Homeಅಂಕಣಗಳುಹಿಂಸೆಯನ್ನು ವಿರೋಧಿಸೋಣ, ಜೊತೆಗೆ.....

ಹಿಂಸೆಯನ್ನು ವಿರೋಧಿಸೋಣ, ಜೊತೆಗೆ…..

- Advertisement -
- Advertisement -

ಗೌರಿ ಲಂಕೇಶ್
ನವೆಂಬರ್ 23, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಹಿಂಸೆ. ಈ ಪದ ವಾಸ್ತವದಲ್ಲಿ ಪಡೆಯುವ ನಾನಾ ಸ್ವರೂಪಗಳ ಬಗ್ಗೆ ಇತ್ತೀಚೆಗೆ ನಾನಾ ಚರ್ಚೆಗಳು ನಡೆದಿವೆ. ನಮ್ಮದು ಅಹಿಂಸಾವಾದವನ್ನು ನಂಬಿರುವ ದೇಶ ಎಂದೇ ಹೇಳಿಕೊಂಡು ಬಂದಿರುವ ಭಾರತದಲ್ಲಿ ಇವತ್ತಿಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯಿತ್ತಲೇ ಇದೆ. ಅದನ್ನೆಲ್ಲ ನಮ್ಮ ಸಮಾಜದ ಹುಳುಕುಗಳು ಎಂದು ಹೇಳುತ್ತಾ ಸುಮ್ಮನಿದ್ದವರೆಲ್ಲ, ಯಾವಾಗ ಹಲವರು ಆ ಹುಳುಕುಗಳನ್ನು ನಿವಾರಿಸಲು ಹಿಂಸೆಯೆನಿಸುವ ಮಾರ್ಗಕ್ಕಿಳಿದರೋ, ಆಗ ಈ ಹಿಂಸಾತ್ಮಕ ಮಾರ್ಗಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸಿಡಿದೆದ್ದಿದ್ದಾರೆ.
ಹೌದು, ಹಿಂದೆಯನ್ನು ಎಂದಿಗೂ ಸಹಿಸಕೂಡದು. ಆದರೆ ನಮ್ಮ ಕಣ್ಣುಮುಂದೆಯೇ ನಮ್ಮ ಸುತ್ತಲು ನಡೆಯುತ್ತಿರುವ ಹಿಂಸೆಯ ಬಗ್ಗೆ ಯಾಕೆ ಎಲ್ಲರಿಗೂ ಜಾಣ ಕುರುಡು? ಇವತ್ತು ಪ್ರತಿನಿತ್ಯದ ಹಿಂಸೆ ಉದ್ಭವಿಸುತ್ತಿರುವುದು ಆ ಯುವಕರು ಹಿಡಿದಿರುವ ಬಂದೂಕುಗಳಿಂದಲ್ಲ, ಬದಲಾಗಿ ಸಮಾಜದ ಪುರುಷ ಪ್ರಧಾನ ಆಲೋಚನೆ, ಊಳಿಗಮಾನ್ಯ ವ್ಯವಸ್ಥೆ, ಉಳ್ಳವರ ಪರವಾಗಿರುವ ರಾಜಕೀಯ, ಜಾಗತೀಕರಣದಿಂದಾಗುತ್ತಿರುವ ಅನ್ಯಾಯ…. ಇಂಥದೆಲ್ಲ ವಿಭಿನ್ನ ಬಗೆಯ ಹಿಂಸೆಯ ರೂಪಗಳಿಂದ. ಇದು ನಮ್ಮ ಭಾರತೀಯ ಸಮಾಜಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಬದಲಾಗಿ ಮೇಲೆ ಹೇಳಿದ ಅಂಶಗಳು ಜಾಗತಿಕ ಮಟ್ಟದಲ್ಲೂ ಹಿಂಸೆಯನ್ನು ಹುಟ್ಟುಹಾಕುತ್ತಿದೆ.
ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲ ರೀತಿಯಲ್ಲೂ ಸಮಾನವಾದ ಅರ್ಹತೆಗಳನ್ನುಳ್ಳ ಎರಡು ಅರ್ಜಿಗಳನ್ನು-ಒಂದರಲ್ಲಿ ಕ್ರಿಶ್ಚಿಯನ್ ಹೆಸರನ್ನು ಹಾಗೂ ಪ್ರತಿಷ್ಠಿತ ಬಡಾವಣೆಯ ವಿಳಾಸವನ್ನು, ಮತ್ತೊಂದರಲ್ಲಿ ಮುಸ್ಲಿಂ ಹೆಸರನ್ನು ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಏರಿಯಾದ ವಿಳಾಸವನ್ನು ನಮೂದಿಸಿ-ಕೆಲಸಕ್ಕೆ ಅಹ್ವಾನಿಸಿದ್ದ ಕಚೇರಿಗಳಿಗೆ ಕಳುಹಿಸಲಾಗಿತ್ತು. ಸ್ವರ್ಗದಂತಹ ಪ್ಯಾರಿಸ್‍ನಲ್ಲೂ ನರಕಗಳಿರುತ್ತವೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕ್ರಿಶ್ಚಿಯನ್ ಹೆಸರಿನ, ಪ್ರತಿಷ್ಠಿತ ಬಡಾವಣೆಯ ಅರ್ಜಿಗೆ ಐದು ಅಹ್ವಾನಗಳು ಬಂದರೆ, ಮುಸ್ಲಿಂ ಹೆಸರಿನ ಬಡವರ್ಗಗಳ ಏರಿಯಾದ ಅರ್ಜಿಗೆ ಒಂದೇ ಒಂದು ಆಹ್ವಾನ ಬಂದಿತ್ತು.
ಇಂಥಾ ಅಸಮಾನತೆಯೂ ಒಂದು ಬಗೆಯ ಹಿಂಸೆ. ಈ ಹಿಂಸೆಯನ್ನು ಅದೆಷ್ಟು ದಿನ ತಾನೆ ಅಹಿಂಸೆಯ ನೆಪದಿಂದ ಸಹಿಸಿಕೊಳ್ಳಲು ಸಾಧ್ಯ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಪ್ಯಾರಿಸ್‍ನ ಬಿಸಿರಕ್ತದ ಹುಡುಗರು ಗಲಭೆಗಿಳಿದಿದ್ದಾರೆ. ಆ ಗಲಭೆಗಳನ್ನು ವಿರೋಧಿಸುವುದು ಎಷ್ಟು ಜರೂರೋ, ಆ ಗಲಭೆಗೆ ಕಾರಣವಾದ ನಮ್ಮ ಸಮಾಜದ ಅಂತರ್ಗತ ಹಿಂಸೆಗಳನ್ನು ಹೋಗಲಾಡಿಸಬೇಕಾದ್ದೂ ನಮ್ಮೆಲ್ಲರ ಮೇಲಿರುವ ಹೊಣೆ. ಇಲ್ಲವಾದಲ್ಲಿ ಹಿಂಸೆಯನ್ನು ವಿರೋಧಿಸುವ ಹಕ್ಕನ್ನೇ ನಾವೆಲ್ಲ ಕಳೆದುಕೊಂಡುಬಿಡುತ್ತೇವೆ.
ಅದಕ್ಕೆ ಮೊದಲೇ ಹೇಳಿದ್ದು. ‘ಹಿಂಸೆ’ ಎಂದ ಕೂಡಲೇ “ಸಹಿಸಕೂಡದು” ಎಂದು ಅರಚುವ ಬದಲಾಗಿ ಆ ಹಿಂಸೆಯ ಮೂಲ ಎಲ್ಲಿದೆ ಎಂದು ವಿಶ್ಲೇಷಿಸುವ ಅಗತ್ಯ ಇವತ್ತಿನ ತುರ್ತು ಎಂದು. ಏಕೆಂದರೆ ಪ್ಯಾರಿಸ್‍ಗೆ ಬೆಂಕಿ ಹಚ್ಚಿರುವವರು ಹಿಂಸಾವಾದಿಗಳೂ ಅಲ್ಲ, ಭಯೋತ್ಪಾದಕರೂ ಅಲ್ಲ, ಬದಲಾಗಿ ಅದು ಅಲ್ಲಿನ ವ್ಯವಸ್ಥೆಯಲ್ಲೇ ಅಡಗಿರುವ ಹಿಂಸೆಗೆ ಬಲಿಯಾದವರ ಪ್ರತಿಕ್ರಿಯೆ ಅಷ್ಟೇ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಾಜ್ಞೆಯಿಂದಾಗಲಿ, ಸ್ಪೆಷಲ್ ಸ್ಕ್ವಾಡ್‍ಗಳಿಂದಾಗಲಿ, ಗೋಲಿಬಾರ್‍ನಿಂದಾಗಲಿ ತಡೆಯಲಾಗುವುದಿಲ್ಲ.
ಇದೆಲ್ಲ ನಾವು ಕೈಕಟ್ಟಿ ಕೂತಿರುವಷ್ಟು ಕಾಲ ನಡೆಯುತ್ತಲೇ ಇರುತ್ತೆ. ಜನರಿಗೆ ಅನ್ಯಾಯದ ಬಗ್ಗೆ ಅರಿವು ಮೂಡಿದ ನಂತರವೂ ಅವರು ಕೈಕಟ್ಟಿ ಕೂತಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಹಾಗೊಮ್ಮೆ ಅವರು ಪ್ಯಾರಿಸ್ ಯುವಕರಂತೆ ಕಾರ್ಯೋನ್ಮುಖರಾದರೆ ಅವರಿಗೆ ಆಗ ಅಹಿಂಸೆಯ ಪಾಠ ಬೋಧಿಸಲಾಗುವುದಿಲ್ಲ. ಆದ್ದರಿಂದಲೇ ಹಿಂಸೆಯ ವಿವಿಧ ವ್ಯಾಖ್ಯಾನಗಳಿಗಿಂತ ಅದರ ಬೇರು ಎಲ್ಲಿದೆ ಎಂದು ಹುಡುಕಬೇಕಿದೆ. ಈ ಪ್ರಶ್ನೆಯನ್ನು ಗಾಂಧೀಜಿಯವರೂ ನಿರಾಕರಿಸಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...