Homeಅಂತರಾಷ್ಟ್ರೀಯExplainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

ಯುಎಸ್‌ಎಯು ಹಳೆಯ ಕಾಲದ ನೇರ ಚುನಾವಣಾ ಪದ್ಧತಿಯನ್ನು ಪರೋಕ್ಷ ಮಾಡಿದುದು ಹೇಗೆ? ಯುಎಸ್‌ಎಯ ಪ್ರಜಾಪ್ರಭುತ್ವದ ಮಾದರಿ ಹೇಗೆ ಕೆಲಸ ಮಾಡುತ್ತದೆ? ಈ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಅದರ ಮೂಲವನ್ನು ನೆನಪಿಸಿಕೊಳ್ಳುವುದು ಅತ್ಯಂತ ಅಗತ್ಯ.

- Advertisement -
- Advertisement -

ಉತ್ತರ ಅಮೇರಿಕಾ ಖಂಡದ 13 ಮೂಲ ಬ್ರಿಟಿಷ್ ವಸಾಸತುಗಳು 1776ರಲ್ಲಿ ಬಂಡೆದ್ದು ಪ್ರತ್ಯೇಕವಾದಾಗ ಅಮೇರಿಕಾ ಸಂಯುಕ್ತ ಸಂಸ್ಥಾನದ ಆರಂಭವಾಯಿತು. ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಎಂಬ ಹೆಸರೇ ಇವು ಪ್ರತ್ಯೇಕ ರಾಜ್ಯಗಳು ಜೊತೆ ಸೇರಿ ಒಂದು ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಈ ರಾಜ್ಯಗಳು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಂಡಿರುತ್ತವೆ ಮತ್ತು ಹೊಸ ದೇಶದ ಪ್ರಜೆಗಳು ಅವಳಿ ಪೌರತ್ವ ಹೊದಿರುತ್ತಾರೆ. ಅವೆಂದರೆ ರಾಜ್ಯದ ಪೌರತ್ವ ಮತ್ತು ದೇಶದ ಪೌರತ್ವ.

ಆ ಹೊಸ ದೇಶದ ಮೂಲಾಧಾರ ಎಂದರೆ ಹಲವಾರು ಸೈದ್ಧಾಂತಿಕ ಮತ್ತು ಆರ್ಥಿಕ ವಿಷಯಗಳ ಒಂದು ಕಲಸುಮೇಲೋಗರ ಸಮಾಗಮವಾಗಿತ್ತು. ಕ್ವೇಕರ್ಸ್‌ನಂತಹ (ಬ್ಯಾಪ್ಟಿಸ್ಟ್‌ಗಳಂತೆ ಒಂದು ಧಾರ್ಮಿಕ ಗುಂಪು) ಸಮುದಾಯಗಳು ಹೊಸ ನೆಲದಲ್ಲಿ ತಮ್ಮ ಹೊಸ ಅಸ್ತಿತ್ವವನ್ನು ಕಂಡುಕೊಳ್ಳಲು ಬಯಸಿದ್ದವು. ಕೆಲವು ಸಂದರ್ಭಗಳಲ್ಲಿ ಅವು ಗುಲಾಮಿ ಪದ್ಧತಿಯನ್ನು ಅನುಸರಿಸುತ್ತಿದ್ದವು. ಈ ವಸಾಹತುಗಳು ಆರ್ಥಿಕವಾಗಿ ಬ್ರಿಟನ್‌ನಿಂದ ಸ್ವತಂತ್ರಗೊಂಡು ಅವುಗಳಿಗೆ ಅದರ ರಾಜಕೀಯ ಅಥವಾ ಮಿಲಿಟರಿ ಅಸ್ತಿತ್ವ ಬೇಕಾಗಿರಲಿಲ್ಲ.

ಕೆಲವರು ಅಮೇರಿಕಾದ ಮೂಲನಿವಾಸಿಗಳ (ಇಂಡಿಯನ್ಸ್) ಸಮುದಾಯಗಳ ಜೊತೆ ಬ್ರಿಟಿಷ್ ಸಾಮ್ರಾಜ್ಯವು ಮಾಡಿಕೊಂಡಿದ್ದ ಒಪ್ಪಂದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಪಶ್ಚಿಮದ ಭಾಗಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದವು. ಇದರ ಜೊತೆಗೇ ಕೆಲವು ವಸಾಹತುಗಳು ಉದಾತ್ತವಾದ ಉದಾರವಾದಿ ಚಿಂತನೆಗಳನ್ನು ಸಾಂಪ್ರದಾಯಿಕವಾದ ಶ್ರೀಮಂತ ಸಮುದಾಯ ಇಲ್ಲದೇ ಇದ್ದಂತಹ ಒಂದು ಹೊಸ ದೇಶದಲ್ಲಿ ಪರೀಕ್ಷೆಗೆ ಒಡ್ಡಲು ಬಯಸಿದ್ದವು.

ಈ ರೀತಿಯಾಗಿ ಬೇರೆಬೇರೆ ಹಿತಾಸಕ್ತಿಗಳು ಮತ್ತು ಚಿಂತನೆಗಳಿದ್ದ ಬೇರೆಬೇರೆ ವಸಾಹತುಗಳು ಜೊತೆಗೆ ಬಂದಾಗ ಬೇರೆಬೇರೆ ರೀತಿಯ ಆಡಳಿತ ಪದ್ಧತಿಗಳು ಜೊತೆಗೆ ಸೇರುವುದು ಅನಿವಾರ್ಯವಾಯಿತು. ಇವುಗಳ ಏಕತೆ ಅಥವಾ ಒಗ್ಗಟ್ಟು ಬಹಳ ಸೂಕ್ಷ್ಮವಾಗಿತ್ತು. ಆದುದರಿಂದ ಹಲವಾರು ರಾಜಿ ಮತ್ತು ಹೊಂದಾಣಿಕೆಗಳನ್ನು ಮಾಡಲಾಯಿತು. ಸ್ಥಳೀಯವಾಗಿ ವಸಾಹತುಗಳ ರಾಜಕೀಯ ವ್ಯವಸ್ಥೆಗಳು ಉಳಿದುಕೊಳ್ಳುತ್ತವೆ. ಇದು ಸ್ಥಳೀಯ ಇರೋಕಿಗಳಂತಹ ಮೂಲನಿವಾಸಿ ಸಮುದಾಯಗಳು ಸಾಂಪ್ರದಾಯಿಕವಾಗಿ ಅಭಿವೃದ್ಧಿಪಡಿಸಿದ್ದ ಆಡಳಿತ ಪದ್ಧತಿಗಳಿಂದ ಕಲಿತುಕೊಂಡದ್ದು ಮತ್ತು ಆ ಕಾಲದ ಐರೋಪ್ಯ ರಾಜಕೀಯ ವ್ಯವಸ್ಥೆಗಳ ಮಿಶ್ರಣವಾಗಿತ್ತು.

ಈ ವಸಾಹತುಗಳು ಹೊಸ ದೇಶವನ್ನು ಸೇರುವ ಮೊದಲು ಪ್ರತಿಯೊಂದು ವಸಾಹತಿಗೆ ಸ್ವಾಯತ್ತತೆ ಬೇಕೆಂದು ಒತ್ತಾಯಿಸಿದ್ದವು. ಈ ರಾಜ್ಯಗಳು ಕೇಂದ್ರ ಸರಕಾರವೊಂದರ ಅಡಿಯಲ್ಲಿ ಏಕೀಕೃತ (ಸಂಯುಕ್ತ)ವಾಗುವುದೆಂದು ನಿರ್ಧಾರವಾಯಿತು. ರಾಜಧಾನಿ ವಾಷಿಂಗ್ಟನ್ ಡಿ.ಸಿ. ಆ ಕಾಲದಲ್ಲಿ ದೇಶದ ಮಧ್ಯ ಭಾಗದಲ್ಲಿ ಇದ್ದು, ಅದು ಯಾವುದೇ ರಾಜ್ಯದ ಭಾಗವಾಗಿರಲಿಲ್ಲ. ಕಾರಣವೆಂದರೆ ಅದು ಎಲ್ಲಾ ರಾಜ್ಯಗಳ ಕುರಿತು ಆಲಿಪ್ತ ಅಥವಾ ನಿರ್ಲಿಪ್ತವಾಗಿರಬೇಕು ಎಂಬ ಚಿಂತನೆಯಾಗಿತ್ತು. ಕೇಂದ್ರ ಸರಕಾರವು ಮೂರು ಸ್ವತಂತ್ರವಾದ ವಿಭಾಗಗಳನ್ನು ಹೊಂದಿತ್ತು. ಅವೆಂದರೆ, ಬ್ರಿಟಿಷ್ ಪದ್ಧತಿಯಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಈ ವಸಾಹತುಗಳಿಗೆ ಯಾವುದೇ ರಾಜ ಇಲ್ಲದಿದ್ದುದರಿಂದ ಕಾರ್ಯಾಂಗವು ಶಾಸಕಾಂಗದ ನಿರ್ಧಾರದಂತೆ ಕಾರ್ಯ ನಿರ್ವಹಿಸಬೇಕಾಗಿತ್ತು.

ಯುಎಸ್‌ಎಯ ಶಾಸಕಾಂಗ

ಯುಎಸ್‌ಎಯ ಶಾಸಕಾಂಗವು ಎರಡು ಭಾಗಗಳಿಂದ ಕೂಡಿದೆ. ಅದೆಂದರೆ, ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಅಥವಾ ಭಾರತೀಯ ಸಂಸತ್ತಿನ ರಾಜ್ಯಸಭೆಯ ರೀತಿಯಲ್ಲಿ ಇರುವ ಸೆನೆಟ್. ಪ್ರತೀ ರಾಜ್ಯಕ್ಕೆ ಎರಡರಂತೆ ಸೆನೆಟರ್‌ಗಳಿದ್ದಾರೆ. ಬ್ರಿಟನ್‌ನಲ್ಲಿ ಇದ್ದಂತೆ ಶ್ರೀಮಂತ ಪಾಳೆಯಗಾರಿ ವರ್ಗ ಇಲ್ಲದಿದ್ದುದರಿಂದ ಸೆನೆಟರ್‌ಗಳ ಆಯ್ಕೆ ಜನರಿಂದಲೇ ನಡೆಯಬೇಕೆಂದಾಯಿತು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಂದರೆ ಜನಪ್ರತಿನಿಧಿ ಸಭೆ ಎಂಬುದು ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್ ಅಥವಾ ಭಾರತದ ಲೋಕಸಭೆಯಂತೆ ಇದೆ. ಅದು ಹೆಸರೇ ಹೇಳುವಂತೆ ಜನರ ಪ್ರತಿನಿಧಿ ಸಭೆಯಾಗಿದೆ. ಇಡೀ ದೇಶವನ್ನು ಜಿಲ್ಲೆಗಳಾಗಿ ವಿಭಜಿಸಲಾಯಿತು. ಪ್ರತಿಯೊಂದು ಜಿಲ್ಲೆಯು ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಎಂದು ನಿರ್ಧರಿಸಲಾಯಿತು.

ಮತದಾರ ಘಟಕ (ಇಲೆಕ್ಟೋರಲ್ ಕಾಲೇಜ್)

ಶಾಸಕಾಂಗಕ್ಕೆ ಆಯ್ಕೆ ಮಾಡುವುದರ ಜೊತೆಗೆ ಜನರು ಕಾರ್ಯಾಂಗದ ಮುಖ್ಯಸ್ಥರಾದ ಅಧ್ಯಕ್ಷರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಗುಲಾಮಿ ಪದ್ಧತಿಗೆ ಅವಕಾಶ ನೀಡಿದ್ದ ಹಲವಾರು ರಾಜ್ಯಗಳು ವಿರೋಧಿಸಿದ್ದವು. ಏಕೆಂದರೆ, ತಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾದಲ್ಲಿ ತಮ್ಮ ರಾಜ್ಯದ ಪ್ರಭಾವ ಕುಂದುತ್ತದೆ ಎಂಬ ಕಾರಣಕ್ಕಾಗಿ. ಆ ಕಾಲದಲ್ಲಿ ಜಮೀನು ಹೊಂದಿದ್ದ ಪುರುಷರಿಗೆ ಮಾತ್ರ ಮತದಾನದ ಅವಕಾಶವಿತ್ತು. ಹೆಚ್ಚು ಕೃಷಿ ಪ್ರಧಾನವಾದ ರಾಜ್ಯಗಳಲ್ಲಿ ಮತದಾನ ಮಾಡಹುದಾದ ಜನರ ಸಾಂದ್ರತೆ ಸಹಜವಾಗಿಯೇ ಕಡಿಮೆಯಾಗಿತ್ತು. ಇದು ಗುಲಾಮರಿಂದ ಕೆಲಸ ಮಾಡಿಸುತ್ತಿದ್ದ ಭಾರಿ ಪ್ರಮಾಣದ ಜಮೀನು ಹೊಂದಿದ್ದ ಭೂಮಾಲಕರ ಆತಂಕವಾಗಿತ್ತು. ಆದುದರಿಂದ ಈ ಆತಂಕ ದೂರ ಮಾಡಲು ಯುಎಸ್‌ಎಯು ಮತದಾನ ಘಟಕದ ವ್ಯವಸ್ಥೆ ಮಾಡಿತು.

ಕೆಲವು ವಸಾಹತುಗಳಿಗೆ ಇದ್ದ ಪ್ರಮುಖ ಆತಂಕ ಎಂದರೆ ಗುಲಾಮಿ ಪದ್ಧತಿಗೆ ಏನಾದೀತು ಎಂಬುದು. ಯುಎಸ್‌ಎಯ ನಕ್ಷೆಯನ್ನು ಗುಲಾಮಿ ಪದ್ಧತಿಗೆ ಅವಕಾಶ ನೀಡುವ ಮತ್ತು ಅದನ್ನು ರದ್ದುಗೊಳಿಸಿದ ರಾಜ್ಯಗಳ ನಡುವೆ ಸಮತೋಲನ ಇರುವಂತೆ ರಚಿಸಲಾಯಿತು. ಈ ಸಮತೋಲನವನ್ನು ಕಾಪಾಡಿಕೊಂಡು ಬರುವಂತೆ ಯುಎಸ್‌ಎಯ ಈ ರಾಜ್ಯಗಳ ಇತಿಹಾಸ ಇದೆ. ಹೆಚ್ಚಿನ ಸಲ ಒಂದು ಹೊಸ ರಾಜ್ಯ ಸೇರ್ಪಡೆಯಾದಾಗ, ಈ ಸಮತೋಲನ ಕಾಪಾಡಿಕೊಳ್ಳಲು ಹಳೆಯ ರಾಜ್ಯಗಳನ್ನು ಒಡೆಯಲಾಗಿದೆ.

ಈ ಮತದಾರ ಘಟಕ ವ್ಯವಸ್ಥೆಯಲ್ಲಿ ಪ್ರತೀ ರಾಜ್ಯಕ್ಕೆ ನಿರ್ದಿಷ್ಟ ಸಂಖ್ಯೆಯ ಮತಗಳು ಇರುತ್ತವೆ. ಮತಗಳು ಸೆನೆಟರ್‌ಗಳ ಸಂಖ್ಯೆಗೆ (ಪ್ರತೀ ರಾಜ್ಯಕ್ಕೆ ಎರಡೆರಡು) ಮತ್ತು ಜನ ಪ್ರತಿನಿಧಿಗಳ ಸಂಖ್ಯೆಗೆ (ಹೆಚ್ಚುಕಡಿಮೆ ಜನಸಂಖ್ಯೆಗೆ ಅನುಗುಣವಾಗಿ) ಅನುಗುಣವಾಗಿ ಇರುತ್ತದೆ. ಪ್ರತಿಯೊಂದು ರಾಜ್ಯದ ಒಳಗೆ ಯಾವ ಅಭ್ಯರ್ಥಿ ರಾಜ್ಯವನ್ನು ಪ್ರತಿನಿಧಿಸುತ್ತಾನೆ/ಳೆ ಎಂಬುದನ್ನು ನಾಗರಿಕರು ಬಹುಮತದ ಆಧಾರದಲ್ಲಿ ನಿರ್ಧರಿಸುತ್ತಾರೆ. ರಾಜ್ಯದ ಬೆಂಬಲವನ್ನು ರಾಜ್ಯಗಳು ಹೊಂದಿರುವ ಸ್ಥಾನಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಮತದಾರ ಘಟಕದಲ್ಲಿ ಬಹುಮತ ಹೊಂದಿರುವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾನೆ/ಳೆ‌.

ಈ ವ್ಯವಸ್ಥೆಯ ಸಮಸ್ಯೆಗಳು

ಈ ವ್ಯವಸ್ಥೆಯ ಟೀಕಾಕಾರರು ಇತಿಹಾಸವನ್ನು ಎತ್ತಿತೋರಿಸುತ್ತಾರೆ. ಅದು ಒಂದು ರಾಜಿಯಾಗಿದ್ದು, ಮೂಲ ಉದ್ದೇಶವನ್ನೇ ನುಂಗಿಹಾಕಿದೆ.

ಮೊದಲನೆಯದಾಗಿ ಅದು ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಿಗೆ ಅನ್ಯಾಯವಾಗಿ ಹೆಚ್ಚು ಪ್ರಾತಿನಿಧ್ಯ ನೀಡುತ್ತದೆ ಮತ್ತು ಕೃಷಿ ಪ್ರಧಾನವಾದ ಪ್ರಬಲ ರಾಜ್ಯಗಳ ಶಕ್ತಿಯನ್ನು ಕುಂದಿಸುತ್ತದೆ. ಯುಎಸ್‌ಎಯಲ್ಲಿ ಕೃಷಿಕರು ಕೇವಲ 1.3ರಷ್ಟಿದ್ದರೂ ಭಾರೀ ಪ್ರಮಾಣದ ಸರಕಾರಿ ಸಬ್ಸಿಡಿಯ ಪರಿಣಾಮವಾಗಿ ತುಂಬಾ ಶ್ರೀಮಂತರಾಗಿದ್ದಾರೆ.

ಎರಡನೆಯದಾಗಿ ವ್ಯವಸ್ಥೆಯು ಅನಗತ್ಯವಾಗಿ ಪರೋಕ್ಷವಾಗಿದೆ. ಕೆಲವು ಸಲ ಬಹುಸಂಖ್ಯಾತರು ಒಬ್ಬ ಅಭ್ಯರ್ಥಿಯ ಪರವಾಗಿ ಮತ ಹಾಕಿದರೂ ಅದು ಮತದಾರರ ಘಟಕದಲ್ಲಿ ಸರಿಯಾಗಿ ಪ್ರತಿನಿಧಿಸಲ್ಪಡುವುದಿಲ್ಲ. ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಮತ್ತು ಅಲ್ ಗೋರ್ ವಿರುದ್ಧ ಜಾರ್ಜ್ ಡಬ್ಲ್ಯೂ ಬುಷ್ ಚುನಾವಣೆಯಲ್ಲಿ ಮತದಾರ ಘಟಕಗಳು ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಬಹುಸಂಖ್ಯಾತ ಜನರು ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು. ಬಹುಸಂಖ್ಯಾತ ಜನರು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸೋಲಾಯಿತು.

ಮೂರನೆಯದಾಗಿ, ರಾಜ್ಯಗಳ ಹಕ್ಕುಗಳು ಹಿಂದೆ ಗುಲಾಮಿ ಪದ್ಧತಿಯನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿದ್ದರೆ, ಇಂದು ಬಿಳಿಯರ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿವೆ. ಪರಿಣಾಮವಾಗಿ ಆಫ್ರಿಕನ್ ಅಮೇರಿಕನ್ ಜನರು ಪ್ರಬಲವಾಗಿರುವ ಕಡೆಗಳಲ್ಲೂ ಅವರ ಮತಗಳು ಬಿಳಿಯರ ಪ್ರಾಬಲ್ಯವಿರುವ ಮತದಾರ ಘಟಕಗಳಿಂದ ಕಡೆಗಣಿಸಲ್ಪಟ್ಟಿರುವುದು ಕಂಡುಬಂದಿದೆ. ಇದು ಪ್ರಜಾಪ್ರಭುತ್ವವಾದಿ ಹಕ್ಕುಗಳನ್ನೇ ಕಡೆಗಣಿಸುತ್ತದೆ.

“ಸ್ವಿಂಗ್” ರಾಜ್ಯಗಳೆಂದರೇನು?

ಹೆಚ್ಚಿನ ರಾಜ್ಯಗಳಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆಯೆಂದರೆ, ಯಾವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಕೆಲವು ರಾಜ್ಯಗಳು ಯಾವತ್ತೂ ಡೆಮಾಕ್ರಾಟ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ, ಕೆಲವು ರಾಜ್ಯಗಳು ಯಾವತ್ತೂ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತವೆ. ಅವುಗಳಲ್ಲಿ ಚುನಾವಣಾ ಪ್ರಚಾರ ಮಾಡುವುದೇ ಅಪ್ರಸ್ತುತವಾಗುತ್ತದೆ. ಫಲಿತಾಂಶ ಅನಿರ್ಧಾರಿತವಾಗಿರುವ ಕೆಲವೇ ಕೆಲವು ರಾಜ್ಯಗಳು ಮಾತ್ರ ಹೋರಾಟದ ಕಣಗಳಾಗಿ ಪರಿಣಮಿಸುತ್ತವೆ. ಇವುಗಳನ್ನೇ ಫಲಿತಾಂಶ ಏರುಪೇರು ಮಾಡಬಲ್ಲ “ಸ್ವಿಂಗ್” ರಾಜ್ಯಗಳೆಂದು ಪರಿಗಣಿಸಲಾಗುತ್ತದೆ.

ಇಂದು ಬಹುತೇಕ ಅಮೇರಿಕನ್ ಜನರು ಮತದಾರರ ಘಟಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಬಹುತೇಕ ಜನರ ಮತಶಕ್ತಿಯನ್ನು ಕುಂದಿಸುತ್ತದೆ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಹೆಚ್ಚು ಮತಗಳನ್ನು ಗಳಿಸಿಯೂ, ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕವಂತೂ ಈ ಓಬಿರಾಯನ ಕಾಲದ ವ್ಯವಸ್ಥೆಯ ಬಗ್ಗೆ ವಿರೋಧ ಗಣನೀಯವಾಗಿ ಹೆಚ್ಚಿದೆ.

  • ಕಿಶೋರ್ ಗೋವಿಂದ, ಬೆಂಗಳೂರು  ಅಮೆರಿಕಾದಲ್ಲಿ ಹುಟ್ಟಿ, ಬೆಳೆದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರು)

ಅನುವಾದ: ನಿಖಿಲ್ ಕೋಲ್ಪೆ


Also Read: The Electoral College: How America made its direct election indirect

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...