ಉರ್ದು ಭಾಷೆಯ ಖ್ಯಾತ ಕವಿ ರಾಹತ್ ಇಂದೋರಿ ಮಧ್ಯ ಪ್ರದೇಶದ ಇಂದೋರ್ನ ಆಸ್ಪತ್ರೆಯೊಂದರಲ್ಲಿ ಇಂದು ನಿಧನರಾಗಿದ್ದಾರೆ. 70 ವರ್ಷ ವಯಸ್ಸಿನ ಕವಿಗೆ ಕೊರೊನಾ ಪಾಸಿಟಿವ್ ಆದ ಕಾರಣ ಅವರು ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು.
ರಾಹತ್ ಅವರಿಗೆ ಸೋಮವಾರ ಎರಡು ಭಾರಿ ಹೃದಯಾಘಾತವಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ. ವಿನೋದ್ ಭಂಡಾರಿ ಹೇಳಿದ್ದಾರೆ.
ಒದಿ: ಸಂಸತ್ತಿನಲ್ಲೊಂದು ‘ಕೆಂಡಸಂಪಿಗೆ’… ‘ಈ ಮಣ್ಣಲಿ ಪ್ರತಿಯೊಬ್ಬನ ರಕ್ತ ಬೆರೆತಿದೆ, ಹಿಂದೂಸ್ತಾನ್ ಯಾರಪ್ಪನ ಆಸ್ತಿಯಲ್ಲ…
ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ರಾಹತ್ ಇಂದೊರಿ, ಭಾರತದ ಉರ್ದು ಕಾವ್ಯದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದರು. ಅವರ ಕವಿಗೋಷ್ಠಿಗಳಲ್ಲಿ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದರು. ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು.
RIP sir???? pic.twitter.com/x7CwSAfepG
— Raheem Khan (@RaheemK22879537) August 11, 2020
ಹಲವಾರು ಹಿಂದಿ ಚಲನಚಿತ್ರಗಳಿಗೆ ಅವರು ಗೀತರಚನೆ ಮಾಡಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಮತ ದ್ರುವೀಕರಣದ ಬಗ್ಗೆಗಿನ ಅವರ ಕವಿತೆಗಳು ಭಾರಿ ಜನಪ್ರಿಯವಾಗಿದ್ದವು.
ಓದಿ: ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ