Homeರಾಜಕೀಯರಾಫೇಲ್ ಡೀಲ್ ಸ್ಫೋಟಕ ಸತ್ಯ: ಸುಪ್ರೀಂ ಕೋರ್ಟ್ಗೇ ಹಸೀ ಸುಳ್ಳು ಹೇಳಿದ ಮೋದಿ ಸರ್ಕಾರ

ರಾಫೇಲ್ ಡೀಲ್ ಸ್ಫೋಟಕ ಸತ್ಯ: ಸುಪ್ರೀಂ ಕೋರ್ಟ್ಗೇ ಹಸೀ ಸುಳ್ಳು ಹೇಳಿದ ಮೋದಿ ಸರ್ಕಾರ

- Advertisement -
- Advertisement -

ಬಹುಶಃ ಇದಕ್ಕಿಂತ ದೊಡ್ಡ ಹಗರಣ ಇತ್ತೀಚಿನ ದಿನಗಳಲ್ಲಿ ನಡೆದಿರಲಾರದು. ರಾಫೇಲ್ ಡೀಲ್ ವಿಚಾರದಲ್ಲಿ ಸತ್ಯವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರ ಪ್ರಯತ್ನಿಸಿದಂತೆಲ್ಲಾ, ಹೊಸ ಹೊಸ ಹಗರಣಗಳನ್ನೇ ಮಾಡುತ್ತಿದೆ. ಅದರಲ್ಲಿ ಅತ್ಯಂತ ಹೊಸ ಹಗರಣ ಹಿಂದೆಂದಿಗಿಂತಲೂ ಆಘಾತಕಾರಿಯಾದುದು. ಮೋದಿ ಸರ್ಕಾರವು ಹಸೀ ಹಸೀ ಸುಳ್ಳನ್ನು ಸುಪ್ರಿಂಕೋರ್ಟಿಗೇ ಹೇಳಲಾಗಿದೆ.

ಹೌದು, ಇಂದು ರಾಫೇಲ್ ವಿಚಾರದಲ್ಲಿ ಸುಪ್ರೀಂಕೋರ್ಟು ತೀರ್ಪು ಹೊರಬಿದ್ದ ನಂತರ ಚುನಾವಣಾ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ನಾಯಕರು ಮತ್ತು ಗೋದಿ ಮೀಡಿಯಾಗೆ ಇದ್ದಕ್ಕಿದ್ದಂತೆ ಭಾರೀ ಹುಮ್ಮಸ್ಸು ಬಂದಿತು. ಆದರೆ ಜಡ್ಜ್ಮೆಂಟ್ ಪ್ರತಿ ಹೊರಬಿದ್ದು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಇನ್ನೊಂದು ಹಗರಣ ಹೊರಬಿದ್ದಿತು.

ಸುಪ್ರೀಂಕೋರ್ಟು ಹೇಳಿದ್ದು ಇಷ್ಟು. ಈ ವ್ಯವಹಾರದ ತಾಂತ್ರಿಕ ಅಂಶಗಳನ್ನು ನಿರ್ಧರಿಸುವುದು ನಮ್ಮ ಪರಿಣಿತಿಯ ವಿಚಾರ ಅಲ್ಲ; ಡಸಾಲ್ಟ್ & ರಿಲೆಯನ್ಸ್ ನಡುವೆ ಏನು ನಡೆದಿದೆ ಅದು ಎರಡು ಕಾರ್ಪೋರೇಟ್ ಕಂಪೆನಿಗಳ ನಡುವಿನ ವ್ಯವಹಾರ; ಇದರಲ್ಲಿ ಪ್ರತಿವಾದಿ (ನರೇಂದ್ರ ದಾಮೋದರದಾಸ್ ಮೋದಿ)ಯ ಪಾತ್ರದ ಬಗ್ಗೆ ಏನು ಹೇಳಲಾಗುತ್ತಿದೆ ಅದನ್ನು ಅವರು ನಿರಾಕರಿಸಿದ್ದಾರೆ. ಈ ವ್ಯವಹಾರವನ್ನು ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿಯೇ ಮಾಡಲಾಗಿದೆ. (ಈ ಕುರಿತು ತೀರ್ಪಿನ 21ನೇ ಪುಟದ 25ನೇ ಪಾಯಿಂಟ್‌ನಲ್ಲಿ ಹೇಳಲಾಗಿದೆ) ವ್ಯವಹಾರದ ದರಗಳ ಕುರಿತು ಕಂಟ್ರೋಲರ್ & ಆಡಿಟರ್ ಜನರಲ್ (ಸಿಎಜಿ) ಮುಂದೆ ಇಡಲಾಗಿದೆ ಮತ್ತು ಅದನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಪರಿಶೀಲಿಸಿದೆ. ಇವೆಲ್ಲಾ ಕಾರಣಗಳಿಂದ ಇದರಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ನ್ಯಾಯಾಲಯವು ಭಾವಿಸಿ ಈ ಪಿಟಿಷನ್‌ಅನ್ನು ವಜಾಗೊಳಿಸುತ್ತೇವೆ.

ಈ ಎಲ್ಲಾ ವ್ಯವಹಾರವು ಸೂಕ್ತ ಪ್ರಕ್ರಿಯೆಯನ್ನನುಸರಿಸಿಯೇ ನಡೆದಿದೆ ಎಂದು ಸುಪ್ರೀಂಕೋರ್ಟು ಭಾವಿಸಲು ಇದು ಮುಖ್ಯ ಕಾರಣಗಳಲ್ಲೊಂದಾಗಿದೆ.

(ತೀರ್ಪಿನ ಪ್ರತಿಯ ಈ ಭಾಗವನ್ನೂ ನೋಡಬಹುದು)

ಆದರೆ, ವಾಸ್ತವವೇನು?

ಕಾಕತಾಳೀಯವಾಗಿ, ಈ ತೀರ್ಪು ಬಂದ ದಿನವೇ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸಭೆ ಮಧ್ಯಾಹ್ನ 3 ಗಂಟೆಗೆ ನಡೆದಿದೆ. ಅದರ ಅಧ್ಯಕ್ಷರು ಡೆಪ್ಯುಟಿ ಸಿಎಜಿಯನ್ನು ‘ನಮ್ಮ ಮುಂದಿಟ್ಟಿದ್ದ ಆ ವರದಿ ಯಾವುದು?’ ಎಂದು ಕೇಳಿದ್ದಾರೆ. ಅಂತಹ ಯಾವ ವರದಿಯೂ ಇಲ್ಲವೆಂದು ಅವರು ಉತ್ತರಿಸಿದ್ದಾರೆ. ಅಂದರೆ, ಸಿಎಜಿಯ ಮುಂದಾಗಲೀ ಪಿಎಸಿಯ ಮುಂದಾಗಲೀ ಅಂತಹ ಯಾವ ಮಾಹಿತಿಯನ್ನೂ ಕೊಟ್ಟೇ ಇಲ್ಲ. ಅಷ್ಟೂ ಸಾಲದೆಂಬಂತೆ ಅವೆಲ್ಲವನ್ನೂ ಮಾಡಿಯಾಗಿದೆಯೆಂದು ಸುಪ್ರೀಂಕೋರ್ಟಿಗೇ ಸುಳ್ಳು ಹೇಳಲಾಗಿದೆ.

ಖುದ್ದು ಪಿಎಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನೂ ಪಕ್ಕದಲ್ಲೇ ಕೂರಿಸಿಕೊಂಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿ ಇದೆಲ್ಲವನ್ನೂ ವಿವರಿಸಿದ್ದಾರೆ. (ಪತ್ರಿಕಾಗೋಷ್ಠಿಯ ವಿಡಿಯೋ ಇದರೊಂದಿಗಿದೆ, ನೋಡಬಹುದು)

ಹಾಗೆಯೇ ಸುಪ್ರೀಂಕೋರ್ಟಿನ ಅತ್ಯಂತ ಘನತೆವೆತ್ತ ನ್ಯಾಯವಾದಿಗಳಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಏನು ಹೇಳಿದ್ದಾರೆಂಬುದರ ಕುರಿತೂ ಸದ್ಯದಲ್ಲೇ ವಿವರಗಳನ್ನು ನಿಮ್ಮ ಮುಂದಿಡಲಾಗುವುದು. ಎಲ್ಲಾ ವಿವರಗಳೂ ಈ ಸುದ್ದಿಯೊಂದಿಗೆ ಅಪ್‌ಡೇಟ್ ಆಗುತ್ತಿರುತ್ತದೆ, ಸರ್ಕಾರವು ಮತ್ತು ಸುಪ್ರೀಂಕೋರ್ಟು ನಂತರ ಏನೇನು ಹೇಳುತ್ತದೆ ಎಂಬ ವಿವರಗಳು ಇದರ ಜೊತೆಗೆ ಇರುತ್ತವೆ. ಆಗಿಂದಾಗ್ಗೆ ಈ ಪುಟವನ್ನು ನೀವು ನೋಡುತ್ತಿರಬಹುದು.

ಅದೇನೇ ಇರಲಿ, ಸುಪ್ರೀಂಕೋರ್ಟಿನ ತೀರ್ಪು ಬಂದು ಕ್ಲೀನ್‌ಚಿಟ್ ಸಿಕ್ಕಿತು ಎಂದು ಎಲ್ಲರೂ ಭಾವಿಸುತ್ತಿರುವಾಗ, ಅದು ಕ್ಲೀನ್‌ಚಿಟ್ ಅಲ್ಲ; ಪಾರ್ಲಿಮೆಂಟ್ ಸಮಿತಿಗೇ ವರದಿ ಕೊಟ್ಟಿದ್ದೇವೆಂದು ಸುಪ್ರೀಂಕೋರ್ಟಿಗೇ ಸ್ವತಃ ಕೇಂದ್ರ ಸರ್ಕಾರವೇ ಸುಳ್ಳು ಹೇಳಿದ ಪ್ರಕರಣ ಎಂದು ಬಿಚ್ಚಿಕೊಳ್ಳುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

ಈ ವಿಚಾರದಲ್ಲಿ ಹೊರಬರುವ, ಈ ವಾದಕ್ಕೆ ಪ್ರತಿಯಾಗಿ ಬರುವ ವಾದಗಳನ್ನೂ ನಿಮ್ಮ ಮುಂದಿಡುವ ಕೆಲಸವನ್ನು ಈ ಪುಟದಲ್ಲಿ ಮಾಡಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...