Homeಅಂಕಣಗಳುಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ - ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

- Advertisement -
- Advertisement -

ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಥಿಯೋಡೊರಸ್ ಅಂಜೊಲಾಪೊಲಸ್

1. ಎಟರ್ನಿಟಿ ಅಂಡ್ ಅ ಡೇ (1998) ಮೂವರು ಕವಿಗಳು, ನೂರಾರು ವರ್ಷಗಳ ಗ್ರೀಸ್‌ನ ಇತಿಹಾಸ, ಗಡಿಗಳನ್ನು ಮೀರಿದ ಮಾನವತಾವಾದ, ಕೊನೆಯಿಲ್ಲದ ಕಲ್ಪನೆ ಹೀಗೆ ಎಲ್ಲವನ್ನು ದೃಶ್ಯರೂಪದ ಕವಿತೆಯನ್ನಾಗಿಸಿದರೆ ಅದೇ ಈ ಸಿನಿಮಾ. ಆನಾರೋಗ್ಯದಿಂದ ಬಳಲುತ್ತಿರುವ ಐವತ್ತರ ಅಸುಪಾಸಿನ ಕವಿ ಅಲೆಕ್ಸಾಂಡ್ರೊಸ್ ಮರುದಿನ ಆಸ್ಪತ್ರೆಗೆ ಸೇರುವ ತಯಾರಿಯಲ್ಲಿರುತ್ತಾನೆ. ಮಗಳನ್ನು ಮಾತನಾಡಿಸಿ, ತನ್ನ ಸಾಕುನಾಯಿಯ ಪಾಲನೆಯ ಜವಾಬ್ದಾರಿಯನ್ನು ವರ್ಗಾಯಿಸುವ ಸಲುವಾಗಿ ಹೊರಟು, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ, ಹದಿಮೂರು ವಯಸ್ಸಿನ ಕೆಳಗಿರುವ ಅಲ್ಬೆನಿಯನ್ ಹುಡುಗರ ಗುಂಪೊಂದು ನಿಂತಿರುವ ಕಾರುಗಳ ಗಾಜುಗಳನ್ನು ಒರೆಸಿ ಹಣ ಕೇಳುತ್ತಿರುತ್ತಾರೆ. ಅದೇ ಸಮಯಕ್ಕೆ ಪೊಲೀಸರ ಪಡೆಯೊಂದು ಆ ನಿರಾಶ್ರಿತ ಹುಡುಗರ ಗುಂಪನ್ನು ಹಿಡಿಯಲು ಮುಂದಾದಾಗ, ಆರು ವರ್ಷದ ಬಾಲಕನನ್ನು ತನ್ನ ಕಾರಿಗೆ ಹತ್ತಿಸಿಕೊಂಡು ಅಲೆಕ್ಸಾಂಡ್ರೊಸ್ ಕಾಪಾಡುತ್ತಾನೆ.

ಪೊಲೀಸರಿಂದ ಕಾಪಾಡಲ್ಪಟ್ಟ ಪುಟ್ಟ ಬಾಲಕನಿಗೆ ಸುರಕ್ಷಿತ ನೆಲೆ ಹುಡುಕುತ್ತಾ ಸಿನಿಮಾ ಮುಂದೆ ಸಾಗುತ್ತದೆ. ಅಲ್ಬೆನಿಯಾಗೆ ವಾಪಸ್ ಕಳುಹಿಸಲು ಗಡಿಯ ಬಳಿಗೆ ಇಬ್ಬರು ಬಂದು ನಿಲ್ಲಲು ಗಡಿಯ ಇಪ್ಪತ್ತೈದು ಅಡಿ ಎತ್ತರದ ಬೇಲಿಯ ಮೇಲೆ ಅಲ್ಬೆನಿಯಾದಿಂದ ಗ್ರೀಸ್‌ಗೆ ಬರಲು ಪ್ರಯತ್ನಿಸಿ ಚಳಿಯ ಮಂಜಿಗೆ ಹತ್ತಾರು ಮಕ್ಕಳು ಮರಗಟ್ಟಿ ಸತ್ತ ದೃಶ್ಯ ಎದೆ ಕಲಕುವಂತೆ ಮಾಡುತ್ತದೆ. ಮತ್ತೆ ಬಾಲಕನನ್ನು ನಿರಾಶ್ರಿತರಿರುವ ಜಾಗಕ್ಕೆ ಬಿಟ್ಟಾಗ, ಅಲ್ಲಿಂದ ಮಕ್ಕಳನ್ನು ಕದ್ದು ಶ್ರೀಮಂತ ದಂಪತಿಗಳಿಗೆ ಮಾರುವ ಗುಂಪಿನ ಕೈಗೆ ಬಾಲಕ ಸಿಕ್ಕಿಕೊಳ್ಳುತ್ತಾನೆ. ಆ ಸನ್ನಿವೇಶದಲ್ಲಿ ಹೇಗೆ ಬಡರಾಷ್ಟ್ರಗಳಲ್ಲಿ ಅಗತ್ಯಕ್ಕೂ ಮೀರಿ ಮಕ್ಕಳಿರುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಮಕ್ಕಳಿಲ್ಲದ ದಂಪತಿಗಳನ್ನು ನೋಡಬಹುದು.

PC : EUFORIA (ಎಟರ್ನಿಟಿ ಅಂಡ್ ಅ ಡೇ)

ಹೀಗೆ ಒಂದೇ ದಿನದ ಅವಧಿಯಲ್ಲಿ, ತೀರಿಹೋದ ಹೆಂಡತಿಯ ನೆನಪಿನಲ್ಲಿರುವ ಕವಿ, ನೆಲೆ ಹುಡುಕುತ್ತಿವ ನಿರಾಶ್ರಿತ ಪುಟ್ಟ ಬಾಲಕನ ನಡುವೆ ನಡೆಯುವ ’ಪದಗಳ ವ್ಯವಹಾರ’ದ ಕಥೆಯ ಜೊತೆಗೆ, ಹತ್ತೊಂಬತ್ತನೆ ಶತಮಾನದಲ್ಲಿದ್ದ ಗ್ರೀಸ್ ರಾಷ್ಟ್ರೀಯ ಕವಿ ಡಿಯೊನಿಸಿಯೊಸ್ ಸೋಲೊಮೊಸ್ ಕಥೆಯೂ ಬಂದು ಸೇರಿಕೊಳ್ಳುತ್ತದೆ. ಕವಿ ಸೋಲೋಮೊಸ್ ಗ್ರೀಸ್‌ನಲ್ಲಿ ಹುಟ್ಟಿದರೂ, ವಿದ್ಯಾಭ್ಯಾಸಕ್ಕಾಗಿ ಇಟಲಿಗೆ ಹೋಗಿ ಅಲ್ಲೇ ನೆಲಿಸಿ ಇಟಲಿ ಭಾಷೆಯಲ್ಲಿಯೇ ಕವಿತೆ ಬರೆಯುತ್ತಿರುತ್ತಾನೆ. ತಿರುಗಿ ಗ್ರೀಸ್‌ಗೆ ಮರಳಿದಾಗ ತನ್ನ ತಾಯ್ನುಡಿಯಲ್ಲಿ ಕವಿತೆ ಬರೆಯುವ ಉದ್ದೇಶದಿಂದ ಜನಗಳ ನಡುವಿನಲ್ಲಿದ್ದು, ಪ್ರತಿ ಪದಕ್ಕಿಷ್ಟು ಹಣ ಎಂಬಂತೆ ನಿಗದಿ ಮಾಡಿ, ಕೊಟ್ಟು ಗ್ರೀಸ್ ಭಾಷೆ ಕಲಿತು, ಅನೇಕ ಕವಿತೆಗಳನ್ನು ಬರೆದಿರುತ್ತಾನೆ. ಹಾಗೆ ಬರೆದ ಪದ್ಯದ ಮೊದಲ ಎರಡು ಚರಣಗಳು ಇಂದಿನ ಗ್ರೀಸ್ ದೇಶದ ರಾಷ್ಟ್ರ ಗೀತೆ.

ಅಲೆಕ್ಸಾಂಡ್ರೊಸ್ ಕೂಡ ಬಾಲಕನಿಗೆ ಹಣ ನೀಡಿ ಜನರ ರೂಢಿ ಪದಗಳನ್ನು ಕಲಿಯುತ್ತಾನೆ. ದಿನವೆಲ್ಲ ಒಂದಲ್ಲ ಒಂದು ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಕೊಂಡು, ರಾತ್ರಿಯಾಗುತ್ತಲೇ ಬಾಲಕ ’ನನಗೆ ಭಯವಾಗುತ್ತಿದೆ’ ಎಂದಾಗ, ಅಲೆಕ್ಸಾಂಡ್ರೊಸ್ ಕೂಡ ’ನನಗೂ ಭಯವಾಗುತ್ತಿದೆ’ ಎಂದು ಪರಸ್ಪರ ಅಪ್ಪಿಕೊಳ್ಳುವ ದೃಶ್ಯ ಮಾನವ ಸಂಬಂಧಗಳ ಸರಳತೆಯನ್ನು ಮತ್ತು ಅಗತ್ಯತೆಯನ್ನು ತೋರಿಸುತ್ತದೆ.

ಥಿಯೋ ಸಿನಿಮಾಟಿಕ್ ಸೂಕ್ಷ್ಮತೆಗಳಲ್ಲಿ ಮಾಸ್ಟರ್. ಪದೇ ಪದೇ ಸರಳವಾದ ಒಂದೇ ರಾಗವನ್ನು ಹಿನ್ನೆಲೆ ಸಂಗೀತವಾಗಿ ಬಳಸಿರುವ ವಿನ್ಯಾಸಕ್ಕೆ ಮೈದೂಗುತ್ತಾ, ಮತ್ತೇರಿದವರಂತೆ ಮೂಕವಿಸ್ಮಿತರಾಗಿ ಕೂರುವರಂತೆ ಮಾಡುತ್ತದೆ.

ದೃಶ್ಯವಿನ್ಯಾಸದಲ್ಲಿ ಥಿಯೋರಿಗೆ ಬೇರೆ ಯಾರು ಸಾಟಿಯಿಲ್ಲ. ಅಲೆಕ್ಸಾಂಡ್ರೊಸ್ ಮತ್ತು ಬಾಲಕ ನದಿಯ ಬದಿಯಲ್ಲಿ ನಡೆದು ಬರುವ ದೃಶ್ಯದಿಂದ ಪ್ಯಾನ್ ಮಾಡಲು ಅದೇ ನದಿಯ ಬದಿಯಲ್ಲಿ ಕವಿ ಸೋಲೊಮೊಸ್ ಬರೆಯುತ್ತಾ ನಿಂತಿರುವುದು ನೋಡಿದರೆ, ಭೂತ, ವರ್ತಮಾನ, ಭವಿಷ್ಯದ ಘಟನೆಗಳೆಲ್ಲ ನಿರಂತರವಾಗಿ ನಡೆಯುತ್ತಿವೆ ಎನ್ನುವುದು ನಿರ್ದೇಶಕನ ವಾದ ಅಥವಾ ದರ್ಶನವೆನಿಸುತ್ತದೆ.

ಅಲೆಕ್ಸಾಂಡ್ರೊಸ್ ಪದೇಪದೇ ತನ್ನ ಪ್ರೀತಿಯ ಮಡದಿಯನ್ನು ಭೇಟಿಯಾಗುವ ಕನಸಿನ ದೃಶ್ಯಗಳು ಎಷ್ಟು ಸುಂದರವಾಗಿರುತ್ತದೆಯೋ ಹಾಗೆಯೇ ನಿರಾಶ್ರಿತರ ಬದುಕಿನ ಭೀಕರ ದೃಶ್ಯಗಳು ವೀಕ್ಷಕನ ಮನಸ್ಸನ್ನು ಹಿಡಿದಿಡುತ್ತವೆ.

2. ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್ (1988)

ಕೇವಲ ತಾಯಿಯ ಮಾತುಗಳನ್ನು ಕೇಳಿ ಐದು ವರ್ಷದ ಬಾಲಕ ಹಾಗೂ ಹನ್ನೆರಡು ವರ್ಷದ ಅಕ್ಕ, ಇಬ್ಬರೂ ಸೇರಿ ತಂದೆಯನ್ನು ಹುಡುಕುತ್ತಾ ಗ್ರೀಸ್‌ನಿಂದ ಜರ್ಮನಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಭೇಟಿಯಾಗುವ ಜನಗಳು ಮತ್ತು ಬರುವ ಸನ್ನಿವೇಶಗಳೇ ಈ ಸಿನಿಮಾ.

ಅತಿ ಮುಗ್ಧವಾಗಿ ಪ್ರಯಾಣ ಆರಂಭಿಸುವ ಮಕ್ಕಳು, ಟಿಕೆಟ್ ಇಲ್ಲದೆ ಸಿಕ್ಕಿಹಾಕಿಕೊಂಡು, ಸಂಬಂಧಿಯ ಬಳಿಗೆ ಹೋದಾಗ, ಆ ಸಂಬಂಧಿ ಪೊಲೀಸರ ಬಳಿ, ಈ ಮಕ್ಕಳಿಗೆ ತಂದೆ ಇಲ್ಲವೆಂದೂ, ತಂದೆ ಇರುವುದಾಗಿ ತಾಯಿ ಸುಮ್ಮನೆ ಹೇಳಿದ್ದಾಳೆಂಬ ಮಾಹಿತಿ ತಿಳಿಯುತ್ತದೆ. ಆದರೆ ಮಕ್ಕಳು ಅವನ ಮಾತುಗಳನ್ನು ಒಪ್ಪದೆ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ.

ಪ್ರಯಾಣದ ದಾರಿಯಲ್ಲಿ ನಾಟಕ ತಂಡದ ಯುವಕನೊಬ್ಬ ಇವರಿಬ್ಬರಿಗೂ ಸ್ವಲ್ಪ ದೂರದವರೆಗೂ ಬಿಡುತ್ತಾರೆ. ಮುಂದಿನ ಪ್ರಯಾಣದಲ್ಲಿ ಮಕ್ಕಳಿಗೆ ಟ್ರಕ್ ಡ್ರೈವರ್ ಒಬ್ಬನ ಪರಿಚಯವಾಗುತ್ತದೆ. ಮೊದಲಿಗೆ ಅವನು ಇಬ್ಬರಿಗೂ ತಿನ್ನಲು ತಿಂಡಿ-ತಿನಿಸುಗಳನ್ನು ಕೊಡಿಸಿ, ತುಸು ದೂರದ ಪ್ರಯಾಣದ ನಂತರ ಹುಡುಗಿಯನ್ನು ಟಾರ್‌ಪಾಲ್ ಮುಚ್ಚಿದ ಟ್ರಕ್ಕಿನೊಳಗೆ ಎತ್ತಿಕೊಂಡು ಹೋಗಿ, ಅತ್ಯಾಚಾರವೆಸಗುತ್ತಾನೆ. ಇಲ್ಲಿ ನಿರ್ದೇಶಕ ಯಾವುದೇ ಹಿಂಸೆಯನ್ನು ವೈಭವೀಕರಿಸದೆ ರಸ್ತೆಯಲ್ಲಿ ಹಾದುಹೋಗುವ ವಾಹನಗಳ ಶಬ್ದಗಳಲ್ಲೇ ಕ್ರೌರ್ಯವನ್ನು ಮನಸ್ಸಿಗೆ ಮುಟ್ಟಿಸುತ್ತಾನೆ.

ಮೊದಮೊದಲು ಅತಿ ಮಾತನಾಡುತ್ತಿದ್ದ ಬಾಲಕ ಗಂಭೀರವಾಗುತ್ತಾನೆ. ಹುಡುಗಿಯೂ ನಾಟಕ ತಂಡದ ಯುವಕನನ್ನು ಮತ್ತೆ ಭೇಟಿಯಾದಾಗ ಅವನ ಮೇಲೆ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾಳೆ. ಆದರೆ ಅವನು ಮತ್ತೊಬ್ಬ ಬೈಕ್ ಕೊಳ್ಳಲು ಬಂದವನ ಜೊತೆ ನಿಕಟವಾಗಿರುವುದನ್ನು ನೋಡಿ, ಕೋಪದಿಂದ ಮತ್ತೆ ಇಬ್ಬರೇ ಪ್ರಯಾಣವನ್ನು ಮುಂದುವರಿಸುತ್ತಾರೆ.

PC : Cinemascope – blogger (ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್)

ಸಿನಿಮಾದ ಕೊನೆಯ ಭಾಗದಲ್ಲಿ ಹುಡುಗಿ ರೈಲ್ವೇ ನಿಲ್ದಾಣದಲ್ಲಿ ಮಿಲಿಟರಿ ಬಟ್ಟೆಗಳನ್ನು ಧರಿಸಿರುವ ವ್ಯಕ್ತಿಯನ್ನು ಹಣ ಕೇಳಿದಾಗ, ಅವನು ಲೈಂಗಿಕ ದೌರ್ಜನ್ಯದ ದೃಷ್ಟಿಯಲ್ಲೇ ಆಕೆಯನ್ನು ಕಂಡು ರೈಲುಗಳ ನಡುವೆ ಹೋಗಿ ನಿಲ್ಲುತ್ತಾನೆ. ಹುಡುಗಿಯೂ ಅವನ ಮುಂದೆ ಬಂದು ನಿಲ್ಲುತ್ತಾಳೆ. ಮುಗ್ದವಾಗಿದ್ದ ಹುಡುಗಿಯ ಮನಸ್ಸು, ಗಂಡು-ಹೆಣ್ಣಿನ ದೈಹಿಕ ವಹಿವಾಟನ್ನು ಅರಿತಂತೆ, ಆಕೆ ನಿಂತಿರುವುದನ್ನು ನೋಡಿದರೆ, ದೌರ್ಜನ್ಯದ ಕ್ರೌರ್ಯ ಪ್ರತಿಫಲಿಸುತ್ತದೆ.

ಯಾವುದೇ ಸಿನಿಮಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತೋರಿಸಿದರೆ ಸಾಕು ನಿರಾತಂಕವಾಗಿ ವೀಕ್ಷಕರ ಮನಸ್ಸನ್ನು ಕರಗಿಸಬಹುದು, ಆದರೆ ಈ ಸಿನಿಮಾದ ಶೈಲಿಯನ್ನು ಗಮನಿಸಿದರೆ, ಪಾತ್ರಗಳಿಗೂ ಮತ್ತು ಕ್ಯಾಮರಾಕ್ಕೂ ಸದಾ ಅಂತರವನ್ನು ಉಳಿಸಿಕೊಂಡು ಪ್ರೇಕ್ಷಕನ ಮನಸ್ಸನ್ನು ಮ್ಯಾನಿಪುಲೇಟ್ ಮಾಡದೆ, ಸಮಾಜದ ವಾಸ್ತವತೆ ಮತ್ತು ಮಕ್ಕಳ ಮುಗ್ಧತೆಯನ್ನು ಯಥಾವತ್ತಾಗಿ ಕಟ್ಟುವ ಪ್ರಯತ್ನವನ್ನು ಮಾತ್ರ ಮಾಡಲಾಗಿದೆ.

ಸಾಯುತ್ತಿರುವ ಕುದುರೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವ ಮಕ್ಕಳ ಹಿಂದೆಯೇ ಮದುವೆ ಸಂಭ್ರಮದ ಗುಂಪಿನ ಹಾಡು ನೃತ್ಯದ ದೃಶ್ಯ, ಅಕ್ಕನನ್ನು ಹುಡುಕುತ್ತಿರುವ ಪುಟ್ಟ ಬಾಲಕ ಮುಂದೆ ಹಾದುಹೋಗುವ ಸೈನಿಕರ ಪೆರೇಡಿನ ದೃಶ್ಯಗಳಲ್ಲಿ, ಇಡೀ ನಾಗರಿಕತೆಯ ಮತ್ತು ಅದರ ಸುತ್ತಲಿನ ವೈಭವ ಹಾಗೂ ಸಂಭ್ರಮಗಳ ಟೊಳ್ಳುತನನ್ನು ಮಾರ್ಮಿಕವಾಗಿ ಕಾಣಬಹುದು.

ಪುಟ್ಟ ಬಾಲಕ ’ಗಡಿ ರೇಖೆ ಎಂದರೇನು’ ಎಂದು ಪ್ರಶ್ನಿಸಿದಾಗ, ದೇಶಗಳ ಕಲ್ಪನೆಯ ಸಂಕೀರ್ಣತೆಯನ್ನು ಮಕ್ಕಳು ಅರ್ಥಮಾಡಿಕೊಳ್ಳಲಾಗದೆ, ಬೇರೊಂದು ದೇಶಕ್ಕೆ ಹೋಗಲು ಕಾಗದಪತ್ರಗಳಿಲ್ಲದೆ, ಸೈನಿಕರ ಕಣ್ತಪ್ಪಿಸಿ ಗಡಿ ದಾಟಿ ರಾತ್ರಿಯನ್ನು ಭಯದಲ್ಲೇ ಕಳೆದು ಬೆಳಕಿನಲ್ಲಿ ಮರವನ್ನು ಅಪ್ಪಿಕೊಂಡು ನಿಟ್ಟುಸಿರು ಬಿಡುವುದೇ ಅಂತ್ಯ.

ಥಿಯೋಡೊರಸ್ ಅಂಜೊಲಾಪೊಲಸ್

ಜಾಗತಿಕ ಸಿನಿಮಾದಲ್ಲಿ ಅತಿ ಮುಖ್ಯವಾದ ನಿರ್ದೇಶಕ ಥಿಯೋಡೊರಸ್ ಅಂಜೊಲಾಪೊಲಸ್. ಆತನ ಸಿನಿಮಾಗಳಲ್ಲಿ ಒಳಗೊಳ್ಳುವ ವಿಶಾಲವಾದ ಫ್ರೇಮ್, ಆಕಾಶ, ಮಂಜು ಮುಸುಕಿದ ಬೆಟ್ಟಗಳು, ಎತ್ತರವಾದ ಮರಗಳು, ಹಚ್ಚಹಸುರಿನ ಹುಲ್ಲಿನ ನಡುವೆ ನಡೆದುಬರುತ್ತಿರುವ ಪಾತ್ರಗಳು ಇವುಗಳನ್ನೆಲ್ಲಾ ಸಾವಿರ ಪದಗಳ ವಿವರಣೆಯಲ್ಲಿ ಒಳಗೊಳ್ಳಲು ಅಸಾಧ್ಯ.

ವಾಣಿಜ್ಯ ಮತ್ತು ಮನರಂಜನಾ ಉದ್ದೇಶಗಳಿಗಾಗಿಯೇ ನಿರ್ದೇಶಿಸುವ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಅತಿವೇಗದ ಎಡಿಟಿಂಗ್‌ಗೆ ಹೊಂದಿಕೊಂಡಿರುತ್ತಾರೆ. ಅದೇ ದೃಷ್ಟಿಕೋನದಲ್ಲಿ ಥಿಯೋರ ಸಿನಿಮಾ ನೋಡಲು ಮೊದಲಿಗೆ ಕಸಿವಿಸಿಯಾಗಿ, ನಿಧಾನವೆನಿಸುವುದು ಅತಿ ಸಹಜ.

ಥಿಯೋರ ಫ್ರೇಮ್ ಸಂಯೋಜನೆ ಚಿತ್ರಕಲೆಯಂತೆ. ಪ್ರೇಕ್ಷಕನ ಕಣ್ಣುಗಳನ್ನು ಒಂದು ಕಡೆಗೆ ನಿರ್ಬಂಧಿಸದೆ, ಫ್ರೇಮ್‌ನ ಎಲ್ಲ ಭಾಗಗಳನ್ನು ತನ್ನಿಚ್ಛೆಯಂತೆ ನೋಡುವ ಅವಕಾಶ ಮಾಡಿಕೊಡುತ್ತಾ, ವೇಗದ ಕೃತಕತೆಯಿಲ್ಲದೆ ಧ್ಯಾನಸ್ಥ ಸ್ಥಿತಿಯಲ್ಲಿ ಚಲಿಸುವ ಕ್ಯಾಮರಾ, ಸುದೀರ್ಘವಾದ ಶಾಟ್ಸ್, ಮಿತವಾದ ಸಂಭಾಷಣೆ, ಯಾವುದೇ ರೀತಿಯ ಉದ್ವೇಗಗಳಿಲ್ಲದ ನಟನೆ ನೋಡಸಿಗುವುದೇ ಅತಿ ಅಪರೂಪ. ಇವುಗಳೇ ಥಿಯೋರ ಸಿನಿಮಾಗಳ ಗಟ್ಟಿತನ.

ಥಿಯೋರ ಪೋಟೋಗ್ರಫಿಯಂತೂ ಅತಿ ಸಾಹಸಮಯವಾದದ್ದು. ಲ್ಯಾಂಡ್‌ಸ್ಕೇಪ್ ಪೋಟೋಗ್ರಫಿಯನ್ನು ನೋಡಿ ಮೈಮರೆಯಬೇಕಷ್ಟೇ ಮತ್ತು ಯಾವುದೇ ಕಾರಣಕ್ಕೂ ಕ್ಯಾಮರಾ ನಟರ ಕ್ಲೋಸ್‌ಅಪ್‌ಗೆ ಹೋಗುವುದೇ ಇಲ್ಲ. ಕ್ಲೋಸ್‌ಅಪ್‌ಅನ್ನು ಬಳಸದೆ ಸದಾ ಒಂದು ಅಂತರದಿಂದಲೇ ಸೆರೆ ಹಿಡಿಯುವುದು ಮತ್ತು ಎಡಿಟಿಂಗ್ ಕ್ಯಾಮರಾ ಚಿತ್ರೀಕರಣದ ಜೊತೆಗೇ ಆಗಿರುವುದು ಥಿಯೋರ ಕೌಶಲ್ಯ. ಹೀಗೆ ದೃಶ್ಯವನ್ನು ಪದೇಪದೇ ತುಂಡಾಗಿಸದೇ, ಒಂದೇ ಉಸಿರಿನಲ್ಲೇ ದೃಶ್ಯವನ್ನು ನೋಡುವಾಗ ವೀಕ್ಷಕ ಸಮಯದ ಪರಿಯನ್ನು ಕಳೆದುಕೊಳ್ಳುವುದು ವಿಸ್ಮಯ.

PC : Mubi (ಥಿಯೋಡೊರಸ್ ಅಂಜೊಲಾಪೊಲಸ್)

ಸ್ಲೋ ಸಿನಿಮಾ ಮೂವ್‌ಮೆಂಟ್‌ನಲ್ಲಿ ರಷ್ಯಾದ ಅಂಡ್ರೊವ್ ಟಾರ್ಕೊವ್‌ಸ್ಕಿ, ಇಟಲಿಯ ಮೈಕಲಾಂಜಿಲೋ ಅಂಟೋನಿಯೋನಿರ ಜೊತೆ ಥಿಯೋ ಅಂಜೊಲಪೊಲಾಸ್ ಕೂಡ ಅತಿ ಪ್ರಮುಖರು.

ಥಿಯೋರ ಕಥಾವಸ್ತುಗಳೆಂದರೆ ಗ್ರೀಸ್‌ನ ಇತಿಹಾಸ, ದೇಶಗಳ ನಡುವಿನ ಗಡಿಗಳು, ಬದುಕನ್ನು ಅರಸಿ ಅವುಗಳನ್ನು ದಾಟಿದ ನಿರಾಶ್ರಿತರು, ಎಲ್ಲೋ ಹೋಗುವ ಧಾವಂತದ ಪ್ರಯಾಣ, ಕನಸ್ಸುಗಳು, ನಿಶಬ್ದ.

ದಿ ಸಸ್ಪೆಂಡೆಡ್ ಸ್ಟೆಪ್ಸ್ ಆಫ್ ದಿ ಸ್ಟೊರ್ಟ್(1991) ಸಿನಿಮಾದಲ್ಲಿ ಗಡಿ ರೇಖೆಯಲ್ಲಿ ನಿಂತು ಒಂದು ಕಾಲನ್ನು ಗಾಳಿಯಲ್ಲಿಟ್ಟು, “ಇನ್ನೊಂದು ಹೆಜ್ಜೆ ಇಟ್ಟರೆ, ನಾನು ಮತ್ತೆಲ್ಲೋ ಇರುತ್ತೇನೆ, ಇಲ್ಲ ಸಾಯಬಹುದು”, ಎನ್ನುವ ಸಂಭಾಷಣೆ ಥಿಯೋರ ಮನಸ್ಸನ್ನು ಹಿಡಿದಿಡುತ್ತದೆ.

ಥಿಯೋರ ಸೃಷ್ಟಿಯಲ್ಲಿ ಭೂತಕಾಲ, ಕನಸಿನ ಲೋಕ, ವಾಸ್ತವಗಳೆಂದು ಯಾವುದೇ ವಿಭಜನೆಗಳಿರುವುದಿಲ್ಲ. ಯುಲಿಸಿಸ್ ಗೇಸ್ (1995) ಸಿನಿಮಾದಲ್ಲಿ ನಲವತ್ತು ವಯಸ್ಸಿನ ಪಾತ್ರ ರೈಲ್ವೇ ಸ್ಟೇಷನ್ ಇಳಿದಕೂಡಲೇ ಮೂವತ್ತರ ಆಸುಪಾಸಿನ ಹೆಣ್ಣಿನ ಕೈಹಿಡಿದು ತಾಯಿಯಂತೆ ಮಾತಾಡಿಸುವುದು, ಅವಳು ಮಗನಂತೆ ನಡೆಸಿಕೊಂಡು ಮನೆಗೆ ಹೋದಾಗ, ಭೂತಕಾಲದಲ್ಲಿದ್ದ ಎಲ್ಲರೂ ಇವನನ್ನು ನೋಡಿ ಮಾತಾಡಿಸುವುದೇ ಮ್ಯಾಜಿಕಲ್ ಅನಿಸುತ್ತದೆ.

ಥಿಯೋ ಕವಿಯಾಗ ಬೇಕೆಂದುಕೊಂಡವರು. ಅವರು ಕ್ಯಾಮರಾದಿಂದ ಕಟ್ಟಿದ ಕವಿತೆಗಳೇ ಸಿನಿಮಾಗಳು. ಅವರ ಸಿನಿಮಾಗಳನ್ನು ಒಮ್ಮೆ ನೋಡಿ ಅರ್ಥವಾಗಲಿಲ್ಲವೆನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಹೇಗೆ ಕವಿತೆಯನ್ನು ಪದೇಪದೇ ಓದಿದಾಗ ಹೊಸ ಅನುಭವಗಳು, ಅರ್ಥಗಳು ಹುಟ್ಟುತ್ತವೆಯೋ, ಹಾಗೆಯೇ ಇವರ ಸಿನಿಮಾಗಳು ಕೂಡ.

ಕಲೆ ಅರ್ಥಕ್ಕೆ ದೂರ, ಅನುಭವಕ್ಕೆ ಹತ್ತಿರದ ಮಧ್ಯಮ. ಅರ್ಥಮಾಡಿಕೊಳ್ಳುವುದನ್ನು ಬಿಟ್ಟು ಕೇವಲ ಅನುಭವಿಸದಾಗ ಮಾತ್ರ ಕಲೆಯ ಸಾರ್ಥಕತೆಯಾಗುತ್ತದೆ, ಅರ್ಥವಾಗದೇ ಅನುಭವಿಸುವುದೇ ಹೇಗೆಂಬ ಪ್ರಶ್ನೆ ಕೂಡ ಇದ್ದೇ ಇದೆ. ಹೌದು, ಬದುಕಿನ ಎಷ್ಟೋ ವಿಷಯಗಳು ಅರ್ಥವಾಗದೇ ಹೋದರೂ ಅನುಭವಕ್ಕೆ ಬರುತ್ತದೆ.

ಥಿಯೋರ ಸಿನಿಮಾಗಳನ್ನು ಕಥೆಗಳಂತೆ ನೋಡದೆ, ಕವಿತೆಗಳಂತೆ ಪದೇ ಪದೇ ನೋಡಿದಾಗ ಅನುಭವದ ಪರಿಧಿಯು ವಿಶಾಲವಾಗುತ್ತಾ, ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮಾನವೀಯತೆ, ಅನುಭೂತಿ ತುಂಬುವುದು ನಿಶ್ಚಿತ.


ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...