- Advertisement -
- Advertisement -
ತನ್ನ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರ್ಟಿಗೆ ಹೋಗಿದ್ದಾರೆಂದು ಪಿಟಿಐ ಮತ್ತು ಐಎಎನ್ಎಸ್ ಯನ್ನು ಉಲ್ಲೇಖಿಸಿ ದಿ ಕ್ವಿಂಟ್ ವರದಿ ಮಾಡಿದೆ. ತೇಜಸ್ವಿ ಸೂರ್ಯ ಬಂದ ಮೀಟೂ ಆರೋಪ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪದ ಕುರಿತು ಹಲವಾರು ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು. ಈತನ ವಿರುದ್ಧ ಮಹೆಳೆಯೊಬ್ಬರು ಟ್ವೀಟ್ ಮಾಡಿದ್ದು ಸೇರಿದಂತೆ ಹಲವು ಆರೋಪಗಳು ವಿವಿಧ ಪತ್ರಿಕೆ ಮತ್ತು ವೆಬ್ ತಾಣಗಳಲ್ಲಿ ಪ್ರಕಟವಾಗಿದ್ದವು.
ಆ ಸುದ್ದಿಯನ್ನು ಪ್ರಕಟಿಸದಂತೆ ತೇಜಸ್ವಿ ಸೂರ್ಯ ಕೋರ್ಟಿಗೆ ಹೋಗಿದ್ದರೆಂದು ಮತ್ತು ಸುಮಾರು 45 ಸುದ್ದಿ ಸಂಸ್ಥೆಗಳಿಗೆ ತನ್ನ ವಕೀಲರ ಮೂಲಕ ನೋಟಿಸ್ ಕೊಟ್ಟಿದ್ದಾರೆಂದು ವರದಿಯಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಕೋರ್ಟಿನ ಆದೇಶದ ಪ್ರತಿಯನ್ನು ಈ ವರದಿಯೊಂದಿಗೆ ಲಗತ್ತಿಸಿಲ್ಲವೆಂಬುದು ಕೂತೂಹಲಕಾರಿಯಾಗಿದೆ. ಹತಾಶೆಗೊಂಡಿರುವ ಸೂರ್ಯ ಸುಮ್ಮನೆ ರೀತಿ ಗಿಮಿಕ್ ಗಳನ್ನು ಮಾಡುತ್ತಿರಬಹುದಾಗಿದೆ. ಇನ್ನು ಹೆಚ್ಚಿನ ವಿವರಗಳಿಗೆ ದಿ ಕ್ವಿಂಟ್ ವರದಿ ಓದಿ.