Homeಅಂಕಣಗಳುಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

ಕರ್ತಾರ್‍ಪುರ್ ಕಾರಿಡಾರ್: ಭಾರತ-ಪಾಕ್ ನಡುವೆ ಸಿಖ್ ಧಾರ್ಮಿಕ ಸೇತು

- Advertisement -
- Advertisement -

ಲೇಖಕರು: ಆರ್ತಿ ಗಾರ್ಗಿ |

28ನೇ ನವೆಂಬರ್, ಬುಧವಾರ. ‘ಜೋ ಬೋಲೆ ಸೊ ನಿಹಾಲ್, ಸತ್ ಸ್ರೀ ಅಕಾಲ್’ ಎಂಬ ಘೋಷಣೆಗಳೊಂದಿಗೆ ನೂರಾರು ಸಿಖ್ ಯಾತ್ರಿಕರು ಕರ್ತಾರಪುರದ ಪುಣ್ಯಕ್ಷೇತ್ರದೆಡೆಗೆ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದರು. ದೇಶವಿಭಜನೆಯ ನಂತರ ಮೊಟ್ಟಮೊದಲ ಬಾರಿ ಭಾರತದ ಸಿಖ್ಖರು (ಭಾರತದಲ್ಲಿರುವ) ಡೇರಾ ನಾನಕ್ ಸಾಹಿಬ್‍ದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದ, ಪಾಕಿಸ್ತಾನದ ಕರ್ತಾರಪುರ ಸಾಹಿಬ್ ಗುರುದ್ವಾರದೆಡೆಗೆ ಹೋಗುತ್ತಿದ್ದರು. ಫತೆಹ್‍ಗಢ್ ಚೂರಿಯಾ ಗ್ರಾಮದ 65 ವರ್ಷದ ಸಿಖ್ ವ್ಯಕ್ತಿ, ಭಾರತ-ಪಾಕಿಸ್ತಾನದ ಗಡಿಯನ್ನು ದಾಟಿದ ಮೊದಲ ಕೆಲವರಲ್ಲಿ ಒಬ್ಬರು, “ಕೊನೆಗೂ ಈ ಕರ್ತಾರಪುರ್ ಕಾರಿಡಾರ್‍ನ ಕನಸು ನನಸಾಯಿತು” ಎಂದು ಉತ್ಸಾಹದಿಂದ ಹೇಳಿದರು.
ಇಂತಹ ಅನೇಕ ಸಿಖ್ಖರಿಗೆ ಕರ್ತಾರಪುರ ಕ್ಷೇತ್ರ ಕಣ್ಣಳತೆಯಲ್ಲಿದ್ದರೂ ಕಳೆದ 70 ವರ್ಷಗಳಿಂದ ಒಂದು ದೂರದ ಕನಸಾಗಿಯೇ ಉಳಿದಿತ್ತು. ಬುಧವಾರದಂದು, ಇವರೆಲ್ಲರ ನಿರೀಕ್ಷೆ ಸುಖಾಂತ್ಯ ಕಂಡಿತು.
ಕರ್ತಾರಪುರ್ ಸಾಹಿಬ್, ಏನಿದರ ಕತೆ?
ಜಗತ್ತಿನಾದ್ಯಂತ ಇರುವ ಸಿಖ್ಖರಿಗೆ ಕರ್ತಾರಪುರ್ ಸಾಹಿಬ್ ಗುರುದ್ವಾರ ಭಾರಿ ಪ್ರಾಮುಖ್ಯತೆ ಹೊಂದಿದ ಕ್ಷೇತ್ರವಾಗಿದೆ. ಧರ್ಮಗುರು ಗುರುನಾನಕ್ ಅವರು ತಮ್ಮ ಮೂರು ದಶಕಗಳ ಸುದೀರ್ಘ ತೀರ್ಥಯಾತ್ರೆಯ ನಂತರ ಇದೇ ಜಾಗದಲ್ಲಿ ನೆಲೆಸುವ ನಿರ್ಣಯ ತೆಗೆದುಕೊಂಡಿದ್ದರು. ಇಲ್ಲಿಯೇ ಗುರು ನಾನಕ್ ಅವರು ಕೃಷಿ ಮಾಡುತ್ತ, ಶಾಂತಿಯ ಸಂದೇಶವನ್ನು ಹರಡುತ್ತ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಎಂದು ನಂಬಲಾಗುತ್ತದೆ. ಇಲ್ಲಿ ಅವರು ತಮ್ಮ ಸಾವಿಗಿಂತ ಮುಂಚೆ 17 ವರ್ಷಗಳನ್ನು ಕಳೆದು, ತಮ್ಮ ಶಿಷ್ಯನಾದ ಭಾಯಿ ಲೆಹ್ನಾ (ಗುರು ಅಂಗದ್) ಅವರನ್ನು ಮುಂದಿನ ಗುರುವಾಗಿ ನೇಮಿಸಿದರು. 1947 ರಲ್ಲಿ ದೇಶವಿಭಜನೆಯಾಗಿ, ಕರ್ತಾರಪುರ ಸಾಹಿಬ್ ಗುರುದ್ವಾರ ಪಾಕಿಸ್ತಾನಕ್ಕೆ ಸೇರಿತು. ಸದ್ಯಕ್ಕೆ ಅಟ್ಟಾರಿ-ವಾಘಾ ಗಡಿಯ ಪಕ್ಕದ ನರೋವಾಲ್ ನಗರದಲ್ಲಿ ಸ್ಥಿತವಾಗಿದೆ.
ಒಬ್ಬರೇ ನಾನಕರಿಗೆ ಒಂದು ಸಮಾಧಿ, ಒಂದು ಗೋರಿ
ಕರ್ತಾರಪುರ ಸಾಹಿಬ್‍ನ ಮುಖ್ಯ ಸಮುಚ್ಚಯ ಗುರು ನಾನಕ್ ಅವರ ಒಂದು ಸಮಾಧಿ ಹಾಗೂ ಒಂದು ಗೋರಿಯನ್ನು ಹೊಂದಿದೆ. ಅದರ ಹಿಂದಿನ ಜನಪದ ಕಥೆ ಇಂತಿದೆ.
ಗುರು ನಾನಕ್ ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆಯ ವಿಷಯವಾಗಿ, ಅವರ ಹಿಂದೂ ಮತ್ತು ಮುಸ್ಲಿಮ್ ಭಕ್ತರ ನಡುವೆ ವಾಗ್ವಾದ ಶುರುವಾಯಿತು. ಹಿಂದೂ ಭಕ್ತರು ಅವರನ್ನು ದಹನ ಮಾಡಬೇಕು ಎಂದು ಪಟ್ಟುಹಿಡಿದರೆ, ಮುಸ್ಲಿಮರು ಹೂಳಬೇಕೆಂದರು. ವಾದ ವಿವಾದದಲ್ಲಿ ಮಧ್ಯರಾತ್ರಿಯಾದಾಗ, ಮಾರನೇ ದಿನ ಇದನ್ನು ಬಗೆಹರಿಸುವ ಎಂದು ಎರಡೂ ಗುಂಪುಗಳು ನಿರ್ಣಯಿಸಿ ಮಲಗಿದವು. ಆದರೆ, ಬೆಳಗ್ಗೆ ಎದ್ದಾಗ ಅವರಿಗೆ ಕಂಡಿದ್ದು, ಗುರು ನಾನಕ್ ಅವರ ದೇಹವಿಟ್ಟಿದ್ದ ಜಾಗದಲ್ಲಿ ಒಂದು ಹೂವಿನ ದೊಡ್ಡ ರಾಶಿ. ಆಗಲೂ ಒಮ್ಮತಕ್ಕೆ ಬರಲಾಗದ್ದರಿಂದ, ಆ ಹೂವಿನ ರಾಶಿಯನ್ನು ಎರಡೂ ಗುಂಪುಗಳಿಗೆ ವಿಂಗಡಿಸಲಾಯಿತು. ಮುಸ್ಲಿಮ್ ಭಕ್ತಾದಿಗಳು ಅವರಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿದರೆ, ಹಿಂದೂಗಳು ತಮಗನುಗುಣವಾಗಿ ಮಾಡಿದರು. ಹಾಗಾಗಿ, ಕರ್ತಾರಪುರ್ ಸಾಹಿಬ್‍ನಲ್ಲಿ ಒಂದು ಸಮಾಧಿ ಮತ್ತೊಂದು ಗೋರಿ ಎರಡೂ ಇವೆ.
ಭಾರತ-ಪಾಕಿಸ್ತಾನದ ಗಡಿಯಿಂದ ಬರೀ 1 ಕಿಲೋಮೀಟರ್ ದೂರದಲ್ಲಿರುವ ಪಂಜಾಬಿನ ಡೇರಾ ಬಾಬಾ ನಾನಕ್‍ದಿಂದ ಯಾತ್ರೆ ಪ್ರಾರಂಭವಾಗುತ್ತದೆ. 4-5 ಕಿಲೋಮೋಟರ್ ದೂರದಿಂದ, ಗಡಿಯಲ್ಲಿ ನಿಂತು ಕರ್ತಾರಪುರ್ ಸಾಹಿಬ್ ಸಮುಚ್ಚಯವನ್ನು ಬರಿಗಣ್ಣಿನಿಂದ ನೋಡಬಹದು. ದೇಶವಿಭಜನೆಯ ನಂತರ ಯಾತ್ರಿಗಳು ಬೈನಾಕ್ಯುಲರ್ ಬಳಸಿ ದರ್ಶನ ಪಡೆಯುತ್ತಿದ್ದರು.
ತಮ್ಮ ಅತ್ಯಂತ ಪವಿತ್ರ ಕ್ಷೇತ್ರವು ಗಡಿಯ ಕಾರಣದಿಂದಾಗಿ ಬೇರ್ಪಟ್ಟಿರುವುದು ಸಿಖ್ ಯಾತ್ರಿಗಳಿಗೆ ಒಂದು ನೋವಿನ ವಿಷಯವಾಗಿತ್ತು. ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ಎರಡೂ ದೇಶಗಳಿಗೆ ಇಷ್ಟು ದೀರ್ಘ ಸಮಯ ಏಕೆ ಹಿಡಿಯಿತು?
ಇಂದಿರಾ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿವರೆಗೆ
ಒಂದು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಔಪಚಾರಿಕವಾಗಿ ಘೋಷಿಸಿದ ಈ ಕರ್ತಾರಪುರ್ ಕಾರಿಡಾರ್ ಅನ್ನು ಈ ಹಿಂದೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಉಭಯದೇಶಗಳ ನಡುವಿನ ಐತಿಹಾಸಿಕ ಬಸ್ ಡಿಪ್ಲೊಮಸಿಯ ಸಂದರ್ಭದಲ್ಲಿ ಇದನ್ನು ಹೇಳಿದ್ದರು. ಪಾಕಿಸ್ತಾನವೂ ವಿಸಾ ಅಥವಾ ಪಾಸ್‍ಪೋರ್ಟ್ ಇಲ್ಲದೇ ಯಾತ್ರಿಗಳಿಗೆ ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಂದು ಸೇತುವೆಯನ್ನು ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ, ಎರಡೂ ದೇಶಗಳ ನಡುವಿನ ಶಾಂತಿ ಹೆಚ್ಚುಕಾಲ ಉಳಿಯಲಿಲ್ಲ. ಗಡಿಪ್ರದೇಶದಲ್ಲಾದ ಚಟುವಟಿಕೆಗಳಿಂದ ಕಾರ್ಗಿಲ್ ಯುದ್ಧವೇ ಆಯಿತು. ಈ ಬೆಳವಣಿಗೆ ಕಾರಿಡಾರ್‍ನ ಮಾತುಕತೆಗಳನ್ನು ಕೊನೆಗಾಣಿಸಿತು. ವಾಜಪೇಯಿ ಅವರ ಶಾಂತಿ ಉಪಕ್ರಮದ ಅಂಗವಾಗಿ ಮಾಡಿದ ಲಾಹೋರ್ ಪ್ರಯಾಣದಲ್ಲಿ ಕರ್ತಾರಪುರ್ ಕಾರಿಡಾರಿನ ಮೊದಲ ಪ್ರಸ್ತಾಪ ಸಿಗುತ್ತಾದರೂ, 1869 ರಲ್ಲೇ ಈ ವಿಷಯ ಭಾರತೀಯ ಸರಕಾರದ ಗಮನ ಸೆಳೆದಿತ್ತು.
1969 ಗುರು ನಾನಕ್ ಅವರ 500 ನೇ ಜನ್ಮಶತಾಬ್ದಿಯ ವರ್ಷವಾಗಿತ್ತು. ಅದರ ಸಂಭ್ರಮಾಚರಣೆಯ ಸಮಯದಲ್ಲಿ, ಅಂದಿನ ಪ್ರಧಾನಿಯವರು ಪಂಜಾಬ್ ಸರಕಾರಕ್ಕೆ ಆಶ್ವಾಸನೆಯೊಂದನ್ನು ನೀಡಿದ್ದರು. ಕರ್ತಾರಪುರ್ ಸಾಹಿಬ್‍ಗೆ ಪ್ರವೇಶ ಸಿಗುವಂತೆ ಪಾಕಿಸ್ತಾನದೊಂದಿಗೆ ಭೂವಿನಿಮಯ ಮಾಡಿಕೊಳ್ಳುವುದಾಗಿ ನುಡಿದಿದ್ದರು. ಕರ್ತಾರಪುರ್ ಸಾಹಿಬ್‍ಗಾಗಿ ಅದರ ಪಕ್ಕದ ಭಾರತೀಯ ಭೂಭಾಗದೊಂದಿಗೆ ವಿನಿಮಯ ಮಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ಮಾಡುವುದಾಗಿ ಇಂದಿರಾ ಗಾಂಧಿ ಹೇಳಿದ್ದರು. ಭಾರತದಲ್ಲಿಯ ನಂಕಾನಾ ಸಾಹಿಬ್‍ಗೆ ಪಾಕಿಸ್ತಾನದ ಯಾತ್ರಿಗಳಿಗೆ ಉಚಿತ ವೀಸಾ ನೀಡುವುದಾಗಿಯೂ ಅವರು ಹೇಳಿದ್ದರು. ಆದರೆ, ಈ ಆಶ್ವಾಸನೆಯ ತದನಂತರ ನಡೆದ ಭಾರತ-ಪಾಕಿಸ್ತಾನ್ ಯುದ್ಧ, ಬಾಂಗ್ಲಾದೇಶದ ಸೃಷ್ಟಿ, ಇವೆಲ್ಲ ಕಾರಣದಿಂದ ಕಾರಿಡಾರ್ ವಿಷಯ ಸ್ಮøತಿಪಟಲದಿಂದ ಅಳಿಸಿಹೋಯಿತು.
ಕರ್ತಾರಪುರ್ ಸಾಹಿಬ್ ಕ್ಷೇತ್ರಕ್ಕೆ ಪ್ರವೇಶವನ್ನು ಗಂಭೀರವಾಗಿ ಪರಿಗಣಿಸಿದ ಎರಡೂ ಸಂದರ್ಭಗಳಲ್ಲಿ, ಗಡಿಪ್ರದೇಶದಲ್ಲಿ ಹಿಂಸಾಚರಣೆ ಪ್ರಾರಂಭವಾಗಿ ಉಭಯದೇಶಗಳ ಸಂಬಂಧ ಹದಗೆಟ್ಟವು.
ಬುಧವಾರ, 28 ನವೆಂಬರ್‍ದಂದು ಶಾಂತಿಯ ಸಂದೇಶವನ್ನು ನೀಡುತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು “ನೀವು ಒಂದು ಹೆಜ್ಜೆಯಿಟ್ಟಲ್ಲಿ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ”. ಅದಕ್ಕಿಂತ ಮುಂಚೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಈ ಹೆಜ್ಜೆಗೆ ತಮ್ಮ ಬೆಂಬಲ ನೀಡಿದ್ದರು. ಈ ಕರ್ತಾರಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ತಾನ್ ನಡುವೆಯ ‘ಬರ್ಲಿನ್ ಗೋಡೆ’ ಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದ್ದರು. ‘ಬರ್ಲಿನ್ ಗೋಡೆ ಧ್ವಂಸವಾಗುವುದು ಎಂದು ಯಾರು ನಂಬಿದ್ದರು? ಗುರು ನಾನಕ್ ಅವರ ಆಶೀರ್ವಾದದೊಂದಿಗೆ, ಈ ಕರ್ತಾರಪುರ್ ಕಾರಿಡಾರ್ ಗಡಿಗಳಾಚೆಯ ಜನರನ್ನು ಬೆಸೆಯುವ ಮಾಧ್ಯಮವಾಗಬಲ್ಲದು”. ಎಂದು ಮೋದಿ ಹೇಳಿದ್ದರು.
ಕೇಂದ್ರೀಯ ಸಚಿವೆ ಹರಸಿಮ್ರತ್ ಕೌರ್ ಅವರು ಕರ್ತಾರಪುರ್ ಕಾರಿಡಾರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಮಂತ್ರಿಯ ಸಂದೇಶವನ್ನು ಒತ್ತಿಹೇಳುವಾಗಲೇ, ವಿದೇಶಾಂಗ ಸಚಿವೆ ಉಭಯ ದೇಶಗಳ ಮಧ್ಯೆ ಮಾತುಕತೆಗೆ ಇದೊಂದೇ ಕಾರಣವಾಗಲಾರದು ಎಂದರು. ಇನ್ನೂ ಕೆಲವರು, ಈ ಕಾರಿಡಾರ್‍ನಿಂದಾಗಿ ಖಾಲಿಸ್ತಾನಿ ಅಪಾಯ ಹಿಂದಿರುಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈಗ ಹಳಿತಪ್ಪಿದ ಭಾರತ-ಪಾಕಿಸ್ತಾನದ ಮಾತುಕತೆಗಳನ್ನು ಮತ್ತೆ ಸರಿದಾರಿಗೆ ತರುವಲ್ಲಿ ಈ ಕಾರಿಡಾರ್ ಅದೃಷ್ಟಸೂಚಕವಾಗಿ ಪರಿಣಮಿಸಬಲ್ಲದೋ ಇಲ್ಲವೋ ಎನ್ನುವುದನ್ನು ಎರಡೂ ದೇಶದ ಸರಕಾರಗಳು ನಿರ್ಣಯಿಸಬೇಕಿದೆ. ಆದರೆ, ಒಂದಂತೂ ಸ್ಪಷ್ಟ, ಇಬ್ಭಾಗವಾಗಿರುವ ಎರಡೂ ದೇಶಗಳನ್ನು ಬೆಸೆಯುವುದರಲ್ಲಿ ಧರ್ಮ ಒಂದು ಸಾಧ್ಯತೆಯನ್ನು ಹುಟ್ಟುಹಾಕಬಹುದು ಎನ್ನುವುದನ್ನು ಈ ಕರ್ತಾರಪುರ್ ಕಾರಿಡಾರ್ ತೋರಿಸಿಕೊಟ್ಟಿದೆ.

ಕೃಪೆ: ಎಚ್‍ಡಬ್ಲ್ಯು ನ್ಯೂಸ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...