Homeಕರ್ನಾಟಕಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

ಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

- Advertisement -
- Advertisement -

ಯಡಿಯೂರಪ್ಪನವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು ಎಂಬ ಕುರಿತು ಬಿಜೆಪಿಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು ಎನ್ನುವುದಾದರೆ ಈಗ ಭ್ರಷ್ಟಾಚಾರ ಹೇಗೆ ಕಡಿಮೆಯಾಗುತ್ತದೆ ಎಂಬುದು ಹೊಸ ಸಂಪುಟದಿಂದ ಗೊತ್ತಾಗುವಂತಿಲ್ಲ. ವಯಸ್ಸಿನ ಕಾರಣವನ್ನು ಯಡಿಯೂರಪ್ಪನವರೇ ಪರೋಕ್ಷವಾಗಿ ಹೇಳಿದ್ದಾರಾದರೂ, ಅದನ್ನೂ ವರಿಷ್ಠರು ಹೇಳಿಲ್ಲ. ಮುಖ್ಯಮಂತ್ರಿ ಪದಕ್ಕೆ ಏರಿಸುವಾಗಲೇ 75 ದಾಟಿತ್ತಲ್ಲಾ ಎಂಬ ಪ್ರಶ್ನೆಗೆ ಏನು ಉತ್ತರ ಹೇಳುವುದು ಎಂಬ ಇಕ್ಕಟ್ಟು ಅವರದ್ದಿರಬಹುದು. ಸಿಎಂ ಪುತ್ರ ವಿಜಯೇಂದ್ರ ಎಲ್ಲದರಲ್ಲೂ ತಲೆ ಹಾಕುತ್ತಿದ್ದರು ಮತ್ತು ಫಲವತ್ತಾದ ಖಾತೆಗಳನ್ನು ನೇರವಾಗಿ ಅಥವಾ ಡಮ್ಮಿ ಮಂತ್ರಿಗಳಿಂದ ನಿಭಾಯಿಸುತ್ತಿದ್ದರು ಎಂಬುದೇ ಕಾರಣವಾಗಿದ್ದರೆ, ಈಗಲೂ ಅವೇ ಇಬ್ಬರು ಡಮ್ಮಿ ಮಂತ್ರಿಗಳಿಗೆ ಭಾರೀ ಖಾತೆಗಳನ್ನು ನೀಡಲಾಗಿದೆ. ಅಂದರೆ ಈಗಲೂ ಈ ಖಾತೆಗಳಲ್ಲಿ ವಿಜಯೇಂದ್ರ ಕೈ ಹಾಕುತ್ತಾರೆ ಮತ್ತು ಆ ಮೂಲಕ ರಾಜ್ಯದ ಯೋಜನಾ ವೆಚ್ಚದ ಕಾಲುಭಾಗ ಅವರ ಕೈಯ್ಯಲ್ಲೇ ಇದ್ದಂತಾಗುತ್ತದೆ. ಭ್ರಷ್ಟ ಆದಾಯ ತರುವ ಇನ್ನೂ ಕೆಲವು ಖಾತೆಗಳೂ ಎರಡೂ ಕಡೆಗೆ ಹಂಚಿಕೆಯಾಗಿವೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲವಾದರೂ ಈ ಸಂಪುಟ ರಚನೆ ಮತ್ತು ಹೊಸ ಮುಖ್ಯಮಂತ್ರಿಯ ನಡೆಗಳ ಬಿಡಿ ಚಿತ್ರಗಳು ಒಟ್ಟು ಸೇರಿದರೆ ಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದೆ.

ಫಲವತ್ತಾದ ಖಾತೆಗಳು

ಈ ಸದ್ಯ ಬೃಹತ್ ನೀರಾವರಿ, ಲೋಕೋಪಯೋಗಿ, ಇಂಧನ ಮತ್ತು ಬೆಂಗಳೂರು ಅಭಿವೃದ್ಧಿಗಳು ಒಟ್ಟು ಯೋಜನಾ ವೆಚ್ಚದ ಅರ್ಧಕ್ಕೂ ಹೆಚ್ಚು ಪಾಲನ್ನು ಕಬಳಿಸುವ ಫಲವತ್ತಾದ ಖಾತೆಗಳಾಗಿವೆ. ಕಾಮಗಾರಿ ಅಥವಾ ಖರೀದಿ ಇರುವ ಈ ಇಲಾಖೆಗಳನ್ನು ಅತ್ಯಂತ ಪ್ರಭಾವಿಗಳೇ ಹಿಡಿಯುತ್ತಾರೆ. ಬೆಂಗಳೂರು ಅಭಿವೃದ್ಧಿ ಸಿಎಂ ಬೊಮ್ಮಾಯಿಯವರ ಕೈಯ್ಯಲ್ಲೇ ಇದ್ದರೆ, ಇಂಧನವನ್ನು ಹೈಕಮ್ಯಾಂಡ್ ಕ್ಯಾಂಡಿಡೇಟಾದ ಸುನಿಲ್‌ಕುಮಾರ್ ಕೈಯ್ಯಲ್ಲಿ ಕೊಟ್ಟಿದ್ದಾರೆ. ಇನ್ನೆರಡು ಅಷ್ಟು ಪ್ರಭಾವಿಗಳಲ್ಲದ ಆದರೆ ಯಡಿಯೂರಪ್ಪ ನಿಷ್ಠರಾದ ಗೋವಿಂದ ಕಾರಜೋಳ ಮತ್ತು ಸಿ.ಸಿ.ಪಾಟೀಲರಿಗೆ ವಹಿಸಲಾಗಿದೆ. ಅಲ್ಲಿಗೆ ಎರಡೂ ಬಣಗಳಿಗೂ ಮೇಯಲು ಸಮಾನ ಅವಕಾಶ ಕಲ್ಪಿಸಿದಂತಾಗಿದೆ.

ನೇರವಾಗಿ ಬಜೆಟ್‌ನಿಂದ ದೋಚದಿದ್ದರೂ, ಬೇರೆ ಆದಾಯ ಇರುವುದು ಕಂದಾಯ ಮತ್ತು ಬೃಹತ್ ಕೈಗಾರಿಕೆಗಳಲ್ಲಿ. ಇವುಗಳಲ್ಲಿ ಒಂದನ್ನು ಯಡಿಯೂರಪ್ಪ ನಿಷ್ಠ ಅಶೋಕರಿಗೂ, ಇನ್ನೊಂದು ಬಹುತೇಕ ಹೈಕಮಾಂಡ್ ನಿಷ್ಠ ನಿರಾಣಿಯವರಿಗೂ ನೀಡಲಾಗಿದೆ. ಇದರ ಅರ್ಥವನ್ನು ಅವರವರಿಗೆ ಅನಿಸಿದ ಹಾಗೆ ಮಾಡಿಕೊಳ್ಳಬಹುದು.

ಯಾಕಾಗಿ ಸವದಿ ಡಿಸಿಎಂ ಆಗಿದ್ದರು ಎಂಬ ಉಳಿದುಕೊಂಡ ಪ್ರಶ್ನೆ

ಯಡಿಯೂರಪ್ಪನವರಿಗೆ ತಿಂಗಳುಗಟ್ಟಲೆ ಕಾಡಿ ಸಂಪುಟ ರಚನೆಗೆ ಅಸ್ತು ಎಂದ ಹೈಕಮಾಂಡ್ ಯಾರೂ ನಿರೀಕ್ಷಿಸಿರದ ಮೂವರು ಡಿಸಿಎಂಗಳನ್ನೂ ದಯಪಾಲಿಸಿತ್ತು. ಅವರಲ್ಲೊಬ್ಬರು ಮುಖ್ಯಮಂತ್ರಿಯ ಜಾತಿಗೇ ಸೇರಿದ ಲಕ್ಷ್ಮಣ ಸವದಿ, ವಿಧಾನಸಭೆಯಲ್ಲಿ ಸೋತಿದ್ದ ಅಭ್ಯರ್ಥಿ. ಈ ಮಧ್ಯೆ ಅವರನ್ನು ಎಂಎಲ್‌ಸಿಯನ್ನಾಗಿಯೂ ಮಾಡಲಾಗಿತ್ತು. ಈಗ ಅವರು ಇದ್ದಕ್ಕಿದ್ದಂತೆ ಸಚಿವ ಸ್ಥಾನಕ್ಕೂ ಬಂದಿಲ್ಲ. ಇನ್ನಿಬ್ಬರು ಡಿಸಿಎಂಗಳು ಮಂತ್ರಿಗಳಾಗಿ ಮುಂದುವರೆದಿದ್ದಾರೆ. ಹಾಗಾದರೆ ಸವದಿಯಲ್ಲಿ ಏನು ಕಂಡು ಡಿಸಿಎಂ ಮಾಡಿದ್ದಿರಿ? ಏನು ಕಾಣದೇ ಕಿತ್ತು ಹಾಕಿದಿರಿ? ಇದಕ್ಕೆ ಉತ್ತರವನ್ನು ಯಾರು ಬಲ್ಲರು?

PC: Mangalorean.com

ಪರೀಕ್ಷೆಯಲ್ಲಿ ಫೇಲಾದದ್ದು ಪರೀಕ್ಷಾ ಸಚಿವರು, ಮತ್ತೆ ಬಂದವರೂ ಅಯ್ನೋರು

ಚಾಮರಾಜನಗರ ಜಿಲ್ಲೆಯಲ್ಲಾದ ಆಕ್ಸಿಜನ್ ಅವಘಡದ ಕಾರಣಕ್ಕೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಂತ್ರಿ ಸ್ಥಾನ ಕಳೆದುಕೊಂಡರು ಎಂದರೆ ಯಾರೂ ನಂಬುವುದಿಲ್ಲ. ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಖಾತರಿ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಕ್ಕಿಂತ ಪರೀಕ್ಷೆ ಖಾತರಿ ಮಾಡುವುದಕ್ಕೆ ಹೆಚ್ಚು ಗಮನ ಹರಿಸಿದ್ದು ಅವರ ಖ್ಯಾತಿ. ಅದನ್ನು ಬಿಟ್ಟರೆ ಅವರ ಅಪಾರ ಸಾಧನೆಯೇನೂ ಈ ಸಾರಿ ಕಣ್ಣಿಗೆ ಬಿದ್ದಿಲ್ಲ. ಆದರೆ ಗಮನ ಹರಿಸಬೇಕಾದ ಸಂಗತಿಯೇನೆಂದರೆ, ಬಿಜೆಪಿ ಸರ್ಕಾರದಲ್ಲಿ (ಯಡಿಯೂರಪ್ಪನವರ ಮೊದಲ ಇನ್ನಿಂಗ್ಸ್‌ನಿಂದ ಆರಂಭಿಸಿ ಇಲ್ಲಿಯವರೆಗೆ) ಪ್ರಾಥಮಿಕ ಶಿಕ್ಷಣ ಖಾತೆ ಬ್ರಾಹ್ಮಣರಿಗೆ ಮಾತ್ರ. ಸುರೇಶ್ ಕುಮಾರ್ ಜಾಗಕ್ಕೆ ಬಂದವರು ತಿಪಟೂರಿನ ಬ್ರಾಹ್ಮಣ ಶಾಸಕ ಬಿ.ಸಿ.ನಾಗೇಶ್.

ಲಿಂಬಾವಳಿಯೇಕೆ ಅನರ್ಹ?

ಇನ್ನೂ ಖಾಲಿ ಉಳಿದಿರುವ (ಖಾಲಿಯಂತೇನೂ ಇಲ್ಲ; ಆದರೆ ಸಚಿವರಾಗಬಹುದಾದ ಗರಿಷ್ಠ ಸಂಖ್ಯೆಯ ಸ್ಥಾನಗಳು ಇನ್ನೂ ತುಂಬಿಲ್ಲ) ಸ್ಥಾನಕ್ಕೆ ಯಾರು ಬರುತ್ತಾರೆ ಎಂದು ಯಾರೂ ಲೆಕ್ಕ ಹಾಕಿಟ್ಟಿಲ್ಲವಾದರೂ, ಈ ಸಾರಿಯಂತೂ ಅರವಿಂದ ಲಿಂಬಾವಳಿ ಮಂತ್ರಿಯಲ್ಲ. ಯಡಿಯೂರಪ್ಪ ಮೊದಲ ಇನ್ನಿಂಗ್ಸ್‌ನಲ್ಲಿ ಬೋವಿ ಜನಾಂಗಕ್ಕೆ ಸೇರಿದ ಲಿಂಬಾವಳಿಯೂ ಸೇರಿದಂತೆ ಈ ಹಿಂದೆ ಮೂವರು ಅದೇ ಸಮುದಾಯಕ್ಕೆ ಸೇರಿದ ಮಂತ್ರಿಗಳಿದ್ದರು. ಮಾದಿಗ ಸಮುದಾಯವನ್ನು ತನ್ನ ಮತಬ್ಯಾಂಕಿನೊಳಕ್ಕೆ ಸೇರಿಸಿಕೊಳ್ಳಲು ಬೇಕಾದ ಪ್ರಯತ್ನ ಶುರು ಮಾಡಿದ್ದರೂ, ಬಿಜೆಪಿಯ ಕಡೆಯಿಂದ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಅಸ್ಪೃಶ್ಯ ದಲಿತರಿಗೇ ಹೆಚ್ಚು ಟಿಕೆಟ್ ಕೊಡಲಾಗಿತ್ತು. ಅದರ ಜೊತೆಗೆ ಪಕ್ಷೇತರನಾಗಿ ಒಳಕ್ಕೆ ಬಂದಿದ್ದ ಶಿವರಾಜ ತಂಗಡಿಯನ್ನೂ ಮಂತ್ರಿಯನ್ನಾಗಿಸಲು ಆ ರೀತಿ ಮಾಡಲಾಗಿತ್ತು. ಆದರೆ ಈ ಸಾರಿ ಲಂಬಾಣಿ ಸಮುದಾಯಕ್ಕೆ ಸೇರಿದ್ದ ಪ್ರಭು ಚೌಹಾಣ್ ಬಿಟ್ಟರೆ ಉಳಿದವರಿಗೆ ಅವಕಾಶವಿಲ್ಲವಾಗಿದೆ. ತನ್ನ ಕ್ಷೇತ್ರದ ಜೊತೆಗೆ ತನ್ನ ಭಾವನೆಂಟ ರಘುವಿನ ಕ್ಷೇತ್ರಕ್ಕಷ್ಟೇ ಪ್ರಭಾವ ಹೊಂದಿರುವ ಲಿಂಬಾವಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲವೆಂದು ಬಿಜೆಪಿ ಭಾವಿಸಿದಂತಿದೆ.

ಪರಿಶಿಷ್ಟ ಪಂಗಡಕ್ಕೊಂದು ಖಾತೆ

ಮುಖ್ಯಮಂತ್ರಿಯಾದ ನಂತರ ಖಾತೆ ಹಂಚುವ ಮೊದಲೇ ಹೊಸ ಖಾತೆಯನ್ನೂ ಬೊಮ್ಮಾಯಿ ಶುರು ಮಾಡಿದರು. ಅದೇ ಪರಿಶಿಷ್ಟ ಪಂಗಡ ಖಾತೆ. ಕರ್ನಾಟಕದ ಆದಿವಾಸಿ ಗಿರಿಜನರು ಎಸ್‌ಟಿ (ಶೆಡ್ಯೂಲ್ಡ್ ಟ್ರೈಬ್) ಕೋಟಾದಲ್ಲಿ ಪಡೆದುಕೊಂಡಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನುಕೂಲ ಪಡೆದುಕೊಂಡಿದ್ದು ಅವರಿಗಿಂತ ಎಲ್ಲ ರೀತಿಯಲ್ಲೂ ಬಲಾಢ್ಯರಾದ ನಾಯಕ/ವಾಲ್ಮೀಕಿ ಸಮುದಾಯ. ಮಧ್ಯ ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ಶ್ರೀರಾಮುಲು ಮೂಲಕ ಗೆದ್ದುಕೊಳ್ಳುವಲ್ಲಿ ಬಿಜೆಪಿಯು ಸಾಕಷ್ಟು ಯಶಸ್ವಿಯಾಗಿತ್ತು. ಅದಕ್ಕೆ ತಕ್ಕುನಾಗಿ ಶ್ರೀರಾಮುಲುರನ್ನು ಡಿಸಿಎಂ ಆಗಿ ಮಾಡುವುದಾಗಿ ಹೇಳುತ್ತಲೇ ಬರಲಾಗಿತ್ತು. ದೆಹಲಿಯಲ್ಲೂ ಅಧಿಕಾರದಲ್ಲಿಲ್ಲದೇ, ಇಲ್ಲೂ ಪೂರ್ಣ ಅಧಿಕಾರವಿಲ್ಲದೇ ’ಸಂಪನ್ಮೂಲ ಕೊರತೆಯಿಂದ’ ’ಕಷ್ಟ ಪಡಬೇಕಾಗಿ’ ಬಂದಿದ್ದ ಬಿಜೆಪಿಯು ಹಿಂದೆ ರೆಡ್ಡಿ ಹಾಗೂ ರಾಮುಲುಗಳ ಅಗಾಧ ಗಣಿ ಲೂಟಿ ಹಣವನ್ನು ಆಧರಿಸಬೇಕಾಗಿ ಬಂದಿತ್ತು. ಅವರೇ ಲೋಡುಗಟ್ಟಲೇ ಶಾಸಕರನ್ನು ಆಪರೇಷನ್ ಮಾಡಿ ಎತ್ತಿಕೊಂಡು ಬಂದು ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಿದ್ದರು. ಈ ಸಾರಿ ಅಂತಹ ಅಗತ್ಯವೇನೂ ಇರದಂತೆ ’ಗಟ್ಟಿಕುಳ’ಗಳಾಗಿ ಹಲವರು ಸಮೃದ್ಧರಾಗಿದ್ದಾರೆ. ಹೀಗಾಗಿ ರಾಮುಲುಗೆ ಡಿಸಿಎಂ ಇನ್ನು ಕನಸೇ ಸರಿ.

ಆದರೆ ನಾಯಕ/ವಾಲ್ಮೀಕಿ ಸಮುದಾಯವನ್ನು ಹಾಗೇ ಬಿಡಲಾದೀತೇ? ಹಾಗಾಗಿ ಪ್ರತ್ಯೇಕ ಖಾತೆ. ಈ ಹಿಂದೆ ಕೊಟ್ಟಿದ್ದಕ್ಕಿಂತ ಅನುದಾನ ಹೆಚ್ಚು ಕೊಡದಿದ್ದರೂ, ನಮಗೊಂದು ಖಾತೆ ಕೊಟ್ಟರು ಎಂದಾದರೂ ಖುಷಿಗೊಳ್ಳುವ ಐಡೆಂಟಿಟಿ ರಾಜಕಾರಣಕ್ಕೆ ಇದರಿಂದ ಹೆಚ್ಚಿನ ಉಮೇದು ಸಿಗುತ್ತದೆ.

ಸರಳ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೊದಲ ಆದ್ಯತೆ ಏನಾಗಿತ್ತು?

ಸರಳರೆಂದು ಕರೆಸಿಕೊಳ್ಳುವುದಷ್ಟೇ ಅಲ್ಲದೇ, ನಿಜಕ್ಕೂ ಸರಳರಾಗಿರುವ ಕೋಟಾ ಶ್ರೀನಿವಾಸ ಪೂಜಾರಿಯವರದ್ದು ಬಿಲ್ಲವ ಸಮುದಾಯ. ಹಿಂದಿನ ಸಂಪುಟದಲ್ಲಿ ಅವರದ್ದು ’ದೇವರ ಖಾತೆ’ – ಮುಜರಾಯಿ. ಈ ಸಾರಿ ಬಡ್ತಿ ಸಿಕ್ಕು ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಅವರು ಸಚಿವರಾಗುವ ಹೊತ್ತಿಗೆ, ಅದರಿಂದ ಪರಿಶಿಷ್ಟ ಪಂಗಡವನ್ನು ಬೇರೆಯಾಗಿಸಲಾಗಿದೆ. ಸ್ವತಃ ದಲಿತರಲ್ಲದ ಪೂಜಾರಿಯವರು, ಖಾತೆ ಪಡೆದ ನಂತರ ಮೊದಲು ಆಯ್ದುಕೊಂಡ ಮಹತ್ವ ಕೆಲಸವೇನು ಗೊತ್ತೇ? ಹೊಸ ಗೃಹ ಸಚಿವರನ್ನು ಭೇಟಿಯಾಗಿ ’ಹಿಂದೂ ಕಾರ್ಯಕರ್ತರ ಮೇಲೆ’ ಹಾಕಲಾದ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದು!

ಇನ್ನು ಅವರ ಎರಡನೆಯ ಆದ್ಯತೆ ಶ್ಲಾಘನೀಯವೇ. ಅದು ಎಸ್‌ಸಿ ಸಮುದಾಯಕ್ಕೆ ನೀಡುವ ಮನೆ ಗ್ರಾಂಟ್‌ಅನ್ನು ಐದು ಲಕ್ಷಕ್ಕೇರಿಸುವ ಆಲೋಚನೆ.

ಮುಂದಿನ ಆದ್ಯತೆಗಳು ಸ್ಪಷ್ಟವಾಗುತ್ತಿವೆಯೇ?

ದೆಹಲಿಯ ಜಂತರ್ ಮಂತರ್‌ನಲ್ಲಿ ಕೋಮು ಪ್ರಚೋದಕ ಘೋಷಣೆ ಕೂಗಿದ್ದು ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲೂ ಮಂಗಳೂರಿನ ಭಜರಂಗದಳದ ಶರಣ್ ಪಂಪ್‌ವೆಲ್ ಸಹಾ ಅಂತಹುದೇ ಮಾತನ್ನಾಡಿದ್ದಾರೆ. ಸಚಿವ ಈಶ್ವರಪ್ಪ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡಿದ್ದಾರೆ. ಸ್ವತಃ ಮುಖ್ಯಮಂತ್ರಿ ತಾನು ಸಾಂವಿಧಾನಿಕ ಪೀಠದಲ್ಲಿ ಕೂತಿದ್ದೇನೆಂಬುದನ್ನು ಮರೆತು ಆರೆಸ್ಸೆಸ್ ಕಚೇರಿಗೆ ಹೋಗಿ ಬರುವುದು, ಪಕ್ಷದ ಕಾರ್ಯಕ್ರಮಗಳಲ್ಲಿ ಇತರ ಪಕ್ಷಗಳಿಗೆ ಹೋಲಿಸಿ ಬಹಿರಂಗವಾಗಿ ಟೀಕಿಸುವುದನ್ನು ಮಾಡುತ್ತಿದ್ದಾರೆ.

ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಸೂಚ್ಯಂಕಗಳೆಲ್ಲದರಲ್ಲೂ ಹಿಂದೆ ಬಿದ್ದಿರುವ ದೇಶದಲ್ಲಿ ಮತ್ತೆ ಅಧಿಕಾರ ಪಡೆದುಕೊಳ್ಳಲು ಬೇಕಾದದ್ದು ಸಾಮಾಜಿಕ ಬಿಕ್ಕಟ್ಟು. ಅದಕ್ಕೆ ಬೇಕಾದ ಕಾರ್ಯಸೂಚಿ ಇದ್ದಕ್ಕಿದ್ದಂತೆ ಚುರುಕು ಪಡೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಬರುವ ಹಾಗೆ ಮೇಲಿನ ನಡೆಗಳಿವೆ. ಕೆಲವು ಪ್ರಗತಿಪರರು ಆಶಿಸಿದ ಹಾಗೆ ಅಷ್ಟು ಕೋಮುವಾದಿಯಲ್ಲದಂತೆ ನಡೆದುಕೊಳ್ಳುವ ಯಾವ ಭರವಸೆಯನ್ನೂ ಹೊಸ ಮುಖ್ಯಮಂತ್ರಿ ಬೊಮ್ಮಾಯಿಯವರು ಇನ್ನೂ ಮೂಡಿಸಿಲ್ಲ. ಯಾವುದಕ್ಕೂ ಮುಂದಿನ ದಿನಗಳು ಇದನ್ನು ಸ್ಪಷ್ಟಪಡಿಸಲಿವೆ.

ಒಟ್ಟಾರೆಯಾಗಿ ಕರ್ನಾಟಕವನ್ನು, ದೇಶದ ಆರ್ಥಿಕ ಬಿಕ್ಕಟ್ಟನ್ನು, ಯಡಿಯೂರಪ್ಪನವರನ್ನು ನಿಭಾಯಿಸುವುದು ಯಾವುದರಲ್ಲೂ ಖಚಿತ ನಡೆಗಳು ಸಾಧ್ಯವಾಗದ ಸರ್ಕಾರದ ಬಲಬಿಡಂಗಿ ನಿರ್ಧಾರಗಳು ಎಲ್ಲದರಲ್ಲೂ ಎದ್ದು ಕಾಣುತ್ತಿವೆ. ಮೇಲಿನ ಬಿಡಿಚಿತ್ರಗಳೂ ಅವನ್ನೇ ಸಾಬೀತುಪಡಿಸುತ್ತಿವೆ.


ಇದನ್ನೂ ಓದಿ: ಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ: ಕಾಂಗ್ರೆಸ್ ಆಕ್ರೋಶ, ಕ್ಷಮೆ ಕೇಳಿದ ಈಶ್ವರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...