Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಭಾರತದ ಮತ್ತು ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.

- Advertisement -
- Advertisement -

ಯಾಂಗ್ ಜಿಯಾನ್ಲಿ ಎಂಬ ಚೀನಾದ ಮಾಜಿ ಅಧಿಕಾರಿ ಗಾಲ್ವಾನ್‌ನಲ್ಲಿ 100 ಚೀನಿಯರು ಸಾವನ್ನಪ್ಪಿದ್ದಾರೆ ಎಂದಿದ್ದಾರೆಂದು ರಿಪಬ್ಲಿಕ್ ಟಿವಿ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅಸ್ಪಷ್ಟ ವೆಬ್‌ಸೈಟ್ kreately.in ‌ನ ವರದಿಯನ್ನು ಟ್ವೀಟ್ ಮಾಡಿ “ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗ ಜಿಯಾನ್ಲಿ ಯಾಂಗ್, ಜೂನ್ 15 ರ ರಾತ್ರಿ ಭಾರತ-ಚೀನಾದ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಎಂದು ಒಪ್ಪಿಕೊಂಡಿದ್ದಾರೆ.” ಎಂದು ಬರೆದಿದ್ದಾರೆ. ಕಪಿಲ್ ಮಿಶ್ರಾರ ಈ ಟ್ವೀಟ್ 11,700 ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ.

ಜುಲೈ 7 ರಂದು ಪ್ರಕಟವಾದ ರಿಪಬ್ಲಿಕ್ ಟಿವಿ ವರದಿಯಲ್ಲಿ ಕೂಡ ಇದೆ ಮಾಹಿತಿಯನ್ನು ನೀಡಲಾಗಿದೆ. “ಭಾರತ-ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿದ್ದಾರೆ” ಎಂದು ಬರೆದಿದೆ. ಮೈನೇಷನ್ ಕೂಡಾ ರೀತಿಯ ವರದಿಯನ್ನು ಪ್ರಕಟಿಸಿತು.

ರಿಪಬ್ಲಿಕ್ ಟಿವಿಯ ಲೇಖನವು ತ್ಸೈ ಇಂಗ್-ವೆನ್ ಎಂಬ ಖಾತೆಯಿಂದ ಪಡೆದುಕೊಂಡದ್ದಾಗಿದೆ.

ಇದನ್ನು ಮೊದಲಿಗೆ @NewsLineIFE  ಎಂಬ ಟ್ವಿಟ್ಟರ್‌ ಹ್ಯಾಂಡಲ್ ಟ್ವಿಟ್ಟರಿನಲ್ಲಿ ಹಂಚಿತ್ತು.

ಫ್ಯಾಕ್ಟ್‌‌ಚೆಕ್‌:

ಈ ವಿವಾದಾತ್ಮಕ ಸಂದೇಶದ ಎಲ್ಲಾ ವಾದಗಳು ಸಂಶಯಾಸ್ಪದ ವೆಬ್‌ಸೈಟ್‌ಗಳು ಮತ್ತು ಖಾತೆಗಳಿಂದ ಹೊರಹೊಮ್ಮಿದವುಗಳಾಗಿದೆ.

@NewsLineIFE ಎಂಬ ಟ್ವಿಟ್ಟರ್‌‌ ಹ್ಯಾಂಡಲ್ ಈ ಸಂದೇಶವನ್ನು ಮೊದಲ ಬಾರಿಗೆ ಹಂಚಿಕೊಂಡಿತು. ಜುಲೈ 2 ರಂದು ಈ ಹ್ಯಾಂಡಲ್ ಚೀನಾದ ಐವರು ಸೈನಿಕರು ಸಾವನ್ನಪ್ಪಿದರು ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂಬ ಆಧಾರರಹಿತವಾಗಿ ಬರೆದಿತ್ತು. ಅದರ ನಂತರ ಚೀನಾದ 43 ಸೈನಿಕರು ಕೊಲ್ಲಲ್ಪಟ್ಟರು ಎಂದು ಟ್ವೀಟ್ ಮಾಡಿತ್ತು ಆದರೆ ಎರಡೂ ಟ್ವೀಟ್‌ಗಳನ್ನು ಈಗ ಅಳಿಸಲಾಗಿದೆ.

@NewsLineIFE  ಈ ಸುದ್ದಿಯನ್ನು ಟ್ವೀಟ್ ಮಾಡುವಾಗ @drapr007 ಎಂಬ ಟ್ವಿಟ್ಟರ್‌ ಹ್ಯಾಂಡಲ್‌ಅನ್ನು ಟ್ಯಾಗ್ ಮಾಡಿತ್ತು. ಈ ಹ್ಯಾಂಡಲ್ ಈ ವಿಚಾರವನ್ನು ಜುಲೈ 1 ರಂದು ಅಂದರೆ ಒಂದು ದಿನದ ಹಿಂದೆಯೇ  ಬರೆದಿತ್ತು.

ಇದಲ್ಲದೆ 100 ಚೀನೀ ಸೈನಿಕರ ಸಾವುಗಳ ಕುರಿತು ಲೇಖನವನ್ನು ಪ್ರಕಟಿಸಿದ ವೆಬ್‌ಸೈಟ್ kreately.in ಹೊಸದಾಗಿ ರಚಿಸಲಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಅದರ ಟ್ವಿಟರ್ ಬಯೋ “ ನೀವೆ ಪ್ರಕಟಿಸಿ, ಸೈನ್‌ಅಪ್ ಮಾಡಿ ಮತ್ತು ಬರಹಗಾರರಾಗಿ, ಈಗಿದು ಸುಲಭ…” ಎಂದು ಬರೆದಿದೆ. ಈ ವೆಬ್‌ಸೈಟ್ ಪತ್ರಿಕೋದ್ಯಮದ ವೇದಿಕೆಯಲ್ಲ, ಅದು ಬಳಕೆದಾರರು ಕಳುಹಿಸಿದ ವಿಷಯವನ್ನು ಪ್ರಕಟಿಸುತ್ತದೆ. ಅಲ್ಲದೆ ಇದನ್ನು ಯಾರು ನಡೆಸುತ್ತಿದ್ದಾರೆ ಹಾಗೂ ಅವರ ವಿಳಾಸದಂತಹ ಯಾವುದೆ ಮಾಹಿತಿಯನ್ನು ಅದು ಹೊಂದಿಲ್ಲ.

ಅಷ್ಟೇ ಅಲ್ಲದೆ ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಂನ ಲೇಖನವನ್ನು ಹಲವಾರು ವ್ಯಕ್ತಿಗಳು ಹಂಚಿಕೊಂಡಿದ್ದು, 100 ಚೀನೀ ಸೈನಿಕರನ್ನು ಭಾರತೀಯ ಸೇನೆಯಿಂದ ಕೊಲ್ಲಲಾಗಿದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ ಮತ್ತು ಜಿಯಾನ್ಲಿ ಯಾಂಗ್ ಅವರ ವಾಷಿಂಗ್ಟನ್ ಟೈಮ್ಸ್ ಅಭಿಪ್ರಾಯವನ್ನು ಈ ವೆಬ್‌ಸೈಟ್‌ ಉಲ್ಲೇಖಿಸಿದೆ.

ವಾಷಿಂಗ್ಟನ್ ಟೈಮ್ಸ್ ನಲ್ಲಿ ಯಾಂಗ್ ಜಿಯಾನ್ಲಿಯ ಅಭಿಪ್ರಾಯದ ತುಣುಕು

ಯಾಂಗ್ ಜಿಯಾನ್ಲಿ ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆಂದು ಮುಖ್ಯವಾಹಿನಿಯಲ್ಲಿ ಇಲ್ಲದ, ನಂಬಲರ್ಹವಲ್ಲದ ಮಾಧ್ಯಮಗಳು ಹೇಳಿವೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ.

ಜಿಯಾನ್ಲಿ ನಿಜಕ್ಕೂ ಮಾಜಿ ಸಿಪಿಸಿ ನಾಯಕ ಯಾಂಗ್ ಫೆಂಗ್‌ಶೂನ್‌ರ ಮಗನಾಗಿದ್ದರೂ, ಅವರು ಚೀನಾದ ಮಾಜಿ ಮಿಲಿಟರಿ ನಾಯಕನಲ್ಲ. ಜಿಯಾನ್ಲಿ ವಾಸ್ತವವಾಗಿ ಅಮೆರಿಕಾದಲ್ಲಿ ವಾಸಿಸುವ ಚೀನಾದ ಭಿನ್ನಮತೀಯ ಆಗಿದ್ದರೆ. ಅವರು ಅಮೆರಿಕಾದಲ್ಲಿ ಅಧ್ಯಯನ ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಇವರು ಮಾಜಿ ಟಿಯಾನನ್ಮೆನ್ ಸ್ಕ್ವೇರ್ ಕಾರ್ಯಕರ್ತರಾಗಿದ್ದು, ಕಾರ್ಮಿಕ ಅಶಾಂತಿಯ ಧ್ವನಿಯೆತ್ತಲು ಯತ್ನಿಸಿದ್ದಕ್ಕಾಗಿ 2002 ರಲ್ಲಿ ಚೀನಾ ಸರ್ಕಾರವು ಜೈಲಿಗಟ್ಟಿತ್ತು ಹಾಗೂ 2007 ರಲ್ಲಿ ಬಿಡುಗಡೆಯಾಗಿದ್ದರು.

ಇಂಡೋ-ಚೀನಾ ಘರ್ಷಣೆಗಳ ಕುರಿತು ಅವರು ಇತ್ತೀಚೆಗೆ ದಿ ವಾಷಿಂಗ್ಟನ್ ಟೈಮ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿದ್ದು, ಅದರಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಚೀನಾದ ಸಾವಿನ ಸಂಖ್ಯೆಯನ್ನು ಒಪ್ಪಿಕೊಂಡಿಲ್ಲ ಹಾಗೂ ಕನಿಷ್ಠ 40 ಚೀನಾ ಸೈನಿಕರ ಸಾವುಗಳ ಬಗ್ಗೆ ಭಾರತೀಯ ವರದಿಗಳು “ಸುಳ್ಳು ಮಾಹಿತಿ” ಎಂದು ಬರೆದಿದ್ದರು.

“ಯಾವ ದೇಶವು ತನ್ನ ಗಡಿಯಲ್ಲಿರುವ ಸಮವಸ್ತ್ರಧಾರಿ ಸೈನಿಕರ ಹುತಾತ್ಮತೆಯನ್ನು ಅಂಗೀಕರಿಸುವುದಿಲ್ಲ, ಅವರಿಗೆ ಗೌರವಾನ್ವಿತ ಕೊನೆಯ ಗೌರವ ಸಲ್ಲಿಸಲಿ. ಚೀನಾ ತಾನು ಸೈನ್ಯವನ್ನು ಎದುರಾಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಂಡೆ ಎಂದು ಒಪ್ಪಿಕೊಳ್ಳುವುದು ಆಂತರಿಕ ಅಶಾಂತಿಗೆ ಕಾರಣವಾಗಬಹುದು ಎಂಬ ಭಯದಲ್ಲಿ ತತ್ತರಿಸಿದೆ” ಎಂದು ಜಿಯಾನ್ಲಿ ಬರೆದಿದ್ದಾರೆ.

ಈ ವರದಿಯಲ್ಲಿ ಎಲ್ಲಿಯೂ ಚೀನಾದ ಸೈನಿಕರ ಸಾವಿಗೆ ಸಂಖ್ಯೆಯನ್ನು ಜಿಯಾನ್ಲಿ ಉಲ್ಲೇಖಿಸಿಲ್ಲ.

ನಕಲಿ ಟ್ವಿಟ್ಟರ್‌ ಖಾತೆಯಿಂದ ಸುದ್ದಿಯನ್ನು ಪಡೆದ ರಿಪಬ್ಲಿಕ್ ಟಿವಿ.

ರಿಪಬ್ಲಿಕ್ ಟಿವಿ @tsaiing_wen ಎಂಬ ಖಾತೆಯಿಂದ ಸುದ್ದಿಯನ್ನು ಪಡೆದಿದೆ. ಇದು ಚೀನಾ ಗಣರಾಜ್ಯದ (ತೈವಾನ್) ಅಧ್ಯಕ್ಷರದ್ದೆಂದು ಹೇಳುವ ನಕಲಿ ಖಾತೆಯಾಗಿದೆ. ಇದರಲ್ಲಿ ಟ್ವಿಟ್ಟರ್‌ ಪರಿಶೀಲನೆಯ ನೀಲಿ ಟಿಕ್ ಇಲ್ಲ.

ವೈರಲ್ ಸಂದೇಶದಲ್ಲಿ ಬಳಸಲಾದ ಜಿಯಾನ್ಲಿಯ ಹಳೆಯ ಫೋಟೋಗಳು

ಜಾಗತಿಕ ಮಾನವ ಹಕ್ಕುಗಳ ಕುರಿತ ಯುಎಸ್ ಹೌಸ್ ಉಪಸಮಿತಿಯ ಮುಂದೆ ಚೀನಾದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವ 2013 ರ ಫೋಟೋವನ್ನು kreately.com ಬಳಸಿದೆ.

ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಮ್ ಬಳಸಿದ ಚಿತ್ರ ಕೂಡಾ ವಿಕಿಪೀಡಿಯಾದಿಂದ ಪಡೆಯಲಾಗಿದೆ. ಅದರ ವಿವರಣೆಯ ಪ್ರಕಾರ, “ಯು.ಎಸ್. ಕಾಂಗ್ರೆಸ್ ರೇಬರ್ನ್ ಹೌಸ್ ಆಫೀಸ್ ಕಟ್ಟಡದಲ್ಲಿ ನಡೆದ 13 ನೇ ಇಂಟೆರೆಥ್ನಿಕ್ ಇಂಟರ್ ಫೇಯ್ತ್ ಲೀಡರ್ಶಿಪ್ ಕಾನ್ಫರೆನ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡಾ. ಯಾಂಗ್ ಜಿಯಾನ್ಲಿಯವರ ಚಿತ್ರ. ಡಿಸೆಂಬರ್ 10, 2018.” ಎಂದು ಹೇಳಿದೆ.

 ಸುಳ್ಳು ಸುದ್ದಿಗಳ ತಂಡಗಳು

ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿತ್ತು. ಇದನ್ನು ಹಂಚಿದವರಲ್ಲಿ ಜಿಡಿ ಬಕ್ಷಿ, ರಮೇಶ್ ಸೋಲಂಕಿ, ಚಯಾನ್ ಚಟರ್ಜಿ ಪ್ರಮುಖರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು newscast-pratyakhsha.com ಎಂಬ ವೆಬ್‌ಸೈಟಿನ ಆಧಾರವಿಲ್ಲದ ಸುದ್ದಿಗಳನ್ನು ಹಂಚಿದ್ದಾರೆ.


ಓದಿ: ಕನ್ನಡ ಖಾಸಗಿ ಚಾನೆಲ್ ಮಾಲಿಕರು ಪ್ರತಿ ಜಿಲ್ಲೆಯಲ್ಲಿ ಕೊರೊನಾ ಆಸ್ಪತ್ರೆ ಕಟ್ಟುತ್ತಿರುವುದು ನಿಜವೇ ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...