Homeಅಂಕಣಗಳುಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

ಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

- Advertisement -
- Advertisement -

ಲೇಖಕರು: ಆರ್ತಿ ಗಾರ್ಗಿ |

28ನೇ ನವೆಂಬರ್, ಬುಧವಾರ. ‘ಜೋ ಬೋಲೆ ಸೊ ನಿಹಾಲ್, ಸತ್ ಸ್ರೀ ಅಕಾಲ್’ ಎಂಬ ಘೋಷಣೆಗಳೊಂದಿಗೆ ನೂರಾರು ಸಿಖ್ ಯಾತ್ರಿಕರು ಕರ್ತಾರಪುರದ ಪುಣ್ಯಕ್ಷೇತ್ರದೆಡೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ದೇಶವಿಭಜನೆಯ ನಂತರ ಮೊಟ್ಟಮೊದಲ ಬಾರಿ ಭಾರತದ ಸಿಖ್ಖರು (ಭಾರತದಲ್ಲಿರುವ) ಡೇರಾ ನಾನಕ್ ಸಾಹಿಬ್‍ದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದ, ಪಾಕಿಸ್ತಾನದ ಕರ್ತಾರಪುರ ಸಾಹಿಬ್ ಗುರುದ್ವಾರದೆಡೆಗೆ ಹೋಗುತ್ತಿದ್ದರು. ಫತೆಹ್‍ಗಢ್ ಚೂರಿಯಾ ಗ್ರಾಮದ 65 ವರ್ಷದ ಸಿಖ್ ವ್ಯಕ್ತಿ, ಭಾರತ-ಪಾಕಿಸ್ತಾನದ ಗಡಿಯನ್ನು ದಾಟಿದ ಮೊದಲ ಕೆಲವರಲ್ಲಿ ಒಬ್ಬರು, “ಕೊನೆಗೂ ಈ ಕರ್ತಾರಪುರ್ ಕಾರಿಡಾರ್‍ನ ಕನಸು ನನಸಾಯಿತು” ಎಂದು ಉತ್ಸಾಹದಿಂದ ಹೇಳಿದರು.
ಇಂತಹ ಅನೇಕ ಸಿಖ್ಖರಿಗೆ ಕರ್ತಾರಪುರ ಕ್ಷೇತ್ರ ಕಣ್ಣಳತೆಯಲ್ಲಿದ್ದರೂ ಕಳೆದ 70 ವರ್ಷಗಳಿಂದ ಒಂದು ದೂರದ ಕನಸಾಗಿಯೇ ಉಳಿದಿತ್ತು. ಬುಧವಾರದಂದು, ಇವರೆಲ್ಲರ ನಿರೀಕ್ಷೆ ಸುಖಾಂತ್ಯ ಕಂಡಿತು.
ಕರ್ತಾರಪುರ್ ಸಾಹಿಬ್, ಏನಿದರ ಕತೆ?
ಜಗತ್ತಿನಾದ್ಯಂತ ಇರುವ ಸಿಖ್ಖರಿಗೆ ಕರ್ತಾರಪುರ್ ಸಾಹಿಬ್ ಗುರುದ್ವಾರ ಭಾರಿ ಪ್ರಾಮುಖ್ಯತೆ ಹೊಂದಿದ ಕ್ಷೇತ್ರವಾಗಿದೆ. ಧರ್ಮಗುರು ಗುರುನಾನಕ್ ಅವರು ತಮ್ಮ ಮೂರು ದಶಕಗಳ ಸುದೀರ್ಘ ತೀರ್ಥಯಾತ್ರೆಯ ನಂತರ ಇದೇ ಜಾಗದಲ್ಲಿ ನೆಲೆಸುವ ನಿರ್ಣಯ ತೆಗೆದುಕೊಂಡಿದ್ದರು. ಇಲ್ಲಿಯೇ ಗುರು ನಾನಕ್ ಅವರು ಕೃಷಿ ಮಾಡುತ್ತ, ಶಾಂತಿಯ ಸಂದೇಶವನ್ನು ಹರಡುತ್ತ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಎಂದು ನಂಬಲಾಗುತ್ತದೆ. ಇಲ್ಲಿ ಅವರು ತಮ್ಮ ಸಾವಿಗಿಂತ ಮುಂಚೆ 17 ವರ್ಷಗಳನ್ನು ಕಳೆದು, ತಮ್ಮ ಶಿಷ್ಯನಾದ ಭಾಯಿ ಲೆಹ್ನಾ (ಗುರು ಅಂಗದ್) ಅವರನ್ನು ಮುಂದಿನ ಗುರುವಾಗಿ ನೇಮಿಸಿದರು. 1947 ರಲ್ಲಿ ದೇಶವಿಭಜನೆಯಾಗಿ, ಕರ್ತಾರಪುರ ಸಾಹಿಬ್ ಗುರುದ್ವಾರ ಪಾಕಿಸ್ತಾನಕ್ಕೆ ಸೇರಿತು. ಸದ್ಯಕ್ಕೆ ಅಟ್ಟಾರಿ-ವಾಘಾ ಗಡಿಯ ಪಕ್ಕದ ನರೋವಾಲ್ ನಗರದಲ್ಲಿ ಸ್ಥಿತವಾಗಿದೆ.
ಒಬ್ಬರೇ ನಾನಕರಿಗೆ ಒಂದು ಸಮಾಧಿ, ಒಂದು ಗೋರಿ
ಕರ್ತಾರಪುರ ಸಾಹಿಬ್‍ನ ಮುಖ್ಯ ಸಮುಚ್ಚಯ ಗುರು ನಾನಕ್ ಅವರ ಒಂದು ಸಮಾಧಿ ಹಾಗೂ ಒಂದು ಗೋರಿಯನ್ನು ಹೊಂದಿದೆ. ಅದರ ಹಿಂದಿನ ಜನಪದ ಕಥೆ ಇಂತಿದೆ.
ಗುರು ನಾನಕ್ ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆಯ ವಿಷಯವಾಗಿ, ಅವರ ಹಿಂದೂ ಮತ್ತು ಮುಸ್ಲಿಮ್ ಭಕ್ತರ ನಡುವೆ ವಾಗ್ವಾದ ಶುರುವಾಯಿತು. ಹಿಂದೂ ಭಕ್ತರು ಅವರನ್ನು ದಹನ ಮಾಡಬೇಕು ಎಂದು ಪಟ್ಟುಹಿಡಿದರೆ, ಮುಸ್ಲಿಮರು ಹೂಳಬೇಕೆಂದರು. ವಾದ ವಿವಾದದಲ್ಲಿ ಮಧ್ಯರಾತ್ರಿಯಾದಾಗ, ಮಾರನೇ ದಿನ ಇದನ್ನು ಬಗೆಹರಿಸುವ ಎಂದು ಎರಡೂ ಗುಂಪುಗಳು ನಿರ್ಣಯಿಸಿ ಮಲಗಿದವು. ಆದರೆ, ಬೆಳಗ್ಗೆ ಎದ್ದಾಗ ಅವರಿಗೆ ಕಂಡಿದ್ದು, ಗುರು ನಾನಕ್ ಅವರ ದೇಹವಿಟ್ಟಿದ್ದ ಜಾಗದಲ್ಲಿ ಒಂದು ಹೂವಿನ ದೊಡ್ಡ ರಾಶಿ. ಆಗಲೂ ಒಮ್ಮತಕ್ಕೆ ಬರಲಾಗದ್ದರಿಂದ, ಆ ಹೂವಿನ ರಾಶಿಯನ್ನು ಎರಡೂ ಗುಂಪುಗಳಿಗೆ ವಿಂಗಡಿಸಲಾಯಿತು. ಮುಸ್ಲಿಮ್ ಭಕ್ತಾದಿಗಳು ಅವರಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿದರೆ, ಹಿಂದೂಗಳು ತಮಗನುಗುಣವಾಗಿ ಮಾಡಿದರು. ಹಾಗಾಗಿ, ಕರ್ತಾರಪುರ್ ಸಾಹಿಬ್‍ನಲ್ಲಿ ಒಂದು ಸಮಾಧಿ ಮತ್ತೊಂದು ಗೋರಿ ಎರಡೂ ಇವೆ.
ಭಾರತ-ಪಾಕಿಸ್ತಾನದ ಗಡಿಯಿಂದ ಬರೀ 1 ಕಿಲೋಮೀಟರ್ ದೂರದಲ್ಲಿರುವ ಪಂಜಾಬಿನ ಡೇರಾ ಬಾಬಾ ನಾನಕ್‍ದಿಂದ ಯಾತ್ರೆ ಪ್ರಾರಂಭವಾಗುತ್ತದೆ. 4-5 ಕಿಲೋಮೋಟರ್ ದೂರದಿಂದ, ಗಡಿಯಲ್ಲಿ ನಿಂತು ಕರ್ತಾರಪುರ್ ಸಾಹಿಬ್ ಸಮುಚ್ಚಯವನ್ನು ಬರಿಗಣ್ಣಿನಿಂದ ನೋಡಬಹದು. ದೇಶವಿಭಜನೆಯ ನಂತರ ಯಾತ್ರಿಗಳು ಬೈನಾಕ್ಯುಲರ್ ಬಳಸಿ ದರ್ಶನ ಪಡೆಯುತ್ತಿದ್ದರು.
ತಮ್ಮ ಅತ್ಯಂತ ಪವಿತ್ರ ಕ್ಷೇತ್ರವು ಗಡಿಯ ಕಾರಣದಿಂದಾಗಿ ಬೇರ್ಪಟ್ಟಿರುವುದು ಸಿಖ್ ಯಾತ್ರಿಗಳಿಗೆ ಒಂದು ನೋವಿನ ವಿಷಯವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳಿಗೆ ಇಷ್ಟು ದೀರ್ಘ ಸಮಯ ಏಕೆ ಹಿಡಿಯಿತು?
ಇಂದಿರಾ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ
ಒಂದು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಔಪಚಾರಿಕವಾಗಿ ಘೋಷಿಸಿದ ಈ ಕರ್ತಾರಪುರ್ ಕಾರಿಡಾರ್ ಅನ್ನು ಈ ಹಿಂದೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಉಭಯದೇಶಗಳ ನಡುವಿನ ಐತಿಹಾಸಿಕ ಬಸ್ ಡಿಪ್ಲೊಮಸಿಯ ಸಂದರ್ಭದಲ್ಲಿ ಇದನ್ನು ಹೇಳಿದ್ದರು. ಪಾಕಿಸ್ತಾನವೂ ವಿಸಾ ಅಥವಾ ಪಾಸ್‍ಪೋರ್ಟ್ ಇಲ್ಲದೇ ಯಾತ್ರಿಗಳಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಂದು ಸೇತುವೆಯನ್ನು ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ, ಎರಡೂ ದೇಶಗಳ ನಡುವಿನ ಶಾಂತಿ ಹೆಚ್ಚುಕಾಲ ಉಳಿಯಲಿಲ್ಲ. ಗಡಿಪ್ರದೇಶದಲ್ಲಾದ ಚಟುವಟಿಕೆಗಳಿಂದ ಕಾರ್ಗಿಲ್ ಯುದ್ಧವೇ ಆಯಿತು. ಈ ಬೆಳವಣಿಗೆ ಕಾರಿಡಾರ್‍ನ ಮಾತುಕತೆಗಳನ್ನು ಕೊನೆಗಾಣಿಸಿತು. ವಾಜಪೇಯಿ ಅವರ ಶಾಂತಿ ಉಪಕ್ರಮದ ಅಂಗವಾಗಿ ಮಾಡಿದ ಲಾಹೋರ್ ಪ್ರಯಾಣದಲ್ಲಿ ಕರ್ತಾರಪುರ್ ಕಾರಿಡಾರಿನ ಮೊದಲ ಪ್ರಸ್ತಾಪ ಸಿಗುತ್ತಾದರೂ, 1869 ರಲ್ಲೇ ಈ ವಿಷಯ ಭಾರತೀಯ ಸರಕಾರದ ಗಮನ ಸೆಳೆದಿತ್ತು.
1969 ಗುರು ನಾನಕ್ ಅವರ 500 ನೇ ಜನ್ಮಶತಾಬ್ದಿಯ ವರ್ಷವಾಗಿತ್ತು. ಅದರ ಸಂಭ್ರಮಾಚರಣೆಯ ಸಮಯದಲ್ಲಿ, ಅಂದಿನ ಪ್ರಧಾನಿಯವರು ಪಂಜಾಬ್ ಸರಕಾರಕ್ಕೆ ಆಶ್ವಾಸನೆಯೊಂದನ್ನು ನೀಡಿದ್ದರು. ಕರ್ತಾರಪುರ್ ಸಾಹಿಬ್‍ಗೆ ಪ್ರವೇಶ ಸಿಗುವಂತೆ ಪಾಕಿಸ್ತಾನದೊಂದಿಗೆ ಭೂವಿನಿಮಯ ಮಾಡಿಕೊಳ್ಳುವುದಾಗಿ ನುಡಿದಿದ್ದರು. ಕರ್ತಾರಪುರ್ ಸಾಹಿಬ್‍ಗಾಗಿ ಅದರ ಪಕ್ಕದ ಭಾರತೀಯ ಭೂಭಾಗದೊಂದಿಗೆ ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದಾಗಿ ಇಂದಿರಾ ಗಾಂಧಿ ಹೇಳಿದ್ದರು. ಭಾರತದಲ್ಲಿಯ ನಂಕಾನಾ ಸಾಹಿಬ್‍ಗೆ ಪಾಕಿಸ್ತಾನದ ಯಾತ್ರಿಗಳಿಗೆ ಉಚಿತ ವೀಸಾ ನೀಡುವುದಾಗಿಯೂ ಅವರು ಹೇಳಿದ್ದರು. ಆದರೆ, ಈ ಆಶ್ವಾಸನೆಯ ತದನಂತರ ನಡೆದ ಭಾರತ-ಪಾಕಿಸ್ತಾನ್ ಯುದ್ಧ, ಬಾಂಗ್ಲಾದೇಶದ ಸೃಷ್ಟಿ, ಇವೆಲ್ಲ ಕಾರಣದಿಂದ ಕಾರಿಡಾರ್ ವಿಷಯ ಸ್ಮøತಿಪಟಲದಿಂದ ಅಳಿಸಿಹೋಯಿತು.
ಕರ್ತಾರಪುರ್ ಸಾಹಿಬ್ ಕ್ಷೇತ್ರಕ್ಕೆ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಿದ ಎರಡೂ ಸಂದರ್ಭಗಳಲ್ಲಿ, ಗಡಿಪ್ರದೇಶದಲ್ಲಿ ಹಿಂಸಾಚರಣೆ ಪ್ರಾರಂಭವಾಗಿ ಉಭಯದೇಶಗಳ ಸಂಬಂಧ ಹದಗೆಟ್ಟವು.
ಬುಧವಾರ, 28 ನವೆಂಬರ್‍ದಂದು ಶಾಂತಿಯ ಸಂದೇಶವನ್ನು ನೀಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು “ನೀವು ಒಂದು ಹೆಜ್ಜೆಯಿಟ್ಟಲ್ಲಿ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ”. ಅದಕ್ಕಿಂತ ಮುಂಚೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಈ ಹೆಜ್ಜೆಗೆ ತಮ್ಮ ಬೆಂಬಲ ನೀಡಿದ್ದರು. ಈ ಕರ್ತಾರಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ತಾನ್ ನಡುವೆಯ ‘ಬರ್ಲಿನ್ ಗೋಡೆ’ ಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದರು. ‘ಬರ್ಲಿನ್ ಗೋಡೆ ಧ್ವಂಸವಾಗುವುದು ಎಂದು ಯಾರು ನಂಬಿದ್ದರು? ಗುರು ನಾನಕ್ ಅವರ ಆಶೀರ್ವಾದದೊಂದಿಗೆ, ಈ ಕರ್ತಾರಪುರ್ ಕಾರಿಡಾರ್ ಗಡಿಗಳಾಚೆಯ ಜನರನ್ನು ಬೆಸೆಯುವ ಮಾಧ್ಯಮವಾಗಬಲ್ಲದು”. ಎಂದು ಮೋದಿ ಹೇಳಿದ್ದರು.
ಕೇಂದ್ರೀಯ ಸಚಿವೆ ಹರಸಿಮ್ರತ್ ಕೌರ್ ಅವರು ಕರ್ತಾರಪುರ್ ಕಾರಿಡಾರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಮಂತ್ರಿಯ ಸಂದೇಶವನ್ನು ಒತ್ತಿಹೇಳುವಾಗಲೇ, ವಿದೇಶಾಂಗ ಸಚಿವೆ ಉಭಯ ದೇಶಗಳ ಮಧ್ಯೆ ಮಾತುಕತೆಗೆ ಇದೊಂದೇ ಕಾರಣವಾಗಲಾರದು ಎಂದರು. ಇನ್ನೂ ಕೆಲವರು, ಈ ಕಾರಿಡಾರ್‍ನಿಂದಾಗಿ ಖಾಲಿಸ್ತಾನಿ ಅಪಾಯ ಹಿಂದಿರುಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈಗ ಹಳಿತಪ್ಪಿದ ಭಾರತ-ಪಾಕಿಸ್ತಾನದ ಮಾತುಕತೆಗಳನ್ನು ಮತ್ತೆ ಸರಿದಾರಿಗೆ ತರುವಲ್ಲಿ ಈ ಕಾರಿಡಾರ್ ಅದೃಷ್ಟಸೂಚಕವಾಗಿ ಪರಿಣಮಿಸಬಲ್ಲದೋ ಇಲ್ಲವೋ ಎನ್ನುವುದನ್ನು ಎರಡೂ ದೇಶದ ಸರಕಾರಗಳು ನಿರ್ಣಯಿಸಬೇಕಿದೆ. ಆದರೆ, ಒಂದಂತೂ ಸ್ಪಷ್ಟ, ಇಬ್ಭಾಗವಾಗಿರುವ ಎರಡೂ ದೇಶಗಳನ್ನು ಬೆಸೆಯುವುದರಲ್ಲಿ ಧರ್ಮ ಒಂದು ಸಾಧ್ಯತೆಯನ್ನು ಹುಟ್ಟುಹಾಕಬಹುದು ಎನ್ನುವುದನ್ನು ಈ ಕರ್ತಾರಪುರ್ ಕಾರಿಡಾರ್ ತೋರಿಸಿಕೊಟ್ಟಿದೆ.

ಕೃಪೆ: ಎಚ್‍ಡಬ್ಲ್ಯು ನ್ಯೂಸ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...