Homeಮುಖಪುಟಮಿತ್ರೋ ಸ್ವಲ್ಪ ಇಲ್ಲಿ ಕೇಳಿ. - ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

ಮಿತ್ರೋ ಸ್ವಲ್ಪ ಇಲ್ಲಿ ಕೇಳಿ. – ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

- Advertisement -
| ಭರತ್ ಹೆಬ್ಬಾಳ್ |
ಮೊನಚು ಹಾಸ್ಯದ ಮೂಲಕ ಆಳುವವರನ್ನು ಪ್ರಶ್ನಿಸುವುದು ಬಹಳಷ್ಟು ಜನರಿಗೆ ಬೇಗ ಮುಟ್ಟುತ್ತದೆ. ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮಿತ್ರೋ ಸೀರೀಸ್ ನಲ್ಲಿ ಭರತ್ ಹೆಬ್ಬಾಳ್ ಬರೆಯುತ್ತಾರೆ. ಆಯ್ದ ಮಿತ್ರೋನ್ ಬರಹಗಳು ನಿಮ್ಮ ಓದಿ, ನಕ್ಕು ನಲಿಯಿರಿ.
Mithron, ಚುನಾವಣಾ ಪ್ರಚಾರದ ಪ್ರಯುಕ್ತ  ನಾನು ಹುಟ್ಟಿದ ನಾಡಾದ ಕರ್ನಾಟಕಕ್ಕೆ ಮತ್ತೆ ಬರ್ತಿದ್ದೀನಿ, ನಾನು ಕನ್ನಡಿಗ ಅಂದ್ರೆ  ನಿಮಗೆ ಆಶ್ಚರ್ಯವಾಗಬೊಹುದು.. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲೇ.. ಇಲ್ದೆಇರೋ ಅಚ್ಛೇದಿನ್  ಜಿಲ್ಲೆಯ ಸಾಬ್ಕವಿಕಾಸ್ ತಾಲೂಕಿನ “ಸತ್ಯಸುಳ್ ಮಾಡೋಹಳ್ಳಿ” ನಾನು ಹುಟ್ಟಿದ್ದು ಎಂಬುವ ಸತ್ಯ  ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ. ಚಿಕೊವ್ನಿದ್ದಾಗ ಮೈಸೂರ್ ದಸರಾ ಜಾತ್ರೆಲಿ ಕಳೆದು ಹೋಗಿ ಗುಜರಾತ್ ಸೇರ್ಕೊಂಡೆ.. ಆದ್ದರಿಂದ ನನ್ನನ್ನು ಅಂದರೆ ನಾನು ಸ್ಪರ್ದಿಸುತ್ತಿರುವ 27 ಕ್ಷೇತ್ರಗಳಲ್ಲಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕೋರುತ್ತೇನೆ.. ಜೈ ಚೊಂಭೇಶ್ವರ..
——
Mithron,  ಅತಿ ಭ್ರಷ್ಟ ಲೋಫರ್ ಲಫ್ಹಂಗಾಗಳು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸೈಟು, ಮನೆ, ಜಮೀನು, ಚಿನ್ನ ಇತ್ಯಾದಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮಾಡ್ಕೊಂಡು “ನಾನು ಮಾತ್ರ ಭ್ರಷ್ಟನಲ್ಲ” ಅಂಥ ನನ್ನ ಬೆನ್ನ ಹಿಂದೆ ನಿಂತ್ಕೊಂಡ್ ನಾನು ಎನ್ ಹೇಳುದ್ರು ಮೋದಿ ಮೋದಿ ಎಂದು ಅರಚುತ್ತಾ, ಸ್ವಚ್ಛ ಭಾರತ, ಭ್ರಷ್ಟ ಕಾಂಗ್ರೆಸ್ ಅಂತೆಲ್ಲ ಮಾತಾಡ್ತಾರಲ್ಲ.. ಇವರುಗಳ ಬಗ್ಗೆ ಯೋಚನೆ ಮಾಡುದ್ರೆ ಒಂದೊಂದ್ ಸಾರ್ತಿ ಭಯ ಬಂದು ರಾತ್ರಿಯೆಲ್ಲ ನಿದ್ದೆ ಬರೋಲ್ಲ.. ಎಂಥ ಮನಗೆಟ್ಟ ಜನ್ಮ ಈ ಲೋಫರ್ಗಳದ್ದೂ.
——
Mithron, ಹಿಂದೂ ಸಂಸ್ಕೃತಿ ಸಂಪ್ರದಾಯದ ಪ್ರಕಾರ 15 ಲಕ್ಷ ಕೊಡುವುದು ಒಳ್ಳೆಯದಲ್ಲ. ಆದ್ದರಿಂದ ಈ ಭಾರಿ ನನ್ನನ್ನು ಗೆಲ್ಲಿಸಿದರೆ ಹಿಂದೂ ಸಂಸ್ಕೃತಿಯ ಪ್ರಕಾರ 15 ಲಕ್ಷದ ಒಂದು ರೂಪಾಯಿ ನಿಮ್ಮ ಅಕೌಂಟಿಗೆ  ಬಂದು ಬೀಳುವುದು ಗ್ಯಾರೆಂಟಿ..
——
Mithron, ಬೆಂಗಳೂರಿನ ಬೀದಿಗಳಲ್ಲಿ ಕಲ್ಲು ಬೀಸಿದರೆ ಒಂದೋ ಬೀದಿ ನಾಯಿಗೆ ತಗಲುತ್ತದೆ ಅಥವಾ ಸಾಫ್ಟ್ ವೆರ್ ಟೆಕಿಗಳಿಗೆ ಬೀಳುತ್ತದೆ ಎಂಬ ಮಾತಿತ್ತು.. ಭಾಹಿಯೋ ಔರ್ ಬೆಹೆನೋ ಇದರಲ್ಲಿ ವ್ಯತ್ಯಾಸ ಇಷ್ಟೇ, ನಾಯಿಗಳು ಕುಯ್ ಅಂಥವೇ, ಇಲ್ಲ ಎದುರು ಬಂದು ಬೊಗಳಿ ಕಚ್ಚುವ ಪ್ರಯತ್ನ ಮಾಡುತ್ತವೆ.. ಆದರೆ ಬಹುತೇಕ ಸಾಫ್ಟ್ ವೆರ್ ಟೆಕಿಗಳು ಮಾತ್ರ ಏನೇ ಆಗಲಿ ಮೋದಿ ಮೋದಿ ಎಂದು ಕೂಗುತ್ತಾರೆ ಅಷ್ಟೇ.. #ಮತ್ತೊಮ್ಮೆಮೋದಿ #ಕುಯ್ #ಜೈಚೊಂಭೇಶ್ವರ
——
Mithron, ಮೊನ್ನೆ ಚೆನ್ನಾಗಿ ಓದಿಕೊಂಡು ದೊಡ್ಡ ಹುದ್ದೆಯಲ್ಲಿರುವ  ನನ್ನ ಪರಮ ಭಕ್ತನೊಬ್ಬನನ್ನು ಪ್ರಶ್ನೆ ಮಾಡಿದೆ. ನಾಜಿ ಜರ್ಮನಿಯಲ್ಲಿ ಹಿಟ್ಲರ್ನನ ಪರವಾಗಿರ್ತೀಯ? ಅಥವಾ ಲಕ್ಷಗಟ್ಟಲೆ ಕೊಲ್ಲಲ್ಪಟ್ಟ ಯಹೂದಿಗಳ ಪರವಾಗಿರ್ತಿಯ ಅಂಥ.. ಅವನು ಹಿಟ್ಲರ್ ಪರವಾಗಿರ್ತೀನಿ ಅಂದ.
ಸರಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ಜರ್ಮನಿಯನ್ನು ಸಪ್ಪೋರ್ಟ್ ಮಾಡ್ತಿಯ ಅಥವಾ ಪ್ಯಾಲೆಸ್ತೀನಿಯನ್ನರ ಮಾರಣಹೋಮ ಮಾಡುತ್ತಿರುವ ಇಸ್ರೇಲಿ ಯಹೂದಿಗಳ ಸಪ್ಪೋರ್ಟ್ ಮಾಡ್ತಿಯ ಅಂಥ.. ಅವನು ಇಸ್ರೇಲಿ ಯಹೂದಿಗಳ ಪರ ಎಂದ..
ಆ ಉತ್ತರಗಳನ್ನು ಕೇಳಿ ಕರುಳು ಕಿತ್ ಬಂತು ನಂಗೆ.. ಸೊ ನಾನು ಏನೇ ಮಾಡಿದರೂ, ನನ್ನ ಹಿಂದೆ ಸಾಮಾಜಿಕ ಪ್ರಜ್ಞೆಯಿಲ್ಲದ, ಸರ್ವಾಧಿಕಾರವನ್ನು ಬಯಸುವ ಇಂತ ಸುಶಿಕ್ಷಿತ ನಾಯಿಗಳಿರುವವರೆಗೂ ನನ್ನ ಸ್ಥಾನ  ಭದ್ರ ಎಂದು ಖಾತರಿಯಾಯಿತು..
——
Mithron, ನನ್ನ ಸಲಹೆಗಾರರು ನಂಗೆ ನಾಲ್ಕು ಆಯ್ಕೆ ಕೊಟ್ಟಿದ್ರು.
1. ನನ್ನ ಕಣ್ಣೋಟದಿಂದಲೇ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
2. ಮಂತ್ರ ಜಪಿಸುತ್ತ ನನ್ನ ಮನಶಕ್ತಿಯಿಂದ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
3. ನಾನು ಶಾ ಹೊಟ್ಟೆಮೇಲ್ ನಿತ್ಕೊಂಡ್ ಜಂಪ್ ಮಾಡಿ ಸೊಳ್ಳೆ ಬ್ಯಾಟ್ನಿಂದ ಉಪಗ್ರಹಗಳ ನಾಶ ಮಾಡುವ ಶಕ್ತಿ.
4. ಹತ್ತು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದ ವಿಶೇಷ  ಅಗ್ನಿ 5 ಕ್ಷಿಪಣಿಯಿಂದ ಕೆಳಮಟ್ಟದ ಉಪಗ್ರಹಗಳನ್ನು ನಾಶ ಮಾಡುವ ಶಕ್ತಿ.
ನಾನು ನಾಲ್ಕನೇಯದನ್ನು ಆರಿಸಿಕೊಂಡೆ ಚೋಂಬೇಶ್ವರ
——
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...