Homeಮುಖಪುಟಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

ಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

- Advertisement -
- Advertisement -

ಒಂದು ಪ್ರಸಂಗ: ಅಂದು ಶನಿವಾರ. ಕಿರಣ್ ಮತ್ತು ಆರಿಫ್ ಇಬ್ಬರೂ ಅರ್ಧ ದಿನದ ಶಾಲೆ ಮುಗಿಸಿ, ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ, ಕಿರಣ್ ಆರಿಫ್‌ಗೆ ಹೀಗಂದ: ’ಲೇ, ಆರಿಫ್ ಏನೋ ಇಷ್ಟೊಂದ್ ಬಿಸಿಲಿದೆ ಇವತ್ತು. ಮೈಯಲ್ಲಾ ಚುರ್ ಚುರ್ ಅಂತಿದೆ’. ಅದಕ್ಕೆ ಆರಿಫ್, ’ಏ ಬೇಸಿಗೆ ಕಾಲದಲ್ಲಿ ಬಿಸಿಲು ಬರ್‌ದಿರಾ ಮಳೆನಾ ಬರತ್ತೆ’ ಅಂದಾ. ಕಿರಣ್: ’ಏ ಅದ್ ನನಗೂ ಗೊತ್ತೋ. ಬೇಸಿಗೆ ಕಾಲ ಇದು ಅಂತ. ಆದರೆ, ಅದೆಂಗೋ ಬೇಸಿಗೆ ಕಾಲದಲ್ಲಿ ಬಿಸ್ಲು, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಬರತ್ತೆ? ನಂಗಂತೂ ಇದು ಅರ್ಥಾನೇ ಆಗಿಲ್ಲ. ಆರಿಫ್: ’ಏ ಬಿಡೋ, ನನಗೆ ಈ ವರ್ಷ ಕಾಲಗಳು ಅನ್ನೋ ಪಾಠ ಐತೆ. ಅದನ್ನ ಇನ್ನೂ ಮೇಷ್ಟ್ರು ಪಾಠ ಹೇಳಿಲ್ಲ. ಅವ್ರು ಪಾಠ ಮಾಡಿದ್ಮೇಲೆ ನಾನೇ ನಿನಗೆ ಹೇಳ್ತಿನಿ. ಆದ್ರೇ ಈ ಜೋಸೆಫ್ ಅವ್ನಲ್ಲಾ’. ಕಿರಣ್: ’ಯಾರೇಳು? ಅದೇ ಆ ಪಕ್ದೂರೋನ್ ಅಲ್ವಾ’. ಆರಿಫ್: ’ಹೌದೋ ಅವ್ನೇ, ಅವ್ನು ಒಂದ್ ಕಥೆ ಹೇಳ್ತಿದ್ದಾ.. ಭೂಮಿ ಸೂರ್ಯನ ಸುತ್ತ ಅಂಡಾಕಾರದಲ್ಲಿರುವ ಕಕ್ಷೆಯಲ್ಲಿ ಸುತ್ತುತ್ತಿರಬೇಕಾದ್ರೆ, ಸೂರ್ಯನಿಗೆ ಹತ್ತಿರ ಬಂದಾಗ ಬೇಸಿಗೆ ಕಾಲ, ದೂರ ಹೊದಾಗ ಮಳೆಗಾಲ ಅಂತ. ಅದೆ ಇರಬೇಕೆನೊ!’.

ಈ ಪ್ರಸಂಗದಲ್ಲಿ ಆರಿಫ್ ಹೇಳಿದ ಉತ್ತರ ನಿಮಗೆ ಸರಿ ಅನ್ನಿಸತ್ತಾ? ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ಭೂಮಿಗೆ ಶಾಖವು ಹೆಚ್ಚಿರುತ್ತದೆ ಹಾಗಾಗಿ ಬೇಸಿಗೆ ಕಾಲ ಬರುತ್ತದೆ ಎಂಬ ಈ ವಿವರಣೆ ಸರಿಯೇ? ಅಥವಾ ತಪ್ಪೇ? ನಿಮಗೂ ಕೂತಹಲ ಹೆಚ್ಚುತ್ತಿರಬೇಕಲ್ಲವಾ?

ನಮಗೆಲ್ಲರಿಗೂ ತಿಳಿದಿರುವಹಾಗೆ ಭೂಮಿ ಸೂರ್ಯನ ಸುತ್ತ ಗೋಳಾಕಾರದಲ್ಲಿ ಸುತ್ತುತ್ತಿದೆ. ಅಲ್ಲದೇ, ಆ ಗೋಳಾಕಾರಕ್ಕೆ ಎರಡು ಕೇಂದ್ರ ಬಿಂದು ಇದ್ದು, ಸೂರ್ಯನು ಒಂದು ಕೇಂದ್ರ ಬಿಂದುವಿನಲ್ಲಿದ್ದಾನೆ ಎಂಬುದು ತಿಳಿದಿದೆ. ಹಾಗಿದ್ದಾಗ, ಭೂಮಿಯು ಸೂರ್ಯನ ಸುತ್ತ ಸುತ್ತವಾಗ, ವರ್ಷದ ಕೆಲವು ತಿಂಗಳು ಸೂರ್ಯನಿಂದ ದೂರ ಮತ್ತು ಕೆಲವು ತಿಂಗಳು ಸೂರ್ಯನ ಹತ್ತಿರ ಬರುವುದು ಸಹಜ. ಆದರೆ, ಭೂಮಿಯು ಸೂರ್ಯನಿಂದ ದೂರವಿದ್ದಾಗಿನ ಅಂತರ ಮತ್ತು ಹತ್ತಿರವಿದ್ದಾಗಿನ ಅಂತರವನ್ನು ತೆಗೆದುಕೊಂಡು ಅದರ ವ್ಯತ್ಯಾಸ ನೋಡಿದರೆ, ಕೇವಲ ಶೇ.2ರಷ್ಟು ಮಾತ್ರ ಬದಲಾಗುತ್ತದೆ. ಅಂದರೆ, ಖಗೋಳ ವಿಜ್ಞಾನದ ಮಾಪನದಲ್ಲಿ ಶೇ.೨ರಷ್ಟು ವ್ಯತ್ಯಾಸ ಅತೀ ಕಡಿಮೆಯದ್ದು. ಇದು ಭೂಮಿಗೆ ಭೌತಿಕವಾಗಿ ಅಥವಾ ಭೂಮಿಯ ವಾತಾವರಣಕ್ಕೆ ಯಾವ ಬದಲಾವಣೆಯನ್ನು ತರುವುದಿಲ್ಲ. ಈ ಅಂತರವು ಭೂಮಿಯಲ್ಲಿ ಬೇಸಿಗೆ ಕಾಲ, ಚಳಿ ಕಾಲ ಮತ್ತು ಮಳೆ ಕಾಲ ಎಂಬ ಯಾವ ಋತು ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಹಾಗಾದರೆ, ಭೂಮಿಯ ಮೇಲೆ ಕಾಲಗಳು (seasons) ಹೇಗೆ ಉಂಟಾಗುತ್ತವೆ?

ಭೂಮಿಯ ಮೇಲೆ ವಿವಿಧ ಕಾಲಗಳು ಉಂಟಾಗಲು ಕಾರಣ ಭೂಮಿ ಸೂರ್ಯನಿಂದ ಹತ್ತಿರ ಮತ್ತು ದೂರ ಹೋಗುವುದರಿಂದಲ್ಲ ಬದಲಾಗಿ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಕಕ್ಷೆಯ ಲಂಭಕ್ಕೆ, ಭೂಮಿಯ ಅಕ್ಷವು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ ಮತ್ತು ಭೂಮಿ ಸೂರ್ಯನ ಸುತ್ತು ಸುತ್ತುತ್ತಿದ್ದರೂ ಈ ಕೋನವು ಒಂದೇ ದಿಕ್ಕನಲ್ಲಿ ಮುಖ ಮಾಡಿರುತ್ತದೆ. ಈ ಕೋನದಿಂಲೇ, ಭೂಮಿಯ ಮೇಲೆ ಕಾಲಗಳು (seasons) ಬದಲಾಗುವುದು.

ಮತ್ತೊಂದು ವಿಸ್ಮಯದ ವಿಚಾರವೇಂದರೆ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ ಇರುವಾಗ ಅಂದರೆ ನಮಗೆ ಬೇಸಿಗೆ ಕಾಲ ಇರುವಾಗ, ಭೂಮಿಯು ಸೂರ್ಯನಿಂದ ದೂರದಲ್ಲಿರುತ್ತಾನೆ! ಆದರೂ ನಮಗೆ ಬೇಸಿಗೆ ಕಾಲವಿರುತ್ತದೆ. ಏಕೆಂದರೆ, ಈ 23.5 ಡಿಗ್ರಿ ಕೋನವು ಆ ಸ್ಥಾನದಲ್ಲಿ ಸೂರ್ಯವಿರುವ ದಿಕ್ಕೆಗೆ ಬಾಗಿದ್ದು, ಉತ್ತರ ಗೋಳದಲ್ಲಿ ಸೂರ್ಯನ ಕಿರಣ ನೇರವಾಗಿ ಬೀಳುತ್ತಿರುತ್ತದೆ, ದಕ್ಷಿಣ ಗೋಳದಲ್ಲಿ ನೇರವಾಗಿ ಬೀಳದೆ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಬಾಗಿರುತ್ತದೆ. ಆದುದರಿಂದ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ, ದಕ್ಷಿಣ ಗೋಳದಲ್ಲಿ ಚಳಿಗಾಲ! ಹಾಗಾಗಿ, ಯಾವುದೇ ಸಂದರ್ಭದಲ್ಲಿ, ಭೂಮಿಯ 23.5 ಡಿಗ್ರಿ ಭಾಗುವಿಕೆಯ ಕಾರಣದಿಂದಾಗಿ, ಭೂಮಿಯ ಉತ್ತರ ಗೋಳದಲ್ಲಿ ಯಾವ ಕಾಲವಿರುವುದೋ, ದಕ್ಷಿಣ ಗೋಳದಲ್ಲಿ ಅದರ ವಿರುದ್ಧ ಕಾಲವಿರುತ್ತದೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...