Homeಕರೋನಾ ತಲ್ಲಣಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಕರೆಯುವವರು ಮೂರ್ಖರು..

ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಕರೆಯುವವರು ಮೂರ್ಖರು..

ಯಾವುದೇ ಔಷಧಿ ಕೊಡದೇ ಶೇ.60 ಸೋಂಕಿತರಲ್ಲಿ ತನ್ನಿಂದ ತಾನೇ ಗುಣಾವಾಗುವ ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಮೂರ್ಖ ಹೆಸರು ಇಟ್ಟಿರುವುದು ಹಾಸ್ಯಾಸ್ಪದ ಅಲ್ಲವೇ!  

- Advertisement -
- Advertisement -

ಕೊರೊನಾ ಕಾಲದಲ್ಲಿ ಬೀರಬಲ್ಲನ ಈ ಕಥೆ ತುಂಬಾ ಪ್ರಸ್ತುತ. ಒಮ್ಮೆ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲ ನೆಲದ ಮೇಲೆ ಒಂದು ಗೆರೆ ಎಳೆದು– ಈ ಗೆರೆ ಉದ್ದವಿದೆಯೋ ಅಥವಾ ಗಿಡ್ಡವಿದೆಯೋ ಎಂದು ಕೇಳಿದ. ಕೆಲವರು ಅದು ‘ಉದ್ದ ಗೆರೆ’ ಎಂದರೆ ಕೆಲವರು ಅದು ‘ಗಿಡ್ಡ ಗೆರೆ’ ಎಂದು ಹೇಳಿದರು. ಆಗ ಬೀರಬಲ್ಲ ಆ ಗೆರೆಯ ಪಕ್ಕದಲ್ಲಿ ಅದಕ್ಕಿಂತ ಚಿಕ್ಕ ಇನ್ನೊಂದು ಗೆರೆ ಎಳೆದು ಕೇಳಿದನಂತೆ ಈಗ ಹೇಳಿ ಮೊದಲಿನ ಗೆರೆ ಉದ್ದವೋ ಅಥವಾ ಗಿಡ್ಡವೋ ಎಂದು. ಆಗ ಎಲ್ಲರೂ ಒಮ್ಮತದಿಂದ ಅದು ಉದ್ದ ಗೆರೆ ಎಂದು ಹೇಳಿದರು. ಆನಂತರ ಬೀರಬಲ್ಲ ಆ ಗೆರೆಯ ಇನ್ನೊಂದು ಪಕ್ಕದಲ್ಲಿ ಅದಕ್ಕಿಂತ ಉದ್ದ ಗೆರೆ ಎಳೆದು ಕೇಳಿದನಂತೆ – ಈಗ ಹೇಳಿ ಮೊದಲಿನ ಗೆರೆ ಉದ್ದವೋ ಗಿಡ್ಡವೋ ಎಂದು. ಆಗ ಎಲ್ಲರೂ ಒಮ್ಮತದಿಂದ ಮೊದಲಿನ ಗೆರೆ ಗಿಡ್ಡ ಗೆರೆ ಎಂದು ಹೇಳಿದರು.  ಆಗ ಬೀರಬಲ್ಲ ಕೇಳಿದ- ಅದೇ ಗೆರೆಯನ್ನು ನೀವೆಲ್ಲಾ ಉದ್ದ ಗೆರೆ ಎಂದು ಮೊದಲು ಒಮ್ಮತದಿಂದ ಹೇಳಿದ್ದೀರಿ, ಆದರೆ ಈಗ ಅದೇ ಗೆರೆಯನ್ನು ಗಿಡ್ಡ ಗೆರೆ ಎಂದು ಹೇಳಿತ್ತಿರುವಿರಿ, ಅದು ಹೇಗೆ ಒಂದೇ ಗೆರೆ ಉದ್ದವೂ ಗಿಡ್ಡವೂ ಎರಡೂ ಆಗಿರಲು ಸಾಧ್ಯ?  ಆಗ ಸಭಿಕರು ಹೇಳಿದರು- ಅದು ಹೋಲಿಕೆಯಿಂದ ಮಾತ್ರ ಸಾಧ್ಯವಾಗಿದ್ದು ಎಂದು.

ಈಗ ಕೊರೊನಾ ವಿಷಯದಲ್ಲೂ ಅದೇ ಹೋಲಿಕೆ ಆಗಬೇಕಿದೆ. ಅಂದರೆ ಕೊರೊನಾದ ದೈನಂದಿನ ಅಂಕಿ ಸಂಖ್ಯೆಗಳೊಂದಿಗೆ ಇತರ ಸೋಂಕು ರೋಗಗಳ ಅಂಕಿಸಂಖ್ಯೆಯನ್ನೂ ಹೋಲಿಕೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಆಗ ಜನರಿಗೆ ಗೊತ್ತಾಗುತ್ತದೆ- ಕೊರೊನಾ ಎಂಬ ಒಂದು ಸಾಧಾರಣ ನೆಗಡಿ ಜ್ವರವನ್ನು ಸುಮ್ಮನೆ ಮಹಾಮಾರಿ ಎಂದು ಹೇಳಿ ಇಡೀ ವಿಶ್ವವನ್ನೇ ಹೆದರಿಸಲಾಗಿದೆ ಎಂಬುದು. ಕೊರೋನಾದಿಂದ ಆಗಿರುವ ಸೋಂಕು, ಮರಣ, ಗುಣಮುಖ ಇವುಗಳ ಸಂಖ್ಯೆಯನ್ನು ಇತರ ಇಂತಹದ್ದೇ ಸೋಂಕು ರೋಗಗಳ ಅಂಕಿಸಂಖ್ಯೆಗಳೊಂದಿಗೆ ಹೊಲಿಸಿದರೆ ಮಾತ್ರ ಕೊರೋನಾವು ಕಾಳಿಂಗ ಹಾವೋ ಅಥವಾ ಒಂದು ನಿಷ್ಪಾಪ ಕೇರೇ ಹಾವೋ ಎಂದು ಗೊತ್ತಾಗಲು ಸಾಧ್ಯ.

ನಮ್ಮ ದೇಶದ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ನಮ್ಮ ದೇಶದಲ್ಲಿ ತೊಂಬತ್ತು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರೆ (ಮರಣ ಪ್ರಮಾಣ ಶೇ.0.73). ಅಂದರೆ ಪ್ರತಿದಿನ 25000 ಕ್ಕೂ ಹೆಚ್ಚು ಜನ ಸಾಯುತ್ತಾರೆ. ಅದರಲ್ಲಿ ಕನಿಷ್ಠ 15000 ಜನರಾದರೂ ಸಾಧಾರಣ ಸೋಂಕು ರೋಗಗಳಾದ ಮಲೇರಿಯಾ, ಡೆಂಗೀ, ಹಕ್ಕಿಜ್ವರ, ಎಬೋಲ, ಹೆಪಿಟೈಸ್ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಾರೆ. ಈ 15000 ಜನರಲ್ಲಿ ಕೇವಲ 500 ಜನರು ಮಾತ್ರ ಕೊರೋನಾ ದಿಂದ ಸತ್ತರೆ ಅದು ಭಯಾನಕ ರೋಗ ಎಂದು ಕರೆಯುವುದು ಸರಿಯೇ? ಹಾಗಾದರೆ ಉಳಿದ 14 ಸಾವಿರ ಜನರನ್ನು ದಿನಾಲೂ ಕೊಲ್ಲುವ ಇತರ ಸಾಂಕ್ರಾಮಿಕ ರೋಗಗಳು ಮಾಹಾಮಾರಿ ಯಾಕಲ್ಲ? ಮೇಲಾಗಿ ಕೊರೊನಾ ಯಾರನ್ನೂ ಒಂಟಿಯಾಗಿ ಕೊಲ್ಲುವ ಸಾಮರ್ಥ್ಯ ಹೊಂದಿಲ್ಲ. ಅದು ಕೇವಲ ಮಧುಮೇಹ, ಬಿ‌ಪಿ, ಆಸ್ತಮಾ, ಕಿಡ್ನಿ ತೊಂದರೆ ಇದ್ದವರಿಗೆ ಮಾತ್ರ ಮಾರಕ ಆಗಬಲ್ಲದು. ಇಲ್ಲದಿದ್ದರೆ ಕೊರೋನಾ ಪೂರ್ಣ ನಿರುಪದ್ರವಿ.

ಹಾಗಾಗಿ ಬೀರಬಲ್ಲನ ಗೆರೆಯ ಕಥೆಯಂತೆ ಹೋಲಿಕೆ ಮಾಡಲು ದಿನಾಲೂ ಎಲ್ಲಾ ತರದ ಸೋಂಕು ರೋಗಗಳ ತುಲಾನಾತ್ಮಕ ಸಂಖ್ಯೆಯ ಚಾರ್ಟನ್ನು (ಹೊಸ ಸೋಂಕು, ಒಟ್ಟು ಸೋಂಕು, ಈ ದಿನದ ಮರಣ, ಒಟ್ಟು ಮರಣ, ಒಟ್ಟು ಗುಣಮುಖರಾದವರು) ಸರಕಾರವೇ ಪ್ರಕಟಿಸಿದರೆ ಜನರಿಗೆ ಕೊರೋನಾದ ನಾಟಕ ಸುಲಭವಾಗಿ ಅರ್ಥವಾಗುತ್ತದೆ, ಅದರಲ್ಲೂ “ಯಾವುದೇ ಔಷಧವಿಲ್ಲದೆ ಎಷ್ಟು ಕೊರೋನಾ ಸೋಂಕಿತರು ಗುಣಮುಖರಾದರು” ಎಂಬುದನ್ನೂ ತಪ್ಪದೇ ಬರೆಯಬೇಕು. ಕೊರೋನಾ ಸೋಂಕಿತರಲ್ಲಿ ಕೇವಲ ಶೇ.2 ಜನ ಮಾತ್ರ ಸಾಯುತ್ತಾರೆ ಹಾಗೂ ಶೇ.98 ಸೋಂಕಿತರು ಸುಲಭವಾಗಿ ಗುಣಮುಖರಾಗುತ್ತಾರೆ ಎಂಬ ಸತ್ಯವನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಪ್ರಕಟಿಸುತ್ತಿಲ್ಲ. ಇದಕ್ಕೆ ಹೋಲಿಸಿದರೆ ಇತರ ಸೋಂಕು ರೋಗಗಳಿಂದ ಶೇ.10 ರಿಂದ 15  ಸೋಂಕಿತರು ಸಾಯುತ್ತಾರೆ. ಜನರನ್ನು ಮೂರ್ಖರನ್ನಾಗಿಸಲು “ಏಸಿಂಪ್ಟೋಮ್ಯಟಿಕ್” (ಗುಣಲಕ್ಷಣ ರಹಿತ ರೋಗ) ಎಂಬ ಪಾರಿಭಾಷಿಕ ಶಬ್ಧವನ್ನು ಹುಟ್ಟು ಹಾಕಲಾಗಿದೆ. ಇದರಿಂದಾಗಿ ಸೈಕಲ್ ನಿಂದ ಬಿದ್ದು ಆದ ಸಣ್ಣ ಗಾಯಕ್ಕೆ ಬ್ಯಾಂಡೇಜ್ ಮಾಡಲು ಡಾಕ್ಟರರಲ್ಲಿ ಹೋದರೂ ಅವರು ಜಬರ್ದಸ್ತಿ ಕೊರೋನಾ ಟೆಸ್ಟ್ ಮಾಡಿಸಿ ಭಾರಿ ಬಿಲ್ ಹಾಕುತ್ತಾರೆ.
ಕೊರೋನಾ ಹೊಸ ರೋಗವಾದರೆ 25 ವರ್ಷಗಳಿಂದಲೂ ಡೆಟ್ಟಾಲ್ ಬಾಟಲ್ ಮೇಲೆ ಬರೆಯುತ್ತಿರುವ ರೋಗಗಳ ಲಿಸ್ಟ್ ನಲ್ಲಿ ಕೊರೋನಾ ವೈರಸ್ ಹೆಸರು ಹೇಗೆ ಬಂತು? ಚೀನಾದಲ್ಲಿ ಈ ರೋಗ ಹುಟ್ಟಿದ್ದರೆ ಚೀನಿ ಹೆಸರಿನ ಬದಲು ಇಂಗ್ಲಿಷ್ ಹೆಸರು ಯಾಕಿದೆ?

ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ನನ್ನ 82 ವರ್ಷದ ಮಾವ ಮೊದಲು ಶೀತ ಜ್ವರ ಆಗಿ ನಂತರ ಅದು ನಿಮೋನಿಯಾಕ್ಕೆ ತಿರುಗಿ ಅವರು ತೀರಿಕೊಂಡರು. ನಮ್ಮ ಹಳ್ಳಿಯ ಮನೆಯ ಎದುರಿನ ಗದ್ದೆಯಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು.  ಒಂದು ವೇಳೆ ಅವರು ಈ ವರ್ಷ ತೀರಿಕೊಳ್ಳುತ್ತಿದ್ದರೆ ಆಗ ಜಿಲ್ಲಾಡಳಿತ ಮತ್ತು ಹಳ್ಳಿಯ ಜನ ಎಷ್ಟು ನಾಟಕ ಆಡುತ್ತಿದ್ದರೋ ಏನೋ!?  ಪೊಲೀಸರು ಇಡೀ ಹಳ್ಳಿಯನ್ನೇ ಸೀಲ್ ಡೌನ್ ಮಾಡುತ್ತಿದ್ದರು. ಎಲ್ಲರಿಗೂ ಕ್ವಾರಂಟೈನ್ ಮಾಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಮನೆಯ ಮುಂದಿನ ಗದ್ದೆಯಲ್ಲಿ ಅವರ ಶವ ಸುಡುವುದಕ್ಕೆ ಸ್ವಕುಟುಂಬದವರ ಸಹಿತ ಹಳ್ಳಿಯವರೆಲ್ಲಾ ಆಕ್ಷೇಪ ಎತ್ತಿ ರಂಪ ಮಾಡುತ್ತಿದ್ದರು. ಶವವನ್ನು ದುಬಾರಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಜೆ‌ಸಿ‌ಬಿ ಯಲ್ಲಿ ಕೊಂಡೊಯ್ದು ಹತ್ತು ಅಡಿ ಆಳದಲ್ಲಿ ಹೂಳುತ್ತಿದ್ದರು.  ಶೀತ ಜ್ವರ, ವೈರಲ್ ಫೀವರ್, ನಿಮೋನಿಯಾದಿಂದ ಹಿಂದಿನ 10 ವರ್ಷಗಳಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಸರಕಾರ ಅಂಕಿಸಂಖ್ಯೆ ಪ್ರಕಟಿಸಿದರೆ ಗೊತ್ತಾಗುತ್ತದೆ – ಈ ಕೊರೋನಾ ಹೊಸ ರೋಗ ಅಲ್ಲ ಅದು ಹಿಂದಿನ ಅನೇಕ ವರ್ಷಗಳಿಂದ ನಮ್ಮನ್ನು ಪೀಡಿಸುತ್ತಿದೆ ಹಾಗೂ ಈ ವರ್ಷಕ್ಕಿಂತ ಹೆಚ್ಚು ಜನರನ್ನು ಅದು ಹಿಂದಿನ ವರ್ಷಗಳಲ್ಲಿ ಆಹುತಿ ಪಡೆದಿದೆ ಎಂಬುದು!.

ಏಪ್ರಿಲ್ ಲಾಕ್ ಡೌನ್ ಮುಗಿದ ನಂತರ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಮುಂಬೈ ಮತ್ತು ಗುಜರಾತ್ ನಿಂದ ಬಿಹಾರಕ್ಕೆ ಹೋದರು. ಮುಂಬೈ ಮತ್ತು ಗುಜರಾತ್ ಕೊರೋನಾ ಹಾಟ್ ಸ್ಪಾಟ್ ಆಗಿದ್ದರೂ ಈ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಯಾರಿಗೂ ಯಾಕೆ ಕೊರೋನಾ ಸೋಂಕು ಇದ್ದ ಸುದ್ದಿ ಬರಲಿಲ್ಲ ಗೊತ್ತೇ?  ಯಾಕೆಂದರೆ ಬಡ ಕಾರ್ಮಿಕರಲ್ಲಿ ಸುಲಿಯಲು ಹಣ ಇಲ್ಲ ಎಂದು ಡಾಕ್ಟರ್ ಗಳಿಗೆ ಗೊತ್ತಿತ್ತು! ಹಾಗಾಗಿ ಅವರೆಲ್ಲಾ ಕೊರೋನಾ ನೆಗೆಟಿವ್ ಆದರು. ಯಾವುದೇ ಔಷಧಿ ಕೊಡದೇ ಶೇ.60 ಸೋಂಕಿತರಲ್ಲಿ ತನ್ನಿಂದ ತಾನೇ ಗುಣಾವಾಗುವ ಕೊರೊನಾ ರೋಗಕ್ಕೆ ‘ಮಹಾಮಾರಿ’ ಎಂದು ಮೂರ್ಖ ಹೆಸರು ಇಟ್ಟಿರುವುದು ಹಾಸ್ಯಾಸ್ಪದ ಅಲ್ಲವೇ!

ಬೇರೆ ದಿನಗಳಲ್ಲಿ 12 ಗಂಟೆ ಅಂಗಡಿಗಳು ತೆರೆದಿರುವುದರಿಂದ ದಿನಸಿ ಸಾಮಾನು ಕೊಳ್ಳಲು ಜನ ಮುಗಿಬೀಳುವುದಿಲ್ಲ. ಹಾಗಾಗಿ ಸೋಂಕು ಹರಡುವುದಿಲ್ಲ. ಆದರೆ ಲಾಕ್ ಡೌನ್ ಹೇರಿದಾಗ ಕೇವಲ ಮೂರು ಗಂಟೆ ತೆರೆದಿರುವ ಅಂಗಡಿಗೆ ಸಾಮಾನು ಕೊಳ್ಳಲು ಜನರು ಮುಗಿಬೀಳುವುದರಿಂದ ಸೋಂಕು ಹರಡುವ ಸಾಧ್ಯತೆ ಹತ್ತು ಪಟ್ಟು ಹೆಚ್ಚುತ್ತದೆ ಎಂಬುದನ್ನೂ ಆರೋಗ್ಯ ತಜ್ಞರೇ ಖಚಿತ ಪಡಿಸಿದ್ದಾರೆ. ಹಾಗಾದರೆ ಲಾಕ್ ಡೌನ್ ಯಾವ ಕರ್ಮಕ್ಕೆ?  ಲಾಕ್ ಡೌನ್ ಕೇವಲ ನಮ್ಮ ದೇಶದ ಆರ್ಥಿಕತೆಯನ್ನು ಕೊಂದಿದ್ದು ನಿಜ. ಅರೆಸಾಕ್ಷರರೇ ನಮ್ಮ ದೇಶವನ್ನು ಆಳುತ್ತಿರುವಾಗ ಇಂತಹಾ ಘೋರ ತಪ್ಪುಗಳು ಸ್ವಾಭಾವಿಕ.

ಪ್ರವೀಣ್ ಎಸ್ ಶೆಟ್ಟಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...