Homeಅಂಕಣಗಳುಗೌರಿ ಕಾರ್ನರ್: “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ”

ಗೌರಿ ಕಾರ್ನರ್: “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ”

- Advertisement -
- Advertisement -

ಗೌರಿ ಮೇಡಂ ಜೊತೆಗಿನ ನನ್ನ ಒಡನಾಟಕ್ಕೆ ಈ ವರ್ಷಕ್ಕೆ 20 ತುಂಬುತ್ತದೆ. ಅದರಲ್ಲಿ ಅವರು ಜೊತೆಗಿಲ್ಲದೇ ಕಳೆದ 3 ವರ್ಷಗಳನ್ನೂ ಸೇರಿಸಿದ್ದೇನೆ, ಏಕೆಂದರೆ ಅವರ ಸಾವಿನ ನಂತರ ಅವರ ವಿಚಾರ, ಆಶಯ, ಗುರಿ ಅವನ್ನು ಮುಟ್ಟಬಹುದಾದ ದಾರಿ ಇವುಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆಸೆದುಕೊಂಡಿದ್ದೇನೆ. ಇಂಥದೇ ವಿಚಾರಗಳಿಂದ ಕೂಡಿದ ಒಂದಿಡೀ ಉತ್ಸಾಹಿ ತಂಡದೊಂದಿಗೆ ಗುರುತಿಸಿಕೊಂಡಾಗಿನಿಂದ ಜೀವನ ಹೆಚ್ಚು ಪ್ರಸ್ತುತವೆನಿಸುತ್ತದೆ.

ಗೌರಿ ಮೇಡಂ, ಪತ್ರಕರ್ತೆಯಿಂದ ಆಕ್ಟಿವಿಸ್ಟ್ ಆಗಿ ಬೆಳೆದ ಅವರ ಪ್ರಯಾಣದ ಎಲ್ಲ ಹಂತದಲ್ಲಿ ಅವರ ಜೊತೆ ಇದ್ದು ಅವರು ಆ ಬೆಳವಣಿಗೆಯ ಆಳ-ಅಗಲ ಅರ್ಥವಾಗುವಷ್ಟರಲ್ಲಿ ಅವರನ್ನು ಕಳೆದುಕೊಂಡಾಗ, ನನ್ನದೇ ವ್ಯಕ್ತಿತ್ವದ ಒಂದು ಭಾಗ ಕಿತ್ತುಹೋದಂತಾಯ್ತು.

ನಾನು ಲಂಕೇಶ್ ಪತ್ರಿಕೆ ಆಫೀಸ್ ಪಕ್ಕದಲ್ಲಿಯೇ ಇದ್ದ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ‘ಲಂಕೇಶ್’ ಸತ್ತ ಸುದ್ದಿ ಹೇಳಿದರು. ಬೆಂಗಳೂರಿಗೆ ಬಂದಾಗಿನಿಂದ ದಿನಾಲು ಲಂಕೇಶ್ ಪತ್ರಿಕೆ ಆಫೀಸ್ ನೋಡುತ್ತಿದ್ದೆನಾದರೂ ಒಳಗೆ ಹೋಗಿರಲಿಲ್ಲ. ಆದರೆ ಲಂಕೇಶ್ ಸಾವು, ಪತ್ರಿಕೆಯ ಭವಿಷ್ಯ ಇವುಗಳ ಬಗ್ಗೆ ಸ್ನೇಹಿತರೊಂದಿಗೆ ಮಾತಾಡುವಾಗ ತಡೆಯಲಾಗದೆ ಒಂದು ದಿನ ಕಾರಣವಿಲ್ಲದೇ ‘ಲಂಕೇಶ್ ಪತ್ರಿಕೆ’ ಆಫೀಸಿಗೆ ಹೋದೆ. ಪತ್ರಿಕೆ ಆಫೀಸಿನ ಮೆಟ್ಟಿಲುಗಳೇರಿದಾಗ ಎದುರಿಗೇ ಇರುವ ಒಂದು ಸಣ್ಣ ರೂಮಿನಲ್ಲಿ ಗೌರಿ ಹಣೆಗೆ ಕೈಹಚ್ಚಿ ಕುಳಿತಿದ್ದರು. ಒಳಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ಅಂದಿನ ನನ್ನ ಸಣಕಲ ದೇಹ, ಶಾರ್ಟ್ ಹೇರ್‍ಕಟ್ ನೋಡಿ ಅವರಿಗೆ ಅದೇನನ್ನಿಸಿತೋ “ಕೂಡು ಮರಿ” ಅಂದರು. ನಂತರ ನನ್ನೂರು, ಕಾಲೇಜು ಎಲ್ಲದರ ಬಗ್ಗೆ ಮಾತಾಡಿದರು. ಆಗ ನಾನು ಕಾಲೇಜಲ್ಲಿದ್ದಾಗಲೇ ಬೆಳಗಿನ ಹೊತ್ತು “ಸಂಜೆವಾಣಿ” ಪತ್ರಿಕೆಯಲ್ಲಿ ಉಪ ಸಂಪಾದಕಳಾಗಿ ಕೆಲಸ ಮಾಡುತ್ತಿದ್ದೆ ಮತ್ತು ಕೆಲವು ಸಣ್ಣ ಕಥೆ, ಲೇಖನ ಎಲ್ಲಾ ಬರೆದಿದ್ದೆ. ನನ್ನ ಬ್ಯಾಗಿನಲ್ಲಿ ಕೆಲವೊಂದನ್ನು ಅಂದು ತೋರಿಸಿದೆ. ಅವರು ಒಂದುಕ್ಷಣ ಬಹಳ ಖುಷಿ ಪಟ್ಟು ಒಳಗಡೆ ಇದ್ದ ಚಂದ್ರೇಗೌಡರನ್ನ ಕರೆದು ತೋರಿಸಿದರು. ಗೌಡರೂ ಓದಿ ‘ಚಂದ ಬರಿದೀಯವ್ವಾ’ ಅಂದಾಗ ಗೌರಿ “ಇದನ್ನ ನೋಡಿದರೆ ಹೈಸ್ಕೂಲ್ ಹುಡುಗಿ ಹಂಗ ಕಾಣ್ತದ ಅಂತ ನಕ್ಕು” ನಮ್ಮೂರ ಕಡೆ ಪ್ರೀತಿಯಿಂದ ಚಿಕ್ಕವರನ್ನು ಅದು ಇದು ಅಂತ ಕರೀತಾರ ಬೇಜಾರ ಮಾಡ್ಕೋ ಬ್ಯಾಡರಿ ಅಂದರು. ಅವತ್ತಿನ ನಮ್ಮ ಮೊದಲ ಭೇಟಿ ಸುಮಾರು ಒಂದೂವರೆ ಗಂಟೆ ನಡೆಯಿತು. ಒಂದೆರಡು ಸಣ್ಣಕತೆ ಬರೆದುಕೊಂಡು ಬಾ ಎಂದು ಗೌರಿ ಹೇಳಿದಾಗ ಅತೀ ಸಂಭ್ರಮದಿಂದ ಅಲ್ಲಿಂದ ಬಂದಿದ್ದೆ. ಅದ್ಯಾವತ್ತೂ ಮೊದಲ ಭೇಟಿ ಅನಿಸಲೇ ಇಲ್ಲ. ಅಷ್ಟೊಂದು ಆತ್ಮೀಯತೆ, ಸ್ನೇಹ ಅವರಲ್ಲಿತ್ತು.

ಅಂದಿನಿಂದ ಶುರುವಾದ ಗೌರಿ ಜೊತೆಗಿನ ಒಡನಾಟ ನಿರಂತರವಾಗಿದೆ. ಇಂಗ್ಲಿಷ್ ಜರ್ನಲಿಸಂದಿಂದ ಕನ್ನಡಕ್ಕೆ ಒಗ್ಗಿಕೊಳ್ಳುವಲ್ಲಿ ಅವರು ಪಡುತ್ತಿದ್ದ ಪ್ರಯತ್ನಕ್ಕೆ, ಪತ್ರಿಕೆ ನಿರ್ವಹಿಸಲು ಹಣಕಾಸಿಗಾಗಿ ಗೌರಿ ಪಡುತ್ತಿದ್ದ ಕಷ್ಟ ನೋಡಿದ ಮೇಲೂ, ನಾವೊಂದಿಷ್ಟು ಜನ ಪತ್ರಿಕೆ ಮಾಡುವ ಸಾಹಸಕ್ಕೆ ಕೈಹಾಕಿ ಮೇಡಂ ಸಲಹೆ ಕೇಳಲು ಆಫೀಸಿಗೆ ಹೋಗಿ ಹಗುರಾಗಿ ಬೈಸಿಕೊಂಡು ಬಂದಿದ್ದೆವು. “ನನ್ನಪ್ಪನ ಹೆಸರು ಇದ್ದೂ, ರೆಡಿಮೇಡ್ ಆಫೀಸೂ ಇದ್ದು ನಾನೇ ಒದ್ದಾಡ್ತಾ ಇದ್ದಿನಿ, ಈಗ ತಾನೆ ಡಿಗ್ರಿ ಮುಗಿಸೀರಿ ನಿಮಗ್ಯಾಕೆ ಈ ಉಸಾಬರಿ” ಅಂದರೂ ಕೇಳುವ ವಯಸ್ಸಲ್ಲವಲ್ಲ. ಸ್ನೇಹಿತನ ಪತ್ರಿಕೆಯ ಹುಮ್ಮಸ್ಸಿಗೆ ನಾವೆಲ್ಲ ಭರವಸೆಯ ಮಳೆ ಸುರಿಸಿ ಹಂಗೂಹಿಂಗೂ ಒಂದುವರ್ಷ ಬಹಳ ಚೆನ್ನಾಗಿ ಪತ್ರಿಕೆ ನಡೆಸಿ, ಹಣಕಾಸಿನಲ್ಲಿ ಕೈಸುಟ್ಟ ಮೇಲೆ ಅದನ್ನು ನಿಲ್ಲಿಸಿ, ನಿಯತ್ತಿನಿಂದ ವೃತ್ತಿ ಜೀವನ ಶುರುಮಾಡಿಕೊಂಡಿವಿ. ಗೌರಿ ಮೇಡಂ ಜೊತೆ ಪ್ರತಿಯೊಂದು ಧರಣಿ, ಸತ್ಯಾಗ್ರಹ, ಎಲ್ಲ ಕಡೆ ಹೋಗುವುದು ಮಾತ್ರ ಹಾಗೇ ಮುಂದುವರೆದು ಅವರ ಲಂಕೇಶ್ ಪತ್ರಿಕೆ ಪ್ರಯಾಣ ಮುಗಿದು “ಗೌರಿ ಲಂಕೇಶ್” ಶುರುವಾದಾಗ ಉದ್ಘಾಟನಾ ಸಮಾರಂಭದಲ್ಲಿ ನಮ್ಮದೇ ಪತ್ರಿಕೆ ಶುರುವಾದಂಥ ಸಂಭ್ರಮದಲ್ಲಿ ಓಡಾಡಿದ್ದೆವು. ಅಲ್ಲಿಂದ ಮುಂದಿನ ಪ್ರಯಾಣ ಮಾತ್ರ ಬಹಳ ಜವಾಬ್ದಾರಿಯಿಂದ ಕೂಡಿದ್ದಾಗಿತ್ತು.

ಕೋಮು ಸೌಹಾರ್ದ, ಅಲ್ಪಸಂಖ್ಯಾತ ಮತ್ತು ಲೈಂಗಿಕ ಶೋಷಿತರ ಹಕ್ಕುಗಳು, ಬಲಪಂಥ ವಿರೋಧ ಹೀಗೆ ಹಲವು ಹೋರಾಟಗಳಲ್ಲಿ ಭಾಗಿಯಾಗಿ, ಗೌರಿ ಅವರಲ್ಲಿ ಒಬ್ಬರಾಗಿ ಬೆರೆಯುತ್ತಾ ಹೋದೆವು. ಎಲ್ಲ ದಮನಿತರು ಒಂದೇ ಸೂತ್ರದಲ್ಲಿ ಸೇರಿಕೊಂಡವರು ಎಂಬ ಸೂಕ್ಷ್ಮ ಅಂಶವನ್ನು ಅರಿತಿದ್ದ ಗೌರಿ ಆ ಸೂತ್ರಗಳಲ್ಲಿ ಹಾದು ಹೊಕ್ಕರು. ಟೌನ್‍ಹಾಲ್ ಮೆಟ್ಟಿಲಮೇಲೆ ಕೂಡುವಷ್ಟೇ ಸಹಜವಾಗಿ ಕಂಡ ಹಳ್ಳಿಹಳ್ಳಿಗೆ ಹೋಗಿ ಬಂದರು. ಶೃಂಗೇರಿಯಲ್ಲೊಮ್ಮೆ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೋದಾಗ ಮಳೆಗಾಲದ ಮಲೆನಾಡನ್ನು ನೋಡಿ ನನಗೆ ವಿಚಿತ್ರವಾದ ಅನುಭವ. ಒಂದು ಕಡೆ ಜೀಪ್ ನಿಲ್ಲಿಸಿ ಗುಡ್ಡದಲ್ಲಿ ಹೋಗುವಾಗ ಗೌರಿ ಮೇಡಂ ಮತ್ತು ಇತರರ ಮಾತುಗಳನ್ನೇ ಕೇಳುತ್ತಾ ಹೋದ ಅನುಭವ ಮಾತ್ರ ಮರೆಯಲು ಸಾಧ್ಯವಿಲ್ಲ. ವಾಪಸ್ಸು ಬಂದು ನಿಂತಾಗ ಗೌರಿ ಮೇಡಂ ತಮಗೆ ಅಂಟಿಕೊಂಡು ರಕ್ತ ಹೀರುತ್ತಿದ್ದ ಜಿಗಣೆಗಳನ್ನು ಕಿತ್ತಲು ಹೇಳಿದಾಗ ನನ್ನ ಕೈ ನಡುಗುತಿತ್ತು. ಕಿತ್ತಿದಾಗ ಹರಿದ ರಕ್ತ ನೋಡಿ ಹೌಹಾರಿದ್ದೆ. ಗೌರಿ ನಕ್ಕು ಎಲ್ಲರಿಗೂ ಹೇಳಿದ್ದರು “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ” ಅಂತ.

ಜರ್ನಲಿಸ್ಟ್ ಗೌರಿ ಆಕ್ಟಿವಿಸ್ಟ್ ಆಗುವಷ್ಟರಲ್ಲಿ ಅವರ ಜೊತೆ ನಾನೂ ವಿದ್ಯಾರ್ಥಿ ದೆಸೆಯಿಂದ ಬೆಳೆದು ವಕೀಲಳಾಗಿ ಮುಂದೆ ಅವರದೇ ಪತ್ರಿಕೆಯಲ್ಲಿ ಅಂಕಣಕಾರಳಾಗಿ, ಕಾನೂನು ವಿಷಯಗಳಲ್ಲಿ ಅವರಿಗೆ ಆಗಾಗ ಸಲಹೆ ನೀಡುತ್ತ, ಅದೇ ಸಲುಗೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಕಾಮೆಂಟ್, ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿದಾಗ ಬೈಯುತ್ತಿದ್ದೆ. ಅದೊಂದು ನೆನಪುಗಳ ಸರಮಾಲೆ.

ಗೌರಿಯನ್ನು ಕೊಂದು ಅವರ ವಿಚಾರಗಳನ್ನು ನಾಶ ಮಾಡುತ್ತೇವೆ ಎಂದುಕೊಂಡವರಿಗೆ ಇಂದು ಆ ಹೆಸರಿನ ಹಿಂದೆ ಇರುವ ಸಮಾನ ಮನಸ್ಕರ ದಂಡು ನೋಡಿ ಗಾಬರಿ ಆಗಬೇಕು. ಗೌರಿ ಮುಗಿದಿಲ್ಲ, ಅವರಿನ್ನೂ ಬೆಳೆಯುತ್ತಾರೆ, ನಾವೂ ಬೆಳೆಯುತ್ತೇವೆ. ಜೊತೆಜೊತೆಯಾಗಿ.


ಇದನ್ನೂ ಓದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...