Homeಕರೋನಾ ತಲ್ಲಣಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ ಎನ್ನುತ್ತಾರೆ ಅಜಾಜ್ ಅಶ್ರಫ್..

- Advertisement -
- Advertisement -

ಮೂಲ – ಅಜಾಜ್ ಅಶ್ರಫ್ (ಮಿಡ್‌ಡೇ.ಕಾಂ)

ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತಕ್ಕೆ ನೋಟು ಅಮಾನ್ಯೀಕರಣ ಮುನ್ಸೂಚನೆ ನೀಡಿತು. 2016 ಈಗ ಮತ್ತೆ 2021ರಲ್ಲಿ ಪ್ರತಿಫಲಿಸುತ್ತಿದೆ ಮತ್ತು ಇನ್ನಷ್ಟು ವಿನಾಶಕಾರಿಯಾಗಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಈಗ ನಾವು ಸಿಕ್ಕಿದ್ದೇವೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸರತಿ ಸಾಲುಗಳು, ಸಹಾಯಕ್ಕಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಕರೆಗಳು, ಕೆಲಸ ಸಿಗದ ದಿನಗೂಲಿ ಕಾರ್ಮಿಕರ ಗೋಳು, ರಾತ್ರಿಯಿಡೀ ಜಗತ್ತಿನಲ್ಲಿ ಬದಲಾಗುತ್ತಿರುವ ಗೊಂದಲಗಳು – ಈ ಎಲ್ಲ ಅನುಭವಗಳ ಮೂಲಕ ನಾವು, ಹಿಂದಿನ ತಪ್ಪುಗಳನ್ನು ನೆನೆಸಿಕೊಳ್ಳಬೇಕಿದೆ. ನಮ್ಮ ಮರೆವಿನಿಂದ ಆಚೆ ಬರಬೇಕಿದೆ.

ನಿಜವಾಗಿಯೂ, ಇಂತಹ ದುರದೃಷ್ಟಕರ ಸನ್ನೀವೇಶಗಳನ್ನು, ದುರಂತಗಳನ್ನು ನಾವು ಯಾವಾಗ ಅನುಭವಿಸಿದ್ದೇವೆ?

ಉತ್ತರ: 2016 ರ ನವೆಂಬರ್ 8 ರ ನಂತರದ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15.41 ಲಕ್ಷ ಕೋಟಿ ರೂ.ಗಳ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದರು. ಒಬ್ಬ ವ್ಯಕ್ತಿಯು ಬ್ಯಾಂಕ್ ಅಥವಾ ಎಟಿಎಂನಿಂದ ವಾರಕ್ಕೆ ಕೇವಲ 24,000 ರೂಗಳನ್ನು ತೆಗೆಯಬಹುದು ಎಂದು ಅವರು ಆದೇಶಿಸಿದರು. ಮೋದಿಯವರು ತಾವು ರಾಷ್ಟ್ರವನ್ನು ಹೇಳಲಾಗದ ದುಃಖಕ್ಕೆ ಒಳಪಡಿಸುತ್ತಿದ್ದೇವೆಂದು ತಿಳಿದಿದ್ದರು, ಆದರೆ ಇದು ಕಪ್ಪು ಹಣ ಸಂಗ್ರಹಕಾರರನ್ನು ಮತ್ತು ಭಯೋತ್ಪಾದಕ ಹಣಕಾಸುದಾರರನ್ನು ಮತ್ತು ನಕಲಿ ಕರೆನ್ಸಿಯನ್ನು ತೊಡೆದುಹಾಕಲು ಅಗತ್ಯ ಎಂದು ಅವರು ಹೇಳಿದರು. “ಸಮಗ್ರತೆ ಮತ್ತು ವಿಶ್ವಾಸಾರ್ಹತೆಯ ಈ ಉತ್ಸವಕ್ಕೆ ನಾವು ಸೇರಿಕೊಳ್ಳೋಣ” ಎಂದು ಮೋದಿ ಉತ್ತೇಜಿಸಿದರು.

ನೆನಪಿದೆಯೇ? ನಿಸ್ಸಂಶಯವಾಗಿ, ನೀವು ಈಗ ನೆನಪು ಮಾಡಿಕೊಳ್ಳುತ್ತೀರಿ ಆ ದಿನಗಳನ್ನು.
ಖಚಿತವಾಗಿ, ಕೋವಿಡ್ -19 ಉಂಟು ಮಾಡಿದ ದುರಂತವನ್ನು ಹಣದ ಕೊರತೆಯಿಂದ ಬಳಲುವ ದೇಶದ ಜೊತೆ ಹೋಲಿಸಲಾಗುವುದಿಲ್ಲ. 2.7 ಲಕ್ಷ ಜನರ ಕೋವಿಡ್ ಸಾವಿನ ಸಂಖ್ಯೆಗೆ ಹೋಲಿಸಿದಾಗ ನೋಟು ಅಮಾನ್ಯೀಕರಣ ರೈಲು ಅಪಘಾತದಂತೆ ತೋರುತ್ತದೆ, ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಬದುಕುಳಿದರು. ಆಸ್ಪತ್ರೆಯ ಹಾಸಿಗೆ ಅಥವಾ ಕೆಲವು ಲೀಟರ್ ಆಮ್ಲಜನಕ ಲಭ್ಯವಿಲ್ಲದ ಕಾರಣ ವ್ಯಕ್ತಿಯು ಸಾಯುವುದನ್ನು ನೋಡುವುದನ್ನು ಹಣರಹಿತ ಎಟಿಎಂ ಸ್ಥಿತಿಗೆ ಹೋಲಿಸಲೂ ಆಗುವುದಿಲ್ಲ.

ಆದರೂ, ಪಶ್ಚಾತ್ತಾಪದಲ್ಲಿ, ನಾವು ಇಂದು ಸಾಕ್ಷಿಯಾಗುತ್ತಿರುವ ಆಡಳಿತದ ಕುಸಿತವನ್ನು ನೋಟು ಅಮಾನ್ಯೀಕರಣದಲ್ಲೇ ನೋಡಬೇಕು. ಅದು ಈ ಸರ್ಕಾರದ ದುರ್ಬಲ ಆಡಳಿತದ ಮುನ್ಸೂಚನೆ ಆಗಿತ್ತು. ದೇಶದ ಬಹುತೇಕ ಕಪ್ಪು ಹಣವನ್ನು ಹೊಸ ಕರೆನ್ಸಿ ನೋಟುಗಳಿಗಾಗಿ ವಿನಿಮಯ ಮಾಡಿಕೊಳ್ಳಲಾಯಿತು. 2017 ರ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 1.5 ಮಿಲಿಯನ್ (15 ಲಕ್ಷ) ಉದ್ಯೋಗಗಳು ಕಾಣೆಯಾದವು. ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳ ಗರಿಷ್ಠ 6.1 ಶೇಕಡಾವನ್ನು ಮುಟ್ಟಿತು ಮತ್ತು ಆರ್ಥಿಕತೆಯು ಕುಸಿಯಲು ಆರಂಭವಾಗಿತು.

ಆದರೂ ನಾವು ಮೋದಿಗೆ ದಂಡ ವಿಧಿಸುವ ಅಥವಾ ಪಾಠ ಕಲಿಸುವ ಬದಲು ಪ್ರಶಸ್ತಿ ನೀಡಲು ನಿರ್ಧರಿಸಿದೆವು.. ನವೆಂಬರ್ 8 ರ ನಂತರ ಮೂರು ತಿಂಗಳ ನಂತರ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿ ಸುಲಭವಾಗಿ ಚುನಾವಣೆಗಳನ್ನು ಗೆಲ್ಲುವಲ್ಲಿ ಒಬ್ಬ ಪ್ರತಿಭೆ ಎಂದು ನಂಬುವಂತೆ ಅವರನ್ನು ಮುನ್ನೆಲೆಗೆ ತರಲಾಗಿತು. ಅವರು ಪ್ರಕಟಿಸುತ್ತಿದ್ದ ಅಪಕ್ವ ನೀತಿಗಳನ್ನು ಹಿನ್ನೆಲೆಗೆ ಸರಿಸಲಾಗಿತು. ಅವರ ಇಂತಹ ವರ್ತನೆ, ಆಡಳಿತ ಶೈಲಿಯೇ ಇವತ್ತು ಕೋವಿಡ್ -19 ಎಂಬ ನೈಸರ್ಗಿಕ ವಿಪತ್ತನ್ನು ಒಂದು ದುರಂತವನ್ನಾಗಿ ಮಾಡಿದೆ.

ಇದರ ಬಗ್ಗೆ ಯೋಚಿಸಿ: ಅಮಾನ್ಯೀಕರಣದ ಬಗ್ಗೆ ಯೋಚಿಸಿ. ವ್ಯವಸ್ಥೆಯಿಂದ ಈ ಮೊತ್ತವನ್ನು ಹೀರುವ ಮೊದಲು ಸರ್ಕಾರವು 15.41 ಲಕ್ಷ ಕೋಟಿ ರೂ.ಗೆ ಸಮನಾದ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸಿದ್ಧಪಡಿಸಿಟ್ಟುಕೊಂಡಿದ್ದರೆ ಏನಾಗುತ್ತಿತ್ತು? ಜನರು ಅಥವಾ ಆರ್ಥಿಕತೆಯು ಅಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ. 2016 ರಲ್ಲಿ ನಡೆದ ಹುಚ್ಚಾಟದ ಆಡಳಿತ ನೀತಿಗಳೇ ಈಗ 2021 ರಲ್ಲಿ ಮರುಪ್ರಸಾರ ಆಗುತ್ತಿವೆ. ಕೋವಿಡ್‌ನ ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಮೂರು-ನಾಲ್ಕು ತಿಂಗಳ ಅಂತರದಲ್ಲಿ ಲಸಿಕೆಗಳನ್ನು ಸಂಗ್ರಹಿಸುವ ಬದಲು, ಮೋದಿ ವೈರಸ್‌ನ ಮೇಲೆ ಭಾರತದ ವಿಜಯದ ಕಹಳೆ ಎಂದೆಲ್ಲ ಹೇಳುತ್ತಾ, ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿ, ಮತ್ತು ಕುಂಭಮೇಳವನ್ನು ಆಯೋಜಿಸಿ ಸಮಯವನ್ನು ವ್ಯರ್ಥ ಮಾಡಿದರು. ತದನಂತರ, ಎರಡನೇ ಅಲೆಯು ದೇಶವನ್ನು ಮುಳುಗಿಸಿದಾಗಲಷ್ಟೇ, ಎಲ್ಲಾ ವಯಸ್ಕರಿಗೆ ಲಸಿಕೆಗಳನ್ನು ನೀಡುವ ನಿರ್ಧಾರ ಮಾಡಲಾಗಿತು.

2016ರಲ್ಲಿ ಅಮಾನ್ಯವಾಗಿದ್ದನ್ನು ಬದಲಿಸಲು ನಮ್ಮಲ್ಲಿ ಸಾಕಷ್ಟು ಹೊಸ ಕರೆನ್ಸಿ ನೋಟುಗಳಿರಲಿಲ್ಲ. ಹಿಂಡಿನ ಪ್ರತಿರಕ್ಷೆ (herd immunity) ಯನ್ನು ಪಡೆದುಕೊಳ್ಳಲು ಭಾರತದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರಿಗೆ ನೀಡಲು ಸಾಕಷ್ಟು ಲಸಿಕೆಗಳನ್ನು ನಾವು ಈಗ ಹೊಂದಿಲ್ಲ. ಭಾರತವು ಮೇ 16 ರಂದು 18.21 ಕೋಟಿ ಜನರಿಗೆ ಲಸಿಕೆ ನೀಡಿತ್ತು, ಅದರಲ್ಲಿ ಕೇವಲ 4.04 ಕೋಟಿ ಜನರು ಮಾತ್ರ ಎರಡೂ ಲಸಿಕೆ ಪಡೆದಿದ್ದರು ಅಷ್ಟೇ. ನಾವು ಸಂಪೂರ್ಣ ರೋಗನಿರೋಧಕದಿಂದ ತಿಂಗಳುಗಳ ದೂರದಲ್ಲಿದ್ದೇವೆ. 2016ರಲ್ಲಿ ನಮಗೆ ನಗದು ಕೊರತೆಯಿದ್ದಂತೆಯೇ, ಈಗ ನಾವು ಲಸಿಕೆ ಕೊರತೆಗೆ ಸಾಕ್ಷಿಯಾಗಿದ್ದೇವೆ. ಸಾಕಷ್ಟು ಪ್ರಮಾಣಗಳಿಲ್ಲದಿದ್ದಾಗ ಲಸಿಕೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ ಎನ್ನುವುದಕ್ಕೆ ಅರ್ಥವಿದೆಯೇ?

ಕೋವಿಡ್ ದುರಂತದ ಹೊರೆ ಮತ್ತು ಆಪಾದನೆಯನ್ನು ಮರೆಮಾಚಲು ನೋಡಿದ ಕೇಂದ್ರ ಸರ್ಕಾರವು, ರಾಜ್ಯಗಳಿಗೆ ರೋಗನಿರೋಧಕ ಶಕ್ತಿ ಅಗತ್ಯವಿರುವ ಲಸಿಕೆಗಳ ದೊಡ್ಡ ಪಾಲನ್ನು ಸ್ವಂತವಾಗಿ ಪಡೆದುಕೊಳ್ಳುವಂತೆ ಕೇಳುವ ನೀತಿಯನ್ನು ಜಾರಿ ಮಾಡಲಾಗಿದೆ. ಕೇಂದ್ರ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತಿದೆ.

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಕಳೆದ ವರ್ಷದ ರಾಷ್ಟ್ರೀಯ ಲಾಕ್ಡೌನ್ ಹೇರಿದ್ದು ಕಾಕತಾಳೀಯವೇನಲ್ಲ. ಅಲ್ಲಿ ಜನರ ಆರೋಗ್ಯಕ್ಕಿಂತ ಹೇಗಾದರೂ ಅಧಿಕಾರ ಕಬಳಿಸುವ ಹುನ್ನಾರವೇ ಮುಖ್ಯವಾಗಿತ್ತು. ಕೇವಲ ನಾಲ್ಕು ಗಂಟೆಗಳ ಅವಧಿ ನೀಡಿ ಘೋಷಿಸಲಾದ ಆ ಅವೈಜ್ಞಾನಿಕ, ಕಠಿಣ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ನೂರಾರು ಕಿಮೀ ಕಾಲ್ನಡಿಗೆಯಲ್ಲಿ ಹೋಗುವಂತೆ ಮಾಡಿತು.. ಆದರೂ, ತಿಂಗಳುಗಳ ನಂತರ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳ-ಯು ಅಧಿಕಾರಕ್ಕೆ ಬಂದವು.

ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತೊರೆದ 25 ಶಾಸಕರಲ್ಲಿ 18 ಮಂದಿ ಮತ್ತೆ ಚುನಾಯಿತರಾದರು, ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸಿತು. ಕೋವಿಡ್ ಎರಡನೇ ಅಲೆಯನ್ನು ನೋಡುವ ಮುನ್ನ ಪುದುಚೇರಿಯಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲಾಗಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಪನ್ಮೂಲದೊಂದಿಗೆ ಹೋರಾಡಿದರೂ ಆ ಪಕ್ಷಕ್ಕೆ ಹಿನ್ನಡೆಯಾಯಿತು. ಆದರೆ ಇದು ಎರಡನೇ ಅಲೆ ತೀವ್ರಗೊಳ್ಳಲೂ ಕಾರಣವಾಗಿತು.

ದೆಹಲಿಯು ಲಾಕ್ ಡೌನ್ ಆಗಿರುವಾಗಲೂ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಲು ಮೋದಿ ನಿರಾಕರಿಸಿದ್ದಾರೆ. ಇದು ಸಾವಿನ ಮನೆಯಲ್ಲಿ ಮೋಜಿನ ಪಾರ್ಟಿ ನಡೆಸುವ ಕ್ರೌರ್ಯದಂತಿದೆ.

ನಮ್ಮ ಮರೆಗುಳಿತನ ಇವತ್ತಿನ ಅಧ್ವಾನಕ್ಕೆ ಕಾರಣವಾಗಿದೆ. ಡೆಮೊ (ನೋಟು ಅಮಾನ್ಯೀಕರಣ) ಕೋವಿಡ್ ದುರಂತಕ್ಕೆ ಕಾರಣವಾಯಿತು. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ನಮ್ಮ ನಾಯಕರನ್ನು ಅನುಮತಿಸಿದ್ದೇವೆಯೇ?

(ಲೇಖಕರು ಹಿರಿಯ ಪತ್ರಕರ್ತ. ಅಭಿಪ್ರಾಯಗಳು ವೈಯಕ್ತಿಕ. ಕೃಪೆ: ಮಿಡ್ ಡೇ)


ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...