Homeಅಂಕಣಗಳುಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

ಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

- Advertisement -
- Advertisement -

ಸಂಪಾದಕೀಯ |

ಚಳಿಗಾಲ ಮುಗಿದು ತಾಪಮಾನ ಏರುತ್ತಿರುವ ಜತೆಗೇ ಲೋಕಸಭಾ ಚುನಾವಣೆಯ ಬಿಸಿಯೂ ಸೇರಿ ವಾತಾವರಣದ ಶಾಖ ಏರುತ್ತಲಿದೆ. ರಾಜಕಾರಣಿಗಳ ಪ್ರತಿ ನಡೆಯೂ ಆಗಲೇ ಈ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡೇ ಜರುಗುತ್ತಲಿದೆ. ಆದರೆ ಈ ಚುನಾವಣೆ ಹಿಂದಿನಂಥದ್ದಲ್ಲ. ಇದು ಈ ದೇಶದ ಪ್ರಜಾತಂತ್ರ ಮತ್ತು ಅದಕ್ಕೆ ಅಡಿಪಾಯವಾಗಿರುವ ಸಂವಿಧಾನವನ್ನು ಜನಸಾಮಾನ್ಯರು ಉಳಿಸಿಕೊಳ್ಳುತ್ತಾರೆಯೋ ಅಥವಾ ಮತ್ತೊಮ್ಮೆ ಹಿಂದುತ್ವ ಫ್ಯಾಸಿಸಂಗೆ ಮೇಲುಗೈ ಆಗುತ್ತದೋ ಎಂಬ ನಿರ್ಣಾಯಕ ಚುನಾವಣೆ ಇದಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರ ಬವಣೆಗೆ ಈಗಲಾದರೂ ಕಿಂಚಿತ್ ಸಮಾಧಾನ ಸಿಗಬಹುದೋ ಎಂಬ ಕಾತರವೂ ಇದೆ. ಇದೇ ಆಶಯದಿಂದ ಈ ದೇಶದ ಜನ ಹಣ-ಹೆಂಡ, ಜಾತಿ ಇತ್ಯಾದಿ ಆಮಿಷಗಳ ನಡುವೆಯೂ ಅಧಿಕಾರರೂಢ ಪಕ್ಷಗಳ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲೇ ಸಾಕ್ಷಿ. ಉಪಚುನಾವಣೆಯ ಫಲಿತಾಂಶ ಮಹಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸದಿದ್ದರೂ, ಅದು ಜನರ ಆಲೋಚನೆಯ ದಿಕ್ಕನ್ನು ಸೂಚಿಸುವಂತಿರುತ್ತದೆ. ಉದಾಹರಣೆಗೆ, ಉಪಚುನಾವಣೆಗಳ ಫಲಿತಾಂಶ ಭಾಜಪದ ದರ್ಪವನ್ನೂ, ಆತ್ಮವಿಶ್ವಾಸವನ್ನೂ ಕೊಂಚ ಕುಗ್ಗಿಸಿರುವುದು ನಿಜ. ಆದರೆ ಇದರಿಂದ ವಿರೋಧ ಪಕ್ಷಗಳು ಸಂಭ್ರಮಿಸುವ ಹಾಗೇನೂ ಇಲ್ಲ. ಆಳುವ ಪಕ್ಷಗಳ ಮೇಲಿನ ಅಸಮಾಧಾನವನ್ನು ಜನ ಹೊರಹಾಕಿದ್ದಾರೆ ಅಷ್ಟೆ. ಹಾಗೆ ನೋಡಿದರೆ ಭಾರತದ ಮತದಾರರು ತುರ್ತು ಪರಿಸ್ಥಿತಿ ನಂತರ, ಕೆಲವು ಅಪವಾದಗಳನ್ನು ಹೊರತುಪಡಿಸಿ, ನಿರಂತರವಾಗಿ ಅಧಿಕಾರ ವಿರೋಧಿ ನಿಲುವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ನಮ್ಮ ಚುನಾವಣೆಯ ಸ್ವರೂಪದಲ್ಲೇ ಆಯ್ಕೆಗಳು ತೀರಾ ಮಿತವಾಗಿರುವುದರಿಂದ ಪ್ರತಿ ಬಾರಿಯೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳು ಮತ್ತೇ ಆಯ್ಕೆ ಆಗುತ್ತಲಿವೆ.
ಈ ಅಧಿಕಾರ ವಿರೋಧಿ ನಿಲುವು ಏನನ್ನೂ ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ಪ್ರತಿ ಪಕ್ಷವೂ ಜನರನ್ನು ಮೋಸಗೊಳಿಸಿದೆ. ಹೀಗೆ ಮೋಸ ಹೋಗುತ್ತಿದ್ದರೂ, ಜನ ಸಿನಿಕರಾಗದೆ ತಮ್ಮ ಸೀಮಿತ ಆಯ್ಕೆಯನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾರೆ. ಅಂದರೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಆದರೆ ಜನರಿಗೆ ಬೇಕಾದ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಪಕ್ಷಗಳಿಗೆ ಒಂದು ಸಾಧ್ಯವಾಗುತ್ತಿಲ್ಲ; ಅಥವಾ ಅದು ತಿಳಿದಿದ್ದರೂ ಅವರಿಗೆ ಈ ಬದಲಾವಣೆಗಳನ್ನು ತರಲು ಮನಸ್ಸಿಲ್ಲ. ಇನ್ನೂ ಮುಖ್ಯವಾಗಿ ನವಉದಾರೀಕರಣದಿಂದ ಹೊರಬರುವ ತನಕ ಜನಪರ ಬದಲಾವಣೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆಲವು ಜನಪ್ರಿಯ ಕಲ್ಯಾಣಯೋಜನೆಗಳನ್ನು ಮಾತ್ರ ಮುಂದಿಟ್ಟು ಅದೇ ಬದಲಾವಣೆ ಎಂಬಂತೆ ಜನರನ್ನು ಮರಳು ಮಾಡುವುದು ಎಲ್ಲ ಪಕ್ಷಗಳ ಚಾಳಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಹೋಲಿಸಿದರೆ ಇದರಲ್ಲಿ ಬಿಜೆಪಿ ಕೊಂಚ ಭಿನ್ನ ಮತ್ತು ಹೆಚ್ಚು ಅಪಾಯಕಾರಿ. ಅದು ತನ್ನ ಹಿಂದುತ್ವ ಫ್ಯಾಸಿಸಂ ಮೂಲಕ ಹೊಸ “ಹಿಂದೂ ನಾಗರಿಕತೆ”ಯನ್ನು ಕಟ್ಟುವ ಆಮಿಷವನ್ನು ಮುಂದಿಡುತ್ತದೆ. ರಾಮಮಂದಿರ ಕಟ್ಟುವುದು ಅದರ ಪ್ರಕಾರ ಈ ನಾಗರಿಕತೆಯ ಭಾಗ. ಆದರೆ ಮೊನ್ನೆಯ ಚುನಾವಣೆಗಳು ಭಾಜಪದ ಈ ಯೋಜನೆಗೆ ಸೊಪ್ಪು ಹಾಕಿಲ್ಲ. ಅವರಿಗೆ ಏರುತ್ತಿರುವ ನಿರುದ್ಯೋಗ, ಹಣದುಬ್ಬರ, ಜಿ.ಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದಾದ ತೊಂದರೆ, ಕೃಷಿ ಬಿಕ್ಕಟ್ಟು ಇತ್ಯಾದಿ ಹಾರ್ಡ್‍ಕೋರ್ ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಹೀಗಾಗಿ ರಾಮಮಂದಿರದ ವಿಚಾರ ಕೊಂಚ ಮಟ್ಟಿಗೆ ತನ್ನ ಅಪೀಲನ್ನು ಕಳೆದುಕೊಂಡಿದೆ. ಮೋದಿಯ ವಾಗ್ಝರಿ ಕೂಡ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕಂಗಾಲಾಗಿರುವ ಮೋದಿ ಈ ಚುನಾವಣೆಯನ್ನು ಸುಭದ್ರ (ಮಜ್ಬೂರ್) ಮತ್ತು ಅಸಹಾಯಕ (ಮಜ್ದೂರ್) ಸರ್ಕಾರದ ನಡುವಿನ ಆಯ್ಕೆ ಎಂದಿದ್ದಾರೆ. ಆದರ ಹಿಂದೆಯೇ ತಮ್ಮ ಪಕ್ಷ ತನ್ನ ಎಲ್ಲ ಹಳೆಯ ಗೆಳೆಯರನ್ನು ಸ್ವಾಗತಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಈ ಬಾರಿ ತಮಗೆ ಭಾರಿ ಬಹುಮತ ಸಿಗಲಾರದು ಎನ್ನುವುದನ್ನು ಬಿಜೆಪ ಈಗಾಗಲೇ ಒಪ್ಪಿಕೊಂಡ ಹಾಗಿದೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಹೆಚ್ಚು ಸಂಭವನೀಯ. ಇದು ಕೂಡ ಜನರ ಭ್ರಮನಿರಸನದ ಆಯ್ಕೆಯ ಪ್ರತೀಕವೇ ಹೌದು.
ಇದರಿಂದ ಹೊರಹೊಮ್ಮುವ ಪಾಠಗಳೇನು?
ಮೊದಲಿಗೆ, ಹಿಂದುತ್ವ, ಕೋಮುವಾದ, ರಾಮಮಂದಿರ…. ಇತ್ಯಾದಿ ಭಾವನಾತ್ಮಕ ಅಂಶಗಳು ಜನರಿಗೆ ಬೇಕಾದ ನೆಮ್ಮದಿಯ ಬದುಕು, ಭದ್ರತೆಗಳನ್ನು ನೀಡಲಾಗದು ಎಂಬ ಅರಿವು. ಇದು ಸ್ಪಷ್ಟವಾಗಿ ಗೋಚರವಾಗದಿದ್ದರೂ, ಆಳದಲ್ಲಿ ಕೆಲಸ ಮಾಡಿರುವುದು ನಿಜ. ಹಾಗೆಯೇ, ಈ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಅಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳು ದುರ್ಲಭವಾಗಿರುವುದು ಇನ್ನೊಂದು. ಮೇಲಾಗಿ, ಅಸಂಘಟಿತ ಕಾರ್ಮಿಕರ, ಮಹಿಳೆ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಆತಂಕ ಇತ್ಯಾದಿ ವಿಷಯಗಳಿಗೆ ಬೇಕಾದ ಸೂಕ್ತ ಪರಿಹಾರ ಮಾರ್ಗಗಳು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ ಎಂಬ ಸತ್ಯ.
ಮುಂದಿನ ಚುನಾವಣೆ ಈ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ಆದರೆ ಈಗಿನ ರಾಜಕೀಯ ಪಕ್ಷಗಳಲ್ಲಿ ಈ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಸ್ಪಷ್ಟ ಕಾರ್ಯಯೋಜನೆ ಇಲ್ಲ. ಜಾಗತೀಕರಣ ಮತ್ತು ಖಾಸಗಿಕರಣಕ್ಕೇ ಒತ್ತು ನೀಡುವ ಯಾವ ಪಕ್ಷದಿಂದಲೂ ಈ ಸಂದಿಗ್ಧತೆಯಿಂದ ಹೊರಬರುವ ಮಾರ್ಗವೇ ಇಲ್ಲ. ಹೀಗಾಗಿ ಇಂದು ಪಕ್ಷರಾಜಕಾರಣದಿಂದ ಹೊರತಾಗಿ ಯೋಚಿಸುವ, ನಮ್ಮ ದೇಶದ ಜನ ಕಾಯುತ್ತಿರುವ ಬದಲಾವಣೆಗಳನ್ನು ಜಾರಿಗೆ ತರುವ ಮಾರ್ಗೊಪಾಯಗಳನ್ನು ಜನರ ಮುಂದಿಡುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಅಂಥ ಕಾರ್ಯೊದ್ದೇಶವನ್ನು ಇಟ್ಟುಕೊಂಡು ಹೋರಾಡುವ ಹೊಸ ಯುವ ಶಕ್ತಿಯೊಂದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈ ಕಾರಣಕ್ಕೆ ‘ಬದಲಾವಣೆ ಸಾಧ್ಯ ಮತ್ತು ನನ್ನಿಂದಲೇ ಈ ಬದಲಾವಣೆ ಪ್ರಾರಂಭ’ ಎಂಬ ಅರ್ಥ ಧ್ವನಿಸುವ ‘ಐ ಕ್ಯಾನ್’ (I ಅಂಓ) ಆಂದೋಲನಕ್ಕೆ ಅಖಿಲ ಭಾರತ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೇ ಆಶಯಗಳನ್ನ ಹೊಂದಿರುವ ಆದರೆ ಕರ್ನಾಟಕದ ಸಂದರ್ಭಕ್ಕೆ ಹತ್ತಿರವಾದ ವಿಚಾರಗಳನ್ನು ಇಟ್ಟುಕೊಂಡು ‘ದೇಶಕ್ಕಾಗಿ ನಾವು – ನಂಗೂ ಸಾಧ್ಯ!’ ಎಂಬ ಘೋಷಣೆಯ ಅಡಿಯಲ್ಲಿ ಯುವ ಜನತೆಯನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ. ಇದರಲ್ಲಿ ಜತೆಯಾಗುವ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿಗಳ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ವಿಚಾರಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ತಮ್ಮ ಅಜೆಂಡಾಗಳನ್ನೂ, ಅನನ್ಯತೆಗಳನ್ನು ಇಟ್ಟುಕೊಂಡೇ ‘ದೇಶಕ್ಕಾಗಿ ನಾವು’ ಎನ್ನುವ ಸಮಾನ ಆಶಯದೊಂದಿಗೆ ಕೈಜೋಡಿಸಲಿದ್ದಾರೆ. ಇದೊಂದು ರೀತಿಯಲ್ಲಿ ‘ಪ್ರಜಾ ಮಹಾಘಟ ಬಂಧನ’. ಇದು ಬದಲಾವಣೆಗೆ ಹಾತೊರೆಯುವ ಮನಸ್ಸುಗಳೆಲ್ಲಾ ಒಗ್ಗೂಡಿ ನಿಜವಾದ ಜನ ಪರ್ಯಾಯವನ್ನು ಕಟ್ಟುವ ಪ್ರಯತ್ನ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ. ಈ ಆಂದೋಲನಕ್ಕೆ ಧ್ವನಿಗೂಡಿಸಿರುವ ಹಿರಿಯ ಮುತ್ಸದ್ಧಿ ಎ.ಕೆ ಸುಬ್ಬಯ್ಯನವರು ಹೇಳಿರುವ ಹಾಗೆ ಇದು ಯಾವುದೋ ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು ನಡೆಯುತ್ತಿರುವ ಆಂದೋಲನವಲ್ಲ. ಪ್ರಜೆಗಳೇ ಪ್ರಜಾಪ್ರÀಭುತ್ವದ ನಿಜವಾದ ಪ್ರಭುಗಳು ಎನ್ನುವುದನ್ನು ರಾಜಕೀಯ ಪಕ್ಷಗಳಿಗೆ ನೆನಪಿಸುವ, ಜನರ ಅಧಿಕಾರಕ್ಕಾಗಿ ಒತ್ತಾಯಿಸುವ ಹೋರಾಟ.
ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಆದಿಯಾಗಿ ಜನಪರವಾಗಿ ಇರುವ ಎಲ್ಲ ಹಿರಿಯ ಕಿರಿಯರೂ ಭಾಗಿಯಾಗಿದ್ದಾರೆ. ನೀವೂ ಕೂಡ ಹೇಳಿ ‘ನಂಗೂ ಸಾಧ್ಯ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...