Homeಮುಖಪುಟನರೇಂದ್ರ ಮೋದಿಯ ಅಸಲೀ ಜೀವನ ವೃತ್ತಾಂತದ ಬಗ್ಗೆ ನಿಮಗೆಷ್ಟು ಗೊತ್ತು?

ನರೇಂದ್ರ ಮೋದಿಯ ಅಸಲೀ ಜೀವನ ವೃತ್ತಾಂತದ ಬಗ್ಗೆ ನಿಮಗೆಷ್ಟು ಗೊತ್ತು?

- Advertisement -
| ಪ್ರವೀಣ್  ಎಸ್ ಶೆಟ್ಟಿ |
ಮೋದಿ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಭಾರತೀಯರ ಪುಣ್ಯದಿಂದ ಕೊನೆಗೂ ಮೋದಿಯಂತಹಾ ಪ್ರಧಾನಿ ನಮಗೆ ಸಿಕ್ಕಿರುವುದು ಎಂಬೆಲ್ಲಾ ವಿಶೇಷಣಗಳೊಂದಿಗೆ ಮೋದಿಯ ಪ್ರಚಾರ ಮಾಡಲಾಗುತ್ತಿದೆ. ಈಗ ಮೋದಿಗೆ 69 ವರ್ಷ ವಯಸ್ಸು. 2001 ರಲ್ಲಿ ಅವರು ಗುಜರಾತಿನ ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಅವರು ಒಂದು ಸಣ್ಣ ಪಂಚಾಯತ್ ಸದಸ್ಯನಷ್ಟೂ ಜನಸೇವೆ ಅಥವಾ ದೇಶಸೇವೆ ಮಾಡಿಲ್ಲ. ಅವರು ನೇರವಾಗಿ ಆಗಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಕೇಶುಭಾಯಿ ಪಟೇಲ್, ಸುರೇಶ್ ಮೇಹತಾ, ಹಾಗೂ ಆರ್‌ಜೆ‌ಪಿ ಪಕ್ಷದ ಶಂಕರ್ ಸಿಂಹ ವಾಘೆಲಾ ಇವರೆಲ್ಲರ ಬೆನ್ನಿಗೆ ಇರಿದು ಗುಜರಾತ್ ಮುಖ್ಯಮಂತ್ರಿ ಸ್ಥಾನ ಕಬಳಿಸಿದ್ದು. ಅದಕ್ಕೆ ಮುಂಚೆ ಅವರು ಕೇವಲ ಅಡ್ವಾಣಿಯವರ ತಲೆಗೆ ಕೊಡೆ ಹಿಡಿದಿದ್ದು ಮತ್ತು ಬಾಯಿಗೆ ಲೌಡ್ ಸ್ಪೀಕರ್ ಹಿಡಿದಿದ್ದು ಮಾತ್ರ ಅವರು ಮಾಡಿರುವ ಜನಸೇವೆ.
ಮೋದಿ ಗುಜರಾತ್ ಮುಖ್ಯಮಂತ್ರಿ ಆಗುವಾಗ ಅವರಿಗೆ 52 ವರ್ಷ ವಯಸ್ಸು. ಅಲ್ಲಿಯವರೆಗೆ ಅವರು ಒಂದು ಪೈಸೆಯ ದೇಶಸೇವೆ ಅಥವಾ ಜನಸೇವೆ ಮಾಡಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ಆದ ಮೇಲೂ ಅವರು ಮಾಡಿಸಿದ್ದು ಕೋಮು ಗಲಭೆ, ನಕಲಿ ಎಂಕೌಂಟರ್, ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿ ಹರೇನ್ ಪಾಂಡ್ಯರ ಸಂದೇಹಾಸ್ಪದ ಮರಣ, ಗುಜರಾತ್ ಪೆಟ್ರೋಲಿಯಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ರೈತರ ಭೂಮಿ ಕಸಿದು ತನ್ನ ಚೇಲಾ ಉದ್ಯಮಿಗಳಿಗೆ ಕವಡೆ ಬೆಲೆಗೆ ಕೊಟ್ಟಿದ್ದು ಅಷ್ಟೇ, ಇವನ್ನೆಲ್ಲಾ ಗುಜರಾತಿಗಾಗಿ ಮೋದಿಯ ಜೀವನದ ಮುಡಿಪು ಅನ್ನಬೇಕೆ? ಅಥವಾ ಆರು ಕೋಟಿ ಗುಜರಾತಿಗಳ ಪುಣ್ಯದಿಂದ ಗುಜರಾತಿಗೆ ಸಿಕ್ಕ ಮಹಾನ್ ಮುಖ್ಯಮಂತ್ರಿ ಎಂಬ ವಿಶೇಷಣ ಸೇರಿಸಬೇಕೆ?
ಚಿಕ್ಕಂದಿನಿಂದ ಮೋದಿಯ ಜೀವನ ಹೇಗೆ ವಿಶ್ಲೇಶಿಸಿದರೂ ಅವರು ಒಂದಿಷ್ಟೂ ದೇಶಸೇವೆ ಅಥವಾ ಜನಸೇವೆ ಮಾಡಿದ ಉದಾಹರಣೆ ಇಲ್ಲ. ಅವರ ತಂದೆ ತುಂಬಾ ಬಡವರಾಗಿದ್ದರಿಂದ ರೇಲ್ವೇ ಸ್ಟೇಷನ್ನಲ್ಲಿ ಚಹಾ ಮಾರುತ್ತಿದರು ಎಂಬುದೆಲ್ಲಾ ಶುದ್ಧ ಸುಳ್ಳು. ಬನಿಯಾ/ವೈಶ್ಯಾ ಮೇಲ್ಜಾತಿಯವರಾದ ಅವರ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇತ್ತು ಎಂದು ಅವರ ಮಾವನ ಮಗ ಕಲ್ಪೇಶ್ ಭಾಟಿಯಾ ಮೋದಿ ಎಂಬವರೇ ಹೇಳಿದ್ದಾರೆ. ಮೋದಿಯ ತಾಯಿ ಇತರರ ಮನೆಯ ಮುಸುರೆ ತಿಕ್ಕುವುದು ಒತ್ತಟ್ಟಿಗಿರಲಿ ಅವರು ತನ್ನ ಸ್ವಂತ ಮನೆಯ ಮುಸುರೆ ಸಹಾ ತಿಕ್ಕುತ್ತಿರಲಿಲ್ಲ. ಯಾಕೆಂದರೆ ಅವರು ಆರು ಮಕ್ಕಳನ್ನು ಹೆತ್ತು ಹೊತ್ತು ಸಾಕುವುದರಲ್ಲಿಯೇ ಅವರ ಜೀವನ ಕಳೆದು ಹೋಗಿತ್ತು.
ಮೋದಿಯ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿದ್ದುದರಿಂದಲೇ ಮೋದಿಯ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ತಮ್ಮಂದಿರು ಸರಿಯಾಗಿ ಶಾಲೆ ಕಾಲೇಜು ಮುಗಿಸಿ ಡಿಗ್ರಿ ಪಡೆದು ಇಬ್ಬರು ಸರಕಾರಿ ನೌಕರಿ ಗಳಿಸಿದರೆ ಇನ್ನಿಬ್ಬರು ತಮ್ಮ ಸ್ವಂತ ಉದ್ಯಮ ಸ್ಥಾಪಿಸಿದರು. ತಂಗಿ ಜಯಂತಿಬೆನ್ ಸಹಾ ಪದವೀಧರೆ ಹಾಗೂ ಅವಳ ಗಂಡ ಎಲ್‌ಐಸಿ ಯಲ್ಲಿ ಅಧಿಕಾರಿಯಾಗಿದ್ದರು. ಹಾಗಿರುವಾಗ ಕೇವಲ ಮೋದಿ ಒಬ್ಬರೇ ಮಾನಸಿಕ ಸಮಸ್ಯೆಯಿಂದಾಗಿ ಸರಿಯಾಗಿ ಶಾಲೆಗೂ ಹೋಗದೆ ಉದ್ಯೋಗವನ್ನೂ ಮಾಡದೇ ಉಂಡಾಡಿಯಾಗಿ ತಿರುಗಾಡಿಕೊಂಡಿದ್ದು! ಅದನ್ನು ನೋಡಿ ಅವರ ತಂದೆ ಮೋದಿಗೆ 20 ವರ್ಷ ಆಗಿದ್ದಾಗ ಮಿಲಿಟರಿಯಲ್ಲಿ ಸೈನಿಕನಾಗಿ ಸೇರುವಂತೆ ಒತ್ತಾಯಿಸಿದರು. ಆದರೆ ಮೋದಿ ಮಿಲಿಟರಿ ಸೇರಲು ಭಯಪಟ್ಟು ಮನೆ ಬಿಟ್ಟು ಓಡಿ ಗುಜರಾತಿ ನಾಟಕ ಕಂಪನಿಯಲ್ಲಿ ತಬಲವಾದಕನಾಗಿ ಕೆಲಸಕ್ಕೆ ಸೇರಿದರು. ನಾಟಕ ಕಂಪನಿಯಲ್ಲಿ ಮೋದಿ 12 ವರ್ಷ ಕೆಲಸ ಮಾಡಿದ್ದನ್ನೇ ಅವರು ತಾನು ಹಿಮಾಲಯದಲ್ಲಿ ತಪಸ್ಸು ಮಾಡಿದ್ದೇನೆ ಎಂದು ಸುಳ್ಳು ಹೇಳಿದ್ದು. (ಯವ್ವನದಲ್ಲಿ ಮಿಲಿಟರಿ ಸೇರಲು ಭಯಪಟ್ಟ ಮೋದಿ ಈಗ ಮಾತ್ರ ವೀರ ಸೈನಿಕರ ಹೆಸರಲ್ಲಿ ವೋಟು ಕೇಳುತ್ತಿರುವುದು ವಿಪರ್ಯಾಸ).
1973 ರಲ್ಲಿ ಮೋದಿ 24 ವರ್ಷದವರಾಗಿದ್ದಾಗ ಅವರ ಹುಟ್ಟೂರು ವಡ್ನಗರದಲ್ಲಿ ಹೊಸ ರೇಲ್ವೆ ಸ್ಟೇಷನ್ ಕಟ್ಟಿದ್ದು. ಹಾಗಾದರೆ ಮೋದಿ ಚಿಕ್ಕಂದಿನಲ್ಲಿ ಚಹಾ ಮಾರಿದ್ದು ಯಾವ ರೇಲ್ವೆ ಸ್ಟೇಷನ್ನಿನಲ್ಲಿ? ಮೋದಿ 35 ವರ್ಷದವರಾಗಿದ್ದಾಗ ಅವರು ಆರೆಸ್ಸೆಸ್ಸ್ ಸೇರಿ ಅಲ್ಲಿ ಚಡ್ಡಿ ಹಾಕಿ ಹದಿನೈದು ವರ್ಷ ಲಾಠಿ ತಿರುಗಿಸಿದ್ದನ್ನು ದೇಶಸೇವೆ ಅನ್ನಲು ಸಾಧ್ಯವಿಲ್ಲ. ಮೋದಿ ಚಹಾ ಮಾರಿದ್ದು ಸುಳ್ಳು, ಹಿಮಾಲಯದಲ್ಲಿ ತಪಸ್ಸು ಮಾಡಿದ್ದು ಸುಳ್ಳು, ಮೊಸಳೆಯೊಂದಿಗೆ ಹೊಡೆದಾಡಿದ್ದು ಸುಳ್ಳು, ಬಡತನದಿಂದ ಬಳಲಿದ್ದು ಸುಳ್ಳು. ಹೀಗೆ ಸುಳ್ಳುಗಳ ಸರಮಾಲೆ ಹೆಣೆದು ಸೋಷಿಯಲ್ ಮೀಡಿಯಾದಲ್ಲಿ ಮತ್ತು ಪೇಡ್ ಪತ್ರಿಕೆಗಳಲ್ಲಿ ಈ ಕಟ್ಟುಕಥೆಗಳನ್ನು ಹರಡಿಯೇ 2014 ರಲ್ಲಿ ಮೋದಿ ಭಾರತೀಯ ಮತದಾರರ ಸಹಾನುಭೂತಿ ಗಳಿಸಿದ್ದು. ಈಗ ಸತ್ಯ ಹೊರಬಂದ ಮೇಲಾದರೂ ಮತದಾರರು ಕಣ್ಣು ತರೆಯುವರೇ?
ಟಿ‌ವಿಯಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ವೇದಿಕೆಯಲ್ಲಿ ಜೋರು ಜೋರಾಗಿ ಅಳುತ್ತಾ ತಮ್ಮ ಜೀವನದ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುವ ಹುಡುಗ-ಹುಡುಗಿಯರನ್ನು ಎಲ್ಲರೂ ನೋಡಿರುವರು. ಆದರೆ ಈ ಸ್ಪರ್ಧಿಗಳಲ್ಲಿ ಹೆಚ್ಚಿನವರು ನಿಜ ಜೀವನದಲ್ಲಿ ಯಾವುದೇ ಕಷ್ಟ ಕಾರ್ಪಣ್ಯ ಎದುರಿಸಿರುವುದಿಲ್ಲ. ಆದರೂ ಆ ರಿಯಾಲಿಟಿ ಶೋಗಳ ನಿರ್ದೇಶಕರೇ ಈ ಸ್ಪರ್ಧಿಗಳಿಗೆ ಕಾಲ್ಪನಿಕ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ವೀಕ್ಷಕರ ಅತಿ ಹೆಚ್ಚು ಸಹಾನುಭೂತಿ ಗಳಿಸಿ ಟಿ‌ಆರ್‌ಪಿ ಏರಿಸಲು ಸಹಾಯ ಮಾಡಿದರೆ ಮಾತ್ರ ಅವರನ್ನು ಗೆಲ್ಲಿಸುವುದು ಎಂಬ ಅಮಿಷೆ ಒಡ್ಡಿರುತ್ತಾರೆ. ಅದೇ ಪ್ರಕಾರ ಮೋದಿಯ ಜೀವನದ ಕಷ್ಟಕಾರ್ಪಣ್ಯ ಬಡತನ ಎಲ್ಲವೂ ಟಿ‌ವಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಅಳುತ್ತಾ ಹೇಳುವ ಕಥೆಗಳಂತೆ ಶುದ್ಧ ಕಾಲ್ಪನಿಕ. ಅದು ಕೇವಲ ಹೆಂಗರುಳಿನ ಮತದಾರರ ಮನದಲ್ಲಿ ಮೋದಿಯ ಬಗ್ಗೆ ವಯುಕ್ತಿಕವಾಗಿ ಕನಿಕರ ಹುಟ್ಟಿಸಿ ಅವರ ವೋಟು ಸೆಳೆಯಲು ಮಾಡಿರುವ “ಫೇಕೂ ರಿಯಾಲಿಟಿ ಶೋ” ಅಷ್ಟೇ. ನಟ ಭಯಂಕರ, ಅಭಿನಯ ವಿಶಾರದ, ನಟಶೇಖರ, ಕಲಾ ಸಾಮ್ರಾಟ ಮೋದಿಯ ಎದುರು ದಿಲೀಪ್ ಕುಮಾರ್, ಶಿವಾಜಿ ಗಣೇಶನ್, ಎನ್‌ಟಿ‌ಆರ್, ಮಮ್ಮುಟ್ಟಿ, ಕಮಲ ಹಾಸನ್, ನಮ್ಮ ವರನಟ ಡಾ.ರಾಜ್ ಕುಮಾರ್, ಇವರೆಲ್ಲರೂ ಅತ್ಯಂತ ಸಪ್ಪೆಯಾಗಿ ಕಾಣುತ್ತಾರೆ ಪಾಪ!
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...