Homeಮುಖಪುಟನರೇಂದ್ರ ಮೋದಿಯ ಅಸಲೀ ಜೀವನ ವೃತ್ತಾಂತದ ಬಗ್ಗೆ ನಿಮಗೆಷ್ಟು ಗೊತ್ತು?

ನರೇಂದ್ರ ಮೋದಿಯ ಅಸಲೀ ಜೀವನ ವೃತ್ತಾಂತದ ಬಗ್ಗೆ ನಿಮಗೆಷ್ಟು ಗೊತ್ತು?

- Advertisement -
| ಪ್ರವೀಣ್  ಎಸ್ ಶೆಟ್ಟಿ |
ಮೋದಿ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಭಾರತೀಯರ ಪುಣ್ಯದಿಂದ ಕೊನೆಗೂ ಮೋದಿಯಂತಹಾ ಪ್ರಧಾನಿ ನಮಗೆ ಸಿಕ್ಕಿರುವುದು ಎಂಬೆಲ್ಲಾ ವಿಶೇಷಣಗಳೊಂದಿಗೆ ಮೋದಿಯ ಪ್ರಚಾರ ಮಾಡಲಾಗುತ್ತಿದೆ. ಈಗ ಮೋದಿಗೆ 69 ವರ್ಷ ವಯಸ್ಸು. 2001 ರಲ್ಲಿ ಅವರು ಗುಜರಾತಿನ ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಅವರು ಒಂದು ಸಣ್ಣ ಪಂಚಾಯತ್ ಸದಸ್ಯನಷ್ಟೂ ಜನಸೇವೆ ಅಥವಾ ದೇಶಸೇವೆ ಮಾಡಿಲ್ಲ. ಅವರು ನೇರವಾಗಿ ಆಗಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಕೇಶುಭಾಯಿ ಪಟೇಲ್, ಸುರೇಶ್ ಮೇಹತಾ, ಹಾಗೂ ಆರ್‌ಜೆ‌ಪಿ ಪಕ್ಷದ ಶಂಕರ್ ಸಿಂಹ ವಾಘೆಲಾ ಇವರೆಲ್ಲರ ಬೆನ್ನಿಗೆ ಇರಿದು ಗುಜರಾತ್ ಮುಖ್ಯಮಂತ್ರಿ ಸ್ಥಾನ ಕಬಳಿಸಿದ್ದು. ಅದಕ್ಕೆ ಮುಂಚೆ ಅವರು ಕೇವಲ ಅಡ್ವಾಣಿಯವರ ತಲೆಗೆ ಕೊಡೆ ಹಿಡಿದಿದ್ದು ಮತ್ತು ಬಾಯಿಗೆ ಲೌಡ್ ಸ್ಪೀಕರ್ ಹಿಡಿದಿದ್ದು ಮಾತ್ರ ಅವರು ಮಾಡಿರುವ ಜನಸೇವೆ.
ಮೋದಿ ಗುಜರಾತ್ ಮುಖ್ಯಮಂತ್ರಿ ಆಗುವಾಗ ಅವರಿಗೆ 52 ವರ್ಷ ವಯಸ್ಸು. ಅಲ್ಲಿಯವರೆಗೆ ಅವರು ಒಂದು ಪೈಸೆಯ ದೇಶಸೇವೆ ಅಥವಾ ಜನಸೇವೆ ಮಾಡಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ಆದ ಮೇಲೂ ಅವರು ಮಾಡಿಸಿದ್ದು ಕೋಮು ಗಲಭೆ, ನಕಲಿ ಎಂಕೌಂಟರ್, ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿ ಹರೇನ್ ಪಾಂಡ್ಯರ ಸಂದೇಹಾಸ್ಪದ ಮರಣ, ಗುಜರಾತ್ ಪೆಟ್ರೋಲಿಯಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ರೈತರ ಭೂಮಿ ಕಸಿದು ತನ್ನ ಚೇಲಾ ಉದ್ಯಮಿಗಳಿಗೆ ಕವಡೆ ಬೆಲೆಗೆ ಕೊಟ್ಟಿದ್ದು ಅಷ್ಟೇ, ಇವನ್ನೆಲ್ಲಾ ಗುಜರಾತಿಗಾಗಿ ಮೋದಿಯ ಜೀವನದ ಮುಡಿಪು ಅನ್ನಬೇಕೆ? ಅಥವಾ ಆರು ಕೋಟಿ ಗುಜರಾತಿಗಳ ಪುಣ್ಯದಿಂದ ಗುಜರಾತಿಗೆ ಸಿಕ್ಕ ಮಹಾನ್ ಮುಖ್ಯಮಂತ್ರಿ ಎಂಬ ವಿಶೇಷಣ ಸೇರಿಸಬೇಕೆ?
ಚಿಕ್ಕಂದಿನಿಂದ ಮೋದಿಯ ಜೀವನ ಹೇಗೆ ವಿಶ್ಲೇಶಿಸಿದರೂ ಅವರು ಒಂದಿಷ್ಟೂ ದೇಶಸೇವೆ ಅಥವಾ ಜನಸೇವೆ ಮಾಡಿದ ಉದಾಹರಣೆ ಇಲ್ಲ. ಅವರ ತಂದೆ ತುಂಬಾ ಬಡವರಾಗಿದ್ದರಿಂದ ರೇಲ್ವೇ ಸ್ಟೇಷನ್ನಲ್ಲಿ ಚಹಾ ಮಾರುತ್ತಿದರು ಎಂಬುದೆಲ್ಲಾ ಶುದ್ಧ ಸುಳ್ಳು. ಬನಿಯಾ/ವೈಶ್ಯಾ ಮೇಲ್ಜಾತಿಯವರಾದ ಅವರ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇತ್ತು ಎಂದು ಅವರ ಮಾವನ ಮಗ ಕಲ್ಪೇಶ್ ಭಾಟಿಯಾ ಮೋದಿ ಎಂಬವರೇ ಹೇಳಿದ್ದಾರೆ. ಮೋದಿಯ ತಾಯಿ ಇತರರ ಮನೆಯ ಮುಸುರೆ ತಿಕ್ಕುವುದು ಒತ್ತಟ್ಟಿಗಿರಲಿ ಅವರು ತನ್ನ ಸ್ವಂತ ಮನೆಯ ಮುಸುರೆ ಸಹಾ ತಿಕ್ಕುತ್ತಿರಲಿಲ್ಲ. ಯಾಕೆಂದರೆ ಅವರು ಆರು ಮಕ್ಕಳನ್ನು ಹೆತ್ತು ಹೊತ್ತು ಸಾಕುವುದರಲ್ಲಿಯೇ ಅವರ ಜೀವನ ಕಳೆದು ಹೋಗಿತ್ತು.
ಮೋದಿಯ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿದ್ದುದರಿಂದಲೇ ಮೋದಿಯ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ತಮ್ಮಂದಿರು ಸರಿಯಾಗಿ ಶಾಲೆ ಕಾಲೇಜು ಮುಗಿಸಿ ಡಿಗ್ರಿ ಪಡೆದು ಇಬ್ಬರು ಸರಕಾರಿ ನೌಕರಿ ಗಳಿಸಿದರೆ ಇನ್ನಿಬ್ಬರು ತಮ್ಮ ಸ್ವಂತ ಉದ್ಯಮ ಸ್ಥಾಪಿಸಿದರು. ತಂಗಿ ಜಯಂತಿಬೆನ್ ಸಹಾ ಪದವೀಧರೆ ಹಾಗೂ ಅವಳ ಗಂಡ ಎಲ್‌ಐಸಿ ಯಲ್ಲಿ ಅಧಿಕಾರಿಯಾಗಿದ್ದರು. ಹಾಗಿರುವಾಗ ಕೇವಲ ಮೋದಿ ಒಬ್ಬರೇ ಮಾನಸಿಕ ಸಮಸ್ಯೆಯಿಂದಾಗಿ ಸರಿಯಾಗಿ ಶಾಲೆಗೂ ಹೋಗದೆ ಉದ್ಯೋಗವನ್ನೂ ಮಾಡದೇ ಉಂಡಾಡಿಯಾಗಿ ತಿರುಗಾಡಿಕೊಂಡಿದ್ದು! ಅದನ್ನು ನೋಡಿ ಅವರ ತಂದೆ ಮೋದಿಗೆ 20 ವರ್ಷ ಆಗಿದ್ದಾಗ ಮಿಲಿಟರಿಯಲ್ಲಿ ಸೈನಿಕನಾಗಿ ಸೇರುವಂತೆ ಒತ್ತಾಯಿಸಿದರು. ಆದರೆ ಮೋದಿ ಮಿಲಿಟರಿ ಸೇರಲು ಭಯಪಟ್ಟು ಮನೆ ಬಿಟ್ಟು ಓಡಿ ಗುಜರಾತಿ ನಾಟಕ ಕಂಪನಿಯಲ್ಲಿ ತಬಲವಾದಕನಾಗಿ ಕೆಲಸಕ್ಕೆ ಸೇರಿದರು. ನಾಟಕ ಕಂಪನಿಯಲ್ಲಿ ಮೋದಿ 12 ವರ್ಷ ಕೆಲಸ ಮಾಡಿದ್ದನ್ನೇ ಅವರು ತಾನು ಹಿಮಾಲಯದಲ್ಲಿ ತಪಸ್ಸು ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದು. (ಯವ್ವನದಲ್ಲಿ ಮಿಲಿಟರಿ ಸೇರಲು ಭಯಪಟ್ಟ ಮೋದಿ ಈಗ ಮಾತ್ರ ವೀರ ಸೈನಿಕರ ಹೆಸರಲ್ಲಿ ವೋಟು ಕೇಳುತ್ತಿರುವುದು ವಿಪರ್ಯಾಸ).
1973 ರಲ್ಲಿ ಮೋದಿ 24 ವರ್ಷದವರಾಗಿದ್ದಾಗ ಅವರ ಹುಟ್ಟೂರು ವಡ್ನಗರದಲ್ಲಿ ಹೊಸ ರೇಲ್ವೆ ಸ್ಟೇಷನ್ ಕಟ್ಟಿದ್ದು. ಹಾಗಾದರೆ ಮೋದಿ ಚಿಕ್ಕಂದಿನಲ್ಲಿ ಚಹಾ ಮಾರಿದ್ದು ಯಾವ ರೇಲ್ವೆ ಸ್ಟೇಷನ್ನಿನಲ್ಲಿ? ಮೋದಿ 35 ವರ್ಷದವರಾಗಿದ್ದಾಗ ಅವರು ಆರೆಸ್ಸೆಸ್ಸ್ ಸೇರಿ ಅಲ್ಲಿ ಚಡ್ಡಿ ಹಾಕಿ ಹದಿನೈದು ವರ್ಷ ಲಾಠಿ ತಿರುಗಿಸಿದ್ದನ್ನು ದೇಶಸೇವೆ ಅನ್ನಲು ಸಾಧ್ಯವಿಲ್ಲ. ಮೋದಿ ಚಹಾ ಮಾರಿದ್ದು ಸುಳ್ಳು, ಹಿಮಾಲಯದಲ್ಲಿ ತಪಸ್ಸು ಮಾಡಿದ್ದು ಸುಳ್ಳು, ಮೊಸಳೆಯೊಂದಿಗೆ ಹೊಡೆದಾಡಿದ್ದು ಸುಳ್ಳು, ಬಡತನದಿಂದ ಬಳಲಿದ್ದು ಸುಳ್ಳು. ಹೀಗೆ ಸುಳ್ಳುಗಳ ಸರಮಾಲೆ ಹೆಣೆದು ಸೋಷಿಯಲ್ ಮೀಡಿಯಾದಲ್ಲಿ ಮತ್ತು ಪೇಡ್ ಪತ್ರಿಕೆಗಳಲ್ಲಿ ಈ ಕಟ್ಟುಕಥೆಗಳನ್ನು ಹರಡಿಯೇ 2014 ರಲ್ಲಿ ಮೋದಿ ಭಾರತೀಯ ಮತದಾರರ ಸಹಾನುಭೂತಿ ಗಳಿಸಿದ್ದು. ಈಗ ಸತ್ಯ ಹೊರಬಂದ ಮೇಲಾದರೂ ಮತದಾರರು ಕಣ್ಣು ತರೆಯುವರೇ?
ಟಿ‌ವಿಯಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ವೇದಿಕೆಯಲ್ಲಿ ಜೋರು ಜೋರಾಗಿ ಅಳುತ್ತಾ ತಮ್ಮ ಜೀವನದ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುವ ಹುಡುಗ-ಹುಡುಗಿಯರನ್ನು ಎಲ್ಲರೂ ನೋಡಿರುವರು. ಆದರೆ ಈ ಸ್ಪರ್ಧಿಗಳಲ್ಲಿ ಹೆಚ್ಚಿನವರು ನಿಜ ಜೀವನದಲ್ಲಿ ಯಾವುದೇ ಕಷ್ಟ ಕಾರ್ಪಣ್ಯ ಎದುರಿಸಿರುವುದಿಲ್ಲ. ಆದರೂ ಆ ರಿಯಾಲಿಟಿ ಶೋಗಳ ನಿರ್ದೇಶಕರೇ ಈ ಸ್ಪರ್ಧಿಗಳಿಗೆ ಕಾಲ್ಪನಿಕ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ವೀಕ್ಷಕರ ಅತಿ ಹೆಚ್ಚು ಸಹಾನುಭೂತಿ ಗಳಿಸಿ ಟಿ‌ಆರ್‌ಪಿ ಏರಿಸಲು ಸಹಾಯ ಮಾಡಿದರೆ ಮಾತ್ರ ಅವರನ್ನು ಗೆಲ್ಲಿಸುವುದು ಎಂಬ ಅಮಿಷೆ ಒಡ್ಡಿರುತ್ತಾರೆ. ಅದೇ ಪ್ರಕಾರ ಮೋದಿಯ ಜೀವನದ ಕಷ್ಟಕಾರ್ಪಣ್ಯ ಬಡತನ ಎಲ್ಲವೂ ಟಿ‌ವಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಅಳುತ್ತಾ ಹೇಳುವ ಕಥೆಗಳಂತೆ ಶುದ್ಧ ಕಾಲ್ಪನಿಕ. ಅದು ಕೇವಲ ಹೆಂಗರುಳಿನ ಮತದಾರರ ಮನದಲ್ಲಿ ಮೋದಿಯ ಬಗ್ಗೆ ವಯುಕ್ತಿಕವಾಗಿ ಕನಿಕರ ಹುಟ್ಟಿಸಿ ಅವರ ವೋಟು ಸೆಳೆಯಲು ಮಾಡಿರುವ “ಫೇಕೂ ರಿಯಾಲಿಟಿ ಶೋ” ಅಷ್ಟೇ. ನಟ ಭಯಂಕರ, ಅಭಿನಯ ವಿಶಾರದ, ನಟಶೇಖರ, ಕಲಾ ಸಾಮ್ರಾಟ ಮೋದಿಯ ಎದುರು ದಿಲೀಪ್ ಕುಮಾರ್, ಶಿವಾಜಿ ಗಣೇಶನ್, ಎನ್‌ಟಿ‌ಆರ್, ಮಮ್ಮುಟ್ಟಿ, ಕಮಲ ಹಾಸನ್, ನಮ್ಮ ವರನಟ ಡಾ.ರಾಜ್ ಕುಮಾರ್, ಇವರೆಲ್ಲರೂ ಅತ್ಯಂತ ಸಪ್ಪೆಯಾಗಿ ಕಾಣುತ್ತಾರೆ ಪಾಪ!
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...