Homeಮುಖಪುಟಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಲ್ಪಾಂಸೋ ಕ್ವಾರೋನ್

- Advertisement -
- Advertisement -

ಕೆಲವು ಚಿತ್ರಗಳನ್ನು ನೋಡಿದಾಗ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ; ನನಗ್ಯಾಕೆ ಈ ಚಿತ್ರ ಇಷ್ಟವಾಯಿತು? ನನಗೆ ನಿಜವಾಗಿಯೂ ಇಷ್ಟವಾಗಿದೆಯಾ ಅಥವಾ ಸುಮ್ನೆ ಹಾಗೆ ಅಂತಿದೀನಾ? ಒಂದು ವೇಳೆ ಈ ಚಿತ್ರದ ಕಥೆಯನ್ನು ನನಗೆ ಯಾರೋ ಹೇಳಿದ್ದಲ್ಲಿ ನನಗೆ ಇಷ್ಟವಾಗುತ್ತಿತ್ತಾ? ಯಾಕೆ ಈ ಚಿತ್ರ ಮಾಡಿದ ನಿರ್ದೇಶಕ?

ರೋಮಾ ಎಂಬ ಚಿತ್ರ ನೋಡಿದ ನಂತರ ಮೂಡಿದ ಕೆಲವ ಪ್ರಶ್ನೆಗಳು ಹೀಗೆಯೆ ಇದ್ದವು. ಈ ಚಿತ್ರ, ಈ ಚಿತ್ರದ ಹಿಂದಿರುವ ದೀರ್ಘ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲೆನಿಸಿತು. ಚಿತ್ರದ ಬಗ್ಗೆ ಹೇಳುವುದಾದರೆ; ಮೆಕ್ಸಿಕೋದ ಒಂದು ನಗರದಲ್ಲಿ ಉಚ್ಚ ಮಧ್ಯಮ ವರ್ಗದ ಮನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಯುವಕಿಯ ಕಥೆ. ಅದರೊಂದಿಗೆ ಅವಳನ್ನು ಕೆಲಸಕ್ಕಿಟ್ಟುಕೊಂಡಿರುವ ಕುಟುಂಬದ ಕಥೆಯೂ ಹೌದು. 70ರ ದಶಕದಲ್ಲಿಯ ಕಥೆಯಾದ ಇದನ್ನು ಆ ಕಾಲದಲ್ಲಿ ಮೆಕ್ಸಿಕೋದಲ್ಲಿ ಮನೆಗೆಲಸ ಮಾಡುವವರ ವ್ಯಥೆ ಅಥವಾ ಸಂಕಷ್ಟಗಳನ್ನು ತೋರಿಸಲು ಮಾಡಿದ ಚಿತ್ರವಲ್ಲ. ಈ ಚಿತ್ರ ಅಲ್ಪಾಂಸೋ ಕ್ವಾರೋನ್ ಎಂಬ ಖ್ಯಾತ ನಿರ್ದೇಶಕನ ನೆನಪುಗಳ ಚಿತ್ರಣ.

ಯಾವುದೇ ಚಿತ್ರ ಇಷ್ಟವಾದಾಗ ಅದರ ಸ್ಟ್ರಕ್ಚರ್ ಗಟ್ಟಿಯಾಗಿತ್ತು, ಪಾತ್ರಗಳು ಜೀವಂತವಾಗಿದ್ದವು, ಚಿತ್ರ ಪ್ರತಿ ಫ್ರೇಮ್‌ನಲ್ಲೂ ಕಥೆಯನ್ನು ಮುಂದುವರೆಸುತ್ತಿತ್ತು, ಮುಂದೇನಾಗುವುದೋ ಎನ್ನುವ ಕಾತುರ ಹುಟ್ಟಿಸುತ್ತಿತ್ತು ಎಂದೆಲ್ಲಾ ನಾವು ತಿಳಿದಿದ್ದೆವು. ಇಲ್ಲಿ ಅವೆಲ್ಲ ಗೌಣ. ಆ ಆಯಾಮಗಳ ಪೋಸ್ಟ್ ಮಾರ್ಟಮ್ ಮಾಡುವ ಯಾವ ಅವಶ್ಯಕತೆ ಕಾಣುವುದಿಲ್ಲ. ಈ ಚಿತ್ರವನ್ನು ನೋಡುವುದೊಂದು ಅನುಭವ. ನಿರ್ದೇಶಕನ ನೆನಪುಗಳ, ಅವನ ಬಾಲ್ಯದ ಜಗತ್ತಿನ ಪಾತ್ರಗಳ, ಘಟನೆಗಳ ಅನುಭವ. ಅದೇ ನನ್ನ ಮುಂದಿನ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.

ಕೇವಲ ನೆನಪುಗಳು ಒಂದು ಕಥೆಯಾಗಬಲ್ಲವೇ? ನೆನಪಿಡಿ, ಇಲ್ಲಿ ನೆನಪು ಅಂದರೆ ಒಂದು ಸ್ವಾರಸ್ಯಕರ ಅಥವಾ ಭೀಕರ ಘಟನೆಯ ನೆನಪಲ್ಲ. ನೆನಪೆಂದರೆ, ತಾನು ಬೆಳೆದ ಓಣಿಯಲ್ಲಿ ಬೀಳಿತ್ತಿದ್ದ ಬಿಸಿಲನ ನೆನಪು, ಪ್ರತಿಭಟನೆಯೊಂದು ನಡೆದಾಗ ಹಿಂಸೆಯಾಗಿ ಆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ಅಲ್ಲಿ ರಸ್ತೆಯ ಮೇಲೆ ನಡೆಯುತ್ತಿರುವ ಗಲಭೆಯ ಚಿತ್ರದ ಹಿನ್ನೆಲೆಯಲ್ಲಿ ಒಂದು ಫರ್ನಿಚರ್ ಅಂಗಡಿಯ ಕಿಟಕಿಯಿಂದ ಜನರು ಇಣುಕಿ ನೋಡುತ್ತಿದ್ದಾರೆ, ಅದರ ನೆನಪು, ಆ ಸದ್ದುಗಳು, ಬಣ್ಣಗಳ ನೆನಪು. ಬಣ್ಣಗಳು ಹುಟ್ಟಿಸುವ ಭಾವನೆಗಳ ನೆನಪು, ಗತಿಸಿ ಹೋದ ಕಾಲದ, ಸಂಬಂಧಗಳ ನೆನಪುಗಳು. ಅತ್ಯಂತ ಖಾಸಗಿಯಾದ ನೆನಪುಗಳನ್ನು ಕಥೆಯನ್ನಾಗಿಸುವುದು, ಅದನ್ನು ನಿಜವಾಗಿಯೂ ಪರದೆಯ ಮೇಲೆ ತರುವುದಾದರೂ ಹೇಗೆ?

ನಿರ್ದೇಶಕ ಅಲ್ಫಾಂಸೋ ಕ್ವಾರೋನ್ ಕೂಡ ಚಿತ್ರದಲ್ಲಿ ತೋರಿಸಿದತಹ ಉಚ್ಚ ಮಧ್ಯಮ ವರ್ಗದಲ್ಲಿ ಬೆಳದವನು. ತಾನು ಬೆಳೆಯುತ್ತಿರುವಾಗ ಚಿತ್ರದಲ್ಲಿ ಇರುವ ಕ್ಲಿಯೋ ಹಾಗೆ ಅವನನ್ನೂ ಒಬ್ಬ ಸಹಾಯಕಿ ಲಿಬೋ ನೋಡಿಕೊಂಡಿದ್ದಳು. ಎಪ್ಪತ್ತರ ಮೊದಲರ್ಧದಲ್ಲಿ ಮೆಕ್ಸಿಕೋ ಕಷ್ಟದ ಕಾಲದಿಂದ ಹೋಗುತ್ತಿತ್ತು. ಆ ಸಹಾಯಕಿ, ಮೆಕ್ಸಿಕೋ ದೇಶದ ಆ ಕಾಲದ ನೆನಪುಗಳನ್ನು ದಶಕಗಟ್ಟಲೇ ಚಿಂತಿಸಿ, ಮನದಲ್ಲಿ ಒಂದು ಅಸ್ಪಷ್ಟ ರೂಪ ಮೂಡಿದಾಗ ಈ ಚಿತ್ರವನ್ನು ಪ್ರಾರಂಭಿಸಿದ. ಈ ಚಿತ್ರದ ಬಗ್ಗೆ ಯೋಚಿಸಿದಾಗೆಲ್ಲ, ತನ್ನ ನೆನಪುಗಳನ್ನೆಲ್ಲ ಕೆದಕಿದಾಗ ಅವೆಲ್ಲವುಗಳನ್ನು ಕಪ್ಪುಬಿಳುಪಿನಲ್ಲೇ ಕಂಡಿದ್ದರಿಂದ ಇದು ಕಲರ್ ಚಿತ್ರವಲ್ಲ. ತನ್ನ ಮುಂಚಿನ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿದ್ದ ಇಮ್ಯಾನುಯೆಲ್ ಲುಬೆಜ್ಕಿ ಅನ್ನು ಬಿಟ್ಟು ತಾನೇ ಕ್ಯಾಮರ ಹಿಡಿದ. ಪ್ರತಿಯೊಂದು ದೃಶ್ಯಗಳನ್ನು ತನ್ನ ನೆನಪಿನಾಳದಲ್ಲಿ ಮೂಡಿದ ಚಿತ್ರಗಳಂತೆ ಪರೆದಯ ಮೇಲೆ ಮೂಡಿಸಲು ಪ್ರಯತ್ನಿಸಿದ.

ತನ್ನ ನೆನಪುಗಳ ಪ್ರಾಮಾಣಿಕತೆಯನ್ನು ಮೂಡಿಸಲು ಕಠಿಣ ಶ್ರಮದೊಂದಿಗೆ ಸಿನೆಮಾ ಎಂಬ ಕಲೆಯ ಟೆಕ್ನಿಕ್‌ಗಳ ಸಹಾಯವೂ ಬೇಕು. ತನ್ನ ಆ ನೆನಪುಗಳು ಬಿಡಿ ಬಿಡಿ ಶಾಟ್‌ಗಳಲ್ಲಿ ಕಾಣಲಿಲ್ಲವಾದುದರಿಂದ ಚಿತ್ರದಲ್ಲಿ ಲಾಂಗ್‌ಶಾಟ್‌ಗಳು ಹೆಚ್ಚು ಕಾಣುತ್ತವೆ. ಆಗ ಇನ್ನಷ್ಟು ಶ್ರಮ ಬೇಕು. ಆಯಾ ದೀರ್ಘ ಶಾಟ್‌ಗಳಲ್ಲಿ ಕಂಡುವರುವ ಎಲ್ಲಾ ವಸ್ತುಗಳು ಆ ಸಮಯಕ್ಕೆ ತಕ್ಕಂತೆ ಇರಬೇಕು, ಪ್ರತಿಯೊಂದು ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಮರಾದ ಚಲನೆ ಮಾಡಬೇಕು, ಹೀಗೆ ಹತ್ತಾರು ವಿಷಯಗಳನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಂದು ಶಾಟ್ ಅನ್ನು ತೆಗೆಯಬೇಕಾಗುತ್ತದೆ.

ಇದೊಂದು ಖಾಸಗಿ ಚಿತ್ರವಾದುದರಿಂದ ಚಿತ್ರದ ಸ್ಕ್ರಿಪ್ಟ್ ನಿರ್ದೇಶಕನಿಗೆ ಮಾತ್ರ ತಿಳಿದಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಜಲಿಟ್ಸಾ ಅಪಾರೆಸಿಒ ಸೇರಿ ಬಹುತೇಕ ನಟರು ವೃತ್ತಿಪರ ನಟರಲ್ಲ. ಚಿತ್ರದಲ್ಲಿ ನೈಜತೆಯನ್ನು ತರಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳಲಾಯಿತು. ಪ್ರತಿದಿನ ಚಿತ್ರೀಕರಣ ಶುರುವಾಗುವ ಮುನ್ನ ಎಲ್ಲಾ ನಟರಿಗೂ ಪ್ರತ್ಯೇಕವಾಗಿ ದೃಶ್ಯಗಳನ್ನು ವಿವರಿಸಿ (ಕೆಲವೊಮ್ಮೆ ಬೇರೆ ಬೇರೆ ನಟರಿಗೆ ಒಂದೇ ದೃಶ್ಯದ ಬೇರೆ ಬೇರೆ ವಿವರಣ ನೀಡಿ) ಕ್ಯಾಮೆರ ಚಾಲನೆ ನೀಡುತ್ತಿದ್ದರು; ದೃಶ್ಯ ತನ್ನಿಂತಾನೆ ರೂಪಗೊಳ್ಳಲಿ ಎಂದು.

ಚಿತ್ರದಲ್ಲಿ ಇದ್ದ ಕೆಲವು ವೃತ್ತಿಪರ ನಟರಿಗೆ ಇದು ಗಲಿಬಿಲಿ (ಪ್ರಾರಂಭದಲ್ಲಿ) ಮಾಡಿಸಿದರೆ, ಮೊದಲನೇ ಬಾರಿ ನಟಿಸುವವರು ಲೀಲಾಜಾಲವಾಗಿ ನಟಿಸುವಂತೆ ಮಾಡಿತು. ಆಸ್ಪತ್ರೆಯ ದೃಶ್ಯದಲ್ಲಿ ನಿಜವಾದ ವೈದ್ಯರು ಮತ್ತು ಆರೋಗ್ಯಕರ್ಮಿಗಳನ್ನೇ ಬಳಸಿ ಚಿತ್ರೀಕರಣ ಮಾಡಿದರು.

ಕ್ಯಾಮೆರ ಮೂವಮೆಂಟ್ ಅಥವಾ ಛಾಯಾಗ್ರಹಣದ ಪ್ರಶ್ನೆ ಬಂದಾಗ ಎಷ್ಟೇ ಸುಂದರವಾದ ಶಾಟ್ ಬರುತ್ತಿದ್ದರೂ ಈ ಮುಂಚೆ ಬಳಸಲಾಗುವ ರೆಫರನ್ಸ್ ಶಾಟ್‌ಗಳನ್ನು ಬಳಸಬಾರದು ಎನ್ನುವ ಹಟಕ್ಕೆ ಬಿದ್ದಿದ್ದರು ನಿರ್ದೇಶಕ ಅಲ್ಫಾಂಸೋ. ಪ್ರತಿಯೊಂದು ಶಾಟ್ ಕೂಡ ಹೊಸದಾಗಿ, ತನ್ನ ನೆನಪಿನ ಚಿತ್ರಕ್ಕೆ ಪೂರಕವಾಗಿರುವಂತೆ ನೋಡಿಕೊಂಡರು. ಅದರಿಂದ ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ. ಗ್ಯ್ರಾವಿಟಿ, ಯಿ ತು ಮಾಮಾ ತಾಂಬಿಯನ್, ಚಿಲ್ಡ್ರನ್ ಆಫ್ ಮೆನ್ ಮುಂತಾದ ವಿಶ್ವವಿಖ್ಯಾತ ಚಿತ್ರಗಳನ್ನು ನೀಡಿದ್ದರೂ, ರೋಮಾ ಎಂಬ ಈ ಚಿತ್ರ ತನ್ನ ಮೊದಲ ಚಿತ್ರ ಎಂದೇ ಅಂದುಕೊಳ್ಳುತ್ತಾನೆ ಅಲ್ಫಾಂಸೋ ಕ್ವಾರೋನ್.


ಇದನ್ನೂ ಓದಿ: ’’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...