Homeಮುಖಪುಟಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಲ್ಪಾಂಸೋ ಕ್ವಾರೋನ್

- Advertisement -
- Advertisement -

ಕೆಲವು ಚಿತ್ರಗಳನ್ನು ನೋಡಿದಾಗ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ; ನನಗ್ಯಾಕೆ ಈ ಚಿತ್ರ ಇಷ್ಟವಾಯಿತು? ನನಗೆ ನಿಜವಾಗಿಯೂ ಇಷ್ಟವಾಗಿದೆಯಾ ಅಥವಾ ಸುಮ್ನೆ ಹಾಗೆ ಅಂತಿದೀನಾ? ಒಂದು ವೇಳೆ ಈ ಚಿತ್ರದ ಕಥೆಯನ್ನು ನನಗೆ ಯಾರೋ ಹೇಳಿದ್ದಲ್ಲಿ ನನಗೆ ಇಷ್ಟವಾಗುತ್ತಿತ್ತಾ? ಯಾಕೆ ಈ ಚಿತ್ರ ಮಾಡಿದ ನಿರ್ದೇಶಕ?

ರೋಮಾ ಎಂಬ ಚಿತ್ರ ನೋಡಿದ ನಂತರ ಮೂಡಿದ ಕೆಲವ ಪ್ರಶ್ನೆಗಳು ಹೀಗೆಯೆ ಇದ್ದವು. ಈ ಚಿತ್ರ, ಈ ಚಿತ್ರದ ಹಿಂದಿರುವ ದೀರ್ಘ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲೆನಿಸಿತು. ಚಿತ್ರದ ಬಗ್ಗೆ ಹೇಳುವುದಾದರೆ; ಮೆಕ್ಸಿಕೋದ ಒಂದು ನಗರದಲ್ಲಿ ಉಚ್ಚ ಮಧ್ಯಮ ವರ್ಗದ ಮನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಯುವಕಿಯ ಕಥೆ. ಅದರೊಂದಿಗೆ ಅವಳನ್ನು ಕೆಲಸಕ್ಕಿಟ್ಟುಕೊಂಡಿರುವ ಕುಟುಂಬದ ಕಥೆಯೂ ಹೌದು. 70ರ ದಶಕದಲ್ಲಿಯ ಕಥೆಯಾದ ಇದನ್ನು ಆ ಕಾಲದಲ್ಲಿ ಮೆಕ್ಸಿಕೋದಲ್ಲಿ ಮನೆಗೆಲಸ ಮಾಡುವವರ ವ್ಯಥೆ ಅಥವಾ ಸಂಕಷ್ಟಗಳನ್ನು ತೋರಿಸಲು ಮಾಡಿದ ಚಿತ್ರವಲ್ಲ. ಈ ಚಿತ್ರ ಅಲ್ಪಾಂಸೋ ಕ್ವಾರೋನ್ ಎಂಬ ಖ್ಯಾತ ನಿರ್ದೇಶಕನ ನೆನಪುಗಳ ಚಿತ್ರಣ.

ಯಾವುದೇ ಚಿತ್ರ ಇಷ್ಟವಾದಾಗ ಅದರ ಸ್ಟ್ರಕ್ಚರ್ ಗಟ್ಟಿಯಾಗಿತ್ತು, ಪಾತ್ರಗಳು ಜೀವಂತವಾಗಿದ್ದವು, ಚಿತ್ರ ಪ್ರತಿ ಫ್ರೇಮ್‌ನಲ್ಲೂ ಕಥೆಯನ್ನು ಮುಂದುವರೆಸುತ್ತಿತ್ತು, ಮುಂದೇನಾಗುವುದೋ ಎನ್ನುವ ಕಾತುರ ಹುಟ್ಟಿಸುತ್ತಿತ್ತು ಎಂದೆಲ್ಲಾ ನಾವು ತಿಳಿದಿದ್ದೆವು. ಇಲ್ಲಿ ಅವೆಲ್ಲ ಗೌಣ. ಆ ಆಯಾಮಗಳ ಪೋಸ್ಟ್ ಮಾರ್ಟಮ್ ಮಾಡುವ ಯಾವ ಅವಶ್ಯಕತೆ ಕಾಣುವುದಿಲ್ಲ. ಈ ಚಿತ್ರವನ್ನು ನೋಡುವುದೊಂದು ಅನುಭವ. ನಿರ್ದೇಶಕನ ನೆನಪುಗಳ, ಅವನ ಬಾಲ್ಯದ ಜಗತ್ತಿನ ಪಾತ್ರಗಳ, ಘಟನೆಗಳ ಅನುಭವ. ಅದೇ ನನ್ನ ಮುಂದಿನ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.

ಕೇವಲ ನೆನಪುಗಳು ಒಂದು ಕಥೆಯಾಗಬಲ್ಲವೇ? ನೆನಪಿಡಿ, ಇಲ್ಲಿ ನೆನಪು ಅಂದರೆ ಒಂದು ಸ್ವಾರಸ್ಯಕರ ಅಥವಾ ಭೀಕರ ಘಟನೆಯ ನೆನಪಲ್ಲ. ನೆನಪೆಂದರೆ, ತಾನು ಬೆಳೆದ ಓಣಿಯಲ್ಲಿ ಬೀಳಿತ್ತಿದ್ದ ಬಿಸಿಲನ ನೆನಪು, ಪ್ರತಿಭಟನೆಯೊಂದು ನಡೆದಾಗ ಹಿಂಸೆಯಾಗಿ ಆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ಅಲ್ಲಿ ರಸ್ತೆಯ ಮೇಲೆ ನಡೆಯುತ್ತಿರುವ ಗಲಭೆಯ ಚಿತ್ರದ ಹಿನ್ನೆಲೆಯಲ್ಲಿ ಒಂದು ಫರ್ನಿಚರ್ ಅಂಗಡಿಯ ಕಿಟಕಿಯಿಂದ ಜನರು ಇಣುಕಿ ನೋಡುತ್ತಿದ್ದಾರೆ, ಅದರ ನೆನಪು, ಆ ಸದ್ದುಗಳು, ಬಣ್ಣಗಳ ನೆನಪು. ಬಣ್ಣಗಳು ಹುಟ್ಟಿಸುವ ಭಾವನೆಗಳ ನೆನಪು, ಗತಿಸಿ ಹೋದ ಕಾಲದ, ಸಂಬಂಧಗಳ ನೆನಪುಗಳು. ಅತ್ಯಂತ ಖಾಸಗಿಯಾದ ನೆನಪುಗಳನ್ನು ಕಥೆಯನ್ನಾಗಿಸುವುದು, ಅದನ್ನು ನಿಜವಾಗಿಯೂ ಪರದೆಯ ಮೇಲೆ ತರುವುದಾದರೂ ಹೇಗೆ?

ನಿರ್ದೇಶಕ ಅಲ್ಫಾಂಸೋ ಕ್ವಾರೋನ್ ಕೂಡ ಚಿತ್ರದಲ್ಲಿ ತೋರಿಸಿದತಹ ಉಚ್ಚ ಮಧ್ಯಮ ವರ್ಗದಲ್ಲಿ ಬೆಳದವನು. ತಾನು ಬೆಳೆಯುತ್ತಿರುವಾಗ ಚಿತ್ರದಲ್ಲಿ ಇರುವ ಕ್ಲಿಯೋ ಹಾಗೆ ಅವನನ್ನೂ ಒಬ್ಬ ಸಹಾಯಕಿ ಲಿಬೋ ನೋಡಿಕೊಂಡಿದ್ದಳು. ಎಪ್ಪತ್ತರ ಮೊದಲರ್ಧದಲ್ಲಿ ಮೆಕ್ಸಿಕೋ ಕಷ್ಟದ ಕಾಲದಿಂದ ಹೋಗುತ್ತಿತ್ತು. ಆ ಸಹಾಯಕಿ, ಮೆಕ್ಸಿಕೋ ದೇಶದ ಆ ಕಾಲದ ನೆನಪುಗಳನ್ನು ದಶಕಗಟ್ಟಲೇ ಚಿಂತಿಸಿ, ಮನದಲ್ಲಿ ಒಂದು ಅಸ್ಪಷ್ಟ ರೂಪ ಮೂಡಿದಾಗ ಈ ಚಿತ್ರವನ್ನು ಪ್ರಾರಂಭಿಸಿದ. ಈ ಚಿತ್ರದ ಬಗ್ಗೆ ಯೋಚಿಸಿದಾಗೆಲ್ಲ, ತನ್ನ ನೆನಪುಗಳನ್ನೆಲ್ಲ ಕೆದಕಿದಾಗ ಅವೆಲ್ಲವುಗಳನ್ನು ಕಪ್ಪುಬಿಳುಪಿನಲ್ಲೇ ಕಂಡಿದ್ದರಿಂದ ಇದು ಕಲರ್ ಚಿತ್ರವಲ್ಲ. ತನ್ನ ಮುಂಚಿನ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿದ್ದ ಇಮ್ಯಾನುಯೆಲ್ ಲುಬೆಜ್ಕಿ ಅನ್ನು ಬಿಟ್ಟು ತಾನೇ ಕ್ಯಾಮರ ಹಿಡಿದ. ಪ್ರತಿಯೊಂದು ದೃಶ್ಯಗಳನ್ನು ತನ್ನ ನೆನಪಿನಾಳದಲ್ಲಿ ಮೂಡಿದ ಚಿತ್ರಗಳಂತೆ ಪರೆದಯ ಮೇಲೆ ಮೂಡಿಸಲು ಪ್ರಯತ್ನಿಸಿದ.

ತನ್ನ ನೆನಪುಗಳ ಪ್ರಾಮಾಣಿಕತೆಯನ್ನು ಮೂಡಿಸಲು ಕಠಿಣ ಶ್ರಮದೊಂದಿಗೆ ಸಿನೆಮಾ ಎಂಬ ಕಲೆಯ ಟೆಕ್ನಿಕ್‌ಗಳ ಸಹಾಯವೂ ಬೇಕು. ತನ್ನ ಆ ನೆನಪುಗಳು ಬಿಡಿ ಬಿಡಿ ಶಾಟ್‌ಗಳಲ್ಲಿ ಕಾಣಲಿಲ್ಲವಾದುದರಿಂದ ಚಿತ್ರದಲ್ಲಿ ಲಾಂಗ್‌ಶಾಟ್‌ಗಳು ಹೆಚ್ಚು ಕಾಣುತ್ತವೆ. ಆಗ ಇನ್ನಷ್ಟು ಶ್ರಮ ಬೇಕು. ಆಯಾ ದೀರ್ಘ ಶಾಟ್‌ಗಳಲ್ಲಿ ಕಂಡುವರುವ ಎಲ್ಲಾ ವಸ್ತುಗಳು ಆ ಸಮಯಕ್ಕೆ ತಕ್ಕಂತೆ ಇರಬೇಕು, ಪ್ರತಿಯೊಂದು ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಮರಾದ ಚಲನೆ ಮಾಡಬೇಕು, ಹೀಗೆ ಹತ್ತಾರು ವಿಷಯಗಳನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಂದು ಶಾಟ್ ಅನ್ನು ತೆಗೆಯಬೇಕಾಗುತ್ತದೆ.

ಇದೊಂದು ಖಾಸಗಿ ಚಿತ್ರವಾದುದರಿಂದ ಚಿತ್ರದ ಸ್ಕ್ರಿಪ್ಟ್ ನಿರ್ದೇಶಕನಿಗೆ ಮಾತ್ರ ತಿಳಿದಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಜಲಿಟ್ಸಾ ಅಪಾರೆಸಿಒ ಸೇರಿ ಬಹುತೇಕ ನಟರು ವೃತ್ತಿಪರ ನಟರಲ್ಲ. ಚಿತ್ರದಲ್ಲಿ ನೈಜತೆಯನ್ನು ತರಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳಲಾಯಿತು. ಪ್ರತಿದಿನ ಚಿತ್ರೀಕರಣ ಶುರುವಾಗುವ ಮುನ್ನ ಎಲ್ಲಾ ನಟರಿಗೂ ಪ್ರತ್ಯೇಕವಾಗಿ ದೃಶ್ಯಗಳನ್ನು ವಿವರಿಸಿ (ಕೆಲವೊಮ್ಮೆ ಬೇರೆ ಬೇರೆ ನಟರಿಗೆ ಒಂದೇ ದೃಶ್ಯದ ಬೇರೆ ಬೇರೆ ವಿವರಣ ನೀಡಿ) ಕ್ಯಾಮೆರ ಚಾಲನೆ ನೀಡುತ್ತಿದ್ದರು; ದೃಶ್ಯ ತನ್ನಿಂತಾನೆ ರೂಪಗೊಳ್ಳಲಿ ಎಂದು.

ಚಿತ್ರದಲ್ಲಿ ಇದ್ದ ಕೆಲವು ವೃತ್ತಿಪರ ನಟರಿಗೆ ಇದು ಗಲಿಬಿಲಿ (ಪ್ರಾರಂಭದಲ್ಲಿ) ಮಾಡಿಸಿದರೆ, ಮೊದಲನೇ ಬಾರಿ ನಟಿಸುವವರು ಲೀಲಾಜಾಲವಾಗಿ ನಟಿಸುವಂತೆ ಮಾಡಿತು. ಆಸ್ಪತ್ರೆಯ ದೃಶ್ಯದಲ್ಲಿ ನಿಜವಾದ ವೈದ್ಯರು ಮತ್ತು ಆರೋಗ್ಯಕರ್ಮಿಗಳನ್ನೇ ಬಳಸಿ ಚಿತ್ರೀಕರಣ ಮಾಡಿದರು.

ಕ್ಯಾಮೆರ ಮೂವಮೆಂಟ್ ಅಥವಾ ಛಾಯಾಗ್ರಹಣದ ಪ್ರಶ್ನೆ ಬಂದಾಗ ಎಷ್ಟೇ ಸುಂದರವಾದ ಶಾಟ್ ಬರುತ್ತಿದ್ದರೂ ಈ ಮುಂಚೆ ಬಳಸಲಾಗುವ ರೆಫರನ್ಸ್ ಶಾಟ್‌ಗಳನ್ನು ಬಳಸಬಾರದು ಎನ್ನುವ ಹಟಕ್ಕೆ ಬಿದ್ದಿದ್ದರು ನಿರ್ದೇಶಕ ಅಲ್ಫಾಂಸೋ. ಪ್ರತಿಯೊಂದು ಶಾಟ್ ಕೂಡ ಹೊಸದಾಗಿ, ತನ್ನ ನೆನಪಿನ ಚಿತ್ರಕ್ಕೆ ಪೂರಕವಾಗಿರುವಂತೆ ನೋಡಿಕೊಂಡರು. ಅದರಿಂದ ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ. ಗ್ಯ್ರಾವಿಟಿ, ಯಿ ತು ಮಾಮಾ ತಾಂಬಿಯನ್, ಚಿಲ್ಡ್ರನ್ ಆಫ್ ಮೆನ್ ಮುಂತಾದ ವಿಶ್ವವಿಖ್ಯಾತ ಚಿತ್ರಗಳನ್ನು ನೀಡಿದ್ದರೂ, ರೋಮಾ ಎಂಬ ಈ ಚಿತ್ರ ತನ್ನ ಮೊದಲ ಚಿತ್ರ ಎಂದೇ ಅಂದುಕೊಳ್ಳುತ್ತಾನೆ ಅಲ್ಫಾಂಸೋ ಕ್ವಾರೋನ್.


ಇದನ್ನೂ ಓದಿ: ’’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...