Homeಅಂಕಣಗಳುಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

ಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

- Advertisement -
 ಯಾಹೂ |
ನೇರ ನಡೆ ನುಡಿಗೆ ಹೆಸರಾಗಿದ್ದ ಜಿ. ಮಾದೇಗೌಡರು, ಜೆಡಿಎಸ್ ಕಡೆಯಿಂದ ಹಣ ಬರುತ್ತದೆಂದು ಮಂಡ್ಯದ ಗಾಂಧಿಭವನದ ಎದುರು ಕುಳಿತು ಕಾದು ಸಾಕಾಗಿ, ಕಡೆಗೆ ಪುಟ್ಟರಾಜನಿಗೆ ಫೋನು ಮಾಡಿ ‘ಎಲ್ಲೊದುಡ್ಡು’ ಎಂದರಂತಲ್ಲಾ, ಪುಟ್ಟರಾಜನಿಗೆ ಮಾದೇಗೌಡರಿಂದ ಸಾಲ ಪಡೆದು ಬಡ್ಡಿಯನ್ನು ಕೊಡದೆ ಕುಂತವನ ದನಿಯಲ್ಲಿ, “ಅಪ್ಪಾಜಿಆರೇಂಜ್ ಮಾಡ್ತಿನಿ” ಎಂದುಗೋಗರೆದಂತರಲ್ಲಾ.ಮಾದೇಗೌಡರು, ಮಂಡ್ಯದ ಸೊಗಡಿಗೆ ಹೆಸರಾದವರು, ಗಾಂಧಿಮಾರ್ಗಿ ಬೇರೆ, ಅದಕ್ಕಾಗಿ ಗಾಂಧಿ ಭವನ ನಿರ್ಮಿಸಿ ಇಳಿ ಹೊತ್ತಿನಲ್ಲಿ ಅದರ ಮುಂದೆ ಕುಳಿತು ಈ ನಾಡಿನ ಬಗ್ಗೆ ಚಿಂತಿಸದವರು. ಆದರೆ ಸ್ವಂತದ ಬಗ್ಗೆ ತುಂಬಾ ಯೋಚಿಸಿ ದವರು. ಈ ಹಿಂದೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ದೂರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಅವರಿಗೆ ಒಗ್ಗಲಿಲ್ಲ. ಮತ್ತೆ ಕಾಂಗ್ರೆಸ್‍ಗೆ ಮರಳಿ ಮಗನ ಕೈಲಿ ಹಣ ಕಳಿದು. ಇಲ್ಲ ಯಾರು ಕೊಡ್ತಾರೊ ಅವುರೆಸರೇಳು ನಾವೇ ವಸೂಲು ಮಾಡ್ತಿವಿ” ಎಂದಿರೋದು .ವಯಸ್ಸಾದಂತೆ ತಲೆಯೊಳಗಿನ ಸಿದ್ಧಾಂತಗಳು ಸಾಯುತ್ತ, ಕುಟುಂಬದ ವ್ಯಾಮೋಹ ಅಮರಿಕೊಳ್ಳುವುದು, ಈ ಮಾದೇಗೌಡನನ್ನ ಬಿಡಲಿಲ್ಲವಲ್ಲಾ. ಅದೇನಾದರಾಗಲಿ. ಕಡೇಗಳಿಗೆಯಲ್ಲಿ ಚಿಲ್ಲರೆ ಕಾಸಿಗೆ ಪುಟ್ಟರಾಜನನ್ನ ಕೇಳಿ ಮಾದೇಗೌಡನ ಮಾನ ಮೂರು ಕಾಸಿಗೆ ಹರಾಜಾಯ್ತಲ್ಲಾ ಥೂತ್ತೆರಿ.
ಮಂಡ್ಯ ಚುನಾವಣೆಯ ರಂಗು ತಾರಕಕ್ಕೇರಿರುವುದರ ದ್ಯೋತಕವಾಗಿ, ಎನ್.ಡಿ.ಟಿ.ವಿ.ಯ ಮಾಯಾ ಶರ್ಮಾ ಸುಮಲತಾರ ಹಿಂದೆತಿರುಗುತ್ತಿರುವುದು ಗೊತ್ತಾಗಿ, ಮಾಯಾಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಎನ್.ಡಿ ಟಿವಿ ಮಾಯಾ ಇವರಿಗಿಂತಲೂ ನಮ್ಮ ವಾಟಿಸ್ಸೆ ಸರಿಯಾಗಿ ಸುದ್ದಿ ನೀಡಲು ಸೂಕ್ತ ವ್ಯಕ್ತಿಯೆಂದು ಫೋನ್ ಮಾಡಲಾಗಿರಿಂಗಾಯ್ತು, ರಿಂಗ್‍ಟೂನ್ “ಬಲೆ ಚಾನ್ಸಿದೆ, ಲಕ್ಕಿ ಚಾನ್ಸಿದೆ, ಬಲೆ ಚಾನ್ಸಿದು’ ‘ಗುಡ್‍ಯುವುನಿಂಗ್ ಸಾರ್’
“ಎಲ್ಲಿದ್ದಿ ವಾಟಿಸ್ಸೆ”
“ಬಿಂಡಿಗನವಿಲೆ ಹೆಸರು ಕೇಳಿದ್ದಿರ ಸಾರ್.”
“ಗೊತ್ತು ಗರುಡಾಚಾರ್ರೂರು”
“ಅಷ್ಟೆ ಅಲ್ಲ ಸಾರ್. ಅಣು ವಿಜ್ಞಾನಿ, ರಾಜಾರಾಮಣ್ಣನ ಊರು. ಸಿನಿಮಾ ಡೈರೆಕ್ಟರು, ಬಿ.ಎಸ್.ರಂಗನ್‍ಊರಿದು”
“ಹೌದಾ”
“ಇಂತ ಪ್ರತಿಭಾವಂತ್ರೆ ಒಂದು ಡಜನ್ ಇರೊ ಊರಿದು”
“ಅಷ್ಟೊಂದು ಪ್ರತಿಭಾವಂತ್ರಿದ್ದರ”
“ನಾವಲ್ಲ ಸಾ ಅವುರ್ಯಲ್ಲ ಅಯ್ಯಂಗಾರ್ರು”
“ಸರಿ ಬುಡು”
“ಈ ಊರಿಗೆ ನಿಖಿಲ್ ಬತ್ತನೆಅಂತ ಭಾರಿಜನ ಸೇರ್ಯವುರೆ”
“ಅಷ್ಟೊಂದು ಜನ ಬಂದವುರಾ”
“ಪರೆಡ್‍ಗೆ ತವುಜೆಂಡಿಂದ ತ್ರೀ ಅಂಡ್ರೆಡ್‍ವರಿಗೂ ಬಟಾವಡೆ ಆಗ್ಯದೆ ಸಾ”
“ಇನ್ನ ಓಟಿಗೆಷ್ಟು ಕೊಡ್ತಾರಪ್ಪ”
“ಅದ ಹೇಳಕ್ಕೆ ಬರದಿಲ್ಲ ಸಾರ್. ಪ್ರತಿಎಮ್ಮೆಲ್ಲೆಗೂ 25 ಕೋಟಿ ಟಾರ್ಗೆಟ್ ಕೊಟ್ಟವುನಂತೆ ಕುಮಾರಣ್ಣ”
“ಅಂದ್ರೆ ಅವುರು ಕೈಯಿಂದ ಖರ್ಚು ಮಾಡಬೇಕಾ”
“ಪುಟ್ಟರಾಜ ತಮ್ಮಣ್ಣ ನಾವೇ ಹಾಯ್ಕಂಡು ಖರ್ಚು ಮಾಡ್ತಿವಿ ಅಂದಿದ್ದರಂತೆ”
“ಅನ್ನಲೇಬೇಕು ಬುಡು. ಇದೇ ತಮ್ಮಣ್ಣನ ಆಸ್ತಿ ವಿಷಯದಲ್ಲಿ ಮಾದೇಗೌಡ್ರು ಹಿಂದೆನೆ ಹೋರಾಡಿದ್ರು”
“ಮಾದೇಗೌಡ ಬುಡಿ ಸಾ. ಅವುನು ಮಾತಾಡಿದ್ರೆ ಅಂಬರೀಶು “ಲೇ ಮುದುಕ ಸುಮ್ಮನಿರು ಇಲ್ಲ ಅಂದ್ರೆ ನಿನ್ನ  ಕತ್ತಿಸಗತಿನಿ ಅಂತಿದ್ನಂತೆ”
“ತಮಾಸಿಗೆ ಅಂಗಂತಿದ್ರು”
“ತಮಾಸಿನೆ ಆದ್ರು ಈ ಮುದುಕ ಹಾಳಾದನಲ್ಲ ಸಾ”
“ಏನು ಹಾಳಾಗಿಲ್ಲ. ಚುನಾವಣೆ ಕರ್ಚಿಗೆ ದುಡ್ಡು ಕೇಳ್ಯವುರೆ ಅಷ್ಟೆ”
“ಮಾದೇಗೌಡ ಪುಟ್ಟರಾಜನ್ನ ಕೇಳಿದಕ್ಕಿಂತ, ಕುಮಾರಣ್ಣನ್ನ ಕೇಳಬೇಕಾಗಿತ್ತು ಸಾ”
“ಕುಮಾರಣ್ಣ ಯಮ್ಮೆಲ್ಲೆಗಳಿಗೆ ವಯಿಸಿಬುಟ್ಟವುನೆ”
“ಮಗನ್ನ ಗೆಲ್ಲಿಸಿಕೊಂಡು ಬರೊ ಜವಾಬ್ದಾರಿಯ ಎಮ್ಮೆಲ್ಲೆಗಳೇ ವಯಿಸಿಕೊಂಡವಂತಲ್ಲ ಸಾ. ಪಾಪ ಆ ಹುಡುಗನಿಗೆ ಬಾಸಣ ಬರವಿಲ್ಲ”
“ವ ಪರವಾಗಿಲ್ಲ ಮಾತಾಡ್ತನೆ”
“ಏನು ಮಾತಾಡ್ತನೆ ಸಾ. ನಾನು ಕುಮಾರಸ್ವಾಮಿ ಹೊಟ್ಟೆಲುಟ್ಟಕ್ಕೆ ಪುಣ್ಯ ಮಾಡಿದ್ದೆಅಂತದೆ.ನಮ್ಮಪ್ಪ ಮಂಡ್ಯಕೆಎಂಟು ಸಾವುರ ಕೋಟಿ ಕೊಟ್ಟವುನೆ ಅಂತದೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೆ ಯಾರಾದ್ರು ಮೈ ಮುಟ್ಟಿದ್ರೆ ಹುಶಾರು ಅಂದರೆ. ಎಲ್ಲಿತ್ತು ಈ ಕರ್ಮ”
“ಇನ್ನು ಮುಂದೈತೆ ನಿಮಗ್ಯಲ್ಲ”
“ಯಾಕೊ ಅಂಗೆ ಕಾಣ್ತದೆ ಸಾ. ಈ ದ್ಯಾವೇಗೌಡ ಮಕ್ಕಳು ಮರಿನ್ಯಲ್ಲ ರಾಜಕಾರಣಕ್ಕೆ ತರದೇ ಆಗಿದ್ರೆ, ಅವುಕೆ ಒಳ್ಳೆ ಮಾತು, ನಡವಳಿಕೆ, ವಿದ್ಯೆ, ಬುದ್ಧಿ, ಕಲಿಸಿ ಕಳಿಸಬೇಕಾಗಿತ್ತು ಸಾ”
“ದ್ಯಾವೇಗೌಡ್ರೆ ಅಂಗಿದ್ದ ಮೇಲೆ ಅವುಕೆಲ್ಲಿ ಕಲಿಸ್ಯಾರು”
“ಅದು ಸರಿನೆ ಬುಡಿ, ಗೌಡ್ರು ಪಾರ್ಟಿ ಸಿದ್ಧಾಂತಕ್ಕೆ ಒಗ್ಗಿಕಳೊ ಬದ್ಲು ಪಾರ್ಟಿನೆತನಿಗೆ ಬೇಕಾದಂತೆ ಬಗ್ಗಿಸಿಗಂಡ್ರು”
“ಪರವಾಗಿಲ್ಲ ಗೌಡ್ರು ಬಗ್ಗೆ ತಿಳಿಕಂಡಿದ್ದಿ”
“ಯಾವುದಾದ್ರು ಯೂನಿವರ್ಸಿಟಿ ಪರಮಿಷನ್ ಕೊಟ್ರೆ ಡಾಕ್ಟರೇಟ್ ಮಾಡನ ಅಂತ ಇದ್ದಿನಿ ಸಾ”
“ಹಂಪೆ ಯೂನಿವರ್ಸಿಟಿಲಿ ನೊಂದಾಯಿಸಿ ಮಾಡು”
“ಹಂಪೆ ಅಂದೇಟಿಗೆ ಗೆಪ್ತಿಗೆ ಬತ್ತು ಸಾ. ಅಲ್ಲೊಬ್ಬಳು ಮಲ್ಲಿಕಾಗಂಟಿ ಅಂತ ಇದ್ಲು ಈಗ್ಲು ಇದ್ದಳಾ”
“ಇಲ್ಲ ಹೋದ್ಲು. ವಿಶಭಟ್ಟಗೊತ್ತ ನಿಂಗೆ”
“ಗೊತ್ತು ಸಾ. ಇಲ್ಲೆ ನಮ್ಮ ನಾಗ್ತಳ್ಳಿ ಚಂದ್ರನ ಬಗ್ಗೆ ಮಾತಾಡಕ್ಕೆರ ಬಂದಿದ್ದ. ಹುಟ್ಟ ಕಳ್ಳಿದ್ದಂಗಿದ್ದ”
“ಅವುನ್ನ ಈ ನಿಮ್ಮಗಂಟೆ ಸಮಾರಂಭಕ್ಕೆ ಕರೆದಿದ್ಲು”
“ಕರಿಬಾರ್ದ”
“ಕಳ್ಳನಂಗಿದ್ದ ಅಂತಿ ಕರಿಬಾರ್ದ ಅಂತಿ ಯಲ್ಲಯಾ. ಆ ಹುಟ್ಟು ಸುಳ್ಳಪ್ಪ ಕ್ಯಟ್ಟಚೆಡ್ಡಿ”
“ಚೆಡ್ಡಿಲಿ ವಳ್ಳೆ ಚೆಡ್ಡಿನೂ ಇದ್ದವಾ”
“ಅವೆ ಆದ್ರೆ ಇವುನು ಮಾತ್ರ ವಿಶಪಾತಕ .ಇಂಥೊನ್ನ ಆ ಗಂಟಿ ಸಮಾರಂಬಕ್ಕೆ ಕರಿಸಿಗಂಡು ಸರಿಯಾಗಿ ಉಗಿಸಿಗಂಡ್ಳು”
“ನಾವು ಯಾರ ಪರನೂ ಮಾತಾಡಂಗಿಲ್ಲ ಸಾ. ಯಾರು ಯಾವಟೈಮಲ್ಲಿ ಬದ್ಲಾಯ್ತಾರೊ ಏನೊ”
“ಬದಲಾವಣೆ ಕಾಲದ ನಿಯಮ”
“ಅದು ಮನುಸುನ ಮನಸಿಗೂ ಅನ್ವಯಿಸ್ತದಾ”
“ಊ ಮತ್ತೆ ಕರ್ನಾಟಕದಲ್ಲಿ ಈಗ ಯಂತ ಬದಲಾವಣೆ ಆಗ್ಯದೆಗೊತ್ತ”
“ಗೊತ್ತು ಸಾ. ಈ ಡಿಕೆಶಿ, ಕುಮಾರಸ್ವಾಮಿ ಹೊಡದಾಡಿಕಂಡೆ ಸತ್ತೊಯ್ತರೆ ಅನಕಂಡಿದ್ದೆ. ಈಗ ನೋಡಿದ್ರೆ ದ್ಯಾವೇಗೌಡನ ಹಣೆಗೆ ಅಕ್ಷತೆ ಆಗ್ಯವುರೆ”
“ಅಕ್ಷತೆನೆ”
“ಊ ಸಾ. ಡಿಕೆಶಿ ಹರಸಣ ಅಕ್ಕಿ ಸೇರಿದ್ರೆ ಅಕ್ಷತೆ ಅಂದ. ಅದ ಯಾರಿಗಿಡಬೇಕು ದ್ಯಾವೇಗೌಡನಿಗೆ ತಾನೆ”
“ನಿಜಕಣಯ್ಯ”
“ಇನ್ನ ಅಹಿಂದ ಸಭೆಲಿ ಈ ಸಿದ್ದರಾಮಯ್ಯ ದ್ಯಾವೇಗೌಡರನ್ನ ಬೋದಿದ್ದ ನೋಡಿದ್ರೆ, ಇನ್ನ ಮುಗಿತು. ಈ ಜಲುಮದಲ್ಲಿ ಇವುರು ಹಿಂಗೇ ಸತ್ತೋಯ್ತರೆ ಅನ್ನಕಂಡಿದ್ದೆ. ತೀರ ಇತ್ತೀಚಿಗೆ, ಈ ಸಿದ್ದರಾಮಯ್ಯನಂತ ನೀಚ ಮುಕ್ಯಮಂತ್ರಿನ ನೋಡೇ ಇಲ್ಲ ಅಂದ ದ್ಯಾವೇಗೌಡ, ಈಗ ನೋಡಿದ್ರೆ ಜಾತ್ರೆಗೆ ರೆಡಿಯಾಗಿರೋ ಜೋಡೆತ್ತಿನಂಗೆ ಜ್ವತೆಲೆ ನಿಂತವುರೆ ಇದಕೇನೇಳ್ತಿರಿ”
“ಒಳ್ಳೆ ಬದಲಾವಣೆ”
“ಯಾಕೆ ಸಾರ್’
“ಮೋದಿ ಟೀಮಂಗೆ ಯಲ್ಲ ಒಂದಾಗಬೇಕಾಗಿದೆ”
“ಅದೇನೂ ನಿಜಸಾ. ಈ ಹಾಳು ಚೆಡ್ಡಿಗಳು ಈಗ ಏನೇಳ್ತ ಅವುರೆಗೊತ್ತೆ, ಮೋದಿ ಏನಾರ ಸೋತ್ರೆ ಆ ಪಾಕೀಸ್ತಾನದೋರು ನಮ್ಮ ಮ್ಯಾಲೆ ಬಿದ್ದು ಇಚಿಡಿ ಯಾದೇಸನೆಗೆದ್ದ ಕತ್ತರಂತೆ”
“ವಳ್ಳೆದಾಯ್ತಲ್ಲಯ್ಯ”
“ಇದೇನ್ ಸಾ ಹಿಂಗೇಳ್ತಿರಿ”
“ಪಾಕಿಸ್ತಾನ ದೂರು ಇಂಡಿಯಾಗೆದ್ದು ಕೂಡ್ಳೆ ಅದೂ ಇಂಡಿಯಾ ಆಯ್ತದಲ್ಲಯ್ಯ”
“ಅಂಗಾದ್ರೆ ಗೆದ್ಕಳ್ಳಿ ಬುಡಿ ಸಾ”
“ಥೂತ್ತೆರಿ”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...