Homeಮುಖಪುಟಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ...

ಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ ಸೇತುವೆ

- Advertisement -
- Advertisement -

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಮತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ-ಮರಾಠಿ ಸಾಹಿತ್ಯದ ನಡುವೆ ಪ್ರಮುಖ ಕೊಂಡಿಗಳಲ್ಲಿ ಒಬ್ಬರು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೇಂದ್ರೆಯವರಿಗೆ ಪುನೇರಿ ಎನ್ನಬೇಕೋ? ಕಾನಡಿ ಎನ್ನಬೇಕೋ? ಯಾಕೆಂದರೆ ಕನ್ನಡದ ವರಕವಿ ಅವರು. ಈ ಹಿನ್ನೆಲೆಯಲ್ಲಿ, ಇವತ್ತಿನ ಕನ್ನಡ-ಮರಾಠಿ ಅಥವಾ ಕರ್ನಾಟಕ-ಮಹಾರಾಷ್ಟ್ರ ಅಥವಾ ಬೆಳಗಾವಿ ಗಡಿ ವಿವಾದವನ್ನು ಯಾವ ರೀತಿ ಗ್ರಹಿಸಬೇಕು ಅನ್ನುವ ಪ್ರಶ್ನೆ ಎದ್ದೇಳುತ್ತದೆ. ಭಾಷೆ ಹಾಗೂ ಮನಸ್ಸಿಗೆ ಯಾವುದೇ ಗಡಿ ಇಲ್ಲವೆಂಬುವುದಕ್ಕೆ ಬೇಂದ್ರ್ರೆಯವರಿಗಿಂತ ಉತ್ತಮ ಉದಾಹರಣೆ ಬೇಕೇ? ಪೂನಾದ ಕಾಮರ್ಸ ಕಾಲೇಜಿನಲ್ಲಿ 1942-1943ರ ನಡುವೆ ಮತ್ತು 1994ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಮಾಡಿದರು. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಹೀಗೆ ಕನ್ನಡ-ಮರಾಠಿ ದ್ವಿಭಾಷಾ ಪರಿಸರದಲ್ಲಿ ಬೆಳೆದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೇಲೆ ದ್ವಿಸಂಸ್ಕೃತಿಗಳ ಪ್ರಭಾವ ವಿಫುಲವಾಗಿದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ.

1929ರಲ್ಲಿ ಬೆಳಗಾವಿಯಲ್ಲಿ ಮಾಸ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಹಕ್ಕಿ ಹಾರುತಿದೆ ನೋಡಿದಿರಾ’ ಕವನವನ್ನು ವಾಚಿಸಿದಾಗ, ಸಭಿಕರೆಲ್ಲಾ ಮಂತ್ರಮುಗ್ಧರಾಗಿದ್ದು ಈಗ ದಂತಕಥೆ. ಆಗ ಬೇಂದ್ರೆಯವರಿಗೆ ಕೇವಲ ಮೂವತ್ಮೂರು ವರ್ಷ.

1930ರಲ್ಲಿ ಮೊದಲ ಬಾರಿಗೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ’ನರಬಲಿ’ ಕವನ ಪ್ರಕಟವಾಯಿತು. ತದನಂತರದಲ್ಲಿ 1932ರಲ್ಲಿ ಪ್ರಕಟವಾದ ’ಗರಿ’ ಕವನ ಸಂಕಲನದಲ್ಲಿ ’ನರಬಲಿ’ ಕವನ ಮರುಪ್ರಕಟವಾಯಿತು. ’ನರಬಲಿ’ ಕವನ ಪುಸ್ತಕ ರೂಪದಲ್ಲಿ ಬಂದಂತಹ ಸಂದರ್ಭದಲ್ಲಿ, ಅಂದಿನ ಸರಕಾರ ಬೇಂದ್ರೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ, (ಬಂಗಾಳದಲ್ಲಿ ನಡೆದ ಮಾರಣಹೋಮವನ್ನು ಕುರಿತು ಬರೆದದ್ದು ’ನರಬಲಿ’ ಕವಿತೆ) ಅಂದಿನ ಸರಕಾರ ಅವರನ್ನು 3 ತಿಂಗಳ ಕಾಲ ಬೆಳಗಾವಿಯ ಹಿಂಡಲಗಿ ಸೆರೆಮನೆಗೆ ಕಳುಹಿಸಿತ್ತು ಹಾಗೂ ಬಿಡುಗಡೆಯ ನಂತರವೂ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದೆನ್ನುವ ಆದೇಶ ಹೊರಡಿಸಿತ್ತು. 1932ರ ಈ ಐತಿಹಾಸಿಕ ಘಟನೆಯ ಕುರಿತು ಹೆಳವನಿದ್ದಲ್ಲಿ ಹೊಳೆ ಬಂದಿತು (ಸಖೀಗೀತ) ಎಂದು ನೆನಪಿಸಿಕೊಂಡಿದ್ದಾರೆ.

ಬೇಂದ್ರೆಯವರ ಕೃತಿಗಳು ಕನ್ನಡದಲ್ಲಿ ನಾಟಕಗಳನ್ನು, ವಿಮರ್ಶಾ ಗ್ರಂಥಗಳನ್ನು, ಕವನ ಸಂಕಲನಗಳನ್ನು ಒಳಗೊಂಡಿವೆ; ಕೆ. ವಿ. ಅಯ್ಯರ್ ಅವರ ’ಶಾಂತಲಾ’ ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಗೀತಾ ಜಾಗರಣ(ವ್ಯಾಖ್ಯಾನ), ವಿಠ್ಠಲ ಪಾಂಡುರಂಗ (ಕವನ ಸಂಕಲನ), ವಿಠ್ಠಲ ಸಂಪ್ರದಾಯ (ವ್ಯಾಖ್ಯಾನ), ಸಂತ ಮಹತಾಂಚಾ ಪೂರ್ಣ ಶಂಭು ವಿಠ್ಠಲ (ವ್ಯಾಖ್ಯಾನ), ಸಂವಾದ ಕವಿತಾ ಸಂಗ್ರಹಗಳು ಮರಾಠಿಯಲ್ಲಿರುವ ಬೇಂದ್ರೆ ಅವರ ಇತರ ಕೃತಿಗಳು. ಮಹಾರಾಷ್ಟ್ರದಿಂದ ಹೊರಡುವ ’ಸನ್ಮತಿ’ ಎನ್ನುವ ಮರಾಠಿ ಭಾಷೆಯ ಪತ್ರಿಕೆಯಲ್ಲಿಯೂ ಬೇಂದ್ರೆಯವರು ಲೇಖನಗಳನ್ನು ಬರೆದಿದ್ದುಂಟು. 1965ರಲ್ಲಿ ಮರಾಠಿಯಲ್ಲಿ ರಚಿಸಿದ ’ಸಂವಾದ’ ಕೃತಿಗೆ ಕೇಳ್ಕರ್ ಬಹುಮಾನ ಪಡೆದಿದ್ದಾರೆ.

ಮಹಾಜನ ಆಯೋಗ ವರದಿಯ ಸಮಯ ಹಾಗೂ 1970ರಲ್ಲಿ ಬೆಳಗಾವಿಯಲ್ಲಿ ಗಡಿ ತಗಾದೆ ತಾರಕಕ್ಕೇರಿದಾಗ, ಕೆಲ ಪುಂಡರು ಧಾರವಾಡದಲ್ಲಿರುವ (ಇವಾಗಲೂ ಬೆಳಗಾವಿ ರಸ್ತೆಯಲ್ಲಿದೆ) ’ಮರಾಠಿ ಮಂಡಳ’ ಎಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದಾಗ ಬೇಂದ್ರೆಯವರು ಅದನ್ನು ಖಂಡಿಸಿದ್ದಲ್ಲದೇ, ’ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸೀಮಾಭೂಮಿ ರುದ್ರ ಭೂಮಿಯಾಗದೇ ಶಿವಭೂಮಿಯಾಗಬೇಕು’ ಅನ್ನುವ ಮಾತನ್ನು ಅವರು ಆಡಿದ್ದು, ಅಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ರುದ್ರ ಅಂದರೆ ಭಯಂಕರ ಹಾಗೂ ಶಿವ ಅಂದರೆ ಸೌಮ್ಯ, ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ಇವತ್ತು ಮರಾಠಿ ಹಾಗೂ ಕನ್ನಡ ಬಂಧುಗಳು ಗ್ರಹಿಸಬಹುದಾಗಿದೆ.

1971 ಸಪ್ಟೆಂಬರ್ 12ರಲ್ಲಿ ಬೆಳಗಾವಿಯ ಆಝಾದ ಟಾಕೀಸ್‌ನಲ್ಲಿ (ಇವಾಗ ಈ ಟಾಕೀಸ್ ಬಂದ್ ಆಗಿದೆ) ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಗರಸಭಾಧ್ಯಕ್ಷ ಶಿವಾಜಿರಾವ್ ಕಾಕತಕರ್ ಅವರು ಪ್ರೋತ್ಸಾಹ ನೀಡಿದ್ದನ್ನು ಬೆಳಗಾವಿ ಜನತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ಕಾರ್ಯಕ್ರಮದ ಸಮಾರೋಪದ ಅತಿಥಿ ಬೇಂದ್ರೆಯವರಾಗಿದ್ದರು.

ಇವತ್ತಿನ ಸಂದರ್ಭದಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ಗಡಿ ವಿವಾದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸ ಆಗಾಗ್ಗೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬೇಂದ್ರೆಯಂತಹ ಕವಿಗೆ ಮರಾಠಿ ಹಾಗೂ ಕನ್ನಡ ಪರಿಸರಗಳು ವೈರತ್ವವಾಗಿ ಕಾಣಲಿಲ್ಲ. ಅದೇ ರೀತಿ ಓದುಗ ರಸಿಕರಿಗೂ ಬೇಂದ್ರೆಯಾಗಲಿ ಅಥವಾ ಕನ್ನಡ-ಮರಾಠಿ ಸಾಹಿತ್ಯದಲ್ಲಾಗಲಿ, ವಾತಾವರಣದಲ್ಲಾಗಲಿ ವೈರ ಭಾವ ಕಾಣಲಿಲ್ಲ.

ಹಾಗೆಯೇ ಪೂನಾದ ಚಿತಳೆಯ ಬಾಕರವಡಿ ಹಾಗೂ ಧಾರವಾಡದ ಬಾಬುಸಿಂಗ ಪೇಡಾದ ಕಥೆ ಭಿನ್ನವಾಗಿಲ್ಲ. ವಂಶ ಪಾರಂಪರ್‍ಯವಾಗಿ ಮೂರ್‍ನಾಲ್ಕು ಪೀಳಿಗೆಗಳು ನಡೆಸಿಕೊಂಡು ಬರುತ್ತಿರುವ ಈ ತಿಂಡಿ ತಿನಿಸುಗಳಿಗೆ ಯಾವ ಗಡಿ ಇಲ್ಲ. ಬಾಕರವಡಿ ಹಾಗೂ ಪೇಡಾದ ನಡುವೆ ಬೆಳೆದ ಬೇಂದ್ರೆ ಕನ್ನಡಿಗರಿಗೆಷ್ಟೋ ಅಷ್ಟೇ ಮರಾಠಿಗರಿಗೂ ಪ್ರಿಯವಾದ ಕವಿ.

2021ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಗೆ ಭಾಜನರಾದ ಪ್ರೊ ಎಚ್.ಎಸ್. ಶಿವಪ್ರಕಾಶ್ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಂತೆ: “ನನ್ನ ವ್ಯಾವಸ್ಥೆಯಲ್ಲಿ ಕಾವ್ಯ ಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.” ಹೀಗೆ ಕನ್ನಡದ ಹಲವು ಹಿರಿಯ ಹಾಗೂ ಕಿರಿಯ ಕವಿಗಳಿಗೆ ಕನ್ನಡದ ವರಕವಿಯ ಪ್ರಭಾವವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಅವರೊಬ್ಬ ’ಮರಾಠಿ ಮಾನುಸ್ ಅಂದು ಕನ್ನಡದ ಯಾವ ಮನಸ್ಸುಗಳೂ ಅವರನ್ನು ದೂರ ಇಟ್ಟಿಲ್ಲ. ಇದು ಇವತ್ತಿನ ಸೀಮಾಭೂಮಿ ಬೆಳಗಾವಿ ಜನರ (ಕನ್ನಡ ಹಾಗೂ ಮರಾಠಿ) ಸ್ಥಿತಿ ಹಾಗೂ ಮನಸ್ಥಿತಿಯೂ ಹೌದು. ಶತಮಾನ ಕಳೆದ ಮರಾಠಿ ಮಾತೃಭಾಷಿಕ ಕನ್ನಡದ ವರಕವಿ ಬೇಂದ್ರೆಯನ್ನು ಒಪ್ಪಿ ಅಪ್ಪಿಕೊಂಡವರ ಹಾಗೂ ಅರ್ಧ ಶತಮಾನ ಕಳೆದರೂ ಮಹಾಜನ ವರದಿಯನ್ನು ಒಪ್ಪದವರ ನಡುವೆ ಸಿಲುಕಿ ಬೇಯುತ್ತಿರುವುದು ಕನ್ನಡ-ಮರಾಠಿ ಎನ್ನುವ ಭೇದಭಾವವಿಲ್ಲದ ಬದುಕುತ್ತಿರುವ ಮುಗ್ಧ ಮನಸ್ಸುಗಳೇ ಹೊರತು ರಾಜಕಾರಣಿಗಳಲ್ಲ.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ೬ ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...