Homeಕರ್ನಾಟಕಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ದೆಹಲಿಯಿಂದ ಮರಳಿದ ಯಡಿಯೂರಪ್ಪ ತುಂಬಾ ನಿರಾಶೆಯಲ್ಲಿದ್ದಾರೆ. ಪ್ರಚಂಡ ಜಯದಿಂದ ಯಾರ ಮಾತನ್ನೂ ಕೇಳಿಸಿಕೊಳ್ಳದ ಸ್ಥಿತಿಯಲ್ಲಿರುವ `ಮೋದಿ-ಶಾ’ ಹೈಕಮಾಂಡ್ ಸದ್ಯಕ್ಕೆ ಯಾವ ಆಪರೇಷನ್ನೂ ಮಾಡಬೇಡಿ, ಸುಮ್ಮನೇ ವಿರೋಧ ಪಕ್ಷದಲ್ಲಿ ಕೂಡಿ ಎಂದು ಖಡಕ್ ಆದೇಶವನ್ನು ಯಡಿಯೂರಪ್ಪರಿಗೆ ನೀಡಿ ಕಳಿಸಿದೆ. ಇನ್ನೊಂದು ಕಡೆ ಯಡಿಯೂರಪ್ಪ ಸೂಚಿಸಿದ ಬೆಜೆಪಿ ಸಂಸದರಿಗೆ ಒಂದೂ ಸಚಿವ ಸ್ಥಾನ ನೀಡದೇ ಯಡಿಯೂರಪ್ಪರನ್ನು ಹೈಕಮಾಂಡ್ ಮೂಲೆಗೆ ತಳ್ಳಿದೆ. ಬಿಜೆಪಿಯಲ್ಲಿ ಯುಡಿಯೂರಪ್ಪ ಕತೆ ಮುಗಿದೇ ಹೋಯ್ತಾ?

ಮೋದಿಯವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬಂದಿಳಿದ ಯಡಿಯೂರಪ್ಪನವರ ಮುಖದಲ್ಲಿ ಈ ಮೊದಲಿದ್ದ ಯಾವ ಲವಲವಿಕೆಯೂ ಉಳಿದಿಲ್ಲ. ಮೇ 23ಕ್ಕೆ ರಾಜ್ಯ ಮೈತ್ರಿ ಸರ್ಕಾರ ಮುರಿದುಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ತುಂಬು ಹುಮ್ಮಸ್ಸಿನಲ್ಲಿ ಮಾತಾಡುತ್ತಿದ್ದ ಯಡಿಯೂರಪ್ಪನವರು ದಿಲ್ಲಿಯಿಂದ ಬರುತ್ತಿದ್ದಂತೆಯೇ “ಸದ್ಯಕ್ಕೆ ಸರ್ಕಾರದ ಪತನಕ್ಕೆ ಕೈಯಾಕಬೇಡಿ ಎಂದು ವರಿಷ್ಠರು ಸೂಚಿಸಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡದೇ ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ” ಎಂಬ ಅಚ್ಚರಿ ಹೇಳಿಕೆ ನೀಡಿ ಅವರ ಹಿಂಬಾಲಕರೇ ತಬ್ಬಿಬ್ಬಾಗುವಂತೆ ಮಾಡಿದ್ದಾರೆ.

ಇದಕ್ಕೆ ಅವರು ಕೊಡುತ್ತಿರುವ ಕಾರಣ, “ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ನಾಲ್ಕು ಶಾಸಕರನ್ನು ಅತೃಪ್ತರಂತೆ ಮುಂದೆ ಬಿಟ್ಟು ಬಿಜೆಪಿಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ನೀವು ಸರ್ಕಾರ ಪತನದ ಯತ್ನಕ್ಕೆ ಕೈಹಾಕಬೇಡಿ ಎಂಬ ಸಲಹೆ ನೀಡಿದ್ದಾರೆ” ಎನ್ನುತ್ತಿದ್ದಾರೆ.

ಆದರೆ ದಿಲ್ಲಿಯ ಬಲ್ಲ ಮೂಲಗಳು ಹೇಳುವಂತೆ ಯಡಿಯೂರಪ್ಪನವರು ಪ್ರಮಾಣವಚನ ಕಾರ್ಯಕ್ರಮದ ನೆಪದಲ್ಲಿ ದಿಲ್ಲಿಗೆ ಬಂದಿದ್ದೇ ಎರಡು ಅಜೆಂಡಾ ಇಟ್ಟುಕೊಂಡು. ಮೊದಲನೆಯದ್ದು, ತಮ್ಮ ಬೆಂಬಲಿಗ ಸಂಸದರಿಗೆ ಮೋದಿ ಸಂಪುಟದಲ್ಲಿ ಮಂತ್ರಿ ಮಾಡಿಸುವುದು. ಎರಡನೆಯದ್ದು, ಆಪರೇಷನ್ ಕಮಲಕ್ಕೆ ಅಧಿಕೃತ ಸಮ್ಮತಿ ಪಡೆದುಕೊಂಡು ಬರುವುದು. ಆದರೆ ಇವೆರಡೂ ಈಡೇರಿಲ್ಲ ಮಾತ್ರವಲ್ಲ, ಇನ್ನುಮುಂದೆ ಬಿಜೆಪಿಯಲ್ಲಿ ನಿಮ್ಮ ಪ್ರಾಧಾನ್ಯತೆ ಸಾಕು ಎಂಬ ಸ್ಪಷ್ಟ ಸುಳಿವನ್ನೂ ಅಮಿತ್ ಶಾ ನೀಡಿ ಕಳಿಸಿದ್ದಾರೆ ಎನ್ನುತ್ತವೆ ದಿಲ್ಲಿ ಮೂಲಗಳು.

ಯಡಿಯೂರಪ್ಪನವರು, ತಮ್ಮ ಆಪ್ತರಾದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು! ಇದಕ್ಕೆ ತಣ್ಣೀರು ಎರಚಿದ ಹೈಕಮಾಂಡ್ ಯಡಿಯೂರಪ್ಪ ಬಣದಿಂದ ಹೊರಗಡೆ ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಸುರೇಶ್ ಅಂಗಡಿಗೆ ಮಾತ್ರ ಸಚಿವಗಿರಿ ದಯಪಾಲಿಸಿದೆ. ರಾಜ್ಯದಿಂದ ಈ ಹೆಸರುಗಳನ್ನು ಆರೆಸ್ಸೆಸ್ ಪರವಾಗಿ ಶಿಫಾರಸ್ಸು ಮಾಡಿದ್ದೇ ಸಂತೋಷ್‍ಜೀ ಎಂಬ ಸತ್ಯ ಯಡಿಯೂರಪ್ಪನವರನ್ನು ಮತ್ತಷ್ಟು ದಿಗ್ಭ್ರಮೆ ಗೊಳಿಸಿರಲಿಕ್ಕೂ ಸಾಕು.

ಎಂಪಿ ಎಲೆಕ್ಷನ್ನಿಗೆ ಟಿಕೇಟ್ ಹಂಚಿಕೆಯಲ್ಲೂ ಯಡಿಯೂರಪ್ಪನವರ ಶಿಫಾರಸ್ಸಿಗೆ ಹೈಕಮಾಂಡ್ ಮಣೆ ಹಾಕರಲಿಲ್ಲ ಎನ್ನುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಅಲ್ಲೂ ತೇಜಸ್ವಿ ಸೂರ್ಯನಂತ ಸಂತೋಷ್‍ಜಿ ಶಿಷ್ಯರಿಗೇ ಮಣೆ ಹಾಕಲಾಗಿತ್ತು. ಶೋಭಾ ಕರಂದ್ಲಾಜೆ ಮತ್ತು ಕರಡಿ ಸಂಗಣ್ಣರಿಗೆ ಟಿಕೇಟು ತರಲು ಯಡಿಯೂರಪ್ಪ ಹರಸಾಹಸ ಪಡಬೇಕಾಗಿ ಬಂದಿತ್ತು. ಅಲ್ಲದೇ ಚಿಕ್ಕೋಡಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೂ ಟಿಕೆಟ್ ತರುವಲ್ಲಿ ಯಡಿಯೂರಪ್ಪ ಮುಗ್ಗರಿಸಿದ್ದರು.

ಕುಂದಗೋಳ ಉಪ ಚುನಾವಣೆಯಲ್ಲೂ ಯಡಿಯೂರಪ್ಪ ಬೀಗ ಚಿಕ್ಕನಗೌಡರಿಗೆ ಟಿಕೆಟ್ ತಪ್ಪಿಸುವ ಯತ್ನ ಮಾಡಲಾಗಿತ್ತು. ಕೊನೆಗೂ ಯಡಿಯೂರಪ್ಪ ಟಿಕೆಟ್ ತಂದರಾದರೂ ಹುಬ್ಬಳ್ಳಿ-ಧಾರವಾಡದ ಬಿಜೆಪಿ ನಾಯಕರು ಚಿಕ್ಕನಗೌಡರ ಪರ ಮನಪೂರ್ವಕ ಪ್ರಚಾರ ಮಾಡದೇ ಯಡಿಯೂರಪ್ಪ ಬೀಗನಿಗೆ ಸೋಲು ತಂದಿಟ್ಟರು. ಚಿಂಚೋಳಿಯಲ್ಲಿ ತಮ್ಮ ಶಿಷ್ಯ, ತಮ್ಮ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ನೀಡಿದ್ದ ಸುನೀಲ್ ವಲ್ಯಾಪುರೆಗೆ ಟಿಕೆಟ್ ಕೊಡಿಸುವ ಯಡಿಯೂರಪ್ಪರ ಯತ್ನಕ್ಕೆ ಹಿನ್ನಡೆ ಮಾಡಿದ ಸಂತೋಷ್‍ಜಿ ಬಣ ಅಲ್ಲಿ ವಲಸಿಗ ಉಮೇಶ ಜಾಧವರ ಮಗ ಅವಿನಾಶ ಜಾಧವ್‍ಗೆ ಟಿಕೆಟು ನೀಡಿತ್ತು.

ಗಾಯದ ಮೇಲೆ ಬರೆ ಎಂಬಂತೆ, ಈಗ ಆಪರೇಷನ್ ಕಮಲ ಮಾಡಬೇಡಿ, ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ತೆಪ್ಪಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿಕೊಳ್ಳುತ್ತಿದ್ದಾರೆ. ಅಂದರೆ ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಕನಸಿಗೆ ಹೈಕಮಾಂಡ್ ಅಂತಿಮ ಮೊಳೆ ಹೊಡೆಯಿತೇ? ಎಂಬ ಅನುಮಾನ ಮೂಡದಿರದು.

ಲಿಂಗಾಯತ ಪ್ರಾಬಲ್ಯವಿರುವ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಹಿಂದಿಕ್ಕಿ ಅದ್ಭುತ ಯಶಸ್ಸು ಗಳಿಸಿರುವುದರಿಂದ ಇನ್ಮುಂದೆ ಕರ್ನಾಟಕದ ರಾಜಕಾರಣಕ್ಕೆ ಯಡಿಯೂರಪ್ಪ ತಮಗೆ ತೀರಾ ಅನಿವಾರ್ಯ ಆಗಲಾರರು ಎಂಬ ತರ್ಕಕ್ಕೆ ಬಿಜೆಪಿ ಹೈಕಮಾಂಡನ್ನು ಸಂತೋಷ್‍ಜಿ ಪಡೆ ತಂದು ನಿಲ್ಲಿಸಿದೆ ಎನ್ನುವುದು ಲೇಟೆಸ್ಟ್ ವರ್ತಮಾನ.

ಈ ಕ್ಷಣದಲ್ಲೇ ಆಪರೇಷನ್ ಕಮಲ ನಡೆಸಿ ಸರ್ಕಾರ ರಚಿಸಲು ಮುಂದಾದರೆ ಅನಿವಾರ್ಯವಾಗಿ ಯಡಿಯೂರಪ್ಪನವರನ್ನೇ ಸಿಎಂ ಮಾಡಬೇಕಾಗುತ್ತೆ. ಅದರ ಬದಲು ಅದನ್ನು ಕೊಂಚ ಮುಂದೂಡಿದರೆ, ಈಗ ಶುರುವಾಗಿರುವ ಮೋದಿ ಪರ್ವವನ್ನು ಕರ್ನಾಟಕದಲ್ಲಿ ಇನ್ನಷ್ಟೂ ಬಿಗಿಗೊಳಿಸುತ್ತಲೇ ಯಡಿಯೂರಪ್ಪನವರನ್ನು ರಾಜಕಾರಣದಲ್ಲಿ ಸಂಪೂರ್ಣ ಅಪ್ರಸ್ತುತಗೊಳಿಸಿದ ನಂತರ ತಮಗಿಷ್ಟ ಬಂದ ವ್ಯಕ್ತಿಯನ್ನು, (ಸಂತೋಷ್‍ರನ್ನು) ಸಿಎಂ ಮಾಡಬಹುದೆನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೆಣೆದು ಕೂತಿದೆ ಎನ್ನಲಾಗುತ್ತಿದೆ. ಅಷ್ಟರೊಳಗೆ ಮೈತ್ರಿ ನಾಯಕರ ನಡುವಿನ ಕಿತ್ತಾಟ ತಾರಕಕ್ಕೇರಿ ಸರ್ಕಾರ ಬಿದ್ದರೆ, ಬಿಜೆಪಿಗೆ ಅಪಖ್ಯಾತಿಯೂ ತಟ್ಟುವುದಿಲ್ಲ ಎಂಬ ತರ್ಕ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೇ ಹೆಚ್ಚು.

ಮತ್ತೊಂದು ತರ್ಕದ ಪ್ರಕಾರ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ. ಅದೇನೆ ಇರಲಿ, ದಿಲ್ಲಿಯಿಂದ ವಾಪಾಸು ಬಂದ ಯಡಿಯೂರಪ್ಪನವರ ಮುಖದಲ್ಲಿ ಮೊದಲಿದ್ದ ಹುಮ್ಮಸ್ಸು ನಾಪತ್ತೆಯಾಗಿರುವುದು ಮಾತ್ರ ಸತ್ಯ.

ಲೋಕಸಭಾ ಚುನಾವಣೆ ನಡೆದು ತಿಂಗಳೊಪ್ಪತ್ತಿನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ 509 ಸ್ಥಾನ ಗೆದ್ದು ಚೇತರಿಸಿಕೊಂಡಿದ್ದರೆ, 25 ಸಂಸದರನ್ನು ಗೆದ್ದುಕೊಂಡ ಖುಷಿಯಲ್ಲಿದ್ದ ಬಿಜೆಪಿ ಕೇವಲ 366 ಲೋಕಲ್ ಬಾಡಿ ಸ್ಥಾನಗಳಿಗಷ್ಟೇ ಸೀಮಿತಗೊಂಡು ಆಘಾತಕ್ಕೆ ತುತ್ತಾಗಿರೋದು ಕೂಡಾ ಯಡಿಯೂರಪ್ಪನವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ ಎನ್ನಲಾಗುತ್ತಿದೆ.

ಇದನ್ನು ಓದಿ: ಲಿಂಗಾಯಿತರಿಗೆ ಬಿಜೆಪಿ ಕೊಟ್ಟಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...