Homeಅಂಕಣಗಳುಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಅದನ್ನು ಟ್ರೆಂಡ್ ಮಾಡಿದವರು ಶಿಕ್ಷಣದ ಹಕ್ಕಿನ ವಿಷಯಕ್ಕೆ ಬಂದಾಗ ಅವರು ಎಲ್ಲರ ಶಿಕ್ಷಣದ ಬಗ್ಗೆ ಮಾತುನಾಡುತ್ತಿದ್ದಾರೆ ಅಂದುಕೊಂಡಿರಾ, ಹುಷಾರ್.

ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಹಿಂದೆ ಕತೆ ಹೀಗಿದೆ. ಕೋವಿಡ್ ಸೋಂಕಿನಿಂದಾಗಿ ಯಾವ ಶಾಲೆಯು ತೆಗೆದಿಲ್ಲ. ಹಾಗಂದ ಮಾತ್ರಕ್ಕೆ ಪಾಠ ಮಾಡುತ್ತಿಲ್ಲ ಅಂತಲ್ಲ, ಶುಲ್ಕ ಪಾವತಿಸಿಕೊಂಡಿಲ್ಲ ಅಂತಲ್ಲ! ಶಾಲೆಗಳನ್ನು ವರ್ಚುವಲ್ ಮೋಡ್ ನಲ್ಲಿ ಪ್ರಾರಂಭ ಮಾಡಿ, ಶುಲ್ಕ ಪಾವತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು. ಎಲ್.ಕೆ.ಜಿ, ಯು.ಕೆ.ಜಿಗು ಸಹ ಆನ್ ಲೈನ್ ಪಾಠ ಮಾಡುತಿದ್ದರು. ಈ ಆನ್ ಲೈನ್ ಪಾಠಗಳಿಂದ ಮಕ್ಕಳ  ಆರೋಗ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಕೆಲವು ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದರು ಹಾಗು ಆನ್ ಲೈನ್ ಪಾಠದ ಹೆಸರಿನಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಿಕೊಳ್ಳುತಿದ್ದಾರೆ ಎಂದು ಸಹ ದೂರಿದ್ದರು. ಈ ದೂರುಗಳನ್ನು ಪರಿಶೀಲಿಸಿದ ಸರ್ಕಾರ ಕೆಲ ಪೋಷಕರೊಂದಿಗೆ, ಶಿಕ್ಷಣದ ತಜ್ಞರೊಂದಿಗೆ ಹಾಗು ಖಾಸಗಿ ಶಾಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಎಲ್ ಕೆ ಜಿ ಯಿಂದ 5ನೇ ತರಗತಿಯವರೆಗೆ ಆನ್ ಲೈನ್ ಪಾಠ ನಿಷೇಧಿಸಿ, 6ನೇ ತರಗತಿಯಿಂದ 10ನೇ ತರಗತಿಯವರಿಗೆ ತಂತ್ರಜ್ಞಾನ ಸೂಕ್ತವಾಗಿ ಅಳವಡಿಸಿಕೊಂಡು ಹೇಗೆ ಪಾಠ ಮಾಡಬಹುದು ಎಂದು ಶಿಫಾರಸ್ಸುಗಳನ್ನು ನೀಡಲು ಒಂದು ತಜ್ಞರ ಸಮಿತಿ ರಚಿಸಿತು.

ಈ ನಿಷೇಧದಿಂದ ರೋಷಗೊಂಡ ಅನೇಕ ಮೇಲ್ವರ್ಗದ ಪೋಷಕರು, ಸರ್ಕಾರದ ಈ ಆದೇಶ ವಿರುದ್ಧ ಉಚ್ಛ ನ್ಯಾಯಾಲಯದ ಮೆಟ್ಟಲೇರಿದರು. ಟ್ವಿಟ್ಟರ್ ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತಿದ್ದಿರಿ ಎಂದು ವಾದಿಸಿದರು. ಮಾಧ್ಯಮಗಳಲ್ಲೂ ಇದೇ ದೊಡ್ಡ ವಿಷಯವಾಯಿತು.

ಇದೆಲ್ಲರ ಮಧ್ಯೆ ಆನ್ ಲೈನ್ ಪಾಠದಿಂದ ಬಡವರಿಗೆ ಯಾವ ರೀತಿಯ ತೊಂದರೆಯಾಗುತ್ತದೆ ಎಂದು ಸರ್ಕಾರ ಅಥವಾ ಈ ಮೇಲ್ವರ್ಗದ  ಪೋಷಕರು ಯೋಚಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಏನಾಗುತ್ತಿದೆ ಎಂದು ಯಾರು ಯೋಚಿಸಿಲ್ಲ.

ಆನ್  ಲೈನ್ ನಿಷೇಧದ ಪರ ವಿರೋಧದ ಗದ್ದಲದ ಮಧ್ಯೆ ಶಿಕ್ಷಣ ಕ್ಷೇತ್ರದ ಮೂಲ ಸಮಸ್ಯೆ  ಬಗ್ಗೆ ಯಾರೂ ಯೋಚಿಸುತ್ತಿಲ್ಲ.  ಈ ಆನ್ ಲೈನ್ ಪಾಠಗಳಿಂದ ನಮ್ಮ ಸಮಾಜದಲ್ಲಿದ್ದ ಅಸಮಾನತೆ ಇನ್ನೂ ಹೆಚ್ಚುತ್ತಿದೆ. ಅದು ಹೇಗೆ ಎಂದು ಕೇಳುತ್ತೀರಾ? ವಿಷಯ ಹೀಗಿದೆ ನೋಡಿ:

ಆನ್ ಲೈನ್ ಕ್ಲಾಸ್ ಅಂದರೆ ಜೂಮ್  ಆಪ್ ಅಥವಾ ಮೈಕ್ರೋಸಾಫ್ಟ್ ಕಂಪನಿಯ ಕೆಲ ಆಪ್ ಗಳು ಅಥವಾ  ಇನ್ಯಾವುದೋ ಆಪ್ ಗಳ  ಮೂಲಕ ಶಿಕ್ಷಕರು ಹಾಗು ಮಕ್ಕಳು ಒಂದೇ ವರ್ಚುವಲ್ ತರಗತಿಗೆ ಬಂದು ಅಲ್ಲಿ ಪಾಠ ಮಾಡಲಾಗುವುದು.  ಈ ರೀತಿಯ ಬೋಧನೆಯಲ್ಲಿ  ಬಡ ಕುಟುಂಬದ ಮಕ್ಕಳು ಭಾಗವಹಿಸಿಕೆ ಕಡಿಮೆ ಇದೆ. ಅದಕ್ಕೆ ಹಲವಾರು ಕಾರಣಗಳಿವೆ.

ಇದರ ಬಗ್ಗೆ ಕಳೆದ ಕೆಲವು ದಿವಸಗಳಿಂದ, ಅನೇಕ ಪೋಷಕರೊಂದಿಗೆ ಮಾತನಾಡಿದೆ. ಅವರು ಎದುರಿಸತ್ತಿರುವ ಸಮಸ್ಯೆಗಳನ್ನು ಕೇಳಿ ಬಹಳ ನೋವಾಗಿದೆ. ಇದು ಡಿಜಿಟಿಲ್ ಇಂಡಿಯಾ –  ಸಿಲಿಕಾನ್ ಸಿಟಿ ಆಗಿರಬಹುದು ಆದರೆ ಇಲ್ಲಿ  ತಂತ್ರಜ್ಞಾನ  ಬಳಿಕೆ ಕೆಲವರಿಗೆ  ಮಾತ್ರ ಸೀಮಿತವಾಗಿದೆ. ಬಡ ಕುಟುಂಬಗಳು ಎಂದಿಗೂ ಲ್ಯಾಪ್ ಟಾಪ್ ಹೊಂದಿರಲಿಲ್ಲ. ಕೆಲವರ ಬಳಿ ಸ್ಮಾರ್ಟ್ ಫೋನ್ ಇದೆ. ಆದರೆ ಅದು ಸಹ ಹಲವರ ಬಳಿ ಇಲ್ಲ. ಎಷ್ಟೋ ಜನ ಬಡವರು ಬಳಿ ಸ್ಮಾರ್ಟ್ ಫೋನ್ ಸಹ ಇಲ್ಲದೆ, ಆನ್ ಲೈನ್ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ಮಕ್ಕಳನ್ನು ಶಾಲೆಗೆ ಸೇರಿಸಿಯೇ ಇಲ್ಲ. ಇದರಿಂದ ಡ್ರಾಪ್ ಔಟ್ ಸಂಖ್ಯೆ ಜಾಸ್ತಿ ಆಗುತ್ತಿದೆ.

ಸ್ಮಾರ್ಟ್ ಫೋನ್ ಇರುವ ಕುಟುಂಬಗಳಿಗೆ ಸಮಸ್ಯೆ ಇಲ್ಲ ಎಂದು ಊಹಿಸಿಬೇಡಿ, ಅವರಿಗೂ ಹಲವಾರು ಸಮಸ್ಯೆಗಳಿವೆ. ಕೆಲ ಕುಟುಂಬಗಳಲ್ಲಿ  ಒಂದೇ ಸ್ಮಾರ್ಟ್ ಫೋನ್ ಇದೆ ಆದರೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಒಂದೇ ಮಗುವಿಗೆ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯ . ಕೆಲ  ಕುಟುಂಬದಲ್ಲಿ ಪೋಷಕರಿಬ್ಬರು ಕೆಲಸಕ್ಕೆ ಹೋಗಬೇಕು,  ಆಗ ಫೋನ್ ಮನೇಲೆ ಬಿಟ್ಟು ಕೆಲಸಕ್ಕೆ ಹೋಗಲು  ಕಷ್ಟ – ಎರಡನೇ ಫೋನ್ ಇರುವುದಿಲ್ಲ. ಮತ್ತೊಂದು ಸಮಸ್ಯೆ ಮೇಲ್ವಿಚಾರಣೆ ಇಲ್ಲದೆ ಮಕ್ಕಳನ್ನು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡು ಎನ್ನಲಿಕ್ಕೆ ಹಿಂಜರಿಕೆ – ಅವರು ಬೇರೆ ಏನೇನೋ ನೋಡಬಹುದು, ಅಥವಾ ಅವರಿಗೆ ಅರ್ಥ ಆಗದೆ ಇರಬಹುದು ಎಂಬ ಆತಂಕಗಳು.

ಮತ್ತೆ ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ; ಕೋವಿಡ್ ಹಾಗು ಲಾಕ್ ಡೌನ್ ನ ನಂತರ, ದುಡಿಯುವ ವರ್ಗದ  ಹಲವಾರು ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದು ಸ್ಮಾರ್ಟ್ ಫೋನ್ ಕೊಳ್ಳಲು ಸಾಧ್ಯವಿಲ್ಲ, ಶಾಲೆ ಶುಲ್ಕ ಪಾವತಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಹೋಗಲಿ ಇಷ್ಟೆಲ್ಲಾ ಸಮಸ್ಯೆ ದಾಟಿ ಸ್ಮಾರ್ಟ್ ಫೋನ್ ಒಂದನ್ನು ಮಕ್ಕಳ ಕೈಯಿಗೆ ತಲುಪಿಸಿದರೆ ಅಲ್ಲಿಗೆ ಕಥೆ ಮುಗಿಯಿತೇ? ಇಲ್ಲ. ಅವರ ಎದುರು ಇರುವ ಮುಂದಿನ ಸವಾಲು – ಇಂಟರ್ನೆಟ್.  ಕೆಲವು ಪ್ರದೇಶದಲ್ಲಿ ನೆಟ್ ವರ್ಕ್ ಸರಿಯಿಲ್ಲ, ಹಾಗಾಗಿ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ. ಡ್ಯಾಟಾ ಪ್ಯಾಕ್ ಗೆ ಸಹ ಸುಮಾರು ಹಣ ವೆಚ್ಚುವಾಗುತಿದೆ.  ಇದು ಸಹ ಸಮಸ್ಯೆ ಏಕೆಂದರೆ ಆಗಲೇ ಹೇಳಿದ ಹಾಗೆ ಊಟಕ್ಕೆ, ಬಾಡಿಗೆಗೆ ಸಮಸ್ಯೆ ಇರುವಾಗ ಇನ್ನು ಡ್ಯಾಟಾ  ಪ್ಯಾಕ್ ಗೆ ಎಲ್ಲಿ ದುಡ್ಡು ಇರುತ್ತದೆ?

ಈ ಸವಾಲನ್ನು ಎದುರಿಸಿ, ಇಂಟರ್ ನೆಟ್ ಸಹ ಪಡೆದು ಪಾಠ ಕೇಳೋಣಾ ಎಂದು ಕುಳಿತರೆ ಅಲ್ಲಿಗೆ ಸಮಸ್ಯೆ ಮುಗಿಯದು.   ಎಷ್ಟೋ ಪೋಷಕರಿಗೆ  ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಜೂಮ್ ಆಪ್ ಅಥವಾ ಇತರೆ ಆಪ್ ಗಳಲ್ಲಿ ಸಮಸ್ಯೆ ಆದಾಗ ಅದನ್ನು ನಿವಾರಿಸಲು ಗೊತ್ತಾಗುತ್ತಿಲ್ಲ. ಕೆಲವು ಮಕ್ಕಳಿಗೆ ಆನ್ ಲೈನ್ ಪಾಠ ಹೆಚ್ಚು ಅರ್ಥವಾಗುತ್ತಿಲ್ಲ  ಹಾಗು ಅವರ ಪ್ರಶ್ನೆಗೆ ಉತ್ತರ ಕೊಡಲು ಶಿಕ್ಷಕರನ್ನು ಪ್ರತ್ಯೇಕವಾಗಿ ಮಾತನಾಡಿಸಲು ಆಗುತ್ತಿಲ್ಲ.

ಒಟ್ಟಾರೆ ಈ ಆನ್ ಲೈನ್ ಬೋಧನೆ, ಕಲಿಕೆಗೆ ದೊಡ್ಡ ಸಮಸ್ಯೆಯಾಗಿದೆ. ದುಡಿಯುವ ವರ್ಗದ  ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುತ್ತಿದ್ದಾರೆ.

ಈ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಮಾತು ನೆನಪಾಗುತ್ತದೆ

“The growth of education if it is confined to one class, will not necessarily  lead to liberalism. It may lead to the justification and conservation of
class interest; and instead of creating the liberators of the down-trodden,  it may create champions of the past and the supporters of the status
quo.”

– Dr. B.R. Ambedkar, 1919

ಶಿಕ್ಷಣದ ಅಭಿವೃದ್ಧಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾದರೆ, ಅದು ಉದಾರೀಕರಣಕ್ಕೆ ದಾರಿ ಮಾಡಿಕೊಡದೆ ಹೋಗಬಹುದು. ಅದು ವರ್ಗ ಹಿತಾಸಕ್ತಿಯನ್ನು ಸಂರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳಲು ಬಳಕೆಯಾಗುತ್ತದೆ; ಶೋಷಿತರ ಮುಕ್ತಿ ಗಳಿಸುವ ಬದಲು  ಈಗಾಗಲೇ ಇರುವ ಅಸಾಮಾನತೆಯನ್ನು ಹಾಗು ವರ್ಗ ತಾರತಮ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು.

ಇದಕ್ಕೆ ನಾವು ಅವಕಾಶ ಮಾಡಬಾರದು. ಸರ್ಕಾರ ಕೂಡಲೇ ಎಲ್ಲರಿಗು ಶಿಕ್ಷಣ ತಲುಪುವಂತೆ,  ಅಸಮಾನತೆ ಕಡಿಮೆಯಾಗುವಂತೆ ಮಾಡುವುದು ಹೇಗೆ ಎಂದು ನೋಡಬೇಕು. ಪಕ್ಕದ ರಾಜ್ಯವಾದ  ಕೇರಳದಲ್ಲಿ ಟಿ.ವಿ ಮೂಲಕ ಪಾಠ ಮಾಡುತ್ತಿದ್ದಾರೆ. ಆ ರೀತಿಯ ಪರಿಹಾರಗಳನ್ನು ನಾವು ಗುರುತಿಸಬಹುದೇ?

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

– ಈ ಅಂಕಣದ ಲೇಖಕರಾದ ವಿನಯ್ ಕೂರಗಾಯಲ ಶ್ರೀನಿವಾಸ,ರವರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು


ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...