ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ಮೃತಪಟ್ಟ ರೈತರಿಗೆ ಗೌರವ ಸಲ್ಲಿಸದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ದಾಳಿ ನಡೆಸಿದ್ದಾರೆ. ಹುತಾತ್ಮರಾದ 300 ರೈತರ ನೆನಪಿಗಾಗಿ ಎರಡು ನಿಮಿಷಗಳ ನನ್ನ ಮೌನಾಚರಣೆಯು ಬಿಜೆಪಿಗೆ ಸ್ವೀಕಾರಾರ್ಹವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಆಂದೋಲನದಲ್ಲಿ 300 ರೈತರು ಈವರೆಗೆ ಪ್ರಾಣ ಕಳೆದುಕೊಂಡಿದ್ದು, ರೈತ ಸಂಘಟನೆಗಳು ಇಂದು #300DeathsAtProtest ಎಂಬ ಹ್ಯಾಶ್ಟ್ಯಾಗ್ ಕೀವರ್ಡ್ ಅನ್ನು ನೀಡಿತ್ತು. ಇದನ್ನು ತಮ್ಮ ಟ್ವೀಟ್ನಲ್ಲಿ ಬಳಸಿಕೊಂಡಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆಂದೋಲನದಲ್ಲಿ ಹುತಾತ್ಮರಾಗಿರುವ ರೈತರಿಗೆ ನನ್ನ 2 ನಿಮಿಷಗಳ ಮೌನ ಬಿಜೆಪಿಗೆ ಸ್ವೀಕಾರಾರ್ಹವಲ್ಲ. ನಮ್ಮ ರೈತ ಮತ್ತು ಕಾರ್ಮಿಕರ ತ್ಯಾಗಕ್ಕೆ ನಾನು ಮತ್ತೆ ಮತ್ತೆ ಗೌರವ ಸಲ್ಲಿಸುತ್ತೇನೆ. ಯಾರು ನನ್ನ ಮೌನಾಚರಣೆಗೆ ಹೆದರುತ್ತಾರೋ, ಅವರಿಗೆ ನಾನು ಹೆದರುವುದಿಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
शहीद हुए अन्नदाताओं के लिए मेरा 2 मिनट का मौन भाजपा को स्वीकार नहीं।
अपने किसान-मज़दूर भाइयों के बलिदान को मैं बार-बार श्रद्धांजलि दूँगा।
जो मेरे मौन से डरते हैं, मैं उनसे नहीं डरता!#300DeathsAtProtest
— Rahul Gandhi (@RahulGandhi) March 18, 2021
ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ ಹೇರುವುದಿಲ್ಲ- ಸಿಎಂ ಯಡಿಯೂರಪ್ಪ
ಮತ್ತೊಂದು ಟ್ವೀಟ್ನಲ್ಲಿ ಉದ್ಯೋಗ ನಷ್ಟದ ಬಗ್ಗೆ ಅವರು ಮತ್ತೆ ಸರ್ಕಾರದ ಮೇಲೆ ದಾಳಿ ಮಾಡಿದ್ದು, ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಇಪಿಎಫ್ ಖಾತೆಗಳನ್ನು ಮುಚ್ಚಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ.
ಇದು ಬಿಜೆಪಿ ಸರ್ಕಾರದ “ಉದ್ಯೋಗ ನಿರ್ಮೂಲನೆ” ಯ ಮತ್ತೊಂದು ಸಾಧನೆ ಎಂದು ಅವರು ಕಿಡಿ ಕಾರಿದ್ದಾರೆ.
“ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಿದ್ದೀರಿ ಮತ್ತು ನಿಮ್ಮ ಇಪಿಎಫ್ ಖಾತೆಯನ್ನು ಮುಚ್ಚಬೇಕಾಗಿತ್ತು. ಕೇಂದ್ರ ಸರ್ಕಾರದ ‘ಉದ್ಯೋಗ ನಿರ್ಮೂಲನೆ’ ಯ ಮತ್ತೊಂದು ಸಾಧನೆ” ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ತಿಳಿಸಿದ್ದಾರೆ.
आपकी नौकरी गयी और EPF अकाउंट बंद करना पड़ा।
केंद्र सरकार के रोज़गार मिटाओ अभियान की एक और उपलब्धि! pic.twitter.com/MSxyvMeot8
— Rahul Gandhi (@RahulGandhi) March 18, 2021
ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಒಂಬತ್ತು ತಿಂಗಳಲ್ಲಿ 71 ಲಕ್ಷ ಇಪಿಎಫ್ ಖಾತೆಗಳನ್ನು ಮುಚ್ಚಲಾಗಿದೆ ಎಂಬ ಪತ್ರಿಕೆಯೊಂದರ ವರದಿಯನ್ನು ಈ ಟ್ವೀಟ್ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ನಂತರ ತೀರ್ಮಾನ: ಪಿಣರಾಯಿ ವಿಜಯನ್