Homeಅಂತರಾಷ್ಟ್ರೀಯಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್‍ ಡಾಲರ್ ಏಕಾಧಿಪತ್ಯ?

ಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್‍ ಡಾಲರ್ ಏಕಾಧಿಪತ್ಯ?

ಚೀನಾದ ಕರೆನ್ಸಿ ಯುವಾನ್, ಯುರೋಪಿಯನ ಒಕ್ಕೂಟದ ಯೂರೋ ಮತ್ತು ಚಿನ್ನದತ್ತ ಸಾಗುವುದು ರಷ್ಯಾದ ಯೋಜನೆಯಾಗಿದೆ ಎನ್ನಲಾಗಿದೆ.

- Advertisement -
- Advertisement -

ರಷ್ಯಾ ಅಮೆರಿಕದ ಡಾಲರ್ ಹಣಕಾಸು ವ್ಯವಸ್ಥೆಯಿಂದ ಹೊರಬಂದಿದೆ ಎಂದು ssaurel.com ಮಾಧ್ಯಮ ವರದಿ ಮಾಡಿದೆ. ಇದು ಭಾರತೀಯ ಮಾಧ್ಯಮಗಳಲ್ಲಿ ಸಣ್ಣ ಸುದ್ದಿಯಾಗಿ ಮರೆಯಾದಂತಿದೆ.

ಸಾಮಾನ್ಯ ಭಾಷೆಯಲ್ಲಿ ಸರಳವಾಗಿ ಹೇಳುವುದಾದರೆ, ರಷ್ಯಾ ಅಮೆರಿಕನ್ ಡಾಲರ್ ಅನ್ನು ತ್ಯಜಿಸಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚು ಹೆಚ್ಚು ದೇಶಗಳು ಅಮೆರಿಕನ್‍ ಡಾಲರ್ ವ್ಯವಸ್ಥೆಯಿಂದ ನಿರ್ಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜೂನ್ 2021ರ ಆರಂಭದಲ್ಲಿ, ನಾವು ಭೌಗೋಳಿಕ ರಾಜಕೀಯ ಮತ್ತು ವಿಶ್ವ ಆರ್ಥಿಕತೆಯ ವಿಷಯದಲ್ಲಿ ಬಹಳ ಆಸಕ್ತಿದಾಯಕ ಸುದ್ದಿಗಳನ್ನು ಗಮನಿಸುತ್ತಿದ್ದೇವೆ: ಅದರಲ್ಲಿ ರಷ್ಯಾ ಯುಎಸ್ ಡಾಲರ್ ಅನ್ನು ಕೈಬಿಟ್ಟಿದ್ದು ಕೂಡ ಒಂದು ಪ್ರಮುಖ ವಿದ್ಯಮಾನ.

ರಷ್ಯಾದ ಹಣಕಾಸು ಮಂತ್ರಿ, ನ್ಯಾಷನಲ್ ಯೋಗಕ್ಷೇಮ ನಿಧಿ, ರಷ್ಯಾದ ತೈಲ ನಿಧಿ, ಅಮೆರಿಕನ್‍ ಡಾಲರ್‌ಗೆ ಒಡ್ಡಿಕೊಳ್ಳುವುದರಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ ಎಂದು ಘೋಷಿಸಿದ್ದಾರೆ. ಇದರ ಪ್ರಮಾಣವೀಗ 40 ಬಿಲಿಯನ್ ಡಾಲರ್‌ಗಳಷ್ಟಿದೆ.

ಚೀನಾದ ಕರೆನ್ಸಿ ಯುವಾನ್, ಯುರೋಪಿಯನ ಒಕ್ಕೂಟದ ಯೂರೋ ಮತ್ತು ಚಿನ್ನದತ್ತ ಸಾಗುವುದು ರಷ್ಯಾದ ಯೋಜನೆಯಾಗಿದೆ ಎನ್ನಲಾಗಿದೆ.

“ಇಂದು ನಾವು ಡಾಲರ್‌ಗಳಲ್ಲಿ ಸುಮಾರು ಶೇ. 35 ಎನ್‌ಡಬ್ಲ್ಯೂಎಫ್  (ನ್ಯಾಷನಲ್‍ ವೆಲ್‍ಫೇರ್ ಫಂಡ್‍) ಹೂಡಿಕೆಗಳನ್ನು ಹೊಂದಿದ್ದೇವೆ. ಡಾಲರ್ ಸ್ವತ್ತುಗಳಿಂದ ಸಂಪೂರ್ಣವಾಗಿ ಹೊರಬರಲು ನಾವು ನಿರ್ಧರಿಸಿದ್ದೇವೆ. ಡಾಲರ್‌ಗಳಲ್ಲಿನ ಹೂಡಿಕೆಗಳನ್ನು ಯುರೋ ಮತ್ತು ಚಿನ್ನದ ಹೆಚ್ಚಳದೊಂದಿಗೆ ಬದಲಾಯಿಸುತ್ತೇವೆ’ ಎಂದು ರಷ್ಯಾ ಆಡಳಿತ ತಿಳಿಸಿದೆ.

ರಷ್ಯಾದ ರಾಷ್ಟ್ರೀಯ ಯೋಗಕ್ಷೇಮ ನಿಧಿ (ನ್ಯಾಷನಲ್‍ ವೆಲ್‍ಫೇರ್ ಫಂಡ್‍) ಅಂದಾಜು 120 ಬಿಲಿಯನ್ ಡಾಲರ್‌ಗಳನ್ನು ಹೊಂದಿದೆ. ಆದ್ದರಿಂದ ರಷ್ಯಾ ತೆಗೆದುಕೊಂಡ ನಿರ್ಧಾರವು ಆರ್ಥಿಕ ದೃಷ್ಟಿಕೋನದಿಂದ ಮಹತ್ವದ್ದಾಗಿದೆ. ಹಾಗೆಯೇ, ಭೌಗೋಳಿಕ ರಾಜಕೀಯ ದೃಷ್ಟಿಕೋನದಿಂದ ಕೂಡ ಗಮನಾರ್ಹವಾಗಿದೆ.

ರಷ್ಯಾ  ಕಳೆದ ಒಂದು ದಶಕದಿಂದ ಯುಎಸ್ ಡಾಲರ್ ಅನ್ನು ಹೊರಹಾಕುವ ಗುರಿಯನ್ನು ಹೊಂದಿದೆ.

ರಷ್ಯಾದ ಈ ಘೋಷಣೆಯೇನೂ ಆಶ್ಚರ್ಯಕರವಲ್ಲ. ಈಗ ಹಲವಾರು ವರ್ಷಗಳಿಂದ ಅಂತರರಾಷ್ಟ್ರೀಯ ರಾಜಕಾರಣವನ್ನು ಅನುಸರಿಸುತ್ತಿರುವವರು  ಇದನ್ನು ಬಲ್ಲರು. ರಷ್ಯಾ ಯುಎಸ್ ಡಾಲರ್ ಅನ್ನು ಅವಲಂಬಿಸಿರುವ ಬಗ್ಗೆ ರಷ್ಯಾದ ಅಧ್ಯಕ್ಷ ಡಿಮಿಟ್ರಿ ಎ. ಮೆಡ್ವೆಡೆವ್ ಅವರು 2009ರಲ್ಲಿ ನೀಡಿದ ಎಚ್ಚರಿಕೆಯನ್ನು ಇಲ್ಲಿ ಗಮನಿಸಬಹುದು.

ಡಿಮಿಟ್ರಿ ಎ. ಮೆಡ್ವೆಡೆವ್ ಅವರ ಕಾಮೆಂಟ್‌ಗಳು ಆ ಸಮಯದಲ್ಲಿ ಜಗತ್ತು ಅನುಭವಿಸುತ್ತಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮೇಲೆ ಕೇಂದ್ರೀಕೃತವಾಗಿತ್ತು. ಆ ಬಿಕ್ಕಟ್ಟಿಗೆ ಅಮೆರಿಕೆವೇ ಹೆಚ್ಚು ಹೊಣೆಗಾರನಾಗಿದೆ ಎಂಬ ತರ್ಕವನ್ನು ಅನೇಕರು ದೇಶಗಳು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.

ಆ ಸಮಯದಲ್ಲಿ, ಯುಎಸ್ ಡಾಲರ್ ಅನ್ನು ಬದಲಿಸಲು  ಸೂಪರ್ ನ್ಯಾಷನಲ್‍  ಕರೆನ್ಸಿಯನ್ನು ರಚಿಸುವ ಬಗ್ಗೆ ರಷ್ಯಾ ಮತ್ತು ಚೀನಾ ಇತರ ದೇಶಗಳೊಂದಿಗೆ ಚರ್ಚೆ ಮಾಡಿದ್ದವು. ಅಂದಿನಿಂದ ಈ ಆಲೋಚನೆಯನ್ನು ಕೈಬಿಡಲಾಗಿದೆ. ಆದರೆ ಸತೋಶಿ ನಕಮೊಟೊ ಅವರು ಜನವರಿ 3, 2009ರಂದು ಪ್ರಾರಂಭಿಸಿದ ತನ್ನ ಬಿಟ್‌ಕಾಯಿನ್‌ನೊಂದಿಗೆ ಇದನ್ನು ಕಾರ್ಯಗತಗೊಳಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಈಗ ರಷ್ಯಾ ಇತರ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ. ವ್ಲಾಡಿಮಿರ್ ಪುಟಿನ್ ನೇತೃತ್ವದ ದೇಶವು ಅಮೆರಿಕದ ಆರ್ಥಿಕ ನಿರ್ಬಂಧಗಳ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಯಸಿದೆ. ಆದ್ದರಿಂದ ರಷ್ಯಾ ಒಂದು ಆಧಿಪತ್ಯದ ಕರೆನ್ಸಿಯನ್ನು ಬಿಟ್ಟು ಚೀನಾದ ಯುವಾನ್ ಮತ್ತು ಯೂರೋ ಕಡೆಗೆ ಚಲಿಸುತ್ತಿದೆ. ಈ ಅಮೇರಿಕನ್ ಡಾಲರ್ ಅನ್ನು ಚೀನಾದ ಯುವಾನ್‌ಗೆ ಪರಿವರ್ತಿಸುವುದರಿಂದ ರಷ್ಯಾಕ್ಕೆ ಬೀಜಿಂಗ್‌ನೊಂದಿಗಿನ ತನ್ನ ಪ್ರಮುಖ ಕಾರ್ಯತಂತ್ರದ ಮೈತ್ರಿಯನ್ನು ಬಲಪಡಿಸಲು ಸಹ ಅವಕಾಶ ನೀಡುತ್ತದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ ಬಂಜಗೆರೆ ಜಯಪ್ರಕಾಶ್‍, ‘ಯುರೋಪಿಯನ್‍ ಒಕ್ಕೂಟ ತನ್ನದೇ ಕರೆನ್ಸಿಯನ್ನು ಮಾಡಿಕೊಂಡಿದ್ದು ಅಮೆರಿಕದ ಡಾಲರ್ ಅಧಿಪತ್ಯಕ್ಕೆ ಅಂತಹ ದೊಡ್ಡ ಪೆಟ್ಟನ್ನೇನೂ ನೀಡಿಲ್ಲ. ಈಗ ರಷ್ಯಾ ಹಾದಿಯಲ್ಲೇ ಚೀನಾ ನಿರ್ಧಾರ ತೆಗೆದುಕೊಂಡರೆ ಆಗ ನಿಜಕ್ಕೂ ಡಾಲರ್ ಅಧಿಪತ್ಯಕ್ಕೆ ಹಿನ್ನಡೆಯಾಗಲಿದೆ’ ಎಂದರು.

‘ಈ ಹಿಂದೆ ಲಿಬಿಯಾ ಕೂಡ ತನ್ನ ತೈಲ ಆರ್ಥಿಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಡಾಲರ್‌ನಿಂದ ಮುಕ್ತಿ ಪಡೆಯಲು ಬಯಸಿತ್ತು. ಅದಕ್ಕಾಗಿ ಅದು ಹಲವು ಆಫ್ರಿಕನ್‍ ದೇಶಗಳೊಂದಿಗೆ ಮಾತುಕತೆಯನ್ನೂ ನಡೆಸಿತ್ತು. ತೈಲ ಮತ್ತು ಡಾಲರ್ ವಿನಿಮಯವನ್ನೇ ನೆಚ್ಚಿಕೊಂಡಿರುವ ಅಮೆರಿಕ, ಲಿಬಿಯಾ ಮುಖ್ಯಸ್ಥ ಗಡಾಫಿ ಸರ್ವಾಧಿಕಾರಿ ಎಂಬುದನ್ನು ಹೈಲೈಟ್‍ ಮಾಡಿ ಅಲ್ಲಿ ತನ್ನ ಸೈನ್ಯವನ್ನು ಬಿಟ್ಟು ದಾಳಿ ನಡೆಸಿತ್ತು. ತಾನೇ ಒಂದು ಸರ್ವಾಧಿಕಾರಿ ಎಂಬುದನ್ನು ಮರೆಮಾಚುತ್ತ ಅಮೆರಿಕ ಅಧಿಪತ್ಯ ನಡೆಸುತ್ತಿದೆ ರಷ್ಯಾದ ನಿಲುವು ಬೆಂಬಲಿಸಿ ಇನ್ನಷ್ಟು ದೇಶಗಳು, ಮುಖ್ಯವಾಗಿ ಚೀನಾ ಡಾಲರ್ ತೊರೆದರೆ ಅಮೆರಿಕದ ಎಕಾನಮಿ ಅಧಿಪತ್ಯಕ್ಕೆ ಹೊಡೆತ ಬೀಳಬಹುದು’ ಎಂದು ರಾಜಕೀಯ ಚಿಂತಕ ಮುಜಾಫರ್ ಅಸ್ಸಾದಿ ನಾನುಗೌರಿ.ಕಾಂ ಗೆ ತಿಳಿಸಿದರು.

ಚೀನಾದ ಯುವಾನ್ ಮತ್ತು ಯೂರೋಗಳ ಜೊತೆಗೆ, ರಷ್ಯಾ ತನ್ನ ರಾಷ್ಟ್ರೀಯ ಯೋಗಕ್ಷೇಮ ನಿಧಿ ನಿಕ್ಷೇಪಗಳಿಗೆ ಚಿನ್ನದ ಖರೀದಿಯನ್ನು ಕೂಡ ಸೇರಿಸುತ್ತಿದೆ. ಈ ನಿರ್ಧಾರವು ಇನ್ನೂ ಕಡಿಮೆ ಅಪಾಯಕಾರಿಯಾಗಿದೆ, ಏಕೆಂದರೆ ಚಿನ್ನವು ಶತಮಾನಗಳಿಂದ ಗುರುತಿಸಲ್ಪಟ್ಟ ಮೌಲ್ಯದ ಮೀಸಲು ಎಂದು ತಿಳಿದಿದೆ.

ಅಮೆರಿಕದ ನಿರ್ಬಂಧಗಳ ಅಪಾಯಗಳಿಂದ ರಷ್ಯಾ ನಿಜವಾಗಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಯಸಿದರೆ, ಅದು ಭೌತಿಕ ಚಿನ್ನದ ಖರೀದಿಗೆ ತಿರುಗಬೇಕಾಗುತ್ತದೆ.

ಯುಎಸ್ ಡಾಲರ್ ನೂರು ವರ್ಷಗಳಿಂದ ವಿಶ್ವದ ಮೀಸಲು ಕರೆನ್ಸಿಯಾಗಿದೆ. ಆದರೆ ನಿಜವಾದ ಸಮಸ್ಯೆ ಏನೆಂದರೆ, ಅಮೆರಿಕವು ತನ್ನ ಕರೆನ್ಸಿಯನ್ನು ವಿಶ್ವದಾದ್ಯಂತ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಆಯುಧವಾಗಿ ಬಳಸುತ್ತಿದೆ.

ಅಮೆರಿಕ ಇದನ್ನು ಮಾಡಲು ಶಕ್ತವಾಗಿದೆ ಏಕೆಂದರೆ ಅದು ವಿಶ್ವದ ಮೀಸಲು ಕರೆನ್ಸಿಯನ್ನು ನಿಯಂತ್ರಿಸುತ್ತದೆ. ಈ ಅನ್ಯಾಯವನ್ನು ಒಪ್ಪಿಕೊಳ್ಳಲು ಹೆಚ್ಚು ಹೆಚ್ಚು ದೇಶಗಳು ಇನ್ನು ಮುಂದೆ ಸಿದ್ಧವಿಲ್ಲ. ಅವು ಯುಎಸ್ ಡಾಲರ್ ವ್ಯವಸ್ಥೆಯಿಂದ ಹೊರಬರಲು ಉತ್ತಮ ಮಾರ್ಗದ ಬಗ್ಗೆ ಯೋಚಿಸುತ್ತಿವೆ.

ಯುಎಸ್ ಡಾಲರ್ ವ್ಯವಸ್ಥೆಯಿಂದ ಹೊರಬರುವುದು ಒಂದು ಸಂಕೀರ್ಣ ವಿಷಯ, ಆದರೆ ರಷ್ಯಾ ತೋರಿಸಿದಂತೆ ಇದು ಸಾಧ್ಯ.

ಮುಂದಿನ ಇಪ್ಪತ್ತು ವರ್ಷಗಳಲ್ಲಿ, ಯುಎಸ್ ಡಾಲರ್ ಮೇಲಿನ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಯುಎಸ್ ಡಾಲರ್ ವಿಶ್ವದ ಮೀಸಲು ಕರೆನ್ಸಿಯಾಗಿ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಚೀನಾಕ್ಕೆ ಪಟ್ಟಭದ್ರ ಆಸಕ್ತಿ ಇದೆ. ಜಾಗತಿಕ ವಿತ್ತೀಯ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಅಮೆರಿಕ ಪ್ರಾಬಲ್ಯ ಹೊಂದಿರುವವರೆಗೆ ವಿಶ್ವದ ಪ್ರಮುಖ ಮಹಾಶಕ್ತಿಯಾಗುವುದು ಅಸಾಧ್ಯ ಎಂದು ಬೀಜಿಂಗ್ ಅರ್ಥ ಮಾಡಿಕೊಂಡಿದೆ.

ಚೀನಾ ನಿಧಾನವಾಗಿ ಮುಂದುವರಿಯುತ್ತದೆ, ಚೀನಾ ತನ್ನ ಡಿಜಿಟಲ್ ಯುವಾನ್ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಪ್ರಪಂಚದಾದ್ಯಂತದ ಯುಎಸ್ ಡಾಲರ್ ಪ್ರಾಬಲ್ಯದ ಈ ಅಂತ್ಯವು ಮುಂದಿನ  ವರ್ಷಗಳಲ್ಲಿ ದೃಢೀಕರಿಸಲ್ಪಟ್ಟರೆ, ಅದು ಸುಲಭವಾಗಿ ಸಂಭವಿಸುವುದಿಲ್ಲ. ಐತಿಹಾಸಿಕವಾಗಿ, ವಿಶ್ವ ಮೀಸಲು ಕರೆನ್ಸಿಗಳ ನಡುವಿನ ಪರಿವರ್ತನೆಗಳು ಯಾವಾಗಲೂ ಹಿಂಸಾತ್ಮಕವಾಗಿ ಸಂಭವಿಸಿವೆ.

‘ಶಸ್ತ್ರಾಸ್ತ ಮಾರಾಟವೇ ಅಮೆರಿಕದ ಮುಖ್ಯ ಆದಾಯ. ಅಲ್ಲಿ ಡೆಮಾಕ್ರಟಿಕ್‍ ಬರಲಿ ಅಥವಾ ರಿಪಬ್ಲಿಕನ್‍ಗಳು ಅಧಿಕಾರ ವಹಿಸಿಕೊಳ್ಳಲಿ, ಆರ್ಥಿಕತೆಯನ್ನು ಅಲ್ಲಿನ ಶ್ರೀಮಂತರು ನಿಯಂತ್ರಿಸುತ್ತಿದ್ದಾರೆ. ವಿಶ್ವದ ಶೇ. 68ರಷ್ಟು ಪೇಟೆಂಟ್‍ಗಳು ಅಮೆರಿಕದ ಬಳಿಯಿವೆ. ಸಣ್ಣ ದೇಶಗಳ ಸಂಶೋಧನೆಗಳನ್ನು ಖರೀದಿಸಿ ಅದು ಪೇಟೆಂಟ್‍ ಹಕ್ಕು ಪಡೆದುಕೊಳ್ಳುತ್ತದೆ. ಚೀನಾ ದೃಢವಾದ ಹೆಜ್ಜೆ ಇಟ್ಟಾಗ ಮಾತ್ರ ಅಮೆರಿಕದ ಈ ಡಾಲರ್ ಪ್ರಾಬಲ್ಯಕ್ಕೆ ಹಿನ್ನಡೆ ಆಗಬಹುದು’ ಎಂದು ಬಂಜಗೆರೆ ಹೇಳುತ್ತಾರೆ.

ಈ ಪರಿವರ್ತನೆಯು ಹೆಚ್ಚು ಶಾಂತಿಯುತವಾಗಿರಲು, ಜಗತ್ತು ತಟಸ್ಥ, ರಾಜಕೀಯ-ರಹಿತ ಕರೆನ್ಸಿಗೆ ಚಲಿಸುವ ಸಮಯ ಬರಲಿದೆ. ಏನೇ ಆಗಲಿ, ಪ್ರಪಂಚದಾದ್ಯಂತ ಯುಎಸ್ ಡಾಲರ್ ಪ್ರಾಬಲ್ಯವು ಮುಂದಿನ ದಶಕಗಳಲ್ಲಿ ಆಪತ್ತು ಎದುರಿಸಲಿದೆ ಎಂಬುದನ್ನು ಈ ಘಟನೆಗಳು ಸೂಚಿಸುತ್ತವೆ.

-ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...

ಪಶ್ಚಿಮ ಬಂಗಾಳ| ಟಿಎಂಸಿ ನಾಯಕರ ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ; ಇಸಿಐ ಆಕ್ಷೇಪ

ರಾಜ್ಯದ ವಿವಿಧ ಹಂತಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ವೈಯಕ್ತಿಕ ಭದ್ರತೆ ಒದಗಿಸಲು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೋಲ್ಕತ್ತಾ ಪೊಲೀಸರು ನಿಯೋಜಿಸಿರುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಗಂಭೀರವಾಗಿ...

ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ : ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣ

ಅಲ್ಪಾವಧಿಯ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಏಪ್ರಿಲ್ 1, 2026ರ ಬುಧವಾರದಂದು ಅಮೆರಿಕವು ಅನಾಮಧೇಯ ಮಧ್ಯಸ್ಥಿಕೆ ರಾಷ್ಟ್ರದ ಮೂಲಕ ಇರಾನ್‌ಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮದ ಆಫರ್...

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...