Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

ಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

- Advertisement -
- Advertisement -

ರೈತಾಪಿ ಜನಗಳಿಗೆ ಸಂಬಂಧಪಟ್ಟ ಮೋದಿಯವರ 3 ಕಾಯ್ದೆಗಳನ್ನು ಸರ್ವೋಚ್ಚ ನ್ಯಾಯಾಲಯ ತಡೆ ಹಿಡಿದಿದೆ. ರೈತರೊಡನೆ ಸಮಾಲೋಚನೆ ಮಾಡಲು ಒಂದು ತಜ್ಞರ ಸಮಿತಿ ರಚಿಸಬೇಕೆಂದು ನ್ಯಾಯಾಲಯ ಈ ಹಿಂದೆಯೇ ಹೇಳಿದ್ದರೂ, ಇದುವರೆಗೆ ಸರ್ಕಾರವೇ ಸಂಧಾನ ಸಭೆಗಳನ್ನು ನಡೆಸುತ್ತಾ ಕಾಲ ಕಳೆದಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಠಿಣವಾದ ಮಾತುಗಳನ್ನಾಡಿದೆ. ರೈತರ 26ರ ಟ್ರ್ಯಾಕ್ಟರ್ ಮೆರವಣಿಗೆ ರದ್ದು ಮಾಡಲು ಕೋರಿದ ಅರ್ಜಿಯನ್ನು ವಜಾಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ. ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯವೆಂದರೂ ಒಪ್ಪತಕ್ಕ ಮಾತೇ.

ಮೋದಿಯವರು ಈ ಮೂರು ರೈತ ವಿರೋಧಿ ಆರ್ಡಿನೆಸ್ಸ್‌ಗಳನ್ನು ಜಾರಿ ಮಾಡುವುದಕ್ಕೆ ಮೊದಲೇ ಏನೇನು ತಯಾರಿ ನಡೆಸಿದ್ದರು ಎಂಬುದನ್ನು ತಿಳಿಯೋಣ. ಹರಿಯಾಣದಲ್ಲಿ ಕೈಗಾರಿಕೆ ಸ್ಥಾಪಿಸುವ ನೆಪಹೂಡಿ, ಒಂದೊಂದು ಗ್ರಾಮದಲ್ಲಿ 100-150ರಿಂದ ಹಿಡಿದು 500 ಎಕರೆವರೆಗೆ, ಎರಡು ವರ್ಷಗಳ ಹಿಂದಿನಿಂದಲೇ ಅಪಾರ ಹಣ ಕೊಟ್ಟು ರೈತರಿಂದ ಅದಾನಿ ಜಮೀನನ್ನು ಕೊಳ್ಳುತ್ತಾ ಬಂದಿದ್ದಾರೆ. ಭತ್ತ ಮತ್ತು ಗೋಧಿ ಅಧಿಕವಾಗಿ ಬೆಳೆಯುವ ಸ್ಥಳಕ್ಕೆ ಹತ್ತಿರವಿರುವ ರೈಲ್ವೆ ವ್ಯವಸ್ಥೆಯ ಖಾಸಗೀಕರಣಕ್ಕೆ ನಿರ್ಧಾರ ಮಾಡಿರುವುದಲ್ಲದೆ, ಅದಾನಿಯವರ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಕೆಲವು ಮಾರ್ಗಗಳನ್ನು ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ಕಂಟೈನರ್ ಇರುವ ಗೂಡ್ಸ್ ವ್ಯಾಗನ್‌ಗಳನ್ನು ತಯಾರಿಸಲು ಅವರಿಗೆ ಅನುಮತಿ ನೀಡಿದ್ದಾರೆ. 2020ರ ಆರಂಭದಲ್ಲೇ ರೈಲ್ವೆ ಸಚಿವಾಲಯದಲ್ಲಿ ಅದಾನಿ ಅವರನ್ನು ಕೂರಿಸಿಕೊಂಡು ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಸಂಚು ನಡೆಸಿದ್ದಾರೆ. ಅಂಬಾನಿಯವರ ಸಂಸ್ಥೆ ಈ ದಿನಸಿಗಳನ್ನೆಲ್ಲ ಕೊಳ್ಳುವ ತಯಾರಿಯಲ್ಲಿದ್ದಾರೆಂದು ಇತ್ತೀಚೆಗೆ ಬಹಿರಂಗಗೊಂಡಿದೆ. ಈ ಇಬ್ಬರು ಕೋಟ್ಯಾಧಿಪತಿಗಳನ್ನು ಕೂಡಿಕೊಳ್ಳಲು ಟಾಟಾ ಕಂಪನಿಯವರೂ ತವಕ ವ್ಯಕ್ತಪಡಿಸಿದ್ದಾರೆ. ಈ ಆಹಾರ ಧಾನ್ಯಗಳ ವ್ಯಾಪಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಕಂಪನಿಗಳೂ, ಕಾರ್ಪೊರೇಟ್‌ಗಳೂ ಸಹಭಾಗಿತ್ವ ಪಡೆಯಲು ಮುಂದೆ ಬಂದಿವೆ.

ಈ ಕಾನೂನುಗಳು ಜಾರಿಗೆ ಬರುವುದಕ್ಕೆ ಎಷ್ಟೋ ಮೊದಲಿನಿಂದಲೂ ಗುತ್ತಿಗೆ ಕೃಷಿ ಅನಧಿಕೃತವಾಗಿ ನಡೆಯುತ್ತಲೇ ಇದೆ. ಅದರಿಂದ ರೈತರು ನಷ್ಟ ಅನುಭವಿಸಿದ್ದು ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವೇನಲ್ಲ. ಈ ವಿಷಯ ಸರ್ಕಾರದ ಗಮನದಲ್ಲಿದ್ದರೂ ಮೋದಿಯವರು ಈ ಕೃಷಿ ಗುತ್ತಿಗೆ ಕಾನೂನು ರೈತರಿಗೆ ಲಾಭದಾಯಕ ಮತ್ತು ಕಾರ್ಪೊರೇಟ್ ಕಂಪನಿಗಳಿಗೂ ಲಾಭದಾಯಕ ಎಂದು ಸುಳ್ಳು ಹೇಳುತ್ತಿದ್ದಾರೆಯೇ? ಈ ಕಾನೂನು ಅನುಷ್ಠಾನದ ನಂತರ ರೈತರು ಮತ್ತು ಕಾರ್ಪೊರೇಟ್ ಕಂಪನಿಗೂ ವಿವಾದ ಎದ್ದರೆ, ಆಗ ಉಭಯತ್ರರೂ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಮುಂದೆ ತಮ್ಮ ಅಹವಾಲನ್ನು ಮಂಡಿಸಬೇಕು. ಅಲ್ಲಿ ಸಮಾಧಾನಕರವಾದ ತೀರ್ಪು ಬಂದಿದೆ ಎಂದು ಇವರಿಗೆ ಅನಿಸಿದರೆ ಅವರು ಅಂತಿಮ ತೀರ್ಮಾನಕ್ಕಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಜಿಲ್ಲಾಧಿಕಾರಿಗಳ ತೀರ್ಪೇ ಅಂತಿಮ. ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುಂಚೆ ರೈತರು ಇಂತಹ ಪ್ರಸಂಗ ಬಂದಾಗ ಸಿವಿಲ್ ಕೋರ್ಟಿಗೆ ಹೋಗುವ ಅವಕಾಶವಿತ್ತು. ಈ ಹೊಸ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ರಚಿಸಲಾಗಿದೆ.

ಕಂದಾಯ ಇಲಾಖೆ ಎಷ್ಟು ಕುಲಗೆಟ್ಟಿದೆ ಎಂಬ ವಿಚಾರ ಪ್ರತಿ ರೈತನಿಗೂ ಗೊತ್ತು. ಲಂಚ ಕೊಟ್ಟಲ್ಲದೆ ಯಾವ ಕೆಲಸವೂ ಅಲ್ಲಿ ಆಗುವುದಿಲ್ಲ ಇಂತಹ ಇಲಾಖೆಯ ತೀರ್ಪು ಅಂತಿಮ ಎಂದ ಮೇಲೆ ರೈತರಿಗೆ ನ್ಯಾಯ ದೊರಕುವುದಾದರೂ ಹೇಗೆ? ಮೋದಿ ಪೋಷಿತ ಶ್ರೀಮಂತ ವರ್ಗದ ಪರ ನ್ಯಾಯ ಮಾರಾಟವಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ? ಇದರಿಂದ ರೈತರಿಗೆ ಈ ಕಾನೂನಿಂದ ನೆರವು ಸಿಗುತ್ತದೆ ಎಂಬ ಭ್ರಮೆಯನ್ನು ಕಳಚಿ ಹಾಕಬೇಕಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿ ಯಾವುದು ಎಂಬುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಈಗ ಅದನ್ನು ಮೀರಿ ಈ ಶಾಸನ ರಚಿಸಲಾಗಿದೆ ಎಂಬುದು ನನ್ನ ಅನಿಸಿಕೆ. ರೈತರಿಗೆ ಸಿಗುತ್ತಿದ್ದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಇದೆ ಈ ಕರಾಳ ಶಾಸನ.

ಗುತ್ತಿಗೆ ಹಿಡಿದ ಒಂದು ಕಾರ್ಪೊರೇಟ್ ಕಂಪೆನಿ ಜಮೀನನ್ನು ಹಿಡಿತಕ್ಕೆ ತೆಗೆದುಕೊಂಡಂತೆಯೇ, ಆ ಜಮೀನನ್ನೆಲ್ಲ ವ್ಯವಸಾಯಕ್ಕೆ ಬಳಸುವುದಾದರೆ ಅದು ಸಹಜವಾಗಿ ತನ್ನ ಎಲ್ಲ ಕೆಲಸಕ್ಕೂ ಆಧುನಿಕ ರೀತಿಯ ಯಂತ್ರಗಳನ್ನೆ ಬಳಸಬೇಕಾಗುತ್ತದೆ. ಉಳುವುದು, ಕಾಳು ಚೆಲ್ಲುವುದು, ಗೊಬ್ಬರ, ಕೀಟನಾಶ ಎಲ್ಲವನ್ನು ಯಂತ್ರಗಳ ಸಹಾಯದಿಂದಲೇ ಮಾಡಬೇಕಾಗುವುದು ಅನಿವಾರ್ಯ. ಹಾಗೆಯೇ ಫಸಲು ಕುಯ್ಯುವುದು ಅದನ್ನು ಒಣಗಿಸುವುದು, ಕಾಳಿನ ಭಾಗವನ್ನು ಹುಲ್ಲನ್ನು ಬೇರ್ಪಡಿಸುವುದು, ಕಾಳನ್ನು ಪ್ರತ್ಯೇಕಗೊಳಿಸುವುದು, ಗಾಳಿಯ ಸಹಾಯದಿಂದ ಕಾಳನ್ನು ತೂರಿ ಹೊಟ್ಟನ್ನು ಪ್ರತ್ಯೇಕಿಸುವುದು ಎಲ್ಲದಕ್ಕೂ ಯಂತ್ರದ ಉಪಯೋಗ ಮಾಡುವುದು ಅನಿವಾರ್ಯವಾಗುತ್ತದೆ. ಯಂತ್ರವೇ ಈ ಎಲ್ಲ ಕೆಲಸ ಮಾಡುವುದರಿಂದ ಕೆಲವೇ ಜನ ವ್ಯವಸಾಯ ಕೆಲಸಗಾರರ ಆವಶ್ಯಕತೆ ಇರುತ್ತದೆ. ಹಳ್ಳಿಯಲ್ಲಿ ಅನಾದಿ ಕಾಲದಿಂದ ವ್ಯವಸಾಯ ಕಾರ್ಮಿಕರಾಗಿ ಉಳಿದಿರುವ ಈ ನಿರುದ್ಯೋಗಿ ಹತಭಾಗ್ಯರು ವಲಸೆ ಹೋಗಿ ಬೇರೆ ಕೆಲಸ ಹುಡುಕಬೇಕಾಗುವುದರ ಅನಿವಾರ್ಯತೆಯನ್ನು ಈ ಕಾನೂನು ಸೃಷ್ಟಿ ಮಾಡಿದೆ. ಭಾರತ ವ್ಯವಸಾಯ ಪ್ರಧಾನ ದೇಶವಾಗಿ ಇದುವರೆಗೂ ಇತ್ತು. ಮೋದಿ ಅವರು ಇಡೀ ವ್ಯವಸಾಯ ವ್ಯವಸ್ಥೆಯನ್ನು ಶ್ರೀಮಂತರ ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸುವ ಮೂಲಕ ಭಾರತವನ್ನು ಅಮೆರಿಕ ಮಾಡುವ ಗುತ್ತಿಗೆ ಹಿಡಿದಿದ್ದಾರೆ.

ಅಮೆರಿಕ ಒಂದು ಉದ್ಯಮಶೀಲ ರಾಷ್ಟ್ರವಾಗಿದ್ದು, ವ್ಯವಸಾಯದಲ್ಲಿ ತೊಡಗಿರುವ ಹಿಡಿ ಮಂದಿಯ ಕೈಯಲ್ಲಿ ಸಾವಿರ ಸಾವಿರ ಎಕರೆ ಜಮೀನು ಇದೆ. ಅವರ ಮನೆಯವರೇ ಸೇರಿಕೊಂಡು ಕೆಲವರೇ ಕಾರ್ಮಿಕರ ಸಹಾಯದಿಂದ ವ್ಯವಸಾಯದಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್ ಸಹಾಯದಿಂದ ಬೀಜ ಬಿತ್ತಿ ಉಳಿದ ಎಲ್ಲ ಕೆಲಸಗಳಿಗೂ ಟ್ರ್ಯಾಕ್ಟರ್ ಕಟ್ಟಿಂಗ್ ಮಿಷನ್, ಹಾರ್ವೆಸ್ಟಿಂಗ್ ಮಿಷನ್, ಡ್ರೈಯರ್ ಎಲ್ಲವನ್ನು ಅವರು ಬಳಸುತ್ತಾರೆ. ಮೋದಿ ಕನಸು ಬಹುಶಃ ಮುಂದೊಂದು ದಿನ ಭಾರತವನ್ನು ಉದ್ಯಮಶೀಲ ರಾಷ್ಟ್ರವನ್ನಾಗಿ ಮಾಡುವುದಿರಬಹುದು. ಮೋದಿ ಅವರದು ಉಳ್ಳವರ ಅಭಿವೃದ್ಧಿಯೇ ಹೊರತು ಬಡವರ ಬದುಕನ್ನು ಹಸನು ಮಾಡುವುದಲ್ಲ. ಈ ಕೃಷಿ ಕಾಯ್ದೆಗಳು ಲಕ್ಷಾಂತರ ಮಂದಿ ಕೃಷಿ ಕಾರ್ಮಿಕರ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳಲಿವೆ.
Socialistic societyಯನ್ನಾಗಿ ಪರಿವರ್ತಿಸುವ, ಭಾರತವನ್ನು ಸಮಸಮಾಜವನ್ನಾಗಿ ಪರಿವರ್ತಿಸುವ, ಸರ್ವಜನರೂ ಸುಖವಾಗಿ dignityಇಂದ ಬದುಕುವ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ರಾಷ್ಟ್ರದ ಚುಕ್ಕಾಣಿ ಹಿಡಿಯುವವರ ಕೈಲಿರಬೇಕು ಎಂಬ ಆಶಯವನ್ನು ನಾವು ಪ್ರಜೆಗಳು ಹೊಂದಿದ್ದವು. ಈಗ ಆ ಕನಸು ಭಗ್ನವಾಗುವ ಸನ್ನಿವೇಶವನ್ನು ಪ್ರಭುತ್ವ ನಿರ್ಮಾಣ ಮಾಡುತ್ತಿದೆ.

ಈ 70 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಬಹಳ ಪ್ರಗತಿಯನ್ನು ಸಾಧಿಸಿದ್ದವು. ಪಿ. ಸುಬ್ರಹ್ಮಣ್ಯಂ ವ್ಯವಸಾಯ ಮಂತ್ರಿಗಳಾಗಿದ್ದಾಗ ವ್ಯವಸಾಯ ಕ್ರಾಂತಿ, ಹಾಲಿನ ಕ್ರಾಂತಿ ಮುಂತಾದ ಗ್ರಾಮೀಣ ಜನರ ಬದುಕು ಹಸನಾಗುವಂತೆ ಮಾಡಿದರು. ಭಾರತ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಯಿತು. ರಫ್ತಿಗೂ ಅವಕಾಶವಾಯಿತು. ನೆಹರು ಕಾಲದಲ್ಲಿ ವಿಜ್ಞಾನದಲ್ಲಿ ಭಾರತ ದಾಪುಗಾಲು ಹಾಕಿತು. ಜನಸಾಮಾನ್ಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡ ಯೋಜನೆಗಳು ವಾಂಚಿತ ಫಲ ನೀಡಿದವು. ಚಂದ್ರಲೋಕ, ಮಂಗಳ ಗ್ರಹಗಳನ್ನು ಅಧ್ಯಯನ ಮಾಡುವ ಸಾಹಸ ಮಾಡಲಾಯಿತು. ಅಸ್ಪೃಶ್ಯತೆ ನಿವಾರಣೆ ಉದ್ಯೋಗ ಸೃಷ್ಟಿಯ ಕೆಲಸಗಳನ್ನು ಮಾಡಲಾಯಿತು. ಆದರೆ ಅವು ಇನ್ನೂ ಪೂರ್ಣವಾಗಿ ಪರಿಹಾರವಾಗಿಲ್ಲ.

ಮೋದಿ ಸರ್ಕಾರ ಅವನ್ನೆಲ್ಲ ಮುಂದುವರೆಸಬೇಕಾಗಿತ್ತು. ಆದರೆ ನಾವು ಭಾರತೀಯರು ಈಗ ಆರ್ಥಿಕ ಅಸ್ಥಿರತೆ, ನಿರುದ್ಯೋಗ, ಆಹಾರ ಅಭದ್ರತೆ, ಕೃಷಿಯ ಅಸ್ಥಿರತೆಯಲ್ಲಿ ಸಿಲುಕಿದ್ದೇವೆ. ಮೋದಿ ಸರ್ಕಾರ ಈ ಜ್ವಲಂತ ಪ್ರಶ್ನೆಗಳಿಗೆ ಪರಿಹಾರ ಹುಡುಕುವ ಬದಲು ಅವನ್ನು ಬಂಡವಾಳಶಾಹಿ ವ್ಯವಸ್ಥೆಗೆ ಕೈಗೊಪ್ಪಿಸುತ್ತಿದ್ದಾರೆ. ಆದರೆ ಇದು ಬಡವರ ಮತ್ತು ಮಧ್ಯಮ ವರ್ಗದವರ ಅರಿವಿಗೆ ಬಾರದಿರುವುದು ದುರದೃಷ್ಟ.


ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆ: ತೊಂದರೆಗೊಳಗಾದವರಿಗೆ ರಕ್ಷಣೆ ಅಗತ್ಯವೆಂದ IMF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...