Homeಕರೋನಾ ತಲ್ಲಣಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ ಎನ್ನುತ್ತಾರೆ ಅಜಾಜ್ ಅಶ್ರಫ್..

- Advertisement -
- Advertisement -

ಮೂಲ – ಅಜಾಜ್ ಅಶ್ರಫ್ (ಮಿಡ್‌ಡೇ.ಕಾಂ)

ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತಕ್ಕೆ ನೋಟು ಅಮಾನ್ಯೀಕರಣ ಮುನ್ಸೂಚನೆ ನೀಡಿತು. 2016 ಈಗ ಮತ್ತೆ 2021ರಲ್ಲಿ ಪ್ರತಿಫಲಿಸುತ್ತಿದೆ ಮತ್ತು ಇನ್ನಷ್ಟು ವಿನಾಶಕಾರಿಯಾಗಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಈಗ ನಾವು ಸಿಕ್ಕಿದ್ದೇವೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸರತಿ ಸಾಲುಗಳು, ಸಹಾಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಕರೆಗಳು, ಕೆಲಸ ಸಿಗದ ದಿನಗೂಲಿ ಕಾರ್ಮಿಕರ ಗೋಳು, ರಾತ್ರಿಯಿಡೀ ಜಗತ್ತಿನಲ್ಲಿ ಬದಲಾಗುತ್ತಿರುವ ಗೊಂದಲಗಳು – ಈ ಎಲ್ಲ ಅನುಭವಗಳ ಮೂಲಕ ನಾವು, ಹಿಂದಿನ ತಪ್ಪುಗಳನ್ನು ನೆನೆಸಿಕೊಳ್ಳಬೇಕಿದೆ. ನಮ್ಮ ಮರೆವಿನಿಂದ ಆಚೆ ಬರಬೇಕಿದೆ.

ನಿಜವಾಗಿಯೂ, ಇಂತಹ ದುರದೃಷ್ಟಕರ ಸನ್ನೀವೇಶಗಳನ್ನು, ದುರಂತಗಳನ್ನು ನಾವು ಯಾವಾಗ ಅನುಭವಿಸಿದ್ದೇವೆ?

ಉತ್ತರ: 2016 ರ ನವೆಂಬರ್ 8 ರ ನಂತರದ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15.41 ಲಕ್ಷ ಕೋಟಿ ರೂ.ಗಳ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದರು. ಒಬ್ಬ ವ್ಯಕ್ತಿಯು ಬ್ಯಾಂಕ್ ಅಥವಾ ಎಟಿಎಂನಿಂದ ವಾರಕ್ಕೆ ಕೇವಲ 24,000 ರೂಗಳನ್ನು ತೆಗೆಯಬಹುದು ಎಂದು ಅವರು ಆದೇಶಿಸಿದರು. ಮೋದಿಯವರು ತಾವು ರಾಷ್ಟ್ರವನ್ನು ಹೇಳಲಾಗದ ದುಃಖಕ್ಕೆ ಒಳಪಡಿಸುತ್ತಿದ್ದೇವೆಂದು ತಿಳಿದಿದ್ದರು, ಆದರೆ ಇದು ಕಪ್ಪು ಹಣ ಸಂಗ್ರಹಕಾರರನ್ನು ಮತ್ತು ಭಯೋತ್ಪಾದಕ ಹಣಕಾಸುದಾರರನ್ನು ಮತ್ತು ನಕಲಿ ಕರೆನ್ಸಿಯನ್ನು ತೊಡೆದುಹಾಕಲು ಅಗತ್ಯ ಎಂದು ಅವರು ಹೇಳಿದರು. “ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಈ ಉತ್ಸವಕ್ಕೆ ನಾವು ಸೇರಿಕೊಳ್ಳೋಣ” ಎಂದು ಮೋದಿ ಉತ್ತೇಜಿಸಿದರು.

ನೆನಪಿದೆಯೇ? ನಿಸ್ಸಂಶಯವಾಗಿ, ನೀವು ಈಗ ನೆನಪು ಮಾಡಿಕೊಳ್ಳುತ್ತೀರಿ ಆ ದಿನಗಳನ್ನು.
ಖಚಿತವಾಗಿ, ಕೋವಿಡ್ -19 ಉಂಟು ಮಾಡಿದ ದುರಂತವನ್ನು ಹಣದ ಕೊರತೆಯಿಂದ ಬಳಲುವ ದೇಶದ ಜೊತೆ ಹೋಲಿಸಲಾಗುವುದಿಲ್ಲ. 2.7 ಲಕ್ಷ ಜನರ ಕೋವಿಡ್ ಸಾವಿನ ಸಂಖ್ಯೆಗೆ ಹೋಲಿಸಿದಾಗ ನೋಟು ಅಮಾನ್ಯೀಕರಣ ರೈಲು ಅಪಘಾತದಂತೆ ತೋರುತ್ತದೆ, ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಬದುಕುಳಿದರು. ಆಸ್ಪತ್ರೆಯ ಹಾಸಿಗೆ ಅಥವಾ ಕೆಲವು ಲೀಟರ್ ಆಮ್ಲಜನಕ ಲಭ್ಯವಿಲ್ಲದ ಕಾರಣ ವ್ಯಕ್ತಿಯು ಸಾಯುವುದನ್ನು ನೋಡುವುದನ್ನು ಹಣರಹಿತ ಎಟಿಎಂ ಸ್ಥಿತಿಗೆ ಹೋಲಿಸಲೂ ಆಗುವುದಿಲ್ಲ.

ಆದರೂ, ಪಶ್ಚಾತ್ತಾಪದಲ್ಲಿ, ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತವನ್ನು ನೋಟು ಅಮಾನ್ಯೀಕರಣದಲ್ಲೇ ನೋಡಬೇಕು. ಅದು ಈ ಸರ್ಕಾರದ ದುರ್ಬಲ ಆಡಳಿತದ ಮುನ್ಸೂಚನೆ ಆಗಿತ್ತು. ದೇಶದ ಬಹುತೇಕ ಕಪ್ಪು ಹಣವನ್ನು ಹೊಸ ಕರೆನ್ಸಿ ನೋಟುಗಳಿಗಾಗಿ ವಿನಿಮಯ ಮಾಡಿಕೊಳ್ಳಲಾಯಿತು. 2017 ರ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 1.5 ಮಿಲಿಯನ್ (15 ಲಕ್ಷ) ಉದ್ಯೋಗಗಳು ಕಾಣೆಯಾದವು. ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳ ಗರಿಷ್ಠ 6.1 ಶೇಕಡಾವನ್ನು ಮುಟ್ಟಿತು ಮತ್ತು ಆರ್ಥಿಕತೆಯು ಕುಸಿಯಲು ಆರಂಭವಾಗಿತು.

ಆದರೂ ನಾವು ಮೋದಿಗೆ ದಂಡ ವಿಧಿಸುವ ಅಥವಾ ಪಾಠ ಕಲಿಸುವ ಬದಲು ಪ್ರಶಸ್ತಿ ನೀಡಲು ನಿರ್ಧರಿಸಿದೆವು.. ನವೆಂಬರ್ 8 ರ ನಂತರ ಮೂರು ತಿಂಗಳ ನಂತರ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿ ಸುಲಭವಾಗಿ ಚುನಾವಣೆಗಳನ್ನು ಗೆಲ್ಲುವಲ್ಲಿ ಒಬ್ಬ ಪ್ರತಿಭೆ ಎಂದು ನಂಬುವಂತೆ ಅವರನ್ನು ಮುನ್ನೆಲೆಗೆ ತರಲಾಗಿತು. ಅವರು ಪ್ರಕಟಿಸುತ್ತಿದ್ದ ಅಪಕ್ವ ನೀತಿಗಳನ್ನು ಹಿನ್ನೆಲೆಗೆ ಸರಿಸಲಾಗಿತು. ಅವರ ಇಂತಹ ವರ್ತನೆ, ಆಡಳಿತ ಶೈಲಿಯೇ ಇವತ್ತು ಕೋವಿಡ್ -19 ಎಂಬ ನೈಸರ್ಗಿಕ ವಿಪತ್ತನ್ನು ಒಂದು ದುರಂತವನ್ನಾಗಿ ಮಾಡಿದೆ.

ಇದರ ಬಗ್ಗೆ ಯೋಚಿಸಿ: ಅಮಾನ್ಯೀಕರಣದ ಬಗ್ಗೆ ಯೋಚಿಸಿ. ವ್ಯವಸ್ಥೆಯಿಂದ ಈ ಮೊತ್ತವನ್ನು ಹೀರುವ ಮೊದಲು ಸರ್ಕಾರವು 15.41 ಲಕ್ಷ ಕೋಟಿ ರೂ.ಗೆ ಸಮನಾದ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸಿದ್ಧಪಡಿಸಿಟ್ಟುಕೊಂಡಿದ್ದರೆ ಏನಾಗುತ್ತಿತ್ತು? ಜನರು ಅಥವಾ ಆರ್ಥಿಕತೆಯು ಅಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ. 2016 ರಲ್ಲಿ ನಡೆದ ಹುಚ್ಚಾಟದ ಆಡಳಿತ ನೀತಿಗಳೇ ಈಗ 2021 ರಲ್ಲಿ ಮರುಪ್ರಸಾರ ಆಗುತ್ತಿವೆ. ಕೋವಿಡ್‌ನ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಮೂರು-ನಾಲ್ಕು ತಿಂಗಳ ಅಂತರದಲ್ಲಿ ಲಸಿಕೆಗಳನ್ನು ಸಂಗ್ರಹಿಸುವ ಬದಲು, ಮೋದಿ ವೈರಸ್‌ನ ಮೇಲೆ ಭಾರತದ ವಿಜಯದ ಕಹಳೆ ಎಂದೆಲ್ಲ ಹೇಳುತ್ತಾ, ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿ, ಮತ್ತು ಕುಂಭಮೇಳವನ್ನು ಆಯೋಜಿಸಿ ಸಮಯವನ್ನು ವ್ಯರ್ಥ ಮಾಡಿದರು. ತದನಂತರ, ಎರಡನೇ ಅಲೆಯು ದೇಶವನ್ನು ಮುಳುಗಿಸಿದಾಗಲಷ್ಟೇ, ಎಲ್ಲಾ ವಯಸ್ಕರಿಗೆ ಲಸಿಕೆಗಳನ್ನು ನೀಡುವ ನಿರ್ಧಾರ ಮಾಡಲಾಗಿತು.

2016ರಲ್ಲಿ ಅಮಾನ್ಯವಾಗಿದ್ದನ್ನು ಬದಲಿಸಲು ನಮ್ಮಲ್ಲಿ ಸಾಕಷ್ಟು ಹೊಸ ಕರೆನ್ಸಿ ನೋಟುಗಳಿರಲಿಲ್ಲ. ಹಿಂಡಿನ ಪ್ರತಿರಕ್ಷೆ (herd immunity) ಯನ್ನು ಪಡೆದುಕೊಳ್ಳಲು ಭಾರತದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರಿಗೆ ನೀಡಲು ಸಾಕಷ್ಟು ಲಸಿಕೆಗಳನ್ನು ನಾವು ಈಗ ಹೊಂದಿಲ್ಲ. ಭಾರತವು ಮೇ 16 ರಂದು 18.21 ಕೋಟಿ ಜನರಿಗೆ ಲಸಿಕೆ ನೀಡಿತ್ತು, ಅದರಲ್ಲಿ ಕೇವಲ 4.04 ಕೋಟಿ ಜನರು ಮಾತ್ರ ಎರಡೂ ಲಸಿಕೆ ಪಡೆದಿದ್ದರು ಅಷ್ಟೇ. ನಾವು ಸಂಪೂರ್ಣ ರೋಗನಿರೋಧಕದಿಂದ ತಿಂಗಳುಗಳ ದೂರದಲ್ಲಿದ್ದೇವೆ. 2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ. ಸಾಕಷ್ಟು ಪ್ರಮಾಣಗಳಿಲ್ಲದಿದ್ದಾಗ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ ಎನ್ನುವುದಕ್ಕೆ ಅರ್ಥವಿದೆಯೇ?

ಕೋವಿಡ್ ದುರಂತದ ಹೊರೆ ಮತ್ತು ಆಪಾದನೆಯನ್ನು ಮರೆಮಾಚಲು ನೋಡಿದ ಕೇಂದ್ರ ಸರ್ಕಾರವು, ರಾಜ್ಯಗಳಿಗೆ ರೋಗನಿರೋಧಕ ಶಕ್ತಿ ಅಗತ್ಯವಿರುವ ಲಸಿಕೆಗಳ ದೊಡ್ಡ ಪಾಲನ್ನು ಸ್ವಂತವಾಗಿ ಪಡೆದುಕೊಳ್ಳುವಂತೆ ಕೇಳುವ ನೀತಿಯನ್ನು ಜಾರಿ ಮಾಡಲಾಗಿದೆ. ಕೇಂದ್ರ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತಿದೆ.

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಕಳೆದ ವರ್ಷದ ರಾಷ್ಟ್ರೀಯ ಲಾಕ್ಡೌನ್ ಹೇರಿದ್ದು ಕಾಕತಾಳೀಯವೇನಲ್ಲ. ಅಲ್ಲಿ ಜನರ ಆರೋಗ್ಯಕ್ಕಿಂತ ಹೇಗಾದರೂ ಅಧಿಕಾರ ಕಬಳಿಸುವ ಹುನ್ನಾರವೇ ಮುಖ್ಯವಾಗಿತ್ತು. ಕೇವಲ ನಾಲ್ಕು ಗಂಟೆಗಳ ಅವಧಿ ನೀಡಿ ಘೋಷಿಸಲಾದ ಆ ಅವೈಜ್ಞಾನಿಕ, ಕಠಿಣ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ನೂರಾರು ಕಿಮೀ ಕಾಲ್ನಡಿಗೆಯಲ್ಲಿ ಹೋಗುವಂತೆ ಮಾಡಿತು.. ಆದರೂ, ತಿಂಗಳುಗಳ ನಂತರ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳ-ಯು ಅಧಿಕಾರಕ್ಕೆ ಬಂದವು.

ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತೊರೆದ 25 ಶಾಸಕರಲ್ಲಿ 18 ಮಂದಿ ಮತ್ತೆ ಚುನಾಯಿತರಾದರು, ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸಿತು. ಕೋವಿಡ್ ಎರಡನೇ ಅಲೆಯನ್ನು ನೋಡುವ ಮುನ್ನ ಪುದುಚೇರಿಯಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲಾಗಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಪನ್ಮೂಲದೊಂದಿಗೆ ಹೋರಾಡಿದರೂ ಆ ಪಕ್ಷಕ್ಕೆ ಹಿನ್ನಡೆಯಾಯಿತು. ಆದರೆ ಇದು ಎರಡನೇ ಅಲೆ ತೀವ್ರಗೊಳ್ಳಲೂ ಕಾರಣವಾಗಿತು.

ದೆಹಲಿಯು ಲಾಕ್ ಡೌನ್ ಆಗಿರುವಾಗಲೂ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಲು ಮೋದಿ ನಿರಾಕರಿಸಿದ್ದಾರೆ. ಇದು ಸಾವಿನ ಮನೆಯಲ್ಲಿ ಮೋಜಿನ ಪಾರ್ಟಿ ನಡೆಸುವ ಕ್ರೌರ್ಯದಂತಿದೆ.

ನಮ್ಮ ಮರೆಗುಳಿತನ ಇವತ್ತಿನ ಅಧ್ವಾನಕ್ಕೆ ಕಾರಣವಾಗಿದೆ. ಡೆಮೊ (ನೋಟು ಅಮಾನ್ಯೀಕರಣ) ಕೋವಿಡ್ ದುರಂತಕ್ಕೆ ಕಾರಣವಾಯಿತು. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ನಮ್ಮ ನಾಯಕರನ್ನು ಅನುಮತಿಸಿದ್ದೇವೆಯೇ?

(ಲೇಖಕರು ಹಿರಿಯ ಪತ್ರಕರ್ತ. ಅಭಿಪ್ರಾಯಗಳು ವೈಯಕ್ತಿಕ. ಕೃಪೆ: ಮಿಡ್ ಡೇ)


ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...