Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್‌: ಈ ಚಿತ್ರವನ್ನು ಮಹಿಳೆಯರ ಕಾಲಿಗೆ ಸಂಕೋಲೆ ಕಟ್ಟಿರುವಂತೆ ಎಡಿಟ್ ಮಾಡಲಾಗಿದೆ!

ಫ್ಯಾಕ್ಟ್‌‌ಚೆಕ್‌: ಈ ಚಿತ್ರವನ್ನು ಮಹಿಳೆಯರ ಕಾಲಿಗೆ ಸಂಕೋಲೆ ಕಟ್ಟಿರುವಂತೆ ಎಡಿಟ್ ಮಾಡಲಾಗಿದೆ!

- Advertisement -
- Advertisement -

ಅಫ್ಘಾನ್‌ ದೇಶವನ್ನು ಇಪ್ಪತ್ತು ವರ್ಷಗಳ ನಂತರ ತಾಲಿಬಾನ್‌ ಮರು ವಶಪಡಿಸಿಕೊಂಡ ನಂತರ ಹಲವು ಬರ್ಬರ ಮತ್ತು ಮಾನವೀಯ ಬಿಕ್ಕಟ್ಟಿನ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲೊಂದಾಗಿದೆ, ‘ಬುರ್ಖಾ ಧರಿಸಿರುವ ಮೂವರು ಮಹಿಳೆಯರ ಕಾಲಿಗೆ ಸರಪಣಿಯಿಂದ ಕಟ್ಟಿ ವ್ಯಕ್ತಿಯೊಬ್ಬ ಎಳೆದೊಯ್ಯುತ್ತಿರುವ’ ಚಿತ್ರ. ಈ ಚಿತ್ರದೊಂದಿಗೆ ಪಾಶ್ಚಿಮಾತ್ಯ ಉಡುಪಿನಲ್ಲಿರುವ ಮಹಿಳೆಯರ ಇನ್ನೊಂದು ಫೋಟೋವನ್ನು ಚಿತ್ರವನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ.

ಈ ಎರಡು ಚಿತ್ರವನ್ನು ಹಂಚಿ, ತಾಲಿಬಾನ್‌ ಆಕ್ರಮಿತ ಅಫ್ಘಾನ್‌ ಮತ್ತು 1960-70 ರ ದಶಕದಲ್ಲಿನ ಅಫ್ಘಾನಿನ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸಲಾಗುತ್ತಿದೆ. ಟಿವಿ 9 ಭಾರತವರ್ಶ್ ನಿರೂಪಕ ಶುಭಂಕರ್ ಮಿಶ್ರಾ ಕೂಡಾ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಅವರ ಟ್ವೀಟ್‌ ಅನ್ನು ಕೆಳಗೆ ನೀಡಲಾಗಿದೆ. (ಆರ್ಕೈವ್ ಲಿಂಕ್)

ಮೇಲಿನ ಟ್ವೀಟ್‌ಗಳನ್ನು ಹಾಕಿದ ಕೆಲವೆ ಗಂಟೆಗಳ ನಂತರ, ಶುಭಂಕರ್ ಮಿಶ್ರಾ ಮತ್ತೊಮ್ಮೆ ಚಿತ್ರಗಳನ್ನು ಬೇರೆ ಗ್ರಾಫಿಕ್‌ನಲ್ಲಿ ಟ್ವೀಟ್ ಮಾಡಿದ್ದಾರೆ. (ಆರ್ಕೈವ್ ಲಿಂಕ್)

ಈ ಚಿತ್ರವು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಈ ಚಿತ್ರಗಳು ಫೇಸ್‌ಬುಕ್‌ನಲ್ಲಿ ಕೂಡಾ ವೈರಲ್‌ ಆಗಿದೆ. (1 ಮತ್ತು 2)

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಚಿತ್ರಗಳನ್ನು ಖ್ಯಾತ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ಆಗಿರುವ ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ನಡೆಸಿದೆ. ವೈರಲ್‌ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ, ಸಂಕೋಲೆಗಳ ನೆರಳು ಸ್ವಲ್ಪ ವಿಚಿತ್ರವಾಗಿರುವುದನ್ನು ಗಮನಿಸಬಹುದಾಗಿದೆ. ಪುರುಷ ಮತ್ತು ಅವರ ಹಿಂದೆ ಇರುವ ಮಹಿಳೆಯ ನಡುವೆ ಸಂಕೋಲೆಯ ನೆರಳು ಗೋಚರಿಸುತ್ತದೆ, ಆದರೆ ನಂತರದ ಮಹಿಳೆಯ ನಡುವೆ ಈ ನೆರಳು ಕಾಣೆಯಾಗಿದೆ. ಆದರೆ ಎರಡನೆ ಮತ್ತು ಮೂರನೆ ಮಹಿಳೆಯ ನಡುವೆ ಇದು ಮತ್ತೆ ಕಾಣುತ್ತಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕಾಲಿಗೆ ಸರಪಳಿ ತೊಡಿಸಿರುವ ಚಿತ್ರ ಸ್ಟಾನ್ ಸ್ವಾಮಿಯವರದ್ದಲ್ಲ

ಈ ಚಿತ್ರಗಳಿಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಿರುವ ಆಲ್ಟ್‌ನ್ಯೂಸ್‌, ಎಬಿಪಿ ನ್ಯೂಸ್‌ನ ಬಂಗಾಳಿ ವಿಭಾಗವಾದ ಎಬಿಪಿ ಆನಂದದ 2017 ರ ವರದಿಯಲ್ಲಿ ವೈರಲ್‌ ಚಿತ್ರವನ್ನು ಪತ್ತೆಹಚ್ಚಿದೆ. ಆದರೆ ಈ ವರದಿಯಲ್ಲಿ ಇರುವ ಅದೇ ಚಿತ್ರದಲ್ಲಿ ಯಾವುದೆ ಸಂಕೋಲೆಗಳಿಲ್ಲ.

ಇದೇ ಚಿತ್ರವನ್ನು ‘ಮಾರ್ಡೆನ್‌ ಡಿಪ್ಲೊಮಸಿ’ 2017 ರ ಲೇಖನದಲ್ಲಿ ಬಳಸಿಕೊಂಡಿದೆ. ಇಲ್ಲಿಯೂ ವೈರಲ್‌ ಚಿತ್ರದಲ್ಲಿ ಇರುವಂತೆ ಯಾವುದೇ ಸಂಕೋಲೆಗಳು ಕಾಣುತ್ತಿಲ್ಲ.

ಇಷ್ಟೇ ಅಲ್ಲದೆ, 2011 ಮತ್ತು 2012 ರಲ್ಲಿ ಬರೆದ ಕೆಲವು ಬ್ಲಾಗ್ ಪೋಸ್ಟ್‌ಗಳಲ್ಲಿ ಕೂಡಾ ಈ ಚಿತ್ರವನ್ನು ಬಳಸಿಕೊಳ್ಳಲಾಗಿದ್ದು, ಅವುಗಳಲ್ಲಿ ಕೂಡಾ ಸಂಕೋಲೆಗಳು ಇಲ್ಲ. [ಲಿಂಕ್ 1 (ಆರ್ಕೈವ್ ಲಿಂಕ್), ಲಿಂಕ್ 2 (ಆರ್ಕೈವ್ ಲಿಂಕ್), ಲಿಂಕ್ 3 (2012 ಆರ್ಕೈವ್ ಲಿಂಕ್), ಲಿಂಕ್ 4 (2016 ಆರ್ಕೈವ್ ಲಿಂಕ್)]

ಇಂಟರ್ನೆಟ್ ಆರ್ಕೈವ್ ಲೈಬ್ರರಿಯನ್ನು ಬಳಸಿ, ಆಲ್ಟ್ ನ್ಯೂಸ್ ಈ ಬ್ಲಾಗ್ ಪೋಸ್ಟ್‌ಗಳ ಆರ್ಕೈವ್‌ ಮಾಡಿದೆ. ವಾಸ್ತವಲ್ಲಿ ಮೂಲ ಫೋಟೋವನ್ನು ಮೇ 2011 ರಲ್ಲಿ ಹಂಚಿಕೊಳ್ಳಲಾಗಿದೆ. ಇದರರ್ಥ ಚಿತ್ರವು ಕನಿಷ್ಠ 10 ವರ್ಷ ಹಳೆಯದಾಗಿದೆ.

ಇದನ್ನೂ ಓದಿ: ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬ ವೈರಲ್ ವಿಡಿಯೋ ಸುಳ್ಳು: ವಾಸ್ತವವೇನು?

ಈ ಎಲ್ಲಾ ಬ್ಲಾಗ್ ಪೋಸ್ಟ್‌ಗಳು ಒಂದೇ ಆಗಿದ್ದು, ಅವುಗಳನ್ನು ಪದಶಃ ಕಾಪಿ ಪೇಸ್ಟ್‌ ಮಾಡಲಾಗಿದೆ. ಎಲ್ಲಾ ಬ್ಲಾಗ್‌ ಪೋಸ್ಟ್‌ಗಳೂ, ಅಮೆರಿಕಾದ ಪತ್ರಕರ್ತೆ ಬಾರ್ಬರಾ ವಾಲ್ಟರ್ಸ್ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾಗ, ಅಫ್ಘಾನಿಸ್ತಾನದ ಮಹಿಳೆಯೊಂದಿಗೆ ಮಾತನಾಡಿದ ಘಟನೆಯನ್ನು ವಿವರಿಸುತ್ತದೆ.

2017 ರಲ್ಲಿ ಅಭಿಜಿತ್ ಅಯ್ಯರ್ ಮಿತ್ರ ಅವರು ವಾಟ್ಸಾಪ್ ಅನ್ನು ಉಲ್ಲೇಖಿಸಿ ಟ್ವಿಟರ್‌ನಲ್ಲಿ ಅದೇ ಕಥೆಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ, ಈ ಘಟನೆಯನ್ನು ಹಿಂದೆ ಭಾರತದಲ್ಲೂ ಹಂಚಿಕೊಳ್ಳಲಾಗಿತ್ತು. (ಆರ್ಕೈವ್ ಲಿಂಕ್)

ಬಾರ್ಬರಾ ವಾಲ್ಟರ್ಸ್ ವರದಿ ಮಾಡಿದ ಈ ಘಟನೆಯನ್ನು ಅಮೆರಿಕದ ಪ್ಯಾಕ್ಟ್‌ ಚೆಕಿಂಗ್‌ ಸಂಸ್ಥೆ 2014 ರಲ್ಲಿ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಹೊರ ಹಾಕಿದೆ. ಅದು ನಡೆಸಿದ ತನಿಖೆಯಂತೆ ಈ ಘಟನೆಯು ಕೇವಲ ವಿಡಂಬನಾತ್ಮಕ ಎಂದು ತೀರ್ಮಾನಿಸಿದೆ, ಇದು 2001 ರಿಂದ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಮಾರು ಹತ್ತು ವರ್ಷಗಳ ಹಿಂದಿನ ಚಿತ್ರವನ್ನು ಎಡಿಟ್‌ ಮಾಡಿ, ತಾಲಿಬಾ‌ನ್‌‌ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರದ ಚಿತ್ರ ಎಂದು ಶೇರ್‌ ಮಾಡಲಾಗುತ್ತಿದೆ.

ಕೃಪೆ: ಆಲ್ಟ್‌ನ್ಯೂಸ್

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...