Homeಮುಖಪುಟಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

- Advertisement -
- Advertisement -

ಇದೇನಿದು ಸೂರ್ಯ ಪಶ್ಚಿಮದಲ್ಲಿ ಹುಟ್ಟಲು ಸಾಧ್ಯವೇ ಅಂತ ಯೋಚನೆ ಮಾಡುತ್ತಿದ್ದಿರಾ? ನಮಗೆ ತಿಳಿದಿರೋ ಹಾಗೆ ಸೂರ್ಯ ಯಾವತ್ತಾದರೂ ಪೂರ್ವ ದಿಕ್ಕಿನಲ್ಲಿ ಹುಟ್ಟುವುದನ್ನೂ ಬಿಟ್ಟು ಬೇರೆ ಯಾವ ದಿಕ್ಕಿನಲ್ಲಾದರೂ ಹುಟ್ಟಿದ್ದಾನೇಯೇ ಅಥವಾ, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದರ ಬಗ್ಗೆ ಯಾವುದಾದರೂ ಪುರಾಣ ಕಥೆಗಳಲ್ಲಾದರೂ ಕೇಳಿದ್ದೇವೆಯೇ? ಬಹುಶಃ ಇಲ್ಲ! ನಮ್ಮ ಎಲ್ಲಾ ಕಾಲದ ಗ್ರಹಿಕೆಯಲ್ಲಿ, ಭೂಮಿಯ ಮೇಲೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದೇ ನಮ್ಮ ತಿಳಿವಳಿಕೆ ಅಲ್ಲವೇ? ಭೂಮಿಯಲ್ಲೇನೋ ಈ ಪ್ರಕ್ರಿಯೆ ಸರಿ, ನಮ್ಮ ಸೌರಮಂಡಲದ ಇತರೆ ಗ್ರಹಗಳಲ್ಲೂ ಸೂರ್ಯ ಪೂರ್ವ ದಿಕ್ಕಿನಲ್ಲಿಯೇ ಹುಟ್ಟುತ್ತಾನಾ? ಇಂತಹ ಪ್ರಶ್ನೆಗಳೂ ನಿಮ್ಮಲ್ಲೂ ಹುಟ್ಟಿರಬಹುದು ಅಲ್ಲವೇ?

ಅದಕ್ಕೂ ಮುಂಚೆ, ಈ ಪ್ರಶ್ನೆ ಕೇಳಿಕೊಳ್ಳೋಣ. ನಮ್ಮ ಸೌರಮಂಡಲದಲ್ಲಿ ಭೂಮಿಯ ಗಾತ್ರದಲ್ಲೇ ಇರುವ ಮತ್ತೊಂದು ಗ್ರಹ ಯಾವುದು? ನಿಮ್ಮ ಊಹೆ ಶುಕ್ರ ಗ್ರಹವಾಗಿದ್ದರೆ ಅದು ಸರಿ ಉತ್ತರ. ಬನ್ನಿ ಹಾಗಾದರೆ, ಶುಕ್ರ ಗ್ರಹಕ್ಕೆ ಹೋಗಿ, ಅದರ ವಿಶೇಷತೆಯನ್ನು ತಿಳಿದುಬರೋಣ.

ಸೌರಮಂಡಲದಲ್ಲಿ ಶುಕ್ರ, ಬುಧ ಗ್ರಹದ ನಂತರದ ಗ್ರಹ. ಶುಕ್ರ ನಮ್ಮ ಸೌರಮಂಡಲದಲ್ಲೇ ಅತ್ಯಂತ ವಿಶಿಷ್ಟ ಗ್ರಹ. ಈ ಗ್ರಹದ ವಿಶಿಷ್ಟತೆ ತಿಳಿಯುವ ಮೊದಲು ಭೂಮಿಯ ಮೇಲೆ ಸೂರ್ಯ ಏಕೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ ಎನ್ನುವ ವಿಚಾರವನ್ನು ತಿಳಿಯೋಣ.

ಭೂಮಿಯು, ತನ್ನ ಉತ್ತರ ಮತ್ತು ದಕ್ಷಿಣ ಧ್ರುವದ ಮೂಲಕ ಹಾದು ಹೋಗುವ ಕಾಲ್ಪನಿಕ ಅಕ್ಷದ ಸುತ್ತ ತಿರುಗುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಈ ತಿರುಗುವಿಕೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಇದೆ. ಇದನ್ನ Diurnal Motion ಅಂತ ಕರೆಯುತ್ತೇವೆ. ಈ ರೀತಿಯ ತಿರುಗುವಿಕೆಯಿಂದ, ಭೂಮಿಯ ಆಗಸದಲ್ಲಿ ಕಾಣುವ ಎಲ್ಲಾ ಆಕಾಶಕಾಯಗಳು ಅಂದರೆ, ಸೂರ್ಯ, ಚಂದ್ರ, ಗ್ರಹ ಮತ್ತು ನಕ್ಷತ್ರ ಎಲ್ಲವೂ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವಂತೆ ಗೋಚರಿಸುತ್ತವೆ.

ಈಗೆ ಭೂಮಿಯು ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ತಿರುಗಲು ಸುಮಾರು 24 ಗಂಟೆಗಳು ಬೇಕಾಗುತ್ತವೆ. ಇದನ್ನೇ ನಾವು ಒಂದು ಭೂ ದಿನ ಎಂದು ಕರೆಯುತ್ತೇವೆ. ಭೂಮಿಯ ಹಾಗೆ ಇತರೆ ಗ್ರಹಗಳು ಕೂಡ ತನ್ನ ಧ್ರುವಗಳ ಮೂಲಕ ಹಾದು ಹೋಗುವ ಕಾಲ್ಪನಿಕ ಅಕ್ಷದ ಸುತ್ತ ಬೇರೆ ಬೇರೆ ಅವಧಿಯಲ್ಲಿ ತಿರುಗುತ್ತಿವೆ. ಸೌರ ಮಂಡಲದ ಎಲ್ಲಾ ಗ್ರಹಗಳು ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಸುತ್ತುತ್ತಿದ್ದರೆ, ಶುಕ್ರ ಗ್ರಹ ಮಾತ್ರ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ತಿರುಗುತ್ತಿದೆ! (ಯುರೇನಸ್ ಗ್ರಹದ ತಿರುಗುವಿಕೆಯು ವಿಭಿನ್ನವಾಗಿದೆ. ಅದನ್ನು ಮುಂದೊಮ್ಮೆ ಚರ್ಚಿಸೋಣ).

ಶುಕ್ರ ಗ್ರಹವು ಪೂರ್ವದಿಂದ ಪಶ್ಚಿಮಕ್ಕೆ ತನ್ನ ಅಕ್ಷದ ಸುತ್ತ ಸುತ್ತುತ್ತಿರುವ ಕಾರಣದಿಂದ, ಶುಕ್ರ ಗ್ರಹಕ್ಕೆ ಮಾನವನೇನಾದರೂ ಒಂದು ದಿನ ಹೋದರೆ, ಅಲ್ಲಿಯ ಆಕಾಶದಲ್ಲಿ ಎಲ್ಲಾ ಆಕಾಶ ಕಾಯಗಳು ಪಶ್ಚಿಮ ದಿಕ್ಕಿನಲ್ಲಿ ಹುಟ್ಟಿ ಪೂರ್ವ ದಿಕ್ಕಿನಲ್ಲಿ ಮುಳುಗುವುದನ್ನ ಕಾಣುತ್ತಾನೆ. ಹಾಗಾಗಿ ಸೂರ್ಯ ಕೂಡ ಶುಕ್ರ ಗ್ರಹದಲ್ಲಿ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುತ್ತಾನೆ. ಎಷ್ಟು ವಿಸ್ಮಯಕಾರಿ ವಿಷಯ ಅಲ್ಲವೇ?. ಅಂದಹಾಗೆ ಶುಕ್ರ ಗ್ರಹದ ವಿಶೇಷತೆ ಇಲ್ಲಿಗೇ ನಿಲ್ಲುವುದಿಲ್ಲ!

ಶುಕ್ರ ಗ್ರಹ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಬರೋಬ್ಬರಿ 243 ಭೂ ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರ ಅರ್ಥ, ಶುಕ್ರ ಗ್ರಹದ ಒಂದು ದಿನ ಭೂಮಿಯ 243 ದಿನಗಳಿಗೆ ಸಮ ಎಂದು. ಇದರ ಜೊತೆಗೆ, ಶುಕ್ರ ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 225 ಭೂ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾದರೆ, ಇದರ ಅರ್ಥ ಏನನ್ನು ಧ್ವನಿಸುತ್ತದೆ? ಶುಕ್ರ ಗ್ರಹದಲ್ಲಿ ಒಂದು ವರ್ಷಕ್ಕೆ 225 ಭೂ ದಿನಗಳು? ಆದರೆ, ಒಂದು ದಿನಕ್ಕೆ 243 ಭೂ ದಿನಗಳು ಎಂದು?

ಇವೆಲ್ಲವುವನ್ನು ಒಟ್ಟಾರೆಯಾಗಿ ಗಮನಿಸಿದರೆ, ಶುಕ್ರ ಗ್ರಹದಲ್ಲಿ ಒಂದು ದಿನ, ಒಂದು ವರ್ಷಕ್ಕಿಂತಲೂ ಹೆಚ್ಚು! ಅಂದರೆ, ಶುಕ್ರ ಗ್ರಹದಲ್ಲಿ ಒಂದು ದಿನವಾಗಬೇಕೆಂದರೆ, ಒಂದು ವರ್ಷ ಕಳೆದು, 18 ಭೂ ದಿನ ಕಳೆದಾಗ ಒಂದು ದಿನವಾಗುತ್ತದೆ! ಆಶ್ಚರ್ಯವಾದರೂ, ನಭೋ ಮಂಡಲದಲ್ಲಿ ಇಂತಹ ವಿಸ್ಮಯವಾದ ಅಂಶಗಳು ಬಹಳಷ್ಟಿವೆ.

ಸೌರಮಂಡಲದ ಇತರೆ ಗ್ರಹಗಳಿಗೆ ಹೋಲಿಸಿದರೆ, ಶುಕ್ರ ಗ್ರಹದ ಈ ವಿಶಿಷ್ಟವಾದ ತಿರುಗುವಿಕೆಗೆ (ಪಶ್ಚಿಮದಿಂದ ಪೂರ್ವಕ್ಕೆ) ವೈಜ್ಞಾನಿಕ ಕಾರಣಗಳು ಇನ್ನೂ ಅಸ್ಪಷ್ಟವಾಗಿದೆ. ಒಂದು ದೊಡ್ಡ ಆಕಾಶಕಾಯದ ಘರ್ಷಣೆಯಿಂದ ಹಾಗೂ ಸೂರ್ಯನ ಗುರುತ್ವ ಬಲದಿಂದ ಶುಕ್ರ ಗ್ರಹಕ್ಕೆ ಈ ರೀತಿಯ ತಿರುಗುವಿಕೆ ಇರಬಹುದು ಎಂದು ಊಹಿಸಲಾಗಿದೆ.


ಇದನ್ನೂ ಓದಿ: ವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...