Homeಮುಖಪುಟಪೊಲೀಸರ ಮೇಲಿಲ್ಲ ವಿಶ್ವಾಸ: ಸ್ವ-ಸುರಕ್ಷತಾ ವ್ಯವಸ್ಥೆ ಮೊರೆ ಹೋದ ರೈತರು

ಪೊಲೀಸರ ಮೇಲಿಲ್ಲ ವಿಶ್ವಾಸ: ಸ್ವ-ಸುರಕ್ಷತಾ ವ್ಯವಸ್ಥೆ ಮೊರೆ ಹೋದ ರೈತರು

- Advertisement -
- Advertisement -

ಶನಿವಾರ ಸಾಯಂಕಾಲ 4.30ರ ಸಮಯ. ‘ಮತ್ತೆ ದಾಂಧಲೆಕೋರರ ದಂಡು ದೊಡ್ಡ ಸಂಖ್ಯೆಯಲ್ಲಿ ಹೊರಗೆ ಜಮಾವಣೆ ಆಗುತ್ತಿದೆ’ ಎಂಬ ಸಣ್ಣ ಅನುಮಾನದ ಸಂದೇಶ ಬಂದ ನಿಮಿಷಗಳಲ್ಲಿ ಲಾಠಿಗಳನ್ನು ಹಿಡಿದ ಹತ್ತಾರು ರೈತ ಸ್ವಯಂಸೇವಕರು ಬ್ಯಾರಿಕೇಡ್ ಬಳಿ ಹಾಜರಾಗಿದ್ದರು.

ಇದು ಬಿಕೆಯು ನಡೆಸಿತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಕಂಡು ಬಂದ ಹೊಸ ಬೆಳವಣಿಗೆ. ಶುಕ್ರವಾರ ಸಿಂಘು ಗಡಿಯ ದೆಹಲಿ ಭಾಗದ ಒಂದು ಜಾಗದಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪೊಂದು ದಾಂಧಲೆ ನಡೆಸಲು ಯತ್ನಿಸಿದ ನಂತರ, ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ರೈತರು ತಮ್ಮದೇ ಸುರಕ್ಷತಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ಗೂಂಡಾಗಳು ತಮ್ಮ ಹೋರಾಟ ನಾಶ ಮಾಡಲು ಹವಣಿಸುತ್ತಿದ್ದಾರೆ ಎಂಬ ಭಾವನೆ ರೈತರಲ್ಲಿದೆ.

ಸಿಂಘು ಗಡಿಯ ಒಂದು ಭಾಗದಲ್ಲಿ ಸಣ್ಣ ಹಿಂಸಾಚಾರದ ನಂತರ, ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಮತ್ತು “ರಾಜಕೀಯ ಏಜೆಂಟರಿಗೆ” ಮತ್ತೆ ಹಿಂಸಾಚಾರವನ್ನು ಪ್ರಚೋದಿಸಲು ಅವಕಾಶ ಸಿಗದಂತೆ ನೋಡಿಕೊಳ್ಳಲು ರೈತರು “ಆಂತರಿಕ ಭದ್ರತೆ” ಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

‘ಸ್ಥಳೀಯರ’ ಹೆಸರಿನಲ್ಲಿ ಶುಕ್ರವಾರ ಮೂರು ಹಂತಗಳ ಪೊಲೀಸ್ ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಬಂದು ದುಷ್ಕರ್ಮಿಗಳು ದಾಂಧಲೆ ಮಾಡಿದ ನಂತರ ರೈತರಿಗೆ ಪೊಲೀಸರ ಬಗ್ಗೆ ವಿಶ್ವಾಸವೇ ಹೋಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ದಾಂಧಲೆ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

‘ನೌಜವಾನ್ ಭಾರತ್ ಸಭಾ ಅಧ್ಯಕ್ಷ ರೂಪಿಂದರ್ ಸಿಂಗ್, “ನಾವು ಮುಖ್ಯ ವೇದಿಕೆಯ ಬಳಿ ಭದ್ರತಾ ಕೊಠಡಿಯನ್ನು ಸ್ಥಾಪಿಸಿದ್ದೇವೆ, ಎಲ್ಲಾ ಸಮಯದಲ್ಲೂ 10 ಜನರು ಅಲ್ಲಿರುತ್ತಾರೆ. ನಾವು ಸ್ವಯಂಸೇವಕರ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಹೆಚ್ಚಿನ ತಪಾಸಣೆಯ ನಂತರ ಕಡಿಮೆ ಜನರಿಗೆ ವೇದಿಕೆಯ ಬಳಿ ಅವಕಾಶ ನೀಡಲಾಗುತ್ತಿದೆ. ಎಂತಹ ಸಮಯದಲ್ಲೂ ಅಹಿತಕರ ಪರಿಸ್ಥಿತಿ ಸಮಯದಲ್ಲೂ ಪರಿಸ್ಥಿತಿ ನಿಯಂತ್ರಿಸಲು ಯುವ ಘಟಕಗಳಿಗೆ ಸ್ಟ್ಯಾಂಡ್‌ಬೈನಲ್ಲಿ ಉಳಿಯುವಂತೆ ತಿಳಿಸಲಾಗಿದೆ. ನಮ್ಮ ಮೇಲೆ ಪ್ರತಿಭಟನೆ ನಡೆಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅವಕಾಶ ನೀಡುವುದಿಲ್ಲ’ ಎಂದರು.

ಶನಿವಾರ, ಹೆಚ್ಚಿನ ಸ್ವಯಂಸೇವಕರು ಉದ್ದನೆಯ ಕಟ್ಟಿಗೆ ಮತ್ತು ಬಿದಿರಿನ ಕೋಲುಗಳೊಂದಿಗೆ ತಿರುಗಾಡುತ್ತಿದ್ದರು.. ರೈತರ ಪ್ರಕಾರ, ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ, ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಎರಡು ಪಾಳಿಯಲ್ಲಿ ಸ್ವಯಂಸೇವಕರು, ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯೂ ಪಹರೆ ಕಾಯುತ್ತಾರೆ. ಪ್ರಮುಖ ಪ್ರವೇಶ-ನಿರ್ಗಮನ ಸ್ಥಳಗಳಲ್ಲಿ ಬೀಡುಬಿಟ್ಟಿದ್ದಾರೆ. ಪರಿಶೀಲನೆ ನಡೆಸಲು ಕನಿಷ್ಠ ಐದು ಮಂದಿ ಪ್ರತಿಭಟನೆಯ ಮುಖ್ಯ ಪ್ರವೇಶ ಕೇಂದ್ರದಲ್ಲಿ ನಿಲ್ಲುತ್ತಾರೆ. ವೇದಿಕೆ ಸಮಿತಿಯು ಭಾಷಣಗಳನ್ನು ನಿರ್ವಹಿಸುತ್ತಿದ್ದರೆ, 25 ಜನರ ಹೆಚ್ಚುವರಿ ತಂಡವು ಹತ್ತಿರದಲ್ಲೇ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತದೆ.

ಮುಖ್ಯ ವೇದಿಕೆ ಪಕ್ಕದಲ್ಲಿರುವ ಮತ್ತೊಂದು ಟ್ರಾಲಿಯಲ್ಲಿ 10-15 ಸ್ವಯಂಸೇವಕರು ಇದ್ದಾರೆ, ಅವರನ್ನು ಯಾವಾಗಲಾದರೂ ಸಹಾಯಕ್ಕಾಗಿ ಕರೆಯಬಹುದು. ಪ್ರತಿಭಟನಾ ಸ್ಥಳದೊಳಗೆ, ಮೂರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. “ಬೆದರಿಕೆ” ಸಂಭವಿಸಿದಾಗ ಸ್ವಯಂಸೇವಕರನ್ನು ತಕ್ಷಣವೇ ಎಚ್ಚರಿಸಲು ಎಲ್ಲ ಪ್ರತಿಭಟನಾಕಾರರಿಗೆ ಸಂದೇಶವನ್ನು ಕಳುಹಿಸಲಾಗಿದೆ.
‘ಕನಿಷ್ಠ 1,500 ಜನರು 24 ತಾಸು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾವು ಮೊದಲ ದಿನದಿಂದ ಶಾಂತಿಯುತವಾಗಿದ್ದೇವೆ. ಆದರೂ ಎಷ್ಟೋ ದುಷ್ಟ ಜನರು ಪ್ರತಿಭಟನಾ ಸ್ಥಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ನಮ್ಮನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ… ” ಎಂದು ರೂಪಿಂದರ್ ಹೇಳಿದರು.

‘ಶುಕ್ರವಾರದ ಘಟನೆಯ ನಂತರ ಹೆಚ್ಚಿನ ಜಾಗರೂಕತೆ ಅಗತ್ಯ ಎನಿಸಿದೆ’ ಎಂದು ಪಂಜಾಬ್‌ನ ಮೊಗಾ ಜಿಲ್ಲೆಯ ಅಮರ್‌ಜೀತ್ ಸಿಂಗ್ ಹೇಳಿದರು. ರೈತರಿಗೆ ಪೊಲೀಸ್ ಪಡೆಗಳ ಬಗ್ಗೆ ಅಪನಂಬಿಕೆ ಇದೆ. “ನಿನ್ನೆ, ಪೊಲೀಸರು ನಿಂತು ಏನಾಯಿತು ಎಂದು ವೀಕ್ಷಿಸಿದರು. ನಾವು ಅವರನ್ನು ಮತ್ತು ಅವರ ಬ್ಯಾರಿಕೇಡ್‌ಗಳನ್ನು ಅವಲಂಬಿಸಲಾಗುವುದಿಲ್ಲ. ವದಂತಿಗಳಿಗೆ ಯಾರೂ ಬಲಿಯಾಗಬಾರದು ಮತ್ತು ಆತ್ಮರಕ್ಷಣೆಗಾಗಿ ಹೊರತುಪಡಿಸಿ ಅನಗತ್ಯವಾಗಿ ಕ್ರಿಯೆಗೆ ಇಳಿಯಬಾರದು ಎಂದು ಎಲ್ಲರಿಗೂ ಸ್ಪಷ್ಟಪಡಿಸಲಾಗಿದೆ. ನಮ್ಮ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಚಿತ್ರಿಸಬೇಕೆಂದು ನಾವು ಬಯಸುವುದಿಲ್ಲ” ಎಂದು ಹರಿಯಾಣದ ಅಂಬಾಲಾದ ಸುರಿಂದರ್ ಸಿಂಗ್ ಹೇಳಿದರು, ಅವರು ಮೊದಲಿನಿಂದಲೂ ಪ್ರತಿಭಟನೆಯಲ್ಲಿದ್ದಾರೆ.

ಹರಿಯಾಣದ ಕೈತಾಲ್‌ನ ಜ್ವಾರ್ಮಾಲ್, “ನಾವು ನಮ್ಮ ಪ್ರತಿಭಟನಾ ಸ್ಥಳವನ್ನು ಸುರಕ್ಷಿತವಾಗಿಡಲು ಬಯಸುತ್ತೇವೆ; ನಾವು ಯಾವುದೇ ಹಿಂಸಾಚಾರವನ್ನು ಬಯಸುವುದಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಒಳನುಸುಳುತ್ತಿದ್ದಾರೆ ಮತ್ತು ಜನರನ್ನು ಕೆರಳಿಸುತ್ತಿದ್ದಾರೆ. ಇದನ್ನು ತಡೆಯುತ್ತೇವೆ” ಎಂದರು. ರೈತರ ವೇಷದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ಗಳು ಸೇರಿಕೊಂಡು ರೈತರ ತಲೆ ಕೆಡಿಸುವ ಯತ್ನ ಮಾಡುತ್ತಿದ್ದಾರೆ ಎಂಬ ಸಂದೇಹದ ಕಾರಣ ಒಳಬರುವವರನ್ನು ಯಾರು ಎಂದು ಖಚಿತಪಡಿಸಿಕೊಂಡೇ ಒಳಕ್ಕೆ ಬಿಡಲಾಗುತ್ತಿದೆ.

ವೇದಿಕೆಯಿಂದ ಮಾತನಾಡಿದ ಬಿಕೆಯು ನಾಯಕ ಗುರ್ನಮ್ ಸಿಂಗ್ ಚಾದುನಿ ಶುಕ್ರವಾರದ ದಾಳಿಯ ಬಗ್ಗೆ ಸರ್ಕಾರಕ್ಕೆ “ಎಚ್ಚರಿಕೆ” ಕಳುಹಿಸಿದ್ದಾರೆ. “ಅವರು ಈ ಗೂಂಡಾಗಿರಿ ಬಿಡಬೇಕೆಂದು ನಾನು ಈ ಸರ್ಕಾರವನ್ನು ಎಚ್ಚರಿಸಲು ಬಯಸುತ್ತೇನೆ. ಇಲ್ಲಿಗೆ ಬಂದು ದಂಗಾ (ಗಲಭೆ) ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ”ಎಂದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಬ್ಬಾಳಿಕೆ ನಡೆದರೂ ಈಗ ಹಿಂತಿರುಗುವುದಿಲ್ಲ. “ಪೊಲೀಸರು ನಮ್ಮ ಮೇಲೆ ಮುಗಿಬಿದ್ದರೆ, ಅದು ರಾತ್ರಿ ಅಥವಾ ಬೆಳಿಗ್ಗೆ ಆಗಿರಲಿ, ನಾವು ಬಿಡುವುದಿಲ್ಲ, ನಾವು ಇಲ್ಲೇ ಸಾಯುತ್ತೇವೆ” ಎಂದು ಅವರು ಹೇಳಿದರು. ರೈತರು ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರಿಸಬೇಕು ಎಂದು ಪುನರುಚ್ಚರಿಸಿದರು.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್


ಇದನ್ನೂ ಓದಿ: ಸರ್ಕಾರದೊಂದಿಗೆ ಮಾತುಕತೆಯ ಬಾಗಿಲು ಮುಚ್ಚುವ ಪ್ರಶ್ನೆಯೇ ಇಲ್ಲ: ಸಂಯುಕ್ತ ಕಿಸಾನ್ ಮೋರ್ಚಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...