Homeಅಂಕಣಗಳುಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

ಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

- Advertisement -
- Advertisement -

ಅಕ್ಟೋಬರ್ 2 ಎಂದಿನಂತೆ ಗಾಂಧೀ ಜಯಂತಿಯ ಸರಕಾರಿ ಸಂಭ್ರಮ, ಗಾಂಧೀಜಿಯ ಪರಂಪರಾಗತ ಅನುಯಾಯಿಗಳ ಅವಿಮರ್ಶಾತ್ಮಕ ಸ್ಮರಣೆಗಳು ನಡೆದು ಹೋಗುತ್ತವೆ. ಇದರ ಜೊತೆ ಗಾಂಧಿ ವಿರೋಧಿಗಳ ಅಬ್ಬರದ ಟೀಕೆಗಳು ಮುಗಿಲು ಮುಟ್ಟುತ್ತವೆ. ಸರಕಾರಿ ಸಂಭ್ರಮಗಳಿಗೆ ಈ ಹಿಂದೆಯೂ ಯಾವ ಅರ್ಥಗಳಿರಲಿಲ್ಲ, ಈಗಲೂ ಅವು ಹಾಗೆಯೇ ನಡೆದು ಮುಗಿದು ಹೋಗುತ್ತವೆ. ಇನ್ನು ಹಳಹಳಿಕೆಯ ಯಾಂತ್ರಿಕ ಗಾಂಧಿ ಸ್ಮರಣೆಗಳಿಗೆ ವರ್ತಮಾನ ಮುಖ್ಯವಾಗುವುದೇ ಇಲ್ಲ. ಸಾಮಾನ್ಯರಿಗೆ ಅನಾಯಾಸವಾಗಿ ನಿಲುಕಿಬಿಡುವ ಗಾಂಧೀಜಿಯ ಸರಳ ಬೌದ್ಧಿಕತೆಯನ್ನು ಇನ್ನೂ ಕಗ್ಗಂಟಾಗಿಸಿಬಿಡುವ ಕ್ಲೀಷೆಯ ಭಾಷಣಗಳನ್ನ ಈ ತಿಂಗಳಿಡೀ ಕೇಳಲೇಬೇಕು. ಇನ್ನು ಗಾಂಧಿಯನ್ನು ನಖಶಿಖ ದ್ವೇಷಿಸುವ ವರ್ಗದ ಬೈಗುಳಗಳೂ ಈ ಅಕ್ಟೋಬರ್ ಮಾಸದಲ್ಲಿ ಉತ್ತುಂಗಕ್ಕೇರಿಬಿಡುತ್ತವೆ. ಎಲ್ಲೋ ವಕೀಲಿಕಿ ಮಾಡಿಕೊಂಡಿದ್ದ ಕರಮಚಂದ ಗಾಂಧಿ ಆಕಸ್ಮಿಕವಾಗಿ ಸಾರ್ವಜನಿಕ ಬದುಕಿಗೆ ಬಂದು ಸ್ವಾತಂತ್ರ್ಯ ಹೋರಾಟದ ಮುಂದಾಳಾಗಿ ರೂಪಾಂತರಗೊಂಡದ್ದು ಈಗ ಚರಿತ್ರೆ. ಗಾಂಧೀಜಿ ಹೀಗೆ ಸಾರ್ವಜನಿಕ ಬದುಕಲ್ಲಿದ್ದದ್ದು ಕೆಲವು ದಶಕಗಳು ಮಾತ್ರ. ಈ ಕಾಲಘಟ್ಟದಲ್ಲಿ ಗಾಂಧೀಜಿ ಸಾವಿರಾರು ರಾಜಕೀಯ ಸಂದಿಗ್ಧಗಳನ್ನು ಎದುರಿಸಿದ್ದಾರೆ.
ಪ್ರಖರ ಸೂರ್ಯನÀ ತರ ಜ್ವಲಿಸುತ್ತಿದ್ದ ಅಂಬೇಡ್ಕರ್, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಪೆರಿಯಾರ್‍ರಂತಹ ಜೊತೆಗಾರರ ಪ್ರಭಾವಲಯಗಳಲ್ಲಿ ಕೆಲವು ಸಲ ಗಾಂಧಿ ಪೇಲವವಾಗಿ ಕಂಡಿದ್ದಾರೆ. ಈ ಜೊತೆಗಾರರು ಮುಂದಿರಿಸುತ್ತಿದ್ದ ಚಾರಿತ್ರಿಕ ಪ್ರಶ್ನೆಗಳಿಗೆ ಗಾಂಧೀಜಿ ನಿರುತ್ತರರೂ ಆಗಿದ್ದಾರೆ. ಆದರೆ, ದೇಶದ ರಾಜಕೀಯ ಗುಲಾಮಗಿರಿ, ಅಸಮಾನ ವಿಷಮ ಸಾಮಾಜಿಕ ಸಂದರ್ಭ, ಕೋಮು ಅಸಹನೆಯ ತಲ್ಲಣಗಳಲ್ಲಿ ಗಾಂಧೀಜಿ ಕಳೆದು ಹೋಗಲಿಲ್ಲ. ಈ ಎಲ್ಲ ಸಂಗತಿಗಳಿಂದ ಗಾಂಧೀಜಿ ವಿದ್ಯಾರ್ಥಿಯಂತೆ ಕಲಿತರು, ಜೊತೆಗೆ ಕಲಿಸಲು ಮುಂದಾದರು. ಇದೆಲ್ಲಕ್ಕಿಂತ ಹೆಚ್ಚಾಗಿ ಗಾಂಧೀಜಿ ಜನರ ನಡುವೆ ಬದುಕಿದರು. ಅದು ಬಿರ್ಲಾನ ಅತಿಥಿಗೃಹವೇ ಇರಲಿ, ಚಂಪಾರಣ್ ಹೋರಾಟವೇ ಇರಲಿ, ಕೋಮು ಅಸಹನೆಯಿಂದ ಧಗಧಗ ಉರಿಯುತ್ತಿದ್ದ ಕಲ್ಕತ್ತಾದ ರಸ್ತೆಗಳೇ ಇರಲಿ, ಗಾಂಧೀಜಿ ತಾನು ಪ್ರೀತಿಸುತ್ತಿದ್ದ `ಜನಸಾಮಾನ್ಯ’ರ ಜೊತೆ ನಿಂತುಕೊಂಡರು. ಅಡುಗೆಗೆ ನಿತ್ಯ ಬಳಸುವ ಉಪ್ಪು, ಸಾಮಾನ್ಯರಿಗೆ ಸುಲಭವಾಗಿ ದಕ್ಕಬೇಕು ಎಂಬುದರಿಂದ ಹಿಡಿದು, ಇಂಗ್ಲೆಂಡಿನಿಂದ ಬರುತ್ತಿದ್ದ ಉನ್ನತ ಮಟ್ಟದ ನಿಯೋಗಗಳ ಮುಂದೆ ತಾನು ಪ್ರೀತಿಸುವ ದೇಶದ ವಿಮೋಚನೆಗೆ ವಾದ ಮಂಡಿಸುವವರೆಗೆ ಗಾಂಧೀಜಿಯ ರಾಜಕೀಯ ವ್ಯಕ್ತಿತ್ವದ ಹರವು ವಿಸ್ತರಿಸಿಕೊಂಡಿತ್ತು.
ವಸಾಹತು ಆಡಳಿತ ವಿಧಿಸಿದ್ದ ವಿಪರೀತ ಕಂದಾಯವನ್ನು ಕಟ್ಟದೆ ಭೂಮಿ ಕಳೆದುಕೊಂಡಿದ್ದ ರೈತರು, ಅಸ್ಪøಶ್ಯತೆಯ ಹೀನಾಯ ಆಚರಣೆಯಲ್ಲಿ ನಲುಗುತ್ತಿದ್ದ ದಲಿತ ಸಮುದಾಯಗಳು, ಕೈಗಾರಕೀರಣದಿಂದ ಕುಲಕಸಬುಗಳನ್ನು ಕಳೆದುಕೊಂಡು ದಿಕ್ಕೆಟ್ಟುಹೋಗಿದ್ದ ಕರಕುಶಲ ಕರ್ಮಿಗಳು, ಯಾವ ಹಕ್ಕುಗಳೂ ಇಲ್ಲದ ಮಹಿಳೆಯರು, ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದ ಅಲೆಮಾರಿ ಸಮುದಾಯಗಳು, ಎರಡನೇ ದರ್ಜೆಯ ಪ್ರಜೆಗಳೇ ಆಗಿ ಪರಿಗಣಿಸಲ್ಪಟ್ಟಿದ್ದ ಮುಸಲ್ಮಾನರು……. ಒಟ್ಟಾರೆ ಇಂಡಿಯಾದ ಬಹುಸಂಖ್ಯಾತ ದುಡಿವ ಸಮುದಾಯಗಳು ತಲ್ಲಣಗಳಲ್ಲಿಯೇ ಇದ್ದ ನಿಕೃಷ್ಟ ರಾಜಕೀಯ ಸಂದರ್ಭವದು. ಮೋಹನ ಕರಮಚಂದ ಗಾಂಧಿ ಎಂಬ ಗುಜರಾತಿ ಬನಿಯಾ ಸಮುದಾಯದ ವ್ಯಕ್ತಿಯ ಮುಂದೆ ಇದ್ದ ಸವಾಲುಗಳವು. ಇಂತಹ ಚಾರಿತ್ರಿಕ ಸಮಸ್ಯೆಗಳಿಗೆ ತಟ್ಟನೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಶತಮಾನಗಳ ಕಾಲ ಆಚರಣೆಯಲ್ಲಿದ್ದ ಜ್ವಲಂತ ಪಿಡುಗುಗಳಿಂದ ಶೋಷಿತರನ್ನು ವಿಮೋಚನೆಗೊಳಿಸಲು ಸಾಧ್ಯವೇ? ದುರಾಶೆಯ ಊಳಿಗಮಾನ್ಯ ವ್ಯವಸ್ಥೆ, ಅಮಾನವೀಯವಾಗಿ ಬೆಳೆದು ನಿಂತಿದ್ದ ಜಾತಿ ಅಸಹನೆ, ವಿಷಾನಿಲದಂತೆ ಪಸರಿಸುತ್ತಿದ್ದ ಕೋಮುವಾದಗಳ ನಡುವೆ ದೇಶಕ್ಕೆ ಮತ್ತು ಶೋಷಿತ ಸಮುದಾಯಗಳೆರಡಕ್ಕೂ ವಿಮೋಚನೆಯ ಅಗತ್ಯವಿತ್ತು. ಇಂತಹ ತಲ್ಲಣದ ಸಂದರ್ಭದಲ್ಲಿ ಗಾಂಧಿಯ ಮೇಲೆ ನಿರೀಕ್ಷೆಗಳ ಭಾರಜಲವೂ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಅಂದಿನ ನಲವತ್ತು ಕೋಟಿ ಜನರ ಮುಂದಾಳು ಎಂದೇ ಪರಿಗಣಿಸಲ್ಪಟ್ಟಿದ್ದ ಗಾಂಧೀಜಿ ಎಂತಹ ಸಂದಿಗ್ಧಗಳನ್ನು ಎದುರಿಸಿರಬಹುದು? ಗಾಂಧಿ ಎಂಬ ಮನುಷ್ಯನನ್ನು ಆತನ ಕಾಲಘಟ್ಟದ ಈ ಎಲ್ಲ ರಾಜಕೀಯ ಸಂದಿಗ್ಧಗಳ ಮೂಲಕವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಆದರೆ, ಈಗ ನಡೆಯುತ್ತಿರುವ ಗಾಂಧೀಜಿಯ ನಿಂದನೆ ಮತ್ತು ಭಜನೆಗಳಿಗೆ ಇಂತಹ ಸೂಕ್ಷ್ಮಗಳಿಲ್ಲ. ಕಪ್ಪು ಬಿಳುಪಿನ ಲೆಕ್ಕಾಚಾರಗಳಿಗೆ ಚರಿತ್ರೆಯ ಹಂಗುಗಳಿರುವುದಿಲ್ಲ. ಗಾಂಧೀಜಿಯ ಒಟ್ಟಾರೆಯ ಬೌದ್ಧಿಕ ನಿಲುವುಗಳು ಅವರ ಎಣೆ ಇಲ್ಲದ ಆಕ್ಟಿವಿಸಮ್‍ನಿಂದ ರೂಪುಗೊಳ್ಳುತ್ತಾ ಬಂದಿವೆ. ಗಾಂಧೀಜಿಯ ಬೌದ್ಧಿಕತೆಯನ್ನು ಅವರ ಶ್ರಮದಾಯಕ ಆಕ್ಟಿವಿಸಮ್‍ನ ಮೂಲಕ ಅರ್ಥಮಾಡಿಕೊಳ್ಳಬೇಕು. ಹಾಗೆಂದು ಗಾಂಧೀಜಿಯ ನಿಲುವುಗಳೆಲ್ಲ ಪರಿಪೂರ್ಣವಾಗಿವೆ ಎಂದೇನಲ್ಲ, ಅವಕ್ಕೆ ಹಲವು ಮಿತಿಗಳಿವೆ, ಕೆಲವೊಮ್ಮೆ ಅವು ಫಾಶ್ರ್ವಿಕವೂ (ಸೆಕ್ಟೇರಿಯನ್) ಸಹ ಆಗಿವೆ. ಆದರೆ ಆ ನಿಲುವುಗಳು ಜನಸಮುದಾಯಗಳ ಜೊತೆಗಿನ ಸಾವಯವ ಸಂಬಂಧಗಳಿಂದ ಅಸ್ತಿತ್ವಕ್ಕೆ ಬಂದಂತವುಗಳೇ ಆಗಿವೆ. ಒಂದು ಅರ್ಥದಲ್ಲಿ ಗಾಂಧೀಜಿಯ ರಾಜಕೀಯ ನಿಲುವುಗಳನ್ನು ಅವರ ಸಾರ್ವಜನಿಕ ಬದುಕನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಈ ದೇಶದ ಸಾಮಾನ್ಯ ಜನರ ನಡುವೆ ಬೇರೆಯದೇ ಇದ್ದರೆ ಗಾಂಧೀಜಿ ಎಂಬ ವ್ಯಕ್ತಿತ್ವವಾಗಲಿ, ಗಾಂಧಿಯ ಚಿಂತನೆಗಳಾಗಲಿ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ.
ಒಂದು ಸಾಮಾಜಿಕ ಅಸಮಾನತೆಯನ್ನು ಪ್ರತಿರೋಧಿಸುವ ಮೂಲಕ ಬ್ಯಾರಿಸ್ಟರ್ ಆಗಿದ್ದ ಕರಮಚಂದರು, ಗಾಂಧೀಜಿಯಾಗಿ ರೂಪಾಂತರಗೊಂಡರು. ಈ ದೇಶದ ಅಸಹನೀಯ ರಾಜಕೀಯ ಸನ್ನಿವೇಶದಲ್ಲಿ, ಇಂತಹ ಸಾಮಾಜಿಕ ವಿಷಮತೆಯ ವಿರುದ್ಧ ಹೋರಾಡುತ್ತಲೇ ಗಾಂಧೀಜಿ ಮತ್ತೆಮತ್ತೆ ರೂಪುಗೊಳ್ಳುತ್ತಾ ಹೋದರು. ದೇಶದ ಎಲ್ಲ ಜನರ ನಡುವೆ ಸಂಪರ್ಕ ಸೇತುವನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವಾಗ, ನಿರ್ಮಾಣಗಳನ್ನು ಸ್ಪೋಟಿಸುವ ನಿಕೃಷ್ಟರ ಪ್ರತಿನಿಧಿಯೊಬ್ಬನಿಂದ ಗಾಂಧಿ ಕೊಲ್ಲಲ್ಪಟ್ಟರು. ಗಾಂಧೀಜಿ ಹೇಗೆ ಬದುಕಿದ್ದರು, ಏನು ಚಿಂತಿಸಿದರು ಎಂಬುದರ ಜೊತೆಗೆ, `ನಮ್ಮ’ ವೈರಿಯೊಬ್ಬನಿಂದ ಗಾಂಧಿ ಹತರಾದರು ಎಂಬುದೂ ನಮಗೆ ಮುಖ್ಯವಾಗಬೇಕು. ಗಾಂಧಿಯ ಚಿಂತನೆಗಳು ತನ್ನೆಲ್ಲ ಮಿತಿಗಳ ನಡುವೆ ಬಹುಸಂಖ್ಯಾತ ದುಡಿವ ಸಮುದಾಯಗಳ ವೈರಿಗಳಿಗೆ ಬಳಕೆಯಾಗಲಿಲ್ಲ. ಗಾಂಧಿ ತತ್ವಗಳು ಪ್ರಭುತ್ವಕ್ಕೆ ಬಂಡವಾಳವಾಗಲಿಲ್ಲ. (ಆದರೆ, ಗಾಂಧಿಯ ಫೋಟೋ, ಆತನ ಕನ್ನಡಕ, ಚರಕ ಮತ್ತು ಚರಿಷ್ಮಾಗಳು ಆಳುವ ವರ್ಗಗಳಿಗೆ ಬಂಡವಾಳವಾದವು) ಗಾಂಧಿಯನ್ನು ಕೊಂದ `ಆ ಜನ’ ಗೋಡ್ಸೆಗೆ ದೇವಾಲಯ ಕಟ್ಟುತ್ತಿದ್ದಾರೆ, ಗಾಂಧೀಜಿಯ ಚಿಂತನೆಗಳನ್ನು ಆತ ಹುಟ್ಟಿದ ನೆಲದಿಂದಲೇ ಮೂಲೋತ್ಪಾಟನೆ ಮಾಡಿದವರು ದೇಶವನ್ನು ಫ್ಯಾಸಿಸಮ್ ಕಡೆಗೆ ಕೊಂಡೊಯ್ಯುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಗಾಂಧೀಜಿಯನ್ನು ಅವರ ಎಲ್ಲ ಮಿತಿಗಳ ನಡುವೆ ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಂದು ನಾವು ಭಾವುಕವಾಗಿ ಗಾಂಧಿಯನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಶೋಷಿತ ಸಮುದಾಯಗಳ ಕುರಿತು ಭಾವುಕವಾಗಿ ಯೋಚಿಸುತ್ತಲೇ ಅವರು ನಮ್ಮ ಮೇಲೆ ಹೇರಿದ ಪೂನಾ ಒಪ್ಪಂದವನ್ನು ಖಾರವಾಗಿಯೇ ಪ್ರಶ್ನಿಸೋಣ. ಗಾಂಧಿಯ ಟ್ರಸ್ಟಿಷಿಪ್ ಚಿಂತನೆಗಳನ್ನು, ಅವರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು (ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಅಂಬೇಡ್ಕರ್ ಮುಂತಾದವರನ್ನು) ನಡೆಸಿಕೊಂಡ ರೀತಿಯನ್ನು ನಾವು ವಿರೋಧಿಸೋಣ. ಆದರೆ ಇಡಿಯಾಗಿ ಗಾಂಧಿಯನ್ನಲ್ಲ.
ಪೂನಾ ಒಪ್ಪಂದದ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಿಡುವುದನ್ನು ವಿರೋಧಿಸಿ ಗಾಂಧಿ ಉಪವಾಸ ಕೂಡುತ್ತಾರೆ. ದಿನಕಳೆದಂತೆ ಗಾಂಧೀಜಿಯ ಆರೋಗ್ಯ ಕ್ಷೀಣಿಸುವುದನ್ನು ನೋಡಿದ ಬಾಬಾ ಸಾಹೇಬರು ವಿಧಿ ಇಲ್ಲದೆ ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ತಾವು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರಗಳ ನಿಲುವುನ್ನು ಬಾಬಾ ಸಾಹೇಬರು ಗಾಂಧೀಜಿಯನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಸಡಿಲಿಸುತ್ತಾರೆ. ಹಾಗೆಂದು ನಮ್ಮ ಹಕ್ಕುಗಳನ್ನು ಬಲಿಗೊಡಬೇಕೆಂದೇನೂ ಇಲ್ಲ. ಹಕ್ಕುಗಳಿಗೆ ಹೋರಾಡುವ ನಮಗೆÉ ಬಾಬಾ ಸಾಹೇಬರ ಅಂತರ್ಸತ್ವ, ಅವರ ತಾಯ್ತನದ ಅಂತಃಕರಣ ಮತ್ತು ರಚನಾತ್ಮಕ ಪ್ರತಿಚಿಂತನೆಗಳೇ ಮಾದರಿ. ನಿಷ್ಪ್ರಯೋಜಕ ಮೂರ್ತಿಭಂಜಕ ಪ್ರವೃತ್ತಿ ಮತ್ತು ಅಂತಃಕರಣದ ಸ್ಪರ್ಶವಿಲ್ಲದ ಟೀಕೆಗಳು ನಮ್ಮನ್ನು ರಾಜಕೀಯ ಅಸೂಕ್ಷ್ಮರನ್ನಾಗಿಸುವ ಜೊತೆಗೆ ನಮ್ಮಲ್ಲಿನ ಮನುಷ್ಯನನ್ನೂ ಕೊಲ್ಲುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...