ್ರತ್ಯೇಕ ಮಾಡಿ ನೋಡಲಿಲ್ಲ. ಪರಸ್ಪರ ಎದುರಾಳಿಗಳಾಗಿ ನಿಂತಿರುವ ಚೀನಾ ಮತ್ತು ಅಮೆರಿಕಾಗಳೆರಡನ್ನೂ ದೊಡ್ಡ ಮಟ್ಟದಲ್ಲಿ ಬಾಧಿಸಿತು. ಮೊದಮೊದಲು ವಿಮಾನಗಳಲ್ಲಿ ಓಡಾಡಿದವರಿಗೆ ಮತ್ತು ಅವರ ಬಂಧುಬಾಂಧವರಿಗೆ ಹೆಚ್ಚು ಹತ್ತಿಕೊಂಡಿತಾದರೂ, ಅದೀಗ ಧಾರಾವಿಯಂತಹ ಸ್ಲಂಗಳನ್ನು ಆವರಿಸುತ್ತಿದೆ. ಶ್ರೀಮಂತರು ತಂದ ರೋಗವೆಂದು ಹಂಗಿಸಬಹುದಾದರೂ, ಕಿಷ್ಕಿಂಧೆಗಳಲ್ಲಿ ಬದುಕಬೇಕಾದ ಅನಿವಾರ್ಯತೆಯಿರುವವರನ್ನೇ ಹೆಚ್ಚು ಬಲಿ ತೆಗೆದುಕೊಳ್ಳಬಹುದೇ ಎಂಬ ಆತಂಕ ಕಾಡುತ್ತಿದೆ.

ಇದು ನಮ್ಮ ಇಂದಿನ ಬದುಕುವ ರೀತಿ, ಉಳ್ಳವರು ಅಭ್ಯಾಸ ಮಾಡಿಸಿದ ಬದುಕಿನ ನೀತಿಗಳ ಕಾರಣಕ್ಕೇ ಆವರಿಸುತ್ತಿದೆ ಎಂದು ಹೇಳಲು ಕಾರಣಗಳಿದ್ದವು. ಪಟ್ಟಣಗಳು, ಬೃಹತ್ ನಗರಗಳು, ಶ್ರೀಮಂತ ದೇಶಗಳನ್ನೇ ಇದುವರೆಗೆ ಹೆಚ್ಚು ಬಾಧಿಸಿವೆ. ಹಳ್ಳಿಗಳು, ಗುಡ್ಡಗಾಡುಗಳು ಈಗಲೂ ಅಷ್ಟು ತೊಂದರೆಗೊಳಗಾಗಿಲ್ಲ. ಹೀಗಾಗಿ ಮನುಷ್ಯರ ಲೋಭ, ಮೋಹ, ತೀರದ ದಾಹಗಳ ಕುರಿತಾಗಿ ಇವು ಪ್ರಶ್ನೆಗಳನ್ನೆತ್ತಬಹುದು; ವಿಶ್ವಮಾನವ ಪ್ರಜ್ಞೆಯೊಂದಿಗೆ ಸ್ಥಳೀಯವಾಗಿಯೇ ಬದುಕುವ ಉತ್ತರಗಳನ್ನೂ ಈಯಬಹುದು ಎಂದು ಭಾವಿಸುವ ರೀತಿಯಲ್ಲಿ ವಿಶ್ವವ್ಯಾಪಕವಾದ ಕೊರೊನಾ ಸೋಂಕು ಮೆದುಳಿಗೆ ಕೈ ಹಾಕಿತ್ತು.

ಆದರೆ, ನೋಡನೋಡುತ್ತಿದ್ದಂತೆ ಕೊರೋನಾ ಪೂರ್ವದಲ್ಲಿ ನಮ್ಮೊಳಗಿದ್ದ ಎಲ್ಲಾ ಹುಳುಕು-ಕೆಡುಕುಗಳು ಭುಗಿಲೆದ್ದವು. ಚೀನಾ ವಿರೋಧಕ್ಕೆ ಬಳಸಿಕೊಂಡಿದ್ದು, ಮುಸ್ಲಿಂ ದೂಷಣೆ ಮಾಡಿದ್ದು, ಬಡವರ ಬದುಕನ್ನು ನಿಕೃಷ್ಟವಾಗಿಸಿದ್ದು, ಮನೆಯಲ್ಲಿ ದುಡಿವ ಹೆಣ್ಣುಮಕ್ಕಳ ಬದುಕನ್ನು ಮತ್ತಷ್ಟು ಕಟುವಾಗಿಸಿದ್ದು, ಹಿಂದುಳಿದ ಪ್ರದೇಶಗಳು, ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಳ್ಳಿಯಿಂದ ರೈಲು ಹತ್ತಿ ನಗರಮುಖಿಗಳಾಗಿದ್ದ ಶೋಷಿತ ಸಮುದಾಯಗಳು ಕಾಲ್ನಡಿಗೆಯಲ್ಲಿ ದಾರಿ ಸವೆಸಬೇಕಾಗಿದ್ದು ಎಲ್ಲವೂ ಕೊರೋನಾ ಪೂರ್ವದ ಸಮಾಜದ ನೀತಿಗನುಗುಣವಾಗಿಯೇ ಇದೆ. ಸೂಪರ್ ಪವರ್‍ಗಳು ಮತ್ತು ಸೂಪರ್ ಪವರ್‍ಗಳಾಗಬಯಸುವವರು ತಮ್ಮ ತಮ್ಮ ದಾಳಗಳನ್ನು ಉರುಳಿಸಿಯೇ ಬಿಟ್ಟರು; ತನ್ನ ಜನರನ್ನು ಸರ್ವಾಧಿಕಾರದ ಬಿಗಿಮುಷ್ಟಿಯಲ್ಲಿಟ್ಟಿರುವ ಚೀನಾ ಈಗಲೂ ಪ್ರಪಂಚದೆಲ್ಲೆಡೆ ತನ್ನ ಪಾರಮ್ಯ ಮೆರೆಯಲು ಪ್ರಯತ್ನಿಸುತ್ತಿದ್ದಂತಿದೆ; ಕಾಲ್ನಡಿಗೆಯಲ್ಲಿ ನೂರಾರು ಕಿ.ಮೀ. ನಡೆಯುತ್ತಿರುವವರ ಅಣ್ಣ ತಮ್ಮಂದಿರೇ ಮೋದಿಯೇ ವಿಶ್ವಗುರು ಎಂದು ಅಬ್ಬರಿಸುತ್ತಿದ್ದಾರೆ.

ಸುಳ್ಳು-ಅಪಪ್ರಚಾರಗಳು, ಸರ್ಕಾರದ ಸಾಂಕೇತಿಕ ಹೊಂದಾಣಿಕೆಗಳು, ದುಷ್ಟವಾಹಿನಿ ಮಾಧ್ಯಮಗಳ ಹಸೀ ಅವಾಂತರಗಳೆಲ್ಲವೂ ಇನ್ನಷ್ಟು ಬಲಪಡೆದುಕೊಂಡಿವೆ.

ಇದರ ಮಧ್ಯೆಯೇ ಅದೆಷ್ಟೋ ಜನರು ನೊಂದವರಿಗೆ ಸಹಾಯ ಮಾಡಲೂ ಮುಂದಾಗುತ್ತಿದ್ದಾರೆ. ಈ ಹೊತ್ತು ಯಾವ ರೀತಿ ಆಂದೋಲನ ಕಟ್ಟಬಹುದು ಗೊತ್ತಾಗದೇ ಎಲ್ಲಾ ಹೋರಾಟಗಾರರು ಸಾಂಕೇತಿಕ ಕಾರ್ಯಕ್ರಮಗಳನ್ನು ಆನ್‍ಲೈನ್‍ನಲ್ಲಿ ಮಾಡಿಕೊಂಡು ಬಹಳ ಬ್ಯುಸಿಯಾಗಿದ್ದಂತಿದೆ.

ಇವೆಲ್ಲದರ ಮಧ್ಯೆ ಹೊಸತನ, ಹೊಸ ನೀತಿ, ಹೊಸ ಮೌಲ್ಯಗಳು ಚಿಗುರಬಹುದೇ? ಕೊರೋನೋತ್ತರ ಜಗತ್ತಿನಲ್ಲಿ ಏನೇ ಪರಿಮಾಣಾತ್ಮಕ ಬದಲಾವಣೆ ಬಂದರೂ ಹಳೆಯ ಜೀವ ವಿರೋಧಿ ಮೌಲ್ಯಗಳು ಕೊಳೆತು ನಾಶವಾಗಬಲ್ಲುದೇ? ಇಲ್ಲಿಯವರೆಗಿನ ಬೆಳವಣಿಗೆಗಳು ಅಂತಹ ಭರವಸೆಯನ್ನೇನೂ ಮೂಡಿಸುತ್ತಿಲ್ಲ. ಹೊಸದೇ ಆದ ಶಕ್ತಿಯೊಂದು ಇದರ ಮಧ್ಯೆಯೇ ಉದ್ಭವಿಸಿ, ತಲ್ಲಣ ತರದ ಹೊರತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Demonetisation ಆದಾಗ, ಕೆಲಸ ಕಳೆದುಕೊಂಡ ಹೆಚ್ಚಿನ ಮಂದಿ ಇಂದು ನಡೆದು ತಮ್ಮೂರತ್ತ ತೆರಳುತ್ತಿದ್ದಾರೆ.ಇದಕ್ಕೆ ಎಡೆಮಾಡಿದ ಮೋದಿ ವಿ.ಗುರು!
    ಹಿಂದೆ ಆಳ್ವಿಕೆ ಮಾಡಿದವರು ಹೇಗೆ ಮಂದಿಯನ್ನು ಕಂಗೆಡಿಸಿರಬಹುದು‌.
    ಇದಕ್ಕೆಲ್ಲಾ ಮೀಡಿಯಾಗಳನ್ನು ಗುರಿಮಾಡಬೇಕಾ!!!

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...