Homeಮುಖಪುಟಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ‘ಸಂಕೇಶ್ವರ್‌’!

ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ‘ಸಂಕೇಶ್ವರ್‌’!

- Advertisement -
- Advertisement -

ಲಿಂಬೆ ಹಣ್ಣು ಚಿಕಿತ್ಸೆಯ ಸಲಹೆ ನೀಡಿದ ಮಾಧ್ಯಮೋದ್ಯಮಿ ವಿಜಯ್ ಸಂಕೇಶ್ವರ್, ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ಎನ್ನುವುದನ್ನು ಬಹಳ ಮಂದಿ ಮರೆತುಬಿಟ್ಟಿದ್ದಾರೆ.

ಮೊದಲನೆಯದಾಗಿ, ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದ ಕನ್ನಡ ಮಾಧ್ಯಮ‌ ಕ್ಷೇತ್ರವನ್ನು ಪತ್ರಿಕಾ ಧರ್ಮವನ್ನೇ ಮರೆತ ಕೇವಲ ಲಾಭ-ನಷ್ಟದ ವ್ಯಾಪಾರವನ್ನಾಗಿ‌ ಮಾಡಿದವರು ಸಂಕೇಶ್ವರ್. ಇಂಗ್ಲೀಷ್‌ ಮಾಧ್ಯಮದಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಾರಂಭಿಸಿದ್ದ ಬೆಲೆ‌ ಸಮರದ ಅನಾರೋಗ್ಯ‌ ಪೈಪೋಟಿಯ ವ್ಯಾಪಾರಿ ತಂತ್ರವನ್ನು‌ ವಿಜಯ ಕರ್ನಾಟಕದ ಮೂಲಕ ಕರ್ನಾಟಕಕ್ಕೆ ಪರಿಚಯಿಸಿದವರು ಸಂಕೇಶ್ವರ್. (ಒಂದು ರೂಪಾಯಿಗೆ ಪತ್ರಿಕೆ, ಪತ್ರಿಕೆಯ ಜೊತೆ ಏನೇನೋ‌ ಗಿಪ್ಟ್‌ಗಳ‌ ಆಮಿಷ ಇತ್ಯಾದಿ)

ಎರಡನೆಯದಾಗಿ ಪತ್ರಿಕೆಗೆ ಓದುಗರನ್ನು ಸೆಳೆಯಲು ತನ್ನ ಜಾತಿಯನ್ನು ದುರ್ಬಳಕೆ‌ ಮಾಡಿಕೊಂಡವರು ಸಂಕೇಶ್ವರ್. ಬ್ರಾಹ್ಮಣರು ಸಂಪಾದಕೀಯ ವಿಭಾಗದಲ್ಲಿ ಪಾರುಪತ್ಯ ನಡೆಸುತ್ತಿದ್ದರೂ‌, ಜನಸಂಖ್ಯಾ ಬಲ ಇಲ್ಲದ ಬ್ರಾಹ್ಮಣ ಸಂಪಾದಕರಿಗಾಗಲಿ, ಮಾಧ್ಯಮ ಮಾಲೀಕರಾಗಾಲಿ ತನ್ನ ಜಾತಿ ಬಲದ ಮೂಲಕ‌‌ ಪ್ರಸಾರದ ಸಂಖ್ಯೆಯನ್ನು ಹೆಚ್ಚು‌ಮಾಡಲು ಸಾಧ್ಯವಾಗಿರಲಿಲ್ಲ. ಅಂತಹದ್ದೊಂದು ಕೆಟ್ಟ ಪರಂಪರೆಯನ್ನು ಸಂಕೇಶ್ವರ್ ಪ್ರಾರಂಭಿಸಿದರು. ಲಿಂಗಾಯತ ಸ್ವಾಮಿಗಳು,‌ಮಠಗಳು ಮತ್ತು‌ ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಇದಕ್ಕಾಗಿ‌ ಬಳಸಿಕೊಂಡರು.

ಇದನ್ನೂ ಓದಿ: ಸಂಕೇಶ್ವರರ ‘ನಿಂಬೆ’ ಸಲಹೆ ಪಾಲಿಸಿ ಎಂದ ಬಿಜೆಪಿ ಸಂಸದ; ಅವೈಜ್ಞಾನಿಕತೆ ಹರಡುತ್ತಿದ್ದಾರೆಂದು ಆಕ್ರೋಶ

ಮೂರನೆಯದಾಗಿ, ಪತ್ರಿಕೆಯನ್ನು ಮುಜುಗರ ಇಲ್ಲದೆ ನೇರವಾಗಿ ತನ್ನ ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡವರು ಕೂಡಾ ಸಂಕೇಶ್ವರ್. ಪತ್ರಿಕೆಯ ಮೂಲಕವೇ ಅವರ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಸಂಸತ್ ಪ್ರವೇಶಿಸಿದ ಸಂಕೇಶ್ವರ್ ಕೊನೆಗೆ ಅಧಿಕಾರದ ಮತ್ತಿನಿಂದ ಸ್ವಂತ ಪಕ್ಷ ಕಟ್ಟಿ‌ ಮುಖ್ಯಮಂತ್ರಿಯಾಗಲು ಹೊರಟು ಬುದ್ದಿ ಕಲಿತು ಮತ್ತೆ‌ ಬಿಜೆಪಿ ಸೇರಿಕೊಂಡರು.

ನಾಲ್ಕನೆಯದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಹಲವಾರು ‘ಪತ್ರಕರ್ತ ರತ್ನ’ ಗಳನ್ನು‌ ನೀಡಿದವರು‌ ಕೂಡಾ ಸಂಕೇಶ್ವರ್. ಅವರಲ್ಲಿ ವಿಶ್ವೇಶ್ವರ ಭಟ್, ತಿಮ್ಮಪ್ಪ ಭಟ್, ಹರಿಪ್ರಕಾಶ ಕೋಣೆಮನೆ ಮೊದಲಾದವರು ಪ್ರಮುಖರು. ಇಂದಿನ‌‌ ಕನ್ನಡ ಪತ್ರಿಕೆಗಳಲ್ಲಿ ಈ ಭಟ್ರುಗಳ ಶಿಷ್ಯಗಣವೇ ತುಂಬಿವೆ.

ಕೊನೆಗೂ ಸಂಕೇಶ್ವರ್ ಅವರಿಗೆ ತನ್ನ ಜಾತಿಯ ನಾಲ್ಕು ಒಳ್ಳೆಯ ಪತ್ರಕರ್ತರನ್ನು‌ ರೂಪಿಸಲು‌ ಕೂಡಾ ಸಾಧ್ಯವಾಗಿಲ್ಲ. ರವಿ ಬೆಳಗೆರೆ,‌ ಚಕ್ರವರ್ತಿಯಂತಹವರಿಗೆ ಮುಖ್ಯವಾಹಿನಿ ಮಾಧ್ಯಮದಲ್ಲಿ ಮಾನ್ಯತೆ ನೀಡಿದವರು ಕೂಡಾ ಸಂಕೇಶ್ವರ್. ಈ ರೀತಿ ಕನ್ನಡ ಪತ್ರಿಕೋದ್ಯೋಗವನ್ನು ವ್ಯಾಪಾರ, ಜಾತಿ ಮತ್ತು ರಾಜಕೀಯದ ಕೆಸರಲ್ಲಿ ಮುಳುಗಿಸಿದವರು ಸಂಕೇಶ್ವರ್.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?

ಉದ್ಯಮವಾಗಿ ಬದಲಾಗುತ್ತಿದ್ದ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಸಂಕೇಶ್ವರ್ ಅವರಂತಹ ಚಾಣಾಕ್ಷ್ಯ ಉದ್ಯಮಿಯ ಅಗತ್ಯ ಖಂಡಿತ ಇತ್ತು. ಸಂಕೇಶ್ವರ್ ಅಂತಹ ಒಂದು ನಿರ್ವಾತವನ್ನು ತುಂಬಬಹುದೆಂಬ ನಿರೀಕ್ಷೆ ಇತ್ತು. ಅವರು ಕನ್ನಡ ಓದುಗರ ಸಂಖ್ಯೆಯನ್ನು ಬೆಳೆಸಿದರು, ಹೊಸ ಪ್ರಯೋಗಳಿಗೆ ಕನ್ನಡ ಮಾಧ್ಯಮವನ್ನು ತೆರೆದರು ಎನ್ನುವುದು ನಿಜ,‌ಇದು ಅವರ ಕೊಡುಗೆಯೂ ಹೌದು.

ಇದರ ಜೊತೆಗೆ ಕನ್ನಡ ಪತ್ರಿಕೆಗಳನ್ನು ಸಂಪೂರ್ಣ ವ್ಯಾಪಾರದ ಸರಕನ್ನಾಗಿ‌ ಮಾಡಿದ ಮತ್ತು ಸಮಾಜದಲ್ಲಿ ಪತ್ರಕರ್ತರಿಗಿದ್ದ ಗೌರವ‌ ಕಳೆದುಕೊಳ್ಳುವಂತೆ ಮಾಡಿದ ಕೀರ್ತಿಯೂ ಅವರಿಗೆ‌ ಸಲ್ಲುತ್ತದೆ.

ನನ್ನ ಪ್ರಕಾರ ಸಂಕೇಶ್ವರ್ ಅವರಿಗೆ ಪತ್ರಕರ್ತರ ಬಗ್ಗೆ ದ್ವೇಷ ಇಲ್ಲದೆ ಇದ್ದರೂ ವಿಶೇಷ ಗೌರವ ಖಂಡಿತ ಇಲ್ಲ. ಅವರು ಪತ್ರಿಕೆ ಪ್ರಾರಂಭಿಸಿದ ಹೊಸತರಲ್ಲಿ ಯಾರ ಜೊತೆಯಲ್ಲಿಯೋ ಮಾತನಾಡುತ್ತಾ “ನಮ್ಮ ಲಾರಿ ಚಾಲಕರ ಸಂಬಳಕ್ಕಿಂತಲೂ ಕಡಿಮೆ ಸಂಬಳಕ್ಕೆ ಪತ್ರಕರ್ತರು ಕೆಲಸಕ್ಕೆ ಸಿಗ್ತಾರೆ ಎಂದು ನನಗೆ ಗೊತ್ತಿರಲಿಲ್ಲ” ಎಂದು‌ ನಕ್ಕಿದ್ದರಂತೆ. ಈ ಕಾರಣದಿಂದಾಗಿಯೋ ಏನೋ, ಈಶ್ವರ್ ದೈದೋಟ, ಮಹದೇವಪ್ಪ, ಕೃಷ್ಣ ಪ್ರಸಾದ್, ಜಯಂತ್ ಕಾಯ್ಕಿಣಿಯಂತಹವರು ಕೂಡಾ ಬಹಳ ದಿನ ಅವರ ಬಳಿ ಉಳಿಯಲಿಲ್ಲ.

ತಪ್ಪು‌ ಖಂಡಿತ ಅವರದ್ದಲ್ಲ, ಅವರ ಸಾರಥ್ಯದ ಪತ್ರಿಕೆ ಮತ್ತು ಟಿ.ವಿ ಚಾನೆಲ್‌ಗಳನ್ನು ಕನ್ನಡದ ಜನ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಬಡವರ ಬಗೆಗಿನ ತಮ್ಮ ತಿರಸ್ಕಾರ ಮತ್ತು ಕೊರೊನಾಕ್ಕೆ ತಾವು ಕಂಡು ಹಿಡಿದ ಲಿಂಬೆಹುಳಿ ಚಿಕಿತ್ಸೆಯನ್ನೂ ಒಪ್ಪಿಕೊಳ್ಳಬಹುದೆಂಬ ಭರವಸೆಯಿಂದ ಮಾತನಾಡಿದ್ದಾರೆ.

ಇದನ್ನೂ ಓದಿ: ಭಾರತೀಯ ವಿಜ್ಞಾನಿ ‘Ramesh EM Desigan’ ಗೌರವಾರ್ಥ ಆ್ಯಂಟಿ ವೈರಲ್‌ ಲಸಿಕೆಗೆ ‘Remdesivir’ ಎಂದು ನಾಮಕರಣ ಮಾಡಲಾಯಿತೆ?

(ಅಭಿಪ್ರಾಯ ಲೇಖಕರ ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತುಂಬಾ ಉತ್ತಮ ಬರಹ. ಕನ್ನಡ ಪತ್ರಿಕೋದ್ಯಮದ ಇಂದಿನ ಅಧೋಗತಿಯ ಕುರಿತು ಒಂದಿಷ್ಟು ಕಾಲ ವಿಜಯ ಸಂಕೇಶ್ವರ ಮೀಸಲಿರಿಸಿ, ಆತ್ಮಾವಲೋಕನ ಮಾಡಿಕೊಳ್ಳಲಿ. ಪತ್ರಿಕೋದ್ಯಮದ ಮೂಲಕ ಅವರು ಶತದಡ್ಡ ಶಿಖಾಮಣಿಗಳನ್ನೇ ಹಾಗೂ ತಲೆಯಲ್ಲಿ ಜಾತಿಯ ಹೆಂಡಿ ಬಿಟ್ಟರೆ ಮತ್ತೇನೂ ಇರದ ಎಡಬಿಡಂಗಿಗಳನ್ನೇ ಶ್ರೇಷ್ಠ ಪತ್ರಕರ್ತರೆಂದು ತಿಳಿದು ಬೆಳೆಸಿದ್ದಕ್ಕೆ ಕನ್ನಡ ಪತ್ರಿಕೋದ್ಯಮದ ಗುಣಮಟ್ಟವೂ ಒಂದಿಷ್ಟು ಕುಸಿಯಲು ಕಾರಣ. ಇದು, ಕನ್ನಡ ಪತ್ರಿಕೋದ್ಯಮದಲ್ಲಾದ ಬಹು ದೊಡ್ಡ ಅಪರಾಧ. ಇದಕ್ಕೂ, ವಿಜಯ ಸಂಕೇಶ್ವರ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...