ಭಾರತ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಬಿಜೆಪಿಯ ಇಮಾರ್ತಿ ದೇವಿಗೆ ನೋಟಿಸ್ ನೀಡಿದ್ದು, ತನ್ನ ರಾಜಕೀಯ ಪ್ರತಿಸ್ಪರ್ಧಿಯ ಹೆಸರು ಹೇಳದೇ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ 48 ಗಂಟೆಗಳ ಒಳಗೆ ತನ್ನ ನಿಲುವನ್ನು ವಿವರಿಸುವಂತೆ ಆದೇಶಿಸಿದೆ.
ಇಮಾರ್ತಿ ದೇವಿ ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಹಿಂದೆ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಇಮಾರ್ತಿ ದೇವಿಯವರನ್ನು “ಐಟಂ” ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು.
“ಅವರು ಬಂಗಾಳಿ ವ್ಯಕ್ತಿ. ಅವರು ಮುಖ್ಯಮಂತ್ರಿಯಾಗಲು ಇಲ್ಲಿಗೆ ಬಂದರು. ಆದರೆ ಅವರಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ನಂತರ ಅವರು ಹುಚ್ಚರಾಗಿದ್ದಾರೆ. ಅವರ ಬಗ್ಗೆ ಏನೂ ಹೇಳಲಾಗುವುದಿಲ್ಲ. ಬಹುಶಃ ಅವರ ತಾಯಿ ಮತ್ತು ಸಹೋದರಿ ಬಂಗಾಳದ ಐಟಂಗಳಾಗಿರಬಹುದು” ಎಂದು ಇಮಾರ್ತಿ ದೇವಿ ಹೇಳಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ: ‘ಐಟಂ’ ಹೇಳಿಕೆಗೆ ಕಮಲನಾಥ್ ವಿವರಣೆ ನೀಡಬೇಕು ಎಂದ ಚುನಾವಣಾ ಆಯೋಗ!
ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.
ಇದರ ನಡುವೆ ಕಮಲ ನಾಥ್ ಅವರಿಗೂ ನೋಟಿಸ್ ನೀಡಿ ತಮ್ಮ ಹೇಳಿಕೆಯ ಬಗ್ಗೆ ವಿವರಣೆಯನ್ನು ಕೋರಿತ್ತು. ನಂತರ ಇಂತಹ ಪದಗಳನ್ನು ಸಾರ್ವಜನಿಕವಾಗಿ ಮಾತನಾಡುವಾಗ ಬಳಸಬಾರದು ಎಂದು ಎಚ್ಚರಿಸಿತ್ತು.
ಮಾದರಿ ನೀತಿ ಸಂಹಿತೆ ಸೆಪ್ಟೆಂಬರ್ 29 ರಿಂದ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದೆ.
ಇದನ್ನೂ ಓದಿ: ಕಮಲನಾಥ್ ವಿವಾದಾತ್ಮಕ ಹೇಳಿಕೆ ಟೀಕಿಸಿದ ರಾಹುಲ್ ಗಾಂಧಿ
ಎಂಥ ವಿಪರ್ಯಾಸ ನೋಡಿ. ಒಬ್ಬ ಮಾಜಿ ಮುಖ್ಯಮಂತ್ರಿ ಒಬ್ಬ ಹೆಣ್ಣುಮಗಳಿಗೆ ಐಟಂ ಎಂದಾಗ ಈ ಆಯೋಗ ಎಲ್ಲಿ ಮಲಗಿತ್ತೋ ಏನೋ….ತನಗೆ ಬಂದ ಮಾತಿಗೆ ಪ್ರತಿಕ್ರಿಯೆ ನೀಡಿ ಸಂತ್ರಸ್ತೆ ಮಾತನಾಡಿದರೆ ಅವರಿಗೆ ‘ ನೋಟೀಸು ‘
ಏನೇ ಆಗಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಮೋದಿ ವಿರುದ್ಧ, ವಿರೋಧಿಗಳ ವಿರುದ್ದ ಪುಂಖಾನುಪುಂಖವಾಗಿ ಪವಿತ್ರ ಪದಗಳನ್ನು ಉದುರಿಸುತ್ತಲೇ ಇದ್ದರೂ ನಡೆಯುತ್ತದೆ ಆದರೆ ಅನ್ನಿಸಿಕೊಂಡವರು ಪ್ರತಿಯಾಗಿ ಅಂದರೆ ಅವರಿಗೆ ನೋಟೀಸು, ಕೇಸು !
ಆರು ವರ್ಷಗಳ ಹಿಂದೆ ಆ ಪಕ್ಷದಿಂದ ಪಡೆದ ಸೇವೆ ಇನ್ನೂ ಕೆಲಸ ಮಾಡುತ್ತಿದೆಯಾ ? ಎಂಬ ಗುಮಾನಿ