Homeಅಂತರಾಷ್ಟ್ರೀಯಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

- Advertisement -
- Advertisement -

ಈಗ ಫ್ರೆಂಚ್ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಮೋದಿಯವರ ಅಸಮರ್ಥತೆಯ ಕುರಿತು ಟೀಕೆ ಬಂದಿದೆ. ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮೂರು ದಿನದ ಹಿಂದೆ ಆಸ್ಟ್ರೇಲಿಯಾದ ಪತ್ರಿಕೆಯೊಂದು, ‘ಮೋದಿ ಭಾರತವನ್ನು ವೈರಲ್ ವಿನಾಶದ ಕಡೆ ಒಯ್ಯುತ್ತಿದ್ದಾರೆ’ ಎಂದು ಬರೆದಾಗ, ನಮ್ಮ ವಿದೇಶಾಂಗ ಇಲಾಖೆಯು ಇದಕ್ಕೆ ಆಕ್ಷೇಪಿಸಿ, ‘ಮೋದಿ ಸರಿಯಾದ ದಾರಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಬೋಧನೆ ಮಾಡಿತ್ತು. ಆದರೆ, ಈ ಅಸಹಜ ಆಕ್ಷೇಪವನ್ನು ನಿರ್ಲಕ್ಷಿಸಿದ ವಿದೇಶಿ ಮಾಧ್ಯಮಗಳು ಮೋದಿ ವೈಫಲ್ಯ ಕುರಿತು ಬರೆಯುವುದನ್ನು ಮುಂದುವರೆಸಿವೆ.

ಕಳೆದ ವಾರ ದಿ ಗಾರ್ಡಿಯನ್ ಪತ್ರಿಕೆ ಮೋದಿ ವೈಫಲ್ಯವೇ 2ನೆ ಅಲೆಗೆ ಕಾರಣ ಎಂದು ಸಂಪಾದಕೀಯ ಬರೆದಿತ್ತು. ವಾಷಿಂಗ್ಟನ್ ಪೋಸ್ಟ್ ಒಂದು ಪುಟದ ಲೇಖನದಲ್ಲಿ ಮೋದಿಯ ಅಸಮರ್ಥ ಆಡಳಿತವನ್ನು ಮತ್ತು ಭಾರತದ ಕೋವಿಡ್ ದುರಂತವನ್ನು ವಿವರಿಸಿತ್ತು.
ಬುಧವಾರ ಫ್ರೆಂಚ್ ಪತ್ರಿಕೆ ‘ಲೆ ಮಾಂಡೆ’, ಮೋದಿಯವರ ದುರಂಹಕಾರ ಮತ್ತು ವಾಕ್ಚಾತುರ್ಯ ಭಾರತದಲ್ಲಿ ಕೋವಿಡ್ 2ನೇ ಅಲೆ ಸಂಭವಿಸಲು ಮತ್ತು ತೀವ್ರವಾಗಲು ಕಾರಣವಾಗಿದೆ’ ಎಂದು ಟೀಕಿಸಿದೆ.

ಆಸ್ಪತ್ರೆಗಳ ಎದುರು ಆಂಬ್ಯುಲೆನ್ಸ್‌ಗಳ ಸಾಲುಗಳು, ಅನಾರೋಗ್ಯ ಪೀಡಿತರ ಸಂಬಂಧಿಕರು ಆಮ್ಲಜನಕಕ್ಕಾಗಿ ಗೋಗರೆಯುವುದು ಮತ್ತು ಸಾಮೂಹಿಕ ಶವಸಂಸ್ಕಾರಗಳು ಸುಳ್ಳಾಗುವುದಿಲ್ಲ. ಅವು ಕಣ್ಣಿಗೆ ರಾಚುತ್ತಿವೆ ಎಂದು ಸಂಪಾದಕೀಯ ಹೇಳಿದೆ.

“ನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ, ಶ್ರೀಮಂತರಿಂದ ಬಡವರವರೆಗೆ, ಈ ‘ಹತ್ಯಾಕಾಂಡ’ವು ಯಾರನ್ನೂ ಬಿಡುತ್ತಿಲ್ಲ. ಫೆಬ್ರವರಿ ತನಕ ಕ್ಷೀಣಿಸುತ್ತಾ ಬಂದ ಹೊಸ ಸೋಂಕಿನ ರೇಖೆಯು (curve) ಈಗ ಬಹುತೇಕ ಲಂಬವಾಗಿದೆ” ಎಂದು ಲೆ ಮಾಂಡೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

“ವೈರಸ್ ಮತ್ತು ಅದರ ರೂಪಾಂತರಗಳ ಅನಿರೀಕ್ಷಿತ ದಾಳಿ ಎಂಬ ಏಕಮಾತ್ರ ಹೇಳಿಕೆಯಿಂದ ಈ ನಿರ್ವಹಣಾ ವೈಫಲ್ಯವನ್ನು ವಿವರಿಸಲಾಗುವುದಿಲ್ಲ. ನರೇಂದ್ರ ಮೋದಿಯವರ ಮುಂಗಾಣುವಿಕೆ-ದೂರದರ್ಶಿತ್ವದ (ಪ್ರಿಡಿಕ್ಸನ್) ಕೊರತೆ, ದುರಹಂಕಾರ ಮತ್ತು ಮಾತಿನ ಮೋಡಿ-ಇವೆಲ್ಲವೂ ಇಂದಿನ ಸ್ಥಿತಿಗೆ ಕಾರಣವಾಗಿವೆ. ಹೀಗಾಗಿ ಈಗ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಅಂತಾರಾಷ್ಟ್ರೀಯ ಸಹಕಾರ-ಸಂಪನ್ಮೂಲಗಳ ಅಗತ್ಯ ಬಿದ್ದಿದೆ” ಎಂದು ಸಂಪಾದಕೀಯ ವಿಮರ್ಶಿಸಿದೆ.

ಪ್ರಧಾನ ಮಂತ್ರಿ ಮೋದಿಯವರು ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಆರಂಭದಲ್ಲಿ, ಯಾವುದೇ ಸಿದ್ಧತೆಯಿಲ್ಲದೇ ಏಕಾಏಕಿ ಕ್ರೂರ ಲಾಕ್ ಡೌನ್ ವಿಧಿಸುವ ಮೂಲಕ, ಲಕ್ಷಾಂತರ ವಲಸೆ ಕಾರ್ಮಿಕರ ಬದುಕುಗಳನ್ನು ಮೂರಾಬಟ್ಟೆ ಮಾಡಿದರು. 2021ರ ಆರಂಭದಲ್ಲಿ ಕೋವಿಡ್ ಕುರಿತು ಅವರು ಚಿಂತಿಸಲೇ ಇಲ್ಲ’ ಎಂದು ಸಂಪಾದಕೀಯ ಟೀಕಿಸಿದೆ,

“ಆರೋಗ್ಯ ತಜ್ಞರ ಸಲಹೆ ನಿರ್ಲಕ್ಷಿಸಿ ರಾಷ್ಟ್ರೀಯತಾವಾದಿ ಉಪದೇಶಗಳಿಗೆ ಆದ್ಯತೆ ನೀಡುತ್ತ, ಜನರನ್ನು ರಕ್ಷಿಸುವುದಕ್ಕಿಂತ ಸ್ವಯಂ ಸಂಭ್ರಮಕ್ಕೆ ಹೆಚ್ಚು ಒಲವು ತೋರುತ್ತ ಬಂದ ಮೋದಿ ಅವರು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರು” ಎಂದು ಪತ್ರಿಕೆ ಹೇಳಿದೆ. ಚುನಾವಣಾ ಪ್ರಚಾರ ಮತ್ತು ಕುಂಭಮೇಳವನ್ನು ಉಲ್ಲೇಖಿಸಿ, ‘ಇದು ಗಂಗಾ ನೀರನ್ನು (ನದಿಪ್ರದೇಶವನ್ನು) ಸಾಂಕ್ರಾಮಿಕದ ಬೃಹತ್ ತಾಣವನ್ನಾಗಿ ಪರಿವರ್ತಿಸಿತು’ ಎಂದು ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕೀಯವು ಮೋದಿಯವರ ಹೆಚ್ಚು ಪ್ರಚಾರ ಪಡೆದ ಲಸಿಕೆ ಕಾರ್ಯತಂತ್ರವನ್ನು ಒಡೆದು ಹಾಕಿದೆ. ಲಸಿಕೆ ರಾಜತಾಂತ್ರಿಕತೆಯು ತಮ್ಮ ಮಹತ್ವಾಕಾಂಕ್ಷೆಗಳಿಗೆ ಅಧೀನವಾಗಿದೆ ಎಂದು ನಂಬಿದ ಮೋದಿ, ದೇಶದ ಉತ್ಪಾದನಾ ಸಾಮರ್ಥ್ಯದ ವಾಸ್ತವತೆಯನ್ನು ಕಡೆಗಣಿಸಿದರು ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

ಸೋಮವಾರ, ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತೀಯ ನಾಯಕತ್ವದ-ಮೋದಿಯವರ- ವೈಫಲ್ಯ ಟೀಕಿಸಿದ ಆಸ್ಟ್ರೇಲಿಯಾದ ಪತ್ರಿಕೆಗೆ ಪತ್ರವೊಂದನ್ನು ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ, ವಿದೇಶಿ ಪ್ರಕಟಣೆಗಳಲ್ಲಿ ನಕಾರಾತ್ಮಕ ಸುದ್ದಿಗಳು ಬಂದಾಗ ಹೀಗೆ ಆಕ್ಷೇಪ ಸಲ್ಲಿಸಲಾಗುತ್ತಿತ್ತು.

ಭಾರತೀಯ ರಾಯಭಾರಿ ಕಚೇರಿಯು, ಆಸ್ಟ್ರೇಲಿಯಾ ಪತ್ರಿಕೆಯ ಲೇಖನವನ್ನು “ಆಧಾರರಹಿತ, ದುರುದ್ದೇಶಪೂರಿತ ಮತ್ತು ಅಪಪ್ರಚಾರ” ಎಂದು ವಿವರಿಸಿತ್ತು. ಈಗ ಫ್ರೆಂಚ್ ಪತ್ರಿಕೆ ಸಂಪಾದಕೀಯಕ್ಕೂ ಭಾರತ ಆಕ್ಷೇಪ ಸಲ್ಲಿಸುವುದೇ?


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಯಾರೋ ಒಬ್ಬರು ಅದ್ಭುತವಾಗಿ ಹೇಳಿದ್ದಾರೆ.

    ಕೊರೋನಾದಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಒಂದು ವೇಳೆ ಬಿಜೆಪಿ ರಕ್ಷಿಸುತ್ತಿದ್ದರೆ ಮಧ್ಯಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಒಂದು ವೇಳೆ ಕಾಂಗ್ರೆಸ್ ರಕ್ಷಿಸುತ್ತಿದ್ದರೆ ಇದು ಛತ್ತೀಸಗಡದಲ್ಲಿ ಹರಡುತ್ತಿರಲಿಲ್ಲ. ಶಿವಸೇನೆ ಯೋಗ್ಯ ಅನ್ನುವುದಾದರೆ ಮಹಾರಾಷ್ಟ್ರ ದಲ್ಲಿ ಹರಡುತ್ತಿರಲಿಲ್ಲ. ಕೇಜ್ರಿವಾಲ ಯೋಗ್ಯನಾಗಿದ್ದರೆ ದೆಹಲಿಯಲ್ಲಿ ಹರಡುತ್ತಿರಲಿಲ್ಲ. ಯೋಗಿ ಯೋಗ್ಯನೆಂದರೆ ಉತ್ತರ ಪ್ರದೇಶದಲ್ಲಿ ಹರಡುತ್ತಿರಲಿಲ್ಲ. ಮೋದಿಯವರು ಶಕ್ತಿವಂತನೆನ್ನುವುದಾದರೆ ಭಾರತದಲ್ಲಿ ಹರಡುತ್ತಿರಲಿಲ್ಲ. ಹೀಗಾಗಿ ಕೊರೋನಾ ಯಾರ ಕಾರಣದಿಂದಲೂ, ಯಾವ ಪಕ್ಷದ ಕಾರಣದಿಂದಲೂ ಹರಡುತ್ತಿಲ್ಲ.

    ಹಣದಿಂದ ಇದನ್ನು ನಿರ್ಮೂಲನೆ ಮಾಡುವುದಾಗಿದ್ದರೆ ಅಮೇರಿಕದಲ್ಲಿ ಹರಡುತ್ತಿರಲಿಲ್ಲ. ವೈದ್ಯರು ಮತ್ತು ಔಷಧದಿಂದ ಇದನ್ನು ಗುಣಪಡಿಸಬಹುದಾಗಿದ್ದರೆ ಸ್ವೀಡನ್, ಫ್ರಾನ್ಸ್, ಬೆಲ್ಜಿಯಂ, ಇಟಲಿಯಲ್ಲಿ ತಡೆಯಬಹುದಾಗಿತ್ತು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

    ಹೀಗಾಗಿ ಇದಕ್ಕೆ ಯಾವುದ್ಯಾವುದೋ ಕಾರಣ ಹೇಳಿ ಯಾರ ಯಾರನ್ನೋ ತೆಗಳುವುದಕ್ಕಿಂತ.. ಸುಮ್ಮನೆ ಮನೆಯಲ್ಲಿರಿ. ಹೊರಬರಲು ಸಕಾರಣವಿದ್ದರೆ ಮಾಸ್ಕ ಧರಿಸಿರಿ ಮತ್ತು ಸೈನಿಟೈಜರ ಬಳಸಿ.. ಸುರಕ್ಷಿತರಾಗಿ ಇರಿ.. ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮದೇ ಜವಾಬ್ದಾರಿ ಆಗಿರಲಿ.

    ಮನೆಯಲ್ಲಿರಿ.. ಬದುಕಿದರೆ ಬದುಕು ಇದೆ.

    ಈ ಕ್ಷಣ ಗೆಲ್ಲುವ ವಿಶ್ವಾಸವಿದೆ.

  2. Nice suggestion, nobody save from covid-19, but ourselves protect from the covid-19.
    Positive thinking, physical exersie and balanced food with humanity action needed for the time.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...