Homeಅಂಕಣಗಳುಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

ಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

- Advertisement -
- Advertisement -

ಸಂಪಾದಕೀಯ |

ಚಳಿಗಾಲ ಮುಗಿದು ತಾಪಮಾನ ಏರುತ್ತಿರುವ ಜತೆಗೇ ಲೋಕಸಭಾ ಚುನಾವಣೆಯ ಬಿಸಿಯೂ ಸೇರಿ ವಾತಾವರಣದ ಶಾಖ ಏರುತ್ತಲಿದೆ. ರಾಜಕಾರಣಿಗಳ ಪ್ರತಿ ನಡೆಯೂ ಆಗಲೇ ಈ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡೇ ಜರುಗುತ್ತಲಿದೆ. ಆದರೆ ಈ ಚುನಾವಣೆ ಹಿಂದಿನಂಥದ್ದಲ್ಲ. ಇದು ಈ ದೇಶದ ಪ್ರಜಾತಂತ್ರ ಮತ್ತು ಅದಕ್ಕೆ ಅಡಿಪಾಯವಾಗಿರುವ ಸಂವಿಧಾನವನ್ನು ಜನಸಾಮಾನ್ಯರು ಉಳಿಸಿಕೊಳ್ಳುತ್ತಾರೆಯೋ ಅಥವಾ ಮತ್ತೊಮ್ಮೆ ಹಿಂದುತ್ವ ಫ್ಯಾಸಿಸಂಗೆ ಮೇಲುಗೈ ಆಗುತ್ತದೋ ಎಂಬ ನಿರ್ಣಾಯಕ ಚುನಾವಣೆ ಇದಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರ ಬವಣೆಗೆ ಈಗಲಾದರೂ ಕಿಂಚಿತ್ ಸಮಾಧಾನ ಸಿಗಬಹುದೋ ಎಂಬ ಕಾತರವೂ ಇದೆ. ಇದೇ ಆಶಯದಿಂದ ಈ ದೇಶದ ಜನ ಹಣ-ಹೆಂಡ, ಜಾತಿ ಇತ್ಯಾದಿ ಆಮಿಷಗಳ ನಡುವೆಯೂ ಅಧಿಕಾರರೂಢ ಪಕ್ಷಗಳ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲೇ ಸಾಕ್ಷಿ. ಉಪಚುನಾವಣೆಯ ಫಲಿತಾಂಶ ಮಹಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸದಿದ್ದರೂ, ಅದು ಜನರ ಆಲೋಚನೆಯ ದಿಕ್ಕನ್ನು ಸೂಚಿಸುವಂತಿರುತ್ತದೆ. ಉದಾಹರಣೆಗೆ, ಉಪಚುನಾವಣೆಗಳ ಫಲಿತಾಂಶ ಭಾಜಪದ ದರ್ಪವನ್ನೂ, ಆತ್ಮವಿಶ್ವಾಸವನ್ನೂ ಕೊಂಚ ಕುಗ್ಗಿಸಿರುವುದು ನಿಜ. ಆದರೆ ಇದರಿಂದ ವಿರೋಧ ಪಕ್ಷಗಳು ಸಂಭ್ರಮಿಸುವ ಹಾಗೇನೂ ಇಲ್ಲ. ಆಳುವ ಪಕ್ಷಗಳ ಮೇಲಿನ ಅಸಮಾಧಾನವನ್ನು ಜನ ಹೊರಹಾಕಿದ್ದಾರೆ ಅಷ್ಟೆ. ಹಾಗೆ ನೋಡಿದರೆ ಭಾರತದ ಮತದಾರರು ತುರ್ತು ಪರಿಸ್ಥಿತಿ ನಂತರ, ಕೆಲವು ಅಪವಾದಗಳನ್ನು ಹೊರತುಪಡಿಸಿ, ನಿರಂತರವಾಗಿ ಅಧಿಕಾರ ವಿರೋಧಿ ನಿಲುವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ನಮ್ಮ ಚುನಾವಣೆಯ ಸ್ವರೂಪದಲ್ಲೇ ಆಯ್ಕೆಗಳು ತೀರಾ ಮಿತವಾಗಿರುವುದರಿಂದ ಪ್ರತಿ ಬಾರಿಯೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳು ಮತ್ತೇ ಆಯ್ಕೆ ಆಗುತ್ತಲಿವೆ.
ಈ ಅಧಿಕಾರ ವಿರೋಧಿ ನಿಲುವು ಏನನ್ನೂ ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ಪ್ರತಿ ಪಕ್ಷವೂ ಜನರನ್ನು ಮೋಸಗೊಳಿಸಿದೆ. ಹೀಗೆ ಮೋಸ ಹೋಗುತ್ತಿದ್ದರೂ, ಜನ ಸಿನಿಕರಾಗದೆ ತಮ್ಮ ಸೀಮಿತ ಆಯ್ಕೆಯನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾರೆ. ಅಂದರೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಆದರೆ ಜನರಿಗೆ ಬೇಕಾದ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಪಕ್ಷಗಳಿಗೆ ಒಂದು ಸಾಧ್ಯವಾಗುತ್ತಿಲ್ಲ; ಅಥವಾ ಅದು ತಿಳಿದಿದ್ದರೂ ಅವರಿಗೆ ಈ ಬದಲಾವಣೆಗಳನ್ನು ತರಲು ಮನಸ್ಸಿಲ್ಲ. ಇನ್ನೂ ಮುಖ್ಯವಾಗಿ ನವಉದಾರೀಕರಣದಿಂದ ಹೊರಬರುವ ತನಕ ಜನಪರ ಬದಲಾವಣೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆಲವು ಜನಪ್ರಿಯ ಕಲ್ಯಾಣಯೋಜನೆಗಳನ್ನು ಮಾತ್ರ ಮುಂದಿಟ್ಟು ಅದೇ ಬದಲಾವಣೆ ಎಂಬಂತೆ ಜನರನ್ನು ಮರಳು ಮಾಡುವುದು ಎಲ್ಲ ಪಕ್ಷಗಳ ಚಾಳಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಹೋಲಿಸಿದರೆ ಇದರಲ್ಲಿ ಬಿಜೆಪಿ ಕೊಂಚ ಭಿನ್ನ ಮತ್ತು ಹೆಚ್ಚು ಅಪಾಯಕಾರಿ. ಅದು ತನ್ನ ಹಿಂದುತ್ವ ಫ್ಯಾಸಿಸಂ ಮೂಲಕ ಹೊಸ “ಹಿಂದೂ ನಾಗರಿಕತೆ”ಯನ್ನು ಕಟ್ಟುವ ಆಮಿಷವನ್ನು ಮುಂದಿಡುತ್ತದೆ. ರಾಮಮಂದಿರ ಕಟ್ಟುವುದು ಅದರ ಪ್ರಕಾರ ಈ ನಾಗರಿಕತೆಯ ಭಾಗ. ಆದರೆ ಮೊನ್ನೆಯ ಚುನಾವಣೆಗಳು ಭಾಜಪದ ಈ ಯೋಜನೆಗೆ ಸೊಪ್ಪು ಹಾಕಿಲ್ಲ. ಅವರಿಗೆ ಏರುತ್ತಿರುವ ನಿರುದ್ಯೋಗ, ಹಣದುಬ್ಬರ, ಜಿ.ಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದಾದ ತೊಂದರೆ, ಕೃಷಿ ಬಿಕ್ಕಟ್ಟು ಇತ್ಯಾದಿ ಹಾರ್ಡ್‍ಕೋರ್ ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಹೀಗಾಗಿ ರಾಮಮಂದಿರದ ವಿಚಾರ ಕೊಂಚ ಮಟ್ಟಿಗೆ ತನ್ನ ಅಪೀಲನ್ನು ಕಳೆದುಕೊಂಡಿದೆ. ಮೋದಿಯ ವಾಗ್ಝರಿ ಕೂಡ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕಂಗಾಲಾಗಿರುವ ಮೋದಿ ಈ ಚುನಾವಣೆಯನ್ನು ಸುಭದ್ರ (ಮಜ್ಬೂರ್) ಮತ್ತು ಅಸಹಾಯಕ (ಮಜ್ದೂರ್) ಸರ್ಕಾರದ ನಡುವಿನ ಆಯ್ಕೆ ಎಂದಿದ್ದಾರೆ. ಆದರ ಹಿಂದೆಯೇ ತಮ್ಮ ಪಕ್ಷ ತನ್ನ ಎಲ್ಲ ಹಳೆಯ ಗೆಳೆಯರನ್ನು ಸ್ವಾಗತಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಈ ಬಾರಿ ತಮಗೆ ಭಾರಿ ಬಹುಮತ ಸಿಗಲಾರದು ಎನ್ನುವುದನ್ನು ಬಿಜೆಪ ಈಗಾಗಲೇ ಒಪ್ಪಿಕೊಂಡ ಹಾಗಿದೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಹೆಚ್ಚು ಸಂಭವನೀಯ. ಇದು ಕೂಡ ಜನರ ಭ್ರಮನಿರಸನದ ಆಯ್ಕೆಯ ಪ್ರತೀಕವೇ ಹೌದು.
ಇದರಿಂದ ಹೊರಹೊಮ್ಮುವ ಪಾಠಗಳೇನು?
ಮೊದಲಿಗೆ, ಹಿಂದುತ್ವ, ಕೋಮುವಾದ, ರಾಮಮಂದಿರ…. ಇತ್ಯಾದಿ ಭಾವನಾತ್ಮಕ ಅಂಶಗಳು ಜನರಿಗೆ ಬೇಕಾದ ನೆಮ್ಮದಿಯ ಬದುಕು, ಭದ್ರತೆಗಳನ್ನು ನೀಡಲಾಗದು ಎಂಬ ಅರಿವು. ಇದು ಸ್ಪಷ್ಟವಾಗಿ ಗೋಚರವಾಗದಿದ್ದರೂ, ಆಳದಲ್ಲಿ ಕೆಲಸ ಮಾಡಿರುವುದು ನಿಜ. ಹಾಗೆಯೇ, ಈ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಅಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳು ದುರ್ಲಭವಾಗಿರುವುದು ಇನ್ನೊಂದು. ಮೇಲಾಗಿ, ಅಸಂಘಟಿತ ಕಾರ್ಮಿಕರ, ಮಹಿಳೆ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಆತಂಕ ಇತ್ಯಾದಿ ವಿಷಯಗಳಿಗೆ ಬೇಕಾದ ಸೂಕ್ತ ಪರಿಹಾರ ಮಾರ್ಗಗಳು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ ಎಂಬ ಸತ್ಯ.
ಮುಂದಿನ ಚುನಾವಣೆ ಈ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ಆದರೆ ಈಗಿನ ರಾಜಕೀಯ ಪಕ್ಷಗಳಲ್ಲಿ ಈ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಸ್ಪಷ್ಟ ಕಾರ್ಯಯೋಜನೆ ಇಲ್ಲ. ಜಾಗತೀಕರಣ ಮತ್ತು ಖಾಸಗಿಕರಣಕ್ಕೇ ಒತ್ತು ನೀಡುವ ಯಾವ ಪಕ್ಷದಿಂದಲೂ ಈ ಸಂದಿಗ್ಧತೆಯಿಂದ ಹೊರಬರುವ ಮಾರ್ಗವೇ ಇಲ್ಲ. ಹೀಗಾಗಿ ಇಂದು ಪಕ್ಷರಾಜಕಾರಣದಿಂದ ಹೊರತಾಗಿ ಯೋಚಿಸುವ, ನಮ್ಮ ದೇಶದ ಜನ ಕಾಯುತ್ತಿರುವ ಬದಲಾವಣೆಗಳನ್ನು ಜಾರಿಗೆ ತರುವ ಮಾರ್ಗೊಪಾಯಗಳನ್ನು ಜನರ ಮುಂದಿಡುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಅಂಥ ಕಾರ್ಯೊದ್ದೇಶವನ್ನು ಇಟ್ಟುಕೊಂಡು ಹೋರಾಡುವ ಹೊಸ ಯುವ ಶಕ್ತಿಯೊಂದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈ ಕಾರಣಕ್ಕೆ ‘ಬದಲಾವಣೆ ಸಾಧ್ಯ ಮತ್ತು ನನ್ನಿಂದಲೇ ಈ ಬದಲಾವಣೆ ಪ್ರಾರಂಭ’ ಎಂಬ ಅರ್ಥ ಧ್ವನಿಸುವ ‘ಐ ಕ್ಯಾನ್’ (I ಅಂಓ) ಆಂದೋಲನಕ್ಕೆ ಅಖಿಲ ಭಾರತ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೇ ಆಶಯಗಳನ್ನ ಹೊಂದಿರುವ ಆದರೆ ಕರ್ನಾಟಕದ ಸಂದರ್ಭಕ್ಕೆ ಹತ್ತಿರವಾದ ವಿಚಾರಗಳನ್ನು ಇಟ್ಟುಕೊಂಡು ‘ದೇಶಕ್ಕಾಗಿ ನಾವು – ನಂಗೂ ಸಾಧ್ಯ!’ ಎಂಬ ಘೋಷಣೆಯ ಅಡಿಯಲ್ಲಿ ಯುವ ಜನತೆಯನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ. ಇದರಲ್ಲಿ ಜತೆಯಾಗುವ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿಗಳ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ವಿಚಾರಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ತಮ್ಮ ಅಜೆಂಡಾಗಳನ್ನೂ, ಅನನ್ಯತೆಗಳನ್ನು ಇಟ್ಟುಕೊಂಡೇ ‘ದೇಶಕ್ಕಾಗಿ ನಾವು’ ಎನ್ನುವ ಸಮಾನ ಆಶಯದೊಂದಿಗೆ ಕೈಜೋಡಿಸಲಿದ್ದಾರೆ. ಇದೊಂದು ರೀತಿಯಲ್ಲಿ ‘ಪ್ರಜಾ ಮಹಾಘಟ ಬಂಧನ’. ಇದು ಬದಲಾವಣೆಗೆ ಹಾತೊರೆಯುವ ಮನಸ್ಸುಗಳೆಲ್ಲಾ ಒಗ್ಗೂಡಿ ನಿಜವಾದ ಜನ ಪರ್ಯಾಯವನ್ನು ಕಟ್ಟುವ ಪ್ರಯತ್ನ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ. ಈ ಆಂದೋಲನಕ್ಕೆ ಧ್ವನಿಗೂಡಿಸಿರುವ ಹಿರಿಯ ಮುತ್ಸದ್ಧಿ ಎ.ಕೆ ಸುಬ್ಬಯ್ಯನವರು ಹೇಳಿರುವ ಹಾಗೆ ಇದು ಯಾವುದೋ ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು ನಡೆಯುತ್ತಿರುವ ಆಂದೋಲನವಲ್ಲ. ಪ್ರಜೆಗಳೇ ಪ್ರಜಾಪ್ರÀಭುತ್ವದ ನಿಜವಾದ ಪ್ರಭುಗಳು ಎನ್ನುವುದನ್ನು ರಾಜಕೀಯ ಪಕ್ಷಗಳಿಗೆ ನೆನಪಿಸುವ, ಜನರ ಅಧಿಕಾರಕ್ಕಾಗಿ ಒತ್ತಾಯಿಸುವ ಹೋರಾಟ.
ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಆದಿಯಾಗಿ ಜನಪರವಾಗಿ ಇರುವ ಎಲ್ಲ ಹಿರಿಯ ಕಿರಿಯರೂ ಭಾಗಿಯಾಗಿದ್ದಾರೆ. ನೀವೂ ಕೂಡ ಹೇಳಿ ‘ನಂಗೂ ಸಾಧ್ಯ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...