Homeಕರೋನಾ ತಲ್ಲಣಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ ಎನ್ನುತ್ತಾರೆ ಅಜಾಜ್ ಅಶ್ರಫ್..

- Advertisement -
- Advertisement -

ಮೂಲ – ಅಜಾಜ್ ಅಶ್ರಫ್ (ಮಿಡ್‌ಡೇ.ಕಾಂ)

ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತಕ್ಕೆ ನೋಟು ಅಮಾನ್ಯೀಕರಣ ಮುನ್ಸೂಚನೆ ನೀಡಿತು. 2016 ಈಗ ಮತ್ತೆ 2021ರಲ್ಲಿ ಪ್ರತಿಫಲಿಸುತ್ತಿದೆ ಮತ್ತು ಇನ್ನಷ್ಟು ವಿನಾಶಕಾರಿಯಾಗಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಈಗ ನಾವು ಸಿಕ್ಕಿದ್ದೇವೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸರತಿ ಸಾಲುಗಳು, ಸಹಾಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಕರೆಗಳು, ಕೆಲಸ ಸಿಗದ ದಿನಗೂಲಿ ಕಾರ್ಮಿಕರ ಗೋಳು, ರಾತ್ರಿಯಿಡೀ ಜಗತ್ತಿನಲ್ಲಿ ಬದಲಾಗುತ್ತಿರುವ ಗೊಂದಲಗಳು – ಈ ಎಲ್ಲ ಅನುಭವಗಳ ಮೂಲಕ ನಾವು, ಹಿಂದಿನ ತಪ್ಪುಗಳನ್ನು ನೆನೆಸಿಕೊಳ್ಳಬೇಕಿದೆ. ನಮ್ಮ ಮರೆವಿನಿಂದ ಆಚೆ ಬರಬೇಕಿದೆ.

ನಿಜವಾಗಿಯೂ, ಇಂತಹ ದುರದೃಷ್ಟಕರ ಸನ್ನೀವೇಶಗಳನ್ನು, ದುರಂತಗಳನ್ನು ನಾವು ಯಾವಾಗ ಅನುಭವಿಸಿದ್ದೇವೆ?

ಉತ್ತರ: 2016 ರ ನವೆಂಬರ್ 8 ರ ನಂತರದ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15.41 ಲಕ್ಷ ಕೋಟಿ ರೂ.ಗಳ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದರು. ಒಬ್ಬ ವ್ಯಕ್ತಿಯು ಬ್ಯಾಂಕ್ ಅಥವಾ ಎಟಿಎಂನಿಂದ ವಾರಕ್ಕೆ ಕೇವಲ 24,000 ರೂಗಳನ್ನು ತೆಗೆಯಬಹುದು ಎಂದು ಅವರು ಆದೇಶಿಸಿದರು. ಮೋದಿಯವರು ತಾವು ರಾಷ್ಟ್ರವನ್ನು ಹೇಳಲಾಗದ ದುಃಖಕ್ಕೆ ಒಳಪಡಿಸುತ್ತಿದ್ದೇವೆಂದು ತಿಳಿದಿದ್ದರು, ಆದರೆ ಇದು ಕಪ್ಪು ಹಣ ಸಂಗ್ರಹಕಾರರನ್ನು ಮತ್ತು ಭಯೋತ್ಪಾದಕ ಹಣಕಾಸುದಾರರನ್ನು ಮತ್ತು ನಕಲಿ ಕರೆನ್ಸಿಯನ್ನು ತೊಡೆದುಹಾಕಲು ಅಗತ್ಯ ಎಂದು ಅವರು ಹೇಳಿದರು. “ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಈ ಉತ್ಸವಕ್ಕೆ ನಾವು ಸೇರಿಕೊಳ್ಳೋಣ” ಎಂದು ಮೋದಿ ಉತ್ತೇಜಿಸಿದರು.

ನೆನಪಿದೆಯೇ? ನಿಸ್ಸಂಶಯವಾಗಿ, ನೀವು ಈಗ ನೆನಪು ಮಾಡಿಕೊಳ್ಳುತ್ತೀರಿ ಆ ದಿನಗಳನ್ನು.
ಖಚಿತವಾಗಿ, ಕೋವಿಡ್ -19 ಉಂಟು ಮಾಡಿದ ದುರಂತವನ್ನು ಹಣದ ಕೊರತೆಯಿಂದ ಬಳಲುವ ದೇಶದ ಜೊತೆ ಹೋಲಿಸಲಾಗುವುದಿಲ್ಲ. 2.7 ಲಕ್ಷ ಜನರ ಕೋವಿಡ್ ಸಾವಿನ ಸಂಖ್ಯೆಗೆ ಹೋಲಿಸಿದಾಗ ನೋಟು ಅಮಾನ್ಯೀಕರಣ ರೈಲು ಅಪಘಾತದಂತೆ ತೋರುತ್ತದೆ, ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಬದುಕುಳಿದರು. ಆಸ್ಪತ್ರೆಯ ಹಾಸಿಗೆ ಅಥವಾ ಕೆಲವು ಲೀಟರ್ ಆಮ್ಲಜನಕ ಲಭ್ಯವಿಲ್ಲದ ಕಾರಣ ವ್ಯಕ್ತಿಯು ಸಾಯುವುದನ್ನು ನೋಡುವುದನ್ನು ಹಣರಹಿತ ಎಟಿಎಂ ಸ್ಥಿತಿಗೆ ಹೋಲಿಸಲೂ ಆಗುವುದಿಲ್ಲ.

ಆದರೂ, ಪಶ್ಚಾತ್ತಾಪದಲ್ಲಿ, ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತವನ್ನು ನೋಟು ಅಮಾನ್ಯೀಕರಣದಲ್ಲೇ ನೋಡಬೇಕು. ಅದು ಈ ಸರ್ಕಾರದ ದುರ್ಬಲ ಆಡಳಿತದ ಮುನ್ಸೂಚನೆ ಆಗಿತ್ತು. ದೇಶದ ಬಹುತೇಕ ಕಪ್ಪು ಹಣವನ್ನು ಹೊಸ ಕರೆನ್ಸಿ ನೋಟುಗಳಿಗಾಗಿ ವಿನಿಮಯ ಮಾಡಿಕೊಳ್ಳಲಾಯಿತು. 2017 ರ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 1.5 ಮಿಲಿಯನ್ (15 ಲಕ್ಷ) ಉದ್ಯೋಗಗಳು ಕಾಣೆಯಾದವು. ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳ ಗರಿಷ್ಠ 6.1 ಶೇಕಡಾವನ್ನು ಮುಟ್ಟಿತು ಮತ್ತು ಆರ್ಥಿಕತೆಯು ಕುಸಿಯಲು ಆರಂಭವಾಗಿತು.

ಆದರೂ ನಾವು ಮೋದಿಗೆ ದಂಡ ವಿಧಿಸುವ ಅಥವಾ ಪಾಠ ಕಲಿಸುವ ಬದಲು ಪ್ರಶಸ್ತಿ ನೀಡಲು ನಿರ್ಧರಿಸಿದೆವು.. ನವೆಂಬರ್ 8 ರ ನಂತರ ಮೂರು ತಿಂಗಳ ನಂತರ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿ ಸುಲಭವಾಗಿ ಚುನಾವಣೆಗಳನ್ನು ಗೆಲ್ಲುವಲ್ಲಿ ಒಬ್ಬ ಪ್ರತಿಭೆ ಎಂದು ನಂಬುವಂತೆ ಅವರನ್ನು ಮುನ್ನೆಲೆಗೆ ತರಲಾಗಿತು. ಅವರು ಪ್ರಕಟಿಸುತ್ತಿದ್ದ ಅಪಕ್ವ ನೀತಿಗಳನ್ನು ಹಿನ್ನೆಲೆಗೆ ಸರಿಸಲಾಗಿತು. ಅವರ ಇಂತಹ ವರ್ತನೆ, ಆಡಳಿತ ಶೈಲಿಯೇ ಇವತ್ತು ಕೋವಿಡ್ -19 ಎಂಬ ನೈಸರ್ಗಿಕ ವಿಪತ್ತನ್ನು ಒಂದು ದುರಂತವನ್ನಾಗಿ ಮಾಡಿದೆ.

ಇದರ ಬಗ್ಗೆ ಯೋಚಿಸಿ: ಅಮಾನ್ಯೀಕರಣದ ಬಗ್ಗೆ ಯೋಚಿಸಿ. ವ್ಯವಸ್ಥೆಯಿಂದ ಈ ಮೊತ್ತವನ್ನು ಹೀರುವ ಮೊದಲು ಸರ್ಕಾರವು 15.41 ಲಕ್ಷ ಕೋಟಿ ರೂ.ಗೆ ಸಮನಾದ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸಿದ್ಧಪಡಿಸಿಟ್ಟುಕೊಂಡಿದ್ದರೆ ಏನಾಗುತ್ತಿತ್ತು? ಜನರು ಅಥವಾ ಆರ್ಥಿಕತೆಯು ಅಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ. 2016 ರಲ್ಲಿ ನಡೆದ ಹುಚ್ಚಾಟದ ಆಡಳಿತ ನೀತಿಗಳೇ ಈಗ 2021 ರಲ್ಲಿ ಮರುಪ್ರಸಾರ ಆಗುತ್ತಿವೆ. ಕೋವಿಡ್‌ನ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಮೂರು-ನಾಲ್ಕು ತಿಂಗಳ ಅಂತರದಲ್ಲಿ ಲಸಿಕೆಗಳನ್ನು ಸಂಗ್ರಹಿಸುವ ಬದಲು, ಮೋದಿ ವೈರಸ್‌ನ ಮೇಲೆ ಭಾರತದ ವಿಜಯದ ಕಹಳೆ ಎಂದೆಲ್ಲ ಹೇಳುತ್ತಾ, ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿ, ಮತ್ತು ಕುಂಭಮೇಳವನ್ನು ಆಯೋಜಿಸಿ ಸಮಯವನ್ನು ವ್ಯರ್ಥ ಮಾಡಿದರು. ತದನಂತರ, ಎರಡನೇ ಅಲೆಯು ದೇಶವನ್ನು ಮುಳುಗಿಸಿದಾಗಲಷ್ಟೇ, ಎಲ್ಲಾ ವಯಸ್ಕರಿಗೆ ಲಸಿಕೆಗಳನ್ನು ನೀಡುವ ನಿರ್ಧಾರ ಮಾಡಲಾಗಿತು.

2016ರಲ್ಲಿ ಅಮಾನ್ಯವಾಗಿದ್ದನ್ನು ಬದಲಿಸಲು ನಮ್ಮಲ್ಲಿ ಸಾಕಷ್ಟು ಹೊಸ ಕರೆನ್ಸಿ ನೋಟುಗಳಿರಲಿಲ್ಲ. ಹಿಂಡಿನ ಪ್ರತಿರಕ್ಷೆ (herd immunity) ಯನ್ನು ಪಡೆದುಕೊಳ್ಳಲು ಭಾರತದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರಿಗೆ ನೀಡಲು ಸಾಕಷ್ಟು ಲಸಿಕೆಗಳನ್ನು ನಾವು ಈಗ ಹೊಂದಿಲ್ಲ. ಭಾರತವು ಮೇ 16 ರಂದು 18.21 ಕೋಟಿ ಜನರಿಗೆ ಲಸಿಕೆ ನೀಡಿತ್ತು, ಅದರಲ್ಲಿ ಕೇವಲ 4.04 ಕೋಟಿ ಜನರು ಮಾತ್ರ ಎರಡೂ ಲಸಿಕೆ ಪಡೆದಿದ್ದರು ಅಷ್ಟೇ. ನಾವು ಸಂಪೂರ್ಣ ರೋಗನಿರೋಧಕದಿಂದ ತಿಂಗಳುಗಳ ದೂರದಲ್ಲಿದ್ದೇವೆ. 2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ. ಸಾಕಷ್ಟು ಪ್ರಮಾಣಗಳಿಲ್ಲದಿದ್ದಾಗ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ ಎನ್ನುವುದಕ್ಕೆ ಅರ್ಥವಿದೆಯೇ?

ಕೋವಿಡ್ ದುರಂತದ ಹೊರೆ ಮತ್ತು ಆಪಾದನೆಯನ್ನು ಮರೆಮಾಚಲು ನೋಡಿದ ಕೇಂದ್ರ ಸರ್ಕಾರವು, ರಾಜ್ಯಗಳಿಗೆ ರೋಗನಿರೋಧಕ ಶಕ್ತಿ ಅಗತ್ಯವಿರುವ ಲಸಿಕೆಗಳ ದೊಡ್ಡ ಪಾಲನ್ನು ಸ್ವಂತವಾಗಿ ಪಡೆದುಕೊಳ್ಳುವಂತೆ ಕೇಳುವ ನೀತಿಯನ್ನು ಜಾರಿ ಮಾಡಲಾಗಿದೆ. ಕೇಂದ್ರ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತಿದೆ.

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಕಳೆದ ವರ್ಷದ ರಾಷ್ಟ್ರೀಯ ಲಾಕ್ಡೌನ್ ಹೇರಿದ್ದು ಕಾಕತಾಳೀಯವೇನಲ್ಲ. ಅಲ್ಲಿ ಜನರ ಆರೋಗ್ಯಕ್ಕಿಂತ ಹೇಗಾದರೂ ಅಧಿಕಾರ ಕಬಳಿಸುವ ಹುನ್ನಾರವೇ ಮುಖ್ಯವಾಗಿತ್ತು. ಕೇವಲ ನಾಲ್ಕು ಗಂಟೆಗಳ ಅವಧಿ ನೀಡಿ ಘೋಷಿಸಲಾದ ಆ ಅವೈಜ್ಞಾನಿಕ, ಕಠಿಣ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ನೂರಾರು ಕಿಮೀ ಕಾಲ್ನಡಿಗೆಯಲ್ಲಿ ಹೋಗುವಂತೆ ಮಾಡಿತು.. ಆದರೂ, ತಿಂಗಳುಗಳ ನಂತರ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳ-ಯು ಅಧಿಕಾರಕ್ಕೆ ಬಂದವು.

ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತೊರೆದ 25 ಶಾಸಕರಲ್ಲಿ 18 ಮಂದಿ ಮತ್ತೆ ಚುನಾಯಿತರಾದರು, ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸಿತು. ಕೋವಿಡ್ ಎರಡನೇ ಅಲೆಯನ್ನು ನೋಡುವ ಮುನ್ನ ಪುದುಚೇರಿಯಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲಾಗಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಪನ್ಮೂಲದೊಂದಿಗೆ ಹೋರಾಡಿದರೂ ಆ ಪಕ್ಷಕ್ಕೆ ಹಿನ್ನಡೆಯಾಯಿತು. ಆದರೆ ಇದು ಎರಡನೇ ಅಲೆ ತೀವ್ರಗೊಳ್ಳಲೂ ಕಾರಣವಾಗಿತು.

ದೆಹಲಿಯು ಲಾಕ್ ಡೌನ್ ಆಗಿರುವಾಗಲೂ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಲು ಮೋದಿ ನಿರಾಕರಿಸಿದ್ದಾರೆ. ಇದು ಸಾವಿನ ಮನೆಯಲ್ಲಿ ಮೋಜಿನ ಪಾರ್ಟಿ ನಡೆಸುವ ಕ್ರೌರ್ಯದಂತಿದೆ.

ನಮ್ಮ ಮರೆಗುಳಿತನ ಇವತ್ತಿನ ಅಧ್ವಾನಕ್ಕೆ ಕಾರಣವಾಗಿದೆ. ಡೆಮೊ (ನೋಟು ಅಮಾನ್ಯೀಕರಣ) ಕೋವಿಡ್ ದುರಂತಕ್ಕೆ ಕಾರಣವಾಯಿತು. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ನಮ್ಮ ನಾಯಕರನ್ನು ಅನುಮತಿಸಿದ್ದೇವೆಯೇ?

(ಲೇಖಕರು ಹಿರಿಯ ಪತ್ರಕರ್ತ. ಅಭಿಪ್ರಾಯಗಳು ವೈಯಕ್ತಿಕ. ಕೃಪೆ: ಮಿಡ್ ಡೇ)


ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...