Homeಮುಖಪುಟಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

ಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

- Advertisement -
- Advertisement -

ನಮ್ಮಲ್ಲಿ ಅನೇಕ ಸಂಪ್ರದಾಯಗಳು, ಹಬ್ಬಹರಿದಿನಗಳ ಧಾರ್ಮಿಕ ಆಚರಣೆಗಳು ಕೂಡಾ ಪ್ರಕೃತಿ, ಪರಿಸರ ಮತ್ತು ನಭೋಮಂಡಲದ ಆಗುಹೋಗುಗಳನ್ನೂ, ಬದಲಾವಣೆಗಳನ್ನೂ ಅವಲಂಬಿಸಿ ಆಚರಿಸುವಂತದ್ದಾಗಿವೆ. ಸೂರ್ಯಕೇಂದ್ರಿತ ಈ ಮಂಡಲದಲ್ಲಿ, ಭೂಮಿ ಮತ್ತು ಸೂರ್ಯನ ನಡುವೆ ನಡೆವ ಪಥ ಚಲನೆಯಿಂದ ಭೂಮಿಯ ಪ್ರತಿಯೊಂದು ಜೀವಿಯ ಮೇಲೂ ಮಹತ್ತರವಾದ ಬದಲಾವಣೆಗಳಾಗುತ್ತವೆ. ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಒಂದು ಜೈವಿಕ ಗಡಿಯಾರವುಂಟು. ಆ ಗಡಿಯಾರ ಸೂರ್ಯನ ಹುಟ್ಟು ಮತ್ತು ಮುಳುಗುವಿಕೆಗೆ ತಕ್ಕಂತೆ ನಡೆಯುತ್ತಿರುತ್ತದೆ ಎಂದು ಆಧುನಿಕ ಜೀವಶಾಸ್ತ್ರ ಹೇಳುತ್ತದೆ. ಇದನ್ನು ಸಿರ್ಕೇಡಿಯನ್ ರಿದಮ್ ಎಂದು ಕರೆಯುವುದು. ಅದರ ಆಧಾರದ ಮೇಲೆ ಮನುಷ್ಯನ ಆರೋಗ್ಯ ಎಷ್ಟು ಅವಲಂಬಿಸಿದೆ ಎನ್ನುವ ಅಧ್ಯಯನ ಜೀವಶಾಸ್ತ್ರದಲ್ಲಿ ಒಂದು ಹೊಸ ಶಾಖೆಯೇ ಆಗಿದೆ.

ನಮ್ಮ ಮೆದುಳಿಗೂ ಸೂರ್ಯನ ಬೆಳಕಿಗೂ ತನ್ನದೇ ಆದ ರೀತಿಯಲ್ಲಿ ಸಂಪರ್ಕವಿದೆ ಎಂದು ತಿಳಿದಿರುವ ಮನುಷ್ಯ ಅದನ್ನು ಬೆಳಕಿನ ಗುಣಾನುಶಾಸ್ತ್ರ (Optogenetic) ಎಂದು ನಾಮಕರಣ ಮಾಡಿದ. ನಮ್ಮ ಆಹಾರದಲ್ಲಿ ಅನೇಕ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಗುಣ, ಸೌರಶಕ್ತಿಯ ಪ್ರಖರತೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಬೀಜದಿಂದ ತಯಾರಿಸುವ ಎಣ್ಣೆಯಲ್ಲಿನ ಅಂಶಗಳಾದ ಲಿನೋಲೀಕ್ ಆಮ್ಲ ಶೇ.20ರಷ್ಟು ಕಿರಣಗಳ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದು. ನಮ್ಮ ದೇಹ ಅತ್ಯಂತ ಸುಲಭವಾಗಿ ದಕ್ಕುವ ಬಿಸಿಲಿಗೆ ಮೈಯೊಡ್ಡಿ ಸೂರ್ಯನ ಕಿರಣಗಳಿಂದ ಚರ್ಮದಲ್ಲಿರುವ ಕೊಲೆಸ್ರ್ಟಾಲನ್ನು ಕೋಲಿಕ್ಯಾಲ್ಸಿಫೆರಾಲ್ ಅಂದರೆ ವಿಟಮಿನ್ ಡಿ ಆಗಿ ಪರಿವರ್ತಿಸಿ ಮೂಳೆಯನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಬೇಯಿಸದಿರುವ ಅಥವಾ ಸೂರ್ಯನಿಂದಲೇ ಬೇಯಿಸಲ್ಪಟ್ಟ ಸ್ವಾಭಾವಿಕ ಆಹಾರ ಅರ್ಧಕ್ಕೆ ಅರ್ಧದಷ್ಟಿದ್ದಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಂತ ಪೂರಕವೆಂದು ಈಗ ತಿಳಿದಿರುವ ಸಂಗತಿ.

ಒಂದು ರೀತಿಯಲ್ಲಿ ನಾವು ಸೌರಶಕ್ತಿಯನ್ನು ರೂಪಾಂತರಗೊಳಿಸುವ ವಾಹಕಗಳಷ್ಟೇ ಸರಿ. ಥರ್ಮೋಡೈನಮಿಕ್ಸ್ ಪ್ರಕಾರ ಶಕ್ತಿಯನ್ನು ಉತ್ಪಾದಿಸಲು ಅಥವಾ ನಶಿಸಲು ಸಾಧ್ಯವಿಲ್ಲ. ಅದೇನಿದ್ದರೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುತ್ತದೆ ಮಾತ್ರ. ಇದನ್ನೇ ಆಲ್ಬರ್ಟ್ ಐನ್ಸ್ಟೈನ್ ಶಕ್ತಿ ಮತ್ತು ದ್ರವ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳೆಂದು ತನ್ನ ಹೆಸರಾಂತ e=mc2 ಸೂತ್ರದಲ್ಲಿ ತಿಳಿಸಿದ.

ಈ ರೀತಿ ವಾಸ್ತವವಾಗಿ ಭೌತಶಾಸ್ತ್ರದ ದೃಷ್ಟಿಯಲ್ಲೇ ಜಗತ್ತನ್ನು ನೋಡಿದರೆ ರಸ, ರುಚಿ, ಸತ್ವ, ಆನಂದಗಳು ನಮ್ಮ ಬದುಕಿಗೆ ಬೆಲೆಯೇ ಇಲ್ಲದಂತೆ ಕಾಣಬಹುದು. ಕೇವಲ ಶಕ್ತಿಯೇ ದೇಹಕ್ಕೆ ಸಾಕು ಎಂದು, ಮೊಬೈಲ್ ಫೋನ್ ಚಾರ್ಜ್ ಮಾಡಿಕೊಂಡಂತೆ ನಾವು ಶಕ್ತಿಯನ್ನು ಬರಿಸಿಕೊಳ್ಳಲಾಗುವುದಿಲ್ಲ. ಕೊನೆಗೆ ನಮಗೆ ಬೇಕಾಗಿರುವುದು ಶಕ್ತಿಯೇ ಆದರೂ ಸಹ ಈ ಭೂಮಿಯ ಸ್ವಾರಸ್ಯ ಅಡಗಿರುವುದು ಸೂಕ್ಷ್ಮ ವಿಶಿಷ್ಟ ಅನುಭವದ ಆಧಾರದ ಮೇಲೆ. ನಮ್ಮ ಮೂಗು ಮತ್ತು ನಾಲಿಗೆಗೆ ಲಕ್ಷಾಂತರ ಸ್ವಾದಗಳನ್ನು ಗ್ರಹಿಸುವ ಶಕ್ತಿಯೇ ಇದಕ್ಕೆ ಸಾಕ್ಷಿ. ಹಿಂದಿನವರು ಷಡ್ರಸಗಳನ್ನು, ಸಪ್ತಸ್ವರಗಳನ್ನು ಗುರುತಿಸಿದರೂ ಅವುಗಳ ಅಂತರಂಗದಲ್ಲಿ ಗುರುತಿಸಲಾಗದ ಮಿಲಿಯಗಟ್ಟಲೆ ವಿಭಿನ್ನ ನೋಟ್‌ಗಳನ್ನು ಅನುಭವದಲ್ಲಿ ಕಾಣಬಹುದು. ಇವುಗಳ ಅನುಭವಕ್ಕೆ ಒಂದು ರೀತಿಯಲ್ಲಿ ಹಬ್ಬ ಹರಿದಿನಗಳು ಅತ್ಯಂತ ಪ್ರಯೋಜನಕಾರಿಯಾಗಿ ಒದಗಿಬರುತ್ತವೆ. ಯಾರೋ ಒಬ್ಬ ನಾನು ಅನೇಕ ವರ್ಷ ನಾಸ್ತಿಕನಾಗಿದ್ದೆ, ಆಗ ಹಬ್ಬಗಳನ್ನು ತಿಳಿದು ಆಸ್ತಿಕನಾದೆ ಎನ್ನುತ್ತಾನೆ.

ಎಲ್ಲ ರೀತಿಯ ಬಹುತರದ ರಸ, ರುಚಿಗಳನ್ನು ಮತ್ತು ತಿಳಿದ ಮತ್ತು ಇನ್ನೂ ತಿಳಿಯದ ಅಗಾಧವಾದ ಪೌಷ್ಟಿಕಾಂಶಗಳನ್ನು ಪಡೆಯಲು ಒಂದೇ ಒಂದು ಮಾರ್ಗವೆಂದರೆ ನಮ್ಮ ಆಹಾರದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು. ಎಲ್ಲಿ ಆಹಾರದ ವೈವಿಧ್ಯತೆ ಇರುವುದೋ ಅಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶಗಳು ತಿಳಿಯದೇ ಬಂದೊದಗುತ್ತವೆ. ಅದಕ್ಕೆ ಒಬ್ಬ ಹೀಗೆನ್ನುತ್ತಾನೆ: ‘Let food be part of your diet plan!’ ಎಂದು. ಆಹಾರವಿದ್ದರೆ ಪೌಷ್ಟಿಕಾಂಶ. ವೈವಿಧ್ಯತೆ ಇದ್ದರೆ ಅಗಾಧವಾದ ಸೂಕ್ಷ್ಮ ಪೌಷ್ಟಿಕಾಂಶಗಳೆಲ್ಲವನ್ನೂ ಆನಂದಮಯ ಅನುಭವದೊಂದಿಗೆ ಪಡೆದುಕೊಳ್ಳಬಹುದು. ಆಹಾರ ವೈವಿಧ್ಯತೆ ನೂರಿದ್ದರೆ ಅಡುಗೆಯ ವೈವಿಧ್ಯತೆ ಸಾವಿರವಿರಬಹುದು. ನಾವು ಅನ್ನವೊಂದರಲ್ಲಿ ಎಷ್ಟು ರೀತಿಯ ತಿನಿಸುಗಳನ್ನು ಮಾಡಬಹುದು ಎಂದು ಊಹಿಸಿದರೆ ಸಾಕು! ಆದರೆ ವೈವಿಧ್ಯತೆ ಎನ್ನುವುದು ಕೇವಲ ಬಿಳಿ ಅನ್ನವನ್ನು ಹತ್ತಾರು ರೀತಿಯ ಮಸಾಲಪದಾರ್ಥಗಳಿಂದ ರುಚಿಕರಗೊಳಿಸುವುದಷ್ಟೇ ಅಲ್ಲ. ಅಡುಗೆಯ ಕಲೆಯ ದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಬಹುದಾದರೂ ವೈವಿಧ್ಯತೆಯ ದೃಷ್ಟಿಯಿಂದ ಭತ್ತದಲ್ಲೇ ಇರುವ ಸಾವಿರಾರು ತಳಿಗಳನ್ನು ಬಳಸಿದಲ್ಲಿ ಅಥವಾ ಇನ್ನೂ ಹತ್ತಾರು ಏಕದಳ ಧಾನ್ಯಗಳನ್ನು ಬಳಸಿದ್ದಲ್ಲಿ ಅದರ ಅನುಭವವೇ ಬೇರೆ! ಸಾಮಾನ್ಯವಾಗಿ ಇಂದು ಬೇಕರಿಗೆ ಹೋದರೆ ತರತರದ ಖಾದ್ಯಗಳನ್ನು ಅಲ್ಲಿ ಕಾಣಬಹುದು. ಆದರೆ ಅವೆಲ್ಲಕ್ಕೂ ಮೂಲ ಸಾಮಗ್ರಿ ಮೈದಾ, ಡಾಲ್ಡಾ ಮತ್ತು ಸಕ್ಕರೆಯೇ ಆಗಿದ್ದರೆ ಆ ವೈವಿಧ್ಯತೆ ಕೇವಲ ತೋರಿಕೆಯದ್ದು ಮಾತ್ರ ಎನ್ನುವುದು ಮರೆಯಬಾರದು.

ಬುಡಕಟ್ಟು ಜನಾಂಗದವರ ದೇಹದಲ್ಲಿನ ಸೂಕ್ಷ್ಮಜೀವಜಗತ್ತು ಪ್ರತೀ ಋತುವಿಗೂ ಸಂಪೂರ್ಣವಾಗಿ ಬದಲಾಗುತ್ತದೆ. ಆದರೆ ನಾಗರಿಕರೆನ್ನುವ ನಮಗೆ, ಏಕಮುಖಿಯಾದ ಆಹಾರ ಪದ್ಧತಿಯಿಂದ, ಋತುವಿಗೆ ತಕ್ಕಂತೆ ಅಂತಹ ಬದಲಾವಣೆ ಆಗದಿರುವುದು, ನಮ್ಮ ಅನಾರೋಗ್ಯಕ್ಕೆ ಒಂದು ರೀತಿಯಲ್ಲಿ ಬುನಾದಿ ಎನ್ನಬಹುದು. ಸಂಕ್ರಾಂತಿ ಕಾಲದಲ್ಲಿ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ಬದಲಾವಣೆಯನ್ನು ತಂದುಕೊಳ್ಳುವುದು ನಮ್ಮ ಹಿರೀಕರು ವೈಜ್ಞಾನಿಕವಾಗಿ ಸಂಪ್ರದಾಯಗಳ ಮೂಲಕ ಅಳವಡಿಸಿಕೊಂಡು ಬಂದಿರುವುದನ್ನು ನಾವು ಗಮನಿಸಬಹುದು. ಇದನ್ನು ಆಯುರ್ವೇದದಲ್ಲಿ ಋತುಬುಕ್ ಹಿತಬುಕ್ ಮತ್ತು ಮಿತಬುಕ್ ಎಂದೆಲ್ಲಾ ಹೇಳುವುದುಂಟು.

ಚೈನಾದೇಶ ಇತ್ತೀಚೆಗೆ ಒಂದು ಹೊಸ ಬೀಜಸಂಗ್ರಹಣಾ ಮತ್ತು ಸಂರಕ್ಷಣಾ ಕೇಂದ್ರವೊಂದನ್ನು ಆರಂಭಿಸಿದ ವರದಿ ಬಂದಿದೆ. ಅಲ್ಲಿಯವರು ಮುಂದಿನ ಪೀಳಿಗೆಗಾಗಿ ಸುಮಾರು ಹದಿನೈದು ಲಕ್ಷ ವಿವಿಧ ರೀತಿಯ ಆಹಾರದ ಬೀಜಗಳನ್ನು ಸಂಗ್ರಹಿಸಿದ್ದಾರೆ. ಹಿಂದೆ ಸ್ವಾಲ್ಬಾರ್ಡ್ ಎನ್ನುವ ಇದೇ ರೀತಿಯ ಬೀಜಸಂರಕ್ಷಣಾ ಬ್ಯಾಂಕ್ ಒಂದನ್ನು ನಾರ್ವೆ ದೇಶದಲ್ಲಿ ಕಟ್ಟಿರುವುದು ನಮಗೆಲ್ಲಾ ತಿಳಿದಿತ್ತು. ಅಲ್ಲಿ ಸುಮಾರು ಹತ್ತು ಲಕ್ಷ ವೈವಿಧ್ಯಮಯ ಬೀಜಗಳ ಸಂಗ್ರಹವಿದೆ ಎನ್ನುತ್ತಾರೆ. ಚೈನಾದೇಶ ಈ ದೃಷ್ಟಿಯಿಂದ ಅತ್ಯಂತ ದೂರದೃಷ್ಟಿ ಉಳ್ಳದ್ದು ಎನ್ನಬಹುದಾಗಿದೆ. ಏಕೆಂದರೆ ಇನ್ನ್ಯಾವುದೋ ಗ್ರಹಕ್ಕೆ ಮುಂದೆ ಮನುಕುಲ ಹಾರಬಹುದೋ ಇಂದು ತಿಳಿಯದು. ಆದರೆ ಈ ಭೂಮಿಯ ಮೇಲೆ ಬಹಳ ಕಾಲ ಬದುಕಬೇಕೆಂದಿದ್ದರೆ ನಮ್ಮ ಆಹಾರದ ವೈವಿಧ್ಯತೆಯನ್ನು ಬೀಜರೂಪದಲ್ಲಿ, ಆಹಾರ ರೂಪದಲ್ಲಿ ಮತ್ತು ಅಡುಗೆಯ ರೂಪದಲ್ಲಿ ಉಳಿಸಿಕೊಳ್ಳುವುದು ಅತ್ಯಂತ ಸೂಕ್ತ. ದುರಂತವೆಂದರೆ, ಸಾಮಾನ್ಯವಾಗಿ ನಮಗೆ ಇಂತಹ ವಿಷಯಗಳು, ಅತ್ಯಂತ ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನವೆಂದು ಇಲಾನ್ ಮಸ್ಕ್‌ನ ಎಲೆಕ್ಟ್ರಿಕ್ ಕಾರ್ ಕಂಡು ವಿಸ್ಮಯಗೊಂಡಂತೆ ಅನ್ನಿಸುವುದಿಲ್ಲ.

ಆಹಾರದ ವಿಷಯ ನಿಜವಾಗಿಯೂ ನಮ್ಮ ಆಂತರ್ಯದ ವಿಷಯವಾಗಿದೆ. ಈ ಜೀವಿ ಎಷ್ಟುಕಾಲ ಇಲ್ಲಿ ಬದುಕಬಹುದು ಎನ್ನುವುದು ಈ ಆಹಾರ ವೈವಿಧ್ಯತೆಯನ್ನೇ ಆಧರಿಸಿದೆ. ಹೀಗಾಗಿ ಸಂಕ್ರಾಂತಿಯಂತಹ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಮನುಕುಲದ ಬಹುಕಾಲದ ಇರುವಿಕೆ ಮತ್ತು ಒಳಿತಿಗೆ ಆಳವಾದ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಆಚರಣೆಗೆ ಇನ್ನೂ ಹೆಚ್ಚು ಮೆರಗು ನೀಡುತ್ತದೆ.

ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...