Homeಮುಖಪುಟಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಬ್ರಾಂಡ್ ವಾಷ್ಡ್ ಬಿರಿಯಾನಿ; ಬಿತ್ತದೆ ಬೆಳೆಯದೆ ಕಂಪನಿಗಳಿಗೆ ಏಕಸ್ವಾಮ್ಯ ಹೊಂದಲು ಅವಕಾಶ ಕೊಡುವ ಕೃಷಿ ಕಾನೂನುಗಳು

ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು.

- Advertisement -
- Advertisement -

ಗುಡ್ ಲೈಫ್ ಬಾಸುಮತಿ ಅಕ್ಕಿ ಬಳಸಿ, ಹೆಲ್ದಿ ಲೈಫ್ ತುಪ್ಪ, ಬೆಸ್ಟ್ ಫಾರ್ಮ್ಸ್ ಮಸಾಲಾ, ಡಿಲೈಟ್ ಮಾಂಸ ಹಾಕಿ ಬಿರಿಯಾನಿ ಮಾಡಿ ಊಟ ಮಾಡಿ, ಎನ್ಸೋಮಾಟಿಕ್ ಸೋಪಿನಲ್ಲಿ ಕೈತಟ್ಟೆ ತೊಳೆದುಕೊಂಡೆವು ಎಂದುಕೊಳ್ಳೋಣ. ಈ ಎಲ್ಲಾ ಆಹಾರ ಪದಾರ್ಥಗಳನ್ನೂ ಯಾವುದೋ ಗುಡಿ ಕೈಗಾರಿಕೆಯಲ್ಲೇ ತಯಾರಾಗಲ್ಪಟ್ಟದ್ದು ಎಂದರೂ ಮತ್ತು ಈ ದವಸ ಧಾನ್ಯಗಳನ್ನು ಯಾವುದೋ ಸಣ್ಣ ರೈತರ ಹೊಲದಲ್ಲೇ ಬೆಳೆದದ್ದಾದರೂ ರಿಲಾಯನ್ಸ್ ಕಂಪನಿಯ ಅಂಬಾನಿಗೆ ಸಂಬಂಧ ಹೆಣೆಯುವುದು ಹೇಗೆ ಎಂದು ಅಮಾಯಕ ಗ್ರಾಹಕನೊಬ್ಬ ಕೇಳಬಹುದು. ಮಾರುಕಟ್ಟೆಯ ಮರ್ಮ ಬಲ್ಲವರಿಗೆ ನಾವು ಬಳಸಿದ ದವಸಧಾನ್ಯಗಳೆಲ್ಲವೂ ರಿಲಾಯನ್ಸ್ ಕಂಪನಿಯ ಖಾಸಗೀ ಲೇಬಲ್‌ಗಳಾಗಿವೆ (ಪ್ರೈವೇಟ್ ಲೇಬಲ್) ಎಂಬುದು, ದೈತ್ಯ ರೀಟೇಲ್ ವ್ಯಾಪಾರವನ್ನು ಡೀಟೇಲಾಗಿ ಅಧ್ಯಯನ ಮಾಡಿದರೆ ತಿಳಿದುಬರುವ ವಿಷಯ.

ಬ್ರಾಂಡ್ ಅವರದ್ದೇ ಆದರೂ ಅದನ್ನು ಅವರು ತಯಾರು ಮಾಡುವುದಿಲ್ಲ ಅಥವಾ ಅದನ್ನು ಬೆಳೆಯುವುದಿಲ್ಲ. ಒಮ್ಮೆ ಕೊಕೋಕೋಲಾ ಕಂಪನಿಯ ಛೇರ್ಮನ್ ಹೀಗಂದಿದ್ದ: ’ನನ್ನ ಕಾರ್ಖಾನೆಗಳಿಗೆಲ್ಲಾ ಬೆಂಕಿಬಿದ್ದರೆ ನನಗೇನೂ ನಷ್ಟವಿಲ್ಲ. ಏಕೆಂದರೆ ಅವು ಯಾವುವೂ ನಮ್ಮದಲ್ಲ. ನಮ್ಮದು ಕೇವಲ ಬ್ರಾಂಡ್ ಮಾತ್ರ ಎಂದು. ರೈತರ ಹೊಲದಲ್ಲಿ ರೈತ ಕುಟುಂಬವನ್ನೇ ಕೂಲಿ ಕಾರ್ಮಿಕರಾಗಿ ದುಡಿಸಿಕೊಂಡು ನಮಗೆ ಬೇಕಾದ ಬೆಳೆಯನ್ನು ಬೆಳೆದು ಅವನಿಗೆ ಕೇಜಿಗೆ ಒಂದೋ ಎರಡೋ ರುಪಾಯಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಈಗ ಹೊಸದಾಗಿ ಬಂದಿರುವ ಕಾಂಟ್ರಾಕ್ಟ್ ಕೃಷಿ ಸಂಪೂರ್ಣವಾಗಿ ಸಹಾಯಮಾಡುತ್ತದೆ.

ಹಾಗೆಯೇ ದೇಶದ 1.3 ಕೋಟಿ ಕಿರಾಣಿ ಅಂಗಡಿಗಳನ್ನು ದೈತ್ಯ ರೀಟೇಲ್ ಬ್ರಾಂಡ್‌ಗಳ ಅಡಿಯಲ್ಲಿ ದುಡಿಸಿಕೊಳ್ಳುವುದು ಮತ್ತು ಅವರ ಮೂಲಕ ರಿಲಾಯನ್ಸ್ ಅಂತ ಕಂಪನಿಗಳ ಬ್ರಾಂಡುಗಳನ್ನೇ ಮಾರಾಟ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ಫೇಸ್ಬುಕ್ ಮೂಲಕ ಆರ್ಡರ್ ಮಾಡಿ ವಾಟ್ಸಾಪ್ ಮೂಲಕ ಹಣ ಕೊಟ್ಟು, ಚಿಲ್ಲರೆ ವ್ಯಾಪಾರಿಗಳಿಗೆ ಮೊದಮೊದಲು ಸಾಲ ಕೊಟ್ಟು, ಹೆಚ್ಚು ಮಾರ್ಜಿನ್ ಹಣ ಬಿಟ್ಟುಕೊಟ್ಟು ತಮಗೆ ದುಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಫೇಸ್ಬುಕ್, ವಾಟ್ಸಾಪ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಟೆಕ್ ಕಂಪನಿಗಳು ಚಿಲ್ಲರೆ ವ್ಯಾಪಾರಕ್ಕಿಳಿದಿರುವ ರಿಲಾಯನ್ಸ್ ಕಂಪನಿಗೆ ಹಣ ಹೂಡಿರುವುದು. ಇದರ ಜೊತೆಗೆ ಖಾಸಗಿ ಕಂಪನಿಯವರು ಬ್ಯಾಂಕ್ ಕೂಡಾ ಮಾಡಬಹುದೆಂದು ಆರ್‌ಬಿಐ ವರದಿ ಹೇಳುತ್ತದೆ. ಹಿಂದೆ ಬರ್ಟೋಲ್ಟ್ ಬ್ರೆಕ್ಟ್ ಹೀಗೆಂದಿದ್ದ: ’ಬ್ಯಾಂಕಿಗೆ ಕನ್ನಾ ಹಾಕುವುದು ಬೇಡ, ಬ್ಯಾಂಕನ್ನೇ ಶುರು ಮಾಡುವುದು ಒಳ್ಳೆಯದು’ ಎಂದು. ಆಗ ಜನರೇ ಸಾಲಾಗಿ ನಿಂತು ಹಣಹಾಕಿ ಹೋಗುತ್ತಾರೆ. ಅದನ್ನು ನಮ್ಮ ವ್ಯಾಪಾರಕ್ಕೆ ತಕ್ಕಂತೆ ಬಳಸಿ ಏಕಸ್ವಾಮ್ಯತೆಯನ್ನು ಸ್ಥಾಪಿಸಬಹುದು.

ನಮ್ಮಲ್ಲಿ ಸುಮಾರು 14 ಕೋಟಿ ರೈತ ಕುಟುಂಬ, ಸುಮಾರು 12 ಕೋಟಿ ಕೃಷಿ ಅವಲಂಬಿತ ಕೂಲಿಕಾರ್ಮಿಕರು, 6.3 ಕೋಟಿ ಗುಡಿ ಕೈಗಾರಿಕೆಗಳು, 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಇದ್ದಾರೆ. ಈ ರೀತಿ ಈ ದೇಶದ ಶೇ. 90ರಷ್ಟು ಜನ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ರೀತಿಯಲ್ಲಿ ಸ್ವತಂತ್ರರೂ, ಸಾರ್ವಭೌಮರೂ ಆಗಿದ್ದಾರೆ. ಅವರಿಗೆ ಕಷ್ಟಗಳಿಲ್ಲವೆಂದಲ್ಲ. ಆದರೆ ತನ್ನ ಹೊಲದಲ್ಲಿ ತನಗೇನು ಬೆಳೆಯಬೇಕೆಂಬುದು ಗೊತ್ತು. ತನ್ನ ಆಹಾರ ಸಂಸ್ಕೃತಿಗೆ ತಕ್ಕಂತೆ ಬೆಳೆದು ತಮ್ಮ ಜೀವನಶೈಲಿಯಂತೆ ಕೃಷಿಮಾಡುವವರು ಬಹುಪಾಲು. ಅಲ್ಲಿ, ಕಂಪನಿಯ ಬೀಜ ಕೊಟ್ಟು, ಕಂಪನಿಯ ಗೊಬ್ಬರ, ಕೀಟನಾಶಕಗಳನ್ನು ಕೊಟ್ಟು, ತಮಗೆ ಬೇಕಾದುದನ್ನೇ ಬೆಳೆದುಕೊಳ್ಳಲು ದೈತ್ಯ ಕಂಪನಿಗೆಳಿಗೆ ಅವಕಾಶ ಕೊಟ್ಟಾಗ ಆಹಾರ ವೈವಿಧ್ಯತೆ ಉಳಿಸಿಕೊಳ್ಳಲು ಅಸಾಧ್ಯ. ಆಲೂಗಡ್ಡೆಯಲ್ಲಿ ಸಾವಿರಾರು ರೀತಿಯ, ಹಲವು ಬಣ್ಣದ, ಹಲವು ಗಾತ್ರದ ವಿನ್ಯಾಸದ ತಳಿಗಳಿವೆ. ಆದರೆ ಪೆಪ್ಸಿ ಕಂಪನಿಗೆ ಒಪ್ಪಂದ ಮಾಡಿಕೊಂಡಾಗ ಆ ಕಂಪನಿಯ ಚಿಪ್ಸಿಗೆ ಬೇಕಾದ ಒಂದೇ ಗಾತ್ರದ ಆಲೂಗಡ್ಡೆಯನ್ನು ಬೆಳೆಯುವಂತಾಗುತ್ತದೆ.

ಇತ್ತೀಚೆಗೆ ಬಂದ ಇನ್ನೆರಡು ಕೃಷಿ ಕಾನೂನುಗಳಲ್ಲಿ ಎಪಿಎಂಸಿ ಮಾರುಕಟ್ಟೆಯ ನಿಯಮಗಳನ್ನು ಮಾರ್ಪಾಟು ಮಾಡಿ ರೈತರು ಮುಕ್ತವಾಗಿ ತಮ್ಮ ಬೆಳೆಯನ್ನು ದೇಶದಲ್ಲಿ ಎಲ್ಲಿ ಯಾರಿಗೆ ಬೇಕಾದರೂ ಮಾರಬಹುದು ಎಂದು ಹೇಳಲಾಗುವ ಕಾನೂನು ಒಂದಾದರೆ, ಇನ್ನೊಂದು ವ್ಯಾಪಾರಿಗಳು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಇತಿಮಿತಿ ತೆಗೆದುಹಾಕಿರುವುದಾಗಿದೆ.

ಇತಿಮಿತಿ ಇಲ್ಲದೇ ಅತ್ಯಂತ ಹೆಚ್ಚು ಆಹಾರ ಧಾನ್ಯವನ್ನು ಗೋದಾಮಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿರುವುದು ವಿಪರ್ಯಾಸ. ಸುಮಾರು 50 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಸರ್ಕಾರ ತಾನೇ ನಿಗದಿ ಮಾಡಿಕೊಂಡಿರುವ ನಿಯಮಾವಳಿಗಿಂತ ಹೆಚ್ಚು ಶೇಖರಿಸಿ, ಇಲಿ ಹೆಗ್ಗಣಗಳಿಗೆ ಉಣಬಡಿಸಿ ಸುಮಾರು ಒಂದು ಲಕ್ಷ ಕೋಟಿ ಹಣ ಪೋಲು ಮಾಡುತ್ತಿರುವುದು ಭಾರತ ಸರ್ಕಾರವೇ ಆಗಿದೆ. ಅಲ್ಲದೇ ಈ ಆಹಾರ ಧಾನ್ಯವನ್ನು ಏನು ಮಾಡಲೆಂದು ತೋಚದೇ ಸ್ಯಾನಿಟೈಸರ್ ಮಾಡೋಣ, ಸಾರಾಯಿ ಮಾಡಿ ಪೆಟ್ರೋಲಿಗೆ ಸೇರಿಸೋಣ ಎಂದೆಲ್ಲಾ ಆಲೋಚಿಸುತ್ತಿದೆ. ತಾವು ಮಾಡಿದ ತಪ್ಪನ್ನೇ ಖಾಸಗಿಯವರಿಗೂ ಅವಕಾಶ ಕೊಟ್ಟಾಗ ಸಮಾನತೆ ಉಂಟಾಗಬಹುದೆನ್ನುವ ಆಲೋಚನೆ ಇರಬಹುದು.

ಈ ಎರಡು ಕಾನೂನುಗಳ ನಡುವೆ ಸರ್ಕಾರ 23 ಬೆಳೆಗೆ ನಿಗದಿಪಡಿಸುವ ಕನಿಷ್ಟ ಬೆಲೆ ದಕ್ಕದಂತಾಗಬಹುದು ಎನ್ನುವುದು ರೈತಾಪಿ ವರ್ಗದ ಆತಂಕ.

ಹೌದು, ದೇಶದ ಸುಮಾರು 700 ಮಿಲಿಯನ್ ಟನ್ ಒಟ್ಟು ಆಹಾರ ಉತ್ಪಾದನೆಯಲ್ಲಿ ಶೇ. 10ಕ್ಕಿಂತ ಕಮ್ಮಿ ದವಸ ಧಾನ್ಯಗಳನ್ನು ಅದರಲ್ಲೂ ಅಕ್ಕಿ ಮತ್ತು ಗೋಧಿಯನ್ನು, ಪಂಜಾಬ್ ಮತ್ತು ಹರಿಯಾಣಗಳಿಂದ ತಾನು ಘೋಷಿಸಿದ ಕನಿಷ್ಟ ಬೆಲೆಯನ್ನು ಕೊಟ್ಟು ಸರ್ಕಾರ ಕೊಂಡುಕೊಳ್ಳುತ್ತದೆ.

ಉಳಿದ ಶೇ. 90ರಷ್ಟು ಆಹಾರ ಬೆಳೆಗೆ ಘೋಷಿಸಿದ ಬೆಲೆ ಸಿಗುತ್ತಿಲ್ಲ. ಶೇ. 80ರಷ್ಟು ರೈತರಿಗೆ ಈ ಘೋಷಣೆ ಮಾಡಿದ 23 ಬೆಳೆಗಳಿಗೆ ಕನಿಷ್ಟ ಬೆಲೆ ಎಂಬುವುದೊಂದಿದೆ ಎನ್ನುವುದೇ ಗೊತ್ತಿಲ್ಲ.

ಸರ್ಕಾರದ ನಿಯಮಾವಳಿಗಳ ಪ್ರಕಾರ 80 ಚದರ ಕಿ.ಮೀ.ಗೊಂದು ಎಪಿಎಂಸಿ ಇರಬೇಕಾಗಿತ್ತು. ಆದರೆ 500 ಚದರ ಕಿ.ಮೀಗೊಂದು ಎಪಿಎಂಸಿ ಯಾರ್ಡ್ ಇರುವುದ ಈಗಿನ ವಾಸ್ತವ. ನಿಜವಾಗಿಯೂ ಮೊದಲು ಸರ್ಕಾರ ಮಾಡಬೇಕಾಗಿದ್ದುದು ರೈತ ನೂರಾರು ಕಿ.ಮೀವರೆಗೆ ತನ್ನ ಬೆಳೆಯನ್ನು ಸಾಗಿಸಿ ಮಾರಾಟ ಮಾಡುವ ದುರ್ವ್ಯವಸ್ಥೆಯನ್ನು ಮೊಟಕುಗೊಳಿಸಲು ತಾನೇ ಹಾಕಿದ ನಿಯಮಾವಳಿಯಂತೆ 5 ಕಿ.ಮೀ ಒಳಗೆ ಎಪಿಎಂಸಿ ಇದ್ದಲ್ಲಿ ಮತ್ತು ಕನಿಷ್ಟ ಬೆಲೆ ಪಾಲನೆಯಾದಲ್ಲಿ ರೈತರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ಇದನ್ನು ಬಿಟ್ಟು ಇನ್ನೂ ಕಟ್ಟಬೇಕಾಗಿದ್ದ ವ್ಯವಸ್ಥೆಯನ್ನೇ ಅರ್ಧಕ್ಕೇ ಕೆಡವಿದರೆ ಹೇಗೆ?

ಅಲ್ಲದೇ, ಅದಾನಿ ಆಹಾರ ದಾಸ್ತಾನು ಮಾಡಿರುವ ಸೈಲೋಸ್‌ಗಳನ್ನೇ ವ್ಯಾಪಾರೀ ಸ್ಥಳವೆಂದು ಪರಿಗಣಿಸಿ ಖಾಸಗಿ ಮಂಡಿಗಳಿಗೆ ತೆರಿಗೆ ಇಲ್ಲ, ಆದರೆ ಸರ್ಕಾರಿ ಮಂಡಿಗಳಿಗೆ ತೆರಿಗೆಯುಂಟು ಎಂದು ನಿಯಮ ತಂದರೆ ತೆರಿಗೆ ಹಾಕುವ ಮಂಡಿಗಳಿಗೆ ಬರುವವರು ಉಂಟೇ? ಸರ್ಕಾರ ಘೋಷಿಸಿದ ಕನಿಷ್ಟ ಬೆಲೆಗೆ ಕೂಡಾ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಹೇಳಿದ ಸಿ2+50% ಆಧಾರವಾಗಿಸದೆ ಎ2+ಎಫ್‌ಎಲ್ ಎನ್ನುವ ಬೇರೆಯದ್ದೇ ಸೂತ್ರ ಬಳಸಿರುವುದು ರೈತರಿಗೆ ಮಾಡಿರುವ ಅನ್ಯಾಯವೇ. ಸ್ವಾಮಿನಾಥನ್ ಹೇಳಿದ್ದ ಸೂತ್ರಕ್ಕೂ ಇಂದು ಅಳವಡಿಸಿದ್ದ ಸೂತ್ರಕ್ಕೂ ಶೇ. 25ರಷ್ಟು ವ್ಯತ್ಯಾಸವಿದೆ.

ಇಕ್ರಿಯಾರ್ ಸಂಸ್ಥೆಯ ಅಧ್ಯಯನದಂತೆ ಭಾರತದ ರೈತರೂ ಪ್ರತಿವರ್ಷ 3 ಲಕ್ಷ ಕೋಟಿ ತಮ್ಮ ಬೆವರಿಗೆ ದಕ್ಕಬೇಕಾದ ಹಣವನ್ನು ದಕ್ಕಿಸಿಕೊಳ್ಳುತ್ತಿಲ್ಲ ಎನ್ನುತ್ತದೆ. ಅಲ್ಲದೇ ನ್ಯಾಷನಲ್ ಸ್ಯಾಂಪಲ್ ಸರ್ವೆ ಪ್ರಕಾರ ತಿಂಗಳ ರೈತರ ಆದಾಯ ಸುಮಾರು 6000 ರುಪಾಯಿ ಎನ್ನುವುದು ಸರ್ಕಾರಿ ಗುಮಾಸ್ತನ ಸಂಬಳಕ್ಕಿಂತ ನಾಲಕ್ನೇ ಒಂದಕ್ಕಿಂತ ಕಮ್ಮಿ ಇರುವುದು ಕಂಡುಬರುತ್ತದೆ.

ಹೊರನೋಟಕ್ಕೆ ಈ ಕಾನೂನುಗಳು ರೈತಪರ ಎಂದು ಕಂಡುಬಂದರೂ ದೇಶದ ಒಟ್ಟು 1.2 ಹೆಕ್ಟೇರ್ ತಲಾವಾರು ಭೂಮಿ ಒಡೆತನದ 14 ಕೋಟಿ ರೈತಕುಟುಂಬ ಹಾಗೆಯೇ 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು 6.3 ಕೋಟಿ ಗುಡಿಕೈಗಾರಿಕೆ ಅಲ್ಲದೇ ಸುಮಾರು 12 ಕೋಟಿ ಕೃಷಿ ಅವಲಂಭಿತ ಕೂಲಿ ಕಾರ್ಮಿಕರನ್ನು ಒಂದೋ ಎರಡೋ ದೈತ್ಯ ಕಂಪನಿಗೆ ಮಾರಿಬಿಡುವಂತೆ ಕಂಡುಬರುತ್ತದೆ. ಫ್ರಾನ್ಸ್ ಅನಟೋಲಿ ಒಂದು ಕಡೆ ಸರ್ಕಾರದ ಕಾನೂನನ್ನು ವ್ಯಂಗ್ಯವಾಗಿ ಹೀಗೆ ಉಲ್ಲೇಖಿಸುತ್ತಾನೆ: ’ಸರ್ಕಾರ ಕಾನೂನೊಂದನ್ನು ಮಾಡಿ, ಬಡವನಿರಬಹುದು ಬಲ್ಲಿದನಿರಬಹುದು, ಬೀದಿ ಬದಿಯಲ್ಲಿ ಯಾರೂ ಮಲಗಬಾರದು, ಭಿಕ್ಷೆ ಯಾರೂ ಬೇಡಬಾರದು ಎಂದರೆ ಅದು ನಿಷ್ಪಕ್ಷಪಾತವಾದ ಭೇದ-ಭಾವವಿಲ್ಲದ ಕಾನೂನೆಂದು ಹೊರನೋಟಕ್ಕೆ ಕಂಡುಬಂದರೂ ನಿಜವಾಗಿಯೂ ಅದರ ಪರಿಣಾಮ ನಿರ್ಗತಿಕರ ಮೇಲೆ ಬೀಳುವಂತದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ’.


  • ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು. ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ರೈತರ ಹಕ್ಕೊತ್ತಾಯ ಬಗೆಹರಿಸುವ ಸ್ವತಂತ್ರ ಸಮಿತಿಯಲ್ಲಿ ಪಿ.ಸಾಯಿನಾಥ್, ಬಿಕೆಯು ಪ್ರತಿನಿಧಿಗಳು ಇರಲಿ: ಸುಪ್ರೀಂ ಕೋರ್ಟ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...